ವಿಷಯದ ವಿವರಗಳಿಗೆ ದಾಟಿರಿ

Archive for

9
ಜುಲೈ

ರಂಗಿತರಂಗ

– ಚಿರು ಭಟ್

#‎ರಂಗಿತರಂಗ‬!

ರಂಗಿತರಂಗಒಂದೇ ಮಾತಲ್ಲಿ ಹೇಳುವುದಾದರೆ, ನಾನು ಕೆಲವು ವರ್ಷಗಳ ನಂತರ ಮನಸಾರೆ ಇಷ್ಟ ಪಟ್ಟ ಚಿತ್ರ. ಈಗ ಚಿತ್ರದ ಬಗ್ಗೆ ಮಾತಾಡೋಣ. ಅಸಲಿಗೆ ಚಿತ್ರದ ಬಗ್ಗೆ ನಾವು ವಿಮರ್ಶೆ ಬರೆದರೆ ಅದು ತಪ್ಪಾಗುತ್ತದೆ. ಕಥೆ ಅರ್ಧ ಹೇಳಿದರೆ ನಿಮಗೆ ಅರ್ಥವಾಗುವುದಿಲ್ಲ, ಪೂರ್ತಿ ಹೇಳಿದರೆ ಮಜಾ ಬರಲ್ಲ. ಗುಡ್ಡದ ಭೂತ, ಅಂಗಾರನ ಭೂತ, ಸಾಲು ಸಾಲು ಬಸುರಿ ಹೆಂಗಸರ ಕೊಲೆ, ತನ್ನ ಸುತ್ತ ಏನಾಗುತ್ತಿದೆ ಎಂದೇ ತಿಳಿಯದ ನಾಯಕ, ಅವನ ಹೆಂಡತಿ ಮತ್ತು ಅದೇ ನಾಯಕನನ್ನು ಒಂದು ಉದ್ದೇಶದಿಂದ ಹುಡುಕುತ್ತಾ ಅಲೆದಾಡುತ್ತಿರುವ ಮತ್ತೊಬ್ಬ ಜರ್ನಲಿಸ್ಟ್ ಹುಡುಗಿ.

ಇವಿಷ್ಟು ಸಾಮಾನ್ಯ ಜನರ ಕೈಯಲ್ಲಿ ಕೊಟ್ಟರೆ ಪುಳಿಯೊಗರೆ ಚಿತ್ರಾನ್ನ ಸೇರಿಸಿ ಉಪ್ಪಿಟ್ಟು ಮಾಡುತ್ತಿದ್ದರೇನೋ ಆದರೆ ಅನುಪ್ ಭಂಡಾರಿಯವರಿಗೆ ಕೊಟ್ಟಿದ್ದರಿಂದ ಅದು “ರಂಗಿತರಂಗ”ವಾಗಿದೆ. ನಿಜಕ್ಕೂ ಒಂದು ಸದಭಿರುಚಿಯ ಚಿತ್ರ. ಅಪ್ಪ ಹಾಕಿದ ಆಲದ ಮರಕ್ಕೇ ಜೋತುಬಿದ್ದಿರುವ ನಾಯಕನ ಚಿತ್ರಕ್ಕೆ ಹೋಗುವುದಕ್ಕಿಂತ ಇಂಥ ಒಂದು ಚಿತ್ರ ನೋಡಿದರೆ, ಕಾಸು ಕೊಟ್ಟಿದ್ದಕ್ಕೂ ಮೈ ಉರಿಯುವುದಿಲ್ಲ. ಸಿನಿಮಾದ ಒಂದೊಂದು ಫ್ರೇಮ್ ಕೂಡ ಕಮರೊಟ್ಟುಗೇ ನಮ್ಮನ್ನು ಫ್ರೀಯಾಗಿ ಕರೆದುಕೊಂಡು ಹೋದಂತಿದೆ. ಛಾಯಾಗ್ರಹಣ ನಿರ್ದೇಶನದಲ್ಲಿ ಲ್ಯಾನ್ಸ್ ಕ್ಯಾಪ್ಲನ್ ಗೆದ್ದಿದ್ದಾರೆ. ಸಿನಿಮಾದ ಹಿನ್ನೆಲೆ ಸಂಗೀತ ಮತ್ತು ಸಂಗೀತ ಬಹಳ ಅದ್ಭುತವಾಗಿ ಮೂಡಿಬಂದಿದೆ. ರಾಧಿಕಾ ಚೇತನ್ ನಟನೆ ಚೆನ್ನಾಗಿದೆ. ಅವಂತಿಕ ಶೆಟ್ಟಿ ನಟನೆಯೂ ಚೆನ್ನಾಗಿದೆ ಆದರೆ, ಮತ್ತಷ್ಟು ಎಫರ್ಟ್ ಹಾಕಬೇಕು. ನಾಯಕ ನಟ ನಿರುಪ್ ನಟನೆಯಲ್ಲಿ ಸುಧಾರಿಸುವುದು ಬಹಳ ಇದೆ. ಆದರೆ ಈ ಚಿತ್ರಕ್ಕೆ ಅವರ ನಟನೆ ತಕ್ಕ ಮಟ್ಟಿಗಿದೆ ಅಷ್ಟೆ. ಚಿತ್ರ ನಿಂತಿರುವುದೇ ಸಾಯಿಕುಮಾರ್‍ರ ನಟನೆಯ ಮೇಲೆ, ಅವರ ಪಾತ್ರದ ಮೇಲೆ ಎಂದರೆ ತಪ್ಪಾಗುವುದಿಲ್ಲ. ಅವರ ಬಗ್ಗೆ ಹೇಳಬೇಕೆಂದರೆ “Guys, Saikumar is backkkk!!”
ಮತ್ತಷ್ಟು ಓದು »