ನಮ್ಮದಲ್ಲದ ಭಾರತದ ರಾಜಕೀಯ ಇತಿಹಾಸ
ಡಾ. ಸಂತೋಷ್ ಕುಮಾರ್ ಪಿ.ಕೆ
ಭಾರತದ ಪ್ರಾಚೀನ ಕಾಲದ ರಾಜಕೀಯ ಚಿಂತನೆ ಎಂಬುದು ಬಹುತೇಕವಾಗಿ ರಾಜ್ಯಶಾಸ್ತ್ರಜ್ಞರಿಗೆ ಅಪ್ರಸ್ತುತವಾಗಿದೆ. ಇದಕ್ಕೆ ಪ್ರಧಾನವಾಗಿ ಎರಡು ಕಾರಣಗಳನ್ನು ನೋಡಬಹುದು, ಒಂದು, ಕಾಲಾಂತರದ ಬದಲಾವಣೆ, ಹಾಗೂ ಎರಡು, ನಮ್ಮೆಲ್ಲಾ ರಾಜಕೀಯ ಚಿಂತನೆ ಮತ್ತು ಅಳವಡಿಸಿಕೊಂಡಿರುವ ರಾಜಕೀಯ ವ್ಯವಸ್ಥೆಗಳೆಲ್ಲವೂ ಆಧುನಿಕ ಪಾಶ್ಚಾತ್ಯ ರಾಷ್ಟ್ರಗಳಿಂದ ಪ್ರೇರೇಪಿತವಾಗಿರುವುದರಿಂದ ಭಾರತೀಯ ಚಿಂತನೆಯ ಅಗತ್ಯತೆ ನಮಗೆ ಕಾಣಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗಲೂ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಮಾತ್ರ ಕೌಟಿಲ್ಯನ ಸಿದ್ಧಾಂತ, ಮಹಾಭಾರತದ ಕೆಲವು ಭಾಗಗಳು, ಹಾಗೂ ಹಲವಾರು ನೀತಿಸಾರಗಳನ್ನು ಪರೀಕ್ಷೆಯ ದೃಷ್ಟಿಯಿಂದ ಓದುತ್ತಿರುತ್ತಾರೆ. ಇದರ ಒಟ್ಟಿಗೆ ಹಲವಾರು ವಿದ್ವಾಂಸರುಗಳೂ ಸಹ ಪ್ರಾಚೀನತೆಯ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೂ ವಿದ್ಯಾರ್ಥಿಗಳ ಓದು, ವಿದ್ವಾಂಸರ ಅಧ್ಯಯನಗಳು ಆಧುನಿಕ ರಾಜಕೀಯ ವ್ಯವಸ್ಥೆಗೆ ಯಾವುದೇ ಕೊಡುಗೆಯನ್ನು ನೀಡುವ ಭರವಸೆಗಳಿಲ್ಲ, ಕಾರಣ ಆಧುನಿಕ ಸಮಸ್ಯೆಗಳಿಗೆ ಆಸಕ್ತಿದಾಯಕವಾದ ಪರಿಹಾರವನ್ನು ಹುಡುಕುವ ಯಾವ ಲಕ್ಷಣಗಳೂ ಸಹ ಗೋಚರಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಪ್ರಾಚೀನ ಭಾರತದ ರಾಜಕೀಯ ಚಿಂತನೆ ಅನಾಸಕ್ತಿಯ ವಿಷಯವಾಗಿಯೇ ಮುಂದುವರಿಯುತ್ತಿದೆ.
ಪ್ರಾಚೀನ ಭಾರತವನ್ನು ಅಧ್ಯಯನ ನಡೆಸುವುದು ಚರಿತ್ರೆಕಾರರ ಕೆಲಸವೇ ಆಗಿದ್ದರೂ ಸಹ, ಅಲ್ಲಿನ ರಾಜಕೀಯ ವಿಚಾರ ಧಾರೆಗಳನ್ನು ಪತ್ತೆಹಚ್ಚುವುದು, ಅಧ್ಯಯನ ನಡೆಸುವುದು ರಾಜ್ಯಶಾಸ್ತಜ್ಞರ ಜವಾಬ್ದಾರಿಯೂ ಹೌದು. ಆದರೆ, ರೊಮಿಲಾ ಥಾಪರ್, ಅಲ್ಟೇಕರ್, ಆರ್.ಎಸ್.ಶರ್ಮಾ, ಡಿ.ಡಿ.ಕೋಸಾಂಬಿ ಇನ್ನೂ ಮುಂತಾದ ‘ಇತಿಹಾಸಕಾರ’ರಿಗೆ ಮಾತ್ರ ಇಂತಹ ಅಧ್ಯಯನಗಳು ಮುಖ್ಯವಾಗುತ್ತಿರುವುದು ಹಾಗೂ ರಾಜ್ಯಶಾಸ್ತ್ರಜ್ಞರುಗಳು ಅದನ್ನು ಅವಗಾಹನೆಗೆ ತಮ್ಮ ತೆಗೆದುಕೊಳ್ಳದೆ ಇರುವುದು ವಾಸ್ತವಾಗಿದೆ. ರಾಜಕೀಯ ಚಿಂತನೆಗಳ ಕುರಿತೇ ಅಧ್ಯಯನ ನಡೆಸುವವರು ಇತಿಹಾಸದ ಚಿಂತನೆಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸದೇ ಹೋದರೆ ಪ್ರಾಚೀನ ರಾಜಕೀಯ ಚಿಂತನೆಗೆ ಪ್ರವೇಶ ದೊರಕುವುದು ಕಷ್ಟಸಾಧ್ಯ.
