ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 1, 2014

73

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬

‍ನಿಲುಮೆ ಮೂಲಕ

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫

 

‘ಆವರಣ ‘ ಎಂಬ ವಿ-ಕೃತಿ  –  ಸಂಗ್ರಹ : ಗೌರಿ ಲಂಕೇಶ್

ಗೌರಿ ಲಂಕೇಶ್ ಅವರು ಸಂಗ್ರಹಿಸಿರುವ ‘ಆವರಣ’ ಎಂಬ ವಿಕೃತಿ’ (ಲಂಕೇಶ್ ಪ್ರಕಾಶನ ಬೆಂಗಳೂರು–೪, ೨೦೦೭) ವಿಮರ್ಶಾ ಸಂಕಲನದಲ್ಲಿ ಯು ಅರ್ ಅನಂತಮೂರ್ತಿ, ಕೆ ಮರುಳಸಿದ್ದಪ್ಪ, ರಹಮತ್ ತರೀಕೆರೆ, ಜಿ ರಾಜಶೇಖರ್, ಜಿ ಕೆ ಗೋವಿಂದರಾವ್, ಕೆ. ಫಣಿರಾಜ್ ಮುಂತಾದ ಪ್ರಸಿದ್ಧ ಲೇಖಕರು,ವಿಮರ್ಶಕರು ಹಾಗು ಚಿಂತಕರ ಲೇಖನಗಳಿವೆ. ‘ಆವರಣ’ದಲ್ಲಿ ಚಿತ್ರಿತಗೊಂಡಿರುವ ಚರಿತ್ರೆಯ ಅಂಶಗಳು ಎಷ್ಟರಮಟ್ಟಿಗೆ ನಂಬಲರ್ಹ/ಅದಷ್ಟೇ ನಿಜವೇ ಬೇರೆ ಮುಖಗಳು ಇಲ್ಲವೇ ಎಂಬುದರ ಜತೆಗೆ ಕಾದಂಬರಿಯ ತಾತ್ವಿಕತೆ, ರೂಪ,ವಿನ್ಯಾಸಗಳ ಬಗ್ಗೆ ಇಲ್ಲಿನ ಲೇಖನಗಳಲ್ಲಿ ಒತ್ತು ಜಾಸ್ತಿ. ಹಿಂದೆ ಏನೇನೋ ನಡೆದುಹೋಗಿದೆ;ಅದನ್ನೆಲ್ಲಾ ಮತ್ತೆ ಕೆದಕುವುದ್ಯಾಕೆ ಎಂಬ ಮಾತೂ ಆಗೀಗ ಬರುತ್ತದೆ. ಹೀಗಾಗಿ ಈ ವಿಮರ್ಶಾ ಸಂಕಲನದ ಲೇಖನಗಳನ್ನು ಸ್ವಲ್ಪ ವಿವರವಾಗಿ ಚರ್ಚಿಸಬೇಕಾಗಿದೆ.

ಎನ್ ಎಸ್ ಶಂಕರ್ ಅವರ ‘ಆವರಣ ಅನಾವರಣ’ದ ಬಗ್ಗೆ ನಾನು ಬರೆದ ಲೇಖನದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದ ಅಂಶಗಳು (ನೋಡಿ ‘ನಿಲುಮೆ’ಯಲ್ಲಿ ೧೪-೨-೧೪ರಂದು ಪ್ರಕಟವಾದದ್ದು) ಈ “ಮುಖಾಮುಖಿ”ಗೂ ಅನ್ವಯಿಸುತ್ತದೆ. ಅದರ ಜತೆಗೆ ದಿವಂಗತ ಡಾ. ಡಿ. ಆರ್. ನಾಗರಾಜ್ ಅವರ ‘ಸಂಸ್ಕೃತಿ ಕಥನ’ (ಪ್ರ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು-೨ ೨೦೦೬) ಕೃತಿಯಲ್ಲಿನ ‘ಒಂದು ವರ್ಷದ ದುಃಸ್ವಪ್ನ’ ಎಂಬ ಲೇಖನವನ್ನೂ ಗಮನಿಸಬಹುದು. ಆ ಲೇಖನದ ಕೆಲವು ಮುಖ್ಯಾಂಶಗಳು:- ಈ ಲೇಖನ ಬಾಬ್ರಿ ಮಸೀದಿ ಬಿದ್ದ ಒಂದು ವರ್ಷದ ನಂತರದ ವಿದ್ಯಮಾನಗಳಿಗೆ ಸಂಬಂಧಿಸಿದ್ದು. ಅಯೋಧ್ಯೆಯ ಬಗ್ಗೆ ಚರಿತ್ರಕಾರರ ಎರಡು ಗುಂಪುಗಳ ನಡುವೆ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯಲ್ಲಿ ನಡೆದ ದೊಡ್ಡ ವಾದ ವಿವಾದ ಕುರಿತಂತೆ ಡಿ ಆರ್ ಅವರು ಹೇಳುತ್ತಾರೆ ‘…… ಒಂದು ಕಡೆಗೆ ಮತಾಂಧ ರಾಜಕಾರಣಕ್ಕೆ ಬೆಂಬಲವಾಗಿ ನಿಂತ ಚರಿತ್ರಕಾರರ ಗುಂಪು. ಇನ್ನೊಂದು ಕಡೆಗೆ ಉದಾರವಾದಿ ಮತ್ತು ಪ್ರಗತಿಪರ ಚರಿತ್ರಕಾರರ ಗುಂಪು. ರಾಜಕೀಯವಾಗಿ ನನ್ನ (ಅಂದರೆ ಡಿ ಆರ್ ಅವರ) ಬೆಂಬಲ ಪೂರ್ಣವಾಗಿ ಎರಡನೆಯ ಗುಂಪಿನ ಕಡೆಗೆ. ಆದರೆ ಈ ಬಗೆಗೆ ವಸ್ತುನಿಷ್ಠವಾಗಿ ಚರ್ಚೆ ಆಯಿತೇ ಎಂಬ ಬಗೆಗೆ ನನ್ನ ಅನುಮಾನ ಇವತ್ತಿಗೂ ಉಳಿದು ಬಿಟ್ಟಿದೆ ……. ಪ್ರೊ. ಖಾನ್ ಆಲಿಘರ್ ವಿ. ವಿ.ಯ ಸೃಷ್ಠಿ. ಪ್ರೊ. ನೂರುಲ್ ಹಸನ್ ರ ಕಟ್ಟಾ ಶಿಷ್ಯ. ಹೀಗಾಗಿ ಮೊದಲಿಗೆ ಆತನ ಜಾತ್ಯಾತೀತತೆಯನ್ನು ಪ್ರಶ್ನಿಸುವುದು ಸಾಧ್ಯವೇ ಇರಲಿಲ್ಲ ……. ಪ್ರೊ. ಖಾನ್ ಈ ಬಗೆಗೆ ಮಾತು ಶುರು ಮಾಡಿದರು. ಪ್ರಗತಿಪರ ಚರಿತ್ರಕಾರರ ವಾದದಲ್ಲಿ ಪ್ರಗತಿಪರ ಶ್ರದ್ಧೆ ಇದೆ. ಆದರೆ ವಾಸ್ತವಾಂಶಗಳ ಬಗೆಗೆ ಅರಿವು ಸಾಲದು ಎಂದರು. ಅವರ ಮಾತು ಪೂರಾ ಕೇಳಿ ಹೇಳಿದೆ: ಖಾನ್ ಸಾಬ್ ನಿಮ್ಮ ಇತಿಹಾಸದ ಪಠ್ಯಾತ್ಮಕ ಶ್ರದ್ಧೆ ಮತಾಂಧರಿಗೆ ಸಹಾಯ ಮಾಡಬಾರದು. ಚರಿತ್ರೆಯ ‘ಸೋಕಾಲ್ಡ್’ ಅಂಶಗಳನ್ನು ಮಂಡಿಸುವ ಕ್ರಮವೂ ರಾಜಕೀಯ ಪ್ರೇರಿತವೆಂಬುದೇ ಚರಿತ್ರೆ, ಅಲ್ಲವೇ ಎಂದೆ……. ‘(ಪುಟ ೨೯೧ ಅದೇ).

ಆವರಣಡಿ ಆರ್ ಅವರು ಮಾರ್ಕ್ಸ್ ವಾದಿ ಒಲವಿದ್ದ ಚಿಂತಕರು ಮತ್ತು ವಿಮರ್ಶಕರು ಎಂಬುದು ಗಮನಿಸೆಕಾದ ಅಂಶ. ಮೇಲಿನ ಉಲ್ಲೇಖದಿಂದ ‘ಆವರಣ’ ಕಾದಂಬರಿಗೆ ನಮ್ಮ ಬುದ್ಧಿಜೀವಿಗಳ ವಿರೋಧ ಅವರ ಪ್ರಗತಿಪರತೆ, ಒಮ್ಮುಖವಾದ ಜಾತ್ಯಾತೀತತೆ(pseudo secularism)(?), ಚರಿತ್ರೆಯಲ್ಲಿನ ವಾಸ್ತವಾಂಶಗಳ ಕೊರತೆ ಕಾರಣವಿರಬಹುದೇ?. ‘…….. ವಿಕೃತಿ’ಯಲ್ಲಿನ ಲೇಖನಗಳೂ ಸೇರಿದಂತೆ ಇದುವರೆಗೆ ‘ಆವರಣ’ದ ಬಗ್ಗೆ ಬಂದಿರುವ ವಿಮರ್ಶೆಗಳಲ್ಲಿನ ಒಂದು ಪ್ರಮುಖವಾದ ಆರೋಪ ‘ಇದು ಅತ್ತ ಇತಿಹಾಸವೂ ಅಲ್ಲ, ಇತ್ತ ಕಾದಂಬರಿಯೂ ಆಗಿಲ್ಲ’. ಮಧ್ಯಯುಗದ ಇತಿಹಾಸದ ಅಭ್ಯಾಸಿಗಳಿಗೆ ಭೈರಪ್ಪನವರು ಕಾದಂಬರಿಯಲ್ಲಿ ಹೇಳುವ ಯಾವ ವಿಷಯವೂ ಹೊಸದಲ್ಲ. ಆದರೆ ಅವುಗಳೊಂದಿಗೆ ಇನ್ನಿತರ ಅನೇಕ ಘಟನೆಗಳು (ಭಕ್ತಿ ಪಂಥದ ಉದಯ,ಇತ್ಯಾದಿ) ಘಟಿಸಿದವು. ಅದನ್ನು ಕಾದಂಬರಿಕಾರರು ಪ್ರಸ್ತಾಪಿಸುವುದಿಲ್ಲ ಎಂಬುದು. ‘ಆವರಣ’ ಕುರಿತ ಸಂವಾದದಲ್ಲಿ ಪ್ರೇಕ್ಷಕರೊಬ್ಬರು ಈ ಬಗ್ಗೆ ಕೇಳಿದಾಗ ಭೈರಪ್ಪನವರು ‘ನಾನು ಬರೆದಿರುವುದು ಒಂದು ಕಾದಂಬರಿ. ಮಧ್ಯಯುಗದ ಇತಿಹಾಸದ ವಿಶ್ವಕೋಶವಲ್ಲ. ಬೇರೆ ಘಟನೆಗಳನ್ನು ಆಧರಿಸಿ ಬೇರೆಯವರು ಬರೆಯಬಹುದು’ ಎಂದು ಉತ್ತರ ಕೊಟ್ಟಿದ್ದನ್ನು ಪತ್ರಿಕೆಗಳು ವರದಿ ಮಾಡಿದ್ದವು.(ಆವರಣ ಮಾಧ್ಯಮ ಮಂಥನ ಪುಟ ೫೫ ೨೦೦೯).

‘ಆವರಣ’ ಕಾದಂಬರಿಯ ಇಂಗ್ಲೀಷ್ ಅನುವಾದ ಪ್ರಕಟಣೆಗೆ ಸಿದ್ಧವಾಗಿರುವ ಸಂದರ್ಭದ ಪ್ರಯುಕ್ತ ೨೮- ೨-೨೦೧೪ರಂದು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಸಂದರ್ಶನದಲ್ಲಿ ‘ನಿಮ್ಮನ್ನು ವಿರೋಧಿಸುವ ಎಡಪಂಥೀಯರು, ನಿಮ್ಮನ್ನು ಬೆಂಬಲಿಸುವ ಬಲ ಪಂಥೀಯರು ಇವರ ನಡುವೆ ನಿಮ್ಮ ಕಾದಂಬರಿಗೆ(ಆವರಣ) ಸಮತೂಕದ ವಿಮರ್ಶೆ ಸಿಗದೇ ಹೋಯಿತಾ?’ ಎಂಬ ಪ್ರಶ್ನೆಗೆ ಭೈರಪ್ಪನವರು ‘ಆವರಣ’ದ ತಂತ್ರದ ಬಗ್ಗೆ ಸರಿಯಾದ ಚರ್ಚೆ ನಡೆಯಲಿಲ್ಲ. ಅದನ್ನೊಂದು ಹೊಸ ಮುಕ್ತ ಬಗೆಯ ಸಾಹಿತ್ಯ ಕೃತಿಯಾಗಿ ಯಾರೂ ನೋಡಿ ಬರೆಯಲಿಲ್ಲ. ಅದರಲ್ಲಿರುವ ಹೊಸ ಬಗೆಯ ನಿರೂಪಣಾ ತಂತ್ರ,ವರ್ತಮಾನ-ಇತಿಹಾಸಗಳ ಜೋಡಣೆ, ರೆಫರೆನ್ಸ್ ಬುಕ್ ಗಳನ್ನು ಕೃತಿಯ ಭಾಗವಾಗಿಯೇ ತಂದದ್ದು ಇವುಗಳನ್ನು ಪರಿಗಣಿಸಬೇಕಿತ್ತು’ ಎಂದಿದ್ದಾರೆ. ‘ಆವರಣ ಎಂಬ ವಿ-ಕೃತಿ’ , ವಿಮರ್ಶಾಸಂಕಲನದ ಲೇಖನಗಳಲ್ಲಿನ ಬಹುಪಾಲು ಪ್ರಶ್ನೆಗಳಿಗೆ ಈ ದೀರ್ಘವಾದ ಮುನ್ನುಡಿಯಲ್ಲಿ ಉತ್ತರ ಸಿಗುತ್ತದೆ. ಆದ್ದರಿಂದ ಈ ಸಂಕಲನದಲ್ಲಿನ ಎಲ್ಲಾ ಲೇಖನಗಳ ಬಗ್ಗೆ ಇನ್ನು ವಿಶೇಷವಾಗಿ ಹೇಳುವಂತಹುದೇನೂ ಇಲ್ಲ. ಕೆಲವು ಮುಖ್ಯವಾದ ಲೇಖನಗಳು ಮತ್ತು ಅವುಗಳಲ್ಲಿನ ಪರಸ್ಪರ ವಿರೋಧಿ ಅಂಶಗಳನ್ನು ಗಮನಿಸಬಹುದು.

ಕೆ ಎಂ ಮರುಳಸಿದ್ದಪ್ಪನವರ ‘ಆವರಣದ ಅನಾವಾರಣ’ ವಿಮರ್ಶೆಯಲ್ಲಿ
(೧) “ನಾನು ಬರೆದ ಕಥಾ ನಿರೂಪಣೆಗೆ ಇನ್ನಷ್ಟು ಕಲಾತ್ಮಕತೆಯನ್ನು ಕೊಡ ಹೊರಟರೆ ಇತಿಹಾಸದ ವಾಸ್ತವತೆ ತೆಳುವಾಗುತ್ತದೆ. ಇತಿಹಾಸದ ವಾಸ್ತವತೆಯನ್ನು ಘನಿಷ್ಠವಾಗಿ ಉಳಿಸಿಕೊಳ್ಳಬೇಕಾದರೆ ಕಲಾತ್ಮಕತೆಯ ಹಂಬಲವನ್ನು ಕೈ ಬಿಡಬೇಕು” ಇತ್ಯಾದಿಯಾಗಿ ದ್ವಂದ್ವದಲ್ಲಿ ಸಿಲುಕಿ ಆವರಣದ ಕಥಾನಾಯಕಿ ಲಕ್ಷ್ಮಿ ಒದ್ದಾಡುತ್ತಾಳೆಂದು ಭೈರಪ್ಪನವರು ನಿರೂಪಿಸಿದ್ದಾರೆ. ಆದರೆ ಭೈರಪ್ಪನವರಿಗೆ ಈ ಒದ್ದಾಟವೇನೂ ಇರುವಂತೆ ಕಾಣಿಸುವುದಿಲ್ಲ. ಏಕೆಂದರೆ ಅವರು ಬರೆದಿರುವದು ಸುಳ್ಳು ಇತಿಹಾಸ ……. (…….. ವಿಕೃತಿ ಪುಟ ೯)

(೨) ಔರಂಗಜೇಬನ ಹಿಂದೂ ದ್ವೇಷ , ಕಾಶಿ-ಮಥುರಾ ಸೇರಿದಂತೆ ಅವನು ಕೆಡವಿದ ದೇವಾಲಯಗಳ ಸವಿವರವಾದ ಚಿತ್ರಣ, ರಜಪೂತರ ಮೇಲಾದ ಆಕ್ರಮಣ, ಔರಂಗಜೇಬನಿಗೆ ಪ್ರತಿಯಾಗಿ ಸೆಣಸಿ ಹೋರಾಡಿ ಹಿಂದುಗಳನ್ನು ರಕ್ಷಿಸಿದ ಶಿವಾಜಿಯ ಹಿಂದೂ ಪ್ರೇಮ –ಇವೆಲ್ಲ ವರ್ಣನೆಯನ್ನು ಸಂಪೂರ್ಣ ನಿಜವೆಂದು ಒಪ್ಪಿಕೊಳ್ಳಲು ಯಾರೂ ಹಿಂಜರಿಯಬೇಕಿಲ್ಲ. ಆದರೆ ಎಂದೋ ಆಗಿಹೋದ ಕಥೆಯನ್ನು ಸಮಕಾಲೀನ ಸಂದರ್ಭಕ್ಕೆ ಹೊಂದಿಸಿ ಅಂದಿನ ಅನ್ಯಾಯಕ್ಕೆ ಇಂದು ಪ್ರತೀಕಾರಕ್ಕೆ ಪ್ರಚೋದಿಸುವ ಸಂಚು ಮಾತ್ರ ವಿನಾಶಕಾರಿಯಾದುದು. ……… (ಅದೇ ಪುಟ ೮)

ಮರುಳಸಿದ್ದಪ್ಪನವರ ಮೊದಲನೇ ಉಲ್ಲೇಖದ ಪ್ರಕಾರ ಆವರಣದ್ದು ಸುಳ್ಳು ಇತಿಹಾಸ ; ಎರಡನೇ ಉಲ್ಲೇಖನದ ಪ್ರಕಾರ ಇವೆಲ್ಲಾ ನಿಜವೆಂದು ಒಪ್ಪಿಕೊಳ್ಳಲು ಯಾರೂ ಹಿಂಜರಿಯ ಬೇಕಿಲ್ಲ !! ಆವರಣ ಕಾದಂಬರಿ ಮರಾಠಿ ಭಾಷೆಗೆ ಅನುವಾದವಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತದೆಂದು ವಿವಾದಕ್ಕೆ ಈಡಾದ ಕನ್ನಡದ ಈ ಕಾದಂಬರಿ ಇದುವರೆಗೆ ಸುಮಾರು ಮೂವತ್ತು ಸಾರಿ ಮುದ್ರಣವಾಗಿದೆ.(Reprint). ಆವರಣ ಕಾದಂಬರಿಯ ಕಾರಣದಿಂದ ಕರ್ನಾಟಕದಲ್ಲಾಗಲೀ ಅಥವಾ ಮಹಾರಾಷ್ಟ್ರದಲ್ಲಾಗಲೀ ಕೋಮು ಗಲಭೆಗಳಾದ ಬಗ್ಗೆ ಯಾವುದೇ ವರದಿಯಿಲ್ಲ. ಒಂದು ವೇಳೆ ಆಗಿದ್ದರೆ ಬಹುಶಃ ಈ ವೇಳೆಗೆ ‘ಆವರಣ’ ನಿಷೇಧಕ್ಕೆ ಒಳಗಾಗಬೇಕಾಗಿತ್ತು.

