ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 31, 2013

360

“ಓಲೈಕೆ ಮತ್ತು ತುಷ್ಟೀಕರಣ” ಜಾತ್ಯಾತೀತತೆಯ ಸಂಕೇತಗಳೇ?

‍ನಿಲುಮೆ ಮೂಲಕ

ಮು ಅ ಶ್ರೀರಂಗ ಬೆಂಗಳೂರು

Mindsetಒಂದು ರಾಜಕೀಯ ಧೋರಣೆಗೆ ಕಂಕಣಬದ್ಧವಾದ “ಹೊಸತು”ಎಂಬ ಮಾಸಪತ್ರಿಕೆಯ ಜುಲೈ ೨೦೧೩ರ ಸಂಚಿಕೆಯಲ್ಲಿ “ಆಧುನಿಕೋತ್ತರವಾದವೂ ಸಿ. ಎಸ್. ಎಲ್. ಸಿ. ಚಿಂತನಾಕ್ರಮವೂ”ಎಂಬ ಲೇಖನವನ್ನು ಬೆಂಗಳೂರಿನ ಕೆ. ಪ್ರಕಾಶ್ ಎಂಬುವವರು ಬರೆದಿದ್ದಾರೆ. ೫ ಪುಟಗಳಷ್ಟು ವಿಸ್ತಾರವಾದ ಆ ಲೇಖನದ ೧೬ ಪ್ಯಾರಾಗಳಲ್ಲಿ ಸುಮಾರು ೧೫ ಜನ ಬುದ್ಧಿಜೀವಿಗಳ,ಚಿಂತಕರ,ಉದ್ದುದ್ದದ ವಾಕ್ಯಗಳನ್ನು(ಉದ್ಧರಣೆಗಳು)ಪ್ರಕಾಶ್ ಅವರು ತಮ್ಮ ಲೇಖನಕ್ಕೆ “ಬಲ”ಬರಲಿ ಎಂದು ಉಪಯೋಗಿಸಿಕೊಂಡಿದ್ದಾರೆ. ಆ ದೊಡ್ಡ ದೊಡ್ಡ ವಾಕ್ಯಗಳ ನಡುವೆ “ಫಿಲ್ಲರ್”ತರಹ ತಮ್ಮ ನಾಲ್ಕೈದು ಸಾಲುಗಳನ್ನು ಸೇರಿಸಿದ್ದಾರೆ. ಆ “ಫಿಲ್ಲರ್”ಗಳ ಮುಖ್ಯ ಉದ್ದೇಶ ಕುವೆಂಪು ವಿ. ವಿ.ಯಲ್ಲಿನ ಸಿ ಎಸ್ ಎಲ್ ಸಿ ಯನ್ನು ಖಂಡಿಸುವುದಷ್ಟೇ ಆಗಿದೆ.

“ಮಡೆ ಸ್ನಾನ”ದಿಂದ ಪ್ರಾರಂಭವಾಗುವ ಈ ಲೇಖನ ಕೊನೆಗೆ ಬಂದು ನಿಲ್ಲುವುದು  “ವಚನಗಳು vs ಜಾತಿ ವ್ಯವಸ್ಥೆ”ಬಗ್ಗೆ  “ಪ್ರಜಾವಾಣಿ”ಪತ್ರಿಕೆಯಲ್ಲಿ ಸುಮಾರು ಮೂರು ತಿಂಗಳಿನಷ್ಟು ಕಾಲ ನಡೆದ ವಾದ-ಪ್ರತಿವಾದದ “ಅನುಭವ ಮಂಟಪದಲ್ಲಿ”. ಪ್ರಕಾಶ್ ಅವರು ತುಂಬಾ ಆರಾಧಿಸುವ ಪ್ರೊ। ಐಜಾಜ್ ಅಹ್ಮದ್ ಅವರೇ “ಆಧುನಿಕೋತ್ತರವಾದವು ಹಲವು ವಿಭಿನ್ನ ಎಳೆಗಳಿಂದ ರಚಿತವಾಗಿದ್ದು ಅದನ್ನು ಒಂದು ಸುಸಂಬದ್ಧ ಚಿಂತನೆಯಾಗಿ ಮಂಡಿಸುವುದು ಕಷ್ಟ ಎಂದು ಎಚ್ಚರಿಸುತ್ತಲೇ ಅದರ ಪ್ರಮುಖ ಲಕ್ಷಣಗಳನ್ನು ಗುರುತಿಸುತ್ತಾರಂತೆ”(ಹೊಸತು ಜುಲೈ ೨೦೧೩ ಪುಟ ೩೦). ಸಿ ಎಸ್ ಎಲ್ ಸಿ ಯದೂ ಆ ಹಲವು ಹಾದಿಗಳಲ್ಲಿ ಒಂದು ಎಳೆ ಎಂದು  ಪ್ರಕಾಶ್ ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲ.

ಪ್ರಕಾಶ್ ಅವರು ದೀರ್ಘವಾಗಿ ಉದ್ಧರಿಸಿರುವ ಬುದ್ಧಿಜೀವಿಗಳ, ಚಿಂತಕರ, ಎಲ್ಲಾ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸುವುದು ನನ್ನ ಉದ್ದೇಶವಲ್ಲ. ಏಕೆಂದರೆ ಅಂತಹ ಹತ್ತಾರು ಹೇಳಿಕೆಗಳನ್ನು ಪ್ರತಿದಿನ ನಾವೆಲ್ಲರೂ ಕೇಳುತ್ತಿರುತ್ತೇವೆ; ಓದುತ್ತಿರುತ್ತೇವೆ.  ಸದ್ಯದ ಪರಿಸ್ಥಿತಿಯಲ್ಲಿ ನನಗೆ ಯೋಚಿಸುವಂತೆ ಮಾಡಿದ್ದು ಯಾವುದೆಂದರೆ ಇತಿಹಾಸಕಾರ ಗ್ಯಾನೇಂದ್ರ ಪಾಂಡೆ ಅವರು  ಹೇಳಿರುವರೆನ್ನಲಾದ “ಜಾತ್ಯತೀತೆಯ ಪರಂಪರೆಯನ್ನು ಸೃಷ್ಟಿಸಲು ನಡೆಸಿದ ಪ್ರಯತ್ನಕ್ಕೆ ಪ್ರತಿಕ್ರಿಯೆಯಾಗಿ ಕೋಮುವಾದ ಹುಟ್ಟಿತು”ಎಂಬ ಅಭಿಪ್ರಾಯ.(ಅದೇ ಪುಟ ೨೯).. ಇದನ್ನು ಪ್ರಕಾಶ್ ಅವರು ವಿತಂಡವಾದ ಎಂದು ಟೀಕಿಸಿ ಕೈ ತೊಳೆದುಕೊಂಡಿದ್ದಾರೆ. (ಅದೇ ಪುಟ ೩೦). ಆ ವಿತಂಡವಾದಕ್ಕೆ ಅವರ ಗುರುಗಳಾದ ಐಜಾಜ್ ಅಹ್ಮದ್ ಅವರೇ ವಿವರವಾದ ಉತ್ತರ ನೀಡಿದ್ದಾರೆ. ಹಾಗಾಗಿ ತಾನು ಏನೂ ಹೇಳಲು ಹೋಗುವುದಿಲ್ಲ ಎಂದು ಪಲಾಯನವಾದಕ್ಕೆ ಶರಣಾಗಿದ್ದಾರೆ. ಪ್ರಕಾಶ್ ಹೇಳುವುದು ಬೇಡ, ಅವರ ಗುರುಗಳು ಏನು ಹೇಳಿದ್ದಾರೆ ಎಂಬುದನ್ನಾದರೂ ಚುಟುಕಾಗಿ ಹೇಳಬಹುದಿತ್ತು. ಇನ್ನೊಂದು ಉದ್ಧರಣೆ ಜಾಸ್ತಿ ಆಗುತ್ತಿತ್ತಷ್ಟೇ. ಅಥವಾ ಅಹ್ಮದ್ ಅವರ ಯಾವ ಪುಸ್ತಕದಲ್ಲಿ /ಲೇಖನದಲ್ಲಿ ಆ ವಿವರವಾದ ಉತ್ತರಗಳಿವೆ ಎಂಬ ಮಾಹಿತಿಯನ್ನಾದರೂ ನೀಡಬಹುದಿತ್ತು. ಅದನ್ನೂ ಸಹ ನೀಡಿಲ್ಲ.

ಭಾರತದಲ್ಲಿ ಇಂದು ಪ್ರಮುಖವಾಗಿರುವುದು ಹಿಂದು,ಮುಸ್ಲಿಂ,ಮತ್ತು ಕ್ರೈಸ್ತ ಧರ್ಮ/ಮತಗಳಿಗೆ ಸೇರಿದವರು;ಜನ ಸಂಖ್ಯೆಯ ದೃಷ್ಟಿಯಿಂದ ಮತ್ತು ಮುಖ್ಯವಾಗಿ “ವೋಟಿನ” ದೃಷ್ಟಿಯಿಂದ! ಇವರಲ್ಲದೆ ಇತರೆ ಧರ್ಮ/ಮತಗಳಿಗೂ ಸೇರಿದವರಿದ್ದಾರೆ. ಅದನ್ನು ನಾನು ಮರೆತಿಲ್ಲ. ಆದರೆ ನಮ್ಮ  ಕೇಂದ್ರ ಸರ್ಕಾರದ ರಾಜಕೀಯದ ದೃಷ್ಟಿಯಿಂದ ಅವರು kingmakerಗಳಲ್ಲ. ಈಗ ಈ ಕೆಳಕಂಡ ಒಂದು ತ್ರಿಭುಜವನ್ನು ಗಮನಿಸಿ.

tribhuja

ಈ ತ್ರಿಭುಜದ (triangle) ಮೂರು ಭುಜಗಳನ್ನು(lines) ಮೇಲೆ ಹೇಳಿದ ಮೂರು ಧರ್ಮಗಳು/ಮತಗಳು ” ಎಂದು ಭಾವಿಸೋಣ. ಈ ತ್ರಿಭುಜದ ಮಧ್ಯದಲ್ಲಿ ನಮ್ಮನ್ನಾಳುವ ಸರ್ಕಾರವಿದೆ.ಆ ಮೂರು ಭುಜಗಳನ್ನು(lines} “ಅವರವರ ಭಾವಕ್ಕೆ ಅವರವರ ಭಕುತಿಗೆ”ತಕ್ಕಂತೆ ಹಿಂದೂ/ಮುಸ್ಲಿಂ/ಕ್ರೈಸ್ತ  ಎಂದು ಯಾವ ಜಾಗದಲ್ಲಿ ಬೇಕಾದರೂ ಕಲ್ಪಿಸಿಕೊಳ್ಳಬಹುದು. ಏನೂ ವ್ಯತ್ಯಾಸವಾಗುವುದಿಲ್ಲ. ಈ ಮೂರು ಧರ್ಮಗಲ್ಲಿ ನಮ್ಮ ಬುದ್ಧಿಜೀವಿಗಳ/ಚಿಂತಕರ/ಸೆಕ್ಯುಲರಿಸ್ಟರ/ಪ್ರಗತಿಪರರ ತಲೆ ತಿನ್ನುತ್ತಿರುವುದು ಹಿಂದು ಧರ್ಮ.ಕಾರಣ–ಜಾತಿ ವ್ಯವಸ್ಥೆ.

ಈ ಹಿಂದು ಧರ್ಮವನ್ನು ಅವರೆಲ್ಲರೂ ಸೇರಿ ಪೂರ್ತಿ ನಿರ್ನಾಮ ಮಾಡುತ್ತಾರೆಂದು ಭಾವಿಸೋಣ. ಆಗ ಸಹಜವಾಗಿ ಅವರು ಇಸ್ಲಾಂ/ಕ್ರೈಸ್ತ ಧರ್ಮಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗಾದಾಗ ಮೂಲ ಧರ್ಮೀಯರು ಮತ್ತು ಆ ಧರ್ಮಕ್ಕೆ ವಲಸೆ(converted) ಬಂದವರು “ಭಾವೈಕ್ಯತೆ”ಯಿಂದ “ನಾವೆಲ್ಲರೂ ಒಂದೇ” ಎಂಬ “ವಿಶ್ವಮಾನವತೆ”ಯ ಭಾವನೆಯಲ್ಲಿ ಬಾಳಬಲ್ಲರೆ? ಯಾವ ಧರ್ಮದವರೆ ಆಗಲಿ ಬೇರೊಂದು ಧರ್ಮಕ್ಕೆ convert ಆದಾಗ ಅವರು second class ಸಿಟಿಜನ್ಸ್ ಆಗೇ ಉಳಿಯುತ್ತಾರೆಯೇ ಹೊರತು “ಮುಖ್ಯವಾಹಿನಿಗೆ”ಸೇರಲಾರರು. ಇದು ಇತರೆ ಧರ್ಮೀಯರು ಹಿಂದು ಧರ್ಮಕ್ಕೆ ಬಂದರೂ ಆಗುವಂತಹುದೆ.ಅದರಲ್ಲಿ ಅನುಮಾನವಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಪ್ರತಿನಿತ್ಯ ಆಂತರಿಕ ಗಲಭೆಗಳಾದರೆ ಅದರ ನಿಯಂತ್ರಣಕ್ಕೆ ಸಹಜವಾಗಿ ಪೋಲಿಸ್/ಸೈನ್ಯದ ಪ್ರವೇಶವಾಗಲೇ ಬೇಕಾಗುತ್ತದೆ. ದಿನವೂ ಪೋಲಿಸ್/ಸೈನ್ಯದ ರಾಜ್ ನಿರ್ಮಾಣವಾದರೆ ಅದು ಜಾತ್ಯಾತೀತ/ಪ್ರಜಾಪ್ರಭುತ್ವ ಸರ್ಕಾರದ ಲಕ್ಷಣವಂತೂ ಆಗಲಾರದು. ಕ್ರಮೇಣ ನಾವುಗಳೂ ಸಹ ನಮ್ಮ  ನೆರೆಹೊರೆಯ ದೇಶಗಳ ರೀತಿ ಆಗಿ ಹೋಗುತ್ತೇವೆ. ಸರ್ಕಾರ ಜನರಲ್ಲಿ ಜಾತಿ ಪದ್ಧತಿ,ಮೂಢನಂಬಿಕೆ ಯಾವುದೇ ಧರ್ಮದ ಹೆಸರಿನಲ್ಲಿ ನಡೆಸುವ ಹುಚ್ಚಾಟ ಇತ್ಯಾದಿಗಳಿಗೆ ನಿಯಂತ್ರಣ ಹಾಕಬೇಕು. ಇದನ್ನು ಯಾರೂ ತಪ್ಪು ಅನ್ನುವುದಿಲ್ಲ. ಅದೇ ರೀತಿ ತನ್ನ ಸ್ವಾರ್ಥಕ್ಕೋಸ್ಕರ ಯಾವುದೇ ಪಕ್ಷವಾಗಲಿ ವೋಟಿಗಾಗಿ ಓಲೈಕೆ ನೀತಿಯನ್ನೂ ಅನುಸರಿಸಬಾರದು. ಈ ಓಲೈಕೆ ನಿಜವಾದ ಜಾತ್ಯಾತೀತತೆಯ ಲಕ್ಷಣವಂತೂ ಅಲ್ಲ. ಅದು pseudo  secularism ಆಗಬಹುದಷ್ಟೆ. ಆಗ ಈ ಓಲೈಕೆ ನೀತಿಯನ್ನು ವಿರೋಧಿಸುವಂತಹ ಜನಗಳನ್ನೇ ಆಗಲಿ ಅಥವಾ ಯಾವುದೇ ಪಕ್ಷವನ್ನಾಗಲಿ ಟೀಕಿಸುವ ಯಾವ ನೈತಿಕ ಅಧಿಕಾರವೂ ಸರ್ಕಾರಕ್ಕೆ/ಇತರೆ ಪಕ್ಷದವರಿಗೆ ಇರುವುದಿಲ್ಲ.

