ವಿಷಯದ ವಿವರಗಳಿಗೆ ದಾಟಿರಿ

Archive for

2
ಮೇ

ಅಮೀರ್ ಜೀ, ನಿ೦ಙಲೊಟ್ಟುಗು ನ೦ಙಯು೦ ಉಳ್ಳ, ಒಟ್ಟುಗು ಚೊಲ್ಲುವ “ಸತ್ಯಮೇವ ಜಯತೇ”

– ಶಿಹಾ ಉಳ್ಳಾಲ್, ಮಂಗಳೂರು

ತಿ೦ಙಳ್ ಇಪ್ಪರ ಬಾರಿ ಚರ್ಜೆ ಲ್ ಉಲ್ಲೆದಾಯೊ ಬಿಶಯ ಆಯಿತಿಕ್ಕ್ ರ್ ಕನ್ನಡ ಡಬ್ಬಿ೦ಗ್ ಬೇನು ಬೇ೦ಡ ಚೆ೦ತ್, ಕನ್ನಡೇತರ ಏದ್ ಪಿಲ೦ ರೆಯುಮ್ ಕನ್ನಡ ಡಬ್ಬಿ೦ಗ್ ಆಕಗು, ಚೆನ್ನೆ೦ಗ್ ಕನ್ನಡೇತರ ಪಿಲ೦ ಗ್ ಕನ್ನಡ ಪಲಕ ಸೇರ್ಪಟಿತ್ತ್ ಪಿಲ೦ ಆಕಗು, ಇ೦ಟರ್ನೆಟ್ ಲ್ ಈ ಬಿಸಯ ಚಮ್ಮೆ ಚರ್ಚೆ ಆಯಿತ್, ಕನ್ನಡ ಪಿಲ೦ ಇ೦ಡಸ್ತ್ರಿರ೦ಙ ಡಬ್ಬಿ೦ಗ್ ಬೇ೦ಡ, ಮುನ್ನಲ್ಗ್ ನ೦ಕ್ ಸ್ವರ ಪನಿ ಇಲ್ಲಾ೦ಟಾವು೦ಟುಲ್ಲದಾಯೊ ಪೇಡಿಯು೦ ಅರಿಪಾಟಿತ್ತ್.
ಸಾಮಾನ್ಯಮಾಯಿಟ್  ನ೦ಙ ಮನಸ್ಸಿಲಾಕ್ಕಿಯ ಡಬ್ಬಿ೦ಗ್ ಆಯೆ೦ಗು೦ ಆಯಿಟಿಲ್ಲೆ೦ಗುಮ್ ಪೈಸಾ ಆಕ್ ಡೆ ಅ೦ಙ ಅಲ್ಲೆ ನ೦ಕ್ ಎ೦ದ್ ಗ್ ಈ ಬಿಸಯತ್ತ್ ಲ್ ತಕರಾರ್ ಚೆ೦ತ್. ನಾನು೦ ಅ೦ಙನೆಮೆ ಬಿಯಾರ್ಚೊ.
ಬಿಸಯ ಎನಿಯುಮ್ ಚರ್ಚೆ ಆಯೊ ಅಮೀರ್ ಖಾನ್ ರೊ ಸತ್ಯ ಮೇವ ಜಯತೇ ಚೊಲ್ಡ್ರೊ ಒರು ಪ್ರೋಗ್ರಾಮ್ ಇಡೀ ದುನಿಯಾವುಗು ಪ್ರಸಾರ ಆವು೦ಬೊ ಕನ್ನಡ ಡಬ್ಬಿ೦ಗ್ ಆಕನು ಚೊ೦ತು, ಇದ್ ರೊ ಬಿಸಯತ್ತ್ ಲ್ ಕರ್ನಾಟಕ ಗ್ ಲೆಟರುಮ್ ಕಡ್ತಿತ್ತ್. ಚರ್ಚೆ ಚಮ್ಮೆ ಗ೦ಬೀರತ್ತ್ ಗ್ ಎತ್ತಿತ್, ಚಮ್ಮೆ ಆಲ್ಮಾರ್ ಕನ್ನಡ ಡಬ್ಬಿ೦ಗ್ ಬೇನು ಚೆನ್ನಾರ್, ಕರ್ನಾಟಕತ್ತ್ ಲೇ ಒಳ ಪ್ರದೇಶ ಪೋಯೆ೦ಗ್ ಕನ್ನಡ ಮಾತ್ರ ಗೊ೦ತುಲ್ಲೆದಾಯೋ ಎತ್ರಮಾ ಕುಟು೦ಬ ಉ೦ಡು, ಸತ್ಯ ಮೇವ ಜಯತೇ ಎಲ್ಲಾರ್ಗು೦ ಬಿಸಯ ಪಿಡಿಯಾವನು,ಸಮಾಜತ್ತ್ ಲ್ ಬದಲಾವಣೆ ತರಣು ಚೆ೦ತ್. ನ೦ಙಲೊ ಮುನ್ನಲ್ ಕಾ೦ಡೆದಾಯೋ ಎಲ್ಲಾ, ಬಲಾಹತ್ತ್ ಗುಮ್, ಕೊಲೆ,ಅತ್ಯಾಚಾರ, ಕೋಮುಗಲಬೆ ಇದ್ ಗೆಲ್ಲಾ ಮುಖ್ಯಮಾಯಿತ್ ನ೦ಙ ನೋಕಗು ಪೋಯೆ೦ಗ್ ನ೦ಕ್ ಕಾಣಗು ಕಿಟ್ಟ್ ರೊ, ಪಿರ್ಸ ಚೊಲ್ಡ್ರೆದ್ ಮನುಷ್ಯರೈಲ್ ಇಲ್ಲಾತದ್, ಇ೦ಡ್ ನ೦ಙ ನೋಕುರ ಸ್ಕೂಲ್, ಕಾಲೇಜ್ ಲ್ ಎಲ್ಲಾ ಪಡಿಕ್ಕ್ ರ , ಆಯೆ೦ಗ್ ಲಾ ಎವುಡೆಯು೦ ಉಮ್ಮರೋ ಪಿರ್ಸ ಪಡಿಪಾಟ್ ರೊ  ಚಾಪ್ಟರಾ ಅಲ್ಲ ಮನುಷ್ಯ ಮನುಷ್ಯರೊ  ಒತ್ತೊರುಮ ಪಡಿಪಾಟ್ರೆ ಒರು  ಪಾಠಯುಮ್ ಇಲ್ಲೆ. ಕಾಲಿ a2+b2+c2 ಪಡಿಪಾಟ್ ರೊ ಬ್ಯುಸಿಲ್ ಉಲ್ಲಾರ್ . ಮತ್ತಷ್ಟು ಓದು »

