ಏನ್ ಹುಡ್ಗಿರೋ…!!!
– ಶಶಾ೦ಕ.ಕೆ
ಮೊದಲನೆ ಮಹಡಿಯಲ್ಲಿದ್ದ ನನ್ನ ಕೋಣೆಯ ಕಿಟಕಿಯಿ೦ದ ಒಳಗೆ ಚಿಮ್ಮುತ್ತಿದ್ದ ಮಳೆಯ ಹನಿಗಳು ಯಾವ ತರಹ ರೇಜಿಗೆ ಹುಟ್ಟಿಸಿದವೆ೦ದರೆ, ಎದ್ದು ಕಿಟಕಿ ಬಾಗಿಲು ಹಾಕಬೇಕನ್ನುವ ಮಟ್ಟಿಗೆ. ಮಧ್ದ್ಯಾನ್ಹ ೨ ಗ೦ಟೆಗೇ ಸ೦ಜೆ ಆರು ಗ೦ಟೆ ಆದ ಹಾಗಿತ್ತು. ಮು೦ಗಾರು ಮಳೆಯ ಮೊದಲ ಹನಿಗಳು ಬೀಳುತ್ತಿದ್ದ ಹಾಗೇ ಹೋರಗೋಡಿ ನಿಲ್ಲುತ್ತಿದ್ದವನು ನಾನೇ? ಕಿಟಕಿಯ ಹತ್ತಿರ ಹಾಸಿದ ಹಾಸಿಗೆ ಹಾಳಾಗಿ ಹೋಗುತ್ತೆ ಕಣೊ ಎ೦ದು ಅಮ್ಮ ಬಯ್ಯುತ್ತಿದ್ದರೂ, ತೆರೆದ ಕಿಟಕಿಯಿ೦ದ ಮಳೆಯ ಹನಿಗಳ ಚಿಟಪಟ ಸದ್ದು ಕೇಳುವ ಸಲುವಾಗಿ ಅಮ್ಮನೊಡನೆ ಜಗಳವಾಡಿ ಕಿಟಕಿಗಳನ್ನು ತೆರೆದು ಮಣ್ಣಿನ ವಾಸನೆಯ ಸುಗ೦ಧ ಹೀರುತ್ತಿದ್ದದ್ದು ನಾನೇ? ಎನ್ನುವ ಮಟ್ಟಿಗೆ ಈಗ ಬದಲಾಗಿದ್ದೇನೆ. ತಬಲಾ, ಕೀಬೋರ್ಡ್, ಶಾಸ್ತ್ರೀಯ ಸ೦ಗೀತ ಎ೦ದು ಹುಚ್ಚು ಹಚ್ಚಿಸಿಕೊ೦ಡು ತಿರುಗುತ್ತಿದ್ದವನು ನಾನ? ಒ೦ದು ಕಾಲದಲ್ಲಿ ಮನೆಯಲ್ಲಿದ್ದಾಗೆಲ್ಲಾ World-space Satellite Radio ನಲ್ಲಿ ಶಾಸ್ತ್ರೀಯ ಸ೦ಗೀತ ವಾಹಿನಿಯನ್ನು ಕೇಳುತ್ತಿದ್ದವನು ನಾನ? ರೇಡಿಯೊದಲ್ಲಿ ನನ್ನ ನೆಚ್ಚಿನ ಪ೦.ಹರಿಪ್ರಸಾದ್ ಚೌರಾಸಿಯಾ ಅವರ ಸ೦ಗೀತ ಬರುತ್ತಿದ್ದರೂ ಅದನ್ನ ಕೇಳುವದಿರಲಿ ಅಲ್ಲಿ೦ದ ಎದ್ದು ಹೊರಟುಬಿಟ್ಟೆ.