ಈ ಓಲೈಕೆ ಮಿತಿಮೀರಿದಾಗ ಸಹಜವಾಗಿ ಇತರೆ ಜಾತಿ/ಧರ್ಮಗಳ ಧ್ರುವೀಕರಣ ಪ್ರಾರಂಭವಾಗುತ್ತದೆ. ಇದು ಅಷ್ಟಕ್ಕೇ ನಿಂತರೆ ಸರ್ಕಾರಕ್ಕೆ,ಅದರ ರೀತಿ-ನೀತಿಗಳಿಗೆ ಎಚ್ಚರಿಕೆಯ ಗಂಟೆ ಸದ್ದಾಗಬಹುದು. ಇಲ್ಲವಾದರೆ ಆ ಧ್ರುವೀಕರಣ ಅಪಾಯದ ಗೆರೆ ದಾಟಬಹುದು. ಇದರ ಅರಿವು ನಮ್ಮನಾಳುವ ನಾಯಕರುಗಳಿಗೆ ಮೊದಲು ಆಗಬೇಕು. ಜತೆಗೆ ಇತ್ತೀಚೆಗೆ “ಸುದ್ದಿಜೀವಿಗಳು”ಎಂಬ ಅಪಖ್ಯಾತಿಗೆ ಒಳಗಾಗುತ್ತಿರುವ “ಬುದ್ಧಿಜೀವಿಗಳಿಗೆ,ಕೆಲವು ಸಾಹಿತಿಗಳಿಗೆ,ಚಿಂತಕರಿಗೆ” ಜ್ನಾನೋದಯವಾಗಬೇಕು. ಆಡಳಿತದಲ್ಲಿರುವವರ ಸಖ್ಯದಿಂದ ದೊರೆಯಬಹುದಾದಂತಹ ಎರಡು ಮೂರು ವರ್ಷಗಳ “ಸರ್ಕಾರಿ ಸವಲತ್ತು”ಗಳಿಗೆ ಆಸೆಪಟ್ಟು ಪತ್ರಿಕೆಗಳಲ್ಲಿ,ಟಿವಿಗಳಲ್ಲಿ ಕೊಡುತ್ತಿರುವ ನಿರಂತರ “ಜನತಾ ದರ್ಶನ”ವನ್ನು ಆದಷ್ಟೂ ಕಡಿಮೆ ಮಾಡಿಕೊಂಡರೆ ಒಳ್ಳೆಯದಾದೀತು.

ಭಾರತದ ಪರಿಸ್ಥಿತಿಗೆ, ರಾಜಕೀಯಕ್ಕೆ ‘ಜಾತ್ಯಾತೀತತೆ”ಎಂಬುದು ಒಂದು ಉನ್ನತ, ಉತ್ತಮ ದೃಷ್ಟಿಕೋನ. ಇದರಲ್ಲಿ ಸಂಶಯವಿಲ್ಲ. ಈ ಒಂದು ಆಧಾರದ ಮೇಲೆ ನಮ್ಮ ಭಾರತ ೧೯೪೭ರಿಂದ ಇವತ್ತಿನವರೆಗೆ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬಂದಿದೆ. ಇನ್ನು  ಮುಂದೆಯೂ ಪ್ರಜಾಪ್ರಭುತ್ವದ ರಾಷ್ಟ್ರವಾಗಿಯೇ ಇರಬಲ್ಲ ಸಹಿಷ್ಣುತೆ, ನೈತಿಕ ಶಕ್ತಿ ನಮ್ಮಲ್ಲಿದೆ. ಇದರ ಬಗ್ಗೆ ಅನುಮಾನಾವಿಲ್ಲ. ಆದರೆ ಇದರ ಜತೆಜತೆಗೆ ‘ಓಲೈಕೆ’, “ತುಷ್ಟೀಕರಣ”ವನ್ನೇ ಜಾತ್ಯಾತೀತತೆಯ ಸಂಕೇತ ಎಂದು ನಂಬಿಸುವ, ಬಿಂಬಿಸುವ ಕ್ರಿಯೆಗಳೂ ನಮ್ಮ ರಾಜ್ಯ/ಕೇಂದ್ರ ಸರ್ಕಾರಗಳಿಂದ ಆಗಾಗ ನಡೆಯುತ್ತಿರುತ್ತದೆ. ಇದಕ್ಕೆ ನಮ್ಮ ಬುದ್ಧಿಜೀವಿಗಳಿಂದ,ರಾಜಕೀಯ ವಿಶ್ಲೇಷಣಾಕಾರರಿಂದ ಹಿಮ್ಮೇಳವೂ ಸೇರಿಕೊಂಡಿದೆ.

ವೈಡ್ ಬಾಲ್ :- ಧಾರವಾಡದ ಲೈನ್ ಬಜಾರನಾಗ   ಫೇಡ ತಿನ್ನುತ್ತಾ, ಅತ್ತಿತ್ತಾ ನೋಡುತ್ತಾ, ಹವಾ ಸೇವನೆ ಮಾಡುತ್ತಾ ಗೆಳೆಯರಿಬ್ಬರು ಹೊಂಟಿದ್ರು.

“ಏ ಗೊತ್ತಾತೇನೋ ವಿಷ್ಯ ಈ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ಖುರ್ಚಿಗಳಿಗೆ ಆಗ್ಲೇ ಐವತ್ತು ಅರ್ಜಿ ಬಂದಾವಂತ. ನೀ ಏನೇ ಅನ್ನು ಅರ್ಜಿ ಹಾಕೊಂಡು ಆ ಕುರ್ಚಿ ಮೇಲಾ ಕೂಡೋ ಹಂಗೆ ಮಾಡಿ ಆ ಕುರ್ಚಿಗಳಿಗಿದ್ದ ಮಾನಾ ಮರ್ವಾದೆ ಎಲ್ಲಾ ಕಳೀಲಿಕ್ಕೆ ಹೊಂಟವ್ರೆ”

“ಅದ್ಕೆ ನಿಂಗೆ ಸರ್ಕಾರದ ಲೋಕಾ ರೂಢಿ ಗೊತ್ತಿಲ್ಲ ಅನ್ನೋದು. ಎಲ್ಲಾ ವಿವರ ಇಟ್ಕೊಂಡು select ಮಾಡಿದ್ರ ಮುಂದ ಅನುಕೂಲ ಆಗ್ತದ. ಅದಿರ್ಲಿ ನಮ್ಮ ಈ ಜಿಲ್ಲೆದಾಗ ಒಬ್ರು ಬಂಡಾಯ ಸಾಹಿತಿ ಇದ್ರಲ್ಲ ಅವ್ರು ಆಗ್ಲೇ ‘ಟವಲ್’ ಹಾಕಿ ಕುಂತವರಂತೆ ”

“ಅರ್ಜಿ ಜತೆ ಟವಲ್ ಯಾಕಲೇ ಹಾಕಬೇಕ ?”

“ಅದು ಬೆಂಗಳೂರ್ ಕಡೆ ಮಾತಲೇ ಮಂಗ್ಯ. ಟವಲ್ ಅಂದ್ರ ಒಂತರ ಶಿಫಾರಸ್ ಮಾಡ್ಸಂಗೆ. ತಿಳೀತಾ? ನಡಿ ಮನಿ ಕಡಿ ಹೋಗೂಣು. ಮಹಾಪರ್ವ ಬರೋ ಟೈಮ್ ಆತು ”

ಚಿತ್ರ ಕೃಪೆ : qablog.practitest.com

360 ಟಿಪ್ಪಣಿಗಳು Post a comment
  1. ಆಕ್ಟೋ 31 2013

    ಭಾರತ ಏಕೆ ಜಾತ್ಯಾತೀತವಾಗಿದೆ, ನಮ್ಮದೇ ಭಾಗವಾಗಿದ್ದ ಪಾಕಿಸ್ತಾನ-ಬಾಂಗ್ಲಾದೇಶಗಳು ಏಕೆ ಜಾತ್ಯಾತೀತ ರಾಷ್ಟ್ರವಾಗಲಿಲ್ಲ ಎನ್ನುವ ವಿಶ್ಲೇಷಣೆಯನ್ನು ಜಾತ್ಯಾತೀತವಾದದ ಪುಂಗಿಯನ್ನೂದುವವರು ನಡೆಸುವುದು ಅತ್ಯಗತ್ಯ.
    ಭಾರತವು ೧೯೪೭ಕ್ಕೆ ಪೂರ್ವದಲ್ಲೂ ಜಾತ್ಯಾತೀತವೇ ಆಗಿತ್ತು. ಭಾರತದ ಸಂವಿಧಾನದಲ್ಲಿ “ಜಾತ್ಯಾತೀತ” ಎಂಬ ಪದವನ್ನು ಬರೆದಿದ್ದರಿಂದ ಅದು ಜಾತ್ಯಾತೀತವಾಗಿಲ್ಲ. ಹಾಗೆ ನೋಡಿದರೆ, ಆ ಪದವನ್ನು ಸಂವಿಧಾನಕ್ಕೆ ಸೇರಿಸಿದ್ದು ೧೯೭೧ರಲ್ಲಿ. ಆದರೆ, ಅದನ್ನು ಸೇರಿಸಿದವರು, ಆ ಪದದ ಅರ್ಥವನ್ನೇ ತಿಳಿಸಿಲ್ಲ. ನಮ್ಮದು ಗಾಂಧೀಜಿಯವರ ಜಾತ್ಯಾತೀತವೋ, ಇಲ್ಲವೇ ನೆಹರೂ ಅವರ ಜಾತ್ಯಾತೀತವೋ?
    ಜಾತ್ಯಾತೀತ ಅನ್ನುವುದು ಒಂದೇ ಪದವಾಗಿದ್ದರೂ, ಗಾಂಧೀಜಿ ಮತ್ತು ನೆಹರೂ ಅದರ ಕುರಿತಾಗಿ ಭಿನ್ನವಾಗಿ ವಿಮರ್ಶಿಸಿದ್ದರೆನ್ನುವುದು ಎಷ್ಟು ಜನರಿಗೆ ತಿಳಿದಿದೆ?
    ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರೆ, ಆಗಲೂ ಭಾರತವು ಜಾತ್ಯಾತೀತವಾಗಿರುತ್ತದೆಯೇ?
    ಆಗಿರುತ್ತದೆ ಎಂದಾದರೆ, ಪಾಕಿಸ್ತಾನ-ಬಾಂಗ್ಲಾದೇಶಗಳು ಏಕೆ ಜಾತ್ಯಾತೀತವಾಗಿಲ್ಲ ಮತ್ತು ಅಲ್ಲಿನ ಪರಿಸ್ಥಿತಿಯೇ ಇಲ್ಲಿ ಪುನರಾವರ್ತನೆಯಾಗುವುದಿಲ್ಲ ಎಂದು ಹೇಗೆ ಹೇಳುವಿರಿ?

