ವಿಷಯದ ವಿವರಗಳಿಗೆ ದಾಟಿರಿ

Archive for

30
ಮೇ

ದೇವಾಡಿಗ ಯುನೈಟೆಡ್ ಚಾರಿಟಿ ಶೋ…

– ಲೋಕು ಕುಡ್ಲ

 ಪೊರ್ಲು ಬೈಯ್ಯದ ಮುಗಲ್ ಕತ್ತಲೆಡ್ ಕುಡ್ಲದ ಟೌನ್ ಹಾಲ್ ವೇದಿಕೆಡ್ ಉಂದೇ ಶನಿವಾರದಾನಿ 26-5-2012 ನೇ ತಾರೀಖ್ ಗ್ ನಡತ್ತಿನ ದೇವಾಡಿಗ ಚಾರಿಟಿ ಶೋ ಕಾರ್ಯಕ್ರಮದ ಪೊರ್ಲು ವರ್ಣನೆಗ್ ಮೀರ್ದಿನ. ಯುವ ಸೈನ್ಯ ಎಡ್ಡೆ ಬೇಲೆಗ್ ಜತ್ತ್೦ಡ್ ಪಂದಾಂಡ ಆ ಬೇಲೆ ಪೊರ್ಲುಡು ನೆರವೇರುನೆಟ್ಟ್ ವಾ ಸಂಶಯಲಾ ಇಜ್ಜಿ ಪನ್ಪಿನೆನ್ ದೇವಾಡಿಗ ಯುನೈಟೆಡ್ ಯುವ ಸಂಘಟನೆ ತೋಜಾದ್ ಕೊರ್ತೆರ್, ಜತ್ತಿ ಬೆಗರ್ ಪನಿನ್ ಲೆಕ್ಕ ದೀವಂದೆ ದೇವಾಡಿಗ ಯುನೈಟೆಡ್ ಸಂಘಟನೆ ಮಂತಿ ಬೇಲೆ ಶ್ಲಾಘನೀಯ, ದಾನೊಡ್ದು ಮಲ್ಲ ದಾನ ವಿಧ್ಯಾದಾನ ಆ ಮಲ್ಲ ದಾನೊನು ಮಂತಿ ಪುಣ್ಯ ಮಾತ ದೇವಾಡಿಗ ಯುವ ಬಂಧುಲೆಗ್ ಸಂದುಂಡು,

ವಿದ್ಯೆದ ಬಡವುಡು ಪೊರೆಲೊಂದಿತ್ತಿ ಪಾಪದ ಜೋಕ್ಲೆನ್ ಕೈ ಪತ್ತ್ ದ್ ಲಕ್ಕಾಯೆರ್ ದೇವಾಡಿಗೆರ್, ಆ ಜೋಕುಲು ಅಕ್ಲೆ ವಿದ್ಯೆದ ಬಡವುನು, ಆ ಬಡವುಗು ಆರ್ಥಿಕತೆದ ಅಂಗಲಪ್ಪುನು ಅಕ್ಲೆ ಬಾಯಾರ ಪಂಡಿನ ಪಾತೆರೊನು ಕೇನ್ನಗ ಎಂಚಿನಾಯಗ್ಲಾ ಒರ ಬಂಜಿ ನುಂಗುದು ಪೋವು, ಅಂದ್ ಆ ಜೋಕ್ಲೆ ವಿದ್ಯೆ ಅಂಗಲಪುದ ಪಾತೆರೊನು ಪ್ರತೀ ಜೋಕ್ಲೆನ ಇಲ್ಲಡೆಗ್ ಪೊದು ಅಕ್ಲೆ ಬಂಗ ಬದ್ಕ್ ದ ವಿಚಾರೊಲೆನ್ ತೆರಿಯೊ೦ದು ವೀಡಿಯೋ ಸಮೇತ ಯುನೈಟೆಡ್ ಬಂಧುಲು ಟೌನ್ ಹಾಲ್ ಡ್ ನಡತ್ತಿನ ಕಾರ್ಯಕ್ರಮೊಡು ಜನಕ್ಲೆಗ್ ತೊಜಪಾಯೆರ್ ಅಂಚೆನೆ ಕೆಲ ದೇವಾಡಿಗೆರ್ ದೇವಾಡಿಗ ವಿಧ್ಯಾದಾನದ ಎಡ್ಡೆ ಬೇಲೆಗ್ ಶುಭ ಹಾರೈಸಿಯೆರ್.
30
ಮೇ

ಕಾನೂರು ಹೆಗ್ಗಡಿತಿ – 75

– ಡಾ| ಬಿ.ಆರ್ ಸತ್ಯನಾರಾಯಣ

ಕಾನೂರು ಹೆಗ್ಗಡತಿ ಕಾದಂಬರಿ ರಚಿತವಾಗಿ ಸಾರ್ಥಕ ೭೫ ವರ್ಷಗಳು ಕಳೆದಿವೆ. ನೆನಪಿನ ದೋಣಿಯಲ್ಲಿ ದಾಖಲಾಗಿರುವ ೧೭.೯.೧೯೩೩ರ ದಿನಚರಿಯಲ್ಲಿ ಹೀಗೆ ಹೇಳಿದೆ: ನಾನೊಂದು ಕಾದಂಬರಿಗೆ ವಸ್ತು ಸಂವಿಧಾನ ಪ್ರಾರಂಭಿಸಿದ್ದೇನೆ. ಹಗಲೆಲ್ಲ ಅದನ್ನೇ ಕುರಿತು ಆಲೋಚಿಸಿದೆ.ಇದು ಕಳೆದ ಎರಡೇ ದಿನಗಳಲ್ಲಿ, ಅಂದರೆ ೧೯.೯.೧೯೩೩ರ ಬೆಳಿಗ್ಗೆಯಿಂದಲೇ ಕಾದಂಬರಿಯ ಬರವಣಿಗೆ ಆರಂಭವಾಗುತ್ತದೆ. ಅಂದಿನಿಂದ ಸುಮಾರು ನಾಲ್ಕು ವರ್ಷಗಳ ನಂತರ ೧೯೩೭ರಲ್ಲಿ ಕಾದಂಬರಿ ಬೆಳಕು ಕಾಣುತ್ತದೆ.