ಸಲ್ಲೇಖನ ವ್ರತದ ನಿಷೇಧದ ಹಿಂದಿನ ವಸಾಹತುಶಾಹಿ ಪ್ರಜ್ಞೆ
– ಡಂಕಿನ್ ಝಳಕಿ, India Platform
ಸಲ್ಲೇಖನ ವ್ರತದ ಆಚರಣೆ ಆತ್ಮಹತ್ಯೆಗೆ ಸಮಾನ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ರಾಜಸ್ಥಾನ ಉಚ್ಚ ನ್ಯಾಯಾಲಯವು ಈ ವ್ರತವನ್ನು ಕಾನೂನು ಬಾಹಿರವೆಂದು ಘೋಷಿಸಿ, ಇದನ್ನು ಭಾರತೀಯ ದಂಡ ಸಂಹಿತೆ 306 ಹಾಗು 309ರ ಅನುಸಾರ ಶಿಕ್ಷಾರ್ಹ ಅಪರಾಧ ಎಂದು ತೀರ್ಪನ್ನು ನೀಡಿದೆ. ದಂಡ ಸಂಹಿತೆ 306ರ ಪ್ರಕಾರ ಆತ್ಮಹತ್ಯೆಗೆ ಪ್ರೇರಣೆ ನೀಡುವುದು ಮತ್ತು 309ರ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸುವುದು ಎರಡೂ ಶಿಕ್ಷಾರ್ಹ ಅಪರಾಧ. ಈ ಪ್ರಕಾರ ಸಲ್ಲೇಖನ ವ್ರತವನ್ನು ಕೈಗೊಳ್ಳುವ ವ್ಯಕ್ತಿಯ ಜೊತೆಗೆ ಈ ವ್ರತದಲ್ಲಿ ಭಾಗಿಯಾಗುವ ಪ್ರತಿಯೋರ್ವನೂ, ಅಂದರೆ ಇಡಿಯ ಜೈನ ಸಂಪ್ರದಾಯವನ್ನೂ ಬಹುಶಃ ಕಟಕಟೆಗೆ ಎಳೆಯಬಹುದು. ಹೀಗೆ ಭಾರತೀಯ ಸಂಪ್ರದಾಯವೊಂದನ್ನು, ಅದನ್ನು ಆಚರಿಸುವವರನ್ನು ಅಪರಾಧೀ ಸ್ಥಾನಕ್ಕೆ ಎಳೆಯುತ್ತಿರುವುದು (ಕ್ರಿಮಿನಲೈಸ್ ಮಾಡುತ್ತಿರುವುದು) ಇದೇ ಮೊದಲಲ್ಲ. ಕಳೆದ ಸುಮಾರು ಒಂದು ಸಾವಿರ ವರುಷಗಳ ಕಾಲ, ಎರಡು ವಸಾಹತುಶಾಹಿ ಆಳ್ವಿಕೆಗಳಡಿ ಭಾರತೀಯ ಸಂಪ್ರದಾಯಗಳು ಎದುರಿಸಿದ್ದು ಇದೇ ಪರಿಸ್ಥಿತಿ. ವಿಪರ್ಯಾಸವೆಂದರೆ ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದರೂ, ಈ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಬದುಕುವ ಹಕ್ಕಿನ ಉಲ್ಲಂಘನೆ ಎಂಬ ಅರ್ಥವಾಗದ ಪಾಶ್ಚಾತ್ಯ ಮತ್ತು ಕ್ರಿಶ್ಚಿಯನ್ ಚಿಂತನೆಯ ಹೆಸರಿನಲ್ಲಿ, ಸಾವಿರಾರು ವರುಷಗಳಿಂದ ನಡೆಯುತ್ತಾ ಬಂದಿರುವ ಭಾರತೀಯರ ಆಧ್ಯಾತ್ಮಿಕ ಆಚರಣೆಗಳನ್ನು ಹೀಗೆ ತುಚ್ಛವಾಗಿ ಕಂಡು ಅವುಗಳ ಸಂಹಾರ ನಡೆಯುತ್ತಿರುವ ಇಂದಿನ ದಿನಗಳಲ್ಲಿ ನಾವು ಮಾಡಬೇಕಾದದ್ದು ಏನು? ಮತ್ತಷ್ಟು ಓದು
‘ಆತ್ಮಾಹುತಿ’ ಯಿಂದ ಆತ್ಮವಿಮರ್ಶೆ
– ಮನುಶ್ರೀ ಜೋಯಿಸ್
ಮಹಾಭಾರತ, ರಾಮಾಯಣದಂತ ಯಾವುದೇ ಗ್ರಂಥವಾಗಲಿ ಮೊದಲ ಬಾರಿಗೆ ಓದುವಾಗ ಮನಸ್ಸಲ್ಲಿ ಒಂದು ವಿಶೇಷ ತನ್ಮಯ ಭಾವವಿರುತ್ತದೆ. ‘ವಿಶೇಷ’ ಏಕೆಂದರೆ ಇದು ಬೇರೆ ಪುಸ್ತಕಗಳಂತಲ್ಲದೆ ಸುತ್ತ-ಮುತ್ತ ಕೇಳಿದ, ಜೀವನದಲ್ಲಿ ಬೆರೆತ, ಅಜ್ಜಿ ಶುರು ಮಾಡಿದ ಒಂದು ಕುತೂಹಲದ ಕಥೆ. ಓದುವಾಗ ಬೇರೆ ಯುಗವನ್ನೇ ನೋಡಿ ಬಂದಂತಹ ಪುಳಕ, ಪಾತ್ರಗಳ ಜೀವನದಲ್ಲಿ ಭಾಗಿಯಾದಂತಹ ರೋಮಾಂಚನ. ಪೂರ್ವಜರ ಚರಿತ್ರೆಯೆಂದೆನೋ.. ಪುಸ್ತಕ ಮುಗಿದಾಗ ಮನಸು ತುಂಬಿ ಬರುತ್ತದೆ. ಇನ್ನು ಕೊನೆ ಅಧ್ಯಾಯದ ಪುಟಗಳಲ್ಲಿ ಕಣ್ಣಾಡಿಸುವಾಗ ಬಿಟ್ಟು ಹೋದ ಎಷ್ಟೋ ಹೆಜ್ಜೆ ಗುರುತುಗಳನ್ನು ಹಚ್ಚಿಕೊಂಡು ಬಿಟ್ಟಿರುತ್ತೇವೆ.
ಹೀಗೆ ಪುರಾಣಗಳಂತೆ ಮನಸಿಗೆ ಹತ್ತಿರವಾಗುವ, ಎತ್ತರದಲ್ಲಿ ನಿಲ್ಲುವ ಒಂದು ಅದ್ಭುತ ಕೃತಿ ಶಿವರಾಮುರವರ ‘ಆತ್ಮಾಹುತಿ’. ಇದು 1970 ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಪ್ರತಿಯೊಬ್ಬ ಭಾರತೀಯನು ತಿಳಿದಿರಬೇಕಾದ ಇತಿಹಾಸ ಇದು. ಓದಲೇ ಬೇಕಾದ the best book.
ಸ್ವಾತಂತ್ರ್ಯ ವೀರ ಸಾವರಕರ ರವರ ಜೀವನ ಚರಿತ್ರೆ. ಇದನ್ನು ಆತ್ಮಕಥೆಯಂತೆ ನಿರೂಪಿಸಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬನ ಉನ್ನತ ಧೇಯ್ಯೋದ್ದೇಶಗಳು ಹೇಗೆ ಮಹಾನ್ ವ್ಯಕ್ತಿತ್ವಕ್ಕೆ ಮೆಟ್ಟಿಲುಗಳಾಗುತ್ತವೆ ಎಂಬುದಕ್ಕೆ ನಿದರ್ಶನವಿದು. ಬಾಲಕನಿದ್ದಾಗ ಚಿಗುರುವ ದೇಶ ಭಕ್ತಿ ಇಡೀ ವಿಶ್ವಕ್ಕೆ ವ್ಯಾಪಿಸುವ ಕಥಾನಕವಿದು. ಹಿಂದುತ್ವದ ಅಮೋಘ ಪರಿಕಲ್ಪನೆಯನ್ನು ಅನಾವರಣಗೊಳಿಸುವ ಇವರ ಜ್ಞಾನ ಅಗಾಧ. ಇದೆಲ್ಲವನ್ನೂ ಕೇಳುವುದಕ್ಕಿಂತ ಅನುಭವಿಸ ಬೇಕೆಂದಿದ್ದರೆ ಆತ್ಮಾಹುತಿಯನ್ನು ಓದಲೇಬೇಕು ಬೇಕು.
ಮತ್ತಷ್ಟು ಓದು