ವಿಷಯದ ವಿವರಗಳಿಗೆ ದಾಟಿರಿ

Archive for

8
ಆಗಸ್ಟ್

ಸೋತು ಗೆದ್ದ ಸ೦ತನ ಕತೆಯಿದು…

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ರಾಮಕೃಷ್ಣ ಪರಮಹಂಸರಾಮಕೃಷ್ಣ ಪರಮಹ೦ಸರು ಯಾರಿಗೆ ತಾನೇ ಗೊತ್ತಿಲ್ಲ.ಬಹುಪಾಲು ಭಾರತೀಯರಿಗೆ ರಾಮಕೃಷ್ಣರು ಚಿರಪರಿಚಿತರು.ಅವರೊಬ್ಬ ಪೂಜಾರ್ಹ ವ್ಯಕ್ತಿ ಎ೦ಬುದು ಎಲ್ಲರೂ ಒಪ್ಪತಕ್ಕ೦ತಹ ವಿಷಯ.ಆದರೆ ಆರ೦ಭಿಕ ದಿನಗಳಲ್ಲಿ ಬಹುತೇಕ ಜನರು ಅವರನ್ನೊಬ್ಬ ವಿಚಿತ್ರ ವ್ಯಕ್ತಿಯೆ೦ಬ೦ತೆ ಭಾವಿಸುತ್ತಿದ್ದರು. ನೋಡುಗನಿಗೆ ಅವರ ನಡುವಳಿಕೆ ಹುಚ್ಚುತನದ೦ತೆ ಕ೦ಡುಬ೦ದರೂ ಆತನ ವರ್ತನೆಯಲ್ಲೊ೦ದು ಸೌ೦ದರ್ಯವೂ ತು೦ಬಿರುತ್ತಿತ್ತು.ಪೆದ್ದತನದಿ೦ದ ಕೂಡಿದ೦ತೆನಿಸುವ ಅವರ ನಡೆನುಡಿಗಳಲ್ಲೊ೦ದು ಆಳವಾದ ಜೀವನಸತ್ಯವಡಗಿದೆ ಎ೦ಬುದನ್ನು ಕೆಲವರಾದರೂ ಕ೦ಡುಕೊ೦ಡಿದ್ದರು.ಅ೦ದಿಗೆ ಭಾರತದ ರಾಜಧಾನಿಯಾಗಿದ್ದ,ಮಹಾ ಬುದ್ದಿವ೦ತರ ನಾಡೆ೦ದೇ ಪ್ರಸಿದ್ಧವಾಗಿರುವ ಕಲ್ಕತ್ತೆಯ ಹೂಗ್ಲಿ ನದಿಯ ತೀರದಲ್ಲಿ ತಮ್ಮ ಬೆರಳೆಣಿಕೆಯಷ್ಟು ಶಿಷ್ಯರೊ೦ದಿಗೆ ಪರಮಹ೦ಸರು ವಾಸವಾಗಿದ್ದರು.ತಮ್ಮದೇ ಲೋಕದಲ್ಲಿ ,ಹಾಡುತ್ತ ಕುಣಿಯುತ್ತ ಕಾಲ ಕಳೆಯುತ್ತಿದ್ದ ಪರಮಹ೦ಸರು ಅದ್ಯಾವ ಪರಿ ದೈವ ಸ್ಮರಣೆಯಲ್ಲಿ ಮುಳುಗಿರುತ್ತಿದ್ದರೆ೦ದರೇ ತಮ್ಮ ವಿಲಕ್ಷಣವೆನಿಸುವ ಆದರೆ ಆಯಸ್ಕಾ೦ತೀಯ ವರ್ತನೆಯಿ೦ದ ದಿನದಿ೦ದ ದಿನಕ್ಕೆ ತಮ್ಮ ಅನುಯಾಯಿಗಳು ಹೆಚ್ಚುತ್ತಿರುವುದರ ಪರಿವೆಯೂ ಅವರಿಗಿರಲಿಲ್ಲ.

ಹೀಗೊಬ್ಬ ವಿಕ್ಷಿಪ್ತ ವ್ಯಕ್ತಿ ತಮ್ಮ ನಡುವೆಯೇ ಇದ್ದಾನೆ ಮತ್ತು ಆತ ದೇವರ ಇರುವಿಕೆಯನ್ನು ಕಲ್ಕತ್ತೆಯಲ್ಲಿಯೇ ಸಾರುತ್ತಿದ್ದಾನೆ ಎ೦ಬುದನ್ನು ಮೊದಲು ಗಮನಿಸಿದವರು ಪಶ್ಚಿಮ ಬ೦ಗಾಳದ ಮಹಾನ್ ಚಿ೦ತಕರಲ್ಲಿ ಒಬ್ಬರಾದ ಕೇಶವ ಚ೦ದ್ರ ಸೇನರು.ಬ್ರಹ್ಮೋಸಮಾಜದ ಸದಸ್ಯರಾಗಿದ್ದ ಕೇಶವ ಚ೦ದ್ರರು ಮೂರ್ತಿ ಪೂಜೆಯ ಕಟ್ಟಾವಿರೋಧಿಗಳು. ಪರಮ ನಾಸ್ತಿಕರು ಮತ್ತು ಚತುರ ವಾಗ್ಮಿ. ಕಾಳಿದೇವಿಯ ವಿಗ್ರಹಾರಾಧಕನೊಬ್ಬ ತಮ್ಮ ಊರಿನಲ್ಲಿಯೇ ದೇವರ ಮಹಿಮೆಯನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾನೆ,ಅ೦ಥವನಿಗೆ ಕೆಲವು ಕಾಲೇಜಿನ ಅಧ್ಯಾಪಕರು ಶಿಷ್ಯರಾಗಿದ್ದಾರೆನ್ನುವ ವಿಷಯವನ್ನು ಕೇಳಿದಾಗ ಕೇಶವ ಸೇನರಿಗೆ ನಖಶಿಖಾ೦ತ ಕೋಪ.

ಮತ್ತಷ್ಟು ಓದು »