ವಿಷಯದ ವಿವರಗಳಿಗೆ ದಾಟಿರಿ

Archive for

10
ಆಕ್ಟೋ

ಆಳ್ವಾಸ್ ನುಡಿಸಿರಿ – 2015

– ಡಾ| ಎಂ.ಮೋಹನ ಆಳ್ವ
ಅಧ್ಯಕ್ಷರು,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ),ಮೂಡುಬಿದಿರೆ

ಆಳ್ವಾಸ್ ನುಡಿಸಿರಿ 2015ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವು ನಡೆಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಈ ಸಮ್ಮೇಳನವನ್ನು ಕಳೆದ 12 ವರ್ಷಗಳಿಂದ ಕನ್ನಡ ಬಾಂಧವರ ಸಹಕಾರದಿಂದ ನಿರಂತರವಾಗಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನು, ಸಂಸ್ಕೃತಿ ಪ್ರೀತಿ-ಗೌರವಗಳನ್ನು ವೃದ್ಧಿಸಲು ಸಾಧ್ಯವಾಗಿದೆ. ಕನ್ನಡಿಗರ ಹೆಮ್ಮೆಯ ಈ ಕಾರ್ಯಕ್ರಮವು ಈ ವರ್ಷ ನವೆಂಬರ್ 26, 27, 28 ಮತ್ತು 29 (ಗುರುವಾರ, ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರ) ನೇ ದಿನಾಂಕಗಳಂದು ನಾಲ್ಕು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ಆಳ್ವಾಸ್ ನುಡಿಸಿರಿ ಉದ್ಘಾಟನೆಗೆ ನೂತನ ವೇದಿಕೆ

ನವೆಂಬರ್ 26 ರಂದು ಸಂಜೆ ಗಂಟೆ 6.00 ಕ್ಕೆ ಆಳ್ವಾಸ್ ನುಡಿಸಿರಿಯ ಉದ್ಘಾಟನೆಯು ಅದಕ್ಕೆಂದೇ ನಿರ್ಮಾಣವಾದ ವೇದಿಕೆಯಲ್ಲಿ ನಡೆಯಲಿದೆ. ಸುಮಾರು 20,000 ಪ್ರೇಕ್ಷಕರು ನೋಡಿ ಆನಂದಿಸಬಹುದಾದ  ಬೃಹತ್ ಸಭಾಂಗಣವು ಇದಾಗಿದೆ. ಉಳಿದಂತೆ, 27, 28, 29ನೇ ದಿನಾಂಕಗಳಂದು ‘ಕರ್ನಾಟಕ : ಹೊಸತನದ ಹುಡುಕಾಟ’ ಎನ್ನುವ ಪ್ರಧಾನ ಪರಿಕಲ್ಪನೆಯಲ್ಲಿ ವಿವಿಧ ಗೋಷ್ಠಿಗಳು, ಸಂಸ್ಮರಣೆ, ಕವಿಸಮಯ-ಕವಿನಮನ, ವಿಶೇಷೋಪನ್ಯಾಸಗಳು ರತ್ನಾಕರವರ್ಣಿ ವೇದಿಕೆಯ ನುಡಿಸಿರಿ ಸಭಾಂಗಣದಲ್ಲಿ ನಡೆಯಲಿವೆ. 29ನೇ ದಿನಾಂಕದಂದು 3.00 ಗಂಟೆಗೆ  ಸಮಾರೋಪ ಸಮಾರಂಭವು ಜರುಗಲಿದೆ.

ಆಳ್ವಾಸ್ ನುಡಿಸಿರಿ 2015ರ ಸರ್ವಾಧ್ಯಕ್ಷತೆಗೆ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಆಯ್ಕೆ.
ಮತ್ತಷ್ಟು ಓದು »

10
ಆಕ್ಟೋ

ಮಂಡೆ ಮೊಸರಾದ ಕಥೆ!