    ಉತ್ತರ
  2. krishnappa
    ಆಕ್ಟೋ 31 2013

    ಅಲ್ಪಸಂಖ್ಯಾತರ ತುಷ್ಟೀಕರಣದ ಮೂಲಕ ಅಥವಾ ಬಹುಸಂಖ್ಯಾತರ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟಿ ವೋಟ್ ಬ್ಯಾಂಕ್ ರೂಪಿಸುವುದು ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವೋ ಅದೇ ರೀತಿ ಬಹುಸಂಖ್ಯಾತರ ತುಷ್ಟೀಕರಣದ ಮೂಲಕ ಅಥವಾ ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರನ್ನು ಎತ್ತಿ ಕಟ್ಟುವ ಮೂಲಕ ಬಹುಸಂಖ್ಯಾತರ ವೋಟ್ ಬ್ಯಾಂಕ್ ರೂಪಿಸುವುದು ಕೂಡ ಪ್ರಜಾಪ್ರಭುತ್ವಕ್ಕೆ ಮಾರಕ. ಇವೆರಡನ್ನೂ ವಿರೋಧಿಸಬೇಕಾಗಿದೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿ ರಾಮ ಮಂದಿರ ನಿರ್ಮಾಣ ಮಾಡುವುದು ಬಹುಸಂಖ್ಯಾತರ ಓಲೈಕೆಯ ರಾಜಕೀಯವಲ್ಲದೆ ಮತ್ತಿನ್ನೇನು? ಗೋಹತ್ಯೆ ನಿಷೇಧ ವಿಧೇಯಕ ತರುವುದು ಬಹುಸಂಖ್ಯಾತರ ಓಲೈಕೆ ರಾಜಕೀಯದ ಒಂದು ಅಂಗವೇ ಆಗಿದೆ. ಬಾಬಾ ಬುಡನ್ ಗಿರಿಯಲ್ಲಿ ದತ್ತ ಮಾಲೆ ಅಭಿಯಾನ ಮಾಡುವುದು ಬಹುಸಂಖ್ಯಾತರ ವೋಟ್ ಬ್ಯಾಂಕ್ ರಾಜಕೀಯಕ್ಕೆ ಮತ್ತೊಂದು ಉದಾಹರಣೆ. ಅಲ್ಪಸಂಖ್ಯಾತರ ಹಾಗೂ ಬಹುಸಂಖ್ಯಾತರ ತುಷ್ಟೀಕರಣ ರಾಜಕೀಯ ನಡೆಸದೆ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ರಾಜಕೀಯ ಪಕ್ಷಗಳನ್ನು ಬೆಳೆಸುವುದು ಇಂದಿನ ಹಾಗೂ ಮುಂದಿನ ಅಗತ್ಯ.

    ಉತ್ತರ
    • ಆಕ್ಟೋ 31 2013

      > ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿ ರಾಮ ಮಂದಿರ ನಿರ್ಮಾಣ ಮಾಡುವುದು ಬಹುಸಂಖ್ಯಾತರ ಓಲೈಕೆಯ
      > ರಾಜಕೀಯವಲ್ಲದೆ ಮತ್ತಿನ್ನೇನು?
      ಇದು ಬಹುಸಂಖ್ಯಾತರ ಓಲೈಕೆಯ ರಾಜಕೀಯ ಹೇಗಾಗುತ್ತದೆ, ವಿವರಿಸುವಿರಾ?

      ಉತ್ತರ
      • krishnappa
        ನವೆಂ 1 2013

        ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನೆಲಸಮ ಮಾಡಿ ಅಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದು ಜನರ ಮೂಲಭೂತ ಅವಶ್ಯಕತೆ ಆಗಿರಲಿಲ್ಲ. ಹೀಗಾಗಿ ಇಂಥ ಭಾವನಾತ್ಮಕ ವಿಷಯವನ್ನು ದೇಶಾದ್ಯಂತ ತೆಗೆದುಕೊಂಡು ಹೋಗಿ ಜನರನ್ನು ಕೆರಳಿಸಿದ್ದು ಹಿಂದೂ ವೋಟ್ ಬ್ಯಾಂಕ್ ಸೃಷ್ಟಿಸಲು ಅಲ್ಲದೆ ಮತ್ತೇನಕ್ಕೂ ಅಲ್ಲ. ನಿಜವಾದ ದೇಶಭಕ್ತರು ಇಂಥ ದೇಶ ಹಿತಕ್ಕೆ ಮಾರಕವಾದ ಕೆಲಸವನ್ನು ಮಾಡುವುದಿಲ್ಲ.

        ಉತ್ತರ
        • Nagshetty Shetkar
          ನವೆಂ 1 2013

          Krishnappa Sir, you have hit the nail Sir! This is exactly what I wanted to do. What was the need to destruct a Masjid or construct a temple in Ayodhya? The need of the day was to educate people about ishta linga form of worshiping which doesn’t require any temple to be constructed or a Masjid to be destructed.

          ಉತ್ತರ
          • ವಿಜಯ್ ಪೈ
            ನವೆಂ 1 2013

            [you have hit the nail Sir! This is exactly what I wanted to do.]
            ಗುರುಗಳೆ..ನೀವ್ಯಾತ್ತಾದ್ರೂ ಮೊಳೆ ಹೊಡೆಯೋದನ್ನ ನಿಲ್ಲಿಸಿದ್ದೀರ? ‘ಕಾಯಕ’ಯೋಗಿಗಳು ಕಾಯಕ ಬಿಟ್ಟು ಇರಲಿಕ್ಕಾಗುತ್ತಾ?:)

            ಉತ್ತರ
            • Nagshetty Shetkar
              ನವೆಂ 1 2013
              • Nagshetty Shetkar
                ನವೆಂ 1 2013

                Mr. Vijay, talk sense and to the point. Tell us What was the need to destruct a Masjid or construct a temple in Ayodhya?

                ಉತ್ತರ
                • ವಿಜಯ್ ಪೈ
                  ನವೆಂ 1 2013

                  ಇದನ್ನೇ ಮೊದಲು ನೀವು ಮತ್ತು ನಿಮ್ಮ ‘ಕೃಷ್ಣಪ್ನೊ ‘ರು ಪಾಲಿಸಿ..ಮೊದಲು ಕೇಳಿದ್ದಕ್ಕೆ ಉತ್ತರ ನೀಡಿ..ಆಮೇಲೆ ಪ್ರಶ್ನೆ ಕೇಳಿ!..ಹಾಸ್ಯಾಸ್ಪದವಾಗಿ ವರ್ತಿಸಿ.. ನಿಜವಾದ ಶರಣರ ಮಾನ ಕಳೆಯಬೇಡಿ.

                  ಉತ್ತರ
                  • Nagshetty Shetkar
                    ನವೆಂ 1 2013

                    Mr. Vijay, my question is more fundamental and important than yours. Tell us what is the need for temple construction and what is the justification for masjid destruction? If temple construction was so necessary, why isn’t BJP pursuing it any longer? You may throw dung at Darga Sir and progressive thinkers, but the truth is BJP manipulated temple issue for votebank politics in the 90’s. Today it is manipulating development issue again for votebank politics. NaMo doesn’t even regret the destruction of Babri Masjid and he will not regret the misfortune that his development program will bring for the poor and under privileged sections of our society.

                    ಉತ್ತರ
                    • ನವೆಂ 2 2013

                      > Tell us what is the need for temple construction and
                      > what is the justification for masjid destruction
                      Don’t have any respect for the Judicial system in this country?
                      Even the Supreme Court has given the verdict that, it was not constructed according to the tenets of Holy Quran and hence it cannot be a masjid.
                      So, why do you want to call it a Masjid?

                      And Why do you want to give name of Babar to that building?
                      Who was Babar? How is he related to this country?
                      Why do you expect the people of this country to respect Babar?

                    • ವಿಜಯ್ ಪೈ
                      ನವೆಂ 2 2013

                      [Mr. Vijay, my question is more fundamental and important than yours.]
                      ಹೌದೆ..ಆಗಿರಲೇಬೇಕು..ನಿಮ್ಮ ಬೇಳೆ ಬೇಯುವುದು ಇಂತಹ ‘ಮಹತ್ವದ’ ವಿಷಯಗಳಲ್ಲೇ!.

                      [Tell us what is the need for temple construction and what is the justification for masjid destruction?]
                      ನಮಾಜು ಮಾಡದ ಮಸೀದಿ ಮಹತ್ವ ಏನು ಎಂದು ನಿಮ್ಮ ಗುರುಗಳಿಗೆ ಕೇಳಿ ನೋಡಿ..ಅದು ಮಸೀದಿಯಲ್ಲ ಕಟ್ಟಡ ಅಷ್ಟೆ. ದೇವಾಲಯ ಅಲ್ಲಿ ಮೊದಲಿನಿಂದ ಇದ್ದದ್ದು ಮತ್ತು ಇರಬೇಕಾದದ್ದು. ನಿಮ್ಮ ಕೃಷ್ಣಪ್ಪನವರು ಕೆಳಗೆ ಒಂದು ಪ್ರತಿಕ್ರಿಯೆಯಲ್ಲಿ ಸಹೋದರಭಾವದ ಪ್ರವಚನ ಕೊಟ್ಟಿದ್ದಾರೆ ಓದಿ. ಅದನ್ನು ಇಲ್ಲಿ ಹೊಂದಿಸಿ ನೋಡಿ..ಯಾರು ಯಾರ ಜೊತೆ ಸಹೋದರ ಭಾವ ತೋರಿಸಬೇಕಿತ್ತು ಎಂದು ಗೊತ್ತಾಗಬಹುದು.

                      [If temple construction was so necessary, why isn’t BJP pursuing it any longer?][Today it is manipulating development issue again for votebank politics]
                      ಒಂದೇ ವಿಷಯಕ್ಕೆ, ಒಂದೇ ಸಿದ್ಧಾಂತಕ್ಕೆ ಅಂಟಿಕೊಂಡು ನಿಂತ ನೀರಾಗಲೂ ಬಿ.ಜೆ.ಪಿ ಯೇನು ಕಮ್ಯುನಿಷ್ಟ ಪಕ್ಷವೆ? ಪ್ರಯಾರಿಟಿ ಅನ್ನೊದು ಮನುಷ್ಯರಿಗೆ ಇರುವಂತೆ, ಪಕ್ಷಕ್ಕೂ ಇರುತ್ತೆ.

                      [ You may throw dung at Darga Sir and progressive thinkers, but the truth is BJP manipulated temple issue for votebank politics in the 90′s. Today it is manipulating development issue again for votebank politics. ]
                      ಯಾಕೆ ಮಾಡಬಾರದು? ಏನು ಉಳಿದ ಪಕ್ಷದವರು ಸಜ್ಜನ ಸಾಧುಗಳೆ? ನಿಮ್ಮ ಈ ಪ್ರೊಗ್ರೆಸ್ಸಿವ್ ಥಿಂಕರ್ಸ್ ಏನು ಯಾವತ್ತು ಒಳ್ಳೆಯವರ ಪರವಾಗಿಯೇ ಇದ್ದರೆ?

                      [NaMo doesn’t even regret the destruction of Babri Masjid and he will not regret the misfortune that his development program will bring for the poor and under privileged sections of our society.]
                      ಅದೇ ಕ್ಷಮಾಪಣಾ ವರ್ಷ ಅಂತ ಒಂದು ಇಡಿ ವರ್ಷವನ್ನು ಇಡೋಣ.. ನಿಮ್ಮ ಪಟ್ಟಿ ಪ್ರಕಾರ ಕ್ಷಮೆ ಕೇಳಿಸೋಣ!

    • ವಿಜಯ್ ಪೈ
      ಆಕ್ಟೋ 31 2013

      [ಅಲ್ಪಸಂಖ್ಯಾತರ ಹಾಗೂ ಬಹುಸಂಖ್ಯಾತರ ತುಷ್ಟೀಕರಣ ರಾಜಕೀಯ ನಡೆಸದೆ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ರಾಜಕೀಯ ಪಕ್ಷಗಳನ್ನು ಬೆಳೆಸುವುದು ಇಂದಿನ ಹಾಗೂ ಮುಂದಿನ ಅಗತ್ಯ.]
      ೧)ಹೌದೆ?? ಅಂತಹ ರಾಜಕೀಯ ಪಕ್ಷಗಳು ಯಾವುದಿವೆ ಅಂತ ಕೇಳಬಹುದೆ?
      ೨) ಗುಜರಾತಿನಲ್ಲಿ ಈಗ ನಡೆಯುತ್ತಿರುವುದು ಬಹುಸಂಖ್ಯಾತರ ತುಷ್ಟೀಕರಣದ ಆಡಳಿತವೆ? ಹೌದಾದಲ್ಲಿ ಉದಾಹರಣೆ ಕೊಡಬಲ್ಲಿರಾ? (ನಿಮ್ಮ ಹಳೆಯ ಸವೆದು ಹೋದ ಕ್ಯಾಸೆಟ್ ಆದ ಗೋದ್ರಾ ಬಿಟ್ಟು..ಬೇಕಾದರೆ ಗೋದ್ರಾ ಬಗ್ಗೆಯೆ ಬೇರೆ ಚರ್ಚೆ ಮಾಡಬಹುದು)

      ಉತ್ತರ
      • krishnappa
        ನವೆಂ 1 2013

        ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತರ ತುಷ್ಟೀಕರಣ ಮಾಡದೆ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ರಾಜಕೀಯ ಪಕ್ಷಗಳು ಇವೆ. ಲೋಕಸತ್ತಾ, ಆಮ್ ಆದ್ಮಿ ಪಕ್ಷಗಳನ್ನು ಹೆಸರಿಸಬಹುದು. ಇವೆರಡೂ ಪಕ್ಷಗಳು ಧಾರ್ಮಿಕ, ಜಾತಿವಾದಿ, ತುಷ್ಟೀಕರಣ ರಾಜಕೀಯ ಮಾಡದೆ ಜನರ ಸಮಸ್ಯೆಗಳನ್ನು ಎತ್ತಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಶ್ರಮಿಸುತ್ತಿವೆ. ಇವುಗಳನ್ನು ವಿದ್ಯಾವಂತರು, ಯುವಜನರು ಬೆಳೆಸಲು ಮುಂದಾಗಬೇಕು. ಇದರಿಂದ ದೇಶಕ್ಕೆ ಒಳಿತಾಗಬಹುದು.

