ವಿಷಯದ ವಿವರಗಳಿಗೆ ದಾಟಿರಿ

Archive for

4
ಜುಲೈ

ಯುವಾಬ್ರಿಗೇಡ್ ನ ಲೋಕಕಲ್ಯಾ(ಣ)ಣಿ ಕಾರ್ಯ

– ಯುವಾ ಬ್ರಿಗೇಡ್

ತರುಣಶಕ್ತಿ ತಣಿಯಲಿ ಪೃಥ್ವಿಆಕಾಶಾತ್ ವಾಯುಃ ವಾಯೋರಗ್ನಿಃ ಅಸ್ಮೀರಾಶಃ ಅರಭ್ಯಪೃಥಿವೀಂ ಶೃಧಿವ್ಯಾ ಓಷಧಯಃ ಓಷಧಿಭ್ಯೋನ್ನಮ್ ಹಾಗಂತ ವೇದವಾಕ್ಯ ಸೃಷ್ಟಿಯ ಕ್ರಮ ಅದು. ಆಕಾಶದಿಂದ ವಾಯು ಅದರಿಂದ ಅಗ್ನಿ ಆ ಮೂಲಕ ನೀರು ಭೂಮಿ ಸಸ್ಯಗಳು ಅನ್ನ ಮತ್ತು ಕೊನೆಗೆ ಪುರುಷ. ಸೃಷ್ಟಿಯಲ್ಲಿ ನಮ್ಮದು ಕೊನೆಯ ಅವತರಣ. ನಮ್ಮ ಉಳಿವಿಗೆ ಬೇಕಾದ್ದೆಲ್ಲ ಮೊದಲಿಗೆ ನಿರ್ಮಾಣಗೊಂಡಿತು.ನಮ್ಮ ಹಿರಿಯರೂ ಭಗವಂತ ಕೊಟ್ಟಿದ್ದನ್ನೆಲ್ಲಾ ದೇವರೆಂಬಂತೆ ಪೂಜಿಸಿದರು. ವೃಕ್ಷ ಪೂಜೆ, ಭುಮಿ ಪೂಜೆ, ಯಾಗ ಯಜ್ಞ, ನದೀ ಪೂಜೆ, ಯಾವುದನ್ನು ಮಾಡಿಲ್ಲ ಹೇಳಿ? ದುರದೃಷ್ಟವೆಂದರೆ ಹೀಗೆ ಪೂಜೆಯಷ್ಟೇ ಮಾಡಿದೆವು. ಅದನ್ನು ಉಳಿಸಿಕೊಳ್ಳಬೇಕೆಂಬ ಪ್ರಜ್ಞೆ ಮಾತ್ರ ತೊರೆದುಬಿಟ್ಟೆವು.

