ವಿಷಯದ ವಿವರಗಳಿಗೆ ದಾಟಿರಿ

Archive for

13
ಆಗಸ್ಟ್

ಕಲಾಂ, ಕಯ್ಯಾರ, ಕೃಷ್ಣಪ್ಪ

– ರೋಹಿತ್ ಚಕ್ರತೀರ್ಥ

ಕಲಾಂ, ಕಯ್ಯಾರ, ಕೃಷ್ಣಪ್ಪ“You either die a hero or you live long enough to see yourself become the villain” ಅಂತ ಇಂಗ್ಲೀಷಿನಲ್ಲೊಂದು ಜಾಣ್ನುಡಿ. ಮಹಾಸಾಧನೆ ಮಾಡಿದವರು ಬೇಗನೆ ತೀರಿಕೊಂಡರೆ ಜಗತ್ತು ಅವರನ್ನು ಹಾಡಿಹೊಗಳುತ್ತದೆ. “ಏನು ಪ್ರತಿಭೆಯ ಬೀಸು ಕಣ್ರಿ! ಇನ್ನೊಂದಿಷ್ಟು ವರ್ಷ ಬದುಕಿದ್ದರೆ ಚಿಂದಿ ಉಡಾಯಿಸಿಬಿಡ್ತಾ ಇದ್ರು!” ಎಂದು ಜನ ಹೇಳುವುದನ್ನು ಕೇಳಿದ್ದೇವೆ. ಆದರೆ, ಪ್ರಾಯ ಆಗುತ್ತಾಹೋದಂತೆ ನಮ್ಮಲ್ಲಿ ಹೆಚ್ಚಿನವರು ಅಪ್ರಸ್ತುತರಾಗುತ್ತಾ ಹೋಗುತ್ತಾರೆ. ಒಂದು ಕಾಲದಲ್ಲಿ ಅವರ ಸಾಧನೆ ಎಂದು ಕಂಡದ್ದು ಈಗ ಜನಕ್ಕೆ ಸಾಮಾನ್ಯ ಸಂಗತಿ ಅನ್ನಿಸತೊಡಗುತ್ತದೆ. ಅವರ ಬಗ್ಗೆ ಇಲ್ಲಸಲ್ಲದ ಶಂಕೆ, ಅವಮಾನ, ಹೀಯಾಳಿಕೆಗಳು ಹುಟ್ಟಿಕೊಳ್ಳುತ್ತವೆ. ಒಂದೊಮ್ಮೆ ಜೋರಾಗಿ ಉರಿದಿದ್ದ ದೊಂದಿ ಇದೀಗ ಎಣ್ಣೆ ಬತ್ತಿ, ಬತ್ತಿ ಕರಟಿ ಯಾರಿಗೂ ಬೇಡದ ಕಮಟು ಹೊಗೆಯಾಗಿ ತನ್ನ ಬದುಕು ಮುಗಿಸುತ್ತದೆ. ಇಂಥ ಮಾತಿಗೆ ಉದಾಹರಣೆಯಾಗದೆ ಕೊನೆವರೆಗೂ ತಮ್ಮ ಜೀವನ, ಚಾರಿತ್ರ್ಯ, ಪ್ರತಿಭೆ ಮತ್ತು ಮೌಲ್ಯಗಳ ಪ್ರತಿಪಾದನೆಯಲ್ಲಿ ಕಿಂಚಿದೂನವಾಗದಂತೆ ನೋಡಿಕೊಂಡು ಸಾರ್ಥಕವಾಗಿ ಇಹದ ವ್ಯಾಪಾರ ಮುಗಿಸುವವರು ವಿರಳ. ಎರಡು ವಾರದ ಅಂತರದಲ್ಲಿ ನಮ್ಮನ್ನು ಬಿಟ್ಟು ತೆರಳಿದ ವಿಜ್ಞಾನಿ ಡಾ. ಅಬ್ದುಲ್ ಕಲಾಂ, ಕವಿ ಕಯ್ಯಾರ ಕಿಞ್ಞಣ್ಣ ರೈ ಮತ್ತು ಆರ್‍ಎಸ್‍ಎಸ್ ಮಾರ್ಗದರ್ಶಿ ನ. ಕೃಷ್ಣಪ್ಪ ಮೇಲಿನ ಇಂಗ್ಲೀಷ್ ನುಡಿಗೆ ಸವಾಲೆನ್ನುವಂತೆ ಬದುಕಿ, ಗಾದೆಗಳನ್ನೂ ಸುಳ್ಳು ಮಾಡಬಹುದು ಎಂದು ತೋರಿಸಿದರು.

ಮಹಾತ್ಮರು ತೀರಿಕೊಂಡಾಗೆಲ್ಲ ನನಗೆ ನೆನಪಿಗೆ ಬರುವ ಕವಿತೆ ನಿಸಾರ್ ಅಹಮದರ “ರಾಮನ್ ಸತ್ತ ಸುದ್ದಿ”. ಅದು ಶುರುವಾಗುವುದು ಹೀಗೆ:
ಮತ್ತಷ್ಟು ಓದು »