ಈ ಎಲ್ಲಾ ಘಟನೆಗಳ ಹಿಂದಿದ್ದ ಮನೋಬಲಕ್ಕೆ ಧೈರ್ಯ ತುಂಬಿದವರು, ಕನಸನ್ನು ಬಿತ್ತಿದವರು ಕುವೆಂಪು ಅವರ ಗುರುಗಳಾದ ಶ್ರೀಟಿ.ಎಸ್.ವೆಂಕಣ್ಣಯ್ಯನವರು. ಟಾಲ್‌ಸ್ಟಾಯ್, ರೋಮಾ ರೋಲಾ, ಥಾಮಸ್ ಹಾರ್ಡಿ, ಗಾಲ್ಸ್‌ವರ್ದಿ ಮೊದಲಾದವರ ಮಹಾಕಾದಂಬರಿಗಳನ್ನು ಓದಿದ ಮೇಲೆ ಕನ್ನಡದಲ್ಲಿ ಅಂತಹ ಒಂದು ಕಾದಂಬರಿ ಯಾವಾಗ ಹುಟ್ಟುತ್ತದೆ ಎಂದು ಕಾಯುತ್ತಿದ್ದ ಕುವೆಂಪು, ತಮ್ಮ ಮಿತ್ರರಾಗಿದ್ದ ಅನೇಕ ಸ್ನೇಹಿತರಲ್ಲಿ ನೀವೇಕೆ ಬರೆಯಲು ಪ್ರಯತ್ನಿಸಬಾರದು? ಎಂದು ಪೀಡಿಸುತ್ತಿದ್ದರಂತೆ. ಒಂದು ದಿನ ಸಂಜೆ ಕುಕ್ಕನಹಳ್ಳಿ ಕೆರೆಯ ದಂಡೆಯ ಮೇಲೆ ವಾಯುಸಂಚಾರದಲ್ಲಿದ್ದಾಗ ವೆಂಕಣ್ಣಯ್ಯನವರು ನೀವೇ ಏಕೆ ಬರೆಯಬಾರದು? ಎಂದರಂತೆ. ಆಗ ಕುವೆಂಪು ಅವರು ಅದೇನು ಭಾವಗೀತೆ, ಸಣ್ಣಕತೆ, ನಾಟಕ ಬರೆದಂತೆಯೇ? ಅಥವಾ ಸಾಧಾರಣ ಕಾದಂಬರಿ ಬರೆದಂತೆಯೇ? ಮಹಾಕಾದಂಬರಿಗೆ ಇಂಗ್ಲಿಷಿನಲ್ಲಿ ಗ್ರೇಟರ್ ನಾವೆಲ್ ಅನ್ನುತ್ತಾರೆ. ಅದರ ಪಾತ್ರ ಸಂಖ್ಯೆಯ ವಿಪುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯ – ಆಲೋಚಿಸಿದರೆ ಮೈ ಜುಮ್ಮೆನ್ನುತ್ತದೆ! ಅವನ್ನೆಲ್ಲ ಅನ್ವಯ ಕೆಡದಂತೆ, ಎಲ್ಲಿಯೂ ಹೊಂದಾಣಿಕೆಗೆ ಭಂಗ ಬರದಂತೆ ಕಲ್ಪನೆಯಲ್ಲಿ ಹಿಡಿದಿಟ್ಟುಕೊಂಡು ಸಾವಿರಾರು ಪುಟಗಳಲ್ಲಿ ನಡೆಸುವುದು ಸಾಧ್ಯವೇ? ನಾನು ಬರೆಯಹೊರಟರೆ ಉತ್ತರಕುಮಾರನ ರಣಸಾಹಸವಾಗುತ್ತದಷ್ಟೆ! ಎಂದು ನಕ್ಕಬಿಟ್ಟಿದ್ದರಂತೆ. ಆದರೆ ಶಿಷ್ಯನ ಸಾಮರ್ಥ್ಯದಲ್ಲಿ ವೆಂಕಣ್ಣಯ್ಯನವರಿಗೆ ಶಂಕೆಯಿನಿತೂ ಇರಲಿಲ್ಲ. ಮುಂದುವರೆದು ಅವರು ಹೀಗೆ ಹೇಳಿದ್ದರು. ನೋಡಿ, ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೆ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ, ಸಂವಾದ ಮತ್ತು ವರ್ಣನ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಸಣ್ಣಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಲ್ಲಿ ವರ್ಣನ ಪ್ರತಿಭೆ ಸೊಗಸಾಗಿ ವ್ಯಕ್ತಗೊಂಡಿದೆ. ಆದ್ದರಿಂದ ನೀವು ಹೆದರಬೇಕಾಗಿಲ್ಲ ಇನ್ನೊಬ್ಬರಿಗೆ ಹೇಳುತ್ತಾ ಹೋಗುವುದರ ಬದಲು ನೀವೇ ಒಂದು ಕೈ ನೋಡಿಬಿಡಿ!

ಮತ್ತಷ್ಟು ಓದು »