ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ
(ಇತ್ತೀಚೆಗೆ ಫೇಸ್ ಬುಕ್ ನಡೆಯಿತು ಎನ್ನಲಾದ ವಿವಾದ ಕುರಿತು ನಿಲುಮೆ ತಂಡದ ವಿಜಯ್ ಹೆರಗು ಅವರು ವಿವಾದಿತ ವ್ಯಕ್ತಿ ರಾಬಿನ್ ಚುಗ್ ರನ್ನು ಸ್ವತಃ ಸಂಪರ್ಕಿಸಿ ಮಾತಾಡಿ ಅದರ ವಿವರಗಳನ್ನು ದಾಖಲಿಸಿದ ಲೇಖನವಿದು. -ನಿಲುಮೆ)

ಪಕ್ಯ…!
– ಹರೀಶ್ ಶೆಟ್ಟಿ, ಶಿರ್ವ
ಪಕ್ಯ…ಪಕ್ಯ ನನ್ನ ಬಿಲ್ಡಿಂಗ್ನಲ್ಲಿ ಗ್ರೌಂಡ್ ಫ್ಲೂರ್ ನಲ್ಲಿ ಇರುತಿದ್ದ. ಅವನ ತಂದೆ ದೊಡ್ಡ ಕುಡುಕ ಹಾಗು ಪ್ರಯೋಜನ ಇಲ್ಲದವ, ಪಕ್ಯನ ತಾಯಿ ಅಲ್ಲಿ ಇಲ್ಲಿ ದುಡಿದು ಹೇಗಾದರೂ ಜೀವನ ಸಾಗಿಸುತಿದ್ದರು. ಪಕ್ಯ ನನ್ನಿಂದ ಎರಡು ಮೂರೂ ವರುಷ ದೊಡ್ಡವ. ಪಕ್ಯ ಚಿಕ್ಕಂದಿನಿಂದಲೂ ಮಂದ ಬುದ್ದಿ (Special Abnormal child), ಜೀವ ದೊಡ್ಡದಾದರೂ ಅವನ ಬುದ್ದಿ ಬೆಳವಣಿಗೆ ಆಗಲಿಲ್ಲ, ಪಕ್ಯನಿಗೆ ಇಬ್ಬರು ತಂಗಿಯರಿದ್ದರು . ೧೨ ವರುಷ ದಲ್ಲಿಯೇ ಪಕ್ಯನ ಜೀವ ೬ ಫೀಟ್ ಉದ್ದ ಆಗಿತ್ತು, ಆದರೆ ಅವನ ಬುದ್ದಿ ಚಿಕ್ಕ ಮಕ್ಕಳ ಹಾಗೆ. ಪಕ್ಯ ಇಡಿ ದಿನ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ತಿರುಗುತ ಇರುತ್ತಿದ, ಅವನ ತಾಯಿ ಹೊಟ್ಟೆ ಪಾಡಿಗಾಗಿ ದುಡಿಯಲ್ಲಿಕೆ ಹೋಗುತತ್ತಿದ್ದಳು, ಅವನ ತಂದೆಗೆ ಕುಡಿಯುದರಲ್ಲಿ ಪುರ್ಸ್ಹೊತ್ತು ಇರುತ್ತಿರಲಿಲ್ಲ .
ಹಣ ಕೊಟ್ಟು ಅತಿಥಿಯಾಗಿ..!