ರಹಮತ್ ತರೀಕೆರೆಯವರು ‘ಆವರಣ:ಕೆಲವು ತಾತ್ವಿಕ ಸಮಸ್ಯೆಗಳು’ ಎಂಬ ತಮ್ಮ ಲೇಖನದಲ್ಲಿ ‘ಆವರಣ’ದ ಬಗ್ಗೆ ವಿರೋಧವಿರುವ ಇತರ ವಿಮರ್ಶಕರು ಈಗಾಗಲೇ ಹೇಳಿರುವ ‘ಮುಸ್ಲಿಂ ರಾಜರ ಆಳ್ವಿಕೆಯಲ್ಲಿ ಸಾಂಪ್ರದಾಯಿಕ ಇಸ್ಲಾಂ ಇಷ್ಟಪಡದ ಸಂಗೀತ,ವಾಸ್ತುಶಿಲ್ಪ,ಚಿತ್ರಕಲೆ,ಸೂಫಿ ಅನುಭಾವ ಸಾಹಿತ್ಯ ಕೃತಿಗಳ ರಚನೆ ಮುಸ್ಲಿಮರಿಂದ ನಡೆಯಿತು ಎಂಬುದು ಕಾದಂಬರಿಯ ನಾಯಕಿ ಲಕ್ಷ್ಮಿಗೆ (ಆ ಮೂಲಕ ಭೈರಪ್ಪನವರಿಗೆ) ಹೊಳೆಯುವುದಿಲ್ಲ ಎಂಬುದನ್ನು ಪುನರುಚ್ಛರಿಸಿದ್ದಾರೆ.(…. ವಿಕೃತಿ ಪುಟ ೨೦). ಈ ಬಗ್ಗೆ ಭೈರಪ್ಪನವರು ‘ಆವರಣ’ದ ಮೊದಲನೇ ಮುದ್ರಣಕ್ಕೆ(೫-೨-೨೦೦೭) ಮೊದಲೇ ೨೮-೧-೨೦೦೭ ರಂದು ‘ವಿಜಯಕರ್ನಾಟಕ’ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರವಾಗಿ ಹೇಳಿದ್ದಾರೆ. ಈ ಸಂದರ್ಶನದ ಪೂರ್ಣ ಪಾಠ “ಸಂದರ್ಭ:ಸಂವಾದ’ ಎಂಬ ಭೈರಪ್ಪನವರ ಕೃತಿಯಲ್ಲಿ ಇದೆ. (ಪುಟ ೧೮೮–೧೯೦ ೨೦೧೧). ಅದರಲ್ಲಿನ ಮುಖ್ಯಾಂಶಗಳು –‘ಇಸ್ಲಾಂ ಧರ್ಮದ ಪ್ರಕಾರ ಸಂಗೀತ,ನೃತ್ಯಗಳು ನಿಷಿದ್ಧವಾದವುಗಳು. ಕಟ್ಟರ್ ಮುಸಲ್ಮಾನನಾದ ಔರಂಗಜೇಬನು ಇವೆರಡನ್ನೂ ನಿಷೇಧಿಸಿದ್ದ. ಪರ್ಷಿಯಾದಿಂದ ಬಂದ ಕೆಲವರು (ಅಮೀರ್ ಖುಸ್ರೋನಂತಹವರು) ಕಲಿತದ್ದು ಭಾರತೀಯ ಸಂಗೀತಶಾಸ್ತ್ರದ ಸ ರಿ ಗ ಮ ಪ ದ ನಿ ಎಂಬ ಸಪ್ತ ಸ್ವರಗಳ ಸ್ಕೇಲ್ ಅನ್ನು.ಇದರಲ್ಲಿ ಕೆಲವು ಮುಸಲ್ಮಾನರು ಪರಿಣಿತಿ ಪಡೆದರು ಎಂದರೆ ಭಾರತೀಯ ಸಂಗೀತ ಶಾಸ್ತ್ರವು ಪರ್ಷಿಯಾದಿಂದಲೋ ,ಅರೇಬಿಯಾದಿಂದಲೋ ಪಡೆದು ಸಮೃದ್ಧವಾಯಿತು ಎಂದು ಅರ್ಥವಲ್ಲ.

ಮ್ಯಾಕ್ಸ್ ಮುಲ್ಲರನು ವೇದವನ್ನು ಕಲಿತು ಇಂಗ್ಲೀಷಿನಲ್ಲಿ ಪುಸ್ತಕ ಬರೆದಿದ್ದರಿಂದ ಅವನು ಒಬ್ಬ ವೇದದ ಋಷಿ ಆಗಲಿಲ್ಲ. ಹಾಗೆಯೇ ಇದು……… ಮುಸಲ್ಮಾನ ದೊರೆಗಳಿಗೆ ಕುಣಿತದ ಆಕರ್ಷಣೆ ಇತ್ತು. ಆದರೆ ಅನ್ಯ ದೇವತಾ ಕಥೆಯನ್ನು ಕೇಳುವುದು ಪಾಪವಾದ್ದರಿಂದ ರಾಜಾಶ್ರಯಕ್ಕೆ ಬಂದ ಕಥಕ್ಕಳಿ ನೃತ್ಯಗಾರರು ದೇವರ ಕಥನ ಬಿಟ್ಟು ಬರೀ ಕುಣಿತಕ್ಕೆ ನಿಂತರು. ಕೆಲವು ಮುಸಲ್ಮಾನ ದೊರೆಗಳು ಹೋಳಿ, ರಾಸ ಮೊದಲಾದ ಕೃಷ್ಣನ ಕಥಾವಸ್ತುಗಳನ್ನು ಕುಣಿಯಲು ಅವಕಾಶ ಮಾಡಕೊಟ್ಟರು. ತಾವೇ ಕುಣಿಯುತ್ತಲೂ ಇದ್ದರು. ಇವೆಲ್ಲ ಅಪವಾದಗಳು ಮಾತ್ರ ………………… Exceptions prove the rules ಎನ್ನುವುದು ತಪ್ಪು. Exceptions disprove the rules. ಇಷ್ಟಿದ್ದೂ ಕೆಲವು ಪರ್ಷಿಯನ್ ಮತ್ತು ಅರೆಬಿಕ್ ಮೂಲದ ವಾದ್ಯಗಳನ್ನು ಮತ್ತು ಧಾಟಿಗಳನ್ನು ಉತ್ತರ ಭಾರತದ ಸಂಗೀತವು ಪಡೆದುಕೊಂಡಿದ್ದು ನಿಜ ……… ‘. ಭೈರಪ್ಪನವರಿಗೆ ಇತಿಹಾಸದ ಆ ಸಂಗತಿಗಳು ತಿಳಿದಿಲ್ಲ ಎಂದು ಊಹಿಸಿಕೊಂಡು,ರಹಮತ್ ತರೀಕೆರೆಯವರು ‘ಭಾರತದ ರಾಜಕೀಯ ಇತಿಹಾಸದ ವಿಕಾರಗಳನ್ನೇ ಆವಾಹಿಸಿಕೊಂಡ ಮನಸ್ಸಿನ ರಚನೆಯಾದ ಆವರಣವು ಭಾರತದ ಅಪಾರವಾದ ಸಾಂಸ್ಕೃತಿಕ ಸಂಪತ್ತಿಗೆ ಕುರುಡಾಗಿ ಹುಟ್ಟಿದ ಕೃತಿ ಅನ್ನಿಸುವುದು’ ಎಂದು ತೀರ್ಮಾನಿಸಿಬಿಡುತ್ತಾರೆ. (…… ವಿಕೃತಿ ಪುಟ ೨೦) ಅವರ ಈ ತೀರ್ಮಾನ ಎಷ್ಟರ ಮಟ್ಟಿಗೆ ಸರಿ?. ‘….. ವಿಕೃತಿ’ , ವಿಮರ್ಶಾ ಸಂಕಲನದಲ್ಲಿ ರಹಮತ್ ತರೀಕೆರೆ ಅವರ ವಿಮರ್ಶೆಯೂ ಸೇರಿದಂತೆ ಇತರ ವಿಮರ್ಶೆಗಳಲ್ಲಿನ ಮುಖ್ಯವಾದ ಅಂಶಗಳೇನೆಂದರೆ (೧) ಐತಿಹಾಸಿಕವಾಗಿ ನಿರಾಕರಿಸಲಾಗದ ಕೆಲವು ಅಂಶಗಳನ್ನು ಭೈರಪ್ಪನವರು ಆವರಣ ಕಾದಂಬರಿಯಲ್ಲಿ ಸರಿಯಾಗಿ ನಿರ್ವಹಿಸಿಲ್ಲ.

ಈ ನಿರ್ವಹಿಸುವುದರ ಒಳ ಅರ್ಥ ಕೆಲವೊಂದು ‘ಮುಳ್ಳಿನ ಅಂಶಗಳನ್ನು’ ಬೇರೆ ರೀತಿಯಲ್ಲಿ ಹೇಳಬಹುದಾಗಿತ್ತು ಎಂಬುದು! (೨) ಕಾದಂಬರಿಯ ನಾಯಕಿ ಅಬ್ರಾಹ್ಮಣಳಾಗಿರುವುದು ಏಕೆ?. ಭೈರಪ್ಪನವರ ಕಾದಂಬರಿಗಳ ಪಾತ್ರಗಳ ‘ಜಾತಿ’, ‘ಜಾತಕ ಫಲ’, ‘ ಭವಿಷ್ಯ’ ಕುರಿತಂತೆ ಅವರುಗಳ ಪೂರ್ವಾಪರವನ್ನು ವಿಮರ್ಶೆಯ ಹೆಸರಿನಲ್ಲಿ ಮಾಡುವ ಈ DNA Test ಮತ್ತು ರಕ್ತ ಪರಿಶೀಲನೆಯ ವರದಿಗಳು ತೀರಾ ಹಳೆಯದಾಗಿವೆ. ಇವುಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಆಗಿದೆ. ಹೀಗಾಗಿ ಮತ್ತೆ ಹೇಳುವಂತಹುದುಯೇನಿಲ್ಲ.

ಜಿ ರಾಜಶೇಖರ ಅವರು ‘ಕಾದಂಬರಿಯೂ ಅಲ್ಲ:ಚರಿತ್ರೆಯೂ ಅಲ್ಲ’ ಎಂಬ ತಮ್ಮ ಲೇಖನದಲ್ಲಿ (‘……. ವಿಕೃತಿ ಪುಟ ೩೧) ‘ಆವರಣದ ಕತೆಯ ಘಟನಾವಳಿಗಳ ಹರಹು ಭಾರತ ಯಾಕೆ, ಇಡೀ ವಿಶ್ವವೇ ಎಂದರೂ ಸರಿಯೇ. ಮುಸ್ಲಿಮರು ಎಲ್ಲ ಕಾಲ, ದೇಶಗಳಲ್ಲೂ ಸಮಾನವಾಗಿ ದುಷ್ಟರು. ಅವರ ದುಷ್ಟತನದ ಮೂಲ ಇಸ್ಲಾಂ ಧರ್ಮದಲ್ಲೇ ಇದೆ …….. ಶೋಷಕ-ಶೋಷಿತ ಮುಂತಾದ ಪ್ರಬೇಧಗಳೇ ಇಲ್ಲ ……. ಎಂದು ಪ್ರತಿಪಾದಿಸುವುದಕ್ಕೆ ಭೈರಪ್ಪ ಬಳಸಿರುವ ತಂತ್ರ ಇದು ….. ಭಾರತದ ಮುಸ್ಲಿಂ ಅರಸರ ಬಗ್ಗೆ ‘ಆವರಣ’ದಲ್ಲಿ ಹೇಳಲಾಗಿರುವ ಅಷ್ಟೂ ಮಾತುಗಳನ್ನು ಒಪ್ಪಿಕೊಂಡರೂ ಅದು ಹೇಗೆ ಅವರು ಎಲ್ಲಾ ಕಾಲದ ಮತ್ತು ಇಡೀ ವಿಶ್ವದ ಮುಸ್ಲಿಮರನ್ನು ಪ್ರತಿನಿಧಿಸುವವರಾಗುತ್ತಾರೆ?’ ಎಂದು ಪ್ರಶ್ನಿಸಿದ್ದಾರೆ. ರಾಜಶೇಖರ ಅವರು ತಮ್ಮ ವಿಮರ್ಶೆಯ ಪ್ರಾರಂಭದಲ್ಲಿ ‘ಆವರಣದ ಕಾರಣದಿಂದ ಭೈರಪ್ಪನವರು ಭಾರತದ ಹದಿನೈದು ಕೋಟಿ ಮುಸ್ಲಿಮರೂ ಸೇರಿದಂತೆ ಇಡೀ ವಿಶ್ವದ ಮುಸ್ಲಿಮರು ಸ್ವಭಾವತಃ ಕ್ರೂರಿಗಳು, ಅಸಹಿಷ್ಣುಗಳು ………..’ಎಂದು ಚಿತ್ರಿಸಿದ್ದಾರೆ’ (ಪುಟ ೩೦ ‘….. ವಿಕೃತಿ’) ಮತ್ತು ‘ಎಡಪಂಥೀಯ ವಿಚಾರಧಾರೆಯನ್ನು ಪ್ರತಿನಿಧಿಸುವ ‘ಶಾಸ್ತ್ರಿ’ ಎಂಬ ಪಾತ್ರದ ಮೂಲಕ ಭಾರತದ ಇಡೀ ಎಡಪಂಥೀಯರನ್ನು ಅವಮಾನಗೊಳಿಸಿದ್ದಾರೆ’ ಎಂದೂ ಆರೋಪಿಸಿದ್ದಾರೆ. ಒಂದು ಕಾದಂಬರಿಯಲ್ಲಿ ಬರುವ ಪಾತ್ರಗಳ ನಡೆನುಡಿಗಳನ್ನು ವಿವರಿಸಿದ ಮಾತ್ರಕ್ಕೆ ಅದು ಅಂತಹ ಎಲ್ಲರ ‘ಪ್ರತಿನಿಧೀಕರಣ’ ಎಂದು ಭಾವಿಸುವುದಾದರೆ ಇತರ ಕಾದಂಬರಿಗಳಿಗೂ ಇದನ್ನು ಅನ್ವಯಿಸ ಬೇಕಾಗುತ್ತದಲ್ಲವೇ? ಆಗ ಆ ಕಾದಂಬರಿಕಾರರೆಲ್ಲಾ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ!

ರಾಜಶೇಖರ ಅವರ ಏನಕೇನಪ್ರಕಾರೇಣ ಕಾದಂಬರಿಯನ್ನು ಟೀಕಿಸಲೇ ಬೇಕೆಂಬ ಹಠದ, ಪೂರ್ವಗ್ರಹಪೀಡಿತ ವಿಮರ್ಶೆಗೆ ಇನ್ನೊಂದು ಉದಾಹಾರಣೆಯಾಗಿ ಕಾಶಿಯ ಬಗೆಗಿನ ಅವರ ಅಭಿಪ್ರಾಯವನ್ನು ನೋಡಬಹುದು. ಭೈರಪ್ಪ ಹಿಂದೂಗಳ ಅತ್ಯಂತ ಪುರಾತನ ತೀರ್ಥಕ್ಷೇತ್ರವಾದ ಕಾಶಿಯನ್ನಾದರೂ ಸರಿಯಾಗಿ ನೋಡಿದ್ದಾರೆಯೇ? ‘ಗ್ಯಾನವಾಪಿ ಮಸೀದಿ ಸಮಕಾಲೀನ ಕಾಶಿಯ ಒಂದು ವಾಸ್ತವ ಎಂಬುದು ನಿಜ: ಟೂರಿಸ್ಟರಿಗೆ ಮೊದಲು ಕಣ್ಣಿಗೆ ಬೀಳುವುದು ದೇವಾಲಯವೊಂದರ ತಳಪಾಯದ ಮೇಲೆ ಕಟ್ಟಲಾಗಿರುವ ಆ ಮಸೀದಿ ಎಂಬುದೂ ನಿಜ. ಮುನ್ನೂರು ವರ್ಷಗಳಿಂದ ಕಾಶಿಯ ವಿಶ್ವನಾಥ ದೇವಾಲಯಕ್ಕೆ ಅತಿ ಸನಿಹದಲ್ಲೇ ಆ ಮಸೀದಿ ಇದೆ. (ಪುಟ ೩೫ ‘…. ವಿಕೃತಿ’). ‘ಆವರಣ’ ಕಾದಂಬರಿಯಲ್ಲಿ ಸಹ ಕಾಶಿಯಲ್ಲಿರುವ ಗ್ಯಾನವಾಪಿ ಮಸೀದಿ ಮತ್ತು ವಿಶ್ವನಾಥ ದೇವಾಲಯದ ವರ್ಣನೆ ಇದೇ ರೀತಿ ಇದೆ. ಆದರೆ ರಾಜಶೇಖರ್ ಅವರು ಅದೊಂದೇ ವಾಸ್ತವವಲ್ಲ ಎಂದು ಹೇಳಿ ಕಾಶಿಯ ವರ್ಣನೆ ಕನ್ನಡದ ಇಬ್ಬರು ಪ್ರಮುಖರ ಆತ್ಮ ಚರಿತ್ರೆಯಲ್ಲಿ ಹೇಗೆ ಬಂದಿದೆ ಎಂದು ದೀರ್ಘವಾಗಿ ವಿವರಿಸಿ ಭೈರಪ್ಪನವರಿಗೆ ಈ ಭಾವನಾತ್ಮಕ ಸತ್ಯಗಳನ್ನು ಮನಗಾಣಿಸುವ ಸೂಕ್ಷ್ಮಜ್ಞತೆ ಇಲ್ಲ. ಅವರು ಕಾಶಿಯ ಚಾರಿತ್ರಿಕ ಸತ್ಯಗಳತ್ತ–ಅವೂ ಪೂರ್ತ ಸತ್ಯಗಳಲ್ಲ–ಮಾತ್ರ ಓದುಗರ ಗಮನ ಸೆಳೆಯುತ್ತಾರೆ ಎಂದು ಷರಾ ಬರೆದುಬಿಡುತ್ತಾರೆ. (‘……… ವಿಕೃತಿ ಪುಟ ೩೮ ).

ಮೂರು ಪುಟಗಳ ಅಂತರದಲ್ಲಿ ಸಮಕಾಲೀನ ಮತ್ತು ಚಾರಿತ್ರಿಕ ಸತ್ಯವಾಗಿದ್ದು ಅರ್ಧ ಸತ್ಯಗಳಾಗಿ ಬಿಡುತ್ತವೆ! ರಾಜಶೇಖರ್ ಅವರು ಆವರಣ ಕಾದಂಬರಿಯಲ್ಲಿಯೂ ಸಹ ಸಮಕಾಲೀನ ಕಾಶಿಯ ವರ್ಣನೆ ಆ ಎರಡು ಆತ್ಮಚರಿತ್ರೆಗಳಲ್ಲಿ ಚಿತ್ರಣವಾಗಿರುವ ರೀತಿಯಲ್ಲೇ ಇರಬೇಕಾಗಿತ್ತು; ಆ ರೀತಿ ಇಲ್ಲದೇ ಇರುವುದು ತಕ್ಷಣದ ರಾಜಕೀಯ ಹುನ್ನಾರ ಎಂದು ತೀರ್ಮಾನಿಸುತ್ತಾರೆ. ಕಾದಂಬರಿಯೊಂದನ್ನು ಎರಡು ಆತ್ಮ ಚರಿತ್ರೆಗಳ ಜತೆಗಿಟ್ಟು ಮಾಡಿರುವ ಈ ತೌಲನಿಕ ವಿಮರ್ಶೆ ಎಷ್ಟರಮಟ್ಟಿಗೆ ಸರಿ? ಇವು ರಾಜಶೇಖರ್ ಅವರ ವಿಮರ್ಶೆಯಲ್ಲಿನ ಕೆಲವು ಮುಖ್ಯ ಸಮಸ್ಯೆಗಳು. ಇನ್ನುಳಿದಂತೆ ಅವರು ಹೇಳಿರುವುದು ಈಗಾಗಲೇ ಇತರರು ಹೇಳಿರುವ ಅಂಶಗಳ ಹೊಸ ರೂಪ ಅಷ್ಟೇ. ಅದರ ಬಗ್ಗೆ ಮತ್ತೆ ವಿಶೇಷವಾಗಿ ಹೇಳುವಂತಹುದೇನೂ ಇಲ್ಲ. ರಾಜಶೇಖರ್ ಅವರು ಪ್ರಸ್ತಾಪಿಸಿರುವ ಕೆಲವು ವಿಷಯಗಳ ಬಗ್ಗೆ ಸ್ವಲ್ಪವಾದರೂ ಉತ್ತರ ಕೆಳಕಂಡ ಎರಡು ಮೂರು ಉಲ್ಲೇಖಗಳಿಂದ ಸಿಗಬಹುದು.

