ವಿಷಯದ ವಿವರಗಳಿಗೆ ದಾಟಿರಿ

Archive for

10
ಆಗಸ್ಟ್

nಕಯ್ಯಾರ ಕಿಞ್ಞಣ್ಣ ರೈ

10
ಆಗಸ್ಟ್

ಬುದ್ಧಿಜೀವಿಗಳ ಭೌತಶಾಸ್ತ್ರ

– ವಿನಾಯಕ ಹಂಪಿಹೊಳಿ

ಬುದ್ಧಿಜೀವಿಗಳ ತಂಡವೊಂದು ಭೌತಿಕ ವಿಜ್ಞಾನವನ್ನು ಕಲಿಯಲು ಹೊರಟಿತು. ಸರ್ಕಾರದಿಂದ ಅನುದಾನ ಪಡೆದು ಎ.ಸಿ. ರೂಮೊಂದನ್ನು ಕಟ್ಟಿಸಿ, ಅಲ್ಲಿ ಎಲ್ಲ ಭೌತ ವಿಜ್ಞಾನದ ಪುಸ್ತಕಗಳನ್ನುಬುದ್ಧಿಜೀವಿ ತರಿಸಿ ಎಲ್ಲವನ್ನೂ ಅನೂಚಾನವಾಗಿ ಓದಿಕೊಂಡಿತು. ನ್ಯೂಟನ್ನಿನ ನಿಯಮಗಳಿಂದ ಆರಂಭಿಸಿ, ಕ್ವಾಂಟಂ ಸಿದ್ಧಾಂತದವರೆಗಿನ ಎಲ್ಲ ಸಿದ್ಧಾಂತಗಳನ್ನೂ ಅವುಗಳ ಇತಿಮಿತಿಗಳನ್ನೂ ಅಧ್ಯಯನ ಮಾಡಿತು. ೩-೪ ವರ್ಷಗಳ ನಂತರ ಆ ಬುದ್ಧಿಜೀವಿಗಳು ಈಗ ತಾವು ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಎಂದು ಭಾವಿಸಿ ಒಂದು ಬಹುದೊಡ್ಡ ಅನ್ವೇಷಣಾ ವರದಿಯನ್ನು ಬರೆದು ಎ.ಸಿ. ರೂಮಿನಿಂದ ಹೊರಬಂದಿತು. ಅದು ತನ್ನ ಅನ್ವೇಷಣೆಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆ ವರದಿಯ ಕೊನೆಯಲ್ಲಿ ಇಡೀ ಅಧ್ಯಯನದ ಸಾರಾಂಶ ಅಡಗಿತ್ತು.

“ಈ ಪ್ರಕೃತಿಯು ಬಹು ಗೊಂದಲದಿಂದ ಕೂಡಿದೆ. ವಸ್ತುಗಳ  ವೇಗ ಕಡಿಮೆಯಿದ್ದರೆ ನ್ಯೂಟನ್ನಿನ ನಿಯಮವನ್ನು ಪಾಲಿಸುತ್ತದೆ, ಆದರೆ ವೇಗ ತುಂಬಾ ಹೆಚ್ಚಿದಂತೆ ಆ ನಿಯಮಗಳನ್ನು ಮೀರುತ್ತವೆ ಮತ್ತು ಇದ್ದಕ್ಕಿದ್ದಂತೆ ಐನ್ಸ್ಟೈನ್ ನಿಯಮಗಳನ್ನು ಪಾಲಿಸುತ್ತವೆ. ಅಂದರೆ ಯಾವ ನಿಯಮವನ್ನು ಸರಿಯಾಗಿ ಪಾಲಿಸಬೇಕು ಎಂಬುದರ ಸ್ಪಷ್ಟವಾದ ಕಲ್ಪನೆ ಪ್ರಕೃತಿಗೆ ಇದ್ದಂತಿಲ್ಲ. ಗಾತ್ರದಲ್ಲಿ ದೊಡ್ಡದಾಗಿರುವ ವಸ್ತುಗಳು ಕ್ಲಾಸಿಕಲ್ ಮೆಕಾನಿಕಲ್ ನಿಯಮಗಳನ್ನು ಅನುಸರಿಸಿದರೆ, ಚಿಕ್ಕದಾಗಿರುವ ವಸ್ತುಗಳು ಮೆಕಾನಿಕಲ್ ನಿಯಮಗಳನ್ನು ಗಾಳಿಗೆ ತೂರಿ ಕ್ವಾಂಟಂ ಮೆಕಾನಿಕಲ್ ನಿಯಮಗಳನ್ನು ಅನುಸರಿಸುತ್ತವೆ. ಹೀಗೆ ದೊಡ್ಡವುಗಳಿಗೊಂದು ನ್ಯಾಯ, ಚಿಕ್ಕವುಗಳಿಗೊಂದು ನ್ಯಾಯವನ್ನು ನೀಡುವ ಪ್ರಕೃತಿಯು ನಿಜವಾಗಿಯೂ ಆದರ್ಶ ಪ್ರಕೃತಿಯಾಗಿರಲಾರದು.

ಬೆಳಕು ಮೊದಮೊದಲು ತರಂಗದಂತೆ ವರ್ತಿಸಿದರೆ, ಇದ್ದಕ್ಕಿದ್ದಂತೆ, ಕಣಗಳ ರೂಪದಲ್ಲಿ ವರ್ತಿಸಲು ಶುರು ಮಾಡುತ್ತವೆ. ಇದೇ ರೀತಿ, ಎಲೆಕ್ಟ್ರಾನ್ ಮುಂತಾದ ಸೂಕ್ಷ್ಮ ಕಣಗಳು ಒಮ್ಮೊಮ್ಮೆ ತರಂಗದಂತೆ ವರ್ತಿಸುತ್ತವೆ. ಹೀಗಾಗಿ ಈ ನಿಸರ್ಗವು ಒಂದು ಸುವ್ಯವಸ್ಥಿತವಾದ ಜಗತ್ತನ್ನು ಕಟ್ಟುವಲ್ಲಿ ವಿಫಲವಾಗಿದೆಯೆಂದು ಧಾರಾಳವಾಗಿ ಹೇಳಬಹುದು. ಅಲ್ಲದೇ ಥರ್ಮೋಡೈನಮಿಕ್ಸ್ ಪ್ರಕಾರ, ಜಗತ್ತಿನ ಎಂಥ್ರೊಪಿ (disorderness) ನಿರಂತರವಾಗಿ ಹೆಚ್ಚುತ್ತಲೇ ಇದೆ. ಪ್ರಕೃತಿಯ ಈ ಬೆಳವಣಿಗೆ ನಿಜವಾಗಿಯೂ ಆಘಾತಕಾರಿ. ಜಗತ್ತು ಸುವ್ಯವಸ್ಥತೆಯಿಂದ ಅವ್ಯವಸ್ಥತೆಯೆಡೆಗೆ ಸಾಗುತ್ತಿರುವದನ್ನು ಗುರುತಿಸುವಲ್ಲಿ ಪ್ರಕೃತಿಯು ಸಂಪೂರ್ಣವಾಗಿ ವಿಫಲವಾಗಿದೆ.
ಮತ್ತಷ್ಟು ಓದು »