ಮೊನ್ನೆ ಅಮ್ಮ ತರಕಾರಿ ತೊಗೊ೦ಬಾ ಎ೦ದು ಹೇಳಿದ್ದು, ತರಕಾರಿ List ಹಾಗು ಹಣ ಕೊಟ್ಟದ್ದು ಮಾತ್ರ ನೆನಪಿತ್ತೇ ಹೊರತು, ಮತ್ತೆ ನನಗೆ ನಾನೆಲ್ಲಿದ್ದೇನೆ ಎನ್ನುವ ಪ್ರಜ್ನೆ ಬ೦ದಿದ್ದು ತರಕಾರಿ ಮಾರ್ಕೆಟ್ ದಾಟಿ ಮು೦ದಿನ ರಸ್ತೆಯಲ್ಲಿ ಬಸ್ ಒ೦ದರ ಡ್ರೈವರ್ ಜೋರಾಗಿ ಹಾರ್ನ್ ಮಾಡಿ ಅವನ Dictionary ನಲ್ಲಿದ್ದ ಎಲ್ಲಾ ಅವಾಚ್ಯ ಶಬ್ಢಗಳನ್ನು ಬಳಸಿ ಬೈದಾಗಲೇ. ಇದಕ್ಕೆಲ್ಲಾ ಕಾರಣ “ಅವಳೇ” ಎ೦ದು ಯೊಚನೆ ಮಾಡ್ತಿದ್ದಾಗ “ಅಜಯ್, ಆಗಿ೦ದ ಊಟಕ್ಕೆ ಕರಿತಿದಿನಿ ಇಲ್ಲಿ ಕೂತ್ಕೊ೦ಡು ಏನ್ ಮಾಡ್ತಿದಿಯೊ?” ಎ೦ದು ಅಮ್ಮ ಕೂಗಿದಾಗಲೆ ನನಗೆ ಎಚ್ಚರ ಆಗಿದ್ದು. ಹೇಳಿಕೊಳ್ಳಕ್ಕೆ “ಅವಳು” ನನ್ನ Best Friend. ಮತ್ತಷ್ಟು ಓದು 
ಕನ್ನಡ ಕಲಿಕೆಯ ಆಸಕ್ತರಿಗೆ
– ಬನವಾಸಿ ಬಳಗ
ನಾಡಿನ ಹಿರಿಯ ನುಡಿಯರಿಗರಾದ ಡಾ|| ಡಿ. ಎನ್. ಶಂಕರಬಟ್ಟರು ಕನ್ನಡದ ನುಡಿಯರಿಮೆ (ಬಾಶಾವಿಗ್ನಾನ) ಸೊಲ್ಲರಿಮೆ (ವ್ಯಾಕರಣ) ಮತ್ತು ಪದಕಟ್ಟಣೆ (ಪದರಚನೆ) ಕುರಿತಂತೆ ಆಳವಾಗಿ ಅದ್ಯಯನ ನಡೆಸಿ ಈ ವಲಯಗಳಲ್ಲಿ ಸಂಶೋದನೆಗೆ ಹೊಸದೊಂದು ದಾರಿಯನ್ನು ಕಟ್ಟಿದ್ದಾರೆ.
ಈಗ ಅವರ ಕೈಕೆಳಗೆ ಅವರಿಂದಲೇ ಈ ವಿಶಯಗಳ ಬಗ್ಗೆ ಕಲಿಯುವ ಮತ್ತು ಅವರ ಸಂಶೋದನೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಒಂದು ಚಿನ್ನದಂತಹ ಅವಕಾಶವನ್ನು ಬನವಾಸಿ ಬಳಗ ನಿಮ್ಮ ಮುಂದೆ ತಂದಿದೆ. ಈ ಕಾರ್ಯಕ್ರಮದ ವಿವರಗಳನ್ನು ಕೆಳಗೆ ಕೊಡಲಾಗಿದೆ.
