ವಿಷಯದ ವಿವರಗಳಿಗೆ ದಾಟಿರಿ

Archive for

31
ಮೇ

ಆ ಅಗೋಚರ ‘ಫ್ಯಾಂಟಮ್’ ವ್ಯಕ್ತಿಗೆ ಒಂದು ಸೆಲ್ಯೂಟ್

– ರಾಘವೇಂದ್ರ ಸುಬ್ರಹ್ಮಣ್ಯ

ರಾಮೇಶ್ವರನಾಥ್ ಖಾವ್ಹಿಂದಿಯ ‘ಡಾನ್’ ಚಿತ್ರದಲ್ಲಿ ವರದಾನ್ ಎಂಬ ಪಾತ್ರದ ಪರಿಚಯ ಮಾಡಿಕೊಡುವಾಗ ‘ಪೊಲೀಸ್ ಇಲಾಖೆಯಬಳಿ ಈತನ ಯಾವುದೇ ಸ್ಪಷ್ಟವಾದ ಫೋಟೋ ಇಲ್ಲ’ ಎನ್ನುವ ಮಾತು ಬರುತ್ತದೆ. ನಾನು ಅದನ್ನುನೋಡುವಾಗ ತಲೆಕೆಡಿಸಿಕೊಂಡಿದ್ದೆ. ಅದು ಹೇಗೆ ಒಬ್ಬ ವೃತ್ತಿನಿರತ ಅಪರಾದಿಯ ಒಂದೇ ಒಂದುಚಿತ್ರ ಅಥವಾ ಚಹರೆಯಾಗಲೀ ಪೊಲೀಸ್ ಇಲಾಖೆಯ ಬಳಿ ಇಲ್ಲದಿರಲು ಸಾಧ್ಯ? ಹೆಸರು ಗೊತ್ತಿದ್ದಮೇಲೆ, ಒಬ್ಬ ವ್ಯಕ್ತಿಯ ಇರುವಿಕೆಯ ಬಗ್ಗೆ ಗೊತ್ತಿದ್ದ ಮೇಲೆ, ಅದು ಹೇಗೆ ಬೇರೇನೂಗೊತ್ತಿಲ್ಲದಿರಲು ಸಾಧ್ಯ!? ಅಂತೆಲ್ಲಾ ಮೈಪರಚಿಕೊಂಡಿದ್ದೆ. ಇದೇ ವಿಚಾರದಲ್ಲಿ ನೂರಾರುಲೇಖನಗಳನ್ನು ಓದಿದ ನಂತರ ಗೊತ್ತಾಗಿದ್ದೇನೆಂದರೆ, ವರದಾನ್ ಒಬ್ಬನೇ ಅಲ್ಲ, ಜಗತ್ತಿನಲ್ಲಿಇಂತಹುದೇ ವ್ಯಕ್ತಿಗಳು ಬಹಳ ಜನ ಇದ್ದಾರೆ ಎಂದು. ಅದೂ ಅಲ್ಲದೆ ವರದಾನ್ ಕಾನೂನಿನ ಆಚೆಬದಿ ಇದ್ದವ. ಆದರೆ ಕಾನೂನಿನ ಕಡೆಗೇ ಇದ್ದು ತಮ್ಮ ಬಗ್ಗೆ, ತಮ್ಮ ಖಾಸಗೀ ಜೀವನದ ಬಗ್ಗೆಅವನಷ್ಟೇ ರಹಸ್ಯವನ್ನು ಉಳಿಸಿಕೊಂಡು ಬಂದಿರುವವರು ಇದ್ದಾರೆ ಮತ್ತು ಅವರ ದೇಶಗಳಿಗೆಅಂಥವರ ಸೇವೆ ಬಹಳ ದೊಡ್ಡದು ಎಂದೂ ಕೂಡ ತಿಳಿಯಿತು.

ಇಂತವರಲೊಬ್ಬರು ನಮ್ಮ ದೇಶದಮಹಾನ್ ಗೂಡಚಾರ ತಂತ್ರಜ್ಞ ರಾಮೇಶ್ವರನಾಥ್ ಖಾವ್. ಭಾರತದ ಸರ್ಕಾರದ ಅಡಿಯಲ್ಲಿರುವಅತ್ಯಂತ ರಹಸ್ಯಮಯ ಇಲಾಖೆಯಾದ “ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗ (RAW – Research and Analysis Wing) “ದ ಸಂಸ್ಥಾಪಕ ಪಿತಾಮಹ. ಸ್ವತಃ ರಾ ಜಗತ್ತಿನ ಅತ್ಯಂತ ರಹಸ್ಯಮಯರಕ್ಷಣಾ ಇಲಾಖೆ. ಅಮೇರಿಕಾದ CIA ಬಗ್ಗೆಯಾದರೂ ಭಾರತದ ಜನಕ್ಕೆ ಗೊತ್ತಿದೆಯೇನೋ, ಆದರೆ ರಾಬಗ್ಗೆ ವ್ಯಾಪಕವಾಗಿ ತಿಳಿದಿರಲಿಕ್ಕಿಲ್ಲ, ಇತ್ತೀಚೆಗೆ ಸಲ್ಮಾನನ ‘ಏಕ್ ಥಾ ಟೈಗರ್’ ಚಿತ್ರನೋಡುವವರೆಗೂಎಷ್ಟೋ ಬಾರಿ ಸರ್ಕಾರಗಳು ‘ರಾ’ದ ಇರುವಿಕೆಯ ಬಗ್ಗೆಯೇ ಸ್ಪಷ್ಟಿಕರಣ ನೀಡಿರಲಿಲ್ಲ. ಅದರರಚನೆಯೇ ಹಾಗಿದೆ ಬಿಡಿ. ‘ರಾ’ದ ಬಗ್ಗೆ ಇನ್ನೊಮ್ಮೆ ಯಾವಾಗಲಾದರೂ ಬರೆಯುತ್ತೇನೆ.

ಮೊದಲೇ ಹೇಳಿದಂತೆ ‘ರಾ’ ಅಷ್ಟೊಂದು ರಹಸ್ಯಮಯವಾಗಿದ್ದಮೇಲೆ, ಅದರ ಸಂಸ್ಥಾಪಕ ಕತೆಯೇನೂಬೇರೆಯಲ್ಲ. ಶತ್ರು ರಾಷ್ಟ್ರಗಳಿಗೆ ಮತ್ತವುಗಳ ಗೂಡಚಾರ ಇಲಾಖೆಗೆ ‘ರಾ’ದ ಮುಖ್ಯಸ್ಥ ಯಾರುಮತ್ತವ ನೋಡಲು ಹೇಗಿದ್ದಾನೆ ಎಂಬುದೂ ಬಹಳ ಕಾಲ ತಿಳಿದಿರಲಿಲ್ಲ. 1918ರಲ್ಲಿವಾರಣಾಸಿಯಲ್ಲಿ ಜನಿಸಿದ ಖಾವ್, ಶ್ರೀನಗರದಿಂದ ವಲಸೆಬಂದ ಕಶ್ಮೀರಿ ಪಂಡಿತರ ಕುಟುಂಬದವರು.ಇವರ ತಂದೆತಾಯಿಗಳ ಬಗ್ಗೆ ಯಾವ ಹೆಚ್ಚಿನ ಮಾಹಿತಿಯೂ ಲಭ್ಯವಿಲ್ಲ. ಖಾವ್ ಅವರನ್ನುಬೆಳೆಸಿದ್ದು ಅವರ ಮಾವ ಪಂಡಿತ್ ತ್ರಿಲೋಕಿ ನಾಥ್ ಖಾವ್. ತನ್ನ ಮಾವನವರ ಪ್ರೋತ್ಸಾಹಮತ್ತು ಸಹಾಯದಿಂದ ಒಳ್ಳೆಯ ಹಾಗೂ ಅತ್ಯುನ್ನತ ವಿದ್ಯಾಭ್ಯಾಸ ಪಡೆದ ಖಾವ್, 1940ರಲ್ಲಿ ‘ಗುಪ್ತಚರ ದಳ (I.B – Intelligence Bueareu)’ ದಲ್ಲಿ ಪೊಲೀಸ್ ಸಹಾಯಕಸೂಪರಿಂಟೆಂಡೆಂಟ್ ಆಗಿ ನಿಯುಕ್ತಿಗೊಂಡರು. ಸ್ವಾತಂತ್ರಾನಂತರ ನೆಹರೂರವರ ರಕ್ಷಣಾದಳದಮುಖ್ಯಸ್ಥನಾಗಿ ನಿಯೋಜಿತರಾಗಿ, ಆನಂತರ ಒಂದರ ಮೇಲೊಂದು ರೋಚಕ ಮೆಟ್ಟಿಲುಗಳನ್ನೇರುತ್ತಾಹೋದರು.