ಅರೆಹೊಳೆ ಸದಾಶಿವ ರಾವ್
ಆಶ್ಚರ್ಯವಾಗಬಹುದು ನಿಮಗೆ ಈ ಲೇಖನದ ರ್ಶೀಕೆ ನೋಡಿ. ಇದು ಇತ್ತೀಚಿನ ಒಂದು ಹವ್ಯಾಸವಾಗಿ ಬಿಟ್ಟಿದೆ. ಇತ್ತೀಚೆಗೆ ನನಗೊಂದು ಸಭೆಗೆ ಅತಿಥಿಯಾಗಿ ಭಾಗವಹಿಸಲು ಕರೆ ಬಂತು. ಸಂತಸದಿಂದ ಒಪ್ಪಿಕೊಂಡೆ. ಅಂತಹಾ ವಿಶೇಷ ವ್ಯಕ್ತಿ ನಾನಲ್ಲ ಎಂಬ ಅರಿವಿದ್ದೂ ಒಪ್ಪಿಕೊಂಡೆ. ಒಂದು ವಾರ ಕಳೆದಿತ್ತು. ಆಯೋಜಕರಿಂದ ಮತ್ತೆ ಕರೆ ಬಂತು. ಅತಿಥಿಯಾಗಿ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು. ಮುಂದುವರಿದು ಕಾರ್ಯಕ್ರಮದ ಒಟ್ಟೂ ಖರ್ಚಿನ ಬಗ್ಗೆ ನಾನು ಕೇಳದೆಯೇ ಹೇಳುತ್ತಾ, ನಿಮ್ಮಿಂದ ನಾವು ಕನಿಷ್ಟ ಇಂತಿಷ್ಟು ನಿರೀಕ್ಷಿಸುತ್ತಿದ್ದೇವೆ ಎಂದರು. ಒಮ್ಮೆ ಆಶ್ಚರ್ಯವಾದರೂ, ನಾನು ಅತಿಥಿಯಾಗಿ ಬರುತ್ತಿದ್ದೂ, ನಾನೇ ವಂತಿಗೆ ನೀಡಬೇಕಾದ ಅನಿವಾರ್ಯತೆಯ ಬಗ್ಗೆ ಪ್ರಶ್ನಿಸಿದೆ. ನಾವು ಇದೇ ಸಂಪ್ರದಾಯ ಪಾಲಿಸುತ್ತಿದ್ದೇವೆ ಎಂಬ ಉತ್ತರ ಬಂತು. ಕ್ಷಮಿಸಿ, ನಾನು ಈ ಸಂಪ್ರದಾಯ ಪಾಲಿಸುವುದಿಲ್ಲ ಎಂದೆ. ಸರಿ, ಮತ್ತೆ ಸಂಪರ್ಕಿಸುತ್ತೇವೆ ಎಂದು ಫೋನ್ ಇಟ್ಟರು… ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ನಾಪತ್ತೆ!
ಇದು ಇತ್ತೀಚೆಗೆ ಬೆಳೆದು ಬಂದಿರುವ ಸಂಪ್ರದಾಯ. ಇತ್ತೀಚೆಗೆ ನಾವೂ ಒಂದು ಕಾರ್ಯಕ್ರಮ ಆಯೋಜಿಸಿದ್ದೆವು. ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದ್ದ ಒಬ್ಬರಲ್ಲಿ ನಾವು ಅತಿಥಿಯಾಗಿ ಬರುವಂತೆ ವಿನಂತಿಸಿದೆವು. ನಿರ್ದಿಷ್ಠ ದಿನಾಂಕದಂದು ಅವರಿಗೆ ಬೇರಾವುದೋ ಕಾರ್ಯಕ್ರಮ ಇದ್ದುದಕ್ಕೆ ಬರಲಾಗುವುದಿಲ್ಲ ಎಂದರು. ಸರಿ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾದರೂ ಬರುವಂತೆ ಅವರನ್ನು ವಿನಂತಿಸಿದೆವು. ಅದಕ್ಕೆ ಥಟ್ಟಂತ ಆ ವ್ಯಕ್ತಿ ಆಗದು, ಆ ದಿನ ನಾನು ಫ್ರೀ ಆಗಿದ್ದರೂ, ಬರಲಾಗದು, ನನ್ನ ‘ಸ್ಥಾನ ಮಾನ’ ನೋಡಬೇಕಲ್ಲವೇ ಎಂದು ಬಿಟ್ಟರು!!. ಕೊನೆಗೆ ಸರಿ ಎಂದು ನಾವು ಹೋದ ದಾರಿಗೆ ಸುಂಕವಿಲ್ಲದಂತೆ ಮರಳ ಹೊರಟಾಗ, ಮುಂದೆ ಏನಾದರೂ ಇಂತಾದ್ದೇ ‘ದೊಡ್ಡ’ ಮಟ್ಟದ ಕಾರ್ಯಕ್ರಮ ಇದ್ದರೆ ಬನ್ನಿ, ಅತಿಥಿಯಾಗಿಯೂ ಬರುತ್ತೇನೆ ಮತ್ತು ಸ್ವಲ್ಪ ಧನ ಸಹಾಯವನ್ನೂ ಮಾಡುತ್ತೇನೆ ಎಂದರು. ಧನ್ಯೋಸ್ಮಿ ಎಂದುಕೊಂಡೆವು!! ಮತ್ತಷ್ಟು ಓದು 





