ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 2, 2013

2

ಗಾಂಧೀಜಿ ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವಕ್ಕೂ ಸಲ್ಲುವ ಶ್ರೇಷ್ಠ ವ್ಯಕ್ತಿ

‍ನಿಲುಮೆ ಮೂಲಕ

ಅಶ್ವಿನ್ ಅಮೀನ್ ಅವರ “ಜಾತ್ಯಾತೀತ ‘ಜಿನ್ನಾ’ ಖಳ ನಾಯಕನಾದರೆ ‘ಗಾಂಧೀ’ ಯಾರು?..” ಲೇಖನ ಪ್ರತಿಕ್ರಿಯೆಯಾಗಿ, “ನರೇಶಕುಮಾರ ಹೆಗಡೆ ದೊಡ್ಮರಿ” ಅವರು ಬರೆದ ಈ ಸುಧೀರ್ಘ ಪ್ರತಿಕ್ರಿಯೆ,ಉಳಿದ ಪ್ರತಿಕ್ರಿಯೆಗಳ ನಡುವೆ ಕಳೆದು ಹೋಗದೆ,ಗಾಂಧೀಜಿಯವರ ಬಗ್ಗೆ ಒಂದಿಷ್ಟು ವಿಷಯ ತಿಳಿದುಕೊಳ್ಳಬಯಸುವವರ ಕಣ್ಣಿಗೂ ಕಾಣಲಿ – ನಿಲುಮೆ

– ನರೇಶಕುಮಾರ ಹೆಗಡೆ ದೊಡ್ಮರಿ

ನಮ್ಮ ಅಭಿಪ್ರಾಯಗಳು ರೂಪುಗೊಳ್ಳುವುದು ಹೇಗೆ?…
1- ಇತರರು ಹೇಳಿದ್ದನ್ನು/ವಿವರಿಸಿದ್ದನ್ನು ಕೇಳುವುದರಿಂದ/ಓದುವುದರಿಂದ.
2- ಘಟನೆಯೊಂದನ್ನು ಕಣ್ಣಾರೆ ನೋಡುವುದರಿಂದ
ಈ ಮೇಲಿನ ಎರಡರಲ್ಲಿ ನಿಮ್ಮ ಅಭಿಪ್ರಾಯ ರೂಪುಗೊಂಡ ಬಗೆ 1ನೇ ಬಗೆಯಿಂದ ಎಂದು ತಿಳಿಯುತ್ತೇನೆ. ಹಾಗೂ ಈ ಎರಡನೇ ಬಗೆಯಿಂದ ಅಭಿಪ್ರಾಯ ರೂಪಿಸಿಕೊಳ್ಳುವಲ್ಲಿ ಮತ್ತೆರಡು ಬಗೆಗಳಿವೆ:
1- ಇತಿಹಾಸದ ಕುರಿತಾಗಿನ ಕೆಲವೇ ಲೇಖನಗಳನ್ನು ಓದುವುದರಿಂದ
2- ಸಂಪೂರ್ಣ ಇತಿಹಾಸವನ್ನು ಕೂಲಂಕುಷವಾಗಿ ಅಭ್ಯಸಿಸುವುದರಿಂದ
ಹಾಗೂ ಈ ಮೇಲಿನ ವಿಧದಲ್ಲಿ ತಾವು ಯಾವ ಬಗೆಯನ್ನು ಅನುಸರಿಸಿದ್ದೀರಿ ಈ ಲೇಖನವನ್ನು ಬರೆಯುವ ಮೊದಲು ಎಂಬುದನ್ನು ನಾನು ಕೇಳಿದರೆ ದಯವಿಟ್ಟು ಅದು ಈ ಲೇಖನದ ಕುರಿತೇ ಹೊರತು ತಮ್ಮ ಕುರಿತಲ್ಲ.

