ವಿಷಯದ ವಿವರಗಳಿಗೆ ದಾಟಿರಿ

Archive for

12
ನವೆಂ

ಕಡಲ ಕಣ್ಣೀರು: ಒಂದು ಪ್ರೀತಿಯ ಕತೆ..!

– ದಿವ್ಯಾಧರ ಶೆಟ್ಟಿ ಕೆರಾಡಿ
ಉಪನ್ಯಾಸಕ
ಆಳ್ವಾಸ್ ಕಾಲೇಜು
ಮೂಡಬಿದ್ರೆ

hqdefaultಇಂದು ಕಡಲು ಬತ್ತಿದಂತಿತ್ತು ಭೋರ್ಗೆರೆವ ಸದ್ದಿಲ್ಲದೆ, ಕಾಲು ಸುತ್ತಿ ಮುತ್ತಿಕ್ಕುವ ತೆರೆಗಳೆಲ್ಲಾ ದೂರ ದೂರಕ್ಕೆ ಸರಿದಂತೆ ಮರಳ ಮೇಲೆಲ್ಲಾ ಅವಳ ಹೆಜ್ಜೆ ಗುರುತುಗಳು ಸಾವಿರ ಕಥೆಗಳನ್ನು ಹೇಳಿ ನಕ್ಕಂತೆ ಭಾಸವಾಗುತ್ತಿತ್ತು.. ದೂರದಲ್ಲೆಲ್ಲೊ ಮಗುವೊಂದು ರಚ್ಚೆಹಿಡಿದು ಅಳುವ ಸದ್ದು ಉಕ್ಕಿ ಬರುವ ದುಃಖದ ಮುಂದುವರಿದ ಭಾಗದಂತಿತ್ತು.. ಹೃದಯದ ಆರ್ದ್ರತೆಯ ಚೀರುವಿಕೆಯ ನಡುವೆಯೆ ಏನೂ ನಡೆಯದ ಹಾಗೇ ಎದುರುನಿಂತು ಕಣ್ಣ ದಿಟ್ಟಿ ತಪ್ಪಿಸಿ ನೆಲ ನೋಡುತ್ತ ಕೊನೆಗೊಮ್ಮೆ ಕಾಲ್ಮುಟ್ಟಿ ಕ್ಷಮಿಸಿಬಿಡು, ಮರೆತುಬಿಡು ಎಂದು ಹೊರಟವಳ ಹಿಂದೆ ನೋವಿನ ಗಜಲ್ ಗಜ್ಜೆಕಟ್ಟಿ ಕುಣಿದಿತ್ತು.. ಕೊಸರಿಕೊಂಡ ಕೈಬೆರಳ ಗುರುತಿನ್ನು ಮಚ್ಚೆಯಂತೆ ಎದೆಯೊಳಗೆ ಅಂಟಿಕೊಳ್ಳುವುದು ನಿಶ್ಚಯವಾದಾಗ ಕಣ್ಣು ಯಾಕೋ ಅವಳ ಬಿಂಬದೊಡನೆ ಹನಿಯತೊಡಗಿತ್ತು… ಮತ್ತಷ್ಟು ಓದು »