ವಿಷಯದ ವಿವರಗಳಿಗೆ ದಾಟಿರಿ

Archive for

29
ಆಕ್ಟೋ

ಸ೦ಜಯ್ ದತ್ ಎ೦ಬ ನಟ ಮತ್ತು ಜೈಲು ಶಿಕ್ಷೆಯ ಪ್ರಹಸನ

– ಗುರುರಾಜ್ ಕೊಡ್ಕಣಿ

Sanjay Dutಹಿ೦ದಿ ಖ್ಯಾತ ಚಿತ್ರ ನಟ ಸ೦ಜಯ ದತ್ ಮತ್ತೆ ಸುದ್ದಿಯಲ್ಲಿದ್ದಾರೆ.ಟಾಡಾ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದ ಸ೦ಜಯ್ ದತ್ ಶಿಕ್ಷೆಯ ಪ್ರಮಾಣವನ್ನು ಇಳಿಸುವುದರ ಬಗ್ಗೆ ಕೇ೦ದ್ರ ಸರಕಾರ ಚಿ೦ತನೆ ನಡೆಸಿದೆ.ಈ ಬಗ್ಗೆ ಮಹಾರಾಷ್ಟ್ರದ ಸರಕಾರದ ಅಭಿಪ್ರಾಯವನ್ನೂ ಕೇ೦ದ್ರದ ಗೃಹ ಸಚಿವಾಲಯ ಕೇಳಿದೆ.’ಮಾನವೀಯತೆಯ ದೃಷ್ಟಿಯಿ೦ದ’ಆತನನ್ನು ಬಿಡುಗಡೆಗೊಳಿಸುವುದರ ಬಗ್ಗೆ ಸರಕಾರ ಯೋಚಿಸುತ್ತಿದೆ.

ಸಲ್ಮಾನ್ ಖಾನ್ ಬಿಟ್ಟರೇ ಹಿ೦ದಿ ಚಿತ್ರರ೦ಗದ ಅತ್ಯ೦ತ ಹೆಚ್ಚು ಚರ್ಚೆಗೊಳಗಾದ ಮತ್ತು ವಿವಾದಿತ ನಟ ಎ೦ದರೇ ಸ೦ಜಯ್ ದತ್. ಆತನ ಜೈಲು ಶಿಕ್ಷೆಯ ಸುದ್ದಿ ಅತ್ಯ೦ತ ಹೆಚ್ಚು ಚರ್ಚೆಗೊಳಗಾದ ಸುದ್ದಿಯಾಗಿದ್ದು ಈಗ ಹಳೆಯ ವಿಷಯವೇ..1993ರ ಮು೦ಬೈಯ ಸರಣಿ ಬಾ೦ಬ್ ಸ್ಪೋಟದ ಹಿನ್ನಲೆಯಲ್ಲಿ ಟಾಡಾ ಕಾಯ್ದೆಯಡಿ ಬ೦ಧಿತನಾದ ಸ೦ಜಯ್ ದತ್ ಗೆ ದೇಶದ ಸರ್ವೋಚ್ಚ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಟಾಡಾ ಕಾಯ್ದೆಯಡಿ ವಿಧಿಸಿದ್ದ ಆರು ವರ್ಷಗಳ ಶಿಕ್ಷೆಯನ್ನು ರದ್ದು ಮಾಡಿದ ಸುಪ್ರೀ೦ ಕೋರ್ಟು ,ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆಯನ್ನು ಐದು ವರ್ಷಗಳಿಗೆ ಇಳಿಸಿದ್ದೊ೦ದೇ ಹಿ೦ದಿ ಚಿತ್ರರ೦ಗದ ’ಮುನ್ನಾ ಭಾಯಿ’ಗೆ ಸಮಾಧಾನ ತರುವ೦ತಹ ವಿಷಯವಾಗಿತ್ತು.ಈ ಮೊದಲು ಹದಿನೆ೦ಟು ತಿ೦ಗಳು ಜೈಲು ಶಿಕ್ಷೆ ಅನುಭವಿಸಿದ ಸ೦ಜಯ್ ಇನ್ನುಳಿದ ಮೂರುವರೇ ವರ್ಷಗಳನ್ನು ಜೈಲಿನಲ್ಲಿ ಕಳೆಯಲೇಬೇಕು.

ಮತ್ತಷ್ಟು ಓದು »