ಕಾರ್ಯಕ್ರಮದ ಇಟ್ಟಳ
ಈ ಕಾರ್ಯಕ್ರಮದ ಅಂಗವಾಗಿ ತಲಾ ಒಂದು ವರ್ಶದ ಅವದಿಯ ನಾಲ್ಕು ಹಮ್ಮುಗೆ (ಯೋಜನೆ) ಗಳನ್ನು ಏರ್ಪಡಿಸಲಾಗಿದೆ. ಮೂವರು ಶಿಬಿರಾರ್ತಿಗಳು ಸೇರಿ ಒಂದು ಹಮ್ಮುಗೆಯನ್ನು ಮಾಡಬೇಕಾಗುತ್ತದೆ. ಹಮ್ಮುಗರಿಗೆ ಡಾ||. ಡಿ. ಎನ್. ಶಂಕರಬಟ್ಟರು ತಾವೇ ಮಾರ್ಗದರ್ಶನ ನೀಡುತ್ತಾರೆ. ಹಮ್ಮುಗೆಗಳ ವಿಶಯಗಳು ಹೀಗಿವೆ:
ನನ್ನ ಕನಸಿನ ಹುಡುಗಿ
– ನವನೀತ್ ಪೈ
ನಾನು ನನ್ನ ಕನಸಿನ ಲೊಕದ ಚಕ್ರವರ್ತಿ. ಕನಸಿನಲ್ಲಿ ನನ್ನ ಮಹಾರಾಣಿಯು ಆಗಮಿಸುತ್ತಿರುವಾಗ ಭೀಕರ ಗುಡುಗಿನ ಆರ್ಭಟ ನನ್ನನ್ನು ಎಚ್ಚರಿಸಿತು. ಈ ನನ್ನ ನತದೃಷ್ಟ ಕಣ್ಣುಗಳು ಅವಳ ಆ ಸುಂದರ ಮುಖಕಮಲಗಳನ್ನು ನೋಡಲು ವಿಫಲವಾದವು. ಆಕೆ ಯಾರಿರಬಹುದು ಎಂದು ಯೋಚಿಸುವಾಗ ಪುನಃ ಗುಡುಗಿನ ಆರ್ಭಟ. ಈಗ ಕರೆಂಟ್ ಕೂಡ ಹೋಯಿತು. ನನ್ನ ಕಲ್ಪನಾ ಸಾಮ್ರಾಜ್ಯಕ್ಕೆ ಹೋಗಲು ಈ ಕತ್ತಲೆಯೇ ದಾರಿದೀಪವಾಯಿತು. ಒಂದು ಮೇಣದ ಬತ್ತಿಯನ್ನು ಹಚ್ಚಿ ಅದರ ಜ್ವಾಲೆಯಲ್ಲೇ ಅವಳ ಆ ಸುಂದರ ಮುಖವನ್ನು ಅರಸುತ್ತಿದ್ದೆ. ಅಲ್ಲೇ ಇದ್ದ ಮಂಚದ ಮೇಲೆ ಮಲಗಿ ಕಾರ್ಮೊಡದ ಹಿಂದೆ ಅವಿತಿರುವ ಚಂದಿರನನ್ನು ನೋಡಲು ಯತ್ನಿಸುತ್ತಾ ಅವಳ ಮುಖವನ್ನು ಊಹಿಸಿದೆ. ಬಹುಶಃ ಚಂದಿರನೇ ಎಸೆದ ಮಿಂಚಿನ ಚಾವಟಿ ನನ್ನ ಕನಸನ್ನು ಪುನಃ ಭಗ್ನಗೊಳಿಸಿತು. ಅವಳ ಬಗ್ಗೆ ಯೋಚಿಸುತ್ತಾ ರೆಪ್ಪೆಗಳು ಮುಚ್ಚಿಕೊಂಡವು ಆದರೆ ಮನಸಿನ್ನೂ ಜಾಗೃತವಾಗೇ ಇತ್ತು.
ನನ್ನ ಮೊದಲ ದಿನದ ಕಾಲೇಜು ಒಂದು ರೀತಿಯ ಹೊಸ ಉತ್ಸಾಹವನ್ನೂ, ಭಯವನ್ನೂ ಒಟ್ಟಿಗೆ ಮೂಡಿಸಿತು. ಕೋಟ್ಯಾಂತರ ನಕ್ಷತ್ರಗಳ ಮಧ್ಯೆ ಚಂದಿರನೊಬ್ಬನೇ ಹೇಗೆ ಪ್ರಕಾಶಿಸುತ್ತಾನೋ ಹಾಗೆ ನೂರಾರು ಹುಡುಗಿಯರ ನಡುವೆ ಅವಳೊಬ್ಬಳೇ ನನ್ನನ್ನು ಆಕರ್ಷಿಸಲು ಸಫಲಳಾದಳು.
ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ
(ಇತ್ತೀಚೆಗೆ ಫೇಸ್ ಬುಕ್ ನಡೆಯಿತು ಎನ್ನಲಾದ ವಿವಾದ ಕುರಿತು ನಿಲುಮೆ ತಂಡದ ವಿಜಯ್ ಹೆರಗು ಅವರು ವಿವಾದಿತ ವ್ಯಕ್ತಿ ರಾಬಿನ್ ಚುಗ್ ರನ್ನು ಸ್ವತಃ ಸಂಪರ್ಕಿಸಿ ಮಾತಾಡಿ ಅದರ ವಿವರಗಳನ್ನು ದಾಖಲಿಸಿದ ಲೇಖನವಿದು. -ನಿಲುಮೆ)

ಪಕ್ಯ…!