        ಗುಜರಾತಿನಲ್ಲಿ ಬಹುಸಂಖ್ಯಾತರ ರಾಜಕೀಯ ಧ್ರುವೀಕರಣ ಮಾಡಿಯೇ ಮೋದಿ ಗೆದ್ದದ್ದು ಮತ್ತು ಅದಕ್ಕೆ ತೆತ್ತ ಬೆಲೆ ಗುಜರಾತ್ ಗಲಭೆಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

        ಉತ್ತರ
        • ವಿಜಯ್ ಪೈ
          ನವೆಂ 1 2013

          ಹಾಗಾದರೆ ಶ್ರೀಮಾನ ಕೃಷ್ಣಪ್ಪನವರೆ..ಹೋದ ಚುನಾವಣೆಯಲ್ಲಿ ಎಷ್ಟು ಜನ ‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ಗಳು ಲೋಕಸತ್ತಾ ಪಕ್ದದ ಹಿಂದೆ ನಿಂತಿದ್ದರು ಎಂಬುದನ್ನು ತಿಳಿಸುವಿರ? ಅಂತೇಯೇ ಈಗ ಮುಂದೆ ಬರುವ ಚುನಾವಣೆಯಲ್ಲಿ ಲೋಕಸತ್ತಾ, ಆಮ್ ಆದ್ಮಿ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿಸುವಿರಾ? ನೀವೆಲ್ಲ ‘ಪ್ರಗತಿಪರ’ ಚಿಂತಕರು ಸಮಾನಮನಸ್ಕರಾಗಿರುವುದರಿಂದ, ನಿಮಗೆ ಅವರ ಮನಸ್ಸಿನಲ್ಲಿರುವುದು ತಿಳಿದಿರುತ್ತೆ. ನಮಗೂ ಸ್ವಲ್ಪ ತಿಳಿಸಿ..ನಾವು ಸುಧಾರಿಸಲು ಸಹಾಯವಾಗಬಹುದು. ಇನ್ನೊಂಧೆನೆಂದರೆ, ಅಣ್ಣಾ ಚಳುವಳಿಯ ಹೊತ್ತಿಗೆ ಈ ವಾಮಪಂಥೀಯರಿಗೆ ಅಣ್ಣಾ,ಕೇಜ್ರಿವಾಲ್ ಎಲ್ಲ ಅಪಥ್ಯ ಎನಿಸಿದ್ದರು..ಈಗ ಒಮ್ಮೆಂದೊಮ್ಮೆಗೆ ಅವರು ಜನಪರ ಅನಿಸಿರುವುದು ಮೆಚ್ಚಿಕೊಳ್ಳಬೇಕಾಗಿದ್ದೆ!.

          [ಗುಜರಾತಿನಲ್ಲಿ ಬಹುಸಂಖ್ಯಾತರ ರಾಜಕೀಯ ಧ್ರುವೀಕರಣ ಮಾಡಿಯೇ ಮೋದಿ ಗೆದ್ದದ್ದು ಮತ್ತು ಅದಕ್ಕೆ ತೆತ್ತ ಬೆಲೆ ಗುಜರಾತ್ ಗಲಭೆಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.]
          ಇದನ್ನು ಬಿಟ್ಟು ಬೇರೆ ಏನಾದರೂ ಬಂಡವಾಳವಿದೆಯೆ ಮಾತನಾಡಲು? ಇದ್ದರೆ ಚರ್ಚೆ ಮಾಡಬಹುದು.

          ಉತ್ತರ
          • krishnappa
            ನವೆಂ 1 2013

            ಆಮ್ ಆದ್ಮಿ ಪಕ್ಷವು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆಗಳು ಹೇಳುತ್ತಿವೆ. ಯುವಜನಾಂಗ ದೆಹಲಿ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷದ ಪರವಾಗಿ ಉತ್ಸಾಹದಿಂದ ದುಡಿಯುತ್ತಿದ್ದಾರೆ. ಇವರು ಗೆದ್ದರೆ ಅದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೌಲ್ಯಾಧಾರಿತ ರಾಜಕೀಯವನ್ನು ತರಲು ಸಹಾಯವಾಗಲಿದೆ. ಒಂದು ವೇಳೆ ಇವರು ಕಡಿಮೆ ಸೀಟುಗಳನ್ನು ಗೆದ್ದರೂ ಅದು ನೈತಿಕ ಜಯವೇ ಏಕೆಂದರೆ ಅವರು ಜನರಿಂದ ಹಣ ಸಂಗ್ರಹಿಸಿ ಚುನಾವಣೆಗಳನ್ನು ಎದುರಿಸುತ್ತಿದ್ದಾರೆ ಹೊರತು ಉಳಿದ ಪಕ್ಷಗಳಂತೆ ಕಾರ್ಪೊರೇಟ್ ಕಂಪನಿಗಳಿಂದ ಪಡೆದ ಅನೈತಿಕ ಹಣದಿಂದ ಚುನಾವಣಾ ಎದುರಿಸುತ್ತಿಲ್ಲ ಅಥವಾ ಬಿಜೆಪಿಯಂತೆ ಧರ್ಮದ ಹೆಸರಿನಲ್ಲಿ ಜನರನ್ನು ಕೆರಳಿಸಿ ಚುನಾವಣೆ ಗೆಲ್ಲುವ ರಕ್ತಸಿಕ್ತ ಇತಿಹಾಸವನ್ನೂ ಹೊಂದಿಲ್ಲ. ಆಮ್ ಆದ್ಮಿ ಪಕ್ಷವು ಗೆಲ್ಲದಿದ್ದರೆ ಅದು ಜನರ ಸೋಲು ಹೊರತು ಕೈತುಂಬಾ ಸಂಬಳ ತರುತ್ತಿದ್ದ ಹುದ್ದೆ ಬಿಟ್ಟು ದೇಶಕ್ಕಾಗಿ ದುಡಿಯಲು ಬಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಸೋಲು ಅಲ್ಲ.

            ಉತ್ತರ
            • ವಿಜಯ್ ಪೈ
              ನವೆಂ 1 2013

              ಕೃಷ್ಣಪ್ನೋರೆ..
              ಹೆಚ್ಚಾಗಿ ನಿಮ್ಮಲ್ಲಿ ಪ್ರಶ್ನೆಗಳಿಗೆ ನೇರ ಉತ್ತರಗಳೇ ಇರುವುದಿಲ್ಲವೇನೊ..ಬಹುಶಃ ನಿಮ್ಮದು, ನನಗೆ ‘ ಗೊತ್ತಿದ್ದನ್ನು ‘ ಹೇಳುತ್ತೇನೆ, ನೀವು ಕೇಳಿರಿ ಎಂಬ ತತ್ವ.
              ನಾನು ಕೇಳಿದ್ದು ಆಮ್ ಆದ್ಮಿ ಜೊತೆ ಹೊರಟ ಅವರಿವರ ಬಗ್ಗೆ ಅಲ್ಲ..ಸಮಾಜ ಸುಭಧ್ರವಾಗಿ ಉಳಿದಿರುವುದೇ ತಮ್ಮಿಂದ, ತಮ್ಮ ವಿಚಾರಗಳಿಂದ,. ಉಳಿದವರೆಲ್ಲ ವಿಚಾರಹೀನರಾಗಿ ದೇಶವನ್ನು ಹಾಳುಗೆಡುವುತ್ತಿದ್ದಾರೆ/ಹೀನಸ್ಥಿತಿಗೆ ತಳ್ಳುತ್ತಿದ್ದಾರೆ ಎಂದು ಕಂಡ-ಕಂಡಲ್ಲಿ ತಮ್ಮ ವಿಚಾರಧಾರೆಯನ್ನು ಹರಿಬಿಡುತ್ತಿರುವ ‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ಗಳ ಉಪಸ್ಥಿತಿ ಈ ಹೊತ್ತಿನಲ್ಲಿ ಯಾವ ಟೆಂಟಿನಲ್ಲಿದೆ ಎಂದು? ಮತ್ತು ಅಣ್ಣಾ ಚಳುವಳಿಯ ಹೊತ್ತಿಗೆ ಅಪಥ್ಯವಾದವರು ಈಗ ಒಮ್ಮಿಂದೊಮ್ಮೆಗೆ ಪವಿತ್ರವಾಗಿ ಕಾಣಿಸಲು ಹೇಗೆ ಸುರುವಾದರು ಎಂದು?

              ಉತ್ತರ
              • Nagshetty Shetkar
                ನವೆಂ 1 2013

                ಕೃಷ್ಣಪ್ಪ ಅವರು ಬಹಳ ಸಂಯಮದಿಂದಲೇ ನಿಲುಮೆಯ ತಲೆಹಿಡುಕ (troll) ಗಳಿಗೆ ಉತ್ತರ ಕೊಡುತ್ತಾ ಬಂದಿದ್ದಾರೆ. ಅವರ ಉತ್ತರಗಳು ಬಹಳ ವಿವೇಕಪೂರ್ಣವಾಗಿದ್ದು ಅವರ ಅಪಾರ ದೂರದರ್ಶಿತ್ವ ಹಾಗೂ ತಿಳುವಳಿಕೆಯ ಸಂಕೇತವಾಗಿವೆ.

                ಆಂ ಆದಮೀ ಪಕ್ಷ ಅಗ್ನಿಪರೀಕ್ಷೆಯನ್ನೆದುರಿಸಿ ತನ್ನ ಸತ್ವವನ್ನು ಉಳಿಸಿಕೊಂಡಿದೆ. ಆದುದರಿಂದ ಪ್ರಗತಿಪರರು ಆ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಆ ಪಕ್ಷ ಇನ್ನೂ ರಾಷ್ಟ್ರಮಟ್ಟದಲ್ಲಿ ಬಲವಾಗಿಲ್ಲ. ಕರ್ನಾಟಕ ಮೊದಲಾದ ಅನೇಕ ರಾಜ್ಯಗಳಲ್ಲಿ ಅದು ಇನ್ನೂ ನೆಲೆ ಕಾಣಬೇಕಾಗಿದೆ. ಆದುದರಿಂದ ಕೋಮುವಾದಿ ಪಕ್ಷಗಳ ಒಕ್ಕೂಟಕ್ಕಿಂತ ಕಡಿಮೆ ಅಪಾಯಕಾರಿ ಪಕ್ಷವಾದ ಹಾಗೂ ಸೆಕ್ಯೂಲರ್ ತತ್ವಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಲ್ಲಿ ಪ್ರಗತಿಪರರು ಬೆಂಬಲಿಸಿದ್ದಾರೆ. ಇದು ಎಲ್ಲಾ ದೃಷ್ಟಿಯಿಂದಲೂ ಸರಿಯಾದ ನಡೆಯೇ ಆಗಿದೆ. ಪ್ರಗತಿಪರರು ನಿಲುಮೆಯ ತಲೆಹಿಡುಕರನ್ನು ಮೆಚ್ಚಿಸಲು ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಮತಿಹೀನರಲ್ಲ.

                ಉತ್ತರ
                • ವಿಜಯ್ ಪೈ
                  ನವೆಂ 1 2013

                  ‘ಕಾಯಕ’ ಯೋಗಿ ಭಟ್ಟ<ಗಿ ಮಹಾರಾಜ್,
                  ನೀವು ಇಲ್ಲಿ ಕೊಡುತ್ತಿರುವ ಪ್ರತಿಕ್ರಿಯೆಗಳನ್ನು ವಾಪಸ ಓದಿ ಮತ್ತು ಕನ್ನಡಿಯಲ್ಲೂ ಒಮ್ಮೆ ಮುಖ ನೋಡಿಕೊಳ್ಳಿ..ನಿಮಗೆ ತಲೆಹಿಡುಕ ಯಾರು ಅನ್ನುವುದು ಕನ್ ಫರ್ಮ್ ಆಗುತ್ತದೆ. ಮಾನಸಿಕ ಅಡ್ದಪಲ್ಲಕ್ಕಿ ವೀರರಿಗೆ ಕೆಲವರ ಉತ್ತರಗಳು 'ಬಹಳ ವಿವೇಕಪೂರ್ಣವಾಗಿದ್ದು ಅವರ ಅಪಾರ ದೂರದರ್ಶಿತ್ವ ಹಾಗೂ ತಿಳುವಳಿಕೆಯ ಸಂಕೇತವಾಗಿವೆ. ' ಎಂದು ಕಾಣುವುದು ಸಹಜ..ಏಕೆಂದರೆ ಈ ಭಟ್ಟಂಗಿಗಳಿಗೆ ಸ್ವಂತಬುದ್ಧಿ ಎಂದಿದ್ದು ಯಾವಾಗಲೂ ಇರುವುದಿಲ್ಲ..ಇವು ಜೈ ಜೈ ಕೆಟಗರಿಗಳು.
                  ಇನ್ನು ನಿಮ್ಮ ಎರಡನೆಯ ಪ್ಯಾರಾದ ಬಗ್ಗೆ..ಇಷ್ಟೆಲ್ಲ ಉದ್ದ ಬರೆಯುವ ಬದಲು. ಸರಳವಾಗಿ ಆಮ್ ಆದ್ಮಿ ಪಕ್ಷದಲ್ಲಿ ನಮಗೆ ಮೇಯಲು ಏನು ಸಿಗುವುದಿಲ್ಲ… ಅದಕ್ಕೆ ಅಲ್ಲಿ ಹೋಗಿಲ್ಲ ಎಂದು ಬರೆಯಿರಿ..ನಮಗೆ ಅರ್ಥವಾಗುತ್ತೆ!.

