ವಿಷಯದ ವಿವರಗಳಿಗೆ ದಾಟಿರಿ

Archive for

31
ಮೇ

ಆ ಅಗೋಚರ ‘ಫ್ಯಾಂಟಮ್’ ವ್ಯಕ್ತಿಗೆ ಒಂದು ಸೆಲ್ಯೂಟ್

– ರಾಘವೇಂದ್ರ ಸುಬ್ರಹ್ಮಣ್ಯ

ರಾಮೇಶ್ವರನಾಥ್ ಖಾವ್ಹಿಂದಿಯ ‘ಡಾನ್’ ಚಿತ್ರದಲ್ಲಿ ವರದಾನ್ ಎಂಬ ಪಾತ್ರದ ಪರಿಚಯ ಮಾಡಿಕೊಡುವಾಗ ‘ಪೊಲೀಸ್ ಇಲಾಖೆಯಬಳಿ ಈತನ ಯಾವುದೇ ಸ್ಪಷ್ಟವಾದ ಫೋಟೋ ಇಲ್ಲ’ ಎನ್ನುವ ಮಾತು ಬರುತ್ತದೆ. ನಾನು ಅದನ್ನುನೋಡುವಾಗ ತಲೆಕೆಡಿಸಿಕೊಂಡಿದ್ದೆ. ಅದು ಹೇಗೆ ಒಬ್ಬ ವೃತ್ತಿನಿರತ ಅಪರಾದಿಯ ಒಂದೇ ಒಂದುಚಿತ್ರ ಅಥವಾ ಚಹರೆಯಾಗಲೀ ಪೊಲೀಸ್ ಇಲಾಖೆಯ ಬಳಿ ಇಲ್ಲದಿರಲು ಸಾಧ್ಯ? ಹೆಸರು ಗೊತ್ತಿದ್ದಮೇಲೆ, ಒಬ್ಬ ವ್ಯಕ್ತಿಯ ಇರುವಿಕೆಯ ಬಗ್ಗೆ ಗೊತ್ತಿದ್ದ ಮೇಲೆ, ಅದು ಹೇಗೆ ಬೇರೇನೂಗೊತ್ತಿಲ್ಲದಿರಲು ಸಾಧ್ಯ!? ಅಂತೆಲ್ಲಾ ಮೈಪರಚಿಕೊಂಡಿದ್ದೆ. ಇದೇ ವಿಚಾರದಲ್ಲಿ ನೂರಾರುಲೇಖನಗಳನ್ನು ಓದಿದ ನಂತರ ಗೊತ್ತಾಗಿದ್ದೇನೆಂದರೆ, ವರದಾನ್ ಒಬ್ಬನೇ ಅಲ್ಲ, ಜಗತ್ತಿನಲ್ಲಿಇಂತಹುದೇ ವ್ಯಕ್ತಿಗಳು ಬಹಳ ಜನ ಇದ್ದಾರೆ ಎಂದು. ಅದೂ ಅಲ್ಲದೆ ವರದಾನ್ ಕಾನೂನಿನ ಆಚೆಬದಿ ಇದ್ದವ. ಆದರೆ ಕಾನೂನಿನ ಕಡೆಗೇ ಇದ್ದು ತಮ್ಮ ಬಗ್ಗೆ, ತಮ್ಮ ಖಾಸಗೀ ಜೀವನದ ಬಗ್ಗೆಅವನಷ್ಟೇ ರಹಸ್ಯವನ್ನು ಉಳಿಸಿಕೊಂಡು ಬಂದಿರುವವರು ಇದ್ದಾರೆ ಮತ್ತು ಅವರ ದೇಶಗಳಿಗೆಅಂಥವರ ಸೇವೆ ಬಹಳ ದೊಡ್ಡದು ಎಂದೂ ಕೂಡ ತಿಳಿಯಿತು.