– ಹರೀಶ್ ಶೆಟ್ಟಿ, ಶಿರ್ವ
ಪಕ್ಯ…ಪಕ್ಯ ನನ್ನ ಬಿಲ್ಡಿಂಗ್ನಲ್ಲಿ ಗ್ರೌಂಡ್ ಫ್ಲೂರ್ ನಲ್ಲಿ ಇರುತಿದ್ದ. ಅವನ ತಂದೆ ದೊಡ್ಡ ಕುಡುಕ ಹಾಗು ಪ್ರಯೋಜನ ಇಲ್ಲದವ, ಪಕ್ಯನ ತಾಯಿ ಅಲ್ಲಿ ಇಲ್ಲಿ ದುಡಿದು ಹೇಗಾದರೂ ಜೀವನ ಸಾಗಿಸುತಿದ್ದರು. ಪಕ್ಯ ನನ್ನಿಂದ ಎರಡು ಮೂರೂ ವರುಷ ದೊಡ್ಡವ. ಪಕ್ಯ ಚಿಕ್ಕಂದಿನಿಂದಲೂ ಮಂದ ಬುದ್ದಿ (Special Abnormal child), ಜೀವ ದೊಡ್ಡದಾದರೂ ಅವನ ಬುದ್ದಿ ಬೆಳವಣಿಗೆ ಆಗಲಿಲ್ಲ, ಪಕ್ಯನಿಗೆ ಇಬ್ಬರು ತಂಗಿಯರಿದ್ದರು . ೧೨ ವರುಷ ದಲ್ಲಿಯೇ ಪಕ್ಯನ ಜೀವ ೬ ಫೀಟ್ ಉದ್ದ ಆಗಿತ್ತು, ಆದರೆ ಅವನ ಬುದ್ದಿ ಚಿಕ್ಕ ಮಕ್ಕಳ ಹಾಗೆ. ಪಕ್ಯ ಇಡಿ ದಿನ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ತಿರುಗುತ ಇರುತ್ತಿದ, ಅವನ ತಾಯಿ ಹೊಟ್ಟೆ ಪಾಡಿಗಾಗಿ ದುಡಿಯಲ್ಲಿಕೆ ಹೋಗುತತ್ತಿದ್ದಳು, ಅವನ ತಂದೆಗೆ ಕುಡಿಯುದರಲ್ಲಿ ಪುರ್ಸ್ಹೊತ್ತು ಇರುತ್ತಿರಲಿಲ್ಲ .
ಹಣ ಕೊಟ್ಟು ಅತಿಥಿಯಾಗಿ..!
ಅರೆಹೊಳೆ ಸದಾಶಿವ ರಾವ್
ಆಶ್ಚರ್ಯವಾಗಬಹುದು ನಿಮಗೆ ಈ ಲೇಖನದ ರ್ಶೀಕೆ ನೋಡಿ. ಇದು ಇತ್ತೀಚಿನ ಒಂದು ಹವ್ಯಾಸವಾಗಿ ಬಿಟ್ಟಿದೆ. ಇತ್ತೀಚೆಗೆ ನನಗೊಂದು ಸಭೆಗೆ ಅತಿಥಿಯಾಗಿ ಭಾಗವಹಿಸಲು ಕರೆ ಬಂತು. ಸಂತಸದಿಂದ ಒಪ್ಪಿಕೊಂಡೆ. ಅಂತಹಾ ವಿಶೇಷ ವ್ಯಕ್ತಿ ನಾನಲ್ಲ ಎಂಬ ಅರಿವಿದ್ದೂ ಒಪ್ಪಿಕೊಂಡೆ. ಒಂದು ವಾರ ಕಳೆದಿತ್ತು. ಆಯೋಜಕರಿಂದ ಮತ್ತೆ ಕರೆ ಬಂತು. ಅತಿಥಿಯಾಗಿ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು. ಮುಂದುವರಿದು ಕಾರ್ಯಕ್ರಮದ ಒಟ್ಟೂ ಖರ್ಚಿನ ಬಗ್ಗೆ ನಾನು ಕೇಳದೆಯೇ ಹೇಳುತ್ತಾ, ನಿಮ್ಮಿಂದ ನಾವು ಕನಿಷ್ಟ ಇಂತಿಷ್ಟು ನಿರೀಕ್ಷಿಸುತ್ತಿದ್ದೇವೆ ಎಂದರು. ಒಮ್ಮೆ ಆಶ್ಚರ್ಯವಾದರೂ, ನಾನು ಅತಿಥಿಯಾಗಿ ಬರುತ್ತಿದ್ದೂ, ನಾನೇ ವಂತಿಗೆ ನೀಡಬೇಕಾದ ಅನಿವಾರ್ಯತೆಯ ಬಗ್ಗೆ ಪ್ರಶ್ನಿಸಿದೆ. ನಾವು ಇದೇ ಸಂಪ್ರದಾಯ ಪಾಲಿಸುತ್ತಿದ್ದೇವೆ ಎಂಬ ಉತ್ತರ ಬಂತು. ಕ್ಷಮಿಸಿ, ನಾನು ಈ ಸಂಪ್ರದಾಯ ಪಾಲಿಸುವುದಿಲ್ಲ ಎಂದೆ. ಸರಿ, ಮತ್ತೆ ಸಂಪರ್ಕಿಸುತ್ತೇವೆ ಎಂದು ಫೋನ್ ಇಟ್ಟರು… ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ನಾಪತ್ತೆ!