                  ಉತ್ತರ
                  • Nagshetty Shetkar
                    ನವೆಂ 1 2013
                  • krishnappa
                    ನವೆಂ 2 2013

                    ದುಡಿದು ತಿನ್ನುವ, ಸರಳ ಜೀವನದಲ್ಲಿ ನೆಮ್ಮದಿ ಕಾಣುವ ನನಗೆ ಯಾವ ಪಕ್ಷವನ್ನು ಮೆಚ್ಚಿಸಿ ಆಗಬೇಕಾದದ್ದು ಏನೂ ಇಲ್ಲ. ಹೀಗಾಗಿ ನನಗೆ ಮೇಯುವ ಅಗತ್ಯವೇ ಇಲ್ಲ. ನನಗೆ ಯಾವುದೇ ಸ್ಥಾನಮಾನಗಳ ಅಗತ್ಯವೂ ಇಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕುವುದೇ ಹೆಚ್ಚು ನೆಮ್ಮದಿ ಹಾಗೂ ಖುಷಿ ಕೊಡುವ ಸಂಗತಿಯಾಗಿರುವಾಗ ಭೋಗ ಹಾಗೂ ಆಡಂಬರದ ಜೀವನದ ಆಶೆ ಎಳ್ಳಷ್ಟೂ ಇಲ್ಲ.

                    ಉತ್ತರ
                    • ನವೆಂ 2 2013

                      Krishnappa Sir, you are a true kaayakajeevi.

                    • ವಿಜಯ್ ಪೈ
                      ನವೆಂ 2 2013

                      [ಹೀಗಾಗಿ ನನಗೆ ಮೇಯುವ ಅಗತ್ಯವೇ ಇಲ್ಲ.]
                      ನಿಮಗೆ ಆಸಕ್ತಿ ಇಲ್ಲದಿರಬಹುದು..ಅದನ್ನು ನೀವೇ ಹೇಳಿರುವುದರಿಂದ ನಂಬೋಣ. ಆದರೆ ನಿಮ್ಮ ‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ಗಳ ಪರಿವಾರಕ್ಕೆ ಮೇವಿನ ಆಸೆ ಇದೆ. ಇದು ಕಣ್ಣಿಗೆ ಢಾಳಾಗಿ ಕಾಣುವ ಸತ್ಯ. ಯಡಿಯೂರಪ್ಪ ಇದ್ದಾಗ ಭೃಷ್ಟಾಚಾರದಿಂದ ಕರ್ನಾಟಕ ಮುಳುಗಿ ಹೋಗಿ, ಸಮಾಜ ಅಧಪತನ ಕಾಣುತ್ತಿದೆ ಎಂದು ಬೊಂಬಡ ಹೊಡೆದ ಮಹಾನುಭಾವರು, ಇವತ್ತು ಭೃಷ್ಟಾಚಾರ ಅನ್ನುವುದು ಅಷ್ಟು ದೊಡ್ಡ ವಿಷಯ ಅಲ್ಲ ಎನ್ನುವ ನಾಜೂಕಯ್ಯಗಳು ನಮ್ಮ ಸುತ್ತಲೂ ಇದ್ದಾರೆ. ಇಷ್ಟೆಲ್ಲ ಮಾಡಿದ ಮೇಲೂ ಸಮಾಜ ಸುಧಾರಣೆಯ ಭೋದನೆ ಬೇರೆ ಮಾಡುತ್ತಾರೆ ಈ ಜನ. ನನ್ನ ಆಕ್ರೋಶ ಇಂತಹ ಠಕ್ಕು ‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ಗಳ ಬಗ್ಗೆ.

                  • ನವೆಂ 2 2013

                    Mr. Vijay, regarding mevu, I asked cslc to come clean on the funds and favors it received from bjp government and organizations with links to Sangh parivar. No data given by them so far. Yet you accuse Krishnappa Sir of seeking mevu. Isn’t this a shameful irony?

                    ಉತ್ತರ
                    • ವಿಜಯ್ ಪೈ
                      ನವೆಂ 2 2013

                      ಮಹಾನುಭಾವ ಶೆಟ್ಕರ್ ಗುರುಗಳೆ..
                      ಪ್ರಜಾಪ್ರಭುತ್ವವಾದಿಯಾದ ತಮಗೆ ಈ ದೇಶದಲ್ಲಿ ಮಾಹಿತಿಹಕ್ಕು ಅಥವಾ ಸಂಸ್ಥೆಗಳ ಹಣ ಬಳಕೆಯ ಕುರಿತಾಗಿ ಮಾಹಿತಿ ಪಡೆಯುವ ವ್ಯವಸ್ಥೆ ಅನ್ನುವುದೊಂದು ಇದೆ ಎಂಬುದು ಗೊತ್ತಿರಬಹುದು..ಆದ್ದರಿಂಧ ಸಿ.ಎಸ್.ಎಲ್.ಸಿ ಯ ಬಗ್ಗೆ ಅಷ್ಟೆಲ್ಲ ‘ಕಾಳಜಿ’ ಇರುವ ನೀವ, ಅದನ್ನು ನಿಮ್ಮ ‘ಕಾಯಕ’ಯೋಗ ಹೋರಾಟದಡಿ ಪಡೆದುಕೊಂಡು, ಇಲ್ಲಿ ಬಹಿರಂಗಗೊಳಿಸಿ ಎಂಬ ವಿನಂತಿ.
                      [Yet you accuse Krishnappa Sir of seeking mevu.]
                      ಮೊದಲು ಎಲ್ಲವನ್ನೂ ನಿಮ್ಮ ಹಿರಿಗುರುಗಳಾದ ದರ್ಗಾ ಅವರಿಗೆ ಟ್ರಾನ್ಸಫರ್ ಮಾಡುತ್ತಿದ್ದೀರಿ..ಈಗ ಕೃಷ್ಣಪ್ಪ!..ಆಶ್ಚರ್ಯವಾದರೂ ಸತ್ಯ. ಇನ್ನೊಂದೆನೆಂದರೆ ಗುರುಗಳೆ..ನಿಮ್ಮ ಕೃಷ್ಣಪ್ಪನವರಷ್ಠೇ ಏಕೆ? ನೀವು ‘ಪ್ರಗತಿಪರ’ರಲ್ಲಿ ಬರಲ್ವಾ? ಅಥವಾ ನಿಮ್ಮನ್ನು ಗುಂಪಿನಿಂದ ಹೊರಗಿಟ್ಟಿದ್ದಾರೆಯೆ?

              • krishnappa
                ನವೆಂ 1 2013

                ನಾನು ನನ್ನ ಅನಿಸಿಕೆಯನ್ನು ಹೇಳುತ್ತೇನೆ, ನೀವು ನಿಮ್ಮ ಅನಿಸಿಕೆಯನ್ನು ಹೇಳಿ. ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ನಾನು ನಿಮ್ಮ ಅಡಿಯಲ್ಲಿ ಪರೀಕ್ಷೆ ಬರೆಯಲು ಕುಳಿತಿಲ್ಲ. ಅಲ್ಲದೆ ನಿಮ್ಮ ವಿತಂಡವಾದದ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಅಗತ್ಯವೂ ಇಲ್ಲ. ಅಣ್ಣಾ ಹಜಾರೆಗೆ ಸ್ಪಷ್ಟವಾದ ರಾಜಕೀಯ ತಿಳುವಳಿಕೆ ಇಲ್ಲ. ಅವರು ಒಬ್ಬ ಮುಗ್ಧ ವ್ಯಕ್ತಿ. ಅವರನ್ನು ಬಿಜೆಪಿ ಹಾಗೂ ಸಂಘ ಪರಿವಾರದವರು ತಮ್ಮ ರಾಜಕೀಯ ಉತ್ಕರ್ಷಕ್ಕೆ ಬಳಸಲು ನೋಡಿದರು. ಇದರಿಂದಾಗಿ ಪ್ರಗತಿಪರರು ಆರಂಭದಲ್ಲಿ ಅಣ್ಣಾ ಚಳುವಳಿಯ ಬಗ್ಗೆ ಅನುಮಾನ ಹೊಂದಿದ್ದರು. ಯಾವಾಗ ಅಣ್ಣಾ ಅವರು ತಮ್ಮ ಪ್ರತಿಗಾಮಿ ಧೋರಣೆಗಳಿಗೆ ಅಂಟಿಕೊಂಡು ಕೇಜ್ರಿವಾಲರಿಂದ ದೂರವಾದರೋ ಆಗಲೇ ಕೇಜ್ರಿವಾಲರು ಪ್ರಗತಿಪರರಿಗೆ ಇಷ್ಟವಾದರು. ಅಣ್ಣಾ ಹಜಾರೆಯಂಥಲ್ಲದೆ ಕೇಜ್ರಿವಾಲರಿಗೆ ಭಾರತವು ಸಾಗಬೇಕಾದ ದಾರಿಯ ಬಗ್ಗೆ ಸ್ಪಷ್ಟ ತಿಳುವಳಿಕೆ ಇದೆ, ಚಿಂತನೆ ಇದೆ. ಕೇಜ್ರಿವಾಲರು ಪ್ರಗತಿಪರ ರಾಜಕೀಯ ಚಿಂತನೆಯನ್ನು ಹೊಂದಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉತ್ತಮಗೊಳಿಸುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ. ಹೀಗಾಗಿ ಪ್ರಗತಿಪರರು ಕೇಜ್ರಿವಾಲರು ಹಾಗೂ ಅವರ ಪಕ್ಷದ ಉತ್ತಮ ನಿಲುವುಗಳ ಬಗ್ಗೆ ಭರವಸೆ ಹೊಂದಿದ್ದಾರೆ. ಕೇಜ್ರಿವಾಲರು ಜನರ ಭರವಸೆಗೆ ಅನುಗುಣವಾಗಿ ಹೋಗದಿದ್ದರೆ, ಎಡವಿದರೆ ಅವರನ್ನು ಟೀಕಿಸಲು ಪ್ರಗತಿಪರರು ಹಿಂಜರಿಯುವುದಿಲ್ಲ.

                ಉತ್ತರ
                • Nagshetty Shetkar
                  ನವೆಂ 1 2013
                • ವಿಜಯ್ ಪೈ
                  ನವೆಂ 1 2013

                  [ನಾನು ನನ್ನ ಅನಿಸಿಕೆಯನ್ನು ಹೇಳುತ್ತೇನೆ, ನೀವು ನಿಮ್ಮ ಅನಿಸಿಕೆಯನ್ನು ಹೇಳಿ. ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ನಾನು ನಿಮ್ಮ ಅಡಿಯಲ್ಲಿ ಪರೀಕ್ಷೆ ಬರೆಯಲು ಕುಳಿತಿಲ್ಲ.]
                  ಅಂತೆಯೇ ನಾವು ನಿಮ್ಮ ಎಂದಿನ ಪ್ರವಚನ ಕೇಳಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳಬೇಕಾಗಿಲ್ಲ. ನಿಮಗೆ ನೀವು ‘ಪ್ರಗತಿಪರರು’ ಅಂತ ಸರ್ಟಿಫಿಕೇಟ್ ಕೊಟ್ಟುಕೊಂಡು, ಇಲ್ಲಿ ಬಂದು ಕೊರೆಯಲು ಸುರು ಮಾಡಿದಾಗ, ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ನೈತಿಕತೆ ನಿಮ್ಮಲ್ಲಿರಬೇಕು ಅಷ್ಟೆ..ಇದನ್ನೇ ಪ್ರಶ್ನಿಸಿದರೆ ಪರೀಕ್ಷೆಗೆ ಕುಳಿತಿಲ್ಲ ಎಂದು ನುಣಚಿಕೊಳ್ಳುವುದು ಏಕೆ ಸ್ವಾಮಿ?

                  [ಯಾವಾಗ ಅಣ್ಣಾ ಅವರು ತಮ್ಮ ಪ್ರತಿಗಾಮಿ ಧೋರಣೆಗಳಿಗೆ ಅಂಟಿಕೊಂಡು ಕೇಜ್ರಿವಾಲರಿಂದ ದೂರವಾದರೋ ಆಗಲೇ ಕೇಜ್ರಿವಾಲರು ಪ್ರಗತಿಪರರಿಗೆ ಇಷ್ಟವಾದರು. ಅಣ್ಣಾ ಹಜಾರೆಯಂಥಲ್ಲದೆ ಕೇಜ್ರಿವಾಲರಿಗೆ ಭಾರತವು ಸಾಗಬೇಕಾದ ದಾರಿಯ ಬಗ್ಗೆ ಸ್ಪಷ್ಟ ತಿಳುವಳಿಕೆ ಇದೆ, ]
                  ಅದಕ್ಕೆ ನಾನು ಕೇಳಿದ್ದು..ಎಷ್ಟು ಜನ ಪ್ರಗತಿಪರರು ಆಮ್ ಆದ್ಮಿ ಪರವಾಗಿ ಪ್ರಚಾರ ಮಾಡ್ತಿದಿರಿ ಸ್ವಾಮಿ ಎಂದು, ಎಷ್ಟು ಜನ ಬಹಿರಂಗವಾಗಿ ಬೆಂಬಲ ಸಾರಿದ್ದೀರಿ? ಅದಕ್ಕೆ ನಿಮ್ಮಲ್ಲಿ ಉತ್ತರವಿಲ್ಲ.