2
ಮೇ

ಕನ್ನಡಿಗನಿಗೆ ಕನ್ನಡಿಗನೇ ಸಾರಥಿ

– ಪವನ್ ಪಾರುಪತ್ತೇದಾರ

ಮೊನ್ನೆ ಬಹಳಾ ದಿನಗಳಾದ ಮೇಲೆ ಭಟ್ಟ ಫೋನ್ ಮಾಡಿದ್ದ, ನಾನು ತುಂಬಾ ಸಾರಿ ಅವ್ನಿಗೆ ಫೋನ್ ಮಾಡಿದ್ದೆ ಆದ್ರು ರಿಸೀವ್ ಮಾಡಿರ್ಲಿಲ್ಲ, ನಾ ಫೋನ್ ಎತ್ತಿದೊಡನೆ ಲೇ ಡಿ ಕೇ ಬೋಸ್, ಎಲ್ಲಿ ಹಾಳಾಗೋಗಿದ್ಯ ಅಂದೆ. ಒಂದು ಫೋನ್ ರಿಸೀವ್ ಮಾಡ್ಲಿಕ್ಕಾಗಲ್ವ ಅಂತ ಬೈದೆ, ಏನ್ ಮಾಡೋದು ಮಗಾ ಕೆಲಸ ಸಿಕ್ಕಾಪಟ್ಟೆ ಕಷ್ಟ ಐತಿ, ನಿಲ್ಲಂಗಿಲ್ಲ ಕೂರಂಗಿಲ್ಲ, ಮಕ್ಳು ಬಿಡೋಂಗೆ ಇಲ್ಲ, ಭಾರಿ ಕಷ್ಟ್ ಕೊಡ್ತಾರೆ ಅಂದ, ನಾನು ಸರಿ ಮಗನ ಅಂತ ಕಷ್ಟದ್ ಕೆಲ್ಸ ಏನ್ಲೆ ಮಾಡ್ತಿದ್ಯ ಅಂದೆ, ಆಗ ಭಟ್ಟನ ಉತ್ತರ ಕೇಳಿ ಮನಸ್ಸಿಗೆ ಬಹಳಾ ನೋವಾಯ್ತು, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪ್ರಥಮ ದರ್ಜೆಯಲ್ಲಿ ಮುಗಿಸಿದ್ದ ಭಟ್ಟ, ವೆಂಟಿಲೇಶನ್ ರಿಪೇರಿ ಮಾಡುವ ಕೆಲಸ ಮಾಡುತಿದ್ದ, ಅವನೇ ಹೇಳಿದ ಪ್ರಕಾರ, ವೆಂಟಿಲೇಶನ್ ಕೆಲಸ ಇಲ್ದೆ ಇದ್ರೆ ಅವರ ಕಂಪನಿಯ ಆಫೀಸ್ ಬಾಯ್ ಕೂಡ ಅವನೆ, ಆ ಬ್ಯಾಂಕಿಗೆ ಹೋಗಿ ಚೆಕ್ ಹಾಕಿ ಬಾ, ಅಲ್ಲೆಲ್ಲೋ ಹೋಗಿ ಆರ್ಡರ್ ಕಾಪಿ ತೆಗೆದುಕೊಂಡು ಬಾ, ಹೀಗೆ ಎಲ್ಲ ರೀತಿಯಲ್ಲು ಅವ್ನನ್ನ ಬಳಸಿಕೊಳ್ಳುತಿದ್ದರು.

