ವಿಷಯದ ವಿವರಗಳಿಗೆ ದಾಟಿರಿ

Archive for

14
ಏಪ್ರಿಲ್

ತುಷ್ಟೀಕರಣ ನಿಲ್ಲದ ಹೊರತು ಕಾಶ್ಮೀರ ತಣಿಯದು

– ಯೋಗೀಶ ತೀರ್ಥಪುರ

J&Kಕಾಶ್ಮೀರ ಹಿಂದೂಗಳ ಪಾಲಿಗೆ ನರಕವಾಗಿ ಪರಿವರ್ತಿತವಾಗಿದೆ. ಹಿಂಸೆ, ಶೋಷಣೆಯ ದಳ್ಳುರಿಯಲ್ಲಿ ಇಲ್ಲನ ಹಿಂದೂಗಳ ಸ್ಥಿತಿ ತೀರಾ ದಯನೀಯವಾಗಿದೆ. ಇಷ್ಟೆಲ್ಲ ನಡೆದಿದ್ದರೂ ಕಾಶ್ಮೀರ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತುಷ್ಟೀಕರಣ ರಾಜಕಾರಣದಲ್ಲೇ ಮುಂದುವರಿದಿರುವುದು ದುರದೃಷ್ಟಕರ.

1947ರ ವಿಭಜನೆಯ ನಂತರದ ಕಾಲದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ದಿಂದ ಸುಮಾರು 4.5 ಲಕ್ಷ ಹಿಂದುಗಳು ಕಾಶ್ಮೀರಕ್ಕೆ ಸ್ಥಳಾಂತರಗೊಂಡರು. ಈ ಹಿಂದುಗಳಿಗೆ ಕಾಶ್ಮೀರದಲ್ಲಿ ಮತದಾನದ ಹಕ್ಕಿಲ್ಲ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಹಿಂದುಗಳಿಗೆ ವಿಧಾನಸಭೆಯಲ್ಲಿ 31% ರಷ್ಟೇ ಪ್ರತಿ ನಿಧಿತ್ವ ಸಿಗುವಂತೆ ಒಟ್ಟು ಸ್ಥಾನಗಳ ಹೊಂದಾಣಿಕೆಯನ್ನು ಮಾಡಲಾಗಿದೆ.

ಕಾಶ್ಮೀರಿ ಹಿಂದುಗಳಲ್ಲಿ ಸಾಕ್ಷರತಾ ಪ್ರಮಾಣವು 88%ರಷ್ಟು ಇದ್ದರೂ ರಾಜ್ಯ ಸರಕಾರದ ಸೇವೆ, ಸಾರ್ವಜನಿಕವಲಯ ಮತ್ತು ಸರಕಾರಿ ಕಂಪೆನಿಗಳಲ್ಲಿ ಹಿಂದು ಕಾರ್ಮಿಕರ ಪ್ರಮಾಣವು 4.8% ರಷ್ಟು ಮಾತ್ರ ಇದೆ. 1980 ರಿಂದ 1990ರ ಅವಧಿಯಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾದ ಮೇಲೆ ಈ ಪ್ರಮಾಣವು 1.7%ಕ್ಕೆ ಇಳಿಯಿತು. ಕಾಶ್ಮೀರದಲ್ಲಿನ ಯಾವ ಆರ್ಥಿಕ ವ್ಯವಹಾರವೂ ಹಿಂದೂಗಳ ಕೈಯಲ್ಲಿ ಇಲ್ಲ. ಕಾಶ್ಮೀರದ 97.4% ಭೂಮಿಯು ಮುಸಲ್ಮಾನರ ಒಡೆತನದಲ್ಲಿದೆ. ಕೇವಲ 2.6% ಭೂಮಿಯು ಮಾತ್ರ ಹಿಂದು ಮತ್ತು ಇತರ ಅಲ್ಪಾಸಂಖ್ಯಾತರ ಒಡೆತನದಲ್ಲಿದೆ. 1985ರಲ್ಲಿ ಕಾಶ್ಮೀರದಲ್ಲಿ ನೋದವಣೆ ಮಾಡಲ್ಪಟ್ಟ ಲಘು ಉದ್ಯೋಗಗಳ ಸಂಖ್ಯೆ 46,293 ಇತ್ತು. ಇದರಲ್ಲಿ 0.01% ರಷ್ಟು ಉದ್ಯೋಗಗಳು ಹಿಂದುಗಳ ಒಡೆತನದಲ್ಲಿದ್ದವು ಮತ್ತು ವಿದ್ಯುತ್ ಆಧಾರಿತ ಉದ್ಯೋಗಗಳ ಪೈಕಿ 98.9%ರಷ್ಟು ಮುಸಲ್ಮಾನರ ಒಡೆತನದ್ದಲಿವೆ. ಕಾಶ್ಮೀರದಲ್ಲಿನ 96%ರಷ್ಟು ಸೇಬು ತೋಟಗಳ ಜಮೀನು ಮುಸಲ್ಮಾನರ ಒಡೆತನದ್ದಲಿದೆ.

ಮತ್ತಷ್ಟು ಓದು »