ಇದು ಇತ್ತೀಚೆಗೆ ಬೆಳೆದು ಬಂದಿರುವ ಸಂಪ್ರದಾಯ. ಇತ್ತೀಚೆಗೆ ನಾವೂ ಒಂದು ಕಾರ್ಯಕ್ರಮ ಆಯೋಜಿಸಿದ್ದೆವು. ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದ್ದ ಒಬ್ಬರಲ್ಲಿ ನಾವು ಅತಿಥಿಯಾಗಿ ಬರುವಂತೆ ವಿನಂತಿಸಿದೆವು. ನಿರ್ದಿಷ್ಠ ದಿನಾಂಕದಂದು ಅವರಿಗೆ ಬೇರಾವುದೋ ಕಾರ್ಯಕ್ರಮ ಇದ್ದುದಕ್ಕೆ ಬರಲಾಗುವುದಿಲ್ಲ ಎಂದರು. ಸರಿ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾದರೂ ಬರುವಂತೆ ಅವರನ್ನು ವಿನಂತಿಸಿದೆವು. ಅದಕ್ಕೆ ಥಟ್ಟಂತ ಆ ವ್ಯಕ್ತಿ ಆಗದು, ಆ ದಿನ ನಾನು ಫ್ರೀ ಆಗಿದ್ದರೂ, ಬರಲಾಗದು, ನನ್ನ ‘ಸ್ಥಾನ ಮಾನ’ ನೋಡಬೇಕಲ್ಲವೇ ಎಂದು ಬಿಟ್ಟರು!!. ಕೊನೆಗೆ ಸರಿ ಎಂದು ನಾವು ಹೋದ ದಾರಿಗೆ ಸುಂಕವಿಲ್ಲದಂತೆ ಮರಳ ಹೊರಟಾಗ, ಮುಂದೆ ಏನಾದರೂ ಇಂತಾದ್ದೇ ‘ದೊಡ್ಡ’ ಮಟ್ಟದ ಕಾರ್ಯಕ್ರಮ ಇದ್ದರೆ ಬನ್ನಿ, ಅತಿಥಿಯಾಗಿಯೂ ಬರುತ್ತೇನೆ ಮತ್ತು ಸ್ವಲ್ಪ ಧನ ಸಹಾಯವನ್ನೂ ಮಾಡುತ್ತೇನೆ ಎಂದರು. ಧನ್ಯೋಸ್ಮಿ ಎಂದುಕೊಂಡೆವು!! ಮತ್ತಷ್ಟು ಓದು 
ಸ್ವಲ್ಪವಾದರೂ ಸಭ್ಯತೆ ಇರಲಿ………!!!

ಮಾರಿಯಮ್ಮ ದೇವರ ಕಾಣಿಕೆ ಡಬ್ಬವೂ – ಮಸಾಲೆ ದೋಸೆಯೂ..!