(೧) ಇಸ್ಲಾಂ ಧರ್ಮವು ತನ್ನ ಆರಂಭದಲ್ಲೇ ಯುದ್ಧ ಮತ್ತು ಉಗ್ರ ಹೋರಾಟದ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿ ಬೆಳೆಸಿಕೊಳ್ಳುವ ದಾರಿಯನ್ನು ಹಿಡಿಯಿತು …….. ಇವತ್ತಿನ ಇರಾಕನ್ನು ನೋಡಿ ಸುನ್ನಿಯಾದ ಸದ್ದಾಂ ಹುಸೇನನು ತನ್ನದೇ ರಾಜ್ಯದ ಷಿಯಾಗಳನ್ನು ನಿರ್ದಯವಾಗಿ ಕಗ್ಗೊಲೆ ಮಾಡಿದಾಗ ಸುನ್ನಿಗಳು ಸಂತೋಷಪಟ್ಟರು. ಸದ್ದಾಂನನ್ನು ಗಲ್ಲಿಗೇರಿಸಿದಾಗ ಷಿಯಾಗಳು ಸಂತೋಷದಿಂದ ಕುಣಿದಾಡಿದರು. ಸೇಡು ತೀರಿಸಿಕೊಳ್ಳಲು ಸುನ್ನಿಗಳು ಭಯೋತ್ಪಾದಕ ದಾರಿಯನ್ನೇ ಹಿಡಿದಿದ್ದಾರೆ. ಇಷ್ಟಕ್ಕೂ ಅವೆರೆಡೂ ಒಂದೇ ಧರ್ಮದ ಕವಲುಗಳು ……. ‘. (ಸಂದರ್ಭ-ಸಂವಾದ ಪುಟ ೧೯೧ ೨೦೧೧)

(೨)ಸಾಮಾಜಿಕ ವಿಜ್ಞಾನಗಳಲ್ಲಿ ಪ್ರಸಿದ್ಧವಾದ ಮತ್ತು ವ್ಯಾಪಕವಾದ ಸಿದ್ಧಾಂತಗಳಲ್ಲಿ ಒಂದೆಂದರೆ ಸೆಕ್ಯುಲರೈಸೇಶನ್ ಸಿದ್ಧಾಂತ:…….. ಆದರೆ ಒಂದು ವಿಚಾರವಂತೂ ಸ್ಪಷ್ಟ:ಈ ಸೆಕ್ಯುಲರೈಸೇಶನ್ ಸಿದ್ಧಾಂತವು ಇಸ್ಲಾಂ ಗೆ ಅನ್ವಯಿಸುವುದಿಲ್ಲ. ಕಳೆದ ಒಂದು ನೂರು ವರ್ಷಗಳ ಅವಧಿಯಲ್ಲಿ ಇಸ್ಲಾಮನ್ನು ನಂಬುವವರ ಮನಸ್ಸು ಮತ್ತು ಹೃದಯಗಳ ಮೇಲಿನ ಅದರ ಹಿಡಿತ ಕಡಿಮೆಯಾಗಿಲ್ಲ ಮತ್ತು ಕೆಲವು ಮಾನದಂಡಗಳ ಮೂಲಕ ನೋಡಿದರೆ ಹೆಚ್ಚೇ ಆಗಿದೆ. ಅಷ್ಟೇ ಅಲ್ಲ ಈ ಹಿಡಿತ ಸಾಮಾಜಿಕ ಬದುಕಿನ ಕೆಲವು ನಿರ್ದಿಷ್ಟ ವಲಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಿಂದುಳಿದ ಅಥವಾ ಇತರ ಅಂತಹ ವರ್ಗಗಳು ಮಾತ್ರ ನಂಬಿಕೆಯನ್ನು ಉಳಿಸಿಕೊಂಡಿರುವುದಲ್ಲ. ಸಾಂಪ್ರದಾಯಿಕ ದೇಶಗಳಂತೆಯೇ ಸಾಮಾಜಿಕವಾಗಿ radical ಆದ ದೇಶಗಳ ಜನಸಮುದಾಯಗಳೂ ಇಸ್ಲಾಮಿನ ಕಡೆಗಿನ ಧಾರ್ಮಿಕ ಒಲವುಗಳನ್ನು ಉಳಿಸಿಕೊಂಡಿವೆ.
ಈ ಮಾತುಗಳು ಬಂದಿರುವುದು ಮುಸ್ಲಿಂ ಬುದ್ಧಿಜೀವಿ ಎಂದೇ ಯುರೋಪಿನಲ್ಲಿ ಪ್ರಸಿದ್ಧವಾಗಿರುವ ಅಕ್ಬರ್ ಅಹಮದ್ ಮತ್ತು ಇನ್ನೊಬ್ಬ ವಿದ್ವಾಂಸ ಹೇಸ್ಟಿಂಗ್ಸ್ ಡೊನ್ನಾಸ್ ಎಂಬಿಬ್ಬರು ಸಂಪಾದಿಸಿದ ಕೃತಿಯ ಮುನ್ನುಡಿಯಲ್ಲಿ ಎಂಬುದನ್ನು ಗಮನಿಸಬೇಕು. ( ಅಜಕ್ಕಳ ಗಿರೀಶ್ ಭಟ್ ‘ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ’ ಪುಟ ೭೨, ೭೩ ೨೦೦೭)

(೩) ಅದೇ ಕೃತಿಯಲ್ಲಿರುವ ಲೇಖನವೊಂದರಲ್ಲಿ ಟಾಮಾಸ್ ಗೆರ್ಹೋಮ್ ಎಂಬುವವರು ಬರೆದ ಈ ಮುಂದಿನ ವಾಕ್ಯಗಳು ಭೈರಪ್ಪನವರು ಬರೆದುದಕ್ಕಿಂತ ಭಿನ್ನವಾಗಿಲ್ಲ. ‘ಇಸ್ಲಾಂ ಮೂಲಭೂತವಾದವು ನಂಬಿಕೆಗಳನ್ನು ಸಂದೇಹಿಸುವ ಮನೋಭಾವದೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳಬಲ್ಲುದೆ?(compatible). ಇದೇ ಪ್ರಶ್ನೆಯನ್ನು ಒಬ್ಬ ಕ್ರೈಸ್ತ ವಿಶ್ವಾಸಿಯಲ್ಲೂ ಕೇಳಲು ಸಾಧ್ಯವಿದೆ. ಆದರೆ,ಇಸ್ಲಾಮಿನ ವಿಚಾರ ಭಿನ್ನವಾದುದು. ಯಾಕೆಂದರೆ ಕ್ರೈಸ್ತ ಧರ್ಮವು ಲೌಕಿಕೀರಣಗೊಂಡಿದೆ. ……………. ಆಧುನಿಕ ಸೆಕ್ಯುಲರೈಸೇಶನ್ ಗೆ ಒಳಗಾಗದೆ ಹಾಗೆಯೇ (intact) ಉಳಿದುಕೊಂಡ ಜಗತ್ತಿನ ಏಕೈಕ ಧರ್ಮವೆಂದರೆ ಇಸ್ಲಾಂ’.
ಹಿಂದೂ ಧರ್ಮದಲ್ಲಿ ಆದ ರೀತಿಯ ಬದಲಾವಣೆಗಳು ಇಸ್ಲಾಂ ಧರ್ಮದಲ್ಲಿ ಸಾಧ್ಯವೇ ಆಗಿಲ್ಲ ಎಂಬ ಭೈರಪ್ಪನವರ ಮಾತಿಗೆ ಮೇಲೆ ಉಲ್ಲೇಖಿಸಲಾದ ಮಾತುಗಳು ಪುಷ್ಟಿಯನ್ನೊದಗಿಸುತ್ತವೆ. (ಅದೇ ಪುಟ ೭೩)

ಆವರಣ ಕಾದಂಬರಿಯ ಮುನ್ನುಡಿಯಲ್ಲಿ “ಹಿಂದಿನವರು ಮಾಡಿದ ತಪ್ಪುಗಳಿಗೆ ಇಂದಿನವರು ಜವಾಬ್ದಾರರಲ್ಲ. ಹಿಂದಿನವರೊಡನೆ ತಮ್ಮನ್ನು ತಾವು ಸಮೀಕರಿಸಿಕೊಂಡು. ತಾವು ಅವರ ವಾರಸುದಾರರೆಂಬ ರಾಗಕ್ಕೆ (=ಪ್ರೀತಿ,ಸಂತೋಷ) ಸಿಕ್ಕಿಕೊಂಡರೆ ಹಿಂದಿನವರ ತಪ್ಪಿನ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ.” ಎಂದು ಭೈರಪ್ಪನವರು ಹೇಳಿರುವುದು ಕೇವಲ ಮುಸ್ಲಿಂ ಧರ್ಮದವರಿಗೆ ಸಂಬಂಧಿಸಿದ್ದು ಎಂದು ಈ ವಿಮರ್ಶಾ ಸಂಕಲನದಲ್ಲಿನ ಲೇಖನಗಳಲ್ಲಿ ಟೀಕಿಸಲಾಗಿದೆ. ಆದರೆ ಅದೇ ಪ್ಯಾರದ ಪ್ರಾರಂಭದಲ್ಲಿ “ಸತ್ಯಶೋಧನೆಯಲ್ಲಿ ಓದುಗನೂ ಲೇಖಕನಷ್ಟೇ ಪಾಲುದಾರ. ಪಾತ್ರಗಳನ್ನಾಗಲಿ ಸನ್ನಿವೇಶಗಳನ್ನಾಗಲಿ ಸತ್ಯದ,ಕಲಾಸತ್ಯದ, ವಸ್ತು ನಿಷ್ಠತೆಯಿಂದ ಗ್ರಹಿಸಿ ಅವುಗಳ ಭಾವವನ್ನು ಆಸ್ವಾದಿಸಬೇಕೇ ಹೊರತು ವೈಯಕ್ತಿಕ ರಾಗ ದ್ವೇಷಗಳಿಂದ ಉದ್ರೇಕಗೊಳ್ಳಬಾರದು” ಮತ್ತು ಕೊನೆಯಲ್ಲಿ “ಇತಿಹಾಸದಿಂದ ಪಡೆಯುವಂತೆ ಬಿಡಿಸಿಕೊಳ್ಳುವುದೂ ಪಕ್ವತೆಯ ಗುರುತು. ಇದು ಪ್ರತಿಯೊಂದು ಧರ್ಮ,ಜಾತಿ,ವರ್ಗದವರಿಗೂ ಅನ್ವಯಿಸುವ ಮಾತು” ಎಂದೂ ಸಹ ಭೈರಪ್ಪನವರು ಹೇಳಿದ್ದಾರೆ . ಆದರೆ ಈ ಮಾತುಗಳನ್ನು ‘………… ವಿಕೃತಿ’ ವಿಮರ್ಶಾ ಸಂಕಲನದ ಬಹುಪಾಲು ಲೇಖಕರು ಮರೆಮಾಚಿದ್ದಾರೆ ಅಥವಾ ಆ ಬಗ್ಗೆ ಏನೂ ಹೇಳಿಲ್ಲ. ‘ಆವರಣ’ದ್ದು one sided view ಎನ್ನುವವರು ಕಾದಂಬರಿಯ ಮುನ್ನುಡಿಯಲ್ಲಿ “ತಮಗೆ ಬೇಕಾದ್ದನ್ನು ಮಾತ್ರ ಆರಿಸಿಕೊಂಡಿದ್ದಾರೆ . ಇನ್ನೊಂದು ಮುಖಕ್ಕೆ ಮುಸುಕು ಹಾಕಿದ್ದಾರೆ !!

(ಈ ವಿಮರ್ಶಾ ಸಂಕಲನದ ಉಳಿದ ಲೇಖನಗಳನ್ನು ಕುರಿತು “ಮುಖಾಮುಖಿ” ಮುಂದಿನ ಭಾಗದಲ್ಲಿ ಮುಂದುವರಿಯುತ್ತದೆ)

ಚಿತ್ರ ಕೃಪೆ : https://www.facebook.com/Slbhyrappanovelist

73 ಟಿಪ್ಪಣಿಗಳು Post a comment
  1. ಏಪ್ರಿಲ್ 1 2014

    ನಿಮ್ಮ ಬರಹ ಆಸಕ್ತಿಕರವಾಗಿದೆ.

    ಉತ್ತರ
  2. valavi
    ಏಪ್ರಿಲ್ 1 2014

    [[ಎಂದೋ ಆಗಿಹೋದ ಕಥೆಯನ್ನು ಸಮಕಾಲೀನ ಸಂದರ್ಭಕ್ಕೆ ಹೊಂದಿಸಿ ಅಂದಿನ ಅನ್ಯಾಯಕ್ಕೆ ಇಂದು ಪ್ರತೀಕಾರಕ್ಕೆ ಪ್ರಚೋದಿಸುವ ಸಂಚು ಮಾತ್ರ ವಿನಾಶಕಾರಿಯಾದುದು]]
    ಈಮಾತು ಸತ್ಯವಾದರೂ ವೈದಿಕರ ವಿಚಾರಕ್ಕೆ ಬಂದಾಗ ಇವರೆಲ್ಲ ಹೀಗೆ ನಿರ್ಭಿಢೆಯಿಂದ ಬರೆದಿದ್ದು ಉಂಟೆ?? ಉದಾಹರಣೆಗೆ ಬ್ರಾಹ್ಮಣ ಮತ್ತು ಹಾವು ಎರಡೂ ಒಟ್ಟಿಗೆ ಕಂಡರೆ ಮೊದಲು ಬ್ರಾಹ್ಮಣನನ್ನು ಕೊಲ್ಲು ಎಂದು ಹೇಳಿದ್ದನ್ನು ಯಾವ ಬುದ್ಧಿಜೀವಿ ಎಂದಾದರೂ ತೆಗಳಿದ್ದಾನೆಯೇ? ಎಂದಾದರೂ ಇದರಿಂದ ಜನಾಂಗೀಯ ಘರ್ಷಣೆಗಳು ನಡೆಯುತ್ತವೆ. ಈ ಹೇಳಿಕೆ ತಪ್ಪು ಎಂದು ಕಟು ವಾಕ್ಯಗಳಿಂದ ವಿಮರ್ಶಿಸಿದ್ದಾನೆಯೇ? ಇಕ್ರಲಾ ಒದಿರ್ಲಾ ಎಂಬ ಸಿದ್ಧಲಿಂಗಯ್ಯನವರ ಹೇಳಿಕೆಗಳನ್ನು ಎಂದೂ ಯಾರೂ ಜನಾಂಗೀಯ ಘರ್ಷಣೆಗೆ ಕಾರಣವಾಗುತ್ತದೆಂದು ತಗಳಿಲ್ಲ. ಇದೇನು ತೋರಿಸುತ್ತದೆ? ಭೈರಪ್ಪನವರಿಗೆ ಮಾತ್ರ ಈ ಪರಿ ಕಟು ವಿಮರ್ಶೆ ಯಾಕೆ? ಹಿಂದಿನ ಚರಿತ್ರೆ ಬೇಡ ಎಂದಾದರೆ ವೈದಿಕ ಚರಿತ್ರೆಯೂ ಬೇಡ ಅದರ ವೈಭವೀಕರಣ ಮಾತ್ರ ಯಾಕೆ ಬೇಕು?? ಮುಸ್ಲಿಂ ರಾಜರದ್ದು ಮಾತ್ರ ಬೇಡ ಯಾಕೆ? ಇದೆಂಥ ನ್ಯಾಯ??????????????????? ಇಂಥ ನ್ಯಾಯಕ್ಕೆ ಕೊನೆ ಇಲ್ಲವೆ?

    ಉತ್ತರ
  3. Nagshetty Shetkar
    ಏಪ್ರಿಲ್ 1 2014

    Avarana written for spreading hatred of minorities. SLB is puppet of Sangh Parivar extremists. Vajpai would never have approved this kind of appropriation of history.

    ಉತ್ತರ
    • Nagshetty Shetkar
      ಏಪ್ರಿಲ್ 1 2014

      Mr. Sriranga is writing like an election agent of NaMo.

      ಉತ್ತರ
  4. ಮಾರ್ಕ್ಸ್ ಮಂಜು
    ಏಪ್ರಿಲ್ 1 2014

    ರೋಮಿಲಾ ಥಾಪರ್,ಪ್ರೊ.ಇರ್ಫಾನ್ ಹಬೀಬ್, ಪ್ರೊ.ಸತೀಶ್ ಚಂದ್ರ,ತಸ್ನೀಮ್ ಅಹಮದ್,ಆರ್.ಎಸ್.ಶರ್ಮಾ,ಬಿಪನ್ ಚಂದ್ರ ಅವರ ಇತಿಹಾಸವನ್ನು ಓದಿಕೊಂಡರೆ ಈ ಆವರಣದ ಅನಾವರಣವಾಗುತ್ತದೆ

    ಉತ್ತರ
    • aaki
      ಏಪ್ರಿಲ್ 1 2014

      [[ಹಿಂದೂಗಳ ಆತ್ಮ ಗೌರವ ನಶಿಸಿದ್ದು….ಎನ್ನುವ ಶಬ್ದವೇ ತಮಾಷೆಯದ್ದು. ಮುಸ್ಲಿಂ ಆಡಳಿತ ಗಾರರು ಈ ದೇಶಕ್ಕೆ ಬರುವ ಮೊದಲು ನೀವು ಗುರುತಿಸುವ ಹಿಂದೂಗಳು ಆತ್ಮ ಗೌರವದೊಂದಿಗೆ ಬಾಳಿದ್ದರೆ? ಹಿಂದುಗಳೆಂದರೆ ನಿಮ್ಮ ದೃಷ್ಟಿಯಲ್ಲಿ ಬ್ರಾಹ್ಮಣರು ಮಾತ್ರವೇ? ಸಹಸ್ರಾರು ವರ್ಷಗಳ ಕಾಲ ಈ ನೆಲದ ಮಕ್ಕಳಾದ ಶೂದ್ರರು, ದಲಿತರ ಆತ್ಮ ಗೌರವ ಬ್ರಾಹ್ಮಣರ ಪಾದದಡಿಯಲ್ಲಿ ನಲುಗುತ್ತಿತ್ತು. ಹಲವು ಸಾವಿರ ವರ್ಷ ಈ ಭಾರತವನ್ನು ಪರೋಕ್ಷವಾಗಿ ಆಳಿದವರು ಬ್ರಾಹ್ಮಣರೇ. ಮುಸ್ಲಿಂ ಆಡಳಿತಗಾರರು ಬಂದಾಗ ಬ್ರಾಹ್ಮಣರ ಬುಡ ಅಲ್ಲಾಡಿತು. ದಲಿತರು, ಶೂದ್ರರು ಸಣ್ಣದೊಂದು ನಿಟ್ಟುಸಿರನ್ನು ಬಿಟ್ಟರು]]
      ಬ್ಲಾಗ ಒಂದರಲ್ಲಿ ಬಶಷೀರ್ ಭೈರಪ್ಪ ನವರ ಆವರಣ ಕಾದಂಬರಿಯ ವಿಮರ್ಶಷೆಯಲ್ಲಿ ಹೀಗೆ ಹೇಳುತ್ತಾರೆ. ಅದಕ್ಕೆ ನಾನು ಕೆಳಗಿನಂತೆ ಉತ್ತರ ನೀಡಿದೆ . ನನ್ನ ಕಮೆಂಟನ್ನು ಆ ಬ್ಲಾಗಿನವರು ಪ್ರಕಟಿಸಲಿಲ್ಲ ಕಾರಣ ಇಲ್ಲಿ ಪ್ರತಿಕ್ರಿಯಿಸಿರುವೆ.

      ಪ್ರೀತಿಯ ಬಶಿರ ಅವರೆ ನೀವು ತಿಳಿದಂತೆ ಬ್ರಾಹ್ಮಣರ ಬುಡ ಅಲ್ಲಾಡಿದಂತೆ ಭಾರತದ ಬೌದ್ಧರು ಹೇಳಹೆಸರಿಲ್ಲದಂತಾದರು. ಅದನ್ನು ಜಾಣತನದಿಂದ ಮರೆಸುವಿರಿ. ಇವತ್ತಿನ ಅಪಘಾನಿಸ್ತಾನ, ಪಾಕಿಸ್ತಾನ ಪೂರ್ತಿ ಬೌದ್ಧರ ನಾಡಾಗಿದ್ದವು. ಇವತ್ತು ಹೆಸರು ಹೇಳಲು ಕೂಡ ಬೌದ್ದ ಅವಶೇಷಗಳಿಲ್ಲ. ಇದೆಲ್ಲ ಯಾರಿಂದ ಆಯಿತು? ಮುಸಲ್ಮಾನರು ಭಾರತಕ್ಕೆ ಬರುವ ಮೊದಲು ಈ ದೇಶದಲ್ಲಿ 25 ವಿಶ್ವವಿದ್ಯಾಲಯಗಳಿದ್ದವು ಕೆಲವು ಬೌದ್ಧ ಪ್ರಾಬಲ್ಯದವುಗಳಾಗಿದ್ದವು. ಅವನ್ನೆಲ್ಲ ಹಾಳುಗೆಡವಿದ್ದು ಯಾರು ಸ್ವಾಮಿ??? ಬೌದ್ಧರು ಕೆಳವರ್ಗದ ಶೂದ್ರರೇ ಆಗಿದ್ದರಲ್ಲ? ಅವರನ್ನೆಲ್ಲ ಈ ದೇಶ ಬಿಟ್ಟು ಓಡಿಸಿದ್ದು ಯಾರು ಸ್ವಾಮಿ? ಅಂಬೇಡ್ಕರ್ ಅವರ ಪುಸ್ತಕ ಓದಿ ತಿಳಿಯುತ್ತೆ . ಕೇವಲ 3% ಮಾತ್ರ ಇರುವ ಬ್ರಾಹ್ಮಣರು ಹೇಗೆ 97% ಜನರನ್ನು ಹಿಡಿತದಲ್ಲಿ ಇಟ್ಟುಕೊಂಡು ಆಡಳಿತ ಮಾಡಲು ಸಾಧ್ಯ್??!! ಇನ್ನು ರಾಜರುಗಳಲ್ಲಿ ಹೆಚ್ಚಿನವರು ಬೌದ್ಧರೇ ಮತ್ತು ಬೌದ್ಧ ಧರ್ಮ ಪ್ರೋತ್ಸಾಹಿಸುವವರೇ ಇದ್ದರಲ್ಲ? ಕರ್ನಾಟಕದ ಇತಿಹಾಸದಲ್ಲಂತೂ ಕೇವಲ ಕುರುಬ ಒಕ್ಕಲಿಗ ಬೇಡ ಜೈನ ಜಾತಿಯವರೇ ಆಡಳಿತ ಮಾಡಿದ್ದಾರಲ್ಲ? (ಡಾ. ಸರಜೂ ಕಾಟ್ಕರ್ ಅವರ ಶಿವಾಜಿಯ ಮೂಲ ಕನ್ನಡ ನೆಲ ಪುಸ್ತಕ ಓದಿ.) ಆದರೂ ಪರೋಕ್ಷವಾಗಿ ಬ್ರಾಹ್ಮಣರು ಹೇಗೆ ಆಳಿದರೆನ್ನುತ್ತೀರಿ? ಇದು ನಿಜವೇ ಆಗಿದ್ದರೆ ಭಾರತದ ಶೇ 90% ಜನರನ್ನು ತಾವು ಹೇಳಿದಂತೆ ಕೇಳುವಂತೆ ಪ್ರಭಾವಿಸಿದವರು ಮುಸಲ್ಮಾನರನ್ನೂ ಪ್ರಭಾವಿಸಬಹುದಿತ್ತಲ್ಲಾ? ಭಾರತದ ಬೌದ್ಧ ರಾಜರನ್ನೂ ಪ್ರಭಾವಿಸಿ ಹೊರದೇಶಗಳಲ್ಲಿ ಹಿಂದೂ ಧರ್ಮವೇ ಬೆಳೆಯುವಂತೆ ಮಾಡುತ್ತಿದ್ದರಲ್ಲವೆ? ಹಾಗೇಕೆ ಮಾಡಲಿಲ್ಲ ? ಪುರಾಣಕಾಲದಲ್ಲೂ ಕೂಡ ಬ್ರಾಹ್ಮಣರು ತಮ್ಮವರೇ ಆಗಿದ್ದ ರಾವಣ, ಬಲಿ, ಹಿರಣ್ಯಾಕ್ಷ, ಹಿರಣ್ಯಕಶಿಪು, ನರಕ, ತಾರಕ, ದಕ್ಷಬ್ರಹ್ಮ ಇಂಥವರನ್ನು ಬೆಂಬಲಿಸದೇ ಆ ದುಷ್ಟರನ್ನು ಸಂಹಾರ ಮಾಡಿದವರು ಯಾವುದೇ ಜಾತಿಯವರಾಗಿರಲಿ ದೇವರೆಂದು ಪೂಜಿಸುವದು ಕಂಡು ಬರುತ್ತದಲ್ಲಾ??? ಇಂಥ ಜನಾಂಗದ ಮೇಲೆ ಇಲ್ಲದ ಗೂಬೆ ಕೂರಿಸಲು ಕಾರಣಗಳೆನು ?? ನಿಮಗೂ ರಾಜಕೀಯ ಹಿತಾಸಕ್ತಿ ಕಾರಣವಲ್ಲವೆ? ಆತ್ಮೀಯ ಬಷೀರ್ ಒಮ್ಮೆ ಪ್ರಾಂಜಲ ಮನದಿಂದ ವಸಾಹತುಶಾಹಿ ಚಿಂತನೆ ಬದಿಗಿರಿಸಿ ಎಡಚರ ವಿಚಾರ ಬದಿಗಿರಿಸಿ ಮುಸ್ಲೀಂ ಎಂಬ ಪೂರ್ವಾಗ್ರಹ ಭಾವನೆ ಬದಿಗಿರಿಸಿ ಭಾರತೀಯರ ಇತಿಹಾಸ ಓದಿ ನೀವು ಕೂಡ ಮುಸ್ಲಿಂ ದಬ್ಬಾಳಿಕೆಯ ಬಲಿಪಶುಗಳೇ . ಒಂದು ಕಾಲದಲ್ಲಿ ನಿಮ್ಮ ಪೂರ್ವಿಕರು ಅಪಾರ ಯಾತನೆ ಅನುಭವಿಸಿದವರೆ . ಇರಲಿ ಔರಂಗಜೇಬನ ಷಹಜಹಾನನ ಆಸ್ಥಾನ ಇತಿಹಾಸಕಾರರೇ ಬರೆದ ಪುಸ್ತಕ ಓದಿ. ಆವಾಗಲೂ ನಿಮ್ಮ ಅಭಿಪ್ರಾಯ ಬದಲಾಗದಿದ್ದರೆ ನಿಮ್ಮನ್ನು ಅಲ್ಲಾನೂ ಹಿಂದೂಗಳ ದೇವರು ಕ್ಷಮಿಸಲಿ .

