ವಿಷಯದ ವಿವರಗಳಿಗೆ ದಾಟಿರಿ

Archive for

23
ಏಪ್ರಿಲ್

ಕ್ರಿ”ಕೆಟ್ಟಾ”ಟ

*ವಿಜಯ್ ಕುಮಾರ್

ಇನ್ನೇನು ವರ್ಲ್ಡ್ ಕಪ್ ಕ್ರಿಕೆಟ್ ಬಿಸಿ ಆರಿತು, ಕ್ರಿಕೆಟ್ ಕುರಿತಾದ ಚರ್ಚೆಗೆ ಒಂದಿಷ್ಟು ವಿರಾಮ ದೊರಕಬಹುದು ಅಂದುಕೊಳ್ಳುವಷ್ಟರಲ್ಲಿ ಐಪಿಎಲ್ ಟಿ-ಟ್ವೆಂಟಿ ಶುರುವಾಯ್ತು. ಆದರೆ ವರ್ಲ್ಡ್ ಕಪ್ ಕ್ರಿಕೆಟ್ ಹಾಗು ಐಪಿಎಲ್ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ವರ್ಲ್ಡ್ ಕಪ್ ಕ್ರಿಕೆಟ್  ಭಾಗವಹಿಸುವ ಪ್ರತಿಯೊಂದು ರಾಷ್ಟ್ರದ ಪ್ರತಿಷ್ಠೆಯ, ಅಭಿಮಾನದ ಸಂಕೇತದಂತೆ ಕಂಡರೆ ಐಪಿಎಲ್ ಒಬ್ಬ ವ್ಯಕ್ತಿಯ, ತಂಡದ ಮಾಲೀಕನ ಪ್ರತಿಷ್ಠೆಯ,ಗರ್ವದ ಸಂಕೇತವಾಗಿ ತೋರುತ್ತಿದೆ.
             ಐಪಿಎಲ್ ಕುರಿತು ಹೀಗೆ ಹೇಳಲು ಕಾರಣವಿದೆ. ಐಪಿಎಲ್ ಇಂದು ಒಂದು ಕ್ರೀಡೆಯಾಗಿ ಕಾಣುವ ಬದಲು ವ್ಯಾಪಾರವಾಗಿ ಬದಲಾಗಿದೆ. ಆಟಗಾರರು, ಕೋಚುಗಳು ಅಷ್ಟೇ ಅಲ್ಲದೇ ವಸ್ತ್ರವಿನ್ಯಾಸಕಾರರನ್ನೂ ಬಿಕರಿಗಿಡುವ, ಖರೀದಿ ಮಾಡುವ ಖಯಾಲಿ ಇರುವ ಸಿರಿವಂತರ ಗುಂಪೇ ಇಲ್ಲಿದೆ. Its not a game, Its a Gamble- ಹೌದು, ಈ ಮಾತನ್ನು ಹೇಳಲು ದುಃಖವಾಗುತ್ತದೆ. ಹಿಂದೆ ಈ ಸಿರಿವಂತ ಜನ ಕುದುರೆ ರೇಸುಗಳಲ್ಲಿ, ಕ್ಯಾಸಿನೋಗಳಲ್ಲಿ ತಮ್ಮ ಹಣ ತೊಡಗಿಸಿ ಮೋಜು ಮಾಡುತ್ತಿದ್ದರು, ಈಗ ಐಪಿಎಲ್ ನಲ್ಲಿ ಹಣ ತೊಡಗಿಸಿ ತಮ್ಮ ಚಟ ತೀರಿಸಿಕೊಳ್ಳುತ್ತಿದ್ದಾರೆ.
                      ವಿಜಯ್ ಮಲ್ಯ ಇರಬಹುದು, ಶಾರುಖ್ ಖಾನ್ ಇರಬಹುದು, ಇಲ್ಲವೇ ಅಂಬಾನಿ ಕುಟುಂಬದವರಿರಬಹುದು ಇವರಿಗೆ ಕ್ರಿಕೆಟ್ ಬಗ್ಗೆ ಇರುವ ಅಭಿಮಾನಕ್ಕಿಂತ ಹೆಚ್ಚಾಗಿ ತಮ್ಮ ಬಳಿ ಇರುವ ಕಪ್ಪುಹಣವನ್ನು ಬೆಳ್ಳಗೆ ಮಾಡಿಕೊಳ್ಳುವ ಸುಲಭೋಪಾಯದಂತೆ ಐಪಿಎಲ್ ಗೋಚರಿಸುತ್ತಿದೆ. ಇವರಲ್ಲಿ ತಮ್ಮ ತಂಡ ಪ್ರತಿನಿಧಿಸುವ ಪ್ರಾಂತ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದಕ್ಕೆ ನಮ್ಮ (!!??) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಾಜಾ ಉದಾಹರಣೆಯಂತಿದೆ. ಒಬ್ಬ ಅಭಿಮನ್ಯು ಮಿಥುನ್ ಹೊರತುಪಡಿಸಿದರೆ ದುರ್ಬೀನು ಹಾಕಿ ಹುಡುಕಿದರೂ ಮತ್ತೊಬ್ಬ ಕರ್ನಾಟಕದ ಆಟಗಾರನೂ ತಂಡದಲ್ಲಿ ಇಲ್ಲ ಎಂದರೆ ಅದು ಕನ್ನಡಿಗರ ದುರದೃಷ್ಟವೋ ಅಥವಾ ವಿಜಯ್ ಮಲ್ಯ ಎಂಬ ಮಹಾನ್ ಕನ್ನಡಿಗನ ಕನ್ನಡ ಪ್ರೇಮವೋ ತಿಳಿಯದಾಗಿದೆ. ಮತ್ತಷ್ಟು ಓದು »
23
ಏಪ್ರಿಲ್

