ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 3
– ಮು.ಅ ಶ್ರೀರಂಗ,ಬೆಂಗಳೂರು
ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 1
ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 2
(ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ-೧೦ ರಲ್ಲಿ ತಿಳಿಸಿದಂತೆ (“ನಿಲುಮೆ” ದಿನಾಂಕ ೧೨-೧೧-೨೦೧೪) ನನ್ನ ಮತ್ತು ಶ್ರೀ ವಸುಧೇಂದ್ರರ ಪತ್ರಗಳ ಪೂರ್ಣ ಪಾಠ)
ವಸುಧೇಂದ್ರರ ಮೊದಲನೇ ಪತ್ರ – ಬೆಂಗಳೂರು ೨೧-೦೬-೨೦೧೨
ಶ್ರೀರಂಗ ಅವರಿಗೆ-
ನಮಸ್ಕಾರಗಳು. ನಿಮ್ಮ ಸುಧೀರ್ಘವಾದ ಪತ್ರ ಬಂದಿದೆ. ಸುಮಾರು ಎರಡು ವರ್ಷಗಳ ಹಿಂದೆ ಪ್ರಕಟವಾದ ಈ ಲೇಖನವನ್ನು ನೆನಪಿನಲ್ಲಿಟ್ಟುಕೊಂಡು, ಈಗ ನನ್ನ ವಿಳಾಸ ದೊರೆತ ಮೇಲೆ ಅದಕ್ಕೆ ಪ್ರತಿಕ್ರಿಯಿಸಿರುವ ನಿಮ್ಮ ಸಾಹಿತ್ಯಾಭಿಮಾನ ದೊಡ್ಡದು. ನಿಮ್ಮಂತಹ ಕಟ್ಟಾ ಅಭಿಮಾನಿಗಳನ್ನು ಹೊಂದಿರುವ ಭೈರಪ್ಪನವರ ಬಗ್ಗೆ ಅಸೂಯೆಯಾಗುತ್ತದೆ.
ಭೈರಪ್ಪನವರ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷವಾಗಲಿ, ಬೇಸರವಾಗಲಿ ಇಲ್ಲ. ಇದುವರೆಗೆ ನಾನು ಅವರನ್ನು ಭೇಟಿಯಾಗಿಲ್ಲ. ನಿಮ್ಮೆಲ್ಲರಂತೆ ನಾನೂ ಅವರೆಲ್ಲಾ ಕಾದಂಬರಿಗಳನ್ನು ಪ್ರೀತಿ ವಿಶ್ವಾಸದಿಂದ ಓದಿದ್ದೇನೆ . ಗೃಹಭಂಗ ಮತ್ತು ಪರ್ವ ನನ್ನ ಬಹು ಇಷ್ಟವಾದ ಕಾದಂಬರಿಗಳು. ಅವುಗಳ ಬಗ್ಗೆ ಮತ್ತೊಮ್ಮೆ ಖಂಡಿತಾ ಬರೆಯುತ್ತೇನೆ.
ಅಭಿಮಾನ ಜಾಸ್ತಿಯಾದಾಗ ಆರಾಧನೆಯಾಗುತ್ತದೆ. ಆಗ ನಮಗೆ ಸಾಹಿತಿಗಳ ತಪ್ಪುಗಳೊಂದೂ ಕಾಣುವುದಿಲ್ಲ. ಅವರ ಎಲ್ಲಾ ಹೇಳಿಕೆಗಳೂ, ಮಾತುಗಳೂ, ಕೃತಿಗಳೂ ಸರಿಯೆನ್ನಿಸಲಾರಂಭಿಸುತ್ತವೆ. ಓದುಗ ಎಂದೂ ಆ ಅಪಾಯದಲ್ಲಿ ಸಿಲುಕಬಾರದು. ಕೇವಲ ಓದುಗನಾದ ನನಗೆ ಭೈರಪ್ಪನವರ ಗುಣ–ದ್ವೇಷಗಳೆರಡೂ ಸ್ಪಷ್ಟವಾಗಿ ಕಾಣಿಸುತ್ತವೆ. ಎರಡನ್ನೂ ಸಮಾನ ಪ್ರೀತಿಯಿಂದಲೇ ದಾಖಲಿಸಿದ್ದೇನೆ. ಆದರೆ ನಮ್ಮ ಸಾಹಿತ್ಯದ ಮಾನ ದಂಡ ಬೇರೆಯಾದಾಗ ಅವು ನಿಮಗೆ ಒಪ್ಪಿಗೆಯಾಗದೇ ಹೋಗುವುದನ್ನೂ ನಾನು ಒಪ್ಪುತ್ತೇನೆ, ಗೌರವಿಸುತ್ತೇನೆ. ಮತ್ತಷ್ಟು ಓದು