      ಉತ್ತರ
      • Nagshetty Shetkar
        ಏಪ್ರಿಲ್ 1 2014

        “ಮುಸ್ಲಿಂ ಆಡಳಿತಗಾರರು ಬಂದಾಗ ಬ್ರಾಹ್ಮಣರ ಬುಡ ಅಲ್ಲಾಡಿತು. ದಲಿತರು, ಶೂದ್ರರು ಸಣ್ಣದೊಂದು ನಿಟ್ಟುಸಿರನ್ನು ಬಿಟ್ಟರು.”

        Basheer Sir is right.

        ಉತ್ತರ
        • aaki
          ಏಪ್ರಿಲ್ 1 2014

          ಆ ನಿಮ್ಮ ಬಷೀರ್ ಸಾರ್ ಅವರಿಗೆ ನನ್ನ ಉತ್ತರ ತಿಳಿಸಿದ್ದೇನೆ. ಅದನ್ನು ಕುರಿತು ಏನಾದರೂ ಹೇಳುವದಿದ್ದರೆ ಹೇಳಿ. ಹಾಗೆ ಭಾಷೆ ಹಿಡಿತದಲ್ಲಿ ಇರಲಿ. ಉತ್ತಮ ಕಮೆಂಟ್ ಅದು ವಿರೋಧವಿರಲಿ ಪರವೇ ಇರಲಿ ಉತ್ತಮ ಭಾಷೆಯಲ್ಲಿ ಮೂಡಿ ಬಂದರೆ ನಿಮಗೂ ಓದುಗರಿಗೂ ಕ್ಷೇಮ. ನಿಮ್ಮ ವ್ಯಕ್ತಿತ್ವಕ್ಕೂ ಶೋಭೆ ತರುವದು. ಕೆಸರಾದರೆ ಮುಖಕ್ಕೇ ಸಿಡಿಯುವದು.

          ಉತ್ತರ
          • Nagshetty Shetkar
            ಏಪ್ರಿಲ್ 2 2014

            Your heart is dark. Preach not to me the language. All sangh parivar supporters you are worst sinners.

            ಉತ್ತರ
            • aaki
              ಏಪ್ರಿಲ್ 2 2014

              kannadiyalli mukha nodikolli. nivu hegeNdu gottaagutte. naanu modale heliruve. innobbarige ogeda kesaru namma mukhakkU sidiyutte ecchara.

              ಉತ್ತರ
        • ವಿಜಯ್ ಪೈ
          ಏಪ್ರಿಲ್ 2 2014

          @ಶೆಟ್ಕರ್..
          ಮುಸ್ಲಿಂ ದೊರೆಗಳ ಈ ಮರೆಯಲಾಗದ ಕೊಡುಗೆಯನ್ನು ಹೊಗಳುವ ವಚನಗಳು ಇದ್ದೇ ಇರಬೇಕು. ಬಸವಣ್ಣನವರ ಈ ಪಟ್ಟ ಶಿಷ್ಯಂದಿರಿಗೆ ಗೊತ್ತಿರುವ ಸತ್ಯ ಬಸವಣ್ಣನವರಿಗೆ ಗೊತ್ತಿಲ್ಲದಿರಬಹುದು ಎನ್ನುವುದು ಸುಳ್ಳು. ಆ ವಚನಗಳನ್ನು ಇಲ್ಲಿ ದಯಪಾಲಿಸಿ ನಮ್ಮ ಅಜ್ಞಾನವನ್ನು ತೊಲಗಿಸಿ. ಅಕಸ್ಮಾತ (ನಿಮ್ಮ ದುರ್ದೈವವಶಾತ) ಇರಲಿಲ್ಲವೆಂದರೆ ನಿಮ್ಮ ಆಧುನಿಕ ಚೆನ್ನಬಸಪ್ಪ/ವಣ್ಣ ಅಥವಾ ಈ ಬಶೀರ ಸರ್ ಕೆಲವನ್ನು ಬರೆದು ಮುಂದಿನ ಪೀಳಿಗೆಯ ಜ್ಞಾನವನ್ನು ಸುಧಾರಿಸಲಿ ಎಂಬ ಬಯಕೆ.

          ಉತ್ತರ
        • ಗಿರೀಶ್
          ಏಪ್ರಿಲ್ 2 2014

          ಮುಲ್ಲಾ ಸಾಬಿ ಬಶೀರನ ಆಡಳಿತದ ಬಗ್ಗೆ ಅವರ ಧರ್ಮದ ಅಲ್ಲ ಮತದ ಬಗ್ಗೆ ಬಸವಣ್ಣನ ವಚನಗಳಿದ್ದರೆ ಉದುರಿಸಿ ಶೆಟ್ಕರ್ ಶರಣ. ಅಂಜುಮಾನ್ ಸಿದ್ದಿಕಿ ಮರ್ತೋಯ್ತ?

          ಉತ್ತರ
    • ಏಪ್ರಿಲ್ 1 2014

      ನೀವು ಹೆಸರಿಸಿದ ವ್ಯಕ್ತಿಗಳು ಇತಿಹಾಸಕಾರರಾದದ್ದು ಹೇಗೆಂಬ ಸತ್ಯವನ್ನು ಅರಿಯಲು ಅರುಣ್ ಶೌರಿಯವರು ಬರೆದಿರುವ “Eminent Historians” (ಮಹಾನ್ ಇತಿಹಾಸಕಾರರು) ಪುಸ್ತಕವನ್ನು ಓದಿ.

      ಉತ್ತರ
      • ಏಪ್ರಿಲ್ 1 2014

        ನನ್ನ ಮೇಲಿನ ಪ್ರತಿಕ್ರಿಯೆ ಮಾರ್ಕ್ಸ್ ಮಂಜು ಅವರು ಬರೆದು ಈ ಕೆಳಗಿನ ವಾಕ್ಯಗಳಿಗೆ:
        [[ರೋಮಿಲಾ ಥಾಪರ್,ಪ್ರೊ.ಇರ್ಫಾನ್ ಹಬೀಬ್, ಪ್ರೊ.ಸತೀಶ್ ಚಂದ್ರ,ತಸ್ನೀಮ್ ಅಹಮದ್,ಆರ್.ಎಸ್.ಶರ್ಮಾ,ಬಿಪನ್ ಚಂದ್ರ ಅವರ ಇತಿಹಾಸವನ್ನು ಓದಿಕೊಂಡರೆ ಈ ಆವರಣದ ಅನಾವರಣವಾಗುತ್ತದೆ]]

        ಉತ್ತರ
      • Nagshetty Shetkar
        ಏಪ್ರಿಲ್ 2 2014

        Shourie is a Sangh Parivar member. His book repeats and continues same lies told by vaidikshahi for thousands of years. Only Sangh Parivar readers think his book is factual. To others it is laughing stock, bundle of perverse lies.

        ಉತ್ತರ
  5. Nagshetty Shetkar
    ಏಪ್ರಿಲ್ 2 2014

    “ಈ ದೇಶದಲ್ಲಿ 25 ವಿಶ್ವವಿದ್ಯಾಲಯಗಳಿದ್ದವು ”

    all were promoting vaidikshahi and into social engineering. good they died.

    ಉತ್ತರ
    • ಏಪ್ರಿಲ್ 2 2014

      ಶೇಟ್ಕರ್ ಅವರೇ,
      ವೇದ, ವೈದಿಕ, ಬ್ರಾಹ್ಮಣ, ಆರೆಸ್ಸೆಸ್, ಇತ್ಯಾದಿಗಳ ಕುರಿತಾಗಿ ಕೀಳಾಗಿ ಮಾತನಾಡಬೇಡಿ.
      ನಿಮಗೆ ಅವುಗಳ ಕುರಿತಾಗಿ ಶ್ರದ್ಧೆಯಿಲ್ಲದಿರಬಹುದು. ಅದು ನಿಮ್ಮಿಷ್ಟ ಮತ್ತು ವೈಯಕ್ತಿಕ.
      ಆದರೆ, ನೀವು ಪದೇ ಪದೇ ‘ನಿಲುಮೆ’ಯಲ್ಲಿ ಬಾಯಿಗೆ ಬಂದ ರೀತಿಯಲ್ಲಿ ಕೀಳು ಅಭಿರುಚಿಯ ಮಾತುಗಳನ್ನಾಡಿರುವಿರಿ, ಬೈಗುಳಗಳನ್ನು ಸುರಿಸಿರುವಿರಿ. ಇದು ಸಲ್ಲದು. ಇದು ಸಾರ್ವಜನಿಕ ತಾಣ. ಇಲ್ಲಿ ನೀವು ಗೌರವ ನೀಡಿದರೆ ಮಾತ್ರ ನಿಮಗೂ ಗೌರವ ಸಿಗುತ್ತದೆ.
      ಯಾವುದೇ ಜಾತಿಯ ನಿಂದನೆಗೆ ಇಲ್ಲಿ ಸ್ಥಳವಿಲ್ಲ. ಅದೆಲ್ಲ ಏನಿದ್ದರೂ ನಿಮ್ಮ ಮನೆಯಲ್ಲೋ ಅಥವಾ ನಿಮ್ಮದೇ ಖಾಸಗಿ ತಾಣದಲ್ಲೋ ಮಾಡಿಕೊಳ್ಳಿ.
      ನೀವು ನಿಮ್ಮ ಜಾತಿಯ ನಿಂದನೆಯನ್ನು ಮುಂದುವರೆಸಿದರೆ, ನಿಮ್ಮನ್ನೂ ಅದೇ ರೀತಿ ಸಂಬೋಧಿಸಬೇಕಾಗುತ್ತದೆ. ಅದೆಲ್ಲದಕ್ಕೂ ನೀವೇ ಕಾರಣರಾಗುತ್ತೀರಿ.
      ಇದನ್ನು ಸಲಹೆ ಎಂದು ಬೇಕಾದರೂ ಪರಿಗಣಿಸಿ, ಎಚ್ಚರಿಕೆ ಎಂದು ಬೇಕಾದರೂ ಅಂದುಕೊಳ್ಳಿ. ಒಟ್ಟಿನಲ್ಲಿ ನಿಮ್ಮ ವರ್ತನೆಯನ್ನು ತಿದ್ದಿಕೊಳ್ಳುವುದೊಳ್ಳೆಯದು.

      ಉತ್ತರ
      • Nagshetty Shetkar
        ಏಪ್ರಿಲ್ 2 2014

        ಮಿಕ್ಕ ಮಾನವತೆ ಬಗ್ಗೆ ವೈದಿಕರಿಗೆ ಎಷ್ಟು ಗೌರವ ಕಾಳಜಿ ಕಳಕಳಿ ಇದೆ ಅಂತ ಸಹಸ್ರಾರು ವರ್ಷಗಳ ಇತಿಹಾಸ ಸಾರಿ ಹೇಳಿದೆ. ಅಸ್ಪೃಶ್ಯತೆಯನ್ನು ಹುಟ್ಟು ಹಾಕಿ ಪೋಷಿಸಿ ಸಲಹಿ ಸಮಾಜದ ಮೇಲೆ ಛೂ ಬಿಟ್ಟ ವೈದಿಕರು ಇಂದು ಗೌರವದ ಬಗ್ಗೆ ಮಾತನಾದುತ್ತಿರುವುದು ಕುಚೋದ್ಯ! ವೈದಿಕರ ಗೌರವಕ್ಕೆ ಶರಣರು ಕಾದು ನಿಂತಿಲ್ಲ. ಶರಣರು ಸಿಟ್ಟಿಗೆದ್ದರೆ ನಿಲುಮೆ ಭಸ್ಮವಾದೀತು! ಎಚ್ಚರ!

        ಉತ್ತರ
        • Naani
          ಏಪ್ರಿಲ್ 2 2014

          ಈ ಯಪ್ಪನ್ ಯಡವಟ್ಟುಗಳಿಗೂ ಶರಣರ ಸಿಟ್ಟಿಗೂ ಏನು ಸಂಬಂದಾ ಗೊತ್ತಾಗ್ತಿಲ್ವಲ್ಲಾ ಸಿವನೇ??? ಬುರುಡೆ ಬಿಟ್ಟು ಯಡವಟ್ಟುಗಳನ್ನು ಮಾಡ್ಕೊಂಡು ಶರಣರ ಗುರಣಿ ಹಿಡಿಯೋಕ್ಕೋದ್ರೆ ಅವರುಗಳು ಇವರ ಹಿಂದೆಂದೆ ಓಡಿಬಂದು ಇವರು ಯಾರಾರನ್ನು ‘ವೈಧಿಕ’ರೆಂದು ಬೊಟ್ಟು ಮಾಡುತ್ತಾರೋ ಅವರೆನ್ನಾಲ್ಲಾ ಅಟ್ಯಾಕ್ ಮಾಡೋಕೆ ಅವರೆಲ್ಲಾ ಬುದ್ದಿಗೆಟ್ಟವರೆಂದು ತಿಳ್ಕೊಂಡಿದಿಯೇ ಈ ಯಪ್ಪಾ!!!! ಅಂದ ಹಾಗೆ ಎಷ್ಟು ಲೀಟರ್ ಪೆಟ್ರೋಲ್ ಖರೀದಿ ಮಾಡಿಟ್ಕೊಂಡಿದ್ದೀರಿ? ನೀವು ‘ಶ್ರೀ’ಗಳನ್ನು ಪಡೆಯೋಕ್ಕೋಸ್ಕರ ಬೆಂಕಿ ಹಚ್ಚಿ ಅಮಾಯಕರನ್ನು ಬಲಿಕೊಟ್ಟು ಮಾನವತಾ ವಾದ ಪೋಸುಕೊಡುವ ಕ್ರೌರ್ಯವನ್ನೇ ಇಲ್ಲಿವರೆಗೆ ಮೆರೆದದ್ದಾಯಿತು. ಇನ್ನೂ ಹಳಸಲು ಮೋಸದ ಹುನ್ನಾರಗಳಿಗೆ ಬಲಿಬೀಳುವವರು ಇವರೊಂದಿಗೆ ಇದ್ದಾರೆಯೇ!!! ಇದ್ರೆ ಅವರನ್ನು ಸಿವನೇ ಕಾಪಾಡಬೇಕು!!!!

          ಉತ್ತರ
        • ವಿಜಯ್ ಪೈ
          ಏಪ್ರಿಲ್ 2 2014

          ಸ್ವಾಮಿ.. ನೀವಿಲ್ಲಿ ಕೊಡುವ ಪ್ರತಿಕ್ರಿಯೆಗಳನ್ನು ಓದುಗರು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದು ನಿಮಗೆ ಗೊತ್ತ್ತಿಲ್ಲದ್ದೇನಲ್ಲ. ಇಲ್ಲಿ ಕ್ರಿಯೆಗೆ ತಕ್ಕ ಪ್ರತಿಕ್ರಿಯೆಗಳು ಬಂದೇ ಬರುತ್ತವೆ. ನೀವು ಸರಿಯಾಗಿ, ಅರ್ಥಪೂರ್ಣವಾಗಿ ಮಾತನಾಡಿದರೆ ಇತರರೂ ಹಾಗೆಯೇ ಮಾತನಾಡುತ್ತಾರೆ. ಆದ್ದರಿಂದ ಈ ಎಚ್ಚರ-ಪಚ್ಚರ ಇತ್ಯಾದಿ ಡಯಲಾಗ್ ಗಳನ್ನು ಬಿಟ್ಟುಬಿಡಿ. ಮನಸಿದ್ದರೆ ಬನ್ನಿ..ಇಲ್ಲವಾದರೆ ಜಾಗಬಿಡಿ. ನಿಮ್ಮನ್ನಿಲ್ಲಿ ಬನ್ನಿ, ಬಂದು, ಬರೆದು ಈ ಬ್ಲಾಗನ್ನು ನಿಮ್ಮ ವಿಚಾರಾಮೃತದಿಂದ ಪಾವನಗೊಳಿಸಿ ಎಂದು ಯಾರೂ ಕೇಳಿಕೊಂಡಿಲ್ಲ!.

          ಉತ್ತರ
          • Nagshetty Shetkar
            ಏಪ್ರಿಲ್ 2 2014

            Our fight is against brahmanya and manuvaada. It is not against Brahmins. There are progressive minded rationalist Brahmins who are against brahmanya. Eg URA, Rajeeva Taranath, Prasanna, GK Govindarao, HS Raghavendra Rao, Savita Nagabhushana, Girish Karnad, Vaidehi, Prathiba Nandakunmar, SR Vijayashankar, K Satyanarayana, Jogi, Girish Kasaravalli, Etc. They are great minds with grand heart. Kayaka Yogis from Brahimn caste without a trace of brahmanya in them. They are critical insiders and have fought brahmanya. You call them edabidangi shows how cheap you are.

            ಉತ್ತರ
            • ವಿಜಯ್ ಪೈ
              ಏಪ್ರಿಲ್ 3 2014

              [Our fight is against brahmanya and manuvaada. It is not against Brahmins.]
              ಒಹೊ..ಮತ್ತು ಈ ಬ್ರಾಹ್ಮಣ್ಯ ಅಂದರೆ ಏನು ಅನ್ನುವುದು ಕೂಡ ನಿಮ್ಮ ವಿವರಣೆ ಪ್ರಕಾರವೇ ನಿರ್ಧಾರವಾಗಬೇಕಾದದ್ದು!. ಸ್ವಾಮಿ..ಈ ನಿಮ್ಮ ಈ ಹಳೆ ಹನ್ನೆರಡನೆಯ ಶತಮಾನದ ಡಯಲಾಗ್ ಕೇಳಿ, ಕೇಳಿ ಸುಸ್ತಾಗಿದೆ. ನಿಮ್ಮ ನಾಟಕಕ್ಕೆ ಹೊಸ ಸ್ಕ್ರಿಪ್ಟ್ ರೈಟರ್ ನನ್ನು ಹುಡುಕಿ..ಹೊಸ ಸಂಭಾಷಣೆ ಬರೆಯಿಸಿ.

              [There are progressive minded rationalist Brahmins who are against brahmanya. Eg URA, Rajeeva Taranath, Prasanna, GK Govindarao, HS Raghavendra Rao, Savita Nagabhushana, Girish Karnad, Vaidehi, Prathiba Nandakunmar, SR Vijayashankar, K Satyanarayana, Jogi, Girish Kasaravalli, Etc. They are great minds with grand heart. Kayaka Yogis from Brahimn caste without a trace of brahmanya in them. They are critical insiders and have fought brahmanya.]
              ಮಹಾನುಭಾವರೆ…ನಿಮ್ಮಿಂದ ನಾವು ಮಾನವತೆಯ ಪಾಠ ಕಲಿಯಬೇಕಾಗಿಲ್ಲ. ನಿಮ್ಮ ಹಾಗೆ ನಾವು ಮಿದುಳನ್ನು ಯಾರಿಗೊ ಅಥವಾ ಯಾವುದೋ ಸಿದ್ಧಾಂತಕ್ಕೊ ಅಡ ಇಟ್ಟಿಲ್ಲ ಈ ಜಗತ್ತಿನಲ್ಲಿ ಯಾರೊಂದಿಗೆ ಹೇಗೆ ಬದುಕಬೇಕು, ವರ್ತಿಸಬೇಕು ಎಂದು ನಮಗೆ ಗೊತ್ತಿದೆ. ಅದಕ್ಕೆ ನಿಮ್ಮ ಸರ್ಟಿಫಿಕೆಟ್ ಬೇಕಾಗಿಲ್ಲ. ಇನ್ನೊಂದು ಮಾತೆಂದರೆ.. ಎಲ್ಲರನ್ನು ಜಾತಿಯಿಂದ ಅಳೆಯುವ ನಿಮ್ಮ ಮಟ್ಟಕ್ಕೆ ನಮ್ಮನ್ನು ಎಳೆದುಕೊಂಡು ಹೋಗಬೇಡಿ. ಇನ್ನೊಮ್ಮೆ ಬರೆಯುವಾಗ, progressive thinkers ಮತ್ತು progressive stinkers ಲಿಸ್ಟನ್ನು ಮಿಕ್ಸ ಮಾಡಿ ಗೊಂದಲ ಹುಟ್ಟಿಸಬಾರದಾಗಿ ಕೋರಿಕೆ.

