ಕನ್ನಡ ಕಲಿಕೆಯ ಆಸಕ್ತರಿಗೆ
– ಬನವಾಸಿ ಬಳಗ
ನಾಡಿನ ಹಿರಿಯ ನುಡಿಯರಿಗರಾದ ಡಾ|| ಡಿ. ಎನ್. ಶಂಕರಬಟ್ಟರು ಕನ್ನಡದ ನುಡಿಯರಿಮೆ (ಬಾಶಾವಿಗ್ನಾನ) ಸೊಲ್ಲರಿಮೆ (ವ್ಯಾಕರಣ) ಮತ್ತು ಪದಕಟ್ಟಣೆ (ಪದರಚನೆ) ಕುರಿತಂತೆ ಆಳವಾಗಿ ಅದ್ಯಯನ ನಡೆಸಿ ಈ ವಲಯಗಳಲ್ಲಿ ಸಂಶೋದನೆಗೆ ಹೊಸದೊಂದು ದಾರಿಯನ್ನು ಕಟ್ಟಿದ್ದಾರೆ.
ಈಗ ಅವರ ಕೈಕೆಳಗೆ ಅವರಿಂದಲೇ ಈ ವಿಶಯಗಳ ಬಗ್ಗೆ ಕಲಿಯುವ ಮತ್ತು ಅವರ ಸಂಶೋದನೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಒಂದು ಚಿನ್ನದಂತಹ ಅವಕಾಶವನ್ನು ಬನವಾಸಿ ಬಳಗ ನಿಮ್ಮ ಮುಂದೆ ತಂದಿದೆ. ಈ ಕಾರ್ಯಕ್ರಮದ ವಿವರಗಳನ್ನು ಕೆಳಗೆ ಕೊಡಲಾಗಿದೆ.
ಕಾರ್ಯಕ್ರಮದ ಇಟ್ಟಳ
ಈ ಕಾರ್ಯಕ್ರಮದ ಅಂಗವಾಗಿ ತಲಾ ಒಂದು ವರ್ಶದ ಅವದಿಯ ನಾಲ್ಕು ಹಮ್ಮುಗೆ (ಯೋಜನೆ) ಗಳನ್ನು ಏರ್ಪಡಿಸಲಾಗಿದೆ. ಮೂವರು ಶಿಬಿರಾರ್ತಿಗಳು ಸೇರಿ ಒಂದು ಹಮ್ಮುಗೆಯನ್ನು ಮಾಡಬೇಕಾಗುತ್ತದೆ. ಹಮ್ಮುಗರಿಗೆ ಡಾ||. ಡಿ. ಎನ್. ಶಂಕರಬಟ್ಟರು ತಾವೇ ಮಾರ್ಗದರ್ಶನ ನೀಡುತ್ತಾರೆ. ಹಮ್ಮುಗೆಗಳ ವಿಶಯಗಳು ಹೀಗಿವೆ:
ನನ್ನ ಕನಸಿನ ಹುಡುಗಿ
– ನವನೀತ್ ಪೈ
ನಾನು ನನ್ನ ಕನಸಿನ ಲೊಕದ ಚಕ್ರವರ್ತಿ. ಕನಸಿನಲ್ಲಿ ನನ್ನ ಮಹಾರಾಣಿಯು ಆಗಮಿಸುತ್ತಿರುವಾಗ ಭೀಕರ ಗುಡುಗಿನ ಆರ್ಭಟ ನನ್ನನ್ನು ಎಚ್ಚರಿಸಿತು. ಈ ನನ್ನ ನತದೃಷ್ಟ ಕಣ್ಣುಗಳು ಅವಳ ಆ ಸುಂದರ ಮುಖಕಮಲಗಳನ್ನು ನೋಡಲು ವಿಫಲವಾದವು. ಆಕೆ ಯಾರಿರಬಹುದು ಎಂದು ಯೋಚಿಸುವಾಗ ಪುನಃ ಗುಡುಗಿನ ಆರ್ಭಟ. ಈಗ ಕರೆಂಟ್ ಕೂಡ ಹೋಯಿತು. ನನ್ನ ಕಲ್ಪನಾ ಸಾಮ್ರಾಜ್ಯಕ್ಕೆ ಹೋಗಲು ಈ ಕತ್ತಲೆಯೇ ದಾರಿದೀಪವಾಯಿತು. ಒಂದು ಮೇಣದ ಬತ್ತಿಯನ್ನು ಹಚ್ಚಿ ಅದರ ಜ್ವಾಲೆಯಲ್ಲೇ ಅವಳ ಆ ಸುಂದರ ಮುಖವನ್ನು ಅರಸುತ್ತಿದ್ದೆ. ಅಲ್ಲೇ ಇದ್ದ ಮಂಚದ ಮೇಲೆ ಮಲಗಿ ಕಾರ್ಮೊಡದ ಹಿಂದೆ ಅವಿತಿರುವ ಚಂದಿರನನ್ನು ನೋಡಲು ಯತ್ನಿಸುತ್ತಾ ಅವಳ ಮುಖವನ್ನು ಊಹಿಸಿದೆ. ಬಹುಶಃ ಚಂದಿರನೇ ಎಸೆದ ಮಿಂಚಿನ ಚಾವಟಿ ನನ್ನ ಕನಸನ್ನು ಪುನಃ ಭಗ್ನಗೊಳಿಸಿತು. ಅವಳ ಬಗ್ಗೆ ಯೋಚಿಸುತ್ತಾ ರೆಪ್ಪೆಗಳು ಮುಚ್ಚಿಕೊಂಡವು ಆದರೆ ಮನಸಿನ್ನೂ ಜಾಗೃತವಾಗೇ ಇತ್ತು.
ನನ್ನ ಮೊದಲ ದಿನದ ಕಾಲೇಜು ಒಂದು ರೀತಿಯ ಹೊಸ ಉತ್ಸಾಹವನ್ನೂ, ಭಯವನ್ನೂ ಒಟ್ಟಿಗೆ ಮೂಡಿಸಿತು. ಕೋಟ್ಯಾಂತರ ನಕ್ಷತ್ರಗಳ ಮಧ್ಯೆ ಚಂದಿರನೊಬ್ಬನೇ ಹೇಗೆ ಪ್ರಕಾಶಿಸುತ್ತಾನೋ ಹಾಗೆ ನೂರಾರು ಹುಡುಗಿಯರ ನಡುವೆ ಅವಳೊಬ್ಬಳೇ ನನ್ನನ್ನು ಆಕರ್ಷಿಸಲು ಸಫಲಳಾದಳು.






