ವಿಷಯದ ವಿವರಗಳಿಗೆ ದಾಟಿರಿ

Archive for

3
ನವೆಂ

“ಕತ್ತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ….”

-ರಾಕೇಶ್ ಬಿ ಎಚ್

ನಮ್ಮ ದೇಶದಲ್ಲಿ ಪ್ರಶಸ್ತಿಗಳಿಗೆ ಬರ ಅನ್ನೋದೇ ಇಲ್ಲ. ವರ್ಷದಲ್ಲಿ ಏನಿಲ್ಲ ಅಂದರೂನು ದಿನಕ್ಕೊಂದು ಪ್ರಶಸ್ತಿಯನ್ನ ನಮ್ಮ ಘನತೆವೆತ್ತ ರಾಷ್ಟ್ರಾಧ್ಯಕ್ಷರು ನೀಡುತ್ತಲೇ ಇರ್ತಾರೆ. ಅವುಗಳಲ್ಲಿ ಎಷ್ಟು ಪ್ರಶಸ್ತಿಗಳು ಯೋಗ್ಯರಿಗೆ ಹೋಗುತ್ತವೆ ಅನ್ನೋದು ಮಾತ್ರ ನಿಘೂಡ!! ಇದೇ ಕಾರಣಕ್ಕೋ ಏನೋ ನಮ್ಮ ಪತ್ರಿಕೆಗಳು ಯಾರಾದರು ಪ್ರಶಸ್ತಿಗಳಿಗೆ ಭಾಜನರಾದರೆ, “ಶ್ರೀ ಯವರಿಗೆ ದಕ್ಕಿದ ಪ್ರಶಸ್ತಿ”  ಅಂತಾನೋ , ಇಲ್ಲ “ಪ್ರಶಸ್ತಿಯನ್ನ ಗಿಟ್ಟಿಸಿಕೊಂಡ ಶ್ರೀ..” ಅನ್ನೋ ಮುಖಪುಟ ವರದಿಯನ್ನ ಹಾಕ್ತಾರೆ. ನಮ್ಮ ವೈದ್ಯಕೀಯ ಭಾಷೇಲಿ ಹೇಳೋದಾದ್ರೆ ಖಾಯಿಲೆ ಬಿದ್ದ ವ್ಯಕ್ತಿ ಕಷ್ಟ ಪಟ್ಟು ಸ್ವಲ್ಪ ಊಟ ಮಾಡಿ ಅದೇನಾದ್ರೂ ವಾಂತಿ ಆಗ್ಲಿಲ್ಲ ಅಂದ್ರೆ ದಕ್ಕಿಸ್ಕೊಂಡ ಅಂತ ಹೇಳ್ತಿವಿ. ಅಂದ್ರೆ ಕಷ್ಟಪಟ್ಟು ಒಳಗೆ ಹಾಕಿಕೊಳ್ಳೋ ಕ್ರಿಯೆ. ಅದೇ ರೀತಿ ಗಿಟ್ಟಿಸಿಕೊಳ್ಳೋದು ಅನ್ನೋದು ಕೂಡ self explanatory  ಪದ. ಹೀಗೆ ನೈತಿಕತೆಯಿಲ್ಲದ ಪ್ರಶಸ್ತಿಗಳ ಮಧ್ಯೆ ನಮ್ಮ ಭಾರತೀಯ ಮಿಲಿಟರಿ ಕೊಡುವ ”ಶೌರ್ಯ ಚಕ್ರ” ಪ್ರಶಸ್ತಿ ಭಿನ್ನವಾಗಿ ನಿಲ್ಲುತ್ತೆ. ಪ್ರಶಸ್ತಿಯ ಮಾನದಂಡವು ಕೂಡ ಅಷ್ಟೇ, ವೈರಿಯ ಜೊತೆ ನೇರವಾಗಿ ಅಲ್ಲದಿದ್ದರೂ, ಧೈರ್ಯ ಸಾಹಸದಿಂದ ಮಾಡುವಂತ self sacrifice ಗೆ ಈ ಪ್ರಶಸ್ತಿ ಮೀಸಲು. ತನ್ನ ಜೀವವನ್ನು ಲೆಕ್ಕಿಸದೆ ಭಯೋತ್ಪಾದಕರನ್ನ ಹೊಡೆದು ಹಾಕಿದ ಕಾಶ್ಮೀರದ ಕನ್ಯೆ ನಮ್ಮ ಕಣ್ಣ ಮುಂದೆ ನಿಲ್ಲೋದು ಈ ಪ್ರಶಸ್ತಿಯ ದೆಸೆಯಿಂದಲೇ. ಅಂತಹ ಎಷ್ಟೋ ವ್ಯಕ್ತಿಗಳನ್ನ ನಾವು ವೈಯಕ್ತಿಕವಾಗಿ ಭೇಟಿ ಮಾಡೋದು ಸಾಧ್ಯವೇ ಇಲ್ಲ. ಅವರುಗಳ ಕಥೆ ಕೇಳಿ ಹೆಮ್ಮೆ ಪಡೋದೇ ದೊಡ್ಡ ವಿಷಯ ಅನ್ಸುತ್ತೆ. ಆದರೆ ಈ ವ್ಯಕ್ತಿಗಳನ್ನ ಇದ್ದಕ್ಕಿದ್ದಂಗೆ ನೆನೆಯೋಕೆ ಕಾರಣ, ಆ ರೀತಿಯ ವ್ಯಕ್ತಿಯೋರ್ವನನ್ನ ನೋಡಿ, ಮಾತಾಡಿಸಿ, ಅವನ ಕಥೆ ಕೇಳಿ ಬೆಚ್ಚಿ ಬೀಳೋ ಪ್ರಸಂಗ ಬಂದಾಗ. ಆ ವ್ಯಕ್ತಿ ನಮ್ಮ ಆಸ್ಪತ್ರೆಯ ಕಥನಗಳ ಒಂದು ಪುಟ. ಅವನ ಪದಗಳಲ್ಲೇ ನನಗೆ ಕಥೆಯನ್ನ ವಿವರಿಸಿದ ಚಿತ್ರಣವನ್ನ ನಿಮಗೆ ಕಟ್ಟಿ ಕೊಡುವ ಪ್ರಯತ್ನ ಮಾಡ್ತೀನಿ.  ಮತ್ತಷ್ಟು ಓದು »
3
ನವೆಂ

ಸಂಸ್ಕೃತಿ ಸಂಕಥನ – ೯

– ರಮಾನಂದ ಐನಕೈ

ವರ್ಶಿಪ್ ಅಂದರೆ ನಮ್ಮ ಪೂಜೆ ಅಲ್ಲ

ಜನಸಾಮಾನ್ಯರ ಮಾತು ಹಾಗಿರಲಿ, ಯಾವುದೇ ಭಾರತೀಯ ತಿಳುವಳಿಕಸ್ತನ ಹತ್ತಿರ ‘ಪೂಜೆ’ ಅಂದರೆ ಏನೆಂದು ಕೇಳಿದರೆ ‘ವರ್ಶಿಪ್’ ಎಂದು ಉತ್ತರ ಕೊಡುತ್ತಾನೆ. ‘ವರ್ಶಿಪ್’ ಅಂದರೆ ಏನೆಂದು ಕೇಳಿದರೆ  ‘ಪೂಜೆ’ ಅನ್ನುತ್ತಾನೆ. ಅದು ಸ್ವಾಭಾವಿಕ. ಏಕೆಂದರೆ ನೂರಾರು ವರ್ಷಗಳಿಂದ ನಮ್ಮ ಜ್ಞಾನ ಇಷ್ಟು ಹದಕ್ಕೆ ಬಂದಿದೆ. ಹೆಚ್ಚು ವಾದ ಮಾಡಿದರೆ ನಿಘಂಟು ತೆರೆದು ತೊರಿಸುತ್ತಾರೆ. ಅಲ್ಲಿ ವರ್ಶಿಪ್ ಅಂದರೆ ಅರ್ಚನೆ, ಪೂಜೆ, ಆರಾಧನೆ ಎಂಬಿತ್ಯಾದಿ ಅರ್ಥಗಳಿವೆ. ನಾವಿಲ್ಲಿ ಚರ್ಚಿಸುತ್ತಿರುವುದು ತರ್ಜುಮೆಯ ಕುರಿತಾಗಲ್ಲ ಅಥವಾ ಪದಗಳ ಅರ್ಥ ವ್ಯತ್ಯಾಸಗಳ ಬಗ್ಗೆಯೂ ಅಲ್ಲ. ಇಂಥ ತಪ್ಪು ಗೃಹಿಕೆಗಳು ಒಂದು ಸಂಸ್ಕೃತಿಯ ಮೇಲೆ ಮಾಡುವ ತಪ್ಪು ಪರಿಣಾಮಗಳ ಕುರಿತು.

ಪಾಶ್ಚಾತ್ಯರು ಭಾರತಕ್ಕೆ ಬಂದು ಇಲ್ಲಿನ ಆಚರಣೆಗಳನ್ನು ನೋಡಿ ‘ಭಾರತೀಯರು ವರ್ಶಿಪ್ ಮಾಡುತ್ತಿಲ್ಲ, ಬದಲಾಗಿ ನೂರಾರು ದೇವರುಗಳನ್ನು ಪೂಜೆ ಮಾಡುತ್ತಾರೆ’ ಎಂದು ಗ್ರಹಿಸಿದರೆ ತೊಂದರೆ ಇಲ್ಲವಾಗಿತ್ತು. ಆದರೆ ಅವರು ಭಾರತೀಯರು ತಪ್ಪುತಪ್ಪಾಗಿ ವರ್ಶಿಪ್ ಮಾಡುತ್ತಿದ್ದಾರೆ ಎಂದು ಗ್ರಹಿಸಿದ್ದೇ ಯಡವಟ್ಟಾಗಲು ಕಾರಣ. ಏಕೆಂದರೆ ಮುಂದೆ ಅವರು ಈ ತಪ್ಪು ವರ್ಶಿಪ್ ಸರಿಪಡಿಸಲು ಪ್ರಯತ್ನಿಸಬೇಕಾಯಿತು. ಈ ಪ್ರಯತ್ನವೇ ಭಾರತೀಯ ಸಂಸ್ಕೃತಿಗೆ ಬಡಿದ ಬಾಲಗ್ರಹ ಎಂಬುದು ಬಾಲಗಂಗಾಧರರ ಬರಹಗಳನ್ನು ಓದಿದಾಗ ಅರಿವಾಗುತ್ತದೆ.

ಮತ್ತಷ್ಟು ಓದು »