              [You call them edabidangi shows how cheap you are.]
              ಇತ್ತೀಚಿಗೆ ನಿಮ್ಮ ಮಿದುಳಿಗೆ ಹೊಡೆತ ಬಿದ್ದಿರಬೇಕು ಎಂಬ ಅನುಮಾನ ಇದೆ ನನಗೆ. ನಿಮಗೆ ಮತ್ತು ನಿಮ್ಮ ಗುಂಪಿನವರಿಗೆ ಕೊಟ್ಟ ಬಿರುದನ್ನು ಹೀಗೆ ಉದಾರವಾಗಿ ಬೇರೆಯವರಿಗೆ ದಾಟಿಸದಿರಿ ಮತ್ತು ತನ್ಮೂಲಕ ನಿಮ್ಮನ್ನು ಹೀಗೆಯೇ ಅನಾಯಾಸವಾಗಿ ನೀವು ಉದಾಹರಿಸಿದವರ ಸಾಲಿನಲ್ಲಿ ತುರುಕಿಸಿಕೊಳ್ಳುವ ಸಾಹಸಕ್ಕೆ ಇಳಿಯದಿರಿ!. :).

              ಉತ್ತರ
              • Nagshetty Shetkar
                ಏಪ್ರಿಲ್ 3 2014

                ಹೊಸ ಮನುಷ್ಯ ಪತ್ರಿಕೆಯಲ್ಲಿ ಜಿ ಕೆ ಗೋವಿಂದರಾವ್, ಗಿರೀಶ್ ಕಾಸರವಳ್ಳಿ, ಎಚ್ಚೆಸ್ ರಾಘವೇಂದ್ರರಾವ್, ಸವಿತಾ ನಾಗಭೂಷಣ, ಮೊದಲಾದವರು ನಮೊಗೆ ವೋಟು ಏಕೆ ಹಾಕ ಕೂಡದು ಎಂದು ಬಹಳ ಚೆನ್ನಾಗಿ ಬರೆದಿದ್ದಾರೆ. ನೀವೂ ಓದಿ.

                ಉತ್ತರ
                • ಏಪ್ರಿಲ್ 3 2014

                  * ಅವರೇ,

                  ನೀವು ವೈದಿಕ, ಬ್ರಾಹ್ಮಣ, ಆರೆಸ್ಸೆಸ್, ಹಿಂದೂ, ಇವುಗಳ ಕುರಿತಾಗಿ ನಿಂದನೀಯ ಪದಗಳನ್ನು ಬಳಸಬಾರದೆಂದು, ಜಾತಿನಿಂದನೆ ಮಾಡಿಬೇಡಿರೆಂದು ಮೊದಲೇ ಎಚ್ಚರಿಸಲಾಗಿತ್ತು.
                  ನೀವು ಬರೆದಿರುವ ಪ್ರತಿಕ್ರಿಯೆಗಳನ್ನೊಮ್ಮೆ ಓದಿಕೊಳ್ಳಿ.
                  ಅದು ಯಾವ ರೀತಿ ವಾಸನೆ ಹೊಡೆಯುತ್ತಿದೆ ಎನ್ನುವುದು ತಿಳಿಯುತ್ತದೆ. ಈ ರೀತಿ ವಾಸನಾಮಯ ಪ್ರತಿಕ್ರಿಯೆ ಹೊಮ್ಮುವುದು * ಅವರಿಂದಲ್ಲದೆ ಬೇರಾರಿಂದ ತಾನೇ ಸಾಧ್ಯ?

                  ನಿಮಗೆ * ಎಂದು ಕರೆಸಿಕೊಳ್ಳುವುದು ಅಪಮಾನಕರ ಎನ್ನಿಸಿದರೆ, ಮೊದಲು ನಿಮ್ಮ ಭಾಷೆಯನ್ನು ಸರಿಪಡಿಸಿಕೊಳ್ಳಿ, ಜಾತಿನಿಂದನೆ ನಿಲ್ಲಿಸಿ, ಇತರರನ್ನು ಗೌರವಿಸುವುದನ್ನು ಕಲಿಯಿರಿ.
                  ನೀವು ಅದನ್ನು ಮಾಡದಿದ್ದರೆ, ನೀವು ಹೋದಲ್ಲೆಲ್ಲಾ “*” ಎನ್ನುವ ನಿಮ್ಮ ಹೆಸರು ನಿಮ್ಮನ್ನು ಹಿಂಬಾಲಿಸುತ್ತದೆ.


                  ಕಮೆಂಟನ್ನು ಮಾಡರೆಟ್ ಮಾಡಲಾಗಿದೆ.

                  ಉತ್ತರ
                  • Nagshetty Shetkar
                    ಏಪ್ರಿಲ್ 3 2014

                    SSNK ಅವರೇ, ನನಗೆ ನಿಮ್ಮೊಡನೆ ಮಾತು ಮುಂದುವರೆಸುವ ಉದ್ದೇಶವೇ ಇಲ್ಲ. ನೀವಾಗಿಯೇ ಕಾಲು ಕೆದರಿಕೊಂಡು ಜಗಳಕ್ಕೆ ಬಂದು ನಿಲ್ಲುತ್ತೀರಿ ಹಾಗೂ ಅವಾಚ್ಯ ಭಾಷೆಯಿಂದ ನಿಂದಿಸುತ್ತೀರಿ. ನೀವೇಕೆ ನಿಮ್ಮ ಪಾಡಿಗೆ ನೀವಿದ್ದು ನನ್ನ ಪಾಡಿಗೆ ನಾನಿರಲು ಬಿಡುವುದಿಲ್ಲ? ನಿಮ್ಮ ಹಿದೆನ್ ಅಜೆಂಡಾ ಏನು??? ಇನ್ನಾದರೂ ಸುಧಾರಿಸಿ.

                    ಉತ್ತರ
                    • ಏಪ್ರಿಲ್ 3 2014

                      ನೀವು ನಿಲುಮೆಯಲ್ಲಿ ನಡೆಯುವ ಪ್ರತಿಯೊಂದು ಚರ್ಚೆಯಲ್ಲೂ ಮೂಗು ತೂರಿಸಿ, ಜಾತಿನಿಂದನೆ ಮಾಡಿ, ಚರ್ಚೆಯನ್ನು ದಾರಿತಪ್ಪಿಸುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ನಾನು ಇಲ್ಲಿಯವರೆಗೂ ಸಹಿಸಿಕೊಂಡು ನಿಮಗೆ ಸಭ್ಯ ಭಾಷೆಯಲ್ಲಿಯೇ ಉತ್ತರಿಸುತ್ತಿದ್ದೆ. ಅದು ನಿಮಗೆ ಅರ್ಥವಾಗಲಿಲ್ಲ. ಇದೇ ಚರ್ಚೆಯಲ್ಲಿಯೇ, ಜಾತಿನಿಂದನೆ ಮಾಡಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದೆ. ಆದರೂ ನೀವು ನಿಮ್ಮ ಚಾಳಿ ಬಿಡಲಿಲ್ಲ. ಹೀಗಾಗಿ ನಿಮಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡುತ್ತಿರುವೆ. ನಿಮಗೆ ಸಭ್ಯ ಭಾಷೆ ಅರ್ಥವಾಗಲಿಲ್ಲ ಎಂದರೆ, ಅದಕ್ಕೆ ನೀವೇ ಹೊಣೆ.
                      ನಾನು ಯಾವ ಚರ್ಚೆಯಲ್ಲಿಯೂ ನಿಮ್ಮೊಡನೆ ಕಾಲು ಕೆರೆದುಕೊಂಡು ಜಗಳ ಮಾಡಿಲ್ಲ. ನೀವು ಚರ್ಚೆಯಲ್ಲಿ ಇಲ್ಲಸಲ್ಲದ ಮಾತುಗಳನ್ನಾಡಿದಾಗ, ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದೇನೆ ಅಷ್ಟೇ.
                      ನೀವು ಒಮ್ಮೆಯಾದರೂ ಚರ್ಚೆಗೆ ಸಂಬಂಧಿಸಿದ ಅರ್ಥಪೂರ್ಣ ಪ್ರತಿಕ್ರಿಯೆಗಳನ್ನು ನೀಡಿದ್ದರೆ ತೋರಿಸಿ ನೋಡೋಣ.
                      ಪ್ರಸ್ತುತ ಲೇಖನದಲ್ಲಿಯೇ ನಿಮ್ಮ ಪ್ರತಿಕ್ರಿಯೆಗಳನ್ನೊಮ್ಮೆ ಓದಿ ನೋಡಿಕೊಳ್ಳಿ. ನಿಮಗೇ ಅಸಹ್ಯ ಹುಟ್ಟುತ್ತದೆ.

                      ಈಗಲೂ ಮತ್ತೊಮ್ಮೆ ಹೇಳುತ್ತಿರುವೆ. ನೀವು ಜಾತಿನಿಂದನೆ ಮಾಡುವುದನ್ನು ನಿಲ್ಲಿಸಬೇಕು. ಬ್ರಾಹ್ಮಣ, ವೈದಿಕ, ಆರೆಸ್ಸೆಸ್, ಭಾರತ, ಹಿಂದೂ, ಇತ್ಯಾದಿಗಳ ಅವಹೇಳನ ಮಾಡಕೂಡದು. ನೀವು ಸಭ್ಯ ಭಾಷೆಯನ್ನು ಆಡಬೇಕು. ನೀವು ಚರ್ಚೆಗೆ ಸಂಬಂಧಿಸಿದ ಪ್ರತಿಕ್ರಿಯೆಗಳನ್ನೇ ನೀಡಬೇಕು. ಚರ್ಚೆಯನ್ನು ದಾರಿತಪ್ಪಿಸಲು ಯತ್ನಿಸಬಾರದು. ಇದಕ್ಕೆ ತಪ್ಪಿದಲ್ಲಿ, ‘ನಿಮಗೆ ಅರ್ಥವಾಗುವ ಭಾಷೆಯಲ್ಲೇ’ ನಾನೂ ಉತ್ತರಿಸಬೇಕಾಗುತ್ತದೆ. ಆ ರೀತಿ ಆದರೆ ಅದಕ್ಕೆ ನೀವೇ ಹೊಣೆ.

                    • Nagshetty Shetkar
                      ಏಪ್ರಿಲ್ 4 2014

                      SSNK ಅವರೇ, ಈಗಾಗಲೇ ಹೇಳಿದ್ದೇನೆ, ನನಗೆ ನಿಮ್ಮೊಡನೆ ಮಾತು ಮುಂದುವರೆಸುವ ಉದ್ದೇಶವೇ ಇಲ್ಲ. ನಿಮ್ಮ ಪ್ರಚೋದನಾಕಾರಿ ಕಮೆಂಟುಗಳಿಗೆ ಪ್ರತಿಕ್ರಿಯಿಸಿ ನಿಮ್ಮ ಟ್ರೊಲ್ ಸ್ವಭಾವಕ್ಕೆ ನೀರೆರೆಯುವ ಆಸಕ್ತಿ ನನಗಿಲ್ಲ. ಬೇಕಿದ್ದರೆ ಮನೋರೋಗ ತಜ್ಞರನ್ನು ಸಂಪರ್ಕಿಸಿ ಅವರ ಸಲಹೆ ತೆಗೆದುಕೊಳ್ಳಿ ಮಾನಸಿಕ ಆರೋಗ್ಯ ಸುಧಾರಣೆಗೆ. ಇನ್ನು ಮುಂದಾದರೂ ನೀವೇಕೆ ನಿಮ್ಮ ಪಾಡಿಗೆ ನೀವಿದ್ದು ನನ್ನ ಪಾಡಿಗೆ ನಾನಿರಲು ಬಿಡಬಾರದು?

                • ಮಾರ್ಕ್ಸ್ ಮಂಜು
                  ಏಪ್ರಿಲ್ 3 2014

                  Can you quote the words of these Intellectuals here Mr.Nagshetty Shetkar. I want to read it and also NaMo Cyber Armi people might change there stand after reading it.

                  ಉತ್ತರ
                  • Nagshetty Shetkar
                    ಏಪ್ರಿಲ್ 3 2014

                    Please write to this address asking for a complementary copy of April edition. Give me as reference.

                    Editor ‘Hosa Manushya’, hig-5, kallahalli extension,
                    Vinoba nagara, sivamogga – 577204

                    ಉತ್ತರ
                  • Nagshetty Shetkar
                    ಏಪ್ರಿಲ್ 3 2014

                    Rajeeva Taranath: “bahala jaana, hitlernante!”
                    Girish Kasaravalli: “tarantula mattu taanu maatra emba dhorane”
                    Prasanna: “apaayakaariyaada shreshtateya vyasana”
                    GK Govindarao: “sansad bhavanadolage ghodsegalu bandaaru!”
                    HS Raghavendra Rao: ” manushyanannu praani nelege ilisuva prayatna”
                    Savita Nagabhushana: “karagada kallubande”
                    Prof. D.S. Nagabhushana: “eno ondu vikshiptate ide”

                    ಉತ್ತರ
                    • Nagshetty Shetkar
                      ಏಪ್ರಿಲ್ 4 2014

                      +೧

                    • ಏಪ್ರಿಲ್ 4 2014

                      ನೀವು ವೈದಿಕ, ಬ್ರಾಹ್ಮಣ, ಆರೆಸ್ಸೆಸ್, ಹಿಂದೂ, ಧರ್ಮ, ಇತ್ಯಾದಿ ವಿಷಯಗಳ ಅವಹೇಳನ ನಿಲ್ಲಿಸಿ. ಜಾತಿ ನಿಂದನೆ ನಿಲ್ಲಿಸಿ.
                      ಮೂಲ ಲೇಖನಕ್ಕೆ ಸಂಬಂಧಿಸಿದಂತಹ ಮತ್ತು ಅರ್ಥಪೂರ್ಣ ಪ್ರತಿಕ್ರಿಯೆಗಳನ್ನು ನೀಡಿ. ಚರ್ಚೆ ದಾರಿತಪ್ಪಿಸದಿರಿ.
                      ನಿಮಗೆ ಅರ್ಥಪೂರ್ಣ ಪ್ರತಿಕ್ರಿಯೆ ಬರೆಯಲು ಆಗದಿದ್ದಲ್ಲಿ, ಪ್ರತಿಕ್ರಿಯೆ ನೀಡಬೇಡಿ. ನೀವು ಪ್ರತಿಕ್ರಿಯೆ ನೀಡಲೇಬೇಕೆಂದು ಯಾರೂ ನಿಮ್ಮನ್ನು ಕೇಳಿಕೊಳ್ಳುತ್ತಿಲ್ಲ. ಇಲ್ಲಸಲ್ಲದ ಪ್ರತಿಕ್ರಿಯೆಗಳನ್ನು ಬರೆದು ಎಲ್ಲರ ಕೈಯ್ಯಲ್ಲೂ ಉಗಿಸಿಕೊಳ್ಳಬೇಡಿ.

                      ನೀವು ಎಲ್ಲಿಯವರೆಗೂ ನಿಮ್ಮ ದುಶ್ಚಟವನ್ನು ಮುಂದುವರೆಸುತ್ತೀರೋ, ಅಲ್ಲಿಯವರೆಗೂ ನಿಮಗೆ ಬಿಡುಗಡೆ ಸಿಗದು.

        • valavi
          ಏಪ್ರಿಲ್ 2 2014

          [[ಮಿಕ್ಕ ಮಾನವತೆ ಬಗ್ಗೆ ವೈದಿಕರಿಗೆ ಎಷ್ಟು ಗೌರವ ಕಾಳಜಿ ಕಳಕಳಿ ಇದೆ ಅಂತ ಸಹಸ್ರಾರು ವರ್ಷಗಳ ಇತಿಹಾಸ ಸಾರಿ ಹೇಳಿದೆ. ]]
          ಈಮಾತು ಸತ್ಯವಾದರೂ ವೈದಿಕರ ವಿಚಾರಕ್ಕೆ ಬಂದಾಗ ಇವರೆಲ್ಲ ಹೀಗೆ ನಿರ್ಭಿಢೆಯಿಂದ ಬರೆದಿದ್ದು ಉಂಟೆ?? ಉದಾಹರಣೆಗೆ ಬ್ರಾಹ್ಮಣ ಮತ್ತು ಹಾವು ಎರಡೂ ಒಟ್ಟಿಗೆ ಕಂಡರೆ ಮೊದಲು ಬ್ರಾಹ್ಮಣನನ್ನು ಕೊಲ್ಲು ಎಂದು ಹೇಳಿದ್ದನ್ನು ಯಾವ ಬುದ್ಧಿಜೀವಿ ಎಂದಾದರೂ ತೆಗಳಿದ್ದಾನೆಯೇ? ಎಂದಾದರೂ ಇದರಿಂದ ಜನಾಂಗೀಯ ಘರ್ಷಣೆಗಳು ನಡೆಯುತ್ತವೆ. ಈ ಹೇಳಿಕೆ ತಪ್ಪು ಎಂದು ಕಟು ವಾಕ್ಯಗಳಿಂದ ವಿಮರ್ಶಿಸಿದ್ದಾನೆಯೇ? ಇಕ್ರಲಾ ಒದಿರ್ಲಾ ಎಂಬ ಸಿದ್ಧಲಿಂಗಯ್ಯನವರ ಹೇಳಿಕೆಗಳನ್ನು ಎಂದೂ ಯಾರೂ ಜನಾಂಗೀಯ ಘರ್ಷಣೆಗೆ ಕಾರಣವಾಗುತ್ತದೆಂದು ತಗಳಿಲ್ಲ. ಹಿಂದಿನ ಚರಿತ್ರೆ ಬೇಡ ಎಂದಾದರೆ ವೈದಿಕ ಚರಿತ್ರೆಯೂ ಬೇಡ ?? ಮುಸ್ಲಿಂ ರಾಜರದ್ದು ಮಾತ್ರ ಬೇಡ ಯಾಕೆ? ಇದೆಂಥ ನ್ಯಾಯ??????????????????? ಇಂಥ ನ್ಯಾಯಕ್ಕೆ ಕೊನೆ ಇಲ್ಲವೆ?

          ಉತ್ತರ
  6. ಏಪ್ರಿಲ್ 4 2014

    ನೀವು ವೈದಿಕ, ಬ್ರಾಹ್ಮಣ, ಆರೆಸ್ಸೆಸ್, ಹಿಂದೂ, ಧರ್ಮ, ಇತ್ಯಾದಿ ವಿಷಯಗಳ ಅವಹೇಳನ ನಿಲ್ಲಿಸಿ. ಜಾತಿ ನಿಂದನೆ ನಿಲ್ಲಿಸಿ.
    ಮೂಲ ಲೇಖನಕ್ಕೆ ಸಂಬಂಧಿಸಿದಂತಹ ಮತ್ತು ಅರ್ಥಪೂರ್ಣ ಪ್ರತಿಕ್ರಿಯೆಗಳನ್ನು ನೀಡಿ. ಚರ್ಚೆ ದಾರಿತಪ್ಪಿಸದಿರಿ.
    ನಿಮಗೆ ಅರ್ಥಪೂರ್ಣ ಪ್ರತಿಕ್ರಿಯೆ ಬರೆಯಲು ಆಗದಿದ್ದಲ್ಲಿ, ಪ್ರತಿಕ್ರಿಯೆ ನೀಡಬೇಡಿ. ನೀವು ಪ್ರತಿಕ್ರಿಯೆ ನೀಡಲೇಬೇಕೆಂದು ಯಾರೂ ನಿಮ್ಮನ್ನು ಕೇಳಿಕೊಳ್ಳುತ್ತಿಲ್ಲ. ಇಲ್ಲಸಲ್ಲದ ಪ್ರತಿಕ್ರಿಯೆಗಳನ್ನು ಬರೆದು ಎಲ್ಲರ ಕೈಯ್ಯಲ್ಲೂ ಉಗಿಸಿಕೊಳ್ಳಬೇಡಿ.
    ನೀವು ಎಲ್ಲಿಯವರೆಗೂ ನಿಮ್ಮ ದುಶ್ಚಟವನ್ನು ಮುಂದುವರೆಸುತ್ತೀರೋ, ಅಲ್ಲಿಯವರೆಗೂ ನಿಮಗೆ ಬಿಡುಗಡೆ ಸಿಗದು. 😉

    ಉತ್ತರ
    • Nagshetty Shetkar
      ಏಪ್ರಿಲ್ 4 2014

      ಶನಿ ಕಾಟ.

      ಉತ್ತರ
      • ಏಪ್ರಿಲ್ 4 2014

        [[ಶನಿ ಕಾಟ.]]
        ಒಮ್ಮೆಯಾದರೂ ಅರ್ಥಪೂರ್ಣ ಚರ್ಚೆ ನಡೆಸುವ ಮಾತನಾಡುವುದಿಲ್ಲ ನೀವು! ನಿಮಗೆ ಅದು ಬೇಕಿಲ್ಲ. ಜಾತಿನಿಂದನೆ ನಡೆಸಿ, ಚರ್ಚೆಯನ್ನು ಹಳ್ಳ ಹಿಡಿಸುವುದೇ ಉದ್ದೇಶ ನಿಮಗೆ.
        ನಿಮ್ಮಂತಹವರಿಗೆ ಶನಿಯೂ ಕಾಟ ಕೊಡುತ್ತಾನೆ, ನಕ್ಷತ್ರಿಕನೂ ಬೆನ್ನು ಹತ್ತುತ್ತಾನೆ! ಅದು ನಿಮ್ಮ ಕರ್ಮ!! 😉

        ಉತ್ತರ
        • Nagshetty Shetkar
          ಏಪ್ರಿಲ್ 4 2014

          “ಒಮ್ಮೆಯಾದರೂ ಅರ್ಥಪೂರ್ಣ ಚರ್ಚೆ ನಡೆಸುವ ಮಾತನಾಡುವುದಿಲ್ಲ ನೀವು! ನಿಮಗೆ ಅದು ಬೇಕಿಲ್ಲ. ಜಾತಿನಿಂದನೆ ನಡೆಸಿ, ಚರ್ಚೆಯನ್ನು ಹಳ್ಳ ಹಿಡಿಸುವುದೇ ಉದ್ದೇಶ ನಿಮಗೆ.”