                  [ಹೀಗಾಗಿ ಪ್ರಗತಿಪರರು ಕೇಜ್ರಿವಾಲರು ಹಾಗೂ ಅವರ ಪಕ್ಷದ ಉತ್ತಮ ನಿಲುವುಗಳ ಬಗ್ಗೆ ಭರವಸೆ ಹೊಂದಿದ್ದಾರೆ. ಕೇಜ್ರಿವಾಲರು ಜನರ ಭರವಸೆಗೆ ಅನುಗುಣವಾಗಿ ಹೋಗದಿದ್ದರೆ, ಎಡವಿದರೆ ಅವರನ್ನು ಟೀಕಿಸಲು ಪ್ರಗತಿಪರರು ಹಿಂಜರಿಯುವುದಿಲ್ಲ.]
                  ಅವರ ಪರವಾಗಿ ಒಂದು ದಿನವೂ ಎದ್ದು ನಿಲ್ಲಲಿಲ್ಲ, ಈಗ ತಪ್ಪಿದರೆ ಟೀಕಿಸಲು ಹಿಂಜರಿಯುವುದಿಲ್ಲ ಎಂಬ ಅಣಿಮುತ್ತು ಬೇರೆ!.

                  ಉತ್ತರ
    • ಗಿರೀಶ್
      ಆಕ್ಟೋ 31 2013

      ಬಾಬ್ರಿ ಮಸೀದಿ ಕೆಡವಿ ರಾಮಮಂದಿರ ಕಟ್ಟುವುದು ಬಹುಸಂಖ್ಯಾತರ ಓಲೈಕೆಯಾದರೆ? ಕಟ್ಟಬಾರದೆನ್ನುವುದು ಅಲ್ಪಸಂಖ್ಯಾತರ ಓಲೈಕೆಯಲ್ಲವೆ?

      ಉತ್ತರ
      • krishnappa
        ನವೆಂ 1 2013

        ಅಲ್ಲಿ ಏನನ್ನೂ ಕಟ್ಟಬೇಕಾಗಿಲ್ಲ. ಈಗಾಗಲೇ ದೇಶದಲ್ಲಿ ಬೇಕಾದಷ್ಟು ದೇವಸ್ಥಾನಗಳು ಹಾಗೂ ಮಸೀದಿಗಳು ಇವೆ. ಇನ್ನಷ್ಟು ದೇವಸ್ಥಾನ ಹಾಗೂ ಮಸೀದಿಗಳ ಅಗತ್ಯ ಇಲ್ಲ. ಇಂಥ ಕ್ಷುಲ್ಲಕ ವಿಷಯಗಳಲ್ಲಿ ಜನರನ್ನು ಕೆರಳಿಸುವುದನ್ನು ಬಿಟ್ಟು ದೇಶ ಕಟ್ಟಲು ಗಮನ ಹರಿಸುವುದು ಇಂದಿನ ಅಗತ್ಯ.

        ಉತ್ತರ
  3. krishnappa
    ಆಕ್ಟೋ 31 2013

    ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿ ಹಾಕಿ ರಾಮ ಮಂದಿರ ನಿರ್ಮಾಣ ಮಾಡಬೇಕೆಂಬುದು ಜನರ ಅವಶ್ಯಕತೆಯೇ ಅಲ್ಲ. ಇದು ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರನ್ನು ಎತ್ತಿ ಕಟ್ಟಿ ಹಿಂದೂ ವೋಟ್ ಬ್ಯಾಂಕ್ ರೂಪಿಸುವ ಉದ್ಧೇಶದ ಹೋರಾಟವೇ ಹೊರತು ಇದು ಎಂದಿಗೂ ಜನರ ಆದ್ಯತೆ ಆಗಲು ಸಾಧ್ಯವಿಲ್ಲ. ಇದು ನಿಜಕ್ಕೂ ಜನರ ಆದ್ಯತೆ ಆಗಿದ್ದರೆ ಹಿಂದೂಗಳು ಬಹುಸಂಖ್ಯಾತರಾಗಿರುವ ನಮ್ಮ ದೇಶದಲ್ಲಿ ಅವರಿಗೆ ಮತದಾನದ ಮೂಲಕ ಬಿಜೆಪಿಯನ್ನು ಮೂರನೇ ಎರಡು ಬಹುಮತ ನೀಡಿ ಗೆಲ್ಲಿಸಿ ಸಂಸತ್ತಿನಲ್ಲಿ ಮಸೂದೆ ಮಂಡಿಸಿ ಅದನ್ನು ಗೆಲ್ಲಿಸಿ ರಾಮ ಮಂದಿರ ಕಟ್ಟಿಸುವುದು ಕಷ್ಟವೇನೂ ಅಲ್ಲ. ಇದು ಜನರ ಆದ್ಯತೆ ಅಲ್ಲವೆಂದು ಇದರಿಂದಲೇ ತಿಳಿಯುತ್ತದೆ.

    ಉತ್ತರ
    • ಆಕ್ಟೋ 31 2013

      > ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿ ಹಾಕಿ ರಾಮ ಮಂದಿರ ನಿರ್ಮಾಣ ಮಾಡಬೇಕೆಂಬುದು ಜನರ ಅವಶ್ಯಕತೆಯೇ ಅಲ್ಲ.
      ಅಯೋಧ್ಯೆಯಲ್ಲಿ ದೇವಸ್ಥಾನಕ್ಕಾಗಿ ನಡೆದ ಹೋರಾಡಿದ್ದು ತಪ್ಪೋ ಅಥವಾ ಅದಕ್ಕೆ ಭಾಜಪ ಬೆಂಬಲ ನೀಡಿದ್ದು ತಪ್ಪೋ – ನಿಮ್ಮ ಅಭಿಪ್ರಾಯ ಸ್ಪಷ್ಟವಾಗಲಿಲ್ಲ.

      ಈ ವಿಷಯದಲ್ಲಿ ನನ್ನದೊಂದು ಸಣ್ಣ ಸಂದೇಹವಿದೆ. ನೀವು ಅದಕ್ಕೆ ಸಮರ್ಥ ಉತ್ತರ ನೀಡಬಹುದು ಎಂದು ತಿಳಿಯುತ್ತೇನೆ.
      ೧. ಅಯೋಧ್ಯೆಯಲ್ಲಿದ್ದ ಬಾಬರಿ ಕಟ್ಟಡಕ್ಕೂ, ಭಾರತೀಯ ಮುಸಲ್ಮಾನರಿಗೂ ಸಂಬಂಧವೇನು?
      ೨. ಪವಿತ್ರ ಕುರಾನ್ ಪ್ರಕಾರವೇ, ವಿವಾಧಿತ ಸ್ಥಳ ಮಸೀದಿಯಾಗಲು ಸಾಧ್ಯವಿಲ್ಲ ಮತ್ತು ಅಲ್ಲಿ ನಡೆಸಿದ ನಮಾಜು ಅಲ್ಲಾಹುವಿಗೆ ತಲಪುವುದಿಲ್ಲ. ಅಲ್ಲಿದ್ದ ಕಟ್ಟಡದ ವಿಷಯದಲ್ಲಿ ೧೫೨೬ರಿಂದಲೇ ವಿವಾದವಿದೆ. ಅಲ್ಲಿ ಒಮ್ಮೆಯೂ ನಮಾಜು ನಡೆದಿಲ್ಲ.
      ಹೀಗೆಲ್ಲಾ ಇರುವಾಗ, ಅಲ್ಲಿದ್ದ ಕಟ್ಟಡ ಬಿದ್ದರೆ, ಭಾರತೀಯ ಮುಸಲ್ಮಾನರೇಕೆ ಬೇಸರಿಸಿಕೊಳ್ಳಬೇಕು?
      ೩. ಅದಕ್ಕೂ ಜಾತ್ಯಾತೀತತೆಗೂ ಸಂಬಂಧವೇನು?

      ಉತ್ತರ
      • ವಿಜಯ್ ಪೈ
        ಆಕ್ಟೋ 31 2013

        +೧ ಕುಮಾರವರ ಪ್ರಶ್ನೆಗಳಿಗೆ. ಕೃಷ್ಣಪ್ಪನವರ ಉತ್ತರದ ನಿರೀಕ್ಷೆಯಲ್ಲಿ..ಅದೂ ಯಾವುದೇ ಪ್ರಶ್ನೆಯನ್ನು ಹಾರಿಸದೆ!

        ಉತ್ತರ
        • ವಿಜಯ್ ಪೈ
          ನವೆಂ 1 2013

          ಕುಮಾರರ ನೇರ ಪ್ರಶ್ನೆಗಳಿಗೆ ನಮ್ಮ ಕೃಷ್ಣಪ್ಪನವರ ಉತ್ತರವೇ ಇಲ್ಲ .. ಆಮೇಲೆ ಮತ್ತೆ ಪುರಾಣ ಎಂದಿನಂತೆ..

          ಉತ್ತರ
      • Nagshetty Shetkar
        ಆಕ್ಟೋ 31 2013

        Who gave you the license to go and destroy the Masjid? Was it not an act of gravest barbarism? Don’t you know the damage it did to the secular fabric of independent India?

        ಉತ್ತರ
        • ಆಕ್ಟೋ 31 2013

          > Who gave you the license to go and destroy the Masjid?
          ಇದು ಕನ್ನಡದ ಜಾಲತಾಣ. ದಯವಿಟ್ಟು ಕನ್ನಡದ ಲಿಪಿಯನ್ನೇ ಬಳಸಿದರೆ ಚರ್ಚೆಗೆ ಅನುಕೂಲವಾದೀತು.
          ಕನ್ನಡದ ಅಕ್ಷರಗಳನ್ನು ಬರೆಯಲು http://www.kannadaslate.com/ ಸಹಾಯ ತೆಗೆದುಕೊಳ್ಳಬಹುದು.

          ಇನ್ನು ನಿಮ್ಮ ಪ್ರಶ್ನೆಗೆ ನಾನು ಉತ್ತರಿಸುವ ಮೊದಲು, ನಾನು ಈ ಮೊದಲೇ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಿರಾ?

          ಉತ್ತರ
      • krishnappa
        ನವೆಂ 1 2013

        ಬಾಬ್ರಿ ಮಸೀದಿ ಎಂದು ಕರೆಯಲ್ಪಡುವ ಕಟ್ಟಡ ಅಲ್ಲಿ ಇದ್ದದ್ದು ಅದನ್ನು ಅದನ್ನು ಕೆಡವುವ ಅವಶ್ಯಕತೆ ಇರಲಿಲ್ಲ. ದೇವಸ್ಥಾನ ಕಟ್ಟಬೇಕಿದ್ದರೆ ಅಯೋಧ್ಯೆಯಲ್ಲಿ ಬೇರೆ ಜಾಗದಲ್ಲಿ ಕಟ್ಟಬಹುದಾಗಿತ್ತು. ಅದೇ ಜಾಗದಲ್ಲಿ ಆಗಬೇಕೆಂಬುದು ವಿತಂಡವಾದವೇ ಹೊರತು ಮತ್ತೇನೂ ಅಲ್ಲ. ಇದು ಮುಗ್ಧ ಜನರನ್ನು ಕೆರಳಿಸಿ ವೋಟ್ ಬ್ಯಾಂಕ್ ನಿರ್ಮಿಸಲು ಹೊರತು ಬೇರಾವುದೇ ಕಾರಣಕ್ಕೂ ಅಲ್ಲ ಎಂಬುದು ಬುದ್ಧಿ, ವಿವೇಚನೆ ಇರುವವರಿಗೆ ತಿಳಿಯುತ್ತದೆ.

        ಉತ್ತರ
        • ನವೆಂ 2 2013

          > ಬಾಬ್ರಿ ಮಸೀದಿ ಎಂದು ಕರೆಯಲ್ಪಡುವ ಕಟ್ಟಡ ಅಲ್ಲಿ ಇದ್ದದ್ದು
          > ಅದನ್ನು ಅದನ್ನು ಕೆಡವುವ ಅವಶ್ಯಕತೆ ಇರಲಿಲ್ಲ.
          > ದೇವಸ್ಥಾನ ಕಟ್ಟಬೇಕಿದ್ದರೆ ಅಯೋಧ್ಯೆಯಲ್ಲಿ ಬೇರೆ ಜಾಗದಲ್ಲಿ ಕಟ್ಟಬಹುದಾಗಿತ್ತು.
          ಏನದು ಬಾಬ್ರಿ ಕಟ್ಟಡ ಎಂದರೆ? ಅದಕ್ಕೇಕೆ ಆ ಹೆಸರು ಬಂದಿತು?
          ಅದನ್ನು ಉಳಿಸಿಕೊಳ್ಳಲು ಅಷ್ಟೊಂದು ಆಸಕ್ತಿಯೇಕೆ? ಅದನ್ನು ಉಳಿಸಿಕೊಳ್ಳುವುದರಿಂದ ಆಗುವ ಲಾಭವಾದರೂ ಏನು?
          ಅದನ್ನು ಕೆಡವಿದರೆ ಕೋಪವೇಕೆ? ಅಲ್ಲಿದ್ದ ಬಾಬ್ರಿ ಕಟ್ಟಡಕ್ಕೂ ನಿಮಗೂ ಏನು ಸಂಬಂಧ?