ಇಂತವರಲೊಬ್ಬರು ನಮ್ಮ ದೇಶದಮಹಾನ್ ಗೂಡಚಾರ ತಂತ್ರಜ್ಞ ರಾಮೇಶ್ವರನಾಥ್ ಖಾವ್. ಭಾರತದ ಸರ್ಕಾರದ ಅಡಿಯಲ್ಲಿರುವಅತ್ಯಂತ ರಹಸ್ಯಮಯ ಇಲಾಖೆಯಾದ “ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗ (RAW – Research and Analysis Wing) “ದ ಸಂಸ್ಥಾಪಕ ಪಿತಾಮಹ. ಸ್ವತಃ ರಾ ಜಗತ್ತಿನ ಅತ್ಯಂತ ರಹಸ್ಯಮಯರಕ್ಷಣಾ ಇಲಾಖೆ. ಅಮೇರಿಕಾದ CIA ಬಗ್ಗೆಯಾದರೂ ಭಾರತದ ಜನಕ್ಕೆ ಗೊತ್ತಿದೆಯೇನೋ, ಆದರೆ ರಾಬಗ್ಗೆ ವ್ಯಾಪಕವಾಗಿ ತಿಳಿದಿರಲಿಕ್ಕಿಲ್ಲ, ಇತ್ತೀಚೆಗೆ ಸಲ್ಮಾನನ ‘ಏಕ್ ಥಾ ಟೈಗರ್’ ಚಿತ್ರನೋಡುವವರೆಗೂಎಷ್ಟೋ ಬಾರಿ ಸರ್ಕಾರಗಳು ‘ರಾ’ದ ಇರುವಿಕೆಯ ಬಗ್ಗೆಯೇ ಸ್ಪಷ್ಟಿಕರಣ ನೀಡಿರಲಿಲ್ಲ. ಅದರರಚನೆಯೇ ಹಾಗಿದೆ ಬಿಡಿ. ‘ರಾ’ದ ಬಗ್ಗೆ ಇನ್ನೊಮ್ಮೆ ಯಾವಾಗಲಾದರೂ ಬರೆಯುತ್ತೇನೆ.

ಮೊದಲೇ ಹೇಳಿದಂತೆ ‘ರಾ’ ಅಷ್ಟೊಂದು ರಹಸ್ಯಮಯವಾಗಿದ್ದಮೇಲೆ, ಅದರ ಸಂಸ್ಥಾಪಕ ಕತೆಯೇನೂಬೇರೆಯಲ್ಲ. ಶತ್ರು ರಾಷ್ಟ್ರಗಳಿಗೆ ಮತ್ತವುಗಳ ಗೂಡಚಾರ ಇಲಾಖೆಗೆ ‘ರಾ’ದ ಮುಖ್ಯಸ್ಥ ಯಾರುಮತ್ತವ ನೋಡಲು ಹೇಗಿದ್ದಾನೆ ಎಂಬುದೂ ಬಹಳ ಕಾಲ ತಿಳಿದಿರಲಿಲ್ಲ. 1918ರಲ್ಲಿವಾರಣಾಸಿಯಲ್ಲಿ ಜನಿಸಿದ ಖಾವ್, ಶ್ರೀನಗರದಿಂದ ವಲಸೆಬಂದ ಕಶ್ಮೀರಿ ಪಂಡಿತರ ಕುಟುಂಬದವರು.ಇವರ ತಂದೆತಾಯಿಗಳ ಬಗ್ಗೆ ಯಾವ ಹೆಚ್ಚಿನ ಮಾಹಿತಿಯೂ ಲಭ್ಯವಿಲ್ಲ. ಖಾವ್ ಅವರನ್ನುಬೆಳೆಸಿದ್ದು ಅವರ ಮಾವ ಪಂಡಿತ್ ತ್ರಿಲೋಕಿ ನಾಥ್ ಖಾವ್. ತನ್ನ ಮಾವನವರ ಪ್ರೋತ್ಸಾಹಮತ್ತು ಸಹಾಯದಿಂದ ಒಳ್ಳೆಯ ಹಾಗೂ ಅತ್ಯುನ್ನತ ವಿದ್ಯಾಭ್ಯಾಸ ಪಡೆದ ಖಾವ್, 1940ರಲ್ಲಿ ‘ಗುಪ್ತಚರ ದಳ (I.B – Intelligence Bueareu)’ ದಲ್ಲಿ ಪೊಲೀಸ್ ಸಹಾಯಕಸೂಪರಿಂಟೆಂಡೆಂಟ್ ಆಗಿ ನಿಯುಕ್ತಿಗೊಂಡರು. ಸ್ವಾತಂತ್ರಾನಂತರ ನೆಹರೂರವರ ರಕ್ಷಣಾದಳದಮುಖ್ಯಸ್ಥನಾಗಿ ನಿಯೋಜಿತರಾಗಿ, ಆನಂತರ ಒಂದರ ಮೇಲೊಂದು ರೋಚಕ ಮೆಟ್ಟಿಲುಗಳನ್ನೇರುತ್ತಾಹೋದರು.

ಮತ್ತಷ್ಟು ಓದು »