          ಹೊಸ ಮನುಷ್ಯ ಪತ್ರಿಕೆಯ ಎಪ್ರಿಲ್ ಸಂಚಿಕೆಯಲ್ಲಿ ಪ್ರೊ. ಡಿ ಎಸ್ ನಾಗಭೂಷಣ ಅವರ ನೇತೃತ್ವದಲ್ಲಿ ಗಿರೀಶ್ ಕಾಸರವಳ್ಳಿ, ರಾಜೀವ ತಾರಾನಾಥ, ಪ್ರಸನ್ನ, ಎಚ್ಚೆಸ್ ರಾಘವೇಂದ್ರ ರಾವ್, ಜೀಕೆ ಗೋವಿಂದರಾವ್, ಸವಿತಾ ನಾಗಭೂಷಣ ಮೊದಲಾದವರು ನಮೋ ಪ್ರಧಾನಿ ಆಗ ಕೂಡದು ಎಂದು ಅರ್ಥಪೂರ್ಣವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ತಮ್ಮ ಗಮನಕ್ಕೆ ಇದು ಬಂದಿದೆಯೇ? ತಾವು ಹೊಸ ಮನುಷ್ಯ ಪತ್ರಿಕೆಯ ಎಪ್ರಿಲ್ ಸಂಚಿಕೆಯನ್ನು ಓದಿಕೊಂಡು ಬಂದರೆ ನಿಮ್ಮೊಡನೆ ಅರ್ಥಪೂರ್ಣ ಚರ್ಚೆ ಮಾಡುವೆ.

          ನಮೋ ಬಗ್ಗೆ ಕನ್ನಡದ ಅತ್ಯುತ್ತಮ ಮನಸ್ಸುಗಳು ಏನು ಹೇಳುತ್ತಾರೆ ನೋಡಿ ಇಲ್ಲಿ:

          ರಾಜೀವ ತಾರಾನಾಥ: “ಬಹಳ ಜಾಣ, ಹಿಟ್ಲರನಂತೆ!”
          ಗಿರೀಶ್ ಕಾಸರವಳ್ಳಿ: “ತಾನು ಮತ್ತು ತಾನು ಮಾತ್ರ ಎಂಬ ಧೋರಣೆ”
          ಪ್ರಸನ್ನ: “ಅಪಾಯಕಾರಿಯಾದ ಶ್ರೇಷ್ಠತೆಯ ವ್ಯಸನ”
          ಜೀಕೆ ಗೋವಿಂದರಾವ್: “ಸಂಸದ್ ಭವನದೊಳಗೆ ಘೋದ್ಸೆಗಳು ಬಂದಾರು!”
          ಎಚ್ಚೆಸ್ ರಾಘವೇಂದ್ರ ರಾವ್: “ಮನುಷ್ಯನನ್ನು ಪ್ರಾಣಿ ನೆಲೆಗೆ ಇಳಿಸುವ ಪ್ರಯತ್ನ”
          ಸವಿತಾ ನಾಗಭೂಷಣ: “ಕರಗದ ಕಲ್ಲುಬಂಡೆ”
          ಪ್ರೊ. ಡಿ ಎಸ್ ನಾಗಭೂಷಣ: “ಏನೋ ಒಂದು ವಿಕ್ಷಿಪ್ತತೆ ಇದೆ”

          ಉತ್ತರ
          • ಏಪ್ರಿಲ್ 4 2014

            [[ಹೊಸ ಮನುಷ್ಯ ಪತ್ರಿಕೆಯ ಎಪ್ರಿಲ್ ಸಂಚಿಕೆಯಲ್ಲಿ ಪ್ರೊ. ಡಿ ಎಸ್ ನಾಗಭೂಷಣ ಅವರ ನೇತೃತ್ವದಲ್ಲಿ ]]
            ನೋಡಿ, ಇದನ್ನೇ ನಾನು ಹೇಳಿದ್ದು.
            ನೀವು ಬರೆಯುವ ಪ್ರತಿಕ್ರಿಯೆಗೂ, ಮೂಲ ಲೇಖನಕ್ಕೂ ಯಾವುದೇ ಸಂಬಂಧವಿರುವುದಿಲ್ಲ.
            ಪ್ರಸ್ತುತ ಲೇಖನವೇ ಇದಕ್ಕೆ ಸಾಕ್ಷಿ!

            ನೀವು ಬರೆದಿರುವ ಪ್ರತಿಕ್ರಿಯೆ, ಮೂಲ ಲೇಖನಕ್ಕೆ ಯಾವ ರೀತಿಯಲ್ಲಿ ಸಂಬಂಧಿಸಿದ್ದು ಹೇಳಿ?
            ಮೂಲ ಲೇಖನ, ಬೈರಪ್ಪನವರ ಕಾದಂಬರಿ/ಬರಹಕ್ಕೆ ಸಂಬಂಧಿಸಿದ್ದು. ಅದು ಸಾಹಿತ್ಯಕ್ಕೆ ಸಂಬಂಧಿಸಿದ್ದು. ಅದು ಬೈರಪ್ಪನವರ ಕಾದಂಬರಿಗಳ ಟೀಕೆಗೆ ಸಂಬಂಧಿಸಿದ್ದು.
            ನೀವು ಬರೆಯುತ್ತಿರುವುದು ಪ್ರಸ್ತುತ ರಾಜಕಾರಣ, ನರೇಂದ್ರ ಮೋದಿ, ಇತ್ಯಾದಿಗಳಿಗೆ ಸಂಬಂಧಿಸಿದ್ದು!

            ಎತ್ತಣ ಸಾಹಿತ್ಯ ಎತ್ತಣ ರಾಜಕೀಯ,
            ಎತ್ತಣಿಂದೆತ್ತ ಸಂಬಂಧವಯ್ಯಾ??

            [[ತಾವು ಹೊಸ ಮನುಷ್ಯ ಪತ್ರಿಕೆಯ ಎಪ್ರಿಲ್ ಸಂಚಿಕೆಯನ್ನು ಓದಿಕೊಂಡು ಬಂದರೆ ನಿಮ್ಮೊಡನೆ ಅರ್ಥಪೂರ್ಣ ಚರ್ಚೆ ಮಾಡುವೆ.]]
            ನೀವು ಪ್ರತಿಕ್ರಿಯಿಸುತ್ತಿರುವುದು ಯಾವ ಲೇಖನದಲ್ಲಿ ಎಂದು ಒಮ್ಮೆ ಓದಿಕೊಳ್ಳಿ.
            ನಿಮಗಿಷ್ಟ ಬಂದ ಪತ್ರಿಕೆಯನ್ನು ನಾನು ಓದಬೇಕೆಂಬ ಒತ್ತಾಯ ನೀವು ಮಾಡುವ ಹಾಗಿಲ್ಲ.
            ಅದು ಸಾಹಿತ್ಯಕ್ಕೆ ಮಾಡುವ ಅಪಚಾರ; ಅದು ಸರ್ವಾಧಿಕಾರಿ ಮನೋವೃತ್ತಿ.
            ನಾನು ಏನು ಬೇಕಾದರೂ ಓದಿಕೊಳ್ಳುತ್ತೇನೆ. ಓದಿದ್ದೆಲ್ಲವನ್ನೂ ಒಪ್ಪಬೇಕೆಂದೇನೂ ಇಲ್ಲ. ನನಗೆ ನನ್ನದೇ ಆದ ಸ್ವಂತ ಅಭಿಪ್ರಾಯಗಳಿವೆ. ನನ್ನ ಬುದ್ಧಿಯನ್ನು ನಾನು ಮಾರಿಕೊಂಡಿಲ್ಲ.
            ಚರ್ಚೆ ಏನಿದ್ದರೂ ವಿಚಾರದ ಮೇಲೆ. ನೀವು ನಿಮಗಿಷ್ಟ ಬಂದದ್ದು ಓದಿಕೊಳ್ಳಿ; ನಾನು ನನಗಿಷ್ಟ ಬಂದದ್ದು ಓದುತ್ತೇನೆ.
            ನಂತರ ನಮ್ಮ ಆಬಿಪ್ರಾಯಗಳನ್ನು ಮಂಡಿಸಿ ವಿಚಾರವನ್ನು ಚರ್ಚಿಸಬಹುದು.
            ನೀವು ಯಾವುದೋ ಪತ್ರಿಕೆಯಲ್ಲಿ ಬಂದ ವಿಚಾರ ಚೆನ್ನಾಗಿದೆಯೆಂದರೆ, ಆ ಪತ್ರಿಕೆಯಲ್ಲೇ ಅದಕ್ಕೆ ಸಂಬಂಧಿಸಿದ ಚರ್ಚೆ ನಡೆಸಬಹುದು.
            ಅಥವಾ ಆ ವಿಚಾರಕ್ಕೆ ಸಂಬಂಧಿಸಿದ ಲೇಖನವನ್ನು ನೀವೇ ಸ್ವಂತ ಬರೆದು, ನಿಲುಮೆಯಲ್ಲಿ ಪ್ರಕಟಿಸಿ; ನಂತರ ಚರ್ಚಿಸಬಹುದು.
            ಹಾಗಿಲ್ಲದೆ, ಸಂಬಂಧಿಸದ ವಿಚಾರವನ್ನು ಚರ್ಚಿಸಿ, ಲೇಖನವನ್ನು ಹಾಳುಮಾಡಬೇಡಿ.

            ಉತ್ತರ
            • Nagshetty Shetkar
              ಏಪ್ರಿಲ್ 4 2014

              “ಎತ್ತಣ ಸಾಹಿತ್ಯ ಎತ್ತಣ ರಾಜಕೀಯ,
              ಎತ್ತಣಿಂದೆತ್ತ ಸಂಬಂಧವಯ್ಯಾ??”

              ನೀವು ಬಹಳ ಅಮಾಯಕರು ಅಂತ ಕಾಣುತ್ತದೆ. ಆದರೆ ಭೈರಪ್ಪನವರು ನಿಮ್ಮಷ್ಟು ಅಮಾಯಕರಲ್ಲ! ಮೊನ್ನೆ ಪ್ರತಾಪಸಿಂಹನಿಗೆ ರಾಜಕೀಯದಲ್ಲಿ ಗೆಲುವಾಗಲಿ ಅಂತ ಆಶೀರ್ವಾದ ಮಾಡಿದ್ದು ಎಲ್ಲಾ ಪತ್ರಿಕೆಗಳಲ್ಲೂ ಫೋಟೋ ಸಹಿತ ವರದಿಯಾಗಿದೆ. ಪ್ರತಾಪಸಿಂಹ ಭೈರಪ್ಪನವರ ಹಾಗೆ ಸಾಹಿತಿಯೋ, ಅವರ ನೆರೆಮನೆಯವನೋ ಅಥವಾ ಮೊಮ್ಮಗನೋ? ಭೈರಪ್ಪನವರ ಸಾಹಿತ್ಯಕ್ಕೂ ಬಲಪಂಥೀಯ ರಾಜಕೀಯಕ್ಕೂ ಸಂಬಂಧ ಇಲ್ಲದಿದ್ದರೆ ಅವರೇಕೆ ಕಟ್ಟಾ ನಮೋ ಬೆಂಬಲಿಗ ಪ್ರತಾಪಸಿಂಹನಿಗೆ ವಿಜಯೀಭವ ಎಂದು ಹರಸುತ್ತಿದ್ದರು? ಭೈರಪ್ಪನವರು ಸಾಹಿತ್ಯದ ಮೂಲಕ ನಡೆಸುತ್ತಿರುವುದೂ ಬಲಪಂಥೀಯ ರಾಜಕೀಯವನ್ನೇ ಅಂತ ಅನಂತಮೂರ್ತಿ ಮೊದಲಾಗಿ ಅನೇಕ ಪ್ರಜ್ನಾವಂತರು ಈಗಾಗಲೇ ಅನೇಕ ಸಂದರ್ಭದಲ್ಲಿ ಹೇಳಿದ್ದಾರೆ.

              ಉತ್ತರ
              • ಏಪ್ರಿಲ್ 4 2014

                [[ಭೈರಪ್ಪನವರ ಸಾಹಿತ್ಯಕ್ಕೂ ಬಲಪಂಥೀಯ ರಾಜಕೀಯಕ್ಕೂ ಸಂಬಂಧ ಇಲ್ಲದಿದ್ದರೆ ಅವರೇಕೆ ಕಟ್ಟಾ ನಮೋ ಬೆಂಬಲಿಗ ಪ್ರತಾಪಸಿಂಹನಿಗೆ ವಿಜಯೀಭವ ಎಂದು ಹರಸುತ್ತಿದ್ದರು? ]]

                ಬೈರಪ್ಪನವರು ರಾಜಕೀಯಕ್ಕೆ ಬರಬಹುದು ಅಥವಾ ಪ್ರಧಾನಮಂತ್ರಿಯೇ ಆಗಬಹುದು.
                ಅದಕ್ಕೂ ಅವರ ಸಾಹಿತ್ಯಕ್ಕೂ ಏನು ಸಂಬಂಧ?
                ನಾವಿಲ್ಲಿ ಚರ್ಚಿಸಹೊರಟಿರುವುದು, ಸಾಹಿತ್ಯವನ್ನೇ ಹೊರತು ಅವರ ರಾಜಕಾರಣವನ್ನಲ್ಲ.
                ಪ್ರಸ್ತುತ ಲೇಖನವಂತೂ ರಾಜಕಾರಣವನ್ನು ಎಲ್ಲೂ ಚರ್ಚಿಸಿಲ್ಲ.

                ವೀರಪ್ಪ ಮೊಯಿಲಿಯವರು ರಾಜಕಾರಣಿಗಳು. ಅವರು ಸಾಹಿತಿಯೂ ಹೌದು.
                ಅವರು ಬರೆದಿರುವ ರಾಮಾಯಣದ ಕೃತಿಗಳ ಚರ್ಚೆ ನಡೆಸುವಾಗ, ಅವರ ರಾಜಕಾರಣವನ್ನು ಅಡ್ಡತರುವುದು ಸರಿಯಲ್ಲ.
                ರಾಜಕಾರಣವನ್ನು ಬದಿಗಿಟ್ಟು ಸಾಹಿತ್ಯವನ್ನು ಚರ್ಚಿಸಬೇಕು.
                ಅದೇ ರೀತಿ, ಬೈರಪ್ಪನವರ ಕೃತಿಗಳನ್ನು ಚರ್ಚಿಸುವಾಗ, ಅವರ ರಾಜಕೀಯಾಸಕ್ತಿಗಳನ್ನು ಬದಿಗಿಟ್ಟು ಚರ್ಚಿಸಬೇಕು.

                ನಿಮಗೆ ಬೈರಪ್ಪನವರ ರಾಜಕೀಯದ ಕುರಿತಾಗಿ ಚರ್ಚಿಸಬೇಕೆಂದಿದ್ದರೆ, ಅದಕ್ಕೆ ಸಂಬಂಧಿಸಿದ ಲೇಖನವನ್ನು ನಿಲುಮೆಯಲ್ಲಿ ಪ್ರಕಟಿಸಿ. ಅದನ್ನು ಬಿಟ್ಟು, ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನದಲ್ಲಿ ರಾಜಕೀಯ, ಜಾತಿನಿಂದನೆಗಳನ್ನು ಮಾಡುವುದು ಸಲ್ಲದು.

                ಉತ್ತರ
              • ವಿಜಯ್ ಪೈ
                ಏಪ್ರಿಲ್ 4 2014

                ಶೆಟ್ಕರ್ ಹೆಸರಿನಲ್ಲಿ ಪ್ರತಿಕ್ರಿಯೆ ಬರೆದಿರುವ ಮಹಾನುಭಾವರಿಗೆ..
                ಬೈರಪ್ಪನವರು ನಿಮ್ಮ ಗ್ಯಾಂಗಿನ ಉದ್ಧಾಮ ಸಾಹಿತಿಗಳಂತಹ ಸರಕಾರಿ ಗಂಜಿ ಗಿರಾಕಿಯಲ್ಲ!. ಹೇಳಬೇಕಾದ್ದನ್ನು, ಮಾಡಬೇಕಾದ್ದನ್ನು ನೇರವಾಗಿಯೇ ಹೇಳಿದ್ದಾರೆ ಮತ್ತು ಮಾಡಿದ್ದಾರೆ. ಪ್ರತಾಪಸಿಂಹನಿಗೆ ಅವರು ಆಶೀರ್ವಾದ ಮಾಡಿದರೇ ನಿಮಗ್ಯಾಕೆ ಹೊಟ್ಟೆಯಲ್ಲಿ ಮೆಣಸಿನ ಕಾಯಿ ಅರೆದಂತಾಗುತ್ತದೆ?? ನಿಮಗೆ ಕೇಳಿ ಆಶೀರ್ವಾದ ಮಾಡಬೇಕಿತ್ತೆ?. ಮೊನ್ನೆ ತನಕ ಸಮಾಜವಾದ ಬೇಕು, ದೊಡ್ಡ ದೊಡ್ಡ ಬಂಡವಾಳಶಾಹಿಗಳಿಂತ ದೇಶ/ಸಂಸ್ಕೃತಿ ಹಾಳಾಗುತ್ತಿದೆ ಎಂದು ಕಣ್ಣಿರು ತಂದುಕೊಂಡವರು ಏಳೂವರೆ ಸಾವಿರ ಕೋಟಿಯ ಒಡೆಯರ ಕಾಲಿಗೆ ಬುಡದಲ್ಲಿ ನಿಂತಿದ್ದಾರೆ..ಪ್ರಚಾರಕ್ಕೆ ಹೊರಟಿದ್ದಾರೆ. ಯಾಕೆ ಇವರಿಗೆ ಬೆಂಬಲಿಸಲು ಅಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಇರಲಿಲ್ಲವೆ? ನೈತಿಕತೆ ಇಲ್ಲದ ಗಂಜಿ ಗಿರಾಕಿಗಳಾಗಿ ಉಳಿದವರಿಗೆ ಉಪದೇಶ ಮಾಡಿ, ನಗೆ ಪಾಟಲಿಗಿಡಾಗಬೇಡಿ.

                ಯಾರೋ ಅತ್ಯುತ್ತಮ ಮನಸ್ಸುಗಳು ಏನೋ ಬರೆದಿದ್ದಾವಂತೆ..ಅದನ್ನು ಓದಿ ನಾವು ಚರ್ಚೆ ಮಾಡಬೇಕಂತೆ!!. ಯಾಕೆ..ನಿಮಗೆ ಸ್ವಂತ ತಲೆ ಇಲ್ಲವೆ? ವಿಚಾರ ಇಲ್ಲವೆ?. ಸ್ವಂತವನ್ನುವ ವಿಚಾರ ಏನಾದರೂ ಇದ್ದರಷ್ಟೇ ಚರ್ಚೆ ಮಾಡೋಣ. ಇನ್ನೊಂದೇನೆಂದರೆ ನಿಮ್ಮಿಂದ , ನಿಮ್ಮ ದರಿದ್ರ ಎಡಬಿಡಂಗಿ ಗುಂಪಿನವರಿಂದ ನಮಗೆ ಮಾನವೀಯತೆಯ ಪಾಠ ಬೇಕಾಗಿಲ್ಲ.

                ಉತ್ತರ
            • Nagshetty Shetkar
              ಏಪ್ರಿಲ್ 4 2014

              “ನಿಮಗಿಷ್ಟ ಬಂದ ಪತ್ರಿಕೆಯನ್ನು ನಾನು ಓದಬೇಕೆಂಬ ಒತ್ತಾಯ ನೀವು ಮಾಡುವ ಹಾಗಿಲ್ಲ.”

              ಇದು ಉದ್ಧಟತನದ ನಗ್ನ ಪ್ರದರ್ಶನ. ನಮೋ ಪ್ರಧಾನಿ ಆಗಕೂಡದು ಅಂತ ನಾಡಿನ ಅನೇಕ ಹಿರಿಯ ಪ್ರಜ್ನಾವಂತರು ಹೊಸ ಮನುಷ್ಯ ಪತ್ರಿಕೆಯಲ್ಲಿ ಹೇಳಿದ್ದಾರೆ. ಅದನ್ನು ನೋಡಿ ಅಂತ ನಿಮಗೆ ಹೇಳಿದ್ದು ಆ ಪತ್ರಿಕೆ ನನಗಿಷ್ಟ ಎಂಬ ಕಾರಣಕ್ಕಲ್ಲ. ನಾಡಿನ ಪ್ರಜ್ನಾವಂತ ಮನಸ್ಸು ನಮೋ ಬಗ್ಗೆ ಏನು ಹೇಳುತ್ತಿದೆ ಎಂಬುದು ನಿಮಗೂ ತಿಳಿಯಲಿ ಎಂಬ ಉದ್ದೇಶದಿಂದ. ಹೊಸ ಮನುಷ್ಯ ಪತ್ರಿಕೆಯಲ್ಲಿ ಪ್ರಸನ್ನ ಏನು ಬರೆದಿದ್ದಾರೆ ಎಂಬುದರ ಅರಿವು ನಿಮಗಿದೆಯೇ? ಇದೋ ನೋಡಿ: “ಶ್ರೇಷ್ಠತೆಎಂಬುದು ಒಂದು ವ್ಯಸನವೇ ಸರಿ, ಮಾತ್ರವಲ್ಲ ಶ್ರೇಷ್ಠತೆಎಂಬುದು ಮೂಲತ ಬ್ರಾಹ್ಮಣ ವ್ಯಸನ. ಈಗ ಅದು ಹೆಚ್ಚು ವಿಸ್ತಾರಗೊಂಡು ನವಬ್ರಾಹ್ಮಣ ವ್ಯಸನವಾಗಿರುವುದು”.

              ಉತ್ತರ
        • Nagshetty Shetkar
          ಏಪ್ರಿಲ್ 4 2014

          “ಜಾತಿನಿಂದನೆ ನಡೆಸಿ, ಚರ್ಚೆಯನ್ನು ಹಳ್ಳ ಹಿಡಿಸುವುದೇ ಉದ್ದೇಶ ನಿಮಗೆ.”