ಭಟ್ಟ ಓದಿದ್ದೆಲ್ಲ ಹುಬ್ಬಳ್ಳಿಯಲ್ಲಿ, ಕೆ.ಎಲ್.ಇ. ಶಾಲೆಯ ಬೋರ್ಡುಗಳಲ್ಲಿ ಕನ್ನಡ ಮೀಡಿಯಂ ಓದಿ ಬೆಳೆದ ಹುಡುಗ, ಅಂತಹ ದಡ್ಡ ಹುಡುಗನೇನಲ್ಲ, ಡಿಪ್ಲೋಮದಲ್ಲಿ ಮತ್ತು ಇಂಜಿನಿಯರಿಂಗ್ನಲ್ಲಿ ಮೊದಲನೆ ದರ್ಜೆಯಲ್ಲಿ ಪಾಸಾಗಿದ್ದಾನೆ. ಮನೆಯ ಕಷ್ಟಗಳನ್ನೆಲ್ಲ ಮೂಲೆಯಲ್ಲಿ ಬಿಸಾಕಿ ಅವರಪ್ಪ ಸಾಲ ಸೋಲ ಮಾಡಿ ಓದಿಸಿದ್ದಾರೆ, ಎಜುಕೇಶನ್ ಲೋನ್ ಕಟ್ಟಲೇ ಬೇಕಾದ ಅನಿವಾರ್ಯತೆ ಅವನ್ನ ಈ ಕೆಲಸಕ್ಕೆ ದೂಡಿದೆ. ಈ ಮಧ್ಯೆ ಆ ಕೋರ್ಸು ಈ ಕೋರ್ಸು ಅಂತ ಹೇಳಿದವರ ಮಾತು ಕೇಳಿ ಟೆಸ್ಟಿಂಗ್ ಕೋರ್ಸ್ ಸಹ ಮಾಡಿದ್ದಾನೆ.ಆದ್ರು ಕೆಲಸ ಇಲ್ಲಿವರೆಗೂ ಸರಿಯಾದ ಕೆಲಸ ಮಾತ್ರ ಸಿಕ್ಕಿಲ್ಲ. ಇದು ಬರೀ ನನ್ನೊಬ್ಬ ಗೆಳೆಯನ ಕಥೆಯಲ್ಲ, ಭಟ್ಟ ಎಂಬುದು ಇಲ್ಲಿ ಪಾತ್ರವಷ್ಟೇ, ಇಂತಹ ಸಾವಿರಾರು ಹುಡುಗರು ಚೆನ್ನಾಗಿ ಓದಿಯೂ ಉತ್ತಮ ಅಂಕಗಳು ಪಡೆದೂ ಸಹ, ಎಂತ ಎಂತಹುದೋ ಕೆಲಸಗಳನ್ನು ಮಾಡುತಿದ್ದಾರೆ, ವೆಂಟಿಲೇಶನ್ ಸೆರ್ವೀಸ್ ಮಾಡುವುದೇ ಆಗಿದ್ದರೆ ಭಟ್ಟ ಐ.ಟಿ.ಐ ಓದಿದ್ದರೆ ಸಾಕಾಗಿತ್ತು, ಇಂಜಿನಿಯರಿಂಗ್ ಅವಶ್ಯಕತೆಯೇ ಇರಲಿಲ್ಲ, ವಿ.ಟಿ.ಯು. ಅಡಿಯಲ್ಲಿ ಸುಮಾರು ೨೦೦ ಕಾಲೇಜುಗಳಿವೆ ಅಂದರೆ ಪ್ರತಿ ವರ್ಷ ಹೊರಬರುವ ಇಂಜಿನಿಯರುಗಳೆಷ್ಟು, ಮತ್ತು ಅವರಲ್ಲಿ ಕೆಲಸಗಳಿಗೆ ಸೇರುವರೆಷ್ಟು? ನಿಜಕ್ಕು ಅಂಕಿ ಅಂಶಗಳ ನೋಡಲು ಹೋದರೆ ಭಯವಾಗುತ್ತದೆ.

ಮತ್ತಷ್ಟು ಓದು »