ವಿಷಯದ ವಿವರಗಳಿಗೆ ದಾಟಿರಿ

Archive for

24
ಏಪ್ರಿಲ್

ಇಂದಿನ ಯುವಕರು ಹಾಳಾಗಿದ್ದಾರೆಯೇ?

ಯೊಗೀಶ್ ಕೈರೋಡಿ

‘ಈಗಿನ ಯುವಕರು ಹಾಳಾಗಿದ್ದಾರೆ; ದಾರಿ ತಪ್ಪುತ್ತಿದ್ದಾರೆ’, ಇಂತಹ ಮಾತನ್ನು ಸಲೀಸಾಗಿ ಹೇಳಿ ಬಿಡುತ್ತೇವೆ. ಇದು ಸುಲಭದಲ್ಲಿ ಹೊರಳಿಕೊಳ್ಳುವ ನಾಲಗೆಯ ಮಾತೇ ಹೊರತು ಬುದ್ಧಿಪೂರ್ವಕ ವಿವೇಚನಯುಕ್ತ ಮಾತಲ್ಲ. ಭವಿಷ್ಯದ ಕುರಿತಂತೆ ಗಂಭೀರ ಚಿಂತನೆ ಹೊಂದಿರುವ ಅಧ್ಯಯನ ಶೀಲ ಹಾಗೂ ಮಾನವಪರವಾಗಿ ಯೋಚಿಸಿ ಕಾರ್ಯ ಪ್ರವೃತ್ತರಾಗುವ ಯುವಕರು ನಮ್ಮ ಸುತ್ತ ಸಾಕಷ್ಟು ಇದ್ದಾರೆ. ಪ್ರತೀ ಕಾಲವೂ ಕೂಡ ತನ್ನ ನಂತರದ ತಲೆಮಾರನ್ನು ಕೆಟ್ಟಿದ್ದಾರೆ ಎಂದೇ ಪರಿಗಣಿಸಿ ಸಾಗುತ್ತಾ ಬಂತು. ಆದುದರಿಂದ ಇದೆಲ್ಲ ತಲೆಕೆಡಿಸಬೇಕಾದ ಸಂಗತಿಯಲ್ಲ.

ಒಂದು ವೇಳೆ ಯುವಕರು ದಾರಿತಪ್ಪಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದಾದರೂ ಅದರ ಹೊಣೆ ಸುತ್ತಲಿನ ಸಮಾಜದ್ದೇ ಹೊರತು ಯುವಕರದ್ದಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು ಸಾಕಷ್ಟು ಪ್ರಮಾಣದಲ್ಲಿ ಭಾಗಿಯಾಗಿದ್ದರು, ಅವರಿಗೆ ದೇಶ ಪ್ರೇಮವಿತ್ತು ಎಂದರೆ ಈ ರೀತಿಯ ಸದ್ಭಾವನೆಯನ್ನು ಆ ಕಾಲದ ಜವಾಬ್ದಾರಿಯುತ ಜನವರ್ಗ ಅಥವಾ ನಾಯಕರು ರೂಪಿಸಿದ್ದರು. ಇಂದು ರೀತಿಯ ಸದ್ಭಾವ ನೆಲೆಗೊಳ್ಳುವ ವಾತಾವರಣಕ್ಕಿಂತ ಮಾನವ ದ್ವೇಷಿ ವಾತಾವರಣ ನಿರ್ಮಾಣಕ್ಕೆ ಹೆಚ್ಚಿನ ಅವಕಾಶಗಳು ಒದಗಿ ಬರುತ್ತಿದೆ. ಇದರಿಂದ ಮುಕ್ತಗೊಂಡು ಸ್ವತಂತ್ರ ಹಾಗೂ ಸ್ವಸ್ಥ ಮನಸ್ಸು ಯುವ ಸಮುದಾಯದಲ್ಲಿ ನೆಲೆಗೊಳ್ಳುವ ವಾತಾವರಣ ನಿರ್ಮಾಣ ಒಂದು ಬಗೆಯ ಆಂದೋಲನದಂತೆ ನಡೆಯಬೇಕು. ವರ್ತಮಾನದ ನಮ್ಮ ಸುತ್ತಮುತ್ತಲಿನ ವಿದ್ಯಾಮಾನಗಳನ್ನು ಗಮನಿಸುವುದರೊಂದಿಗೆ ಸ್ವಸ್ಥ ಸಮಾಜದ ನಿರ್ಮಿತ ಸಾಧ್ಯ.

ವಿಭಜಕ ಮನಸ್ಸುಗಳ ಸೃಷ್ಟಿ:

ಜಾತಿ, ಮತ, ಪಕ್ಷ ಈ ಮೂರು ಅಂಶಗಳು ಮಾನವ ಮನಸ್ಸನ್ನು ನಿರಂತರ ಒಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಒಂದು ಸಮಾಜದ ಏಳಿಗೆಯಲ್ಲಿ ಜಾತಿ ಅಥವಾ ಮತದ ಸೇವಾಪರ ಚಟುವಟಿಕೆಯ ಮಹತ್ವವನ್ನು ಅಲ್ಲಗೆಳೆಯುವಂತಿಲ್ಲ. ಜನತೆಯ ಕಣ್ಣೀರನ್ನು ಒರೆಸುವ ಕಾರ್ಯಗಳನ್ನು ಸಾಂಘಿಕ ನೆಲೆಯಲ್ಲಿ ಮಾಡಿದೆ ಎಂಬುದು ಸತ್ಯ. ಒಂದು ಸಮುದಾಯದ ಒಳಗಿರುವ ಉಳ್ಳವರು ದುರ್ಬಲರ ಏಳಿಗೆಗೆ ಸ್ಪಂದಿಸಲು ಇದೊಂದು ಉತ್ತಮ ವ್ಯವಸ್ಥೆ. ಆದರೆ ಒಂದು ವ್ಯವಸ್ಥೆಯ ಒಳಗಡೇ ಒಬ್ಬರನ್ನು ಒಬ್ಬರು ಅವಲಂಬಿಸಿ ಸಹಕಾರ ಪ್ರವೃತ್ತಿಯಿಂದ ಬದುಕಬೇಕಾದುದು ಅಷ್ಟೇ ಅಗತ್ಯ. ಸ್ವಸಂಘಟನೆಯ ಬಲವರ್ಧನೆಗಾಗಿ ಅನ್ಯ ಸಮುದಾಯವನ್ನು ಅನಾವಶ್ಯಕ ಶತ್ರುವಾಗಿ ಬಿಂಬಿಸುವ ಸಂದರ್ಭ ಒದಗಿ ಬರಬಹುದು. ಇದು ಪರಸ್ಪರ ಅಪನಂಬಿಕೆಗೆ ಕಾರಣವಾಗಿ ಮಾತು ಮುರಿಯದೆಯೂ ಅಶಾಂತಿಗೆ ಕಾರಣವಾಗಬಹುದು. ಪೂರ್ವಾಗ್ರಹ ಮನೆ ಮಾಡಬಹುದು. ಇನ್ನು ತನ್ನ ಪಕ್ಷಬಲಪಡಿಸಿ ಅಧಿಕಾರಕ್ಕೆ ಮತ್ತಷ್ಟು ಓದು »

24
ಏಪ್ರಿಲ್

ಕೀಲಿ ಕೈ

ಹರೀಶ(ಮೇಷ್ಟ್ರು)

ಮನ ಹುಡುಕುತಿತ್ತು

ಗೋಳದಂತೆ ಆವರಿಸಿರುವ

ಚೆಂಡಿನಿಂದ ಹೊರಬರಲು ಕೀಲಿಕೈ

ಆ ಚೆಂಡನ್ನು ಒದೆಯಲು, ಅಟ್ಟಾಡಿಸಲು

ಕೊನೆಗೆ ಅದನ್ನು ಮೆಟ್ಟಿ ನಿಲ್ಲಲು

ಅತಿಯಾಸೆ ಅಲ್ಲವೆ ಇದು…. ಮನಸ್ಸಿನ ವಿಕಾರವಲ್ಲವೇ ಇದು..?

ವಿನಾಶದ ಚಿಂತೆನೆಯಲ್ಲವೆ ಇದು…?

ಜಗದ ನಾಟಕರಂಗದಲ್ಲಿ

ಎಲ್ಲರೂ ತಡಕಾಡುವರು

ಬೀಳುವರು, ಏಳುವರು

ಲಿಂಗಭೇದವಿಲ್ಲದೆ ಮನದಲ್ಲಿ ಮಂಡಕ್ಕಿ ತಿನ್ನುವರು,

ತಮ್ಮ ಅಸಾಹಾಯಕತೆಯಿಂದ

ಕೆಲವರು ಕಳೆದುಕೊಂಡಿದ್ದಾರೆ

ಕೆಲವರು ಕಸಿದುಕೊಂಡಿದ್ದಾರೆ

ಅರಿವಿಗೆ ಬಾರದವರೂ ಇದ್ದಾರೆ

ಅನುಕರಿಸುವವರು…ಅನುಸರಿಸುವವರು

ಎಲ್ಲರದೂ ಒಂದೇ ಹುಡುಕಾಟ

ಎಲ್ಲಿ ನಮ್ಮ ಕೀಲಿಕೈ…?

ಗೋಳಾಕಾರದ ಚೆಂಡನಲ್ಲಿ

ಆದಿಯೂ ಅಲ್ಲೆ…ಅಂತ್ಯವೂ ಅಲ್ಲೆ,

ಲಲ್ಲೆಗರೆವ ಮಗುವಿನಂತೆ,

ಬೆದರಿದ ಹುಲ್ಲೆಯಂತೆ,

ಗರ್ಜಿಸುವ ಸಿಂಹದಂತೆ,

ಕೊನೆಗೆ ಏನೂ ಅರಿಯದ ಕುರಿಯ ಹಾಗೆ ಬಲಿಪಶು.

ಕಳೆದು ಹೋದ ಕೀಲಿಕೈ

ಎಲ್ಲಿದೆ…?  ಅದು ಹೇಗಿದೆ…?

‘ಕಸ್ತೂರಿಯಂತೆ’…!?