ನಾವು ಕೇವಲ ಓದಿ/ಕೇಳಿ ಪಡೆದ ಜ್ಞಾನದಿಂದ ಈಗಾಗಲೇ ಮಹಾನ್ ಎನಿಸಿರುವ ವ್ಯಕ್ತಿಯೊಬ್ಬನನ್ನು ಆತ ಮಾಡಿದ ಒಳ್ಳೆಯ ಕರ್ಮಗಳನ್ನು ತಿಳಿದು ಹೊಗಳಬಹುದೇ ಹೊರತು , ಆ ಅಲ್ಪಜ್ಞಾನವನ್ನು ಯಾರನ್ನಾದರೂ ತೆಗಳಲು ಬಳಸಿಕೊಳ್ಳಬಾರದೆಂಬುದು ನನ್ನ ಅನಿಸಿಕೆ. ಹಾಗಾಗಿ ನಾನು ಗಾಂಧೀಜಿಯವರ ಪರ ಬರೆಯುತ್ತಿದ್ದೇನೆಯೇ ಹೊರತು ಜಿನ್ನಾರವರ ವಿರುದ್ಧವಲ್ಲ.

ಗಾಂಧೀಜಿಯವರನ್ನು ಶಕುನಿಗೆ ಹೋಲಿಸಿದ್ದೀರಲ್ಲಾ! ನಿಮಗೆ ಮನಸಾದರೂ ಹೇಗೆ ಬಂತು?
ಗಾಂಧೀಜಿ ಅಂದು ತಮ್ಮ ಕಿರಿಯ ವಯಸ್ಸಿನಲ್ಲಿಯೇ ದಕ್ಷಿಣ ಆಫ್ರಿಕಾದಲ್ಲಿ ವರ್ಣ ತಾರತಮ್ಯದ ವಿರುದ್ಧ ಸೊಲ್ಲೆತ್ತಿ ಮಾಡಿದ ಹೋರಾಟದ ಫಲವಾಗಿ, ಇಡೀ ಜಗತ್ತಿನಲ್ಲಿ ವರ್ಣಭೇದ/ಸಮುದಾಯಭೇದದ ವಿರುದ್ಧದ ಹೋರಾಟಕ್ಕೆ ನಾಂದಿಯಾಯಿತು. ಅವರು ಆರಂಭಿಸಿದ ಹೊಸ ಅಹಿಂಸಾ ಮಾರ್ಗದ ಸತ್ಯಾಗ್ರಹ ಹೋರಾಟದ ಹೊಸ ದಾರಿಯನ್ನು ಪರಿಚಯಿಸಿತು. ಅವರ ಈ ಚಳುವಳಿ ಪ್ರಾರಂಭದಲ್ಲಿ ಅಲ್ಲಿ ವಾಸಿಸುತ್ತಿದ್ದ ಭಾರತೀಯ ಸಮುದಾಯದ ಕಳಕಳಿಯ ಮೇಲಾದರೂ, ನಂತರ ಬಿಳಿಯರಿಂದ ಜೀತದಾಳುಗಳಂತೆ ಜೀವಿಸಬೇಕಿದ್ದ ಅದೆಷ್ಟೋ ಸಾವಿರ ಕುಟುಂಬಕ್ಕೆ ಅದು ಆಶಾಕಿರಣವಾಯಿತು.

ಅವರೇನಾದರೂ ಅಧಿಕಾರದಾಹಿಯಾಗಿದ್ದರೆ, ಅಲ್ಲಿಯೇ ಅವರಿಗೆ ಬಯಸಿ ಬಂದಿದ್ದ ಅವಕಾಶವನ್ನು ಬಿಟ್ಟು ಭಾರತಕ್ಕೆ ಮರಳುತ್ತಿದ್ದರಾ? ಭಾರತಕ್ಕೆ ಬಂದಾಗ ಅವರು ನೇರವಾಗಿ ರಾಜಕೀಯ ಸೇರಲಿಲ್ಲ. “ಭಾರತದ ಕುರಿತು ಮಾತನಾಡುವ ಮೊದಲು ನಾನು ಒಮ್ಮೆ ಇಡೀ ಭಾರತವನ್ನು ಸುತ್ತಿ ನಮ್ಮದೇ ಜನರ ನಾಡಿಮಿಡಿತವನ್ನು ಅರಿಯಬೇಕು.” ಎಂದು ಹೇಳಿ ಕೂಡಲೇ ಬಂದಿದ್ದ ರಾಜಕೀಯ ಆಹ್ವಾನವನ್ನು ತಿರಸ್ಕರಿಸಿ ತಾನೊಬ್ಬ ಸಾಧಕ ಎಂಬ ಅಹಂನ್ನು ಬಿಟ್ಟು, ಪಂಚೆಯೊಂದನ್ನು ತೊಟ್ಟು ಭಾರತದುದ್ದಗಲಕ್ಕೂ ಸಂಚರಿಸಿ ವೈವಿಧ್ಯ ಭಾರತದ ಜನಸಮುದಾಯದ ನಾಡಿಮಿಡಿತವನ್ನು ಅರಿಯಲು ಪ್ರಯತ್ನಿಸಿದರು. ಇದನ್ನು ಆ ಮೊದಲು ಯಾರೊಬ್ಬರೂ ಮಾಡಿರಲಿಲ್ಲ. ಆಗಲೇ ಅವರಿಗೆ ಮನದಟ್ಟಾಯಿತು – ಮೊದಲು ಭಾಷೆ/ಪ್ರಾಂತ್ಯ/ಕೋಮು – ಇವುಗಳನ್ನೆಲ್ಲ ಬದಿಗಿಟ್ಟು ಭಾರತೀಯರೆಲ್ಲ ಒಂದಾಗದೇ ಬ್ರಿಟಿಷರ ವಿರುದ್ದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಅಸಾಧ್ಯ ಎಂದು.