          ಸ್ವಾಮಿ, ಶರಣರು ಬ್ರಾಹ್ಮಣ ವಿರೋಧಿಗಳಲ್ಲ, ನಾವು ಬ್ರಾಹ್ಮಣ್ಯದ ವಿರೋಧಿಗಳು. ಸದಾ ಶಿವನ ಸ್ಮರಣೆ ಮಾಡುವ ಶರಣರು ಮರ್ತ್ಯರಾದ ಬ್ರಾಹ್ಮಣರ ಜಾತಿನಿಂದನೆಯನ್ನು ಮಾಡಿ ನಾಲಗೆ ಹೊಲಸು ಮಾಡಿಕೊಳ್ಳುತ್ತಾರೆಯೇ?!! ಅಂಗುಲಂಗುಲವೂ ಅನೈತಿಕವಾದ ಬ್ರಾಹ್ಮಣ್ಯವನ್ನು ನೈತಿಕ ನೆಲೆಯಲ್ಲಿ ವಿರೋಧಿಸಿದ್ದಕ್ಕೆ ಶರಣರಿಗೆ ಜಾತಿವಾದಿಯ ಪಟ್ಟ ಕಟ್ಟಿದ್ದೀರಿ ನೀವು!!

          ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿಯೂ ಬ್ರಾಹ್ಮಣ್ಯವನ್ನು ವಿರೋಧಿಸುತ್ತಿರುವವರು ಅನೇಕರು ಇದ್ದಾರೆ ನಮ್ಮ ನಡುವೆ. ಅವರಲ್ಲಿ ಒಬ್ಬರು ಅನನ್ಯ ರಂಗಕರ್ಮಿ ಪ್ರಸನ್ನ. ಹೊಸ ಮನುಷ್ಯ ಪತ್ರಿಕೆಯಲ್ಲಿ ಪ್ರಸನ್ನ ಏನು ಬರೆದಿದ್ದಾರೆ ಎಂಬುದರ ಅರಿವು ನಿಮಗಿದೆಯೇ? ಇದೋ ನೋಡಿ: “ಶ್ರೇಷ್ಠತೆಎಂಬುದು ಒಂದು ವ್ಯಸನವೇ ಸರಿ, ಮಾತ್ರವಲ್ಲ ಶ್ರೇಷ್ಠತೆಎಂಬುದು ಮೂಲತ ಬ್ರಾಹ್ಮಣ ವ್ಯಸನ. ಈಗ ಅದು ಹೆಚ್ಚು ವಿಸ್ತಾರಗೊಂಡು ನವಬ್ರಾಹ್ಮಣ ವ್ಯಸನವಾಗಿರುವುದು”. ಶರಣರು ಬ್ರಾಹ್ಮಣ್ಯವನ್ನು ವಿರೋಧಿಸುತ್ತಿರುದು ಏಕೆ ಎಂದು ಈಗಲಾದರೂ ತಿಳಿಯಿತೆ? ಸರ್ವರೂ ಸಮಾನರು ಎಂಬ ತತ್ವಾಶಯಕ್ಕೆ ವಿರುದ್ಧವಾಗಿ ಬ್ರಾಹ್ಮಣ್ಯವು ಶ್ರೇಣಿಕೃತ ಸಮಾಜ ಕಟ್ಟಿತು. ಶ್ರೇಣಿಯ ಉತ್ತುಂಗದಲ್ಲಿರುವವರು ಶ್ರೇಷ್ಠರು ಉಳಿದವರೆಲ್ಲ ಕನಿಷ್ಠರು ಎಂದು ಸಾರಿತು, ಘೋರ ಅನ್ಯಾಯವನ್ನೆಸಗಿತು. ಎಲ್ಲಿಯವರೆಗೆ ಸರ್ವರೂ ಸಮಾನರು ಎಂದು ನೀವು ತಿಳಿದು ಅದಕ್ಕೆ ಬದ್ಧವಾಗಿ ನಡೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಶರಣರು ನಿಮ್ಮ ವೈದಿಕ ಚರ್ಚೆಗಳ ಹಳ್ಳ ಹಿಡಿಸುವುದು ಅನಿವಾರ್ಯವಾಗಿದೆ.

          ಉತ್ತರ
          • ಏಪ್ರಿಲ್ 4 2014

            [[ನಾವು ಬ್ರಾಹ್ಮಣ್ಯದ ವಿರೋಧಿಗಳು]]
            ಬ್ರಾಹ್ಮಣ್ಯ ಎನ್ನುವ ಪದಕ್ಕೆ ನಿಮಗಿಷ್ಟ ಬಂದಂತೆ ಅರ್ಥ ಕೊಡುವುದು ಸಲ್ಲದು.
            ಅದು ಬ್ರಾಹ್ಮಣ ಎನ್ನುವ ಪದದಿಂದಲೇ ಹುಟ್ಟಿರುವುದು. ಬ್ರಾಹ್ಮಣ ಪದವಿಲ್ಲದೇ ಬ್ರಾಹ್ಮಣ್ಯ ಪದಕ್ಕೆ ಅಸ್ತಿತ್ವವಿಲ್ಲ.
            ನೀವು ಬ್ರಾಹ್ಮಣ್ಯ ಎನ್ನುವ ಪದವನ್ನು ನಿಂದನೀಯ ಅರ್ಥದಲ್ಲಿ ಬಳಸಿದರೆ, ಅದನ್ನು ಜಾತಿನಿಂದನೆ ಎಂದೇ ಪರಿಗಣಿಸಬೇಕಾಗುತ್ತದೆ.
            ಮತ್ತು ಈ ರೀತಿ ಇಲ್ಲದ ಅರ್ಥವನ್ನು ಆ ಪದಕ್ಕೆ ಆರೋಪಿಸಿರುವವರ ಉದ್ದೇಶವೂ, ಬ್ರಾಹ್ಮಣ ಜಾತಿಯನ್ನು ಅವಹೇಳನ ಮಾಡುವುದೇ ಆಗಿದೆ. ಇದು ಜಾತಿನಿಂದನೆ ಅಲ್ಲದೆ ಮತ್ತೇನೂ ಅಲ್ಲ!
            ಬೇಕಾದರೆ, ನೀವು ಇಸ್ಲಾಂ ಎನ್ನುವ ಪದವನ್ನೋ, ಶೇಟ್ಕರ್ ಅನ್ನುವ ಪದವನ್ನೋ, ನಾಗಶೆಟ್ಟಿ ಅನ್ನುವ ಪದವನ್ನೋ, ಹೇತ್ಕರ್ ಅನ್ನುವ ಪದವನ್ನೋ, ಬ್ರಾಹ್ಮಣ್ಯ ಅನ್ನುವ ಪದದ ಸ್ಥಾನದಲ್ಲಿ ಬಳಸಿಕೊಳ್ಳಿ; ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ.

            ಉತ್ತರ
            • Nagshetty Shetkar
              ಏಪ್ರಿಲ್ 4 2014

              ಮತ್ತೆ ಹೆತ್ಕರ್ ಎಂಬ ಪದದ ಬಳಕೆ ಮಾಡಿದ್ದೀರಿ. ಇದು ನಂಜಿನ ವರ್ತನೆ. ನಿಮ್ಮೊಡನೆ ಮಾತು ಬೇಡ. ನಿಮಗೆ ಒಳ್ಳೆಯದಾಗಲಿ ಆದರೆ ನೀವು ನನ್ನ ಗೊಡವೆಗೆ ಬರಬೇಡಿ.

              ಉತ್ತರ
              • ಏಪ್ರಿಲ್ 4 2014

                [[ಮತ್ತೆ ಹೆತ್ಕರ್ ಎಂಬ ಪದದ ಬಳಕೆ ಮಾಡಿದ್ದೀರಿ.]]
                ನೀವು ಬ್ರಾಹ್ಮಣ್ಯ ಎನ್ನುವ ಪದವನ್ನು ನಿಂದನೀಯವಾಗಿ ಬಳಸಿ ಜಾತಿನಿಂದನೆ ಮಾಡಿದಾಗಲೆಲ್ಲಾ “ಹೇತ್ಕರ್” ಉದ್ಭವಿಸುತ್ತದೆ.
                ಹೇತ್ಕರ್ ಬೇಡವೆಂದರೆ, ಬ್ರಾಹ್ಮಣ್ಯ ಪದವನ್ನು ಬಳಸಿ ಬ್ರಾಹ್ಮಣರ ಜಾತಿನಿಂದನೆ ಮಾಡುವುದು ನಿಲ್ಲಿಸಿ.

                ಉತ್ತರ
                • Nagshetty Shetkar
                  ಏಪ್ರಿಲ್ 4 2014

                  “ಬ್ರಾಹ್ಮಣರ ಜಾತಿನಿಂದನೆ ಮಾಡುವುದು ನಿಲ್ಲಿಸಿ”

                  ಬ್ರಾಹ್ಮಣರ ಜಾತಿನಿಂದನೆ ಮಾಡುತ್ತಿರುವವರಿಗೆ ಈ ಮಾತನ್ನು ಹೇಳಿ ಸ್ವಾಮಿ!

                  ಬ್ರಾಹ್ಮಣ್ಯ == ಬ್ರಾಹ್ಮಣಜಾತಿ ಎಂಬ ಸಮೀಕರಣ ತಪ್ಪು.

                  ಬ್ರಾಹ್ಮಣ್ಯ ಒಂದು ನಿರ್ದಿಷ್ಟ ಮನೋಭಾವ, ಶ್ರೇಷ್ಠತೆಯ ವ್ಯಸನ. ಬ್ರಾಹ್ಮಣರಲ್ಲಿ ಮಾತ್ರ ಈ ವ್ಯಸನ ಇದೆ ಅಂತ ನೀವು ಭಾವಿಸಿದ್ದರೆ ಅದು ತಪ್ಪು. ಬ್ರಾಹ್ಮಣ್ಯ ಎಲ್ಲರಲ್ಲೂ ಇದೆ, ದಲಿತರಲ್ಲೂ. ಹಾಗಂತ ದಲಿತರೇ ಹೇಳಿದ್ದಾರೆ. ಸರ್ವರೂ ಸಮಾನ, ಬ್ರಾಹ್ಮಣರೂ ದಲಿತರೂ ಎಲ್ಲರೂ ಸಮಾನ ಎಂಬ ಭಾವದ ಉದಯವೇ ಸರ್ವೋದಯ.

                  ಉತ್ತರ
                  • Nagshetty Shetkar
                    ಏಪ್ರಿಲ್ 4 2014

                    ಪದೇ ಪದೇ ಹೆತ್ಕರ್ ಅಂತ ನಂಜಿನಿಂದ ಹೇಳಿ ಅವಮಾನ ಮಾಡುತ್ತಲೇ ಬಂದಿರುವ ನೀವು ಒಮ್ಮೆಯಾದರೂ ಈ ನಾಡಿನ ದಲಿತರು ಶೂದ್ರಾತಿಶೂದ್ರರು ಸ್ತ್ರೀಯರ ಬಗ್ಗೆ ಒಂದಾದರೂ ಕಳಕಳಿಯ ಮಾತನ್ನು ಹೇಳಿಲ್ಲವಲ್ಲ!

                    ಉತ್ತರ
                    • ಏಪ್ರಿಲ್ 4 2014

                      [[ಬ್ರಾಹ್ಮಣ್ಯ ಒಂದು ನಿರ್ದಿಷ್ಟ ಮನೋಭಾವ, ಶ್ರೇಷ್ಠತೆಯ ವ್ಯಸನ.]]
                      ಅದು ನೀವು ಆರೋಪಿಸಿರುವ ಅರ್ಥ. ನೀವು ಹೇಳುತ್ತಿರುವ ಅರ್ಥ ಬರಲು ‘ಬ್ರಾಹ್ಮಣ್ಯ’ ಪದವೇ ಏಕೆ ಬೇಕು? ‘ಲಿಂಗಾಯತ್ಯ’ ಎನ್ನುವ ಪದ ಆಗಬಾರದೇಕೆ?

                      [[ಪದೇ ಪದೇ ಹೆತ್ಕರ್ ಅಂತ ನಂಜಿನಿಂದ ಹೇಳಿ ಅವಮಾನ ಮಾಡುತ್ತಲೇ ಬಂದಿರುವ ನೀವು ಒಮ್ಮೆಯಾದರೂ ಈ ನಾಡಿನ ದಲಿತರು ಶೂದ್ರಾತಿಶೂದ್ರರು ಸ್ತ್ರೀಯರ ಬಗ್ಗೆ ಒಂದಾದರೂ ಕಳಕಳಿಯ ಮಾತನ್ನು ಹೇಳಿಲ್ಲವಲ್ಲ!]]
                      ನಾನಿಲ್ಲಿ ಇಲ್ಲಿಯವರೆಗೂ ಚರ್ಚಿಸಿರುವುದು ಲೇಖನಕ್ಕೆ ಸಂಬಂಧಿಸಿದ ವಿಷಯಗಳನ್ನು.
                      ಈ ಲೇಖನಗಳು ನೀವು ಹೇಳುತ್ತಿರುವ ದಲಿತರ, ಶೂದ್ರಾದಿಶೂದ್ರರ, ಸ್ತ್ರೀಯರ ಕುರಿತಾಗಿ ಇಲ್ಲವಾದ್ದರಿಂದ, ಅದರ ಕುರಿತಾಗಿ ನನ್ನ ಅನಿಸಿಕೆಗಳನ್ನು ತಿಳಿಸುವ ಅವಕಾಶ ದೊರೆತಿಲ್ಲ ಅಷ್ಟೇ.
                      ನಿಮಗೆ ಆ ವಿಷಯಗಳ ಕುರಿತಾಗಿ ಅಷ್ಟೊಂದು ಕಳಕಳಿಯಿದ್ದಲ್ಲಿ, ಆ ಕುರಿತಾಗಿ ನೀವೇಕೆ ಲೇಖನವೊಂದನ್ನು ಬರೆಯಬಾರದು.

                      ಕೇವಲ ಲೇಖನಗಳಲ್ಲಿ ಅಥವಾ ಭಾಷಣಗಳಲ್ಲಿ ಕಳಕಳಿ ತೋರ್ಪಡಿಸುವುದು ಮೇಲ್ತೋರಿಕೆ ಅಷ್ಟೇ! ವ್ಯವಹಾರದಲ್ಲಿ ಹೇಗಿರುತ್ತದೆ ಎನ್ನುವುದೇ ಮುಖ್ಯ.
                      ಬೆಂಗಳೂರಿನ “ಸ್ಲಂ”ಗಳಲ್ಲಿ ನಾನು ಅಡ್ಡಾಡಿರುವೆ, ಅಲ್ಲಿನ ಅನೇಕ ಮನೆಗಳಲ್ಲಿ ಊಟವನ್ನೂ ಮಾಡಿರುವೆ; ಆ ಸ್ಲಂ ಮಕ್ಕಳಿಗಾಗಿ ಅನೌಪಚಾರಿಕ ಶಿಕ್ಷಣದಲ್ಲೂ ಕೆಲಸ ಮಾಡಿರುವೆ. ಬೆಂಗಳೂರಿನ ರಸ್ತೆಗಳಲ್ಲಿರುವ ಚಿಂದಿ ಆಯುವ ಮಕ್ಕಳಿಗಾಗಿ ನಡೆಯುವ “ನೆಲೆ”ಯ ಕಾರ್ಯದಲ್ಲೂ ನನಗೆ ಆಸಕ್ತಿಯಿದೆ.
                      ಕೇವಲ ಬೆಂಗಳೂರು ಮಾತ್ರವಲ್ಲ. ಉತ್ತರ ಕರ್ನಾಟಕದ ಅನೇಕ ಕುಗ್ರಾಮ, ವನವಾಸಿ ಕ್ಷೇತ್ರಗಳಲ್ಲೂ ನಾನು ಕಾರ್ಯ ಮಾಡಿರುವೆ. ಕಾರವಾರದ ಸಮುದ್ರ ತೀರದಲ್ಲಿರುವ ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಖಾರ್ವಿ, ಮೊಗೇರ ಇತ್ಯಾದಿಗಳ ಮನೆಗಳಲ್ಲಿ ನೂರಾರು ಬಾರಿ ವಸತಿ ಮಾಡಿರುವೆ, ಊಟವನ್ನೂ ಮಾಡಿರುವೆ; ಅಂತಹ ನೂರಾರು ತರುಣರು ನನಗೆ ಆಪ್ತ ಮಿತ್ರರೂ ಆಗಿದ್ದಾರೆ.
                      ಇದೆಲ್ಲ ಏಕೆ ಹೇಳಿದೆನೆಂದರೆ, ನನಗೆ ಶೂದ್ರಾತಿಶೂದ್ರರ, ದಲಿತರ ಕುರಿತಾಗಿ ಇರುವ ಕಳಕಳಿ ನಿಮಗೂ ತಿಳಿಯಲಿ ಎಂದು.

                    • Nagshetty Shetkar
                      ಏಪ್ರಿಲ್ 4 2014

                      “ಬೆಂಗಳೂರಿನ “ಸ್ಲಂ”ಗಳಲ್ಲಿ ನಾನು ಅಡ್ಡಾಡಿರುವೆ, ಅಲ್ಲಿನ ಅನೇಕ ಮನೆಗಳಲ್ಲಿ ಊಟವನ್ನೂ ಮಾಡಿರುವೆ;
                      ಖಾರ್ವಿ, ಮೊಗೇರ ಇತ್ಯಾದಿಗಳ ಮನೆಗಳಲ್ಲಿ ನೂರಾರು ಬಾರಿ ವಸತಿ ಮಾಡಿರುವೆ, ಊಟವನ್ನೂ ಮಾಡಿರುವೆ;”

                      ನಿಮ್ಮ ಈ ಮಾತುಗಳೇ ಸಾಕು ನೀವು ಸ್ಲಮ್ ವಾಸಿಗಳು ಹಾಗೂ ಮೀನುಗಾರ ಜಾತಿಗಳ ಬಗ್ಗೆ ಯಾವ ಧೋರಣೆ ಇಟ್ಟುಕೊಂಡಿದ್ದೀರಿ ಎಂದು ತಿಳಿದುಕೊಳ್ಳಲು. ನೀವು ಊಟ ಮಾಡಿದರಿಂದ ಅವರೆಲ್ಲ ಧನ್ಯರಾದರು! ಶ್ರೇಷ್ಠತೆಯ ವ್ಯಸನ ಬಿಡಿ ಮಿ. ಎಸ್ ಎಸ್ ಏನ್ ಕೆ.

                    • ಏಪ್ರಿಲ್ 4 2014

                      [[ನಿಮ್ಮ ಈ ಮಾತುಗಳೇ ಸಾಕು ನೀವು ಸ್ಲಮ್ ವಾಸಿಗಳು ಹಾಗೂ ಮೀನುಗಾರ ಜಾತಿಗಳ ಬಗ್ಗೆ ಯಾವ ಧೋರಣೆ ಇಟ್ಟುಕೊಂಡಿದ್ದೀರಿ ಎಂದು ತಿಳಿದುಕೊಳ್ಳಲು]]
                      ನಾನ್ಯಾವ ಧೋರಣೆ ಇಟ್ಟುಕೊಂಡಿದ್ದೇನೆ ಎನ್ನುವುದು ನಿಮಗೇನು ತಿಳಿಯಿತು ಸ್ವಲ್ಪ ಹೇಳುವಿರಾ?

                      ನಿಮಗೆ ಕೇವಲ ಬರಹಗಳಲ್ಲಿ, ಭಾಷಣಗಳಲ್ಲಿ ಬಡಾಯಿ ಕೊಚ್ಚಿಕೊಳ್ಳುವುದರಲ್ಲೇ ತೃಪ್ತಿ ಎನಿಸುತ್ತದೆ.
                      ನೀವು ಕೇಳಿದ್ದರಿಂದ ನಾನು ಆ ವಿಷಯ ಪ್ರಸ್ತಾಪಿಸಬೇಕಾಯಿತೇ ಹೊರತು, ನನಗೇನೂ ಅದನ್ನು ಟಾಂ ಟಾಂ ಹೊಡೆಯುವ ಉದ್ದೇಶವೇನಿರಲಿಲ್ಲ.
                      ಕಳಕಳಿಯ ವಿಷಯ ತಿಳಿದ ನಂತರ, ಧೋರಣೆಯ ವಿಷಯ! ಚೆನ್ನಾಗಿದೆ ನಿಮ್ಮ ಧೋರಣೆ. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂದಂತಾಯಿತು ನಿಮ್ಮ ಮಾತಿನ ಅರ್ಥ.

                    • ವಿಜಯ್ ಪೈ
                      ಏಪ್ರಿಲ್ 4 2014

                      [ನಿಮ್ಮ ಈ ಮಾತುಗಳೇ ಸಾಕು ನೀವು ಸ್ಲಮ್ ವಾಸಿಗಳು ಹಾಗೂ ಮೀನುಗಾರ ಜಾತಿಗಳ ಬಗ್ಗೆ ಯಾವ ಧೋರಣೆ ಇಟ್ಟುಕೊಂಡಿದ್ದೀರಿ ಎಂದು ತಿಳಿದುಕೊಳ್ಳಲು. ನೀವು ಊಟ ಮಾಡಿದರಿಂದ ಅವರೆಲ್ಲ ಧನ್ಯರಾದರು! ಶ್ರೇಷ್ಠತೆಯ ವ್ಯಸನ ಬಿಡಿ ಮಿ. ಎಸ್ ಎಸ್ ಏನ್ ಕೆ.]

                      ನಮ್ಮ ಸಾಹೇಬರಲ್ಲಿ ಯಾವುಧೇ ಶ್ರೇಷ್ಠತೆಯ ವ್ಯಸನವಿಲ್ಲ..ಯಾವುದಾದರೂ ಊರಿಗೆ ಪ್ರವಚನಕ್ಕೆ ಹೋದರೆ, ಅವರು ಸ್ಲಮ್ ನಲ್ಲಿಯೇ ಒಂದು ಮನೆ ಹುಡುಕಿ ಟೆಂಟ್ ಹೂಡುವುದು ಮತ್ತು ಊಟ ಮಾಡುವುದು!. ಸ್ವಾಮಿ..ನೀವು ಮತ್ತು ನೀವು ಉದಾಹರಿಸಿದ ‘ಶ್ರೇಷ್ಠತೆಯ ವ್ಯಸನ’ ಬಿಟ್ಟವರು..ಇವರಲ್ಲಿ ಎಷ್ಟು ಜನ ದಲಿತರ ಮನೆಯಲ್ಲಿ ಉಂಡಿದ್ದೀರಿ ಮತ್ತು ವಾಸಿಸಿದ್ದೀರಿ? ತಿಳಿಸುತ್ತೀರ?

                      ತಾನು ಅದನ್ನು ಮಾಡಿದೆ, ಇದನ್ನು ಮಾಡಿದೆ ಅಂತ ನೀವು ಡಬ್ಬ ಬಡಿದುಕೊಂಡರೆ ನಡೆಯುತ್ತದೆ..ನೀವು ತುರಿಕೆ ಹಿಡಿದವರಂತೆ ‘ಬ್ರಾಹ್ಮಣ್ಯ, ಬ್ರಾಹ್ಮಣ್ಯ ಅನ್ನುವುದನ್ನು ಕೇಳಿಯೇ ಎಸ್ ಎಸ್ ಏನ್ ಕೆ.ಯವರು ತಮ್ಮ ಅನುಭವ ಹಂಚಿಕೊಂಡರೆ ನಿಮಗದು ಶ್ರೇಷ್ಠತೆಯ ವ್ಯಸನ ಅನಿಸುತ್ತದೆ!. ಬಾಯಿ ಬಿಟ್ಟರೆ ‘ಶರಣ’ ಅಂದುಕೊಳ್ಳುವುದು, ಆದರೆ ಕಣ್ಣು, ಬುದ್ಧಿಯೆಲ್ಲ ಕಾಮಾಲೆ ಹಿಡಿದುಬಿಟ್ಟಿದೆ.

          • ವಿಜಯ್ ಪೈ
            ಏಪ್ರಿಲ್ 4 2014

            ಮಹಾನುಭಾವರೆ..
            ನೀವು ಒಮ್ಮೆಯಾದರೂ ಹಿಂದುಳಿವರರು/ದಲಿತರು ಸರಕಾರ ಶಿಕ್ಷಣದಲ್ಲಿ ಕೊಡುತ್ತಿರುವ ಸವಲತ್ತುಗಳನ್ನು ತಪ್ಪದೇ ಉಪಯೋಗಿಸಿಕೊಂಡು ಬೆಳೆಯಬೇಕು.. ಹಿಂದುಳಿದವರು/ದಲಿತರು ಉದ್ಯಮಶೀಲರಾಬೇಕು ಎಂಬ ಬಗ್ಗೆ ಬರೆದಿದ್ದೀರಾ? ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾತನಾಡಿದ್ದೀರ? ನಿಮ್ಮ ಗಬ್ಬು ಲೇಖನ/ ಪ್ರತಿಕ್ರಿಯೆಗಳೆಲ್ಲ ಸುಳ್ಳು ಪುಂಗಿ ಊದಿ ಜಾತಿ/ಮತದಿಂದ ಸಮಾಜವನ್ನು ಒಡೆಯುವತ್ತ ಇರುತ್ತವೆ..ಹೊರತು ಬೇರೆನಿಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ ಇತ್ತೀಚಿನ..
            http://avadhimag.com/2014/03/20/’ಅಲ್ಪಸಂಖ್ಯಾತರು-ಹಿಂದುಳಿದ/
            ನೀವು ಎಲ್ಲಿಯ ತನಕ ಇಂತಹ ಹೊಲಸನ್ನು ಹರಡುತ್ತೀರೊ..ಅಲ್ಲಿಯ ತನಕ ನಿಮ್ಮ ಮತ್ತು ನಿಮ್ಮ ಎಡಬಿಡಂಗಿ ಗ್ಯಾಂಗಿನ ಸಿದ್ಧಾಂತವನ್ನು ಹಳ್ಳ ಹಿಡಿಸುವ ಕೆಲಸ ಮಾಡುತ್ತೇವೆ.

            ಉತ್ತರ
            • Nagshetty Shetkar
              ಏಪ್ರಿಲ್ 4 2014

              ದರ್ಗಾ ಸರ್ ಅವರನ್ನೂ ಅವರ ಲೇಖನವನ್ನೂ misunderstand ಮಾಡಿಕೊಂಡಿದ್ದೀರ ಮಿ. ವಿಜಯ್. ದರ್ಗಾ ಸರ್ ಅವರು ಸಂತನಂತಹ ವ್ಯಕ್ತಿ. ಬಸಾವದ್ವೈತ ಹಾಗೂ ಸೂಫಿ ಹಿನ್ನೆಲೆಯಲ್ಲಿ ಪರಿಪಕ್ವಗೊಂಡಿರುವ ಚಿಂತನೆ ಅವರದ್ದು. ಮಾರ್ಕ್ಸ್ ವಾದದ ಕುಲುಮೆಯಲ್ಲಿ ಸತ್ಯಶೋಧನೆ ನಡೆಸಿದ ಬೌದ್ಧಿಕ ಹಿನ್ನೆಲೆ ಅವರದ್ದು. ನಿಮಗೆ ಕೇವಲ ಹಿಂದುತ್ವ ಹಾಗೂ ನಮೋ ಮಾದರಿಯ ಅಭಿವೃದ್ಧಿಯ ಹಿನ್ನೆಲೆ ಇರುವುದರಿಂದ ನಿಮ್ಮ ಗ್ರಹಿಕೆ ಬಹಳ ಸೀಮಿತವಾದದ್ದು. ಆದುದರಿಂದಲೇ ದರ್ಗಾ ಸರ್ ಅವರನ್ನು ಪದೇ ಪದೇ ಎಡಬಿಡಂಗಿ ಅಂತ ಕರೆಯುತ್ತಿದ್ದೀರಿ. ಇಂದು ನಮಗೆಲ್ಲರಿಗೂ ಅಗತ್ಯವಿರುವುದು ಸಮಾಜದ ಹಾಗೂ ಪ್ರತಿಯೊಬ್ಬ ಪ್ರಜೆಯ ಅಭ್ಯುದಯ. ಅಭ್ಯುದಯವನ್ನು ಅಭಿವೃದ್ಧಿ ಎಂದು ತಪ್ಪಾಗಿ ಗ್ರಹಿಸಿದ್ದರಿಂದಲೇ ನೀವು ನಮೋಸುರನ ಕಾಲಬುಡ ಸೇರಿದ್ದು. ಅರವಿಂದ್ ಕೆಜ್ರಿವಾಲ್ ಸರ್ ಅವರಂತೆ ದರ್ಗಾ ಸರ್ ಅವರೂ ಸಹ ಈ ನಾಡಿನ ಪ್ರತಿಯೊಬ್ಬನ ಅಭ್ಯುದಯವನ್ನೇ ಬಯಸಿದ್ದಾರೆ. ಹಾಗೂ ಅದಕ್ಕಾಗಿ ಹೋರಾಡುತ್ತಿದ್ದಾರೆ. ಬನ್ನಿ ನೀವೂ ನಮ್ಮ ಹೋರಾಟದಲ್ಲಿ ಪಾಲ್ಗೊಳ್ಳಿ ಹಾಗೂ ಅಭ್ಯುದಯದ ಕನಸನ್ನು ನನಸಾಗಿಸಿ.

              ಉತ್ತರ
              • ವಿಜಯ್ ಪೈ
                ಏಪ್ರಿಲ್ 4 2014

                ಮಹಾನುಭಾವರೆ..
                ಬೇರೆಯವರು ಹೊಗಳಿದರೆ ಪರವಾಗಿಲ್ಲ..ಸ್ವಂತ ಗುಣಗಾನ ಅಷ್ಟು ಶೋಭಿಸುವುದಿಲ್ಲ. ಅವಧಿಯ ಆ ಒಂದು ಲೇಖನವೇ ಸಾಕು..ನಿಮ್ಮ ಬಸಾವದ್ವೈತ, ಸೂಫಿ, ಮಾರ್ಕ್ಸ ಕುಲುಮೆಯಲ್ಲಿ ನಿಮ್ಮ ಬೇಯುವಿಕೆಯನ್ನು, ಪಕ್ವತೆಯನ್ನು ತೋರಿಸಲು!. ಅಜೆಂಡ ನಿಕ್ಕಿ ಮಾಡಿಕೊಂಡು, ಅದರ ಪ್ರಕಾರ ಪುಂಗಿನಾದ ಹರಿಬಿಡುವ ಮಹಾನುಭಾವರಿಗೆ ಈ ಸಿದ್ಧಾಂತಗಳು ಬೇರೆ ಕೇಡು

                ಎರಡನೇಯದಾಗಿ, ನಿಮ್ಮಂತೆ ಉಳಿದವರೂ ಕೂಡ ಯಾವುದಾದರೂ ಸಿದ್ದಾಂತದ, ಯಾವುದಾದರೂ ವ್ಯಕ್ತಿಯ /ಗುಂಪಿನ ಬಾಲಬಡುಕರಾಗಿರುತ್ತಾರೆ / ಆಗಿರಲೇಬೇಕು ಎಂಬ ಗ್ರಹಿಕೆಗೆ ಇಳಿಯಬೇಡಿ. ಇದು ಪ್ರಕಾಶ ಕಾರಟ್ ಆಪ್ ಗೆ ಒಂದು ಸಿದ್ಧಾಂತ ಇಲ್ಲ..ನಮ್ಮಂತೆ ಒಂದು ಸಿದ್ಧಾಂತ ಇಟ್ಟುಕೊಳ್ಳಬೇಕು ಅವರು ಎಂದಂತೆ ಇದೆ.

                ನಿಮಗಿದನ್ನು ಹೇಳಬೇಕಿಲ್ಲ..ಆದರೂ ಹೇಳುತ್ತೇನೆ. ನಾನು ಮತ್ತು ನನ್ನ ಹಲವು ಗೆಳೆಯರು ಹೋದ ವಿಧಾನಸಭಾ ಎಲೆಕ್ಷನ್ ನಲ್ಲಿ ಮತ ಹಾಕಿದ್ದು ಕಾಂಗ್ರೆಸ್ ಅಭ್ಯರ್ಥಿಗೆ..ಒಂದೇ ಒಂದು ಕಾರಣದಿಂದ, ನಿರಿಕ್ಷಿಸದ ಭೃಷ್ಟಾಚಾರ ಮಾಡಿದ ಕರ್ನಾಟಕ ಬಿಜೆಪಿಗೆ ಬುದ್ಧಿ ಕಲಿಸಬೇಕೆಂದು. ನಮ್ಮಂತೆ ವಿಚಾರಮಾಡಿ ಕಾಂಗೈಗೆ ಮತ ಒತ್ತಿದವರು ಸಾಕಷ್ಟಿದ್ದರು ಕರ್ನಾಟಕದಲ್ಲಿ..ಆದರೆ ನಿಮ್ಮ ಎಡಬಿಡಂಗಿ ಕಂಪನಿ ‘ಪ್ರಗತಿಪರ/ಪ್ರಜ್ಞಾವಂತ/ಸಾಕ್ಷಿಪ್ರಜ್ಞಾ ಸಾಹಿತಿಗಳು ಕಾಂಗೈಗೆ ಬೆಂಬಲ ಘೋಶಿಸಿದ್ದರಿಂದ ಮತ್ತು ಕೋಮುವಾದಿ ಬಿಜೆಪಿಯನ್ನು ಜನ ತಿರಸ್ಕರಿಸಿದರು’ ಕಾಂಗೈ ಗೆಲವು ಸಾಧಿಸಿತು ಎಂಬ ಪ್ರಚಾರಕ್ಕೆ ತೊಡಗಿತು ಮತ್ತು ಆ ನೆಪದಲ್ಲಿ ಸರಕಾರಿ ಗಂಜಿಕೇಂದ್ರದ ಲಾಭ ಎತ್ತಲು ಸುರು ಮಾಡಿದವು.

                ಈ ಸಲ ನಮ್ಮೆಲ್ಲರ ಮತ ನರೇಂದ್ರಮೋದಿಗೆ.. ನಿಮ್ಮ ಯಾವುದೋ ‘finest mind’ ಗಳು ಏನೋ ಬರೆದು ನಮ್ಮನ್ನು ತಿದ್ದಿ, ಬದಲಿಸುತ್ತೇವೆ ಎಂಬ ಕನಸನ್ನು ಕಂಡರೆ ಅದು ಅವರ ಮೂರ್ಖತನ. ಅವರು ಬರೆಯುವುದು ಅವರ ಸಮಾಧಾನಕ್ಕೆ..ಅವರ ತೆವಲಿಗೆ ಅಂತ ತಿಳಿದುಕೊಂಡರೆ ಸಾಕು. ಅಕಸ್ಮಾತ ಈ ಸಲ ಮೋದಿಯ ಸರಕಾರ ಬಂದು, ಅದರ ನಂತರ ಅವರೂ ಕೂಡ ಉಳಿದವರಂತೆ ಆಡಳಿತ ಮಾಡಿದರೆ..ನಾವು ತದನಂತರ ಬರುವ ಚುನಾವಣೆಗಳಲ್ಲಿ ಯಾರಿಗೆ ಬೆಂಬಲಿಸಬೇಕು ಎಂಬ ನಮ್ಮ ಆಯ್ಕೆಯನ್ನು ಮುಕ್ತವಾಗಿಟ್ಟುಕೊಂಡಿದ್ದೇವೆ. ಇದನ್ನು ಏಕೆ ಹೇಳಿದೆ ಎಂದರೆ..ನಾವು ನಿಮ್ಮಂತೆ ಯಾವುದೋ ಡಬ್ಬಾ ಸಿದ್ಧಾಂತಕ್ಕೆ ಜೋತು ಬಿದ್ದವರಲ್ಲ.. ಇತ್ತ ಬಾಯಲ್ಲಿ ಕೇಜ್ರಿವಾಲ್ ಎನ್ನುವುದು, ಅತ್ತ ಸರಕಾರಿ ಗಂಜಿ ಕೇಂದ್ರದ ಮುಂದೆ ತಟ್ಟೆ ಹಿಡಿದು ನಿಲ್ಲುವ ಕಲಾಗಾರಿಕೆ ನಮ್ಮಲಿಲ್ಲ. ನಮಗೆ ನಮ್ಮದೇ ಆದ ಸ್ವಂತ ಮಿದುಳಿದೆ/ಬುದ್ಧಿಯಿದೆ. ನಮಗೆ ನಮ್ಮ ದೇಶ ಮೊದಲು..ಈ ದೇಶದಲ್ಲಿ ಎಲ್ಲರೂ ಸಮಾನರು. .ಈ ತತ್ವವನ್ನು ಪಾಲಿಸುವವರಿಗೆ ನಾವು ಮತ ಹಾಕುತ್ತೇವೆ..ಅಷ್ಟೆ!.

                ಉತ್ತರ
                • Nagshetty Shetkar
                  ಏಪ್ರಿಲ್ 4 2014

                  “ಈ ದೇಶದಲ್ಲಿ ಎಲ್ಲರೂ ಸಮಾನರು.”

                  shabhash Mr. Vijay!

                  ಉತ್ತರ
                  • Nagshetty Shetkar
                    ಏಪ್ರಿಲ್ 4 2014

                    “ಈ ದೇಶದಲ್ಲಿ ಎಲ್ಲರೂ ಸಮಾನರು.”

                    Shabhash Mr. Vijay! Definitely some signs of positive influence of Darga Sir on you! Keep focusing on this mantra, slowly Basavadvaita will take you over and reform you fully.

                    ಉತ್ತರ
                    • ವಿಜಯ್ ಪೈ
                      ಏಪ್ರಿಲ್ 4 2014

                      ಗೊಂದಲ ಮಾಡಿಕೊಳ್ಳಬೇಡಿ. ನನ್ನದು ನಿಮ್ಮ ದರ್ಗಾ ಸಾಹೇಬರ ‘ಸಮಾನತೆ’ ಯಲ್ಲ…ಎಡಬಿಡಂಗಿಗಳ ಅಭ್ಯುದಯವಲ್ಲ!. ನಿಜವಾದ ಸಮಾನತೆ..ದೇಶದ ಪ್ರಜೆಗಳನ್ನು ಸರಕಾರ ಒಂದೇ ರೀತಿ ಕಾಣಬೇಕು..ತಾರತಮ್ಯ/ತುಷ್ಣಿಕರಣ ಇರಬಾರದು ಎನ್ನುವ ಸಮಾನತೆ. ದರ್ಗಾ ಸಾಹೇಬರ ಪ್ರಭಾವ ಯಾರ ಮೇಲಾಗುತ್ತದೆಯೋ , ಆದಾಗ ಅಂಥವರು ಹಳ್ಳಹಿಡಿಯುವ ಮತ್ತು ದೇಶವನ್ನು ಹಳ್ಳ ಹಿಡಿಸುವ ಸಮಯ ದೂರವಿರುವುದಿಲ್ಲ!! 🙂

                    • Nagshetty Shetkar
                      ಏಪ್ರಿಲ್ 4 2014

                      “ನನ್ನದು ನಿಮ್ಮ ದರ್ಗಾ ಸಾಹೇಬರ ‘ಸಮಾನತೆ’ ಯಲ್ಲ”

                      ಹೋಗಲಿ ಬಿಡಿ. ನಿಮ್ಮ ಹುಟ್ಟು ವೈದಿಕ ಗುಣ ಸುಟ್ಟರೂ ಹೋಗಲ್ಲ.

                    • ವಿಜಯ್ ಪೈ
                      ಏಪ್ರಿಲ್ 4 2014

                      ಪಾಪ..ಟಾಯರ್ ಪಂಕ್ಚರ್ ಆಯ್ತು!. ಈ ಸಾಹೇಬರದ್ದು ಅದೆಂತದ್ದೊ ಸಿದ್ದಾಂತವಂತೆ..ಹೋರಾಟ ಬೇರೆ ಮಾಡ್ತಾರಂತೆ..ಅದಕ್ಕೆ ನಾವು ಸೇರಿಕೊಳ್ಳಬೇಕಂತೆ!. .ಮೊದಲು ಮನೆಗೊಂದು ಕನ್ನಡಿ ತಂದುಕೊಳ್ಳಿ..ಹಾಗೆಯೇ ನಿಮ್ಮ ಈ ಪ್ರವಚನ ಕೇಳಿ ತಲೆಯಾಡಿಸೊ ೧೦೦ ಕುರಿಗಳು ಇದ್ದಾವೆಯೇ ಎಂದು ನೋಡಿಕೊಳ್ಳಿ..

                      [ನಿಮ್ಮ ಹುಟ್ಟು ವೈದಿಕ ಗುಣ ಸುಟ್ಟರೂ ಹೋಗಲ್ಲ.]
                      ಮಂಡ ಎಡಬಿಡಂಗಿ ಗುಣಕ್ಕಿಂತ ವೈದಿಕ ಗುಣ ಮಿಗಿಲು ಸರ್ವಜ್ಞ!.

                    • Nagshetty Shetkar
                      ಏಪ್ರಿಲ್ 4 2014

                      Imam Bukhari: “Till Muslims get the same rights and privileges enjoyed by other citizens of the country, our fight will continue.”

                    • ಏಪ್ರಿಲ್ 7 2014

                      [[Imam Bukhari: “Till Muslims get the same rights and privileges enjoyed by other citizens of the country, our fight will continue.”]]

                      In India, Muslims get equal rights as Hindus.
                      In Pakistan, Hindus don’t get equal rights as Muslims; Hindu temples will be demolished; Hindus will be converted to Islam and millions of HIndus will be murdered!
                      This is the difference between a Hindu majority country and a Muslim majority country.
                      Muslims of India should be greatful to majority Hindus. If Hindus had behaved like Muslims, then Muslims would have vanished from India!

                    • ಏಪ್ರಿಲ್ 7 2014

                      In India, we have seen Muslim presidents.
                      In Pakistan or Bangladesh or Afghanistan or Iran or Saudi Arabia or Iraq or any other Islamic country, is it possible to imagine a Hindu president?

                      It is because, Hindus are very tolerant and secular by birth and Muslims can never be tolerant and secular!

                • valavi
                  ಏಪ್ರಿಲ್ 4 2014

                  [[ನಾವು ನಿಮ್ಮಂತೆ ಯಾವುದೋ ಡಬ್ಬಾ ಸಿದ್ಧಾಂತಕ್ಕೆ ಜೋತು ಬಿದ್ದವರಲ್ಲ.. ಇತ್ತ ಬಾಯಲ್ಲಿ ಕೇಜ್ರಿವಾಲ್ ಎನ್ನುವುದು, ಅತ್ತ ಸರಕಾರಿ ಗಂಜಿ ಕೇಂದ್ರದ ಮುಂದೆ ತಟ್ಟೆ ಹಿಡಿದು ನಿಲ್ಲುವ ಕಲಾಗಾರಿಕೆ ನಮ್ಮಲಿಲ್ಲ. ನಮಗೆ ನಮ್ಮದೇ ಆದ ಸ್ವಂತ ಮಿದುಳಿದೆ/ಬುದ್ಧಿಯಿದೆ. ನಮಗೆ ನಮ್ಮ ದೇಶ ಮೊದಲು.]] ವಿಜಯ್ ನಿಮಗೆ ಸಲಾಂ

                  ಉತ್ತರ
  7. ಅನಂತ
    ಏಪ್ರಿಲ್ 14 2020

    ಭ್ಯರಪ್ಪ ನವರ ಕೃತಿ ಗಳು ಹೊರ ಬಂದರೆ ಗಂಜಿ ಗಿರಾಕಿ ಗಾಳಿಗೆ ಪುಷ್ಕಳ ಭೋಜನ

    ಉತ್ತರ

Trackbacks & Pingbacks

  1. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭ | ನಿಲುಮೆ
  2. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮ | ನಿಲುಮೆ
  3. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯ | ನಿಲುಮೆ
  4. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦ | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments