ವಿಷಯದ ವಿವರಗಳಿಗೆ ದಾಟಿರಿ

Archive for

13
ನವೆಂ

ಮತಾಂಧ ಭಯೋತ್ಪಾದಕರೊಡನೆ ವೇದಿಕೆ ಹಂಚಿಕೊಂಡರೂ ಇವರು “ಜಾತ್ಯಾತೀತ”ರೇ!!

– ನರೇಂದ್ರ ಕುಮಾರ್

Chidambaram with Talibaniಮುಲ್ಲಾ ಅಬ್ದುಲ್ ಸಲಾಂ ಜ಼ಯೀಫ಼್ ಎನ್ನುವ ಹೆಸರು ಭಾರತದಲ್ಲಿ ಹೆಚ್ಚಿನ ಜನರಿಗೆ ತಿಳಿದಿರಲಾರದು. 1990ರ ದಶಕದಲ್ಲಿ ಆಫ಼್ಘಾನಿಸ್ತಾನದಲ್ಲಿ ತಾಲಿಬಾನ್ ಸ್ಥಾಪನೆಯಾಯಿತು. ಆಫ಼್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ತಾಲಿಬಾನ್ ನಡೆಸಿರುವ ಮತಾಂಧ ಕೆಲಸಗಳು ಜಗತ್ಪ್ರಸಿದ್ಧ. ಆಫ಼್ಘಾನಿಸ್ತಾನದ ಹಜ಼ರತ್ ಪ್ರದೇಶದಲ್ಲಿರುವ ಬಾಮ್ವಾಮ್ ಕಣಿವೆಯಲ್ಲಿದ್ದ ೬ನೇ ಶತಮಾನದ ಬೃಹತ್ ಬುದ್ಧ ಭಗವಾನನ ಪ್ರತಿಮೆಗಳನ್ನು 2001ರಲ್ಲಿ ಭಗ್ನಗೊಳಿಸಿದಾಗ, ತಾಲಿಬಾನ್ ಹೆಸರು ಜಗತ್ತಿನಲ್ಲೆಲ್ಲಾ ಪ್ರಸಿದ್ಧವಾಯಿತು. ಜಗತ್ತಿನೆಲ್ಲೆಡೆಯಿಂದ ಬುದ್ಧನ ಪ್ರತಿಮೆಗಳನ್ನು ಹಾಳುಗೆಡವಿದ ಕಾರ್ಯವನ್ನು ಖಂಡಿಸಲಾಯಿತು. ಆದರೆ, ತಾಲಿಬಾನ್ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ. ಮೇಲೆ ಹೇಳಿದ “ಮುಲ್ಲಾ ಅಬ್ದುಲ್ ಸಲಾಂ ಜ಼ಯೀಫ಼್” ಎನ್ನುವವರು ಈ ತಾಲಿಬಾನ್‌ನ ಸಂಸ್ಥಾಪಕರಲ್ಲಿ ಒಬ್ಬರು. ತಾಲಿಬಾನ್ ಸಂಸ್ಥಾಪನೆ ಮಾಡಿದ ಮುಲ್ಲ ಮೊಹಮ್ಮದ್ ಓಮರ್ ಹೆಸರು ಸ್ವಲ್ಪಮಟ್ಟಿಗೆ ಎಲ್ಲರಿಗೂ ತಿಳಿದಿರುತ್ತದೆ. ಈ ಮುಲ್ಲಾ ಅಬ್ದುಲ್ ಸಲಾಮ್ ಜ಼ಯೀಫ಼್, ಮುಲ್ಲಾ ಓಮರ್^ನ ಬಲಗೈ ಭಂಟನಾಗಿದ್ದ. 2001ರಲ್ಲಿ ಅಮೆರಿಕಾದಲ್ಲಿ ಭಯೋತ್ಪಾದಕ ಕೃತ್ಯ ನಡೆಸಿದ ನಂತರದಲ್ಲಿ, ಒಸಾಮಾ ಬಿನ್ ಲಾಡೆನ್ನಿಗೆ ಆಫ್ಘಾನಿಸ್ತಾನದಲ್ಲಿ ಆಶ್ರಯ ಒದಗಿಸಿದವರು ಇವರೇ!

ಮತ್ತಷ್ಟು ಓದು »