10
ಆಗಸ್ಟ್

‘ಸ್ವಪ್ನ ಸಾರಸ್ವತ’ದ ಪುಟಗಳಲ್ಲಿ

– ಮನುಶ್ರೀ ಜೋಯಿಸ್

ಸ್ವಪ್ನ ಸಾರಸ್ವತ'“ಸ್ವಪ್ನ ಸಾರಸ್ವತ” ಒಂದು ಸುಂದರ ಸುಧೀರ್ಘ ಕಾದಂಬರಿ. ಸುಮಾರು ಐದು ತಲೆಮಾರುಗಳ ಸಾರಸ್ವತ ಕುಟುಂಬದ ಇತಿಹಾಸ ಹೇಳುವಂತ ಕಥೆ. ಇದು ಬರೀ ಆ ವರ್ಗಕ್ಕೆ ಮಾತ್ರ ಸೀಮಿತವಾಗಿರದೆ ಸಂಘಜೀವಿ ಮನುಷ್ಯನ ಪರಿಸರ ಪ್ರೀತಿಯನ್ನು, ಪ್ರಕೃತಿಯನ್ನು ಹಚ್ಚಿಕೊಳ್ಳುವ ರೀತಿಯನ್ನು ಬಿಂಬಿಸುತ್ತದೆ.

ಗೋವಾದಲ್ಲಿ ಪೋರ್ಚುಗೀಸರ ಆಕ್ರಮಣಕ್ಕೆ ಸಿಕ್ಕು ದಿಕ್ಕಾಪಾಲಾಗುವ ಸಾರಸ್ವತ ಬ್ರಾಹ್ಮಣರ ಕಷ್ಟ-ಕಾರ್ಪಣ್ಯದಿಂದ ಈ ಕಥೆ ಪ್ರಾರಂಭವಾಗುತ್ತದೆ. ದಾಳಿಯಿಂದಾಗುವ ದೇವಸ್ಥಾನಗಳ ಹಾನಿ, ಆಸ್ತಿ-ಪಾಸ್ತಿಗಳ ನಷ್ಟ, ಸಂಸ್ಕೃತಿಯ ಪತನ ಮುಂತಾದವುಗಳನ್ನು ಲೇಖಕರು ಯಶಸ್ವಿಯಾಗಿ,ಸೂಕ್ಷವಾಗಿ ಚಿತ್ರಿಸಿದ್ದಾರೆ. ಇನ್ನು ಧರ್ಮಹಾನಿಯ ಸಮಯದಲ್ಲಿ ಮನದಲ್ಲಿನ ತೊಳಲಾಟ, ಗೊಂದಲಗಳನ್ನು ಸಾಮಾನ್ಯ ಮನುಷ್ಯನೊಬ್ಬ ಎದುರಿಸುವ ಪರಿ ಮನ ಮುಟ್ಟುವಂತಿದೆ.

ಸ್ನೇಹದ ಹಳಿಯಲ್ಲಿ ಬದುಕಿನ ಬಂಡಿ ಸಾಗುವುದು.ದೌರ್ಬಲ್ಯದಲ್ಲೇ ಮುಂದೆ ಸಾಗಿ ಮನಸಲ್ಲೇ ಮುಚ್ಚಿಟ್ಟು ಕೊಳ್ಳುವ ಪಶ್ಚಾತ್ತಾಪ. ದ್ವೇಷದ ಚಿಕ್ಕ ಕಿಡಿಯಿಂದ ಹೊತ್ತಿ ಉರಿವ ಮನೆ, ಮನಸ್ಸು.ಅಷ್ಟೈಶ್ವರ್ಯಗಳಿದ್ದೂ ಎಲ್ಲವನ್ನು ಕಳೆದುಕೊಂಡು ವಲಸೆಬಂದು ಪರಸ್ಥಳದಲ್ಲಿ ನೆಲೆನಿಂತು ಬದುಕು ಕಟ್ಟಿಕೊಳ್ಳುವ ಜೀವನ ಪ್ರೀತಿ. ಮನುಷ್ಯನ ಮೋಹ,ಲೋಭ,ದ್ವೇಷಗಳು, ದಾರಿ ತಪ್ಪುವ ಮನಸ್ಸಿನ ಹೊಯ್ದಾಟಗಳು,ಪರಿಣಾಮಗಳು,ಜಿಜ್ಞಾಸೆಗಳು ಯಥಾವತ್ತಾಗಿ ಜೀವನವೇ ಹಾಳೆಯ ಮೇಲೆ ಮೂಡಿ ಬಂದಂತಿದೆ.
ಮತ್ತಷ್ಟು ಓದು »