ನಾರಾಯಣ ಮೂರ್ತಿ ಅವರಿಂದ ಏನ್ ಕಲಿಬೇಕು, ಏನ್ ಬೇಡ ?
ಮೂರ್ತಿಯವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ !

ವಿಜಯ್ ಮಲ್ಯ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟನೆ ಮಾಡಬೇಕು!

ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ !!!!
ಶ್ರೀದೇವಿ ಅಂಬೆಕಲ್ಲು
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ….ಈ ಪ್ರೀತಿ ಒಂಥರಾ ಕಚಗುಳಿ.. ಅದೊಂದು ಮಧುರ ಅನುಭೂತಿ. ಕೆಲವರಿಗೆ ಕಲ್ಪನೆಗೆ ನಿಲುಕದ್ದು, ಅಕ್ಷರಗಳಲ್ಲಿ ಬಣ್ಣಿಸಲಾಗದ್ದು…
ಆದ್ರೆ ಪ್ರೀತಿ ಎಂದರೆ ಕೇವಲ ’ಮಾತಲ್ಲ’, ಪ್ರೀತಿ ಎಂದರೆ ’ಜವಾಬ್ದಾರಿ’, ’ಪ್ರೀತಿ ಎಂದರೆ ’ದುಡಿಮೆ’, ಪ್ರೀತಿ ಎಂದರೆ ’ಬದುಕು’. ಪ್ರೀತಿ ಅನ್ನೋ ಸಂಬಂಧದೊಳಗೆ ನಂಬಿಕೆ, ಕಳಕಳಿ, ಮನವಿ, ಕಾಳಜಿ, ಸ್ನೇಹ, ಸೆಳೆತ, ಹೊಂದಾಣಿಕೆ ಒಂದಷ್ಟು ಮುನಿಸು ಜತೆಗೆ ಒಪ್ಪಂದ ಈ ಎಲ್ಲ ಭಾವಗಳೂ ಸಮ್ಮಿಳಿತಗೊಂಡಿರಬೇಕು.
ಗಂಡು- ಹೆಣ್ಣಿನ ನಡುವಿನ ಪ್ರೀತಿಯ ಸಂಬಂಧ ಅದೊಂದು ವಿಸ್ಮಯ ಲೋಕ. ಅದರೊಳಗಿನ ಪಯಣ ಒಂದು ಅದ್ಭುತ ಯಾನ. ಅಲ್ಲಿ ಒಮ್ಮೊಮ್ಮೆ ಮಳೆಯೂ ಇರುತ್ತದೆ. ಕಾಮನಬಿಲ್ಲೂ ಮೂಡುತ್ತದೆ. ಗೊತ್ತಲ್ವಾ… ಕಾಮನಬಿಲ್ಲು ಕಾಣಬೇಕು ಅಂದ್ರೆ ಮಳೆ ಬರಬೇಕು, ಬಿಸಿಲು ಇರಬೇಕು. ಹಾಗೆನೇ ಪ್ರೀತಿ ಉಳಿಬೇಕು ಅಂದ್ರೆ ಸಂಬಂಧದೊಳಗೆ ನಂಬಿಕೆನೂ ಇರಬೇಕು, ತ್ಯಾಗನೂ ಇರಬೇಕು. ಹಾಗಾಗಿ ನಂಬಿಕೆಯಲ್ಲಿ ರೂಪುಗೊಂಡ ಪ್ರೀತಿ ಕಳೆದುಕೊಳ್ಳುವುದಕ್ಕೆ ಸಾಧ್ಯ ಇಲ್ಲ, ಕಳೆದುಕೊಂಡ ಪ್ರೀತಿನ ಮರೆಯೋದಕ್ಕೂ ಸಾಧ್ಯ ಇಲ್ಲ. ಬದುಕಿರುವವರೆಗೆ ಪ್ರೀತಿ ’ಪ್ರೀತಿ’ಯಾಗಿ ಉಳಿಯದೇ ಹೋದರೂ ನೆನಪಾಗಿ ಕಾಡುವುದು ಖಂಡಿತ. ಮತ್ತಷ್ಟು ಓದು