          ಉತ್ತರ
          • krishnappa
            ನವೆಂ 2 2013

            ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಎಂದು ಕರೆಯಲ್ಪಡುವ ಕಟ್ಟಡವನ್ನು ಕೆಡವಿದುದರಿಂದ ದೇಶಾದ್ಯಂತ ಮಹಾದಂಗೆಗಳು ಉಂಟಾಗಿ ಅಪಾರ ಪ್ರಾಣಹಾನಿ ಹಾಗೂ ಆಸ್ತಿಹಾನಿ ಆಯಿತು ಮಾತ್ರವಲ್ಲ ಹಿಂದೂ ಮುಸ್ಲಿಮರ ನಡುವೆ ಕಂದಕ ನಿರ್ಮಾಣವಾಯಿತು. ಇದು ದೇಶಕ್ಕೆ ಆದ ನಷ್ಟ. ನನಗೆ ಅದರಿಂದ ಏನೂ ಆಗಿಲ್ಲ. ಅಲ್ಲಿದ್ದ ಕಟ್ಟಡಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ಅಲ್ಲಿ ಮಸೀದಿ ಎಂದು ಕರೆಯುವ ಕಟ್ಟಡವನ್ನು ಏಕಾಏಕಿ ಕೆಡವ ಬೇಕಾದ ಅಗತ್ಯ ಇರಲಿಲ್ಲ. ಹಿಂದೂಗಳನ್ನೂ ಹಿರಿಯ ಸಹೋದರ ಎಂದು ಪರಿಗಣಿಸುವುದಾದರೆ ಹಾಗೂ ಮುಸ್ಲಿಮರನ್ನು ಕಿರಿಯ ಸಹೋದರ ಎಂದು ಪರಿಗಣಿಸುವುದಾದರೆ ಒಂದೊಮ್ಮೆ ಕಿರಿಯ ಸಹೋದರ ತಿಳುವಳಿಕೆ ಇಲ್ಲದೆ ಹಠ ಮಾರಿ ಧೋರಣೆ ತೋರಿದರೆ ಅದನ್ನು ಹಿರಿಯ ಸಹೋದರನಾದ ಹಿಂದೂವೇ ವಿಶಾಲ ಮನಸ್ಸಿನಿಂದ ಕಿರಿಯ ಸಹೋದರನಿಗೆ ಬಿಟ್ಟುಕೊಟ್ಟು ಅಯೋಧ್ಯೆಯಲ್ಲಿ ಬೇರೆ ಜಾಗದಲ್ಲಿ ದೇವಸ್ಥಾನ ಕಟ್ಟುವುದರಿಂದ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬಹುದಾಗಿತ್ತು. ದೇವರು ಸರ್ವತರ್ಯಾಮಿ ಎಂದು ಹೇಳುವಾಗ ಅಯೋಧ್ಯೆಯ ಬಾಬ್ರಿ ಮಸೀದಿ ಎಂದು ಕರೆಯಲ್ಪಡುತ್ತಿದ್ದ ಜಾಗದಲ್ಲೇ ದೇವಸ್ಥಾನ ಕಟ್ಟಬೇಕೆಂಬುದು ವಿತಂಡವಾದವಲ್ಲದೆ ಮತ್ತಿನ್ನೇನು? ಓರ್ವ ನಿಜವಾದ ಭಕ್ತ, ಆಧ್ಯಾತ್ಮಿಕ ವ್ಯಕ್ತಿ ಈ ರೀತಿ ದೇವರ ಹೆಸರಿನಲ್ಲಿ ಕಿತ್ತಾಡುವುದಿಲ್ಲ. ಹೀಗೆ ಕಿತ್ತಾಡುವವರಿಗೆ ನಿಜವಾದ ಭಕ್ತಿ ಇರಲು ಸಾಧ್ಯವಿಲ್ಲ.

            ಉತ್ತರ
            • ವಿಜಯ್ ಪೈ
              ನವೆಂ 2 2013

              [ಹಿರಿಯ ಸಹೋದರನಾದ ಹಿಂದೂವೇ ವಿಶಾಲ ಮನಸ್ಸಿನಿಂದ ಕಿರಿಯ ಸಹೋದರನಿಗೆ ಬಿಟ್ಟುಕೊಟ್ಟು ಅಯೋಧ್ಯೆಯಲ್ಲಿ ಬೇರೆ ಜಾಗದಲ್ಲಿ ದೇವಸ್ಥಾನ ಕಟ್ಟುವುದರಿಂದ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬಹುದಾಗಿತ್ತು.]
              ಅಂದರೆ ತನಗೆ ಅವಶ್ಯಕತೆಯಿಲ್ಲದ ಕಟ್ಟಡವಿದ್ದರೂ ಆಕ್ರಮಿಸಲ್ಪಟ್ಟ ಕಟ್ಟಡವಿದ್ದರೂ ಈ ಕಿರಿಯ ಸಹೋದರ ಹಟಮಾರಿ ಧೋರಣೆ ತೋರಿಸಿ, ತನಗೆ ಭಾರಿ ಅನ್ಯಾಯವಾಗಿಬಿಟ್ಟಿದೆ ಎಂದು ತೋರಿಸಿಕೊಳ್ಳುವಲ್ಲಿ ನಿಮಗೆ ಅಭ್ಯಂತರವಿಲ್ಲವೆಂದಾಯಿತು..ಈ ಸಹೋದರ ಪ್ರೀತಿ ಒಮ್ಮುಖವೆ ಕೃಷ್ಣಪ್ನೋರೆ?

              ಇಂತಹ ಟವೆಲ್ ಹಾಸಿ, ಆಮೇಲೆ ಹಕ್ಕು ಸಾಧಿಸುವ ಧೋರಣೆಗೆ ತುಂಬು ಹೃದಯದ ಸಹಾಯ ಮಾಡಲೆಂದೆ ನಮ್ಮ ಕೇಂದ್ರ ಸರಕಾರ National Advisory Council ಮೂಲಕ ಮಸೂದೆಯೊಂದನ್ನು ತರಲು ಹೊರಟಿತ್ತು..ಇಲ್ಲಿದೆ ಪಿ.ಡಿ.ಎಫ್ ಕರಡು ಪ್ರತಿ.. ಓದಿನೋಡಿ.. nac.nic.in/pdf/pctvb.pdf

              ಉತ್ತರ
              • krishnappa
                ನವೆಂ 2 2013

                ಅಲ್ಲಿ ಇದ್ದದ್ದು ಮೂಲ ಮಸೀದಿ ಕಟ್ಟಡವೋ ಅಥವಾ ದೇವಸ್ಥಾನದ ಕಟ್ಟಡವೋ ಎಂದು ಕೋರ್ಟು ಅಥವಾ ವೈಜ್ಞಾನಿಕ ಅಧ್ಯಯನಗಳಿಂದ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಒಂದು ವೇಳೆ ಅದು ಆಕ್ರಮಿತ ಕಟ್ಟಡವೇ ಆಗಿದ್ದರೂ ಅದು ಬಹಳ ಹಿಂದೆ ಆದ ಆಕ್ರಮಣ, ಸ್ವಾತಂತ್ರ್ಯಾನಂತರ ಆದ ಆಕ್ರಮಣವಲ್ಲ. ಹೀಗಾಗಿ ಅದರ ಬಗ್ಗೆ ಹೆಚ್ಚಿನ ಹಠಮಾರಿ ಧೋರಣೆ ತೋರುವ ಬದಲು ನಾವು ಹಿಂದೂಗಳು ಹಿರಿಯ ಸಹೋದರನಂತೆ ವಿಶಾಲ ಮನೋಭಾವನೆ ತೋರಿದರೆ ಏನೂ ನಷ್ಟ ಆಗಲಿಕ್ಕಿಲ್ಲ, ಬದಲಿಗೆ ಬಹಳ ದೊಡ್ಡ ಪ್ರಯೋಜನವೇ ಆಗಬಹುದು. ಹಿಂದೂ ಮುಸ್ಲಿಮರ ನಡುವೆ ಎದ್ದ ಅಪನಂಬಿಕೆಯ ಗೋಡೆ ಮಾಯವಾಗಿ ಸೌಹಾರ್ದಕ್ಕೆ ಬಹಳ ದೊಡ್ಡ ಕೊಡುಗೆ ಆಗಬಹುದು. ಸ್ವಾತಂತ್ರ್ಯಾನಂತರ ಎಲ್ಲಿಯೂ ಮುಸ್ಲಿಮರು ಹಿಂದೂಗಳ ದೇವಸ್ಥಾನಗಳನ್ನು ಆಕ್ರಮಿಸಿ ತಮ್ಮ ಮಸೀದಿ ಕಟ್ಟಿದ ಉದಾಹರಣೆ ಇಲ್ಲ. ಹೀಗಾಗಿ ಹೀಗೆ ಮಾಡುವುದರಿಂದ ಇನ್ನಷ್ಟು ಆಕ್ರಮಣಕ್ಕೆ ದಾರಿಯಾಗಲಾರದು. ದೇವರು ಸರ್ವಾಂತರ್ಯಾಮಿಯಾಗಿರುವಾಗ ವಿವಾದಿತ ಕಟ್ಟಡಕ್ಕಿಂತ ಸ್ವಲ್ಪ ದೂರದಲ್ಲಿ ಮಂದಿರ ಕಟ್ಟಿದ್ದರೆ ಯಾವ ನಷ್ಟವೂ ಆಗುತ್ತಿರಲಿಲ್ಲ. ಇದೆಲ್ಲ ನಿಜವಾಗಿ ಭಕ್ತಿ ಹಾಗೂ ಶ್ರದ್ಧೆ ಇದ್ದು ಮಾಡಿದ್ದು ಅಲ್ಲ ರಾಜಕೀಯ ಲಾಭಕ್ಕಾಗಿ ಮಾಡಿದ್ದು ಎಂಬುದು ಎದ್ದು ಕಾಣುತ್ತದೆ. ನಿಜವಾದ ಭಕ್ತರು ಹಾಗೂ ಆಧ್ಯಾತ್ಮಿಕರು ಈ ರೀತಿಯ ದೇಶಕ್ಕೆ ಮಾರಕವಾದ ಕೆಲಸಗಳನ್ನು ಮಾಡುವುದಿಲ್ಲ.

                ಉತ್ತರ
                • ವಿಜಯ್ ಪೈ
                  ನವೆಂ 2 2013

                  [ಅಲ್ಲಿ ಇದ್ದದ್ದು ಮೂಲ ಮಸೀದಿ ಕಟ್ಟಡವೋ ಅಥವಾ ದೇವಸ್ಥಾನದ ಕಟ್ಟಡವೋ ಎಂದು ಕೋರ್ಟು ಅಥವಾ ವೈಜ್ಞಾನಿಕ ಅಧ್ಯಯನಗಳಿಂದ ಸ್ಪಷ್ಟವಾಗಿ ತಿಳಿದುಬಂದಿಲ್ಲ.]
                  ಹ್ಮ..ಇಲ್ಲಿದೆ ನೋಡಿ..ಎ.ಎಸ್.ಆಯ್ ಕೂಡ ಈ ವಿಷಯದಲ್ಲಿ ಏನು ಹೇಳಿದೆ ಎನ್ನುವುದು ಇದೆ..
                  stephen-knapp.com/ayodhya_and_the_research_on_the_temple_of_Lord_Rama.htm
                  [ಒಂದು ವೇಳೆ ಅದು ಆಕ್ರಮಿತ ಕಟ್ಟಡವೇ ಆಗಿದ್ದರೂ ಅದು ಬಹಳ ಹಿಂದೆ ಆದ ಆಕ್ರಮಣ, ಸ್ವಾತಂತ್ರ್ಯಾನಂತರ ಆದ ಆಕ್ರಮಣವಲ್ಲ. ಹೀಗಾಗಿ ಅದರ ಬಗ್ಗೆ ಹೆಚ್ಚಿನ ಹಠಮಾರಿ ಧೋರಣೆ ತೋರುವ ಬದಲು ನಾವು ಹಿಂದೂಗಳು ಹಿರಿಯ ಸಹೋದರನಂತೆ ವಿಶಾಲ ಮನೋಭಾವನೆ ತೋರಿದರೆ ಏನೂ ನಷ್ಟ ಆಗಲಿಕ್ಕಿಲ್ಲ, ]
                  ಹಾ..ಇದಕ್ಕೆ ಸ್ವಾತಂತ್ಯಪೂರ್ವ, ಸ್ವಾತಂತ್ರೊತ್ತರ ಎಂಬ ತತ್ವ ಲಾಗೂ ಆಗುತ್ತದೆಯೆ? ಇರಲಿ ಒಪ್ಪೊಣ..ಕೃಷ್ಣಪ್ನೋರೆ..ಕೆಲವು ಜನ ೧೨ನೆಯ ಶತಮಾನವನ್ನು ಬಂಡವಾಳ ಮಾಡಿಕೊಂಡು ಸಮಾಜದಲ್ಲಿ ‘ಸಹೋದರ’ಭಾವ ಹುಟ್ಟುಹಾಕುತ್ತಿದ್ದಾರಲ್ಲ, ಮೊನ್ನೆ ಇವರ ಕಿವಿಯಲ್ಲೇ ಕಾದ ಸೀಸ ಹಾಕಿದರು ಎನ್ನುವಂತೆ ಆಡುತ್ತ, ಅದನ್ನೇ ಹೊಟ್ಟೆಪಾಡು ಮಾಡಿಕೊಂಡಿದ್ದಾರಲ್ಲ.. ಇವರ ಬಗ್ಗೆ ಏನಂತೀರಿ? ಇವರಿಗೆ ಈ ‘ಸ್ವಾತಂತ್ಯಪೂರ್ವ, ಸ್ವಾತಂತ್ರೊತ್ತರ ತತ್ವ ‘ ಲಾಗೂ ಆಗುತ್ತದೆಯೆ?
                  [ದೇವರು ಸರ್ವಾಂತರ್ಯಾಮಿಯಾಗಿರುವಾಗ ವಿವಾದಿತ ಕಟ್ಟಡಕ್ಕಿಂತ ಸ್ವಲ್ಪ ದೂರದಲ್ಲಿ ಮಂದಿರ ಕಟ್ಟಿದ್ದರೆ ಯಾವ ನಷ್ಟವೂ ಆಗುತ್ತಿರಲಿಲ್ಲ.]
                  ಬಹುಶಃ ನಮ್ಮ ನೆಹರೂ ಸಾಹೇಬರಿಗೂ ಇದೇ ತರಹದ ತತ್ವಜ್ಞಾನ ಮೂಡಿತ್ತೇನೊ..ನಮ್ಮ ದೇಶದ ಭೂಮಿ ವಿಶಾಲವಾಗಿದೆ, ಒಂದು ತುಂಡು ಬೇಕಾದರೆ ಹೋಗಲಿ..ಅದಕ್ಕೆ POK ಸೃಷ್ಟಿಯಾಯ್ತು!. ನೀತಿಕತೆಯೇನೆಂದರೆ..ಒಬ್ಬರು ನಮ್ಮನ್ನು ದೂಡಿದರೆ, ನಾವು ಸರಿಯುತ್ತ ಹೋಗಬೇಕು..ಶಾಂತಿಗೆ ಇದು ಅವಶ್ಯಕ!