ಬಂಗಾರಪಲ್ಕೆಗೆ ಮುಕ್ತಿ ಎಂದು?

ಪವನ್ ಎಂ.ಟಿ

ನಮ್ಮ ಸರಕಾರ ಕ್ರಿಕೇಟ್ ಆಟಗಾರರಿಗೆ ೨೫ ಲಕ್ಷ ರೂಪಾಯಿ ಹಣವನ್ನು ಕೊಡಲು ಮುಂದಾಗಿದೆ. ಪಾಪ ಅವರಿಗೆ ಏನೂ ಇಲ್ಲ ನೋಡಿ ಅದಕ್ಕೆ ಕೊಡ್ಲಿ ಬಿಡಿ. ನಮ್ಮ ಸರಕಾರದ ಹಣೆ ಬರಹವೇ ಅಷ್ಟು. ಹಣ ಇರುವವರಿಗೆ ಹಣವನ್ನು ನೀಡುತ್ತಾರೆಯೇ ಹೊರತು ಬಡವರಿಗೆ ನೀಡುವುದಿಲ್ಲ. ನಮ್ಮಲ್ಲಿ ಶ್ರೀಮಂತರೇ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ವಿನಹ ಬಡವ ಶ್ರೀಮಂತನಾದದಿಲ್ಲ. ನಮ್ಮಲ್ಲಿ ಕಾನೂನನ್ನು ಪಾಲಿಸುವವರಿಗೆ ಮಾತ್ರ ಕಾನೂನಿದೆ. ಆದರೆ ನಮ್ಮಲ್ಲಿ ಒಂದು ಒತ್ತಿನ ಊಟಕ್ಕೂ ಕಷ್ಟಪಡೊ, ನಾಗರೀಕ ಸೌಲಭ್ಯವನ್ನೇ ಕಾಣದೆ ಇರೋ ಕೆಲವು ಗ್ರಾಮಗಳಿವೆ, ಜನರಿದ್ದಾರೆ ಅಂತ ಸರಕಾರಕ್ಕೆ ಗೊತ್ತೇ ಇಲ್ಲ ಅಂತ ಕಾಣ್‌ತ್ತದೆ. ಯಾಕಂದ್ರೇ ನಮ್ಮ ಸರಕಾರಕ್ಕೆ ಕುರ್ಚಿ ಉಳಿಸ್‌ಕೊಳ್ಳೊ ಚಿಂತೆಯಾದರೆ ವಿರೋಧ ಪಕ್ಷಕ್ಕೆ ಕುರ್ಚಿ ಬೀಳಿಸೋ ಚಿಂತೆ ಇದರ ನಡುವೆ ಸಿಲುಕಿರೂ ಜನರ ಗತಿ ಅದೋಗತಿ.