ಅನಾಮತ್ತಾಗಿ ವೃಕ್ಷಕ್ಕೆ ಕೊಡಲಿ ಬೀಸಿದೆವು. ನಾಶದ ಮಹಾಪರ್ವ ನಡೆಯಿತು. ಭೂಮಿಗೆ ವಿಷವುಣಿಸಿದೆವು. ನೀರನ್ನು ಅತ್ಯಂತ ಕೆಟ್ಟದಾಗಿ ಬಳಸಿದೆವು. ಭುಮಿಯ ಮೇಲಣ ನೀರು ಖಾಲಿಯಾಗುತ್ತಿದ್ದಂತೆ ಕೊಳವೆ ಬಾವಿ ಕೊರೆಸಿದೆವು. ನೂರು ಇನ್ನೂರು ಐನೂರು ಎಂಟುನೂರು ಕೊನೆಗೆ ಸಾವಿರ ಅಡಿ ಆಳಕ್ಕೆ ಭುಮಿಯನ್ನು ಕೊರೆದು ಅನಾಯಾಸವಾಗಿ ನಿಮಿಷಗಳಲ್ಲಿ ನೀರನ್ನು ಮೇಲೆತ್ತಬಲ್ಲ ತಂತ್ರಜ್ಞಾನ ನಿರ್ಮಾಣಗೊಂಡಿತು. ನೀರು ಆಳದಿಂದ ಮೇಲಕ್ಕೆ ಬಂತು ನಿಜ; ಆದರೆ ಇಷ್ಟು ಆಳಕ್ಕೆ ನೀರು ಇಳಿಯಲು ಇಳಿಯಲು ನಡೆದಿರುವ ದೀರ್ಘ ಪ್ರಕ್ರಿಯೆ ನಮ್ಮವರಿಗೆ ಮರೆತುಹೋಗಿತ್ತು. ಸಲೀಸಾಗಿ ನೀರು ಆಳದಿಂದ ಮೇಲೆ ಬರುವಾಗ ಭೂಮಿಯ ಮೇಲ್ಪದರದ ನೀರನ್ನು ಕಷ್ಟಪಟ್ಟು ಉಳಿಸಿಕೊಳ್ಳುವುದು ಇಲ್ಲವಾಯ್ತು.ನೋಡನೋಡುತ್ತಲೇ ಬಾವಿಗಳು ಮುಚ್ಚಿದವು. ಕಲ್ಯಾಣಿ – ಪುಷ್ಕರಣಿಗಳು ಪಾಳುಬಿದ್ದವು. ಕೆರೆಗಳು ಆಕ್ರಾಂತವಾದವು. ಅಂತರ್ಗಂಗೆಗೆ ಹಾತೊರೆದ ಮನುಷ್ಯ ಕಣ್ಣೆದುರಿನ ಗಂಗೆಯ ಮರೆತ.
ಮತ್ತಷ್ಟು ಓದು »

4
ಜುಲೈ

ಏನಿದು ಯುವಾ ಬ್ರಿಗೇಡ್?

– ಯುವಾ ಬ್ರಿಗೇಡ್

Yuva Brigadeಯುವಾ ಬ್ರಿಗೇಡ್ ಭಾರತವನ್ನು ವಿಶ್ವಗುರುವನ್ನಾಗಿಸುವ ಕನಸು ಕಟ್ಟಿಕೊಂಡ 18 ರಿಂದ 30 ವಯಸ್ಸಿನ ಯುವಕರ ಪಡೆ. ಯುವ ಶಕ್ತಿಯನ್ನು ದೇಶಪ್ರೇಮದ ನಿಟ್ಟಿನಲ್ಲಿ ತಿರುಗಿಸಿ ಅದನ್ನು ರಾಷ್ಟ್ರನಿರ್ಮಾಣದ ಕಾಯಕಕ್ಕೆ ಹಚ್ಚಿ ಅದರಿಂದ ಬಂದ ಫಲಿತಾಂಶವನ್ನು ಭಾರತ ಮಾತೆಯ ಚರಣಗಳಿಗೆ ಅರ್ಪಣೆ ಮಾಡುವ ಅಭಿಲಾಷೆ ಹೊತ್ತ ಯುವಕರ ಸಮೂಹ. ಪ್ರಖರ ರಾಷ್ಟ್ರವಾದಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ನಾಡಿನ ಹಿರಿಯ ರಾಷ್ಟ್ರಪ್ರೇಮಿ ಸಾಧಕರ ಮಾರ್ಗದರ್ಶನದಲ್ಲಿ ಕರ್ನಾಟಕದ ಮೂಲೆ ಮೂಲೆಗೂ ತಲುಪುತ್ತಿರುವ ಈ ಸಂಘಟನೆ ಆರಂಭವಾಗಿ ಇನ್ನೂ ವರ್ಷವೂ ಕಳೆದಿಲ್ಲ ಎಂದರೆ ಅಚ್ಚರಿಯಾಗಬಹುದು.