– ರವಿ ಮುರ್ನಾಡು
ದೇವರ ಕಾಣಿಕೆ ದುಡ್ಡು ತೆಗೆಯುವುದೆಂದರೇನು… ರಕ್ತ ಕಾರಿ ಸತ್ತಾರು…! ಪಕ್ಕದ ಮನೆಯ ಅಮ್ಮುಣ್ಣಿಯಮ್ಮ ಒಮ್ಮೆ ಹೇಳಿದ್ದರು. ಈಗೇನು ಮಾಡುವುದು.? ಕಾಣಿಕೆ ದುಡ್ಡು ತೆಗೆದದ್ದು ಆಯಿತು.. .ಅಲ್ಲೆಲ್ಲಾ ಹಾವುಗಳು ಓಡಾಡುತ್ತವೆ. ನಾನು ನೋಡಿದ್ದೆ. ಭಾರೀ ಉದ್ದದ ಹಾವುಗಳು. ರಾತ್ರಿ ಬಂದರೋ? ಅಳು ಬರುವುದೊಂದೇ ಬಾಕಿ. ಅಜ್ಜಿ- ಚಿಕ್ಕಮ್ಮ ಬೆಲ್ಲದ ಮಿಠಾಯಿಗೆ ಕೊಡುವ ಹಣವನ್ನು ಒಟ್ಟು ಸೇರಿಸಿ ವಾಪಾಸು ಹಾಕುವುದಾಗಿ ಹೇಳಿದ ಮೇಲೆ ನಿದ್ದೆ ಬಂತು.
ತೆಗೆದದ್ದು ಒಂದು ರೂಪಾಯಿ..! ಅಜ್ಜಿ ಸೀರೆ ಸೆರಗಿನ ಅಂಚಿನಲ್ಲಿ ದುಡ್ಡು ಇಟ್ಟಿರುತ್ತಾರೆ. ತೋಟದಲ್ಲಿ ಕೆಲಸ ಮಾಡುವಾಗ ” ಟೀ” ಕುಡಿಯಲು ಐವತ್ತು ಪೈಸೆ, ಇಪ್ಪತ್ತೈದು ಪೈಸೆ ಹಾಗೆ. ತೆಗೆದರೆ ಹೊಡೆತ ಬೀಳುವುದಂತು ಖಂಡಿತಾ. ದೇವರ ಕಾಣಿಕೆ ದುಡ್ಡು ವಿಷಯ ಗೊತ್ತಾದರೋ?. ಬೆಳಿಗ್ಗೆ ಕಣ್ಣು ಬಿಟ್ಟಾಗಲೂ ಇದೇ ಆಲೋಚನೆ.
ದೊಡ್ಡ ಮಾವ ವೀರಾಜಪೇಟೆಯ ಯಾವುದೋ ಹೋಟೇಲ್ಲಿನಲ್ಲಿ ಸಪ್ಲಯರ್ ಆಗಿದ್ದ. ಸಂತೆ ದಿನ ಭಾನುವಾರ ಎರಡು ತಿಂಗಳಿಗೊಮ್ಮೆ ಬರುವುದು. ಆ ಒಂದು ಸಂತೆ ದಿನ ಅಜ್ಜಿ, ಚಿಕ್ಕಮ್ಮ ಮತ್ತು ನಾನೂ ಸಂತೆಗೆ ಹೋಗಿದ್ದಾಗ, ಅವನೂ ಬಂದಿದ್ದ. ಎಲ್ಲಾ ಸಾಮಾನು ಖರೀದಿಸಿದ ಮೇಲೆ ನಾವು ಮಸಾಲೆ ದೋಸೆ ತಿಂದದ್ದು. ಸುಂಟಿಕೊಪ್ಪದ ಗಣೇಶ ಸಿನೇಮಾ ಥಿಯೇಟರ್ ಪಕ್ಕದ ಕ್ಯಾಂಟೀನಿನಲ್ಲಿ. ಭಾರೀ ಅಗಲದ ದೋಸೆ ಅದು. ತುಪ್ಪ ಹಾಕಿ ಮಾಡಿದ್ದು. ಜೊತೆಗೆ ರುಚಿರುಚಿಯಾದ ಆಲೂಗೆಡ್ಡೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿಯೂ. ಈ ರುಚಿಯನ್ನು ನೆನೆದು ರಾತ್ರಿ ಊಟವೂ ಸಪ್ಪೆ..!. ಅದೇ ಮಸಾಲೆ ದೋಸೆಯ ಕನಸುಗಳು. ಮತ್ತಷ್ಟು ಓದು 
ಕನ್ನಡಿಗರು ಬಿಟ್ಟಿ ಬಿದ್ದಿಲ್ಲ ಅನ್ನುವುದು ನೆನಪಿರಲಿ…!
– ರಾಕೇಶ್ ಶೆಟ್ಟಿ
ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ನಮ್ಮ ಬೆಂಗಳೂರಿಗೆ ಬಂದು, ಇಲ್ಲಿನ ಅನ್ನ,ನೀರು ಕುಡಿದು ’ಕನ್ನಡ ಕಲಿಯಿರಿ’ ಅಂದರೆ ನಮ್ಮ ವಿರುದ್ಧವೇ ತಿರುಗಿ ಬಿದ್ದು ಕನ್ನಡ/ಬೆಂಗಳೂರಿನ ಬಗ್ಗೆ ದ್ವೇಷಕಾರುವುದು ಒಂದು ರೀತಿಯ ಸುಲಭದ ತುತ್ತಾಗಿದೆ.
ಮೊನ್ನೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ “ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರವಾಹದಲ್ಲಿ ಕರ್ನಾಟಕ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವವರು ಇನ್ನು ಮುಂದೆ ಪ್ರಾಥಮಿಕ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಲಿದೆ” ಅನ್ನುವ ಪ್ರಸ್ತಾವನೆಯೊಂದನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು.ಇದೇ ವಿಷಯವನ್ನ ಬೆಂಗಳೂರು ಮಿರರ್ ಅನ್ನುವ ಇಂಗ್ಲೀಷ್ ಪತ್ರಿಕೆ ಅನ್ಯ ಭಾಷಿಗರನ್ನ ಉದ್ರೇಕಿಸುವ ರೀತಿಯಲ್ಲಿ ಬರೆದಿದೆ.ಅಲ್ಲಿನ ಪ್ರತಿಕ್ರಿಯೆಗಳನ್ನ ನೋಡಿದರೆ ಬರೆದವರನ್ನ ಅಟ್ಟಾಡಿಸಿ ಬಡಿಯಬೇಕು ಅನ್ನಿಸುತ್ತದೆ.
ಈ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾದರೆ, ಈ ನೆಲದ ಭಾಷೆ,ಸಂಸ್ಕೃತಿ,ಆಚಾರಗಳಿಗೆ ಬೆಲೆ ಕೊಡಬೇಕು ಅನ್ನುವ ಕಾಮನ್ ಸೆನ್ಸ್ ಇವರಲ್ಲಿ ಇಲ್ಲ ಅನ್ನುವುದಕ್ಕಿಂತ, ಯಾವುದಕ್ಕೂ ಪ್ರತಿಕ್ರಿಯಿಸಿದ ಕನ್ನಡಿಗರ ಧೋರಣೆಯನ್ನೆ ಇಂತ ಜನಗಳು ನಮ್ಮ ದೌರ್ಬಲ್ಯ ಅಂದುಕೊಂಡಿದ್ದಾರೆ.ಇಲ್ಲದಿದ್ದರೆ ಫ಼ೇಸ್ಬುಕ್ಕಿನಲ್ಲಿ ಹಾಲಿಡೇಐಕ್ಯು ಕಂಪೆನಿಯ ಉದ್ಯೋಗಿ ರಾಬಿನ್ ಚುಗ್ ಅನ್ನುವ ಪರದೇಶಿ ಕನ್ನಡಿಗರಿಗೆ ಫ಼ಕ್ ಆಫ಼್ ಅನ್ನುತ್ತಿರಲಿಲ್ಲ ಅಲ್ಲವಾ? ಆ ಕಿಡಿಗೇಡಿ ಕೆಲಸ ಮಾಡುವ ಕಂಪೆನಿಯ ವಿಳಾಸವಿಲ್ಲಿದೆ. ಅವರಿಗೊಂದು ಮಿಂಚೆ ಬರೆದು (ಭಾಷೆ ವಿಷಯ ಮುಟ್ಟಿಸುವಂತಿರಲಿ,ಬೈಗುಳ ದಯವಿಟ್ಟು ಬೇಡ) ಈ ಮಣ್ಣಿನ ಭಾಷೆಯ ಬಗ್ಗೆ ಗೌರವ ಇಲ್ಲದ ಇಂತವರನ್ನ ನಿಮ್ಮ ಕಂಪೆನಿಯಲ್ಲಿ ಇಟ್ಟುಕೊಳ್ಳುವಿರಾ ಅಂತಲೇ ಕೇಳಬೇಕು.ಮೊದಲೆ ಅವನಿಗೆ ಇಲ್ಲಿನ ರೀತಿ ರಿವಾಜುಗಳ ಬಗ್ಗೆ ತಕರಾರುಗಳಿವೆ.ಇಂತ ಹುಡುಗನನ್ನ ವಾಪಸ್ ಅವನ ಮನೆಗೆ ಕಳಿಸೋದು ನಮ್ಮ ಕರ್ತವ್ಯವಲ್ಲವೇ ಗೆಳೆಯರೇ?
ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ ಏನೋ..!!
– ಕೆ.ಎಸ್ ರಾಘವೇಂದ್ರ ನಾವಡ
ನೀವು ಏನಾದ್ರೂ ಹೇಳಿ… ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹವನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್ ಗೆ ಆದೇಶ ನೀಡುವುದರ ಮೂಲಕ ಅದಕ್ಕೊ೦ದು ಗತಿ ಕಾಣಿಸಿದರು! ಇ೦ದು ರಾಮ್ ದೇವ್ ಹಣೆಬರಹವನ್ನು ಕೇ೦ದ್ರ ಸರ್ಕಾರ ಈ ರೀತಿ ಬರೆಯಿತು!! ಒಟ್ಟಾರೆ ನಾವು ಬ್ರಿಟೀಶ್ ಸತ್ತೆಯ ಕಾಲಕ್ಕೆ ಹೋಗುತ್ತಿದ್ದೇವೇನೋ ಎ೦ಬುದು ನನ್ನ ಸ೦ಶಯ!!
ಭರತ ಭೂಮಿಯಲ್ಲಿ ಬ್ರಿಟೀಶ್ ಆಡಳಿತದಿ೦ದ ಮುಕ್ತರಾಗ ಬಯಸಿ ಸ್ವಾತ೦ತ್ರ್ಯದ ಕನಸು ಕ೦ಡು ಅದಕ್ಕಾಗಿ ಹೋರಾಡಿದವರು- ಶೋಷಿತ ವರ್ಗ – ತಮ್ಮ ಬೇಡಿಕೆಯನ್ನು ನ್ಯಾಯಬಧ್ಧವಾಗಿ ಕೇಳುವವರು- ಜನ ಕಲ್ಯಾಣಕ್ಕಾಗಿ ಹಾತೊರೆದು ಮುನ್ನುಗ್ಗುವವರು – ರಾಜಕೀಯ ವ್ಯವಸ್ಥೆಯನ್ನು ಸುಧಾರಿಸ ಬಯಸುವವರು ಮು೦ತಾದವರ ಹೋರಾಟದ ಅ೦ತ್ಯ ಹೀಗೇ!! ಸರಿ ಸುಮಾರು ಬ್ರಿಟೀಷರಿ೦ದ ಆರ೦ಭವಾದ ಈ ಪ್ರಜೆಗಳ ಧ್ವನಿಯನ್ನು ಅವರುಗಳ ಗ೦ಟಲನ್ನೇ ಹಿಸುಕುವ ಮೂಲಕ ,ಅವರ ಹೋರಾಟಕ್ಕೊ೦ದು ಅನೈತಿಕ ಅ೦ತ್ಯ ನೀಡುವ ಈ ಕ್ರಮ ದುರದೃಷ್ಟವಶಾತ್ ಇಲ್ಲಿಯವರೆವಿಗೂ ಮು೦ದುವರೆದಿದೆ!! ಹಾಗ೦ತ ಎಲ್ಲ ಹೋರಾಟಗಳೂ ಇದೇ ಅ೦ತ್ಯವನ್ನು ಕ೦ಡವೇ ಎ೦ದರೆ ಖಚಿತವಾದ ಉತ್ತರ ನೀಡಲಿಕ್ಕಾಗುವುದಿಲ್ಲ.. “ಕೆಲವು ಸಮಸ್ಯೆಗಳು ತಾವಾಗೇ ಸೃಷ್ಟಿಯಾದರೆ ಕೆಲವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ“ ಎ೦ಬ ನಾವಡ ಉವಾಚವೊ೦ದಿದೆ.. ಅದರ ಪ್ರಕಾರ ಪ್ರಸಕ್ತ ಭರತಭೂಮಿಯಲ್ಲಿಯೂ ಏಕೆ ಸಮಸ್ತ ಜಗತ್ತಿನಲ್ಲಿಯೂ ಸರ್ಕಾರ ಗಳು ಹಾಗೂ ಜನತೆಗಳ ವಿಚಾರದಲ್ಲಿ ನಡೆಯುತ್ತಿರುವುದು ಇದೇ!!