ನಿಮ್ಮ ಮನೆಗೆ ಇನ್ನಾರದೋ ಮನೆಯ ರಸ್ತೆಯಲ್ಲಿ ಅಥವ ತೋಟದ ರಸ್ತೆಯಲ್ಲಿ ಹೋಗಬೇಕು ಎಂದಾದರೆ ನಿಮಗೆ ಮನೆಗೆ ಅಥವ ತೋಟಕ್ಕೆ ಸಂಬಂಧಪಟ್ಟ ಮಾಲಿಕನಿಂದ ಏನೆಲ್ಲ ನಿರ್ಭಂದಗಳು ಬರಬಹುದೆಂದು ನೀವೆ ಯೋಚಿಸಿ. ನಿವು ಅವ್ರು ಹೇಳುವ ಎಲ್ಲಾ ಮಾತುಗಳನ್ನು ಸರಿಯಾಗಿ ಕೇಳಿದರೆ ಮಾತ್ರ ನಿಮಗೆ ಅಲ್ಲಿ ಸಂಚರಿಸಲು ಅವಕಾಶ. ಹಾಗೆಂದು ನಿರ್ಭಂದನೆಯನ್ನು ಸಹಿಸಿಕೊಂಡು ಎಷ್ಟುದಿನವೆಂದು ನೀವು ಓಡಾಡುತ್ತಿರಿ. ಅದು ನಿಮ್ಮಿಂದ ನಮ್ಮಿಂದ ಕಂಡಿತಾ ಸಾಧ್ಯವಿಲ್ಲ. ಆದ್ರೆ ಇಲ್ಲಿ ಎಲ್ಲ ನಿರ್ಭಂದನೆಗಳ ನಡುವೆ ಸರಿಯಾದ ರಸ್ತೆ ಇಲ್ಲದೆಬದುಕುತ್ತಿರುವವರು ಬೆಳ್ತಂಗಡಿತಾಲೂಕಿನ ದಿಡುಪೆಯ ಸಮೀಪದ ಬಂಗಾರು ಪಲ್ಕೆಯ ಮಲೆಕುಡಿರು. ಪಾಪ ಇವರ ಪರಿಸ್ಥಿತಿಯನ್ನು ನಮ್ಮಲ್ಲಿ ಆಡಳಿತಗಾರರೆಂದು ಕರೆಯಿಸಿಕೊಳ್ಳುವವರಿದ್ದಾರಲ್ಲ ಅವರೊಮ್ಮೆ ಬಂದು ನೋಡಬೇಕು.

ನಾವು ಮಲೆಕುಡಿಯರ ಪ್ರದೇಶಗಳಿಗೆ ಭೇಟಿ ನೀಡಿದಾಗ ನಮಗೆ ದಿಡುಪೆಯ ಬಂಗಾರು ಪಲ್ಕೆ ಅನೇಕ ಕಾರಣಗಳಿಂದ ಕುತೂಹಲ ಮೂಡಿಸಿತ್ತು  ಇಲ್ಲಿಯ ರಸ್ತೆ, ಜನ, ನಾಗರಿಕ ಸೌಲಭ್ಯ ಎಲ್ಲವೂ ಇಲ್ಲಿ ವಿಭಿನ್ನವೇ.

ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ದಿಡುಪೆ ಎನ್ನವ ಸ್ಥಳದಿಂದ ಸುಮಾರು ೧೫ ಕಿಲೋಮೀಟರ್ ದೂರದಲ್ಲಿರುವ ಬಂಗಾರ್ ಪಲ್ಕೇಗೆ ತೆರಳಬೇಕಾದರೆ, ಪ್ರಪಂಚದ ಅತ್ಯಂತ ಕೆಟ್ಟದಾದ ರಸ್ತೆ ನಮಗೆ ಸಿಗುತ್ತದೆ. ಮನುಷ್ಯ ಸರಿಯಾಗಿ ಕಾಲು ನಡಿಗೆಯಲ್ಲಿಯೂ ಸಂಚರಿಸಲು ಸಾಧ್ಯವಿಲ್ಲದ ಈ ರಸ್ತೆ ಕುದುರೆಮುಖ ರಾಷ್ಟ್ರೀಯ ಉಧ್ಯಾನದ ಒಳಗಿದೆ. ಬೇಸಿಗೆ ಸಮಯವಾದುದರಿಂದ ನಮಗೆ ತೆರಲು ಒಂದೊ ೪ ವೀಲ್ ವ್ಯವಸ್ಥೆಯಿರುವ ಒಂದು ಜೀಪ್ ನಮಗೆ ಸಿಕ್ಕಿತು ಈ ೪ ವೀಲ್ ಜೀಪ್ ಬಿಟ್ಟು ಬೇರೆ ಯಾವುದೇ ವಾಹನ ಅಲ್ಲಿಗೆ ತೆರಳು ಸಾಧ್ಯವಿಲ್ಲ. ಮತ್ತಷ್ಟು ಓದು »