ಮತ್ತಷ್ಟು ಓದು »

30
ಮೇ

ತುಳುಲಿಪಿ ಒಂದು ವಿಶ್ಲೇಷಣೆ

– ದ್ಯಾವನೂರು ಮಂಜುನಾಥ್

Tulu-Scriptಕನ್ನಡ ನಾಡಿನ ಹಸ್ತಪ್ರತಿ ಇತಿಹಾಸದಲ್ಲಿ ತುಳುಲಿಪಿ ಹಸ್ತಪ್ರತಿಗಳಿಗೆ ಒಂದು ವಿಶಿಷ್ಟಮಯವಾದ ವಾತಾವರಣವಿದ್ದು, ದಕ್ಷಿಣ ಭಾರತದ ಸಾಂಸ್ಕೃತಿಕ ಬದುಕಿನ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರಿದೆ. ಇಲ್ಲಿನ ಭೌಗೋಳಿಕ ಸಾಮ್ಯತೆ ಈ ಪ್ರದೇಶಕ್ಕಿದ್ದರೂ, ಇಲ್ಲಿ ವಿಭಿನ್ನ ಸಂಸ್ಕೃತಿಗಳು ಬೆಳೆದು ಬಂದಿದೆ. ಕನ್ನಡ, ತುಳು, ಕೊಂಕಣಿ, ಮಲೆಯಾಳ ಇಲ್ಲಿನ ಜನರ ಪ್ರಧಾನ ಭಾಷೆಗಳಾಗಿವೆ. ಈ ಭಾಷೆಗಳಲ್ಲಿ ‘ತುಳುಭಾಷೆ’ ಮತ್ತು ನೆಲೆಸಿದ ಪ್ರದೇಶ ‘ತುಳುನಾಡು’ (ತೌಳವ) ದು ಪ್ರಸಿದ್ಧ. ವಿದೇಶಿ ಪ್ರವಾಸಿ ಬಾರ್ಕೋಸನ ವರದಿ ಮತ್ತು ಗೋವರ್ಧನ ಗಿರಿ ಓಂಕಾರ ಬಸದಿಯ ಶಾಸನಗಳ ಆಧಾರದಿಂದ ತುಳುನಾಡು ಚಂದ್ರಗಿರಿಯ ಉತ್ತರಕ್ಕೆ ಮತ್ತು ಗಂಗಾವತಿ ನದಿಗಳ ದಕ್ಷಿಣಕ್ಕೆ ಸೀಮಿತವಾಗಿತ್ತು ಎಂದು ಸ್ಥೂಲವಾಗಿ ಹೇಳಬಹುದು. ಹೀಗಿದ್ದರೂ ತುಳುಭಾಷೆಯನ್ನಾಡುವ ಜನಸಮುದಾಯವು ಈಗ ಕಲ್ಯಾಣಪುರ ಮತ್ತು ಚಂದ್ರಗಿರಿ ನದಿಗಳವರೆಗಿನ ಕರಾವಳಿ ಪ್ರದೇಶಗಳಿಗೆ ಸೀಮಿತವಾಗಿದೆ.

ಕಾಸರಗೋಡು ತುಳು ನಾಡೆಂದು ಸಂಗಮ ಸಾಹಿತ್ಯ ಹೇಳಿದೆ. ತುಳು ಭಾಷೆಯ ಪ್ರಾಚೀನತೆಯನ್ನು ಕ್ರಿ.ಶ.9ನೆಯ ಶತಮಾನದ ತನಕ ಹೋಗುತ್ತದೆಯೆಂಬ ಅಭಿಪ್ರಾಯ ನಿಕೋರಸ್ ನ ವರದಿ ಸೂಚಿಸುವುದಾದರೂ ಈ ಭಾಷೆಯು ತುಳುನಾಡು, ತುಳು ದೇಶ, ತುಳು ವಿಷಯ ಶಬ್ದಗಳು ಕ್ರಿ.ಶ.12ನೆಯ ಹಾಗೂ 16ನೆಯ ಶತಮಾನದ ಕೆಲವು ಶಾಸನಗಳಲ್ಲಿ ಉಲ್ಲೇಖಗಳಿಂದ ಕಾಣಬಹುದಾಗಿದೆ. ಇಂತಹ ಶಾಸನಗಳು ಬ್ರಹ್ಮಾವರ, ಉಡುಪಿ, ಕಂದಾವರ ಮತ್ತು ಗುಣವಂತೆಗಳಲ್ಲಿ ಪತ್ತೆಯಾಗಿದೆ. ಕ್ರಿ.ಶ.14ನೆಯ ಶತಮಾನದ ಮತ್ತು ಅಂತ್ಯದಲ್ಲಿ ತುಳುಶಾಸನ ತುಳುಲಿಪಿಯಲ್ಲಿ ಲಿಖಿಸುವಷ್ಟು ಪ್ರಬಲವಾಗಿತ್ತೆಂಬುದಕ್ಕೆ ಕುಂಬಳೆ ಸಮೀಪದ ಅನಂತಪುರದ ಶಾಸನ, ಪೆರ್ಲದ ಬಜಂಕೂಡ್ಲು ಶಾಸ, ಪುತ್ತೂರು ಸಮೀಪದ ಈಶ್ವರ ಮಂಗಲದ ಶಾಸನಗಳ ಅಧ್ಯಯನಗಳಿಂದ ತಿಳಿದು ಬರುತ್ತದೆ. ಕೊಳನಕೋಡು ದೇವಸ್ಥಾನ ಕೊಂಗುಬಳ್ಳಿ ಮನೆಯ ಪರಿಸರದಲ್ಲಿ ಮೊತ್ತ ಮೊದಲನೆಯ ತುಳುಲಿಪಿ ಶಾಸನವನ್ನು ಡಾ||ಗುರುರಾಜ ಭಟ್ಟರು ಶೋಧಿಸಿದ್ದರೆ.

ಪ್ರಾಚೀನ ಲಿಪಿಗಳಾದ ಸಿಂಧು, ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಗಳ ಪೈಕಿ ಅತ್ಯಂತ ಪ್ರಾಚೀನವಾದ್ದು ಸಿಂಧು ಲಿಪಿ. ಈ ಲಿಪಿ ಎಲ್ಲರೂ ಒಪ್ಪದ ರೀತಿಯಲ್ಲಿ ಓದಲು ಸಾಧ್ಯವಾಗಿಲ್ಲ. ಆದರೆ ಬ್ರಾಹ್ಮಿಶಾಸನಶಾಸ್ತ್ರ ಇತಿಹಾಸ ಪ್ರಾರಂಭದ ಬ್ರಾಹ್ಮಿ ಶಾಸನಗಳು ದೊರೆಯುವಲ್ಲಿಂದ ಆರಂಭವಾಗುತ್ತದೆ ಎಂದು ವಿದ್ವಾಂಸರ ಅಭಿಮತ, ಬ್ರಾಹ್ಮಿ ಭಾರತದಲ್ಲಿನ ನಂತರದ ಉತ್ತರ ಹಾಗೂ ದಕ್ಷಿಣದ ಎಲ್ಲಾ ಲಿಪಿಗಳಿಗೆ ಮೂಲವಾಗಿದೆ.

ಮತ್ತಷ್ಟು ಓದು »

29
ಮೇ

ತನ್ನದೇ ಮನಸ್ಸು(ಮಾನಸ), ಶಿರ(ಕೈಲಾಸ)ವನ್ನು ಹೊಂದಿರುವ ತನ್ನ ಮಗುವನ್ನು ಭಾರತ ಮರಳಿ ಪಡೆದೀತೇ?

– ರಾಜೇಶ್ ರಾವ್

ಕೈಲಾಸ ಮಾನಸ ಸರೋವರ“ಅಮೇರಿಕಾದಲ್ಲಿ ನಾವು ಆಶ್ರಯ ಪಡೆದಿದ್ದರೆ ನನ್ನ ಸಂಗಾತಿಗಳೂ ಅಮೇರಿಕರನ್ನರಾಗಿ ನಮ್ಮಲ್ಲೂ ಟಿಬೆಟ್ ತನ ಮಾಯವಾಗುತ್ತಿತ್ತು. ಭಾರತದ ಸಹಿಷ್ಣುತೆಯೇ ಜಗತ್ತಿನಲ್ಲಿ ನಾವು ನಮ್ಮತನವನ್ನು ಉಳಿಸಿಕೊಂಡಿದ್ದೇವೆ”-ದಲಾಯಿ ಲಾಮ.  ಹಿಂದೂಗಳ ಸಹಿಷ್ಣುತೆಯ ಮನೋಭಾವನೆಯನ್ನು ವಿಶ್ವವೇ ಕೊಂಡಾಡುತ್ತದೆ. ಆದರೆ ಸಹಿಷ್ಣುಗಳಾಗುವ ಭರದಲ್ಲಿ ನಮ್ಮ ಭದ್ರತೆಗೆ ನಾವೇ ಕೊಳ್ಳಿ ಇಟ್ಟುಕೊಂಡಿರುವುದು ಅಷ್ಟೇ ಸತ್ಯ! ಬಂದವರಿಗೆಲ್ಲರಿಗೂ ಆಶ್ರಯ ಕೊಟ್ಟೆವು. ಕೆಲವರು ನಮ್ಮೊಂದಿಗೆ ಕಲೆತರು, ಕಲಿತರು. ಇನ್ನು ಕೆಲವರು ನಮ್ಮ ಬುಡಕ್ಕೇ ಕೊಳ್ಳಿ ಇಟ್ಟರು,ಇಡುತ್ತಲೇ ಇದ್ದಾರೆ! ಆಶ್ರಯ ಬೇಡಿ ಬಂದ ದಲಾಯಿ ಲಾಮರಿಗೇನೋ ಆಶ್ರಯ ಕೊಟ್ಟೆವು. ಆದರೆ ಭಾರತದ ರತ್ನ ಖಚಿತ ಕಿರೀಟವನ್ನೇ(ಟಿಬೆಟ್) ಕಳೆದುಕೊಂಡು ಬಿಟ್ಟೆವು!
ಸಹಸ್ರಾರು ವರ್ಷಗಳ ಕಾಲ ಭಾರತದ ಭಾಗವಾಗಿದ್ದು ಕೈಲಾಸ ಮಾನಸ ಸರೋವರಗಳನ್ನೊಳಗೊಂಡ ಟಿಬೆಟ್ ಮಂಗೋಲಿಯಾ, ಚೀನಾದ ರಾಜರುಗಳು ಹಾಗೂ ಬ್ರಿಟಿಷರ ಆಕ್ರಮಣಗಳಿಗೆ ತುತ್ತಾಗಿದ್ದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡಿತ್ತು. ಆದರೆ 1950ರಲ್ಲಿ ಟಿಬೆಟನ್ನು ಚೀನಾ ಆಕ್ರಮಣ ಮಾಡಿದ ನಂತರ ಟಿಬೆಟಿಯನ್ನರು ತಮ್ಮ ಸ್ವಾತಂತ್ರ್ಯ ಸಾರ್ವಭೌಮತೆಗಳನ್ನು ಕಳೆದುಕೊಂಡುಬಿಟ್ಟರು. ಎರಡನೇ ವಿಶ್ವಯುದ್ಧದ ಕಾಲದಲ್ಲಿ ತನಗೆ ಸಮುದ್ರ ತೀರಗಳಿಲ್ಲದ ಹಿನ್ನೆಲೆಯಲ್ಲಿ ಜಪಾನ್ ಒಡ್ಡಿದ ಸವಾಲಿಗೆ ಮುಖಾಮುಖಿಯಾಗಿ ನಿಲ್ಲುವ ಸಂದರ್ಭದಲ್ಲಿ ಭಾರತದಿಂದ ಅವಶ್ಯಕ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಟಿಬೆಟ್ ಮಾರ್ಗದ ಅನುಮತಿ ಕೇಳಿದಾಗ ಚೀನಾದ ವಿಸ್ತರಣಾವಾದಿ ನೀತಿ ಹಾಗೂ ಗೋಮುಖವ್ಯಾಘ್ರತನವನ್ನು ಅರಿತಿದ್ದ ಟಿಬೆಟ್ ಅನುಮತಿ ನಿರಾಕರಿಸಿತ್ತು.

ಕಳೆದ ಶತಮಾನದ ಆರಂಭದಲ್ಲಿ ಸುಮಾರು 65ಲಕ್ಷದಷ್ಟು ಜನಸಂಖ್ಯೆ ಟಿಬೆಟಿನಲ್ಲಿತ್ತು. ಆದರೆ ಟಿಬೆಟನ್ನು ಆಕ್ರಮಿಸಿದ ಚೀನಾ 15ಲಕ್ಷದಷ್ಟು ಜನರ ಮಾರಣಹೋಮ ನಡೆಸಿತು. ಚೀನಾದ ಪಾಶವೀಯತೆ ಯಾವ ಪರಿ ಇತ್ತೆಂದರೆ ಲಿಥಾಂಗ್ ವಿಹಾರದ ಮೇಲೆ ಬಾಂಬು ಹಾಕಿದಾಗ ವಿಹಾರದೊಳಗಿದ್ದ 6500 ಜನರ ಪೈಕಿ 4500ಕ್ಕೂ ಹೆಚ್ಚು ಜನರು ಹೆಣವಾಗಿ ಬಿದ್ದರು. 1959ರಲ್ಲಿ ದಲಾಯಿ ಲಾಮ ಸ್ವಯಂ ಗಡಿಪಾರಾಗಿ ಭಾರತದ ಆಶ್ರಯ ಪಡೆದರು. ಆದರೆ ಟಿಬೆಟಿಯನ್ನರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಯಿತು. ಟಿಬೆಟನ್ನರು ದಲಾಯಿ ಲಾಮ ಭಾವಚಿತ್ರ ಇಟ್ಟುಕೊಳ್ಳುವುದು, ಬೌದ್ಧವಿಹಾರಗಳಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುವುದು ಇವೆಲ್ಲಾ ಚೀನಾ ಆಕ್ರಮಿತ ಟಿಬೆಟಿನಲ್ಲಿ ಅಪರಾಧಗಳಾಗಿವೆ. ಟಿಬೆಟಿನಲ್ಲೇ ಇರುವ ಮಾನಸ ಸರೋವರ ಕೈಲಾಸಗ ಪರ್ವತಗಳಿಗೆ ಹೋಗಬೇಕಾದರೂ ಟಿಬೆಟಿಯನ್ನರು ಚೀನಾ ಸರಕಾರದ ಅನುಮತಿ ಪಡೆಯಬೇಕು. TAR ಮಾನ್ಯ ಮಾಡಿರುವ ಧಾರ್ಮಿಕ ಉತ್ಸವಗಳನ್ನು ಮಾತ್ರ ಟಿಬೆಟನ್ನರು ಆಚರಿಸಬೇಕು. ಬೌದ್ಧ ಸನ್ಯಾಸಿಗಳು ಇತರ ವಿಹಾರಗಳಿಗೆ ಭೇಟಿ ನೀಡುವಂತಿಲ್ಲ. ಚೀನಾ ಸರಕಾರ ನಿಗದಿಪಡಿಸಿರುವಷ್ಟೇ ಸಂಖ್ಯೆಯ ಸನ್ಯಾಸಿಗಳು ವಿಹಾರಗಳಲ್ಲಿರಬೇಕು. ಅಲ್ಲದೆ ಅವುಗಳಲ್ಲಿ ಕಡ್ಡಾಯವಾಗಿ ‘ದೇಶಭಕ್ತಿ ಶಿಕ್ಷಣದ’ ತರಗತಿ, ಚೀನಾದ ಆಡಳಿತ ಸಾಧನೆ ಕಂಠಪಾಠ ಮಾಡುವ ತರಗತಿಗಳಿಗೆ ಹಾಜರಾಗುವುದು, “ವಿಶಾಲ ತಾಯ್ನಾಡಿಗೆ” ಗೌರವ ಅರ್ಪಿಸುವ ಪ್ರಮಾಣ ಮಾಡುವುದು ಕಡ್ಡಾಯ. ಪ್ರವಾಸಿಗರು ಸ್ಥಳೀಯ ಟಿಬೆಟನ್ನರೊಂದಿಗೆ ಮಾತಾಡುವುದಾಗಲೀ, ಟಿಬೆಟ್ ಕಾಲೊನಿಗಳಿಗೆ ಹೋಗುವುದಾಗಲೀ ನಿಷಿದ್ದ! ಚೀನಾ ವಿರೋಧಿ ಚಟುವಟಿಕೆಗಳನ್ನು ನಡೆಸುವವರನ್ನು ಅವರ ಕುಟುಂಬದವರೇ ಸಾರ್ವಜನಿಕವಾಗಿ ಕಲ್ಲೆಸೆಯುವಂತಹ ಶಿಕ್ಷೆ ನೀಡಲಾಗುತ್ತದೆ. ಅಲ್ಲದೆ ಅಣ್ವಸ್ತ್ರ ಪರೀಕ್ಷೆಗೂ ಟಿಬೆಟ್ ನೆಲವನ್ನು ಬಳಸಲಾಗುತ್ತಿದೆ.
ಮತ್ತಷ್ಟು ಓದು »

28
ಮೇ

“ಮಹಾನ್” ಇತಿಹಾಸಕಾರರೆಂಬ “ಮಹಾತ್ಮ”ರ ಸನ್ನಿಧಿಯಲ್ಲಿ….

– ರಾಘವೇಂದ್ರ ಅಡಿಗ ಎಚ್ಚೆನ್

Eminent Historiansಕೆಲತಿಂಗಳ ಹಿಂದೆ ಬೆಂಗಳೂರಿನ ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ಒಂದು ಅಪರೂಪದ ಪುಸ್ತಕಗಳ ಬಿಡುಗಡೆ ಸಮಾರಂಭ ಏರ್ಪಾಡಾಗಿತ್ತು. ಕನ್ನಡದ ಖ್ಯಾತ ಲೇಖಕರಾದ ಡಾ. ಎಸ್.ಎಲ್. ಭೈರಪ್ಪನವರು ಭಾಗವಹಿಸಿದ್ದ ಆ ಕಾರ್ಯಕ್ರಾಮಕ್ಕೆ ಬಹಳ ನಿರೀಕ್ಷೆಗಳನ್ನಿಟ್ಟುಕೊಂಡು ನನ್ನಂತಹ ಸಾಕಷ್ಟು ಜನರು ಬಂದಿದ್ದರು. ಅಸಲಿಗೆ ಅಲ್ಲಿ ಬಿಡುಗಡೆಯಾಗುತ್ತಿದ್ದ ಪುಸ್ತಕಳು ಸಹ ಅಷ್ಟೇ ಕುತೂಹಲ ಹುಟ್ಟಿಸುವಂತಿದ್ದವು. ಸ್ವತಂತ್ರ  ಭಾರತದ ಖ್ಯಾತ ಪತ್ರಿಕಾ ಬರಹಗಾರ, ಸಂಶೋಧಕ ಅರುಣ್ ಶೌರಿಯವರ ಪುಸ್ತಕದ ಬಿಡುಗಡೆ ಕಾರ್ಯಕ್ರಾಮವದಾಗಿತ್ತು.

