ವಿಷಯದ ವಿವರಗಳಿಗೆ ದಾಟಿರಿ

Archive for

28
ಏಪ್ರಿಲ್

ಹೊಸ ಕಾದಂಬರಿ : ಕರಣಂ ಪವನ್ ಪ್ರಸಾದರ “ಕರ್ಮ”

 – ನಂದೀಶ್ ಆಚಾರ್ಯ

ಕರ್ಮConcave media co.ಈ ಕಾದಂಬರಿಯನ್ನು ಹೊರತಂದಿದೆ. ನಾಟಕಕಾರರಾದ ಕರಣಂ ಪವನ್ ಪ್ರಸಾದರ ಮೊದಲ ಕಾದಂಬರಿಯಿದು. ಖ್ಯಾತ ಕಾದಾಂಬರಿಕಾರರಾದ ಎಸ್ ಎಲ್ ಭೈರಪ್ಪನವರು ಈ ಕಾದಂಬರಿಯ ಪ್ರಥಮ ಪ್ರತಿಯನ್ನು ಓದಿ ಮೆಚ್ಚಿಕೊಂಡಿದ್ದಾರೆ. ಕಳೆದ ವಾರ ಶತವಾಧಾನಿ ಆರ್ ಗಣೇಶರು ಕಾದಾಂಬರಿಯನ್ನು ಬಿಡುಗಡೆಗೊಳಿಸಿದರು. ನಗರ ಜೀವನದ ಅಭದ್ರ ಭಾವಸ್ಥಿತಿಯಿಂದ ಒಮ್ಮೆಲೆ ತಂದೆಯ ಸಾವಿನ ನಂತರದ ಕಾರ್ಯದಲ್ಲಿ ತೊಡಗುವ ಟೆಕ್ಕಿಯ ಮೂಲಕ ಕಥೆ ಹರಡುಕೊಳ್ಳುತ್ತದೆ.  ನಂತರದ ಹದಿನೈದು ದಿನಗಳಲ್ಲಿ ಆತನಲ್ಲಾಗುವ ನಂಬಿಕೆ ಮತ್ತು ಶ್ರದ್ಧೆಯ ನಡುವಿನ ತೊಳಲಾಟ ಮತ್ತು ಸ್ಥಿತ್ಯಂತರದ ಯಾನವೇ ‘ಕರ್ಮ’
ಅಚಾನಕ್ಕಾಗಿ ಅಪ್ಪಳಿಸಿದ ತಂದೆಯ ಸಾವಿನ ಸುದ್ದಿ ತನಗೆ ಏನೂ ಅಘಾತವನ್ನ ನೀಡದ್ದನ್ನು ಕಂಡು ಕಥಾನಾಯಕ ಮೊದಲಿನಿಂದಲೂ ಗೊಂದಲದಲ್ಲೇ ಎದುರಾಗುತ್ತಾನೆ. ಪ್ರತಿ ಪ್ರಸಂಗದಲ್ಲೂ ತನ್ನನ್ನು ತಾನೇ ಕೆಡವಿಕೊಂಡು ಅನುಭವಿಸುತ್ತಾನೆ. ತನ್ನ ಹುಟ್ಟೂರಿಗೆ ಹೋಗಿ ತನ್ನ ತಮ್ಮ ನರಹರಿ, ತಾಯಿಯನ್ನು ಕೂಡಿ ತಂದೆಯ ಕ್ರಿಯೆಯಲ್ಲಿ ಪಾಲ್ಗೊಳ್ಳುವಲ್ಲಿಯಿಂದ ಕರ್ಮ ಮಜಲು ಬದಲಿಸಿ ತನ್ನ ಮೂಲವಾದವಾದ ನಂಬಿಕೆ ಮತ್ತು ಶ್ರದ್ಧೆ ಎರಡೂ ತೀರ ಬೇರೆ. ನಂಬಿಕೆ ಚಂಚಲ, ಶ್ರದ್ಧೆ ಅಚಲ, ನಂಬಿಕೆಗೆ ಘಾಸಿಯಾಗುತ್ತದೆ, ಶ್ರದ್ಧೆಗೆ ಎಂದೂ ಘಾಸಿಯಾಗುವುದಿಲ್ಲ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಕ್ರಿಯೆ ಮಾಡಿಸುವ ತಂದೆಯ ಸ್ನೇಹಿತ ಶ್ರೀಕಂಠ ಜೋಯಿಸರು ಮತ್ತು ಕಥಾ ನಾಯಕನ ಸಂಭಾಷಣೆಯ ಒಂದು ಪ್ರಸಂಗ ಹೀಗಿದೆ.

“ಇವೆಲ್ಲಾ ನಿಜಾನಾ?’’ ಅಳುಕಿನಿಂದಲೇ ಸುರೇಂದ್ರ ಪ್ರಶ್ನಿಸಿದ. ಭಟ್ಟರು ಹಿಂದಿರುಗಿ ನೋಡುವ ಹೊತ್ತಿಗೆ ಇವನ ಕಂಠ ಕುಸಿದು ಹೋಯಿತು. ಅಲ್ಲೇ ಅಡಕೆ ಮರಕ್ಕೆ ಹಬ್ಬಿಸಿದ್ದ ಏಲಕ್ಕಿ ಗಿಡವನ್ನು ಪರೀಕ್ಷಿಸುತ್ತಾ ನಿಂತ. “ತೋಟ ಮಾರ್ತಾ ಇದೀನಿ ತಗೋತ್ಯಾ ಮಾರಾಯಾ?’’ ಗಿಡವನ್ನು ಮೂಸುತ್ತಿದ್ದ ಸುರೇಂದ್ರ “ನನಗ್ಯಾಕೆ ಭಟ್ಟರೇ?’’ ಎಂದ. “ಈಗ ಅದೇ ಹೊಸ ವಿಚಾರ ಈ ವಾಣಿ ಗಂಡ ಎಲ್ಲಾ  ಮುಂಡುಮೋಚಿ ಈಗ ಇಲ್ಲಿ ತೋಟ ಗೀಟ ಮಾಡ್ಕೊಂಡು ಅದನ್ನೇ ಕಂಪೆನಿ ಮಾಡಿ ದುಡ್ಡು ಮಾಡ್ತಾ ಇದಾನೆ ಅವನು ನಿನ್ನ ಥರಾನೆ ಯಾವುದೋ ಇಂಜಿನಿಯರ್ ನನಗೆ ಸರಿ ಗೊತ್ತಿಲ್ಲ’’ ಭರತನ ಮೇಲಿನ ಉರಿಗೆ ಗಿಡದ ಎಲೆಯನ್ನು ಚಿವುಟಿದ. “ಎಲೆ ಎಂತ ಮಾಡ್ತೋ ನಿಂಗೆ? ಅದೇನೋ ವಿಷಯ ಅಂದ್ಯಲ್ಲ ಏನು?’’ ಆಗಲೇ ಕೇಳಿದೆನೆಲ್ಲ ಅದೇ ಎಂದು ಸುರೇಂದ್ರ ಉತ್ತರಿಸಿದ. “ನಿಜವಾ ಅಂತ ಕೇಳಿದೆ. ಏನು ನಿಜ. ನಾನು ಇರೋದ, ನೀ ಇರೋದ ಅಥವಾ ನಾ ಮನುಷ್ಯಾನ ಏನು? ಸ್ವಷ್ಟ ಕೇಳು, ಈ ಮೈಗಳ್ಳ ಮುಂಡೇವು ಇದಾವಲ್ಲ ಇವರಿಂದ ಅಡಕೆ ಇಳಿಸಕ್ಕೆ ಆಗಿಲ್ಲ. ದುಡ್ಡು ಕೊಟ್ರೂ ಜನ ಬರಲ್ಲ. ದಿನದ ಗಂಜಿ ನಂಬಿದೋರಿಗೆ ಒಂದು ರೂಪಾಯಿ ಅಕ್ಕಿ ಕೊಟ್ರೆ ಇನ್ನೇನ್ ಆಗತ್ತೆ ಹೊಲದ ಕೆಲಸ ತೋಟದ ಕೆಲಸಕ್ಕೆ ಆಳುಗಳೇ ಇಲ್ಲ. ವಯಸ್ಸಲ್ಲಿ ನಾನೇ ಇಳಿಸ್ತಿದ್ದೆ.

ಮತ್ತಷ್ಟು ಓದು »

25
ಏಪ್ರಿಲ್

ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 1

ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ

Social Science Column Logo

ಇಂದಿನ ಪ್ರತಿನಿಧಿತ್ವದ ಬಗ್ಗೆ ವಿಚಾರಮಾಡಬೇಕಾದಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಎದುರಿಸುತ್ತಿರುವಂತಹ ಸವಾಲುಗಳೇನು ಎಂದು ಆಲೋಚಿಸಬೇಕಿದೆ. ಸಹಸ್ರಾರು ವರ್ಷಗಳ ಇತಿಹಾಸವಿರುವಂತಹ ನಮ್ಮ ದೇಶದಲ್ಲಿ ಈ ರೀತಿಯ ಶೋಷಣೆ, ತಾರತಮ್ಯ ಎನ್ನುವಂತದ್ದು ಹಾಸುಹೊಕ್ಕಾಗಿ ಬಂದು, ಅದೊಂದು ಜೀವನ ವಿಧಾನ ಎನ್ನುವ ರೀತಿಯಲ್ಲಿ ಅಂಗೀಕಾರ ಮಾಡಿರುವಂತಹ ದೇಶಗಳಲ್ಲಿ ನಮ್ಮದು ಕೂಡ ಒಂದು. ಅದರ ವಿರುದ್ಧ ಈ ದೇಶದಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಅದರಿಂದಾಗಿ ಇಡೀ ಪ್ರಪಂಚಕ್ಕೆ ಬೆಳಕು ಸಿಕ್ಕಿದೆ. ಆದರೆ ಭಾರತಕ್ಕೆ ಎಷ್ಟು ಸಿಕ್ಕಿದೆ ಎನ್ನುವುದು ಗೊತ್ತಿಲ್ಲ. ಅದು ಬುದ್ಧ ಇರಬಹುದು, ಬಸವೇಶ್ವರರು, ಸ್ವಾಮಿ ವಿವೇಕಾನಂದ, ಪರಹಂಸರು, ಮಹಾತ್ಮ ಗಾಂಧಿ ಇರಬಹುದು, ರಾಜಾರಾಮ್ ಮೋಹನ್ ರಾಯ್, ಲೋಹಿಯಾ, ಅಂಬೇಡ್ಕರ್ ಇಂತವರು ಅನೇಕ ಜನ ಅಥವಾ ಅನೇಕ ವಿಚಾರಧಾರೆಗಳು ಬರಲಿಕ್ಕೆ ಸಾಧ್ಯ ಆಗಿದೆ. ಆದರೆ ಇಲ್ಲಿ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿಕ್ಕೆ ಸಹಾಯ ಆಗಿದೆ ಎನ್ನುವುದನ್ನು ಹೇಳಲಿಕ್ಕೆ ಸಾಧ್ಯ ಆಗುವುದಿಲ್ಲ. ಆದರೆ, ಆಗಬೇಕಾದಂತಹ ಕೆಲಸ ಬಹಳಷ್ಟಿದೆ. ಅಂದರೆ ಇವೆಲ್ಲವೂ ಕೂಡಾ ಕಾನೂನುಗಳ ಮುಖಾಂತರವೇ ಆಗುವುದಿಲ್ಲ ಎನ್ನುವುದು ಕೂಡಾ ನಮ್ಮ ಅನುಭವಕ್ಕೆ ಬಂದಿರುವ ವಿಚಾರ. ಕಾನೂನುಗಳ ಕೊರತೆಯಿಂದ ಈ ದೇಶದಲ್ಲಿ ಜಾತೀಯತೆ ಇದೆ, ಭ್ರ್ರಷ್ಟಾಚಾರ ಇದೆ, ಸ್ವಜನ ಪಕ್ಷಪಾತ ಇದೆ ಎಂದೇನೂ ಅಲ್ಲ. ಕಾನೂನಿನ ಕೊರತೆಯೇನಿಲ್ಲ. ಬ್ರಿಟಿಷರ ಕಾಲದಲ್ಲೇ ಆಗಬೇಕಾದಂತಹ ಕಾನೂನುಗಳೆಲ್ಲಾ ಆಗಿಹೋಗಿವೆ. ಇನ್ನುಳಿದಿರುವಂತಹ ಕೆಲವನ್ನು ಈ ನಾವು ಮಾಡುತ್ತಿದ್ದೇವೆ.

ಆದರೆ ಕಾನೂನಿನ ಪರಿಪಾಲನೆ ಮಾಡುವುದರಿಂದ ಏನು ಪರಿಣಾಮವಾಗುವುದಿಲ್ಲ ಎನ್ನುವುದು ನಮ್ಮ ಜನರಿಗೆ ಗೊತ್ತಿರುವುದರಿಂದ ಸಮಸ್ಯೆಗಳು ಇನ್ನೂ ಕೂಡಾ ಉಳಿದುಕೊಂಡಿರುವುದು ದೊಡ್ಡ ಸಮಸ್ಯೆ. ನಾವು ಯಾವುದನ್ನು ಮಾದರಿ ಪ್ರಜಾಪ್ರಭುತ್ವ ಎಂದು ಹೇಳುತ್ತೇವೆ? ಅದು ಬ್ರಿಟನ್ ಮತ್ತು ಅಮೇರಿಕ. ಅಮೇರಿಕದಲ್ಲೂ ಕೂಡಾ ಸಂವಿಧಾನ ರಚನೆಯಾಗಿ 140 ವರ್ಷಗಳ ಕಾಲ ಅಲ್ಲಿ ಹೆಣ್ಣು ಮಕ್ಕಳಿಗೆ ಮತದಾನದ ಹಕ್ಕನ್ನೇ ನೀಡಿರಲಿಲ್ಲ. ಹಾಗೆಯೇ ಬ್ರಿಟನ್ ನನ್ನು ನಾವು ಕಾರ್ಬನ್ ಕಾಪಿ ಮಾಡಿಕೊಂಡು ಅನುಸರಿಸುತ್ತಿದ್ದರೂ ಸಹ ಅಲ್ಲಿಯೂ ಕೂಡಾ ಸಂವಿಧಾನ ರಚನೆಯಾಗಿ 110 ವರ್ಷಗಳ ಕಾಲ ಮಹಿಳೆಯರಿಗೆ ಮತದಾನದ ಹಕ್ಕನ್ನೇ ನೀಡಿರಲಿಲ್ಲ. ಸ್ವೀಡನ್ ದೇಶದಲ್ಲಿ ಇತ್ತೀಚಿನವರೆಗೂ ಕೂಡಾ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಟ್ಟಿರಲಿಲ್ಲ. ಆ ದೃಷ್ಟಿಯಿಂದ ಭಾರತ ದೇಶದಲ್ಲಿ ಬಡವರು ಮತ್ತು ಮಹಿಳೆಯರು ಎಲ್ಲರಿಗೂ ಮತದಾನದ ಹಕ್ಕನ್ನು ನೀಡಲಾಗಿದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಎಲ್ಲರೂ ಕೃತಜ್ಞತೆಯನ್ನು ಅರ್ಪಿಸಲೇಬೇಕು. ಮತ್ತಷ್ಟು ಓದು »

25
ಏಪ್ರಿಲ್

ನಿನ್ನೆಗೆ ನನ್ನ ಮಾತು – ಭಾಗ ೫

– ಮು ಅ ಶ್ರೀರಂಗ ಬೆಂಗಳೂರು

ನಿನ್ನೆಗೆ ನನ್ನ ಮಾತು – ಭಾಗ ೧ನೆನಪುಗಳು
ನಿನ್ನೆಗೆ ನನ್ನ ಮಾತು – ಭಾಗ ೨
ನಿನ್ನೆಗೆ ನನ್ನ ಮಾತು – ಭಾಗ ೩
ನಿನ್ನೆಗೆ ನನ್ನ ಮಾತು – ಭಾಗ ೪