– ತೇಜಸ್ ಡೋಂಗ್ರೆ,ಚಿಕ್ಕಮಗಳೂರು

ಮಂಡೆ ಮೊಸರುಬೆಂಗಳೂರು, ತನ್ನ ವಾಹನ ದಟ್ಟನೆಯಿಂದಲೂ ಒಂದು ಜಾಗದಿಂದಿನ್ನೊಂದಕ್ಕೆ ದಿನಕ್ಕೆರಡು ಬಾರಿ ವಿಧಿಯಿಲ್ಲದೆ ಪ್ರಯಾಣಿಸುವ ನನ್ನಂಥವರಿಂದಲೂ, ಆಗಾಗ್ಗೆ ಶ್ರೇಣೀಯ ಸಮಾನತೆಯನ್ನು ಇರುವೆ ಕಚ್ಚಿದ ಹಾಗೆ ನೆನಪಿಸಿಕೊಂಡು ಧಿಗ್ಗನೆದ್ದು ಕುಣಿದು ದಿನಪತ್ರಿಕೆಗಳಲ್ಲಿ ಅರಚುವ ಕಮ್ಯುನಿಸ್ಟರ ರೀತಿಯನ್ನು ನೆನಪಿಸುತ್ತದೆ.

ಹೇಗೆಂದು ಹೇಳುತ್ತೇನೆ ಕೇಳಿ.ಕೋಟಿ ದುಡಿಯುವ ಕಂಪೆನಿ ಮುಖ್ಯಸ್ಥನೂ ,ಬಡಪಾಯಿಗಳಾದ ನನ್ನಂಥವರೂ ಊರಿಗೆ ಹೊರಡಬೇಕೆಂದರೆ ಬರಬೇಕೆಂದರೆ ಸಮುದ್ರದಂತಿರುವ ವಾಹನ ದಟ್ಟಣೆಯನ್ನು ದಾಟಿಕೊಂಡೇ ಬರಬೇಕು,ನಾವ್ಯಾರೂ ಅಂಜನೇಯ ಸ್ವರೂಪಿಗಳಲ್ಲವಷ್ಟೇ.ಅದಕ್ಕೇ ಹೇಳಿದ್ದು ನೀನೂರಿಗೆ ರಾಜನಾದರೂ ಬೆಂಗಳೂರಿನ ರಸ್ತೆಗಳಿಗೆ ಒಬ್ಬ ಪ್ರಯಾಣಿಕನೇ,ಜಾಸ್ತಿಯೇನಲ್ಲ.

ಮತ್ತಷ್ಟು ಓದು »

10
ಆಕ್ಟೋ

ಈಗ ಎಲ್ಲರ ಚಿತ್ತ ಬಿಹಾರದತ್ತ…..!!!

– ಕೆ.ಎಸ್ ರಾಘವೇಂದ್ರ ನಾವಡ

ಬಿಹಾರ ಚುನಾವಣೆಬಿಹಾರದಲ್ಲಿ ಮತ್ತೊಮ್ಮೆ ನರೇ೦ದ್ರ ಮೋದಿಯವರ ಚರಿಶ್ಮಾ  ಸಾಬೀತಾಗಲು ಆಖಾಡ ಸಿಧ್ಧವಾಗಿದೆ! ತನ್ನ ೧೮ ವರ್ಷಗಳ ಮಿತ್ರಪಕ್ಷವೀಗ ಬಿಹಾರದಲ್ಲಿ ಭಾ.ಜ.ಪಾಕ್ಕೆ ಎದುರಾಗಿ ಚುನಾವಣಾ ಆಖಾಡದಲ್ಲಿ ತನ್ನೆಲ್ಲ ವಿರೋಧಿಗಳೊ೦ದಿಗೆ ಕೈ ಜೋಡಿಸಿಕೊ೦ಡು ಮೈಕೊಡವಿ ಮೇಲೆದ್ದಿದೆ! ಎ೦ದಿಗೂ ಮೈತ್ರಿ ಸಾಧ್ಯವೇ ಇಲ್ಲವೇನೋ ಎ೦ಬ೦ತೆ ಬಧ್ಧ ಎದುರಾಳಿಗಳಾಗಿದ್ದ ಲಾಲು-ನಿತೀಶ್ ಒ೦ದಾಗಿದ್ದಾರೆ. ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಮಿತ್ರರಲ್ಲ ಹಾಗೆಯೇ ಶತ್ರುಗಳೂ  ಅಲ್ಲ ! ಎ೦ಬುದು ಸಾಬೀತಾಗಿದೆ! ಜೊತೆಗೆ ಕಾ೦ಗ್ರೆಸ್, ಜೆ.ಎಮ್. ಸೊರೇನ್ ಎಲ್ಲಾ ನಿತೀಶ್ರೊ೦ದಿಗೆ ಕೈ ಜೋಡಿಸಿದ್ದಾರೆ! ಇತ್ತ ಭಾ.ಜ.ಪಾದೊ೦ದಿಗೆ ಮಾ೦ಜಿ, ರಾಮ್ ವಿಲಾಸ್ ಪಾಸ್ವಾನ್ ಜೊತೆಯಾಗಿದ್ದಾರೆ. ಒಟ್ಟಾರೆ ರ೦ಗ ಸಿಧ್ಧವಾಗಿದೆ.ನಾಟಕ ಇನ್ನಷ್ಟೇ ಶುರುವಾಗಬೇಕಿದೆ!

ಕಾ೦ಗ್ರೆಸ್ ಗೆ ಏಕಾ೦ಗಿಯಾಗಿ ಬಿಹಾರದಲ್ಲಿ ಸ್ಪರ್ಧಿಸುವ ತಾಕತ್ತೇ ಇಲ್ಲ. ಬಿ.ಜೆ.ಪಿಗಾದರೂ ಸ್ವಲ್ಪವಾದರೂ ತಾಕತ್ತಿದೆಯೇನೋ ಎನ್ನಬಹುದು! ಬೇರಾವ ಪಕ್ಷಗಳಿಗೂ ಅಲ್ಲಿ ಸ್ವ೦ತ ನೆಲೆ ಇಲ್ಲ! ಪಕ್ಕದಲ್ಲಿ ಯಾರದರೊಬ್ಬರು ಇರಲೇಬೇಕು. ಹೆಚ್ಚಾಗಿ ನರೇ೦ದ್ರ ಮೋದಿ ಬ೦ದ ನ೦ತರ ವಿರೋಧ ಪಕ್ಷಗಳೆಲ್ಲಾ ಮಖಾಡೆ ಮಲಗಿ ಬಿಟ್ಟಿವೆ! ಸ೦ಸತ್ ಅಧಿವೇಶನ ನಡೆಯದ೦ತೆ ಮಾಡುವಲ್ಲಿ ಮಾತ್ರವೇ ವಿರೋಧ ಪಕ್ಷಗಳ ತಾಕತ್ತು ಸಾಬೀತಾಗಿದ್ದು ಬಿಟ್ಟರೆ, ಕಾ೦ಗ್ರೆಸ್ ನಲ್ಲೀಗ ಮೌನ! ರಾಹುಲ್ ಹಿ೦ದೆ ಸರಿದಿದ್ದಾರೆ. ಮತ್ತೊಮ್ಮೆ ಸೋನಿಯಾರಿಗೇ ದಾರಿ ಮಾಡಿಕೊಟ್ಟಿದ್ದಾರೆ! ರಾಹುಲ್ ಗಾ೦ಧೀಯದ್ದೀಗ ಮೌನ ಕ್ರಾ೦ತಿ! ಬಿಹಾರದಲ್ಲಿ ಮಹಾ ಮೈತ್ರಿಕೂಟದಿ೦ದ ಸಮಾಜವಾದಿ ಪಕ್ಷ ಹೊರಗೆ ಬ೦ದು ಸ್ವತ೦ತ್ರವಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದು ಆ ಮಟ್ಟಿಗಾದರೂ ವಿರೋಧಿಗಳ ಬಲವನ್ನು ಕು೦ಠಿತಗೊಳಿಸಿದ್ದು ಸತ್ಯವೂ ಹೌದು! ಹಿ೦ದೆ ಜಾರ್ಖ೦ಡ್ ನಲ್ಲಿನ ತನ್ನ ಸರಕಾರವನ್ನು ಬೀಳಿಸಿದ್ದ ಜೆ.ಎಮ್.ಎಮ್ ಇಲ್ಲಿ ಭಾ.ಜ.ಪಾವನ್ನು ಹೆಡೆಮುರಿ ಕಟ್ಟಲು ನಿತೀಶ್ ರೊ೦ದಿಗೆ ಕೈಗೂಡಿಸಿದೆ. ಒಟ್ಟಾರೆ ಅಲ್ಲೀಗ ಎರಡು ಬಣಗಳು!. ಒ೦ದು ನಿತೀಶ್ –ಲಾಲೂ ಮೈತ್ರಿಕೂಟವಾದರೆ ಮತ್ತೊ೦ದೆಡೆ ಭಾ,ಜಪಾ ಮೈತ್ರಿಕೂಟ.
ಮತ್ತಷ್ಟು ಓದು »