ಅರುಣ್ ಶೌರಿ ಅವರೊಬ್ಬ ಪತ್ರಕರ್ತ, ಪತ್ರಿಕಾ ಸಂಪಾದಕ, ಧೀಮಂತ ರಾಜಕಾರಣಿ, ಸತ್ಯನಿಷ್ಟ ಬರಹಗಾರರಾಗಿ ಭಾರತದಾದ್ಯಂತ ಹೆಸರು ಮಾಡಿದವರು. ಕೇಂದ್ರದಲ್ಲಿ ಎನ್.ಡಿ.ಎ. ಸರ್ಕಾರವಿದ್ದ ಸಂದರ್ಭದಲ್ಲಿ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಶೌರಿಯವರು ಸರ್ಕಾರಿ ಕೆಲಸ ಹಾಗೂ ಪತ್ರಿಕಾ ರಂಗ ಎರಡರಲ್ಲಿಯೂ ಒಳ್ಳೆಯ ಹೆಸರನ್ನು ಗಳಿಸಿಕೊಂಡಿರುವವರು.ಭಾರತದ ಪ್ರಸಿದ್ದ ಆಂಗ್ಲ ದೈನಿಕ “ಇಂಡಿಯನ್ ಎಕ್ಸ್ ಪ್ರೆಸ್”ನಲ್ಲಿ ಸಾಕಷ್ಟು ವರ್ಷ ಕೆಲಸ ಮಾಡಿದ್ದ ಶೌರಿಯವರು ಆ ಸಮಯದಲ್ಲಿ ಸಾಕಷ್ಟು ಭ್ರಷ್ಟಾಚರಗಳನ್ನು, ಹಗರಣಗಳನ್ನೂ ಬೆಳಕಿಗೆ ತಂದಿದ್ದರು. ಇವರ ಕೆಲಸ, ಸಮಾಜ ಸೇವೆಗೆ ಮೆಚ್ಚಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ, ದಾದಾಭಾಯಿ ನವರೋಜಿ ಪುರಸ್ಕಾರ, ಫ್ರೀಡಮ್ ಟು ಪಬ್ಲಿಷ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

ಮೊದಲಿನಿಂದಲೂ ಅಧ್ಯಯನ, ಸಂಶೊಧನೆಗಳಲ್ಲಿ ಆಸಕ್ತಿ ತಳೆದಿದ್ದ ಅರುಣ್ ಶೌರಿಯವರು ತಾವೇ ಖುದ್ದಾಗಿ ಸಾಕಷ್ಟು ಪುಸ್ತಕಗಳನ್ನು  ರಚಿಸಿದ್ದಾರೆ. “The Only Fatherland’’, “The World of Fatwas’’, “Eminent Historians’’, “ Does He know a Mother’s Heart?’’ ಇವೇ ಮೊದಲಾದ ಕೃತಿಗಳನ್ನು ರಚಿಸಿರುವ ಶೌರಿ ಈ ಒಂದೊಂದರಲ್ಲಿಯೂ ಸಾಕಷ್ಟು ಮಾಹಿತಿಯನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ.ಅರುಣ್ ಶೌರಿಯವರ ಬರಹಗಳನ್ನು ಅರ್ಥ ಮಾಡಿಕೊಳ್ಳುವುದು ತುಸು ತ್ರಾಸದಾಯಕವದ ಕೆಲಸ.ಅವರಷ್ಟು ಚಿಂತನೆಗೆ ಹಚ್ಚುವ  ಬರಹಗಾರರು ಮತ್ತೊಬ್ಬರು ಸಿಕ್ಕುವುದು ತೀರಾ ಅಪರೂಪವೆನ್ನಬೇಕು. ಅಂತಹಾ ಶೌರಿಯವರ ಪುಸ್ತಕವೊಂದು ಕನ್ನಡಕ್ಕೆ ಬಂದಿದೆ.ಅರುಣ್ ಶೌರಿಯವರ “Eminent Historians’’ಕೃತಿಯನ್ನು “ಮಹಾನ್” ಇತಿಹಾಸಕಾರರು ಎನ್ನುವ ಹೆಸರಿನಲ್ಲಿ ಮಂಜುನಾಥ ಅಜ್ಜಂಪುರರವರು ಕನ್ನದಕ್ಕೆ ಅನುವಾದಿಸಿ ನಮ್ಮ ಕೈಗಿತ್ತಿದ್ದಾರೆ. ಇತಿಹಾಸದ ಬಗ್ಗೆ  ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಇಷ್ಟವಾಗುವ ಕೃತಿ ಇದು ಎಂದರೆ ತಪ್ಪಾಗಲಾರದು.

ಮತ್ತಷ್ಟು ಓದು »

27
ಮೇ

ನಮಗೆಂಥ ಮೀಸಲಾತಿ ಬೇಕು?

– ವಲವಿ ಬಿಜಾಪೂರ

Reservation Policy India Reservation Policy India Reservation Policy India Reservation Policy India Reservation Policy India Reservation Policy India Reservation Policy India Reservationಶ್ರೀ ಹೋ.ಬ ರಘೋತ್ತಮ ಅವರ “ಅಸ್ಪೃಶ್ಯತೆ, ಮೀಸಲಾತಿ ಮತ್ತು ತಲೆಮಾರಿನ ಪ್ರಶ್ನೆ” ಎಂಬ ಲೇಖನವನ್ನು ಓದಿ ಪ್ರತಿಕ್ರಿಯಿಸುವದು ನನಗೆ ಅನಿವಾರ್ಯವಾಗಿದ್ದರಿಂದ ಈ ಲೇಖನ ಬರೆಯುತ್ತಿದ್ದೇನೆ.ಅವರು ಲೇಖನ ಬರೆದಲ್ಲೇ ಪ್ರತಿಕ್ರಿಯೆ ಬರೆಯಬಹುದಾಗಿತ್ತು. ಆದರೆ ತಮ್ಮ ವಿಚಾರಗಳಿಗೆ ವಿರುದ್ಧವಾಗಿ ಏನೇ ಬರೆದರೂ ಕೆಲವು ಬ್ಲಾಗಿನಲ್ಲಿ ಪ್ರಕಟವಾಗುವುದಿಲ್ಲ.ವಿರುದ್ಧ ಕಮೆಂಟುಗಳನ್ನೂ ಪ್ರಕಟಿಸುವದಿಲ್ಲ. ಯಾಕೆಂದರೆ ಅವರು ಪ್ರಗತಿಪರರೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಹಳ ಬೆಲೆ ಕೊಡುವವರೂ ಆಗಿದ್ದಾರೆ. !? ಅದಕ್ಕಾಗಿ ನಿಲುಮೆಯಲ್ಲಿ ನನ್ನ ವಿಚಾರಗಳನ್ನು ಅಭಿವ್ಯಕ್ತ ಪಡಿಸುತ್ತಿದ್ದೇನೆ.

ಲೇಖನದ ಮೊದಲಿಗೆ ಹೇಳುತ್ತಿದ್ದೇನೆ. ನಾನು ಮೀಸಲಾತಿ ವಿರೋಧಿಯಲ್ಲ. ಮೀಸಲಾತಿ ಹೇಗಿದ್ದರೆ ಸರ್ವರಿಗೂ ಒಳಿತಾಗುತ್ತದೆ ಎಂಬ ಕುರಿತು ಮಾತ್ರ ಹೇಳುತ್ತಿದ್ದೇನೆ.

ಶ್ರೀ ರಘೋತ್ತಮ ಅವರು ಹೇಳುತ್ತಾರೆ. ” ಕೆದರಿದ ತಲೆಯ, ಗಲೀಜು ಬಟ್ಟೆಯ, ಎಣ್ಣೆ ಕಾಣದ ಹಳ್ಳಿ ಹೆಂಗಸೊಬ್ಬಳು ಅವರಿಗೆ {ಗರಿಗರಿಯಾಗಿ ಇಸ್ತ್ರೀ ಮಾಡಿದ ನೀಟಾದ ಬಟ್ಟೆ ಉಟ್ಟುಕೊಂಡು ನಾಗರೀಕರು ನೌಕರರು ಆಗಿರುವ] ಏಕವಚನದಲ್ಲಿ ಮಾತನಾಡಿಸಿದಳಂತೆ ಕಾರಣ ಆಕೆ ರಘೋತ್ತಮರ ಊರಿನ ಮೇಲ್ಜಾತಿಯವಳಾಗಿದ್ದರಿಂದ ಮತ್ತು ಇವರು ದಲಿತರಾಗಿದ್ದರಿಂದ ಕಡಲೆಕಾಯಿ ಮಾರುವ ಹೆಂಗಸಾದ ಅವಳು ಮೇಲಿರಿಮೆಯ ಸೊಕ್ಕಿನಿಂದ ಹೀಗೆ ಮಾತನಾಡಿದಳೆಂಬ ಧ್ವನಿ ಬರುವಂತೆ ಬರೆದಿದ್ದಾರೆ. ಅಲ್ಲದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರನೆ ತಲೆಮಾರಿನ ದಲಿತರಿಗೆ ಮೀಸಲಾತಿ ಕೊಡದಿರುವಂತೆ ಚಿಂತಿಸುತ್ತಿದೆ. ಎಂದು ಆಂಗ್ಲ ಪತ್ರಿಕೆಯೊಂದರ ಸುದ್ದಿಯನ್ನೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳು ದಲಿತರಿಗೆ ಒಳ್ಳೆಯ ದಿನಗಳಲ್ಲ ಎಂಬ ಆತಂಕವನ್ನು ಸಹ ತೋಡಿಕೊಂಡಿದ್ದಾರೆ. ಗೋಧ್ರೋತ್ತರ ಮಾರಣಹೋಮದಂತೆ ಮೋದಿ ಇನ್ನೋಂದು ಮಾರಣಹೋಮಕ್ಕೆ ಸಜ್ಜಾದರೆ ಎಂದೂ ಸೇರಿಸುತ್ತಾರೆ.

ಆದರೆ ನನ್ನ ಅಭಿಪ್ರಾಯವೆಂದರೆ ಶ್ರೀ ರಘೋತ್ತಮರು ದಲಿತರಲ್ಲಿ ವಿನಾಕಾರಣ ಮೋದಿ ವಿರುದ್ಧ ಭಯ ಮೂಡಿಸುತ್ತಿದ್ದಾರೆ.ಎನಿಸುತ್ತದೆ. ಇರಲಿ, ನಾನೂ ಸಹ ನಮ್ಮೂರಿಗೆ ಹೋದಾಗ ನಮ್ಮ ಹಳ್ಳಿಯ ಜನ ನನ್ನನ್ನು ಏಕವಚನದಲ್ಲೇ ಮಾತನಾಡಿಸುತ್ತಾರೆ. ನಾನು ಇಡೀ ಭಾರತ ದೇಶವೇ ತಿಳಿದುಕೊಂಡಂತೆ ಮೇಲು ಜಾತಿಯಲ್ಲಿ [??] ಜನಿಸಿದವಳು. ಆದರೂ ನಮ್ಮೂರಿನ ಜನ ನನ್ನನ್ನೂ ಏಕವಚನದಲ್ಲಿ ಮಾತನಾಡಿಸುತ್ತಾರೆ. ಅನೇಕರು “ಯಾಕವ್ವಾ ಮಗಳ… ಎಂದ ಬಂದ್ಯವಾ? ಎಲ್ಲಾ ಪಾಡ [ಚನ್ನಾಗಿ] ಅದೀರಾ? ಎಲ್ಲಿ ಯಾವೂರಾಗ ಅದಿಯವಾ ? ಕುರುಸಾಲ್ಯಾ ನನ್ನ ಅಳ್ಯಾ ಬಂದಿಲ್ಲೇನ? [ನಮ್ಮ ಮನೆಯವರಿಗೆ ಹೀಗೆ ಸಂಬೋಧಿಸುತ್ತಾರೆ. ಊರ ಅಳಿಯನಿಗೆ ಹೀಗೆ ಸಂಬೋಧಿಸಬೇಕೆಂಬ ಅಲಿಖಿತ ನಿಯಮ. ] ನಮ್ಮ ಚಾಜಗಾರ ಕುಳ [ನಮ್ಮಿಂದ ಸನ್ಮಾನ ಕಾಣಿಕೆ ಪಡೆಯುವ ಹೆಣ್ಣು ಮಕ್ಕಳ ಮಗ] ಬಂದಿಲ್ಲೇನ??” ಹೀಗೆ ಮಾತನಾಡಿಸುತ್ತಾರೆ. ನಾನೂ ಸಹ ಸರಕಾರಿ ನೌಕರಿಯಲ್ಲಿ ನಮ್ಮ ಮನೆಯವರು ಸಹ ಸರಕಾರಿ ನೌಕರಿಯಲ್ಲಿ ಇದ್ದೇವೆ. ಮೇಲುಜಾತಿಯವರಾಗಿದ್ದೆವೆ. ಉತ್ತಮ ಗರಿಗರಿಯಾದ ಬಟ್ಟೆಗಳನ್ನು ಧರಿಸಿಯೇ ನಮ್ಮೂರಿಗೆ ಹೋಗಿರುತ್ತೇವೆ. ಆ ಹಳ್ಳಿಗರಿಗಿಂತ ಸಾವಿರ ಪಾಲು ಉತ್ತಮ ಸ್ಥಿತಿಯಲ್ಲಿ ಇದ್ದೇವೆ. ಆದರೆ ನಾವೆಂದೂ ಅವರು ನಮ್ಮನ್ನು ಬಹುವಚನದಲ್ಲಿ ಮಾತನಾಡಿಲ್ಲವೆಂದು ಸಿಟ್ಟಿಗೆ ಬಂದಿಲ್ಲ. ನಾನೂ ಕೂಡ ಹೌಂದ ಕಾಕಾ, ದೊಡ್ಡಪ್ಪ, ಮುತ್ಯಾ ಆಯಿ, ಚಿಗವ್ವ, ದೊಡ್ಡವ್ವ, ಅತ್ತಿ, ಮಾಮಾ ಹೀಗೆ ಹೇಳಿ ನಾನು ಕ್ಷೇಮವಾಗಿದ್ದನ್ನು ಹೇಳುತ್ತೇನೆ. ಇಲ್ಲಿ ಅವರ ಪ್ರೀತಿ ತಮ್ಮ ಮನೆಯ ಮಗಳೇ ನಮ್ಮೂರಿಗೆ ಬಂದಳೆಂದು ತಿಳಿಯುವ ಅವರ ಆತ್ಮೀಯತೆ ಗಮನಿಸಬೇಕೆ ಹೊರತು ಅವರ ಭಾಷೆಯಲ್ಲ. ನಾವು ಭಾರತದ ರಾಷ್ಟ್ರಪತಿಯಾಗಿ ನಮ್ಮೂರಿಗೆ ಹೋದರೂ ನಮ್ಮ ಜನಗಳು “ಏನವಾ ತಂಗೀ ಏನೋ ದೊಡ್ಡ ಸಾಬ್ತಿ ಆಗೀಯಂತಲ್ಲವಾ? ಶಿವಾ ಚಲೂ ಮಾಡಿದ ಬಿಡೂ… ನನ್ನ ಆಶೀ [ಆಯುಷ್ಯ] ಎಲ್ಲ ನಿನಗಾಗಲಿ. ಚಂದಾಗಿ ಸಿವಾ ನಿನ್ನ ಇಡಲಿ”. ಎಂದಾರೇ ವಿನಃ ಅವರಿಗೆ ರಾಷ್ಟ್ರಪತಿಗೆ ಗೌರವ ಕೊಡಬೇಕೆಂಬ ಇರಾದೆ ಇರುವದಿಲ್ಲ. ಅವರಿಗೆ ನಾವು ಅವರೂರಿನ ಮಗ , ಮಗಳು ಅಷ್ಟೇ.

ಇರಲಿ, ನಮ್ಮೂರಿನ ಜನರ ಪುರಾಣವಾಯಿತು. ನಾನೀಗ ಹೇಳ ಹೊರಟಿರುವದು ಮೀಸಲಾತಿ ಹೇಗಿರಬೇಕೆಂಬ ಕುರಿತು. ಅದಕ್ಕೂ ಮುನ್ನ ಒಂದು ರೂಪಕದ ಉದಾಹರಣೆ ಹೇಳಿ ಮುಂದುವರಿದರೆ ಓದುಗರಾದ ನಿಮಗೆ ಹೆಚ್ಚು ಅರ್ಥವಾಗುತ್ತದೆಂದು ಅಂದುಕೊಳ್ಳುತ್ತೇನೆ.
ಮತ್ತಷ್ಟು ಓದು »

23
ಮೇ

ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 4

ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ

Social Science Column Logo

73 ರ ಜೆ.ಪಿ.ಚಳವಳಿಯಿಂದ 98ರವರೆಗೆ ನಮ್ಮದು ಒಂದು ರೀತಿಯ ನಿಲುವು ಇತ್ತು. 99ರ ನಂತರ ಒಂದು ರೀತಿಯ ನಿಲುವು ಪ್ರಾರಂಭವಾಯಿತು. ಕಾರಣ ನಮ್ಮ ನಿಲುವನ್ನು ಪ್ರತಿಪಾದಿಸುತ್ತಿರುವಂತಹ ಸಂಘಟನೆ ಛಿದ್ರ ವಿಛಿದ್ರವಾದಂತಹ ಸಂದರ್ಭದಲ್ಲಿ ನಮ್ಮ ನಿಲುವಿಗೆ ಹತ್ತಿರವಾದಂತಹ ಒಂದು ನಿಲುವನ್ನು ಆಯ್ಕೆ ಮಾಡಿಕೊಂಡು ಮುಂದುವರೆದು ಬಂದಿದ್ದೇವೆ. ಅದು ಒಂದು ರೀತಿಯಲ್ಲಿ ರಾಜೀ ಮಾಡಿಕೊಂಡಂತೆಯೇ. ಆಗ ಪ್ರತಿನಿಧಿತ್ವದ ಪ್ರಶ್ನೆ ಬರುತ್ತದೆ. ಜನರು ಕೇಳುತ್ತಾರೆ ‘ನೀವು ತುರ್ತು ಪರಿಸ್ಥಿತಿಯ ವಿರುದ್ಧವಾಗಿದ್ದವರು, ನೀವು ಹೀಗಾಗಿ ಬಿಟ್ಟಿರಲ್ಲ ಅಂತ’ ಹೇಳುವವರೂ, ಹಾಗೆಯೇ, ‘ಏನೆ ಆಗಲೀ ನೀವು ನಿಮ್ಮ ಸೆಕ್ಯುಲರ್ ಐಡಿಯಾಲಜಿ ಬಿಟ್ಟುಕೊಡಲಿಲ್ಲ, ಪಟೇಲರ ಸರ್ಕಾರವನ್ನು ಬಿಟ್ಟು ಹೊರಗೆ ಬಂದ್ರಿ’ ಎನ್ನುವವರೂ ಇದ್ದಾರೆ. ಹಾಗೆಯೇ ಪ್ರತಿನಿಧಿತ್ವ ಎನ್ನುವುದು ನಾವು ಒಪ್ಪಿರುವ ಸಿದ್ಧಾಂತ, ತತ್ವಗಳ ಆಧಾರದ ಮೇಲೂ ಇರುತ್ತದೆ. ಅಥವಾ ಅದಕ್ಕೆ ಹತ್ತಿರವಾದ ಅಂಶಗಳಿಂದಲೂ ಕೂಡಿರುತ್ತದೆ.ಅದಕ್ಕೆ ನಾನು ಆಗಲೇ ಹೇಳಿದ್ದು; ಗೇಣಿದಾರರ ಪರವಾಗಿ ಮಾತನಾಡಿದರೆ ಆತನ ಮಗನ ಒಟು ನಮಗೆ ಅನುಮಾನ, ರಾಜ್ಯದ ರಾಜಕಾರಣದ ಬಗ್ಗೆ ಮಾತನಾಡಿದರೆ ನಾವು ಲೋಕಲ್ ಅಲ್ಲ ಎನ್ನುವ ತೀರ್ಮಾನ ಬರುತ್ತದೆ.ನಾವೇನಾದರೂ ಲೋಕಲ್ ವಿಚಾರವನ್ನೇ ಬಳಸಿ ಲೋಕಲ್ ರಾಜಕೀಯಕ್ಕೆ ಇಳಿದರೆ ‘ಹಿತ್ತಲ ಗಿಡ ಮದ್ದಲ್ಲ’ ಎನ್ನುವಂತೆ ಅಲ್ಲಿಯೇ ಲೋಕಲ್ ರಾಜಕೀಯ ಪೈಪೋಟಿ ಶುರುವಾಗುತ್ತದೆ.

ಇಲ್ಲಿ ನಾನು ಪ್ರತಿನಿಧಿಸುತ್ತಿರುವುದು ನನ್ನನ್ನು ಮತ್ತು ನನ್ನ ಆತ್ಮ ಸಾಕ್ಷಿಯನ್ನ.ನನ್ನ ಪಕ್ಷವನ್ನಲ್ಲ ಎನ್ನುವುದು ಗಮನದಲ್ಲಿರಲಿ. ಏಕೆಂದರೆ, ಪಕ್ಷದ ನಿಲುವಿಗೂ ನನ್ನ ನಿಲುವಿಗೂ ಅನೇಕ ವಿಚಾರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರಬಹುದು.ಇರಲಿಕ್ಕೆ ಸಾಧ್ಯ ಇದೆ. ಅದಕ್ಕಾಗೆ ಅಮೆರಿಕದಲ್ಲಿ ವಿಪ್ ಸಿಸ್ಟಮ್ ಇಲ್ಲ. ಈ ಪಕ್ಷದ ವಿಚಾರಗಳು ಯಾವುದು ಕೂಡಾ ನಮ್ಮನ್ನು ಬಂಧಿಸಬಾರದು.ಉದಾ; ಒಬಾಮ ಹೆಲ್ತ್ಕೇರ್ ಬಿಲ್ ತಂದಾಗ 23 ಜನ ಡೆಮಾಕ್ರಟಿಕ್ ಪಾರ್ಟಿಯವರು ವಿರುದ್ಧವಾಗಿ ಓಟು ಹಾಕಿದರು.36 ಜನ ರಿಪಬ್ಲಿಕನ್ ಪಾರ್ಟಿಯವರು ಒಬಾಮ ಪರವಾಗಿ ಓಟು ಹಾಕಿದರು.ನಂತರ ಬಿಲ್ ಪಾಸಾಯಿತು.ಆದರೆ, ಇಲ್ಲಿ ಹಾಗಾಗುವುದಕ್ಕೆ ಸಾಧ್ಯವೇ? ಇಲ್ಲಿ ವಿಪ್ ನೀಡಲಾಗುತ್ತದೆ.ಅದನ್ನು ಅನುಸರಿಸದೇ ನಮ್ಮದೇ ನಿಲುವು ತಾಳಿದರೆ ಅದನ್ನು ಪಕ್ಷ ವಿರೋಧಿ ಚಟವಟಿಕೆ ಎಂದು ಪರಿಗಣಿಸುತ್ತಾರೆ. ಅಂದರೆ, ವಿಪ್ ಇಲ್ಲದೇ ಇರುವಂತದ್ದು ನಿಜವಾದ ಪ್ರತಿನಿಧಿತ್ವ. ವಿಪ್ ಇರುವಂತದ್ದು ನಿಜವಾದ ಪ್ರತಿನಿಧಿತ್ವ ಅಲ್ಲವೇ ಅಲ್ಲ. ವಿಪ್ಗೆ ಅನುಗುಣವಾಗಿ ನಿಲುವು ತಾಳುವುದು ಅದು ಪಕ್ಷವನ್ನು ಪ್ರತಿನಿಧಿಸುತ್ತದೆ, ಅದು ಪಕ್ಷದ ದೃಷ್ಟಿಕೋನವಾಗುತ್ತದೆಯೇ ವಿನಃ ಅದು ನನ್ನ ನಿಲುವಾಗುವುದಿಲ್ಲ. ಮತ್ತಷ್ಟು ಓದು »

23
ಮೇ

ಮೂರ್ತಿಗಳೇ.ಯಾರ ಸರ್ಕಾರ ಮತ್ತು ಯಾರು ಫ್ಯಾಸಿಸ್ಟ್ ಗಳು?

– ರಾಕೇಶ್ ಶೆಟ್ಟಿ

ಅನಂತಮೂರ್ತಿ - ಸಿದ್ದರಾಮಯ್ಯಇವತ್ತಿನ ಕನ್ನಡ ಪ್ರಭದಲ್ಲಿ ಪ್ರಕಟವಾದ ನನ್ನ ಲೇಖನದ ಪೂರ್ಣ ಭಾಗವಿದು.ಈ ಲೇಖನವನ್ನು ಮೂರ್ತಿಗಳಿಗೂ ಮೇಲ್ ಮಾಡಿದ್ದೇನೆ.
“ಮೋದಿಯನ್ನು ಫ್ಯಾಸಿಸ್ಟ್” ಅಂತ ಮಾತು ಮಾತಿಗೆ ಕರೆಯುತ್ತಿರುವ,ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತಮೂರ್ತಿಗಳು,ಇತರ ಪ್ರಗತಿಪ್ರರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಗೆಳೆಯರು ಉತ್ತರಿಸಬೇಕಾದ ಪ್ರಶ್ನೆಗಳು. ಉತ್ತರದ ನಿರೀಕ್ಷೆಯಿದೆ…

ಎಲ್ಲಾ ಸಮೀಕ್ಷೆಗಳನ್ನು ಹುಸಿ ಮಾಡಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಏಕಾಂಗಿಯಾಗಿ ಅಭೂತಪೂರ್ವ ಜಯ ದಾಖಲಿಸಿದೆ. ಮೋದಿಯವರ ಗೆಲುವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳ ಖುಷಿಯೂ ಮುಗಿಲು ಮುಟ್ಟಿದೆ.ಈ ಖುಷಿಯ ನಡುವೆ ಮುಖ್ಯವಾಗಿ ಪ್ರಸ್ತಾಪವಾಗುತ್ತಿರುವುದು “ನರೇಂದ್ರ ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿ ಇರಲು ಇಚ್ಛೆ ಪಡುವುದಿಲ್ಲ” ಎಂದು ನೀವು ಕಳೆದ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ನೀಡಿದ್ದ ಹೇಳಿಕೆ.

ಸಾಹಿತಿಗಳಿಕೇ ರಾಜಕೀಯ ಉಸಾಬರಿ ಅನ್ನುವುದು ಕೆಲವರು ವಾದವಾದರೆ,ಅದಕ್ಕೆ ಪ್ರತಿಯಾಗಿ ಸಾಹಿತಿಗಳಾದವರಿಗೂ ವೈಯುಕ್ತಿಕ ನಿಲುವುಗಳಿದ್ದರೇನು ತಪ್ಪು ಅನ್ನುವ ಪ್ರತಿವಾದವೂ ಕೇಳಿಬರುತ್ತಿದೆ.ಒಂದು ಕ್ಷಣಕ್ಕೆ ಮೂರ್ತಿಗಳ ರಾಜಕೀಯ ನಿಲುವುಗಳನ್ನು ಬದಿಗಿಡೋಣ.ಬುದ್ದಿಜೀವಿಗಳಾದ ಮೂರ್ತಿಗಳಿಗೆ ಮತ್ತವರ ಸೆಕ್ಯುಲರ್ ಸಾಹಿತಿಗಳ ತಂಡಕ್ಕೆ,ನಾಡಿನ ಬೌದ್ಧಿಕ ವಲಯದ ವಿಷಯವೊಂದರ ಮೂಲಕ ಒಂದಿಷ್ಟು ಬಹಿರಂಗ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಬಯಸೋಣ.

ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತ ಮೂರ್ತಿಗಳು,ಇತ್ತೀಚಿನ ದಿನಗಳಲ್ಲಿ ಈ ನಾಡಿನ ತಲ್ಲಣಗಳೆಲ್ಲವಕ್ಕೂ ನಿಜವಾಗಿಯೂ ಸ್ಪಂದಿಸಿದ್ದಾರೆಯೇ? ಉತ್ತರ : ಬಹುಷಃ ಇಲ್ಲವೆನ್ನಬಹುದು.

ಮತ್ತಷ್ಟು ಓದು »

22
ಮೇ

ಸಾಹಿತಿಗಳೆಂದರೆ ಸರ್ವಸ್ವವೇ?

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಕನ್ನಡ ಸಾಹಿತ್ಯಕನ್ನಡ ಕಲಿಕಾ ಮಾಧ್ಯಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಆಶಯ ಕುರಿತು ಬರುತ್ತಿರುವ ಅಭಿಪ್ರಾಯಗಳಲ್ಲಿ ಸುಪ್ರೀಂ ತೀರ್ಪಿನ ಪರ ಬಹುತೇಕ ದನಿಗಳಿವೆ. ಸುಪ್ರೀಂ ತೀರ್ಪು ಸರಿ. ನಮ್ಮ ಸರ್ಕಾರದ ನೀತಿಗಳು ಸರಿ ಇಲ್ಲ ಎಂಬುದೂ ಸರಿ, ಆದರೂ… ಎಂದು ಅನುಮಾನದ ರಾಗ ಎಳೆಯುವವರು ಕೆಲವರು ಮಾತ್ರ. ಈ ಸರ್ವೇ ಸ್ಯಾಂಪಲ್ ಸಂಖ್ಯೆ ತುಂಬ ಕಡಿಮೆ ಎನಿಸಿದರೂ ಸುಪ್ರೀಂ ತೀರ್ಪು ಜನಸಾಮಾನ್ಯರ ದೃಷ್ಟಿಗೆ ತಕ್ಕಂತೆಯೇ ಇದೆ ಎಂಬುದರಲ್ಲಿ ಅನುಮಾನವಿಲ್ಲ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದ ಮೇಲೂ ಇದು ಇನ್ನೂ ತೀವ್ರ ಚರ್ಚೆಯ ವಿಷಯವಾಗಿಯೇ ಇರುವುದು ವಿಷಯದ ಗಂಭೀರತೆಯನ್ನು ತೋರಿಸುತ್ತದೆ. ಆದರೆ ಸರ್ಕಾರ ಬಹುಸಂಖ್ಯಾತರ ಆಶಯವನ್ನು ಗಮನಕ್ಕೆ ತಂದುಕೊಂಡು ಹೆಜ್ಜೆ ಇಡುತ್ತಿದೆಯೇ? ಇಲ್ಲ.

ಘನ ನ್ಯಾಯಾಲಯದ ತೀರ್ಪು ಯಾವುದೇ ನಿರ್ದಿಷ್ಟ ಭಾಷಾ ಮಾಧ್ಯಮ ಹೇರಿಕೆಯ ವಿರುದ್ಧವಿದ್ದರೂ ನಮ್ಮ ಸರ್ಕಾರ ಮಾತ್ರ ಕನ್ನಡದ ರಕ್ಷಣೆ ಹೇಗಾಗಬಲ್ಲುದು ಎಂಬುದಕ್ಕಿಂತ ಕನ್ನಡ ಮಾಧ್ಯಮ ರಕ್ಷಣೆಗೆ ಪಣ ತೊಟ್ಟಂತೆ ಕಾಣುತ್ತದೆ. ತನ್ನ ಆದೇಶವನ್ನು ಅದು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಸದಾ ಸುದ್ದಿ ಬಯಸುವ ಬೆರಳೆಣಿಕೆ ಸಾಹಿತಿಗಳ ಹಾಗೂ ಹೋರಾಟಗಾರರ ಭಾವಾವೇಶದ ಅಭಿಪ್ರಾಯಕ್ಕೆ ಸರ್ಕಾರ ಬಗ್ಗುವಂತೆ ಕಾಣುತ್ತಿದೆ. ತೀರ್ಪನ್ನು ಕುರಿತು ಚರ್ಚಿಸಲು ಸರ್ಕಾರ ಕರೆದ ಸಭೆಯಲ್ಲಿ ಆಹ್ವಾನಿತರಾದವರು ಯಾರು? ಒಂದಿಷ್ಟು ಸಾಹಿತಿಗಳು, ಚಳವಳಿಗಾರರು ಹಾಗೂ ಸರ್ಕಾರಿ ಅಧಿಕಾರಿಗಳು. ಇವರೇ ಈ ವಿಷಯಕ್ಕೆ ಸಂಬಂಧಿಸಿದ ಸಮಸ್ತ ಸಂಗತಿಗಳನ್ನು ಪ್ರತಿನಿಧಿಸುತ್ತಾರಾ? ಇವರನ್ನೇ ಶಿಕ್ಷಣ ತಜ್ಞರು, ಪಾಲಕ-ಪೋಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗದವರು ಇತ್ಯಾದಿ ಊಹಿಸಿಕೊಳ್ಳಬೇಕಾ? ಅಷ್ಟಕ್ಕೂ ಈ ಸಭೆಯಲ್ಲಿ ಪಾಲ್ಗೊಂಡವರಲ್ಲಿ ಕನ್ನಡ ಕಲಿತರೆ ಭವಿಷ್ಯವಿದೆ ಎಂಬ ವಾತಾವರಣ ಹುಟ್ಟಿಸಬೇಕಿದೆ ಎಂದ ಗಿರೀಶ್ ಕಾರ್ನಾಡ್ ಹಾಗೂ ಭಾಷೆಯಾಗಿ ಕನ್ನಡ ಕಲಿಸಲು ಅಡ್ಡಿ ಇಲ್ಲ ಹಾಗೂ ಅಂಥ ವಾತಾವರಣ ರೂಪಿಸಬೇಕು ಎಂದ ಸಿ ಎನ್ ರಾಮಚಂದ್ರನ್ ಅವರ ಮಾತುಗಳನ್ನು ಬಿಟ್ಟರೆ ಉಳಿದವರ ಅಭಿಪ್ರಾಯಗಳೆಲ್ಲ ಹೋರಾಟಗಾರರ ಮಾತಿನಂತೆ ತಥಾಕಥಿತವಾಗಿವೆ.

ಮತ್ತಷ್ಟು ಓದು »

21
ಮೇ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭

— ಮು. ಅ. ಶ್ರೀರಂಗ ಬೆಂಗಳೂರು

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧SL Bhairappa Vimarshe - Nilume

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬

 ಆವರಣ’ ಎಂಬ  ವಿ-ಕೃತಿ   ಸಂಗ್ರಹ:   ಗೌರಿ ಲಂಕೇಶ್

 (‘ನಿಲುಮೆ’ಯಲ್ಲಿ  ೧-೪-೧೪ರಂದು  ಪ್ರಕಟವಾದ  ಲೇಖನದ  ಮುಂದುವರೆದ  ಭಾಗ)
 
ಕೋ. ಚೆನ್ನಬಸಪ್ಪನವರು  (ಕೋ.ಚೆ)  ತಮ್ಮ  “ ಆವರಣ “ದಲ್ಲಿ  ಆವರಣ, ವಿಕ್ಷಿಪ್ತ  ಎಂಬ ಲೇಖನದಲ್ಲಿ (…… ವಿಕೃತಿ ಪುಟ ೪೮)  ಔರಂಗಜೇಬ ಮತ್ತು ಟಿಪ್ಪು ಸುಲ್ತಾನನ  ಆಳ್ವಿಕೆಯಲ್ಲಿನ ಕೆಲವು ಅಂಶಗಳನ್ನು  ಪಟ್ಟಿಮಾಡಿ  (ಅವುಗಳ ಅಂತರ್ಯವನ್ನು ಪೂರ್ತಿ ತಿಳಿಯುವ ಕೆಲಸಕ್ಕೆ ಕೈ ಹಾಕದೆ)  ‘ನೋಡಿ ಅವರಿಬ್ಬರೂ ಇಷ್ಟು ಒಳ್ಳೆಯ ಕೆಲಸಮಾಡಿದ್ದಾರೆ’ ಎಂದು ತೃಪ್ತಿಪಟ್ಟುಕೊಂಡಿದ್ದಾರೆ. ‘ಆವರಣ’ ಕಾದಂಬರಿ ಪ್ರಕಟವಾಗಿದ್ದು ಫೆಬ್ರವರಿ ೨೦೦೭ರಲ್ಲಿ. ಟಿಪ್ಪು ಬಗ್ಗೆ ೨೦೦೬ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದು ದೊಡ್ಡ ವಿವಾದವೆದ್ದು ಕರ್ನಾಟಕದ ಸಾಹಿತಿಗಳ,ಬುದ್ಧಿಜೀವಿಗಳ,ಚಿಂತಕರ ಜತೆಗೆ ಸಾಮಾನ್ಯ ಓದುಗರ ಲೇಖನ-ಪತ್ರಗಳಿಂದ ಪತ್ರಿಕೆಗಳ ಪುಟಗಳು ತುಂಬಿಹೋಗಿತ್ತು. ಆ ಸಮಯದಲ್ಲಿ ಭೈರಪ್ಪನವರು ‘ವಿಜಯಕರ್ನಾಟಕ’ ಪತ್ರಿಕೆಯಲ್ಲಿ ಸೆಪ್ಟೆಂಬರ್ ೨೪, ೨೦೦೬ರಂದು ಬರೆದ ಲೇಖನದಲ್ಲಿನ ಕೆಲವು ಅಂಶಗಳು ಕೋ.ಚೆ ಅವರಿಗೆ ಟಿಪ್ಪುವಿನ ಮೇಲೆ ಇರುವ ಪ್ರೇಮ,ಅಭಿಮಾನಕ್ಕೆ ಉತ್ತರ ನೀಡಬಲ್ಲವು ಎಂದು ಭಾವಿಸಿದ್ದೇನೆ. 
(೧) ಟಿಪ್ಪುವು ಮಕ್ಕಳನ್ನು ಯುದ್ಧಬಂಧಿಗಳಾಗಿ ಇಟ್ಟ ಕರಾರು ಯಾವುದು? ಯುದ್ಧದಲ್ಲಿ ಸೋತ ನಂತರ ಇಂತಿಷ್ಟು ಹಣವನ್ನು ಬ್ರಿಟಿಷರಿಗೆ ಕೊಡುವುದಾಗಿ ಅವನು ಒಪ್ಪಿಕೊಂಡ. ಸದ್ಯದಲ್ಲಿ ಕೈಲಿ ಹಣವಿರಲಿಲ್ಲ ……… ಒತ್ತೆ ಇಡಲು ಬೇರೇನೂ ಇರಲಿಲ್ಲ. ಟಿಪ್ಪುವಿನ ಬರೀ ಮಾತನ್ನು,ಆಣೆ  ಪ್ರಮಾಣಗಳನ್ನು ಬ್ರಿಟಿಷರು ನಂಬಿಹೋಗಬಹುದಿತ್ತೆ? ….. ಒತ್ತೆ ಇರಿಸಿಕೊಂಡ ಮಕ್ಕಳ ಯೋಗಕ್ಷೇಮವನ್ನು ಬ್ರಿಟಿಷರು ಚೆನ್ನಾಗಿಯೇ ನೋಡಿಕೊಂಡರು. 

ಮತ್ತಷ್ಟು ಓದು »

19
ಮೇ

ಚುನಾವಣೆ 2014: ಯುಪಿಎ ಸೋಲಿಗೆ ಕಾರಣಗಳೇನು?

– ತುರುವೇಕೆರೆ ಪ್ರಸಾದ್

SRಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ನಿಜವಾಗಿದ್ದು ಅದರಂತೆ ಬಿಜೆಪಿ ಮತ್ತು ಅದರ ಮಿತ್ರಪಕ್ಕಗಳನ್ನೊಳಗೊಂಡ ಎನ್‍ಡಿಎ ಕಳೆದ 25 ವರ್ಷಗಳಲ್ಲೇ ಐತಿಹಾಸಿಕ ಎನ್ನಬಹುದಾದ ಭಾರೀ  ಗೆಲುವು ದಾಖಲಿಸಿದೆ. ಯುಪಿಎ ನೂರರ ಗಡಿ ಮುಟ್ಟಲಾಗದೆ ದಯನೀಯ ಸೋಲು ಕಂಡಿದೆ. ಯುಪಿಎ ವೈಫಲ್ಯಕ್ಕೆ ಕಾರಣವಾದ ಹಲವು ಅಂಶಗಳಿವೆ. ಅವುಗಳಲ್ಲಿ  ಮಿತಿ ಮೀರಿದ ಭ್ರಷ್ಟಾಚಾರ, ಸಾಲು ಸಾಲು ಹಗರಣಗಳು, ಹಣದುಬ್ಬರ, ಬೆಲೆಯೇರಿಕೆ  ಇವು ಪ್ರಮುಖ ಕಾರಣಗಳು. ಯುಪಿಎ ಸರ್ಕಾರದ ವೈಫಲ್ಯಕ್ಕೆ ಕಾರಣವಾದ  ಅಂಕಿ-ಅಂಶಗಳನ್ನು ಖ್ಯಾತ ಪತ್ರಕರ್ತ ಸೆನ್‍ಗುಪ್ತ ಪಟ್ಟಿ ಮಾಡಿದ್ದಾರೆ.  ಅವುಗಳ ಸಾರಾಂಶ ಈ ಕೆಳಕಂಡಂತಿದೆ

•    ಯುಪಿಎ ಆಢಿತಾವಧಿಯಲ್ಲಿ ನಡೆದ 1.76 ಲಕ್ಷ ಕೋಟಿಯ 2ಜಿ ಹಗರಣ, 1.85 ಲಕ್ಷ ಕೋಟಿಯ ಕಲ್ಲಿದ್ದಲು ಹಂಚಿಕೆ ಹಗರಣ, ರೂ.3600 ಕೋಟಿಯ ಅಗಸ್ಟಾ ವೆಸ್ಟ್‍ಲ್ಯಾಂಡ್ ಹೆಲಿಕಾಪ್ಟರ್ ಹಗರಣ, 90 ಕೋಟಿ ಹಣ ದುರುಪಯೋಗದ ಕಾಮನ್‍ವೆಲ್ತ್ ಕ್ರೀಡಾಕೂಟದ ಹಗರಣ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್‍ನಿಂದ 5000 ಕೋಟಿ ದುರುಪಯೋಗದ ಆರೋಪ ಹೊತ್ತಿರುವ ಮಾಯಾವತಿ ಸರ್ಕಾರದ ಹಗರಣ- ಇವನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ.

•    2011ರಲ್ಲಿ ಸುಮಾರು 4 ಲಕ್ಷ ಕೋಟಿ ಕಪ್ಪು ಹಣ ಭಾರತದಿಂದ ಆಚೆ ಸಾಗಿಸಲಾಗಿದೆ. ಇದು 2010ರ ಶೇ.24ರಷ್ಟು ಹೆಚ್ಚು. ಪ್ರತಿ ವರ್ಷ ಇದು ಅವ್ಯಾಹತವಾಗಿ ನಡೆದು ಬಂದಿದೆ. ಆದರೆ ಸ್ವಿಸ್ ಬ್ಯಾಂಕ್‍ನಲ್ಲಿದೆ ಎಂದು ಹೇಳಾಗಿರುವ 1456 ಬಿಲಿಯನ್ ಡಾಲರ್ ಹಣ ಹಿಂದೆ ಪಡೆಯಲು ಯುಪಿಎ ಸರ್ಕಾರ ಯಾವ ಗಂಭೀರ ಪ್ರಯತ್ನವನ್ನೂ ಮಾಡಲಿಲ್ಲ.

•    ಯುಪಿಎ ಸರ್ಕಾರದ ಮಹದಾಕಾಂಕ್ಷಿ ಯೋಜನೆ ಎನಿಸಿದ ಉದ್ಯೋಗ ಖಾತ್ರಿ ಯೋಜನೆಯಡಿ ಯುಪಿಎ ಸರ್ಕಾರ 1.9ಲಕ್ಷ ಕೋಟಿ ಹಣ ವೆಚ್ಚ ಮಾಡಿದೆ. ಆದರೆ ಶೇ.31 ಗ್ರಾ.ಪಂಚಾಯ್ತಿಗಳಿಗೆ ಈ ಹಣ ಹೇಗೆ ವಿನಿಯೋಗಿಸಬೇಕು ಎಂಬುದೇ ಗೊತ್ತಿಲ್ಲ, ರಾಜ್ಯದಲ್ಲಿನ ಹಳೆ ಉಳಿಕೆ, ಬಳಕೆಯ ಲೆಕ್ಕವೇ ಇಡದೆ  ಕಳೆದ 3 ವರ್ಷಗಳಿಂದ ಒಟ್ಟಾರೆ 11549 ಕೋಟಿ  ಹಣ ಬಿಡುಗಡೆ ಮಾಡಲಾಗಿದೆ.   4.33 ಲಕ್ಷ ಜಾಬ್ ಕಾರ್ಡ್‍ಗಳಿಗೆ ಭಾವಚಿತ್ರವೇ ಇಲ್ಲ, ಗ್ರಾಮೀಣ  ಪ್ರದೇಶದಲ್ಲಿ ಕೇವಲ ಶೇ.20 ಹಣವನ್ನು ಮಾತ್ರ ಉದ್ದೇಶಿತ ಯೋಜನೆಗಳಿಗೆ ಬಳಸಲಾಗಿದ್ದು ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಸಿಎಜಿ ಆಕ್ಷೇಪಿಸಿದೆ.

ಮತ್ತಷ್ಟು ಓದು »