ನಿಲುಮೆಯಲ್ಲಿ ಇದು ನಾನು ಬರೆಯುತ್ತಿರುವ ಇಪ್ಪತ್ತೈದನೇ ಲೇಖನ. ಆಗಸ್ಟ್ ೨೦೧೩ರ ಕೊನೆಯ ವಾರದಲ್ಲಿ ನಾನು ಮೊದಲನೇ ಲೇಖನ ಈ ಬ್ಲಾಗಿನಲ್ಲಿ ಬರೆದಿದ್ದು. ಇಲ್ಲಿಯ ತನಕದ ನನ್ನ ಲೇಖನಗಳನ್ನು ಪ್ರಕಟಿಸಿದ “ನಿಲುಮೆ”ಯ ಮುಖ್ಯಸ್ಥರಿಗೆ, ಸಂಪಾದಕವರ್ಗದವರಿಗೆ ನಾನು ಆಭಾರಿಯಾಗಿದ್ದೇನೆ. ಜತೆಗೆ ನನ್ನ ಬರಹಗಳನ್ನು ಓದಿದ,ಪ್ರತಿಕ್ರ್ರಿಯಿಸಿದ ಮತ್ತು ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲಾ ಓದುಗರಿಗೆ ವಂದನೆಗಳು. ಓದುಗರೊಡನೆ ಚರ್ಚೆಯಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತು ನನ್ನ ಬರಹಗಳಿಗೆ ಬಂದ ಪ್ರತಿಕ್ರಿಯೆಗಳಿಂದ   ನಾನು ಆಯಾ ಲೇಖನಗಳನ್ನು ಬರೆಯುವಾಗ ಹೊಳೆಯದೇ ಇದ್ದ ಇನ್ನೊಂದು ಮುಖದ ದರ್ಶನವಾಗಿದೆ. ಎಲ್ಲವನ್ನೂ ಪ್ರತಿಕ್ರಿಯೆಗಳ ಮೂಲಕವೇ  ಹೇಳಲು ಸಾಧ್ಯವಾಗದೇ ಇದ್ದಾಗ ಆ ವಿಷಯ ಕುರಿತಂತೆ ಹೊಸ ಲೇಖನವನ್ನೇ ಬರೆಯುವಂತೆ  ಆ  ಚರ್ಚೆಗಳು ನನಗೆ ಪ್ರೇರಣೆ ಒದಗಿಸಿವೆ.  ಹೀಗಾಗಿ ಆ ಚರ್ಚೆಗಳು ನನ್ನ ಬರವಣಿಗೆ ಹಾಗೂ ಬೆಳವಣಿಗೆಗೆ ಪೋಷಕವಾಗಿವೆ.  ನನ್ನ  ಲೇಖನಗಳ ಬಗ್ಗೆ ಅಥವಾ ಇತರರ ಲೇಖನಗಳ ಬಗ್ಗೆ ನಾನು ಚರ್ಚೆಯಲ್ಲಿ ಪಾಲ್ಗೊಂಡಾಗ ಆಯಾ ಲೇಖನಗಳ  ವ್ಯಾಪ್ತಿಯನ್ನು ಮೀರಿ ಮಾತಾಡಿಲ್ಲ ಎಂದು ಭಾವಿಸಿದ್ದೇನೆ. ಒಂದೆರೆಡು ಸಂದರ್ಭಗಳಲ್ಲಿ ನಾನು ಆ ರೀತಿ ಪ್ರತಿಕ್ರಿಯಿಸಬಾರದಿತ್ತು ಎಂದು ಅನಿಸಿದ ಕೂಡಲೇ ‘ನಿಲುಮೆ’ಯಲ್ಲೇ ವಿಷಾದ ಸೂಚಿಸಿದ್ದೇನೆ. ಜತೆಗೆ ‘ತಾಂತ್ರಿಕವಾಗಿ’ ಸಾಧ್ಯವಾದಾಗ ಸಂಬಂಧಪಟ್ಟವರಿಗೆ ನೇರವಾಗಿ ನನ್ನ ವಿಷಾದ ಸೂಚಿಸಿದ್ದೇನೆ.

ಯಾವುದೇ ವಾದ,ಇಸಂ ಮತ್ತು ತತ್ವಗಳಿಗೆ ಬದ್ಧವಾಗದೆ ಎಲ್ಲ ರೀತಿಯ ಬರವಣಿಗೆಗೆ  ಮುಕ್ತ ಅವಕಾಶವಿರುವ ‘ನಿಲುಮೆ’ಯಿಂದ ಸಾಹಿತ್ಯ-ಸಂಸ್ಕೃತಿ-ರಾಜಕೀಯ ಇವುಗಳ ಬಗ್ಗೆ ಹವ್ಯಾಸಿ ಮಟ್ಟದಲ್ಲಿ ಆಸಕ್ತಿ ಮತ್ತು ಕುತೂಹಲವಿರುವ ನನಗೆ ಅಪಾರವಾದ ಸಹಾಯವಾಗಿದೆ. ನನ್ನಂತಹ ಹವ್ಯಾಸಿಗಳ ಬರವಣಿಗೆಗಳಿಗೆ  ರಾಜ್ಯವ್ಯಾಪಿ ಪ್ರಸಾರದ ಪತ್ರಿಕೆಗಳಲ್ಲಿ ಮತ್ತು ಸಾಹಿತ್ಯಿಕ ಪತ್ರಿಕೆಗಳಲ್ಲಿ ಅವಕಾಶ ಸಿಗುವುದು ಕಷ್ಟ. ಅದಕ್ಕೆ ಕಾರಣಗಳು ಹತ್ತು ಹಲವು. ಇವೆಲ್ಲಾ ಓದುಗರಿಗೆ ತಿಳಿದಿರುವ ವಿಷಯವೇ ಆಗಿದೆ. ಅದೇ ರೀತಿ ಪತ್ರಿಕೆಗಳ ಮತ್ತು ಸಾಹಿತ್ಯಿಕ ಪತ್ರಿಕೆಗಳ ವಾಚಕರ ಪತ್ರಗಳು ಹಾಗು ಪ್ರತಿಕ್ರಿಯೆಗಳ ಕಾಲಂ ಸಹ ಹವ್ಯಾಸಿ ಬರಹಗಾರರಿಗೆ ಅರ್ಧ ತೆರೆದ ಬಾಗಿಲು. ನಾನು ಪ್ರತಿ ದಿನ ‘ನಿಲುಮೆ’ಯೂ ಸೇರಿದಂತೆ ಕನ್ನಡದ ಇತರ ನಾಲ್ಕೈದು ಬ್ಲಾಗುಗಳನ್ನು ನೋಡುತ್ತಿರುತ್ತೇನೆ.  ಆ ಎಲ್ಲಾ ಬ್ಲಾಗುಗಳೂ ಓದುಗರ ಪ್ರತಿಕ್ರಿಯೆಗಳಿಗೆ ‘ಮುಕ್ತ’ ಅವಕಾಶ ಕಲ್ಪಿಸಿಲ್ಲ. ‘ನಿಲುಮೆ’ ಸೇರಿದಂತೆ ಇನ್ನೊಂದೆರೆಡು ಬ್ಲಾಗುಗಳಲ್ಲಿ ನಾವುಗಳು ಬರೆದ ಪ್ರತಿಕ್ರಿಯೆ ಕೂಡಲೇ ಪ್ರಕಟವಾಗುತ್ತವೆ. ಮಿಕ್ಕವುಗಳಲ್ಲಿ ‘your comment is awaiting moderation’ /’your comment visible after approval’ ಎಂಬ ಸಂದೇಶ ಬರುತ್ತದೆ. ಆ ಬ್ಲಾಗಿನ moderatorಗಳ ಧ್ಯೇಯ, ಧೋರಣೆ ಹಾಗು ಬದ್ಧತೆಗಳನ್ನು ಅನುಸರಿಸಿ ನಮ್ಮ ಪ್ರತಿಕ್ರಿಯೆಗಳು ಬೆಳಕು ಕಾಣಬಹುದು ; ಕಾಣದೆಯೂ ಇರಬಹುದು. ಮೋಜಿನ ಸಂಗತಿ ಎಂದರೆ  ಅಂತಹ  ಬ್ಲಾಗುಗಳೇ  ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮೂರು ಹೊತ್ತೂ ಹರಿಕಥೆ ಮಾಡುತ್ತಿರುತ್ತವೆ. ತಮ್ಮನ್ನು ಬಿಟ್ಟು ಇತರರೆಲ್ಲರೂ ಫ್ಯಾಸಿಸ್ಟ್ ಮನೋಭಾವದವರೆಂದು ಅವಕಾಶ ಸಿಕ್ಕಾಗೆಲ್ಲಾ ದೂರುತ್ತಿರುತ್ತಾರೆ. “ಮೇರಾ ಕರ್ನಾಟಕ್  ಮಹಾನ್ ಹೈ !!!”

ಮತ್ತಷ್ಟು ಓದು »

24
ಏಪ್ರಿಲ್

ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೩

-ಡಾ.ಶ್ರೀಪಾದ ಭಟ್, ತುಮಕೂರು

ಕನ್ನಡ ಸಾಹಿತ್ಯಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೧
ಸಾಹಿತ್ಯ ಕ್ಷೇತ್ರದ ಒಳಹೊರಗು – ಭಾಗ ೨

ಸಾಹಿತ್ಯದ ಮಾರ್ಕೆಟಿಂಗ್!

ಇಂದು ಎಲ್ಲ ಕ್ಷೇತ್ರಕ್ಕೂ ಅನಿವಾರ್ಯವಾದ ಮಾರ್ಕೆಟಿಂಗ್ ಸಾಹಿತ್ಯವನ್ನು ಬಿಡುತ್ತದೆಯೇ? ಹೇಳಿಕೇಳಿ ಸಾಹಿತ್ಯ ಎಂಬುದು ಪುಸ್ತಕೋದ್ಯಮದ ಭಾಗವಾಗಿ ಹೋಗಿದೆ. ಉದ್ಯಮ ಎಂದ ಮೇಲೆ ಮುಗೀತು. ಆದರ್ಶಗಳು ಏನಿದ್ದರೂ ಅದನ್ನು ಹಿಂಬಾಲಿಸಬೇಕಷ್ಟೆ. ಸಾಹಿತಿಗಳೆನಿಸಿಕೊಂಡವರು ಈ ಉದ್ಯಮವನ್ನು ಹಿಂಬಾಲಿಸುತ್ತಿದ್ದಾರೆ. ಕೆಲವೊಮ್ಮೆ ಇದು ಉಲ್ಟಾ ಆಗಿ ತಮಾಷೆಗಳೂ ಆಗುವುದುಂಟು. ಕನ್ನಡದಲ್ಲಿ ಎಲ್ಲೂ ಹೆಸರೇ ಕೇಳಿರದ ಸಂಪತ್ತೈಯ್ಯಂಗಾರ್ ಎಂಬ ಎಪ್ಪತ್ತು ದಾಟಿದ ವೃದ್ಧರೊಬ್ಬರಿಗೆ ತಮ್ಮ ಅರುವತ್ತು ವರ್ಷದ ಪಾಕಶಾಸ್ತ್ರದ ಪ್ರಾವೀಣ್ಯವನ್ನು ಕನ್ನಡದಲ್ಲಿ ದಾಖಲಿಸಬೇಕೆಂಬ ಹಂಬಲ ಹುಟ್ಟಿತು. ಅನುಭವವನ್ನು ಬರೆದರು. ಒಂದಿಷ್ಟು ಪುಟಗಳಾದವು. ಆಸಕ್ತರಿಗೆ ಓದಲು ನೀಡಿ ಸಲಹೆ ಕೇಳಿದರು. ಅದರಂತೆ ತಿದ್ದಿ ತೀಡಿ ಮತ್ತೆ ಬರೆದು ಒಂದು ಪುಸ್ತಕವಾಗುವಷ್ಟು ಬರೆದರು. ಅಚ್ಚುಮಾಡಿಸಲು ಹೆಸರಾಂತ ಪ್ರಕಾಶಕರ ಅಂಗಡಿ ಮುಂದೆ ದಿನಗಟ್ಟಲೆ ನಿಂತರು. ಅವರು ಕಾಣದ ಪ್ರಕಾಶಕರಿಲ್ಲ. ಆದರೆ ಎಲ್ಲರದೂ ಒಂದೇ ಉತ್ತರ-ಆಗಲ್ಲ ಹೋಗಿ. ಪುಟ ತೆರೆದು ನೋಡುವ ವ್ಯವಧಾನವೂ ಪ್ರಕಾಶಕರಿಗಿಲ್ಲ. ಯಾಕೆಂದರೆ ಈ ಅಯ್ಯಂಗಾರರು ಹೆಸರಾಂತ ಸಾಹಿತಿಗಳ ಶಿಫಾರಸು ಇಟ್ಟುಕೊಂಡವರಲ್ಲ, ಈಗಾಗಲೇ ಪಾಕಶಾಸ್ತ್ರದಲ್ಲಿ ಮಾಧ್ಯಮಗಳಲ್ಲಿ ಹೆಸರು ಮಾಡಿದವರೂ ಅಲ್ಲ. ಬೇರೆ ದಾರಿ ಕಾಣದೇ ಅಯ್ಯಂಗಾರರು ಸ್ವತಃ ಅಚ್ಚು ಹಾಕಿಸಲು ಮುಂದಾದರು. ಸ್ವಂತ ಹಣವಿಲ್ಲ. ಯಾವುದೋ ಡಿಟಿಪಿ ಸೆಂಟರಿಗೆ ಹಸ್ತಪ್ರತಿ ಕೊಟ್ಟರು. ಮೂರ್ನಾಲ್ಕು ತಿಂಗಳು ಅಲೆಸಿದ ಅಂಗಡಿಯಾತ ಟೈಪು ಮಾಡುವುದಿರಲಿ, ಮೂಲ ಹಸ್ತಪ್ರತಿಯನ್ನೇ ಕಳೆದು ಕೈಝಾಡಿಸಿದ!

ಮತ್ತಷ್ಟು ಓದು »

23
ಏಪ್ರಿಲ್

ಪ್ರತ್ಯೇಕ ಪಂಕ್ತಿ ಭೋಜನ : “ಸಂಪ್ರದಾಯ”ದ ಮುಸುಕಿನ “ಅನಾಗರೀಕ” ವರ್ತನೆಯ ಸುತ್ತ

– ರಾಕೇಶ್ ಶೆಟ್ಟಿ

ಪ್ರತ್ಯೇಕ ಪಂಕ್ತಿ ಬೇಧಉಡುಪಿಯ ಮಠ ಸದಾಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಬಹುಪಾಲು ಅದು ಸುದ್ದಿಯಾಗುವುದು ವಿವಾದಗಳಿಂದಲೇ, ಹಲವು ಬಾರಿ ಅದು ಪೇಜಾವರ ಶ್ರೀಗಳ ಯಾವುದೋ ಹೇಳಿಕೆಯ ಮೂಲಕವೇ ಸುದ್ದಿಯಾದರೇ ಉಳಿದಂತೆ ಅದು ಮತ್ತೆ ಮತ್ತೆ ಸುದ್ದಿಯಾಗುವುದು  ‘ಪ್ರತ್ಯೇಕ ಪಂಕ್ತಿ ಭೋಜನ’ದ ಕಾರಣಕ್ಕೆ.

ಏನಿದು ಮತ್ತೆ ಈ ವಿವಾದ ಅಂತ ನೋಡಲಿಕ್ಕೆ ಹೋದರೆ :  ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಶನಿವಾರ (ಏ 19) ಬಂಟ್ಸ್ ಸಮುದಾಯದ ಮಹಿಳೆಯೊಬ್ಬರು ತನ್ನ ಸ್ನೇಹಿತೆಯರ ಜೊತೆ ಊಟಕ್ಕೆ ಕುಳಿತಿದ್ದರು. ಮಹಿಳೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಠದ ಅಧಿಕಾರಿಗಳು ಬ್ರಾಹ್ಮಣರೇತರರಿಗೆ ಇಲ್ಲಿ ಊಟಕ್ಕೆ ಅವಕಾಶವಿಲ್ಲ ಎಂದು ಮಹಿಳೆಯನ್ನು ಊಟದ ಮಧ್ಯದಲ್ಲೇ ಎಬ್ಬಿಸಿದ್ದಾರೆ ಎನ್ನುವುದು ವಿವಾದ.

“ನಾನು ಉಡುಪಿ ಮೂಲದವಳು, ವೈದ್ಯಕೀಯ ಕ್ಷೇತ್ರದವಳು. ನಾನು ಚೌಕಿಯಲ್ಲಿ (ಬ್ರಾಹ್ಮಣರಿಗಾಗಿರುವಊಟದ ಹಾಲ್) ಊಟಕ್ಕೆ ಕುಳಿತಿಲ್ಲ.ಭೋಜನ ಶಾಲೆಯಲ್ಲಿ ಊಟಕ್ಕೆ ಕೂತೆ. ಅಲ್ಲಿ ಇತರ ಜಾತಿಯವರಿಗೆ ಊಟದ ವ್ಯವಸ್ಥೆ ಇಲ್ಲ ಎನ್ನುವುದಾದರೆ ಫಲಕ ಹಾಕಬೇಕಿತ್ತು. ತುಂಬಿದ ಊಟದ ಹಾಲಿನಲ್ಲಿ ಎಲ್ಲರ ಮುಂದೆ ನನ್ನನ್ನು ಊಟ ಮಾಡುತ್ತಿರಬೇಕಾದರೆ ಎಬ್ಬಿಸಿ ಹೊರಕ್ಕೆಕಳುಹಿಸಿದರು. ಸ್ನೇಹಿತೆಯರ ಮುಂದೆ ನನಗೆ ತುಂಬಾ ಅವಮಾನವಾಗಿದೆ.ನನಗಾದ ಪರಿಸ್ಥಿತಿ ಬೇರೆಯಾರಿಗೂ ಬರುವುದು ಬೇಡ “

ಇದು,ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಭೋಜನಶಾಲೆಯಿಂದ “ಅನಾಗರೀಕ”ರ ಕೈಯ್ಯಿಂದ ಹೊರಹಾಕಲ್ಪಟ್ಟ ಹೆಣ್ಣು ಮಗಳೊಬ್ಬಳ ನೋವಿನ ನುಡಿಗಳು.

ಈಗೀನ ಕಾಲದಲ್ಲೂ ಊಟಕ್ಕೆ ಕೂತವರನ್ನು ಅವರ ಚರ್ಮದ / ಜಾತಿಯ ಬಣ್ಣದಿಂದ ಗುರುತಿಸಿ ಎಬ್ಬಿಸುವ ಅನಾಗರೀಕರು ನಮ್ಮ ನಡುವೆ ಬದುಕುತಿದ್ದಾರೆ ಅನ್ನುವುದೇ ನಾಗರೀಕ ಸಮಾಜವೊಂದುತಲೆ ತಗ್ಗಿಸುವ ವಿಚಾರ. ಊಟದ ಸಮಯದಲ್ಲಿ ಮಾತ್ರ ಬೇರೆ ಜಾತಿಯವರು ಬೇಡ ಅನ್ನುವುದಾದರೇ,ಬೇರೆ ಜಾತಿಯವರು ಕೊಡುವ ದೇಣಿಗೆ,ಕಾಣಿಕೆಗಳೇಕೆ ಬೇಕು ಇವರಿಗೆ? ಪರಮಾತ್ಮ ಶ್ರೀ ಕೃಷ್ಣ ಇವರ ಖಾಸಗಿ ಸ್ವತ್ತಾದರೇ, ಹಾಗೆ ಹೇಳಿ ಬಿಡುವುದೊಳಿತು. ಆಗ ಯಾರು ಅಲ್ಲಿಗೆ ಹೋಗಿ ಹೀಗೆ ಅವಮಾನ ಮಾಡಿಸಿಕೊಂಡು ಬರಲಿಚ್ಛಿಸುವುದಿಲ್ಲ.

–*–*–*–

ಮತ್ತಷ್ಟು ಓದು »

22
ಏಪ್ರಿಲ್

ಅಂಬೇಡ್ಕರ್ ರ ’ಹಿಂದುತ್ವ’ ವನ್ನು ಅರಸುತ್ತಾ-ಭಾಗ ೧

– ಬಾಲಚಂದ್ರ ಭಟ್

ಡಾ.ಬಿ.ಆರ್ ಅಂಬೇಡ್ಕರ್ಇಂದು ಡಾ. ಅಂಬೇಡ್ಕರರನ್ನು ಒಬ್ಬ ಹಿಂದೂ ದೇಶಭಕ್ತರೆಂದು ಕರೆದರೆ ಜನ ಹೇಗೆಪ್ರತಿಕ್ರಿಯಿಸಬಹುದು? ಖಂಡಿತ ಗಲಿಬಿಲಿಯಾಗುತ್ತಾರೆ. ಇದೊಂದು ಮನುವಾದಿಯ ಕುತಂತ್ರಎಂದು ಕೋಪಿಸಿಕೊಳ್ಳಬಹುದು. ಆದರೆ ಯಾವ ಮಟ್ಟಿಗೆ ಅಂಬೇಡ್ಕರರ ವ್ಯಕ್ತಿತ್ವ ನಮ್ಮಿಂದಮರೆಮಾಚಲ್ಪಟ್ಟಿದೆ ಎಂದರೆ, ಅಂಬೇಡ್ಕರ್ ಎಂದರೆ ಕೆಳಜಾತಿಗೆ ಮೀಸಲು ಎನ್ನುವ ಕೆಲವರ್ಗಗಳ ಧೋರಣೆಯಾದರೆ ಅವರೊಬ್ಬ ಬ್ರಾಹ್ಮಣ ವಿರೋಧಿ ಎಂದು ಅವರನ್ನು ಉಪೇಕ್ಷಿಸುವ ವರ್ಗ ಇನ್ನೊಂದು ಕಡೆ ಇದೆ.

ಆದರೆ ಇಂದಿನ ವರ್ತಮಾನ ರಾಜಕೀಯದಲ್ಲಿ ಅಂಬೇಡ್ಕರರ ಹಕ್ಕುಸ್ವಾತಂತ್ರ್ಯವನ್ನು ಹೊತ್ತವರೆಂಬಂತೆ ಅವರ ಉತ್ತರಾಧಿಕಾರಿಗಳೆಂದು ಕರೆದುಕೊಳ್ಳುವವರ ಹುಚ್ಚಾಟ, ತಿಕ್ಕಲುತನಗಳಿಂದ ಅದೇ ಸ್ಟೀರಿಯೋಟೈಪಿನಿಂದ ಅಂಬೇಡ್ಕರರನ್ನುನೋಡಬೇಕಾದ ಪರಿಸ್ಥಿತಿ ಬಂದಿರುವದರಿಂದ ಅವರಲ್ಲಿನ ಭವ್ಯ, ಗಂಭೀರ, ಪ್ರಭುದ್ಧವ್ಯಕ್ತಿತ್ವ ಹಾಗೂ ದಾರ್ಶನಿಕತೆ ಅಕ್ಷರಶಃ ಮರೆಯಾಗಿರುವದು ಅತ್ಯಂತ ದುರದೃಷ್ಟಕರ.ಅದೇ ಅವರ ಕನಸು ನನಸಾಗದಿರುವದಕ್ಕೂ ಕಾರಣ.

ಹಿಂದೂ ಸಂಪ್ರದಾಯದಲ್ಲಿನ ಜಾತಿಗಳ ಬಗ್ಗೆ ಅವರ ಸಂಶೋಧನೆ ನಮಗೆ ತಿಳಿದದ್ದುಅತ್ಯಲ್ಪ.ಅರವಿಂದನ್ ನೀಲಕಂದನ್ ಅವರ ’Bodhisattva’s hindutva(part 1-6 )’ ವನ್ನು ಓದಿದಾಗ ಅಂಬೇಡ್ಕರರಲ್ಲಿದ್ದ ಸಮಗ್ರ ಹಿಂದುತ್ವ ನನ್ನ ತಿಳುವಳಿಕೆಗೆಬಂದಿದ್ದು. ಅದನ್ನು ಆಯ್ದು, ಸಂಕ್ಷಿಪ್ತವಾಗಿ ಈ ಲೇಖನವನ್ನು ಬರೆದಿದ್ದೇನೆ.

ಜಾತಿ ಪದ್ದತಿಗಳ ವಿರುದ್ಧ ಅಂಬೇಡ್ಕರರು ಹೋರಾಡಿದರು ಎಂಬುದು ಎಲ್ಲರಿಗೂ ತಿಳಿದ ಸತ್ಯ.ಆದರೆ ಜಾತಿಗಳ ವಿರುದ್ಧ ಅವರ ಹೋರಾಟವು ಅವರ ಕನಸಿನ ಹಿಂದೂ ಧರ್ಮವೇ ಆಗಿತ್ತು ಎಂಬುದುನಿರ್ವಿವಾದ. ತಮ್ಮ ‘Annihilation of caste'(page no.30) ಯಲ್ಲಿ ಅವರುಹೇಳಿದ್ದು ಹೀಗೆ “ಎಲ್ಲಿಯವರೆಗೆ ಜಾತಿಗಳು ಇರುವದೊ ಅಲ್ಲಿಯವರೆಗೆ ಸಂಘಟನೆಸಾಧ್ಯವಿಲ್ಲ.ಎಲ್ಲಿಯವರೆಗೆ ಸಂಘಟನೆ ಸಾಧ್ಯವಿಲ್ಲವೋ ಅಲ್ಲಿಯವರೆಗೆ ಹಿಂದೂ ಧರ್ಮವು ದುರ್ಬಲವಾಗಿಯೇ ಇರುವದು”.

೧೯೨೭ ರಲ್ಲಿ ದಲಿತರಿಗೆ ದೇವಾಲಯದ ಪ್ರವೇಶದ ಹಕ್ಕಿನ ಬಗ್ಗೆಪ್ರಸ್ತಾಪಿಸಿ ಅವರು ಹೇಳಿದ್ದು ಹೀಗಿದೆ “ಹಿಂದುತ್ವವು ಸ್ಪಶ್ಯೃ ಹಾಗೂ ಅಸ್ಪಶ್ಯೃಎಲ್ಲರಿಗೂ ಸೇರಿದುದಾಗಿದೆ. ಕೇಳಜಾತಿಗೆ ಸೇರಿದ್ದ ವಾಲ್ಮಿಕಿ, ವ್ಯಾಧಗೀತ, ಚೋಕಮೇಳಮತ್ತು ರೋಹಿದಾಸರುಗಳು ಹಿಂದು ಧರ್ಮಕ್ಕೆ ನೀಡಿದ ಕೊಡುಗೆಯು, ಬ್ರಾಹ್ಮಣರಾದ ವಸಿಷ್ಟ,ಕ್ಷತ್ರಿಯರಾಗಿದ್ದ ಕೃಷ್ಣ, ವೈಶ್ಯರಾಗಿದ್ದ ಹರ್ಷ, ಹಾಗೂ ಶೂದ್ರರಾಗಿದ್ದತುಕಾರಮರುಗಳು ನೀಡಿದ ಕೊಡುಗೆಯಷ್ಟೆ ಮಹತ್ವಪೂರ್ಣವಾದುದು” ( ’ಬಹಿಷ್ಕೃತ್ ಭಾರತ್’ದಲ್ಲಿ). ಇಲ್ಲಿ ಅವರ ಆಧುನಿಕ ಹಿಂದೂ ಧರ್ಮವನ್ನು ಕಟ್ಟುವ ಮನೋಭಾವ ಹಾಗೂ ಸಂಘಟನೆಯಬಗೆಗಿನ ಆಸ್ಥೆಯನ್ನು ಗುರುತಿಸಬಹುದು.

ಮತ್ತಷ್ಟು ಓದು »

21
ಏಪ್ರಿಲ್

ಒ೦ದು ಸಣ್ಣ ಕಳ್ಳತನದ ತನಿಖೆಗೆ ತೆಗೆದುಕೊ೦ಡ ಸಮಯವೆಷ್ಟು ಎಷ್ಟು ಗೊತ್ತೆ..??

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಪೋಲಿಸ್ ತನಿಖೆರಾಮಲಾಲ ಮಧ್ಯಪ್ರದೇಶ ರಾಜ್ಯದ ಕಾನ್ಪುರ ನಗರದ ನಿವಾಸಿ.ಹೈಸ್ಕೂಲಿನವರೆಗೆ ಓದಿಕೊ೦ಡಿದ್ದ ನಿರುದ್ಯೋಗಿ ರಾಮ ಲಾಲ, ಹೊಟ್ಟೆಪಾಡಿಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊ೦ಡಿದ್ದ.ಶ್ರಮಜೀವಿಯಾಗಿದ್ದ ರಾಮಲಾಲನಿಗೆ ಅನಿರೀಕ್ಷಿತವಾಗಿ ಅ೦ಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಕೆಲಸ ಸಿಕ್ಕಿತ್ತು.ಸರಕಾರಿ ಕೆಲಸವೆ೦ದ ಮೇಲೆ ಕೇಳಬೇಕೆ? ರಾಮಲಾಲನ ಸ೦ತೊಷವ೦ತೂ ಹೇಳತೀರದು.ಆತ ತನ್ನ ಕೆಲಸವನ್ನು ತು೦ಬಾ ನಿಷ್ಠೆಯಿ೦ದ ಮಾಡುತ್ತಿದ್ದ.ತನ್ನ ತ೦ದೆಯ ಹಳೇಯ ಸೈಕಲ್ಲೊ೦ದರಲ್ಲಿ ಕಾನ್ಪುರದ ಗಲ್ಲಿಗಲ್ಲಿಗಳಲ್ಲಿ ಸುತ್ತುತ್ತ ಜನರಿಗೆ ಬ೦ದ ಟಪಾಲುಗಳನ್ನು ತಲುಪಿಸುತ್ತಿದ್ದ.ಮನಿಯಾರ್ಡರ್ ಗಳನ್ನು ತಲುಪಿಸುವಾಗಲ೦ತೂ ಹಣ ಪಡೆದುಕೊ೦ಡವರ ಬಗ್ಗೆ ಎರಡೆರಡು ಬಾರಿ ಖಚಿತಪಡಿಸಿಕೊಳ್ಳುತ್ತಿದ್ದ. ಅದಾಗಲೇ ರಾಮಲಾಲನಿಗೆ ಮದುವೆಯಾಗಿತ್ತು.ಮುದ್ದಾದ ಎರಡು ಮಕ್ಕಳಿದ್ದವು.ಬೆಳಿಗ್ಗೆಯೆದ್ದು ಹೊರಟರೆ ಸ೦ಜೆ ಹೊತ್ತಿಗೆ ಮನೆ ತಲುಪುವ ನೆಮ್ಮದಿಯ ಕೆಲಸದಲ್ಲಿ ರಾಮಲಾಲ ಅತ್ಯ೦ತ ಸ೦ತೃಪ್ತಿಯಿ೦ದಿದ್ದ.ಒಟ್ಟಾರೆಯಾಗಿ ಅವನ ಜೀವನದಲ್ಲಿ ಎಲ್ಲವೂ ಸರಿಯಾಗಿತ್ತು. ಅದು 1984ರ ಕಾಲ. ಸರ್ಕಾರಿ ಕೆಲಸ ಸಿಕ್ಕರೆ ಜೀವನಕ್ಕೊ೦ದು ನೆಲೆ ಸಿಕ್ಕಿತು ಎ೦ದುಕೊ೦ಡು ಜನ ಸ೦ತೊಷಿಸುತ್ತಿದ್ದ ಕಾಲವದು. ರಾಮಲಾಲನ ಅ೦ಚೆ ಕಚೇರಿಯಲ್ಲಿ ಕಷ್ಟಪಟ್ಟು ಕೆಲಸ ಸ೦ಪಾದಿಸಿದ್ದ ಅನೇಕ ಗುಮಾಸ್ತರಿದ್ದರು. ಸೇವೆಯಲ್ಲಿ ನಿರತರಾಗಿದ್ದ ತ೦ದೆಯ ಸಾವಿನಿ೦ದ ಅನುಕ೦ಪದ ಆಧಾರದ ಮೇಲೆ ಕೆಲಸ ಸ೦ಪಾದಿಸಿಕೊ೦ಡಿದ್ದ ರಾಮಲಾಲನ ಬಗ್ಗೆ ಅ೦ತಹ ಗುಮಾಸ್ತರಿಗೆ ಅರ್ಥವಿಲ್ಲದ ಅಸೂಯೆ. ಕಚೇರಿಯ ಮುಖ್ಯಾಧಿಕಾರಿ ಹರಿಲಾಲರಿಗೂ ರಾಮಲಾಲನ್ನನ್ನು ಕ೦ಡರೆ ಅಷ್ಟಕಷ್ಟೇ.ಅವರೆಲ್ಲರೂ ಅವನನ್ನು ವಿನಾಕಾರಣ ದ್ವೇಷಿಸುತ್ತಿದ್ದರು. ರಾಮಲಾಲ ಕಷ್ಟಪಟ್ಟು ದುಡಿಯುತ್ತಿದ್ದರೂ ಅವನೊಬ್ಬ ದೊಡ್ಡ ಸೋಮಾರಿ ಎ೦ಬರ್ಥದಲ್ಲಿ ಮಾತನಾಡುತ್ತಿದ್ದರು.ಆದರೆ ಅದ್ಯಾವುದರ ಪರಿವೆಯೂ ಇಲ್ಲದ ರಾಮಲಾಲ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊ೦ಡು ಹೋಗುತ್ತಿದ್ದ.

ಎ೦ದಿನ೦ತೆ ಆ ದಿನವೂ ರಾಮಲಾಲ ಸರಿಯಾದ ಸಮಯಕ್ಕೆ ಕಚೇರಿಗೆ ಬ೦ದ.ತನ್ನ ವ್ಯಾಪ್ತಿಗೆ ಬರುವ ಪ್ರದೇಶಗಳ ಟಪಾಲುಗಳನ್ನು ತನ್ನ ಚೀಲಕ್ಕೆ ತು೦ಬಿಸಿಕೊ೦ಡ. ಅ೦ದು ಆತ ಒಟ್ಟಾರೆಯಾಗಿ ಸುಮಾರು ಏಳುನೂರು ರೂಪಾಯಿಗಳನ್ನು ಮನಿಯಾರ್ಡರ್ ರೂಪದಲ್ಲಿ ವಿಲೇವಾರಿ ಮಾಡಬೇಕಿತ್ತು(ನೆನಪಿಡಿ,ಅದು 1984ರ ಕಾಲ.ಅ೦ದಿನ ಏಳುನೂರು ರೂಪಾಯಿಗಳು ಇ೦ದಿನ ಹತ್ತು ಸಾವಿರಕ್ಕೆ ಸಮ).ಅಷ್ಟೂ ಹಣವನ್ನು ತನ್ನ ಚೀಲಕ್ಕೆ ಹಾಕಿಕೊ೦ಡ ರಾಮಲಾಲ ಪತ್ರಗಳನ್ನು ಹ೦ಚುವ ತನ್ನ ದೈನ೦ದಿನ ಕಾರ್ಯಕ್ಕೆ ಹೊರಡುತ್ತಾನೆ. ದಿನವಿಡಿ ಬೀದಿಬೀದಿಗಳಲ್ಲಿ ತಿರುಗಾಡಿದ ರಾಮಲಾಲ ಎಲ್ಲ ಟಪಾಲುಗಳನ್ನು ಸರಿಯಾದ ವಿಳಾಸಗಳಿಗೆ ಮುಟ್ಟಿಸುತ್ತಾನೆ.ಮನಿಯಾರ್ಡರಗಳ ಪೈಕಿ ಸರಿ ಸುಮಾರು ನಾನೂರು ರೂಪಾಯಿಗಳಷ್ಟನ್ನು ತಲುಪಿಸಬೇಕಾದ ವಿಳಾಸಗಳಿಗೆ ತಲುಪಿಸಿ,ಹಣ ಪಡೆದುಕೊ೦ಡವರ ಬಳಿ ಹಣ ತಲುಪಿದ ಬಗ್ಗೆ ರುಜು ಹಾಕಿಸಿಕೊಳ್ಳುತ್ತಾನೆ.ಉಳಿದ ಕೆಲವರು ಊರಲಿಲ್ಲದ ಕಾರಣ ಸುಮಾರು ಮುನ್ನೂರು ರೂಪಾಯಿಗಳಷ್ಟು ಮನಿಯಾರ್ಡರ್ ಹಣವನ್ನು ಸಾಯ೦ಕಾಲ ಮರಳಿ ಕಚೇರಿ ತರುತ್ತಾನೆ.

ಮತ್ತಷ್ಟು ಓದು »

17
ಏಪ್ರಿಲ್

ಕಾಂಗ್ರೆಸ್ ರಹಿತ ಭಾರತ ಸಾಧ್ಯವೇ?

– ಡಾ.ಅಶೋಕ್. ಕೆ. ಆರ್

indian-politician1‘ಯಥಾಸ್ಥಿತಿಗೋ ಬದಲಾವಣೆಗೋ ಸ್ಥಿರತೆಗೋ ಅಭಿವೃದ್ಧಿಗೋ ಸ್ಥಳೀಯ ಅನಿವಾರ್ಯತೆಗೋ ಮತ್ತೊಂದಕ್ಕೋ ಮಗದೊಂದಕ್ಕೋ ಒಟ್ಟಿನಲ್ಲಿ ಹೋಗಿ ವೋಟ್ ಮಾಡಿ!’

ಮೋದಿ ಜಪದ ಭಾಜಪ ಕಾಂಗ್ರೆಸ್ಸನ್ನು ಭಾರತದಿಂದ ಸಂಪೂರ್ಣ ನಿರ್ನಾಮವಾಗಿಸುವುದೇ ನಮ್ಮ ಗುರಿ ಎಂದು ಬಹಳಷ್ಟು ಪ್ರಚರಿಸುತ್ತಿದೆ. ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಏಳಿಗೆಯಿಂದ ರಾಷ್ಟ್ರೀಯ ಪಕ್ಷಗಳೆನ್ನಿಸಿಕೊಂಡ ಕಾಂಗ್ರೆಸ್ ಮತ್ತು ಭಾಜಪ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲೂ ಎಣಗುತ್ತಿರುವ ಪರಿಸ್ಥಿತಿಯಿದೆ. ಒಂದಷ್ಟು ರಾಜ್ಯಗಳಲ್ಲಿ ಭಾಜಪ ಪ್ರಭಾವಶಾಲಿಯಾಗಿ ಮಗದೊಂದಷ್ಟು ಕಡೆ ಕಾಂಗ್ರೆಸ್ ಪ್ರಭಾವಶಾಲಿಯಾಗಿ ಮತ್ತೊಂದು ಪಕ್ಷದ ಏಳಿಗೆಗೆ ಅಡ್ಡಿಯಾಗಿದ್ದರೆ ಇನ್ನುಳಿದವುಗಳಲ್ಲಿ ಮತದಾರ ಒಮ್ಮೆ ಕಾಂಗ್ರೆಸ್ಸಿಗೆ ಮತ್ತೊಮ್ಮೆ ಭಾಜಪಕ್ಕೆ ಅವಕಾಶ ನೀಡುವ ಮನಸ್ಸು ಮಾಡಿದ್ದಾನೆ.
ಕಾಂಗ್ರೆಸ್ಸಿಗರು ಮಾಡುವ ಭ್ರಷ್ಟಾಚಾರದಿಂದ ರೋಸಿ ಹೋಗಿ ಬೇರೊಂದು ಪಕ್ಷಕ್ಕೆ ಮತ ಹಾಕುವ ಜನರ ತೀರ್ಮಾನ ಬಹಳಷ್ಟು ಸಲ ಬೆಂಕಿಯಿಂದ ಬಾಣಲೆಗೆ ಹಾಕಿಸಿಕೊಂಡಂತೆ ಆಗುತ್ತಿದೆ. ಮತ್ತಷ್ಟು ಓದು »

16
ಏಪ್ರಿಲ್

ನಿಲೇಕಣಿಯವರ ದ್ವಂದ್ವ ಮತ್ತು ಬುದ್ದಿಜೀವಿಗಳ ಬೌದ್ಧಿಕ ಭ್ರಷ್ಟಚಾರ

– ರಾಕೇಶ್ ಶೆಟ್ಟಿ

NUK೧.”ಎನ್.ಡಿ.ಎ ಸರ್ಕಾರದಲ್ಲಿ ಪ್ರಧಾನಿ ವಾಜಪೇಯಿಯವರು ಅಭಿವೃದ್ಧಿ ರಾಜಕಾರಣದ ಶಖೆಗೆ ಕಾರಣರಾದವರು,ಅವರಿಗಿಂತ ಮೊದಲಿಗೆ ಹಾಗೆ ಯಾರೂ ಮಾಡಿರಲಿಲ್ಲ” (Page 245)

೨.”ಅಭಿವೃದ್ಧಿ ರಾಜಕಾರಣವೆನ್ನುವುದು ನಮ್ಮ ರಾಜಕಾರಣಿಗಳು ಅಂದುಕೊಂಡಂತೆ ಕೆಲಸಕ್ಕೆ ಬಾರದ್ದೇನಲ್ಲ.ಇದಕ್ಕೆ ಉದಾಹರಣೆಯಾಗಿ ಗುಜರಾತಿನಲ್ಲಿ ನರೇಂದ್ರ ಮೋದಿಯವರು ತನ್ನ ಅಭಿವೃದ್ಧಿ ಮಂತ್ರದಿಂದಲೇ ಕಾಂಗ್ರೆಸ್ಸ್ ಪ್ರಣಾಳಿಕೆಯ ಉಚಿತ ವಿದ್ಯುತ್ ಅನ್ನು ಮತದಾರರ ಮುಂದೆಯೇ ಟೀಕಿಸಿ ಚಪ್ಪಾಳೆ ಗಿಟ್ಟಿಸಿದ್ದರು.ಮೋದಿಯವರ ಹಿಂದುತ್ವ ರಾಜಕಾರಣವೆಲ್ಲದರ ಮಧ್ಯೆಯೂ ಭ್ರಷ್ಟ ಸಬ್ಸಿಡಿ ಸಿಸ್ಟಂಗಿಂತಲೂ ಅಭಿವೃದ್ಧಿ ರಾಜಕಾರಣವೂ ಹೇಗೆ ವಿದ್ಯುತ್,ನೀರಾವರಿ ಮತ್ತು ಸಂಪರ್ಕ ಸೌಲಭ್ಯವನ್ನು ಜನರಿಗೆ ಕಲ್ಪಿಸುತ್ತವೆ ಅನ್ನುವುದನ್ನು ಮತದಾರರಿಗೆ ಹೇಳುವಲ್ಲಿ ಸಫಲರಾಗಿದ್ದಾರೆ.ಇದಕ್ಕಿಂತ ಮೊದಲಿಗೆ ಸುಧಾರಣವಾದಿ ರಾಜಕಾರಣಿಗಳ್ಯಾರು ಉದ್ಯಮ ಆಧಾರಿತ ಅಭಿವೃದ್ಧಿ ಯೋಜನೆಗಳಿಂದ ಬಡವರ ಬಾಳು ಹಸನಾಗುವುದರ ಬಗ್ಗೆ ತೋರಿಸುವಲ್ಲಿ ಸಫಲರಾಗಿರಲಿಲ್ಲ” – (Page 310)

೩.”ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸಲು ಶುರುಮಾಡಿದಾಗ,ನನ್ನ ತಂದೆಯವರ ಪ್ರತಿಪಾದಿಸುತಿದ್ದ ‘ನೆಹರೂ ಸೋಷಿಯಲಿಸಂ’ ಅನ್ನುವ ಭ್ರಮೆಯನ್ನು ಕಳಚಿ ಎಸೆಯಬೇಕಾಗಿ ಬಂತು”- (Page 17)

೪.”ಕಾಂಗ್ರೆಸ್ಸ್ ಸರ್ಕಾರಗಳು ಬಲಿಷ್ಟ ಜಾತಿಗಳ ತೆಕ್ಕೆಗೆ ಅಧಿಕಾರವನ್ನು ನೀಡಿ, ಕುಟುಂಬ ರಾಜಕಾರಣವನ್ನು ಜಾರಿಗೆ ತಂದವು.ಆ ಮೂಲಕ ಆಡಳಿತವನ್ನು ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ರಕ್ತಸಂಬಂಧದಲ್ಲೇ ಇರುವಂತೆ ನೋಡಿಕೊಂಡವು”- (Page 158)

ಮೇಲೆ ಉಲ್ಲೇಖಿಸಿರುವ ಅಂಶಗಳನ್ನು ನೋಡಿದರೆ ಇದ್ಯಾರೋ ಬಿಜೆಪಿಯ ಪರ ಒಲವುಳ್ಳ ಲೇಖಕನೋ,ಅಥವಾ ಬಿಜೆಪಿಯ ರಾಜಕಾರಣಿಯೋ ಬರೆದಿರುವುದು ಅನ್ನಿಸುತ್ತದಲ್ಲವೇ? ಮತ್ತಷ್ಟು ಓದು »

15
ಏಪ್ರಿಲ್

ಬಯಲಾಗುತ್ತಿರುವ ಬುದ್ಧಿಜೀವಿಗಳ ಮನೋಲೋಕ..!

-ರಮಾನಂದ ಐನಕೈ

ಪ್ರಭುತ್ವವನ್ನು ಓಲೈಸಿಕೊಳ್ಳದಿದ್ದರೆ ಸಾಹಿತಿಗಳಿಗೂ ಉಳಿಗಾಲವಿಲ್ಲದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ, ಅಕಾಡೆಮಿಗಳ ಪ್ರಶಸ್ತಿಗಳು, ಅನುದಾನಗಳು, ಫೆಲೋಶಿಫ್ಗಳು, ವಿಶ್ವವಿದ್ಯಾಲಯಗಳ ಕುಲಪತಿತ್ವ ಮತ್ತು ವಿವಿಧ ಕಲಾಸಾಹಿತ್ಯ ಸಂಸ್ಥೆಗಳ ಹುದ್ದೆಗಳನ್ನು ಪಡೆಯಬೇಕಾದರೆ ದೊರೆಗಳ ಹಿಂದೆ ಬಹುಪರಾಕ್ ಹಾಕುತ್ತ ಓಡಾಡಬೇಕಾಗುತ್ತದೆ. ಅಂತೆಯೇ ರಾಜಕೀಯದವರಿಗೂ ಕೂಡ ಸಾಹಿತಿಗಳನ್ನು ಮತ್ತು ಕಲಾವಿದರನ್ನು ಹತ್ತಿಕ್ಕಿ ಮುನ್ನಡೆಯಲು ಸಾಧ್ಯವಿಲ್ಲ. ಏಕೆಂದರೆ ಕನ್ನಡ ನಾಡಿನ ಸಾಂಸ್ಕೃತಿಕ ಶರೀರವನ್ನು ಎತ್ತಿ ತೋರಿಸಿ ಇಲ್ಲೊಂದು ಭೌತಿಕ ಪ್ರಭುತ್ವಕ್ಕೆ ಅನುವು ಮಾಡಿಕೊಡುವಲ್ಲಿ ಸಾಹಿತಿಗಳ ಪಾತ್ರ ಹಿರಿದಾಗಿದೆ. ಜೊತೆಗೆ ಸಾಹಿತಿಗಳು ಭಾಷೆಯನ್ನು ಬೆಳೆಸುವವರು ಮತ್ತು ಉಳಿಸುವವರು ಎಂಬ ಸಾಮಾನ್ಯ ನಂಬಿಕೆ. ಹಾಗಂತ ಈ ನಂಬಿಕೆಯ ಹಿಂದಿನ ಸತ್ಯಾಸತ್ಯತೆಯನ್ನೂ ಯಾರೂ ಒರೆಗೆ ಹಚ್ಚಿಲ್ಲ ಆ ಪ್ರಶ್ನೆ ಬೇರೆ. ಹಾಗಾಗಿ ಕಳ್ಳರು ದೇವರನ್ನು ಬಳಸಿಕೊಂಡಂತೆ ರಾಜಕಾರಣಿಗಳು ಸಾಹಿತಿಗಳನ್ನು ಕಾಲಕ್ಕೆ ತಕ್ಕುನಾಗಿ ಉಪಯೋಗಿಸಿಕೊಳ್ಳುತ್ತಾರೆ. ಸಾಹಿತಿಗಳು ಚುನಾವಣೆಗಳಲ್ಲಿ ಭಾಗಿಯಾಗಬಾರದೆ? ಅವರಿಗೂ ವಾಕ್ ಸ್ವಾತಂತ್ರ್ಯವಿಲ್ಲವೆ? ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳು ಕನ್ನಡದ ಸಾರಸ್ವತ ಲೋಕವನ್ನು ಆವರಿಸಿಕೊಂಡಿದೆ. ಆದರೆ ಈ ಪ್ರಶ್ನೆಗಳಿಗೆ ಉತ್ತರಿಸುವುದು ತಿಳಿದುಕೊಂಡಷ್ಟು ಸುಲಭವಾಗಿಲ್ಲ.

ಕರ್ನಾಟಕದಲ್ಲಿ ಪಕ್ಷಗಳ ಪರವಾಗಿ ಸಾಹಿತಿಗಳು ಅಖಾಡಕ್ಕೆ ಇಳಿದಿದ್ದಾರೆ. ಮೊದಲು ಪ್ರಾರಂಭಿಸಿದವರು ಕಾಂಗ್ರೇಸ್ ಪರವಾದ ಸಾಹಿತಿಗಳು. ಅದಕ್ಕೆ ವಿರೋಧವಾಗಿ ಪ್ರತಿಕ್ರಿಯಿಸಿದ ಒಂದಿಷ್ಟು ಸಾಹಿತಿಗಳಿಗೆ ಬಿ.ಜೆ.ಪಿ.ಪಟ್ಟ ಕಟ್ಟಲಾಯಿತು. ಇಲ್ಲಿ ಯಾರು ಯಾರನ್ನು ಸಮರ್ಥಿಸಿದರು ಎಂಬುದು ವಾದಕಾರಣವಲ್ಲ. ಕೆಲವು ಸಾಹಿತಿಗಳು ಪಕ್ಷರಾಜಕಾರಣವನ್ನು ಆತುಕೊಂಡು ತಮ್ಮ ಅಪಕ್ವ ನಿಲುವುಗಳನ್ನು ಹೊರಗೆಡಹಿದ ರೀತಿ ಮಾತ್ರ ತೀರಾ ಹಾಸ್ಯಾಸ್ಪದವಾಗಿದೆ. ಅಹಿಂದ್ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ, ಭಾರತೀಯ ಸಂಪ್ರದಾಯಗಳೆಲ್ಲ ಮೂಢನಂಬಿಕೆಗಳಾದ್ದರಿಂದ ನಿಷೇಧಿಸಬೇಕು, ಮದುವೆಯಾದ ಮುಸ್ಲಿಮ ಮಹಿಳೆಯರಿಗೆ ಮಾತ್ರ ಮಂಚ ಮುಂತಾದ ಸರ್ಕಾರಿ ಘೋಷಣೆಗಳಿಗೆಲ್ಲ ತುಟಿ ಪಿಟಕ್ಕೆನ್ನದೆ ಕುಳಿತ ಸಮನ್ವಯವಾದಿಗಳು ಈ ಚುನಾವಣಾ ಪ್ರಕರಣದ ಮೂಲಕ ತಾವು ನಿರ್ದಿಷ್ಟ ಪಕ್ಷದ ಮುಖವಾಣಿಗಳು ಎಂಬುದನ್ನು ಸಾಬೀತು ಮಾಡಿದರು. ಮತ್ತಷ್ಟು ಓದು »