8 ಜೂನ್ 2014 ರಂದು ಆರಂಭವಾದ ಯುವಾ ಬ್ರಿಗೇಡ್ ಇದುವರೆಗೂ ಹತ್ತಾರು ವಿಶಿಷ್ಟ ವೈವಿಧ್ಯಮಯ ಕಾರ್ಯ ಕಲಾಪಗಳ ಮೂಲಕ ವ್ಯಾಪಕವಾಗಿ ಜನಮಾನಸವನ್ನು ತಲುಪಿರುವುದು ಒಂದು ಸಾಧನೆಯೇ ಸರಿ. ಹಾಗಂತ ಇದೇನು ರಾತ್ರೋ ರಾತ್ರಿ ಸಂಭವಿಸಿದ ಘಟನೆಯಲ್ಲ. ಪ್ರಾರಂಭದಲ್ಲಿ ಫೇಸ್ ಬುಕ್ ಮುಂತಾದ ಸಾಮಾಜಿಕ ತಾಣಗಳ ಮೂಲಕ ತಾಯಿ ಭಾರತಿಯನ್ನು ವಿಶ್ವಗುರುವನ್ನಾಗಿಸುವ ಕಲ್ಪನೆಯನ್ನು ಬಿತ್ತರಿಸಿ ಮುಂದಿನ ದಿನಗಳಲ್ಲಿ ಒಂದೊಂದೇ ಯೋಜನೆಗಳ ಮೂಲಕ ಹಳ್ಳಿಗಾಡಿನ ಯುವಕನನ್ನೂ ಸಂಘಟನೆಯೊಂದಿಗೆ ಬೆಸೆದುಕೊಳ್ಳುವಂತೆ ಮಾಡಿದ ಯುವಾ ಬ್ರಿಗೇಡ್ ನ ಕಾರ್ಯಗಳನ್ನು ವೀಕ್ಷಿಸುವುದು ಒಂದು ಚೇತೋಹಾರಿ ಪಯಣವಾಗಿದೆ. ಜೂನ್ ತಿಂಗಳಲ್ಲಿ ಉದ್ಘಾಟನೆಯಾದ ಯುವಾ ಬ್ರಿಗೇಡ್ ತಂಡಕ್ಕೆ ಬಹುತೇಕ ಎಲ್ಲಾ ಜಿಲ್ಲೆಗಳಿಂದ ತರುಣರು ಆಗಮಿಸಿ ರಾಷ್ಟ್ರಕಾರ್ಯದಲ್ಲಿ ಕೈಜೋಡಿಸುವ ಪ್ರತಿಜ್ಞೆಗೈದರು.

ಜುಲೈ ತಿಂಗಳಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ ಇಡೀ ರಾಜ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು. ಅನೇಕ ಜಿಲ್ಲಾ ಕೇಂದ್ರಗಳಲ್ಲಿ ಮಾಜಿ ಸೈನಿಕರನ್ನು ಕರೆದು ಗೌರವಿಸಲಾಯ್ತು. ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಪರಾಕ್ರಮದ ಕುರಿತು ಸರಣಿ ಉಪನ್ಯಾಸಗಳು ನಡೆದವು. ಅನೇಕ ತರುಣರ ಹೃದಯದಲ್ಲಿ ಸೈನ್ಯ ಸೇರುವ ಆಸೆಯ ಕಿಡಿಯನ್ನು ಹೊತ್ತಿಸಲಾಯ್ತು. ಸಾರ್ವಜನಿಕರಿಗೆ ಸೇನೆಯ ಬಗ್ಗೆ ಕೃತಜ್ಞತಾ ಭಾವನೆ ಮೂಡಿ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲಬಲ್ಲ ವಾತಾವರಣವನ್ನು ಕಲ್ಪಿಸಲಾಯ್ತು.

ಅಗಸ್ಟ್ ತಿಂಗಳಲ್ಲಿ ಯುವಾ ಬ್ರಿಗೇಡ್ ನ ರಾಜ್ಯ ಮಟ್ಟದ ಸಭೆ ನಡೆಯಿತು. ಅದರಲ್ಲಿ ರಾಜ್ಯ, ವಿಭಾಗ ಮತ್ತು ಜಿಲ್ಲೆಗಳಿಗೆ ಸಂಚಾಲಕರನ್ನು ಆರಿಸಲಾಯ್ತು. ತಾಲ್ಲೂಕು ಮಟ್ಟದಲ್ಲಿ ಯುವಾ ಬ್ರಿಗೇಡ್ ಆರಂಭಿಸಲು ತೀರ್ಮಾನ ಕೈಗೊಳ್ಳಲಾಯಿತು.

ಮತ್ತಷ್ಟು ಓದು »