ಗಾಂಧೀಜಿಯವರು ಆ ಮೊದಲೇ ಒಂದು ಸತ್ಯವನ್ನು ಅರಿತಿದ್ದರು – ಯುದ್ಧ ಪರಿಣಿತಿಯಲ್ಲಿ ಬ್ರಿಟಿಷರು ಭಾರತಕ್ಕಿಂತ ಅದೆಷ್ಟೋ ಮುಂದಿದ್ದು, ಶಸ್ತ್ರಾಸ್ತ್ರ ಸಹಿತವಾದ ಹಿಂಸಾತ್ಮಕ ಹೋರಾಟದಿಂದ ಬ್ರಿಟಿಷರನ್ನು ಹಿಮ್ಮೆಟ್ಟಿಸುವುದು ಕಷ್ಟಸಾಧ್ಯ ಎಂದು. ಹಾಗಾಗಿಯೇ ಅವರೆಂದೂ ಹಿಂಸಾತ್ಮಕ ಮಾರ್ಗವನ್ನು ಬೆಂಬಲಿಸಲಿಲ್ಲ. (ಅವರೇ ಹೇಳಿದಂತೆ – “An eye for an eye makes the whole world blind”)

ಆದರೆ ಅವರೇಕೆ ಭಗತ್ ಸಿಂಗ್ ಅವರನ್ನಾಗಲೀ, ಸುಭಾಷ್ ಚಂದ್ರ ಭೋಸ್ ಅವರನ್ನಾಗಲೀ ಬೆಂಬಲಿಸಲಿಲ್ಲ? ಏಕೆಂದರೆ ವೈಯಕ್ತಿಕವಾಗಿ ಅವರು ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದ ಮಾರ್ಗವನ್ನು ಅನುಸರಿಸುತ್ತಿರುವವರನ್ನು ರಾಜಕೀಯವಾಗಿ ಬೆಂಬಲಿಸುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿಯೇ ಗಾಂಧೀಜಿಯವರು ಅವರ ಕುರಿತಾಗಿ ತಟಸ್ಥ ನೀತಿಯನ್ನು ಅನುಸರಿಸಿದರು.

ಭಾರತವೇನಾದರೂ ಹಿಂಸಾತ್ಮಕ ಮಾರ್ಗವನ್ನೇ ಹಿಡಿದು ಮುನ್ನಡೆದಿದ್ದರೆ ಇಂಗ್ಲೆಂಡಿನ ಬ್ರಿಟಿಷ ಆಡಳಿತಕ್ಕೆ ತಾನೂ ಹಿಂಸಾತ್ಮಕ ಮಾರ್ಗವನ್ನೇ ಮುಂದುವರೆಸಲು ಪ್ರಚೋದಿಸಿದಂತಾಗುತ್ತಿತ್ತು ಹೊರತು ಮತ್ತಾವ ಪ್ರಯೋಜನವೂ ಇರಲಿಲ್ಲ. ಹಾಗಾಗಿಯೇ ಗಾಂಧೀಜಿಯವರು ಅಹಿಂಸಾತ್ಮಕ ಸತ್ಯಾಗ್ರಹವನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿದರು.

1947ರ ಸಮಯದಲ್ಲಿ ಹಿಂದೂ-ಮುಸ್ಲಿಮ್ ಸಮುದಾಯ ಆಗಲೇ ಬೇರೆಯಾಗಿಹೋಗಿತ್ತು. ಇದರ ಹಿಂದಿನ ಷಡ್ಯಂತ್ರ ಬ್ರಿಟಿಷರದ್ದಾಗಿತ್ತೇ ಹೊರತು ಮುಸ್ಲಿಮ್ ನಾಯಕರಾದ ಜಿನ್ನಾರವರಿದಾಗಲೀ ಅಥವಾ ಗಾಂಧೀಜಿ/ನೆಹ್ರುರವರಿದಾಗಲೀ ಆಗಿರಲಿಲ್ಲ. ಬ್ರಿಟಿಷರ ಈ ‘ಹಿಂದೂ-ಮುಸ್ಲಿಮ್’ ಒಡೆದಾಳುವ ಹೊಸ ದಾಳ ಆಗಿನ ಭಾರತ ಸ್ವಾತಂತ್ರ್ಯ ಚಳುವಳಿಗೆ ಅತ್ಯಂತ ಮಾರಕವಾಗತೊಡಗಿತು. ಭಾರತದಲ್ಲಿಯೂ ಹಲವೆಡೆ ಮುಸ್ಲಿಂ ರಾಜಪತ್ಯ ಆಡಳಿತದಲ್ಲಿರುವ ಸತ್ಯ ಗಾಂಧೀಜಿಯವರಿಗೂ/ನೆಹರೂರವರಿಗೂ ತಿಳಿದಿತ್ತು. ಹಾಗೂ ಹಿಂದೂ ಸಮುದಾಯದ ಪ್ರಶ್ನಾತೀತ ನಾಯಕನಾಗಿ ರಾಜಕೀಯವಾಗಿ ಇನ್ನೂ ಬೆಳೆಯಬೇಕೆಂಬ ಹಂಬಲದಿಂದ ನೆಹರೂರವರು, ಗಾಂಧೀಜಿಯವರ ‘ಅಖಂಡ ಭಾರತ’ ಎಂಬ ಮಹದಾಸೆಗೆ ಕೊನೆಕೊನೆಯಲ್ಲಿ ಹೆಚ್ಚಿನ ಬೆಂಬಲ ನೀಡದೇ ಹೋಗಿದ್ದು ಅತೀವ ನಿರಾಸೆಯನ್ನುಂಟುಮಾಡಿತ್ತು.

ಅದೇ ಸಮಯದಲ್ಲಿ ಇನ್ನೊಂದೆಡೆ ಜಿನ್ನಾರವರು ಪಾಕಿಸ್ತಾನಕ್ಕಾಗಿ ಹೋರಾಡಲು ಮುಸ್ಲಿಂರನ್ನು ಕಿಚ್ಚೆಬ್ಬಿಸತೊಡಗಿದ್ದರು. ಎಲ್ಲ ಬ್ರಿಟಿಷರ ಆಶಯದಂತೆಯೇ ನಡೆಯತೊಡಗಿದಾಗ ಗಾಂಧೀಜಿಯವರಿಗೆ ತಮ್ಮ ‘ಅಖಂಡ-ಭಾರತ’ ಸೂತ್ರದಿಂದ ಹಿಂದೆಗೆಯದೇ ಬೇರೇ ದಾರಿಯೇ ಇರಲಿಲ್ಲ.

ಹೀಗೆಲ್ಲ ಆಗಿ ಅಖಂಡ ಭಾರತ ವಿಭಜನೆಯಾಗಿ ಭಾರತ – ಪಾಕಿಸ್ತಾನ ಎಂದು ಎರಡು ಹೋಳಾದಾಗ ಗಾಂಧೀಜಿಯವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ಈ ರೀತಿಯಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವೇ ಅವರು ರಾಜಕೀಯದಿಂದ ನಿವೃತ್ತಿ ಘೋಷಿಸಿದರು. ಭಾರತದ ಸ್ವಾತಂತ್ರ್ಯ ಅವರ ಗುರಿಯಾಗಿತ್ತೇ ಹೊರತು, ಅವರ ರಾಜಕೀಯ ಅಸ್ತಿತ್ತ್ವ ಅಲ್ಲ.

ಅವರ ದೂರದರ್ಶಿತ ರಾಜಕೀಯ ನೀತಿಗಳು,ಭವಿಷ್ಯ ಭಾರತದ ಕಲ್ಪನೆಗಳು, ಸಮಾನತೆಯ ಕುರಿತಾಗಿನ ಅವರ ಯೋಚನೆಗಳು, ಅಹಿಂಸೆಯ ಮಾರ್ಗಗಳು ಎಲ್ಲದಕ್ಕೂ ಹೆಚ್ಚಾಗಿ ಅವರ ಜೀವನಾಚರಣೆಯಲ್ಲಿನ ಸರಳತೆ – ಇವೆಲ್ಲ ಎಲ್ಲ ಕಾಲಕ್ಕೂ ಸಲ್ಲುವ ಆದರ್ಶಗಳಾಗಿವೆ.

“ಮಹಾತ್ಮಾ ಗಾಂಧೀಜಿ ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವಕ್ಕೂ ಸಲ್ಲುವ ಶ್ರೇಷ್ಠ ವ್ಯಕ್ತಿ”

[ಗಾಂಧೀಜಿಯವರ ಮೇಲಿನ ನನ್ನ ನಂಬಿಕೆಯಿಂದ ಈ ಲೇಖನವನ್ನು ಬರೆದಿದ್ದೇನೆಯೇ ಹೊರತು, ಮತ್ತಾರನ್ನೂ ಖಂಡಿಸಲೆಂದಲ್ಲ. ನಂಬಿಕೆ – ಸತ್ಯಗಳ ನಡುವಿನ ವೈಮನಸ್ಕ ಕ್ಲಿಷ್ಟಕರವಾದದ್ದು]
ಚಿತ್ರ ಕೃಪೆ : metrolic.com

Read more from ಲೇಖನಗಳು
2 ಟಿಪ್ಪಣಿಗಳು Post a comment
  1. SSNK's avatar
    ಆಕ್ಟೋ 4 2012

    2 important episodes on which I want your views:
    1. Mahatma Gandhiji’s reaction to the Moplah carnage – “They are brave and god-fearing people who were fighting for what they consider as religion, and in a manner which they consider as religion”. Reference: B R Ambedkar’s book, Pakistan, page 148,
    2. Mahatma Gandhiji, on Abdul Rashid, the assassin of Swami Shraddananda, A Aryasamaj leader, in the Congress session in Guwahati, 1926 – “I have called Abdul Rashid a brother and I repeat it. I do not even regard him as guilty of Swami’s murder. Guilty indeed are those who excited feeling of hatred against one another”. Reference: History of Congress, page 516, by Pattabhi Sitaramayya, a prominent Congress leader

    You have mentioned that, Mahatma Gandhi didn’t support Bhagat Singh, because Bhagat Singh was following a path which the Gandhi opposed life long and it was difficult for Gandhiji to support it.
    Now, in Moplah carnage, thousands of Hindus were killed. Moplah happened because of the failure of Khilafat and as a reaction Muslims rioted. Bhagat Singh took the path of violence to gain independence and even that looked wrong in the eyes of Gandhiji. But, for him Moplah was not a violence.

    When Abdul Rashid was hanged, Gandhiji moved a condolence motion at the Guwahati session of the Congress on December 25, 1926. Reference: Indian National Congress: A Descriptive Bibliography of India’s Struggle for Freedom, by Jagdish Saran Sharma. Published by S. Chand, 1959. Page 502.
    What Bhagat Singh did is violence and what Abdul Rashid did is non-violence!?

    Don’t you see Hippocratic attitude here?

    Don’t feel bad that I am criticizing Gandhiji here. We should look at truth and based on that we should analyse. If violence is wrong, then we should not look at the person’s religion or caste and then react.

    ಉತ್ತರ
  2. SSNK's avatar
    ಆಕ್ಟೋ 4 2012

    Don’t feel bad that I am criticizing Gandhiji here. We should look at truth and based on that we should analyse. If violence is wrong, then we should not look at the person’s religion or caste and then react.
    But, I see that Gandhiji doesn’t criticize the violence done by Muslims. Can you please explain why?

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments