ವಿಷಯದ ವಿವರಗಳಿಗೆ ದಾಟಿರಿ

Archive for

21
ಆಕ್ಟೋ

ಸೆಕ್ಯುಲರ್ವಾದಿ ಸಂಕಥನದ ವೈರುಧ್ಯಗಳು

e0b2aee0b382e0b2b2e0b2ade0b382e0b2a4e0b2b5e0b2bee0b2a6e0b2bf-e0b2b8e0b386e0b295e0b38de0b2afe0b381e0b2b2e0b2b0e0b2bfe0b2b8e0b2822ಡಾ. ಅಜಕ್ಕಳ  ಗಿರೀಶ ಭಟ್

   ಪ್ರಜಾವಾಣಿಯಲ್ಲಿ ಸೆ.19 ಮತ್ತು 21ರಂದು ಪ್ರಕಟವಾದ ಮುಜಾಫರ್ ಅಸ್ಸಾದಿ ಹಾಗೂ ಆಕಾರ್ ಪಟೇಲ್ ಅವರ ಲೇಖನಗಳನ್ನು ನಾನು ಪ್ರಸ್ತುತ ಭಾರತದ ಸೆಕ್ಯುಲರ್ ಸಾಹಿತ್ಯ ಅಥವಾ ಸಂಕಥನದ ಭಾಗ ಎಂದು ಪರಿಗಣಿಸಿದ್ದೇನೆ. ಇದನ್ನು ಸಾಹಿತ್ಯ ಮತ್ತು ಸಂಸ್ಕೃತಿ ವಿಮರ್ಶೆಯ ವಿದ್ಯಾರ್ಥಿಯಾದ ನಾನು ವಿಮರ್ಶಿಸುವ ನಿಟ್ಟಿನಲ್ಲಿ ಸೆ.26ರ ಪ್ರಜಾವಾಣಿಯಲ್ಲಿ ಕಿರುಲೇಖನ ಬರೆದಿದ್ದೆ. ಇದಕ್ಕೆ ಪ್ರತಿಯಾಗಿ ಡಾ. ಕಿರಣ್ ಎಂ. ಗಾಜನೂರು ಅವರು ಎತ್ತಿದ ಪ್ರಶ್ನೆಗಳಿಗೆ (ಪ್ರಜಾವಾಣಿ ಸೆ.28) ಉತ್ತರವಾಗಿ ಕೆಲವು ಮಾತುಗಳನ್ನು ಹೇಳಬೇಕಾಗಿದೆ.

   ನಾನು ಬರೆದ ಕಿರುಲೇಖನದ ಉದ್ದೇಶ ಸೆಕ್ಯುಲರ್ವಾದಿ ಸಂಕಥನದಲ್ಲಿ ಇರುವ ವೈರುಧ್ಯಗಳನ್ನು ತೋರಿಸುವುದಾಗಿತ್ತು. ಸಂಘಪರಿವಾರವನ್ನು ವಿರೋಧಿಸುವ ಭರದಲ್ಲಿ ಸೆಕ್ಯುಲರ್ವಾದಿ ಸಂಕಥನವು ತಾನು ಹೆಣೆದ ಬಲೆಯಲ್ಲಿ ತಾನೇ ಸಿಕ್ಕಿಕೊಳ್ಳುತ್ತ ಕಳೆದ ಕೆಲವು ದಶಕಗಳಲ್ಲಿ ಕೋಮುವಾದ ಮತ್ತು ಮೂಲಭೂತವಾದಕ್ಕೆ ಪರಿಹಾರವನ್ನು ಹುಡುಕುವಲ್ಲಿ ವಿಫಲವಾಗಿದೆ ಎಂದು ಸೂಚಿಸುವುದಾಗಿತ್ತು. ಅಸ್ಸಾದಿಯವರ ಮತ್ತು ಆಕಾರ್ ಲೇಖನಗಳಂತೆಯೇ ಕಿರಣ್ ಅವರ ಬರಹವೂ ಇದೇ ಸಂಕಥನದ ಒಂದು ಭಾಗ. ಕಿರಣ್ ಅವರು ನಾನು ತೋರಿಸಿರುವ ಸಮಸ್ಯೆಗಳನ್ನು ಸ್ಪರ್ಶಿಸದೆ, ಅಸ್ಸಾದಿ ಮತ್ತು ಆಕಾರ್  ಲೇಖನಗಳಲ್ಲಿ ಇರುವ, ನಾನು ಕೂಡ ಒಪ್ಪುವ ವಿಚಾರಗಳನ್ನೇ ಪುನರುಚ್ಚರಿಸಿದ್ದಾರೆ. ಮತ್ತಷ್ಟು ಓದು »

21
ಆಕ್ಟೋ

ಪ್ರಶಸ್ತಿ ಹಿಂತಿರುಗಿಸುವಿಕೆ ಮತ್ತು ಸೆಕ್ಯುಲರ್ ಸಮೂಹ ಸನ್ನಿ

– ರಾಕೇಶ್ ಶೆಟ್ಟಿ

ಸಮೂಹ ಸನ್ನಿದೇಶದಲ್ಲಿ ಪ್ರಶಸ್ತಿ ಹಿಂತಿರುಗಿಸುವಿಕೆಯ ಪರ್ವ ಭರ್ಜರಿಯಾಗಿ ಶುರುವಾಗಿದೆ.ಕಲ್ಬುರ್ಗಿ ಹತ್ಯೆಯನ್ನು ಖಂಡಿಸಿ ಚಂಪಾ ಅವರಿಂದ ರಾಜ್ಯದಲ್ಲಿ ಶುರುವಾಗಿದ್ದು ಈಗ ನಯನತಾರಾ ಸೆಹಗಲ್ ಅವರು ಹಿಂದಿರುಗಿಸುವ ಮೂಲಕ ಸಾಮೂಹಿಕ ಸನ್ನಿಯಂತೆ ಹರಡಲಾರಂಭಿಸಿದೆ.ಇವರೆಲ್ಲಾ ನೀಡುತ್ತಿರುವ ಕಾರಣ “ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ.ತುರ್ತು ಪರಿಸ್ಥಿತಿಗಿಂತಲೂ ಭೀಕರವಾದ ಸನ್ನಿವೇಶವಿದೆ.ದಾದ್ರಿ ಹತ್ಯೆಯನ್ನು ವಿರೋಧಿಸಿ,ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಸಾಹಿತ್ಯ ಅಕಾಡೆಮಿಯ ಮೌನವನ್ನು ವಿರೋಧಿಸಿ,ಮೋದಿಯ ಮೌನವನ್ನು ವಿರೋಧಿಸಿ,’ ಇತ್ಯಾದಿ ಇತ್ಯಾದಿ ಕಾರಣಗಳನ್ನು ನೀಡಿದ್ದಾರೆ.

ನಿಜಕ್ಕೂ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಗಂಭೀರ ಸನ್ನಿವೇಶ ಸೃಷ್ಟಿಯಾಗಿದೆಯಾ? ಅಥವಾ ಸೆಕ್ಯುಲರ್ ಗುಂಪು ಸಮೂಹ ಸನ್ನಿಗೊಳಗಾಗಿದೆಯೇ? ಊಹೂಂ.ಸನ್ನಿಗೊಳಗಾಗುವಷ್ಟು ಮುಗ್ದರೇನಲ್ಲ ಇವರು. Mass Hysteria ಸೃಷ್ಟಿಸುವಷ್ಟು ಸಾಮರ್ಥ್ಯವುಳ್ಳ ಜನರಿವರು.2002ರ ಗುಜರಾತ್ ಗಲಭೆಯನ್ನು ನೆನಪು ಮಾಡಿಕೊಳ್ಳಿ.ಆಗ ಜನರು ಈ ಹುಟ್ಟು ಹಾಕಿದ ಸಮೂಹ ಸನ್ನಿಯೇನೂ ಕಡಿಮೆಯದೇ,ಒಬ್ಬ ಮುಖ್ಯಮಂತ್ರಿಯ ಮಿತಿಯಲ್ಲಿ ಏನೆಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿತ್ತೋ ಅದನ್ನೆಲ್ಲಾ ಮಾಡಿಯೂ ನರೇಂದ್ರ ಮೋದಿಯವರಿಗೆ ನರಹಂತಕ ಪಟ್ಟ ಕಟ್ಟಿಸಿ,ಆಗಿನ ಪ್ರಧಾನಿ ವಾಜಪೇಯಿಯವರಿಂದಲೂ ’ರಾಜಧರ್ಮ ಪಾಲನೆ’ಯ ಮಾತನ್ನೂ ಆಡಿಸಿಬಿಟ್ಟಿತ್ತು ಈ ಸೆಕ್ಯುಲರ್ ಸಮೂಹ ಸನ್ನಿ. ಹಾಗೆಂದು ಗುಜರಾತ್ ಗಲಭೆಯನ್ನೂ ಸಮರ್ಥಿಸುತ್ತಿಲ್ಲ.ಅದಕ್ಕೂ ಮೊದಲು ಈ ದೇಶ ಅಂತ ಗಲಭೆಯನ್ನೇ ನೋಡಿರಲಿಲ್ಲವಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ. ಮತ್ತಷ್ಟು ಓದು »