ವಿಷಯದ ವಿವರಗಳಿಗೆ ದಾಟಿರಿ

Archive for

12
ಆಕ್ಟೋ

ಇಂಡಿಯಾಸ್ ಡಾಟರ್ ಮತ್ತು ಬಿಬಿಸಿ-ವಿದೇಶಿಗರೊಬ್ಬರ ಬಿಚ್ಚು ನುಡಿ

ಇಂಗ್ಲಿಷ್ ಮೂಲ: ಜೇಕಬ್ ಡಿ ರೂವರ್
ಕನ್ನಡಕ್ಕೆ: ಅಶ್ವಿನಿ ಬಿ ದೇಸಾಯಿ, ಆರೋಹಿ, ಬೆಂಗಳೂರು

ಸಂತ್ರಸ್ತೆದೆಹಲಿಯಲ್ಲಿ ವರ್ಷಗಳ ಹಿಂದೆ ನಡೆದ ನಿರ್ಭಯಾ ಪ್ರಕರಣ ದೇಶವನ್ನಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಗೆಬಗೆಯ ಚರ್ಚೆಗೆ ಗ್ರಾಸವಾಗಿತ್ತು. ಅತ್ಯಾಚಾರದಂಥ ಹೇಯ ಕೃತ್ಯಗಳು ಎಲ್ಲೇ ನಡೆದರೂ ಖಂಡನೀಯ.ಇಂದು (12 ಅಕ್ಟೋಬರ್ 2015) ಕೂಡ ದೆಹಲಿಯಲ್ಲಿಯೂ ಮಂಡ್ಯದಲ್ಲಿಯೂ ಇದೇ ಬಗೆಯ ಪ್ರಕರಣಗಳ ವರದಿಯಾಗಿದೆ. ಇಂಥ ಕೃತ್ಯಗಳನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಹೇಗೆ ನೋಡುತ್ತವೆ? ಚರ್ಚೆಯ ದಿಕ್ಕನ್ನು ಹೇಗೆ ತಪ್ಪಿಸುತ್ತವೆ? ಭಾರತದೊಳಗಿನ ಚರ್ಚೆಯನ್ನು ಕೂಡ ಹೇಗೆ ಪ್ರಭಾವಿಸುತ್ತಿವೆ? ಈ ನೆಪದಲ್ಲಿ ಭಾರತವನ್ನು ಹೇಗೆ ಚಿತ್ರಿಸುತ್ತವೆ? ಎಂಬ ಬಗ್ಗೆ ಬೆಲ್ಜಿಯಂನ ಪ್ರಾಧ್ಯಾಪಕ ರೂವರ್ ಅವರು ನೀಡಿದ ಒಂದು ಒಳನೋಟ.

ಹೀಗೊಮ್ಮೆ ಕಲ್ಪಿಸಿಕೊಳ್ಳಿ. ದೇಶದಲ್ಲಿರುವ ಶಿಶುಕಾಮ ಹಗರಣಗಳ ಬಗ್ಗೆ ಕೇಳಿದ ಚಿತ್ರ ನಿರ್ಮಾಪಕಿಯೊಬ್ಬರು ಬೆಲ್ಜಿಯಂಗೆ ಪ್ರವಾಸ ಕೈಗೊಳ್ಳುತ್ತಾರೆ. ಕುಖ್ಯಾತ ಶಿಶುಕಾಮಿಯೊಬ್ಬನ ಸಂದರ್ಶನವನ್ನೊಳಗೊಂಡ ಕಿರುಚಿತ್ರವೊಂದನ್ನು ಆಕೆ ನಿರ್ದೇಶಿಸುತ್ತಾಳೆ. ತಾನು ಅತ್ಯಾಚಾರವೆಸಗಿದ ಹೆಣ್ಣುಮಕ್ಕಳು ನಿಜವಾಗಿ ತನ್ನನ್ನೇ ಕೆಡಿಸಲು ಮುಂದಾದರಲ್ಲದೇ,ತನ್ನ ಕೃತ್ಯವನ್ನು ಅವರು ಸಂತೋಷದಿಂದ ಅನುಭವಿಸಿದ್ದಾರೆ ಎಂದು ಈ ಮನುಷ್ಯ ಹೇಳುತ್ತಾನೆ. ಏನನ್ನು ಚಿಂತಿಸಬೇಕೆಂದು ಇಂಥ ಶಿಶುಕಾಮಿಗಳಿಗೆ ಬೋಧಿಸುವ ಮೂಲಕ? ಬೆಲ್ಜಿಯಂ ಸಮಾಜ ಇದಕ್ಕೆ ಜವಾಬ್ದಾರಿ ಎಂದು ಚಿತ್ರನಿರ್ಮಾಪಕಿ ಟಿಪ್ಪಣಿ ನೀಡುತ್ತಾಳೆ. ಈ ದೇಶದ ಬಹುತೇಕ ಪುರುಷರು ಹೀಗೇ ತಯಾರಾಗಿದ್ದಾರೆಂದೂ ಆಕೆ ಹೇಳುತ್ತಾಳೆ. ನಿಜವಾಗಿ ಶಿಶುಕಾಮ ಬೆಲ್ಜಿಯಂನ ದೊಡ್ಡ ರೋಗ ಮತ್ತು ಸಂಸ್ಕೃತಿಯ ಭಾಗವಾದ್ದರಿಂದ ಬೆಲ್ಜಿಯಂ ಸಿನಿಮಾಗಳೂ ಅದನ್ನೇ ಪ್ರತಿಫಲಿಸುತ್ತವೆ ಎಂಬ ತೀರ್ಮಾನಕ್ಕೆ ಬರುತ್ತಾಳೆ. ಬೆಲ್ಜಿಯಂನ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಈ ರೀತಿಯ ಹೇಳಿಕೆಗಳು ಆಘಾತಕಾರಿಯೂ, ನಮ್ಮನ್ನು ಕೆರಳಿಸುವಂಥದ್ದೂ ಆಗಿದೆ ಎಂದು ನಾವು ಭಾವಿಸುತ್ತೇವೆ. ಈ ರೀತಿಯ ಹೇಳಿಕೆಗಳು ಶಿಶುಕಾಮ ನಮ್ಮ ಸಂಸ್ಕೃತಿಯ ತಿರುಳಿನ ಅಭಿವ್ಯಕ್ತಿಯಾಗಿದ್ದು ಬಾಲದೌರ್ಜನ್ಯ ನಡೆಸುವಂತೆಯೇ ನಮ್ಮನ್ನೆಲ್ಲರನ್ನು ಸಿದ್ದಪಡಿಸಿದ್ದಾರೆ ಎನ್ನುವ ಭಾವನೆಯನ್ನು ಹುಟ್ಟಿಸುತ್ತದೆ.

ಮತ್ತಷ್ಟು ಓದು »