                  ಉತ್ತರ
                  • krishnappa
                    ನವೆಂ 4 2013

                    ಇತಿಹಾಸದಲ್ಲಿ ಶತಮಾನಗಳ ಹಿಂದೆ ನೂರಾರು ಆಕ್ರಮಣಗಳು, ದೌರ್ಜನ್ಯಗಳು ನಡೆದಿವೆ, ಅವೆಲ್ಲವನ್ನೂ ತೆಗೆದುಕೊಂಡು ನಾವು ನ್ಯಾಯ ಕೇಳುವಂತಿಲ್ಲ, ಕೇಳಿದರೂ ನ್ಯಾಯ ಸಿಗಲಾರದು. ಉದಾಹರಣೆಗೆ ಬ್ರಿಟಿಷರು ಸ್ವಾತಂತ್ರ್ಯ ಹೋರಾಟ ನಡೆಸಿದ ಎಷ್ಟೋ ಭಾರತೀಯರನ್ನು ಕೊಂದಿದ್ದಾರೆ, ಭಾರತದ ಸಂಪತ್ತನ್ನು ಲೂಟಿ ಹೊಡೆದಿದ್ದಾರೆ. ಅದಕ್ಕಾಗಿ ಈಗ ಬ್ರಿಟನ್ನಿನ ಮೇಲೆ ದಂಡೆತ್ತಿ ಹೋಗಿ ಯುದ್ಧ ಮಾಡಲಾಗುತ್ತದೆಯೇ? ಅದಕ್ಕಾಗಿ ಸ್ವಾತಂತ್ರ್ಯಾನಂತರದ ಕಾಲಮಾನವನ್ನು ನಾವು ತೆಗೆದುಕೊಳ್ಳಬೇಕು. ಆಗ ಯಾವ ಸ್ಥಿತಿ ಇತ್ತೋ ಅದನ್ನು ಕಾಯ್ದುಕೊಂಡು ಹೋಗುವುದು ಸಂವಿಧಾನ ಹಾಗೂ ಕಾನೂನನ್ನು ದೇಶ ಅಳವಡಿಸಿಕೊಂಡ ಮೇಲೆ ಎಲ್ಲರ ಜವಾಬ್ದಾರಿಯಾಗಿದೆ. ಯಾವುದೇ ವಿವಾದ ಇದ್ದರೆ ಅದನ್ನು ಬಗೆಹರಿಸಲು ನ್ಯಾಯಾಲಯಗಳಿವೆ ಅಥವಾ ಅದು ನ್ಯಾಯಾಲಯದಲ್ಲಿ ಬಗೆಹರಿಯುವುದಿಲ್ಲ ಎಂದಾದರೆ ಸಂಸತ್ತಿನಲ್ಲಿ ಚುನಾವಣೆಗಳ ಮೇಲೆ ಆರಿಸಿ ಹೋಗಿ ಮಸೂದೆ ಮಂಡಿಸಿ ಅದನ್ನು 2/3 ಬಹುಮತದ ಮೂಲಕ ಪಾಸುಮಾಡಿಸಿಕೊಂಡು ಮುಂದುವರಿಯುವುದು ನಾಗರಿಕ ವಿಧಾನ. ಅದನ್ನು ಮಾಡದೇ ಏಕಾಏಕಿ ಅಮಾಯಕ ಜನರನ್ನು ಧರ್ಮದ, ದೇವರ ಹೆಸರಿನಲ್ಲಿ ಕೆರಳಿಸಿ ಅವರ ಮೂಲಕ ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಮಾಡಿ ದೇಶದಲ್ಲಿ ಗಲಭೆಗಳು ನಡೆಯಲು, ಆಸ್ತಿಪಾಸ್ತಿ ಹಾನಿಯಾಗಲು ಕಾರಣರಾಗುವುದು ನಿಜವಾದ ದೇಶಭಕ್ತರ ಲಕ್ಷಣ ಅಲ್ಲ.

                    ಉತ್ತರ
                    • ವಿಜಯ್ ಪೈ
                      ನವೆಂ 4 2013

                      ಅದರಂತೆಯೇ ಒಂದು ರಾಜ್ಯದ ಜನ ಮೂರು ಸಲ ಆರಿಸಿದ್ದರಿಂದ, ಆ ಜನರ ಆಯ್ಕೆಯನ್ನು ಗೌರವಿಸುವುದು, ಸುಪ್ರಿಂಕೋರ್ಟನ ತೀರ್ಪನ್ನು ಗೌರವಿಸುವುದು ಕೂಡ ನಾಗರಿಕ ವಿಧಾನ, ಲಕ್ಷಣಗಳಲ್ಲಿ ಬರುತ್ತದೆ ಎಂದು ತಿಳಿಯುತ್ತೇನೆ..

                • ನವೆಂ 2 2013

                  > ಹಿಂದೂಗಳು ಹಿರಿಯ ಸಹೋದರನಂತೆ ವಿಶಾಲ ಮನೋಭಾವನೆ ತೋರಿದರೆ ಏನೂ ನಷ್ಟ ಆಗಲಿಕ್ಕಿಲ್ಲ,
                  > ಬದಲಿಗೆ ಬಹಳ ದೊಡ್ಡ ಪ್ರಯೋಜನವೇ ಆಗಬಹುದು. ಹಿಂದೂ ಮುಸ್ಲಿಮರ ನಡುವೆ ಎದ್ದ
                  > ಅಪನಂಬಿಕೆಯ ಗೋಡೆ ಮಾಯವಾಗಿ ಸೌಹಾರ್ದಕ್ಕೆ ಬಹಳ ದೊಡ್ಡ ಕೊಡುಗೆ ಆಗಬಹುದು.
                  ೧೯೪೭ರಲ್ಲಿ “ಮುಸಲ್ಮಾನರಿಗಾಗಿ ಪಾಕಿಸ್ತಾನ” ಎಂಬ ಬೇಡಿಕೆಗೆ ಒಪ್ಪಿಗೆಯಿತ್ತು, ಇನ್ಮುಂದೆ ಕೋಮು ಸಾಮರಸ್ಯವಿರುತ್ತದೆ, ದೊಡ್ಡ ಪ್ರಯೋಜನವಾಗುತ್ತದೆ ಎಂದೇ ನಂಬಿದ್ದರಲ್ಲವೇ?
                  “ಮುಸಲ್ಮಾನರಿಗಾಗಿ ಪಾಕಿಸ್ತಾನ” ನಿರ್ಮಾಣವಾದ ನಂತರವಾದರೂ, ಹಿಂದುಗಳಿಗೆ ಭಾರತದಲ್ಲಿ ಸಂತೋಷ-ಶಾಂತಿ ದೊರಕಬೇಕಿತ್ತಲ್ಲವೇ? ವಿಭಜಿತ ಭಾರತದಲ್ಲಿಯೂ ತಮ್ಮ ಹಕ್ಕುಗಳಿಗಾಗಿ ಬಹುಸಂಖ್ಯಾತ ಸಮಾಜವೊಂದು ಹೋರಾಡಬೇಕಾಗುತ್ತದೆ ಎನ್ನುವ ಸ್ಥಿತಿ ಜಗತ್ತಿನ ಇನ್ಯಾವುದೇ ಭಾಗದಲ್ಲಿ ಇದ್ದರೆ ದಯವಿಟ್ಟು ನಮ್ಮ ಗಮನಕ್ಕೆ ತನ್ನಿ.

                  ನನ್ನ ಪ್ರಾರಂಭದ ಪ್ರಶ್ನೆಗಳಿಗೆ ಇಲ್ಲಿಯವರೆಗೂ ನೀವು ಉತ್ತರಿಸುವ “ದುಸ್ಸಾಹಸ” ಮಾಡಿಲ್ಲದಿರುವುದು ನೋಡಿದರೆ, ನಿಮ್ಮಲ್ಲಿ ಅದಕ್ಕೆ ಉತ್ತರವಿಲ್ಲ ಎಂದೇ ಭಾವಿಸಬೇಕಾಗುತ್ತದೆ.

                  ಉತ್ತರ
            • ನವೆಂ 2 2013

              ಕೃಷ್ಣಪ್ಪನವರೇ, ತಾವು ಬಾಬ್ರಿ ಮಸೀದಿ ಎಂದು ಕರೆಯಲ್ಪಡುವ ಕಟ್ಟಡ ಎಂದು ಕರೆದರೆ ಅದು ನಿಜವಾಗಿಯೂ ಏನಾಗಿತ್ತು ಎಂಬ ಅನುಮಾನ ಮೂಡುವದಿಲ್ಲವೇ? ಆದುದರಿಂದ ದಯವಿಟ್ಟು ಹಾಗೆ ಕರೆಯಬೇಡಿ

              ಉತ್ತರ
              • krishnappa
                ನವೆಂ 2 2013

                ಅಲ್ಲಿ ಹಿಂದೆ ದೇವಸ್ಥಾನ ಇತ್ತು, ಅದನ್ನು ಕೆಡವಿ ಅದರ ಮೇಲೆ ಮಸೀದಿ ಕಟ್ಟಲಾಯಿತು ಎಂದು ವಿವಾದ ಇರುವ ಕಾರಣ ಮತ್ತು ಅದು ಇನ್ನೂ ಇತ್ಯರ್ಥ ವಾಗದಿರುವ ಕಾರಣ ಅದನ್ನು ‘ಬಾಬ್ರಿ ಮಸೀದಿ ಎಂದು ಕರೆಯಲ್ಪಡುವ ಕಟ್ಟಡ’ ಎಂದು ಬರೆಯುತ್ತಿದ್ದೇನೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವಾದ ಕಾರಣ ತಪ್ಪು ತಿಳಿಯಲು ಅವಕಾಶ ಇಲ್ಲ.

                ಉತ್ತರ
                • ನವೀನ
                  ನವೆಂ 2 2013

                  ಕೃಷ್ಣಪ್ಪನವರೇ,
                  ಅಲ್ಲಿ ಹಿಂದೆ ದೇವಸ್ಥಾನವಿದ್ದ ಬಗ್ಗೆ ಈಗ ವಿವಾದವಿಲ್ಲ .ಅದು ಸಾಬೀತಾಗಿದೆ. ಸದ್ಯ ವಿವಾದವಿರುವುದು ಭೂಮಿಯ ಒಡೆತನದ ಬಗ್ಗೆ ಮಾತ್ರ

                  ಉತ್ತರ
            • ನವೆಂ 2 2013

              ಕೃಷ್ಣಪ್ಪನವರೇ, ಇಲ್ಲಿ ಕಿರಿಯ ಸೋದರನನ್ನು ಮುಸ್ಲಿಂ ಎಂಬರ್ಥದಲ್ಲಿ ಬಳಸಿದ್ದಿರಿ. ಕಿರಿಯ ಸಹೋದರ ತಿಳುವಳಿಕೆ ಇಲ್ಲದೆ ಹಟಹಿಡಿದರೆ ಹಿರಿಯ ಸೋದರ ವಿಶಾಲ ಭಾವನೆಯಿಂದ ಆ ಜಾಗವನ್ನು ಬಿಟ್ಟಕೊಡಬೇಕಾಗಿತ್ತು ಎಂದು ಹೇಳಿದ್ದೀರಿ. ಇದು ಕಿರಿಯ ಸೋದರರಾದ ಮುಸ್ಲಿಮರು ತಿಳುವಳಿಕೆ ಇಲ್ಲದೇ ಹಟ ಹಿಡಿಯುತ್ತಾರೆ ಎಂಬ ಭಾವನೆಯನ್ನು ಹುಟ್ಟಿಸುವುದಿಲ್ಲವೇ. ದಯವಿಟ್ಟು ಯಾರನ್ನೂ ಈ ರೀತಿ ಭಾವಿಸುವುದು ಬೇಡ.

              ಉತ್ತರ
              • krishnappa
                ನವೆಂ 2 2013

                ಆಯಿತು ನಿಮ್ಮ ಸಲಹೆಯಂತೆ ‘ತಿಳುವಳಿಕೆ ಇಲ್ಲದೆ’ ಮತ್ತು ‘ಹಠಮಾರಿ ಧೋರಣೆಯಿಂದ’ಎಂಬ ಪದವನ್ನು ಹಿಂತೆಗೆದುಕೊಂಡಿದ್ದೇನೆ. ‘ಹಲವಾರು ವರ್ಷಗಳವರೆಗೆ ಆ ಜಾಗ ಹಾಗೂ ಕಟ್ಟಡ ಮುಸ್ಲಿಮರ ಬಳಿ ಇದ್ದುದರಿಂದ ಅದನ್ನು ಅವರಿಗೆ ಬಿಟ್ಟು ಕೊಡುವುದರಿಂದ’ ಎಂದು ಓದಿಕೊಳ್ಳಬಹುದು.

                ಉತ್ತರ
  4. ನವೆಂ 1 2013

    ಕೃಷ್ಣಪ್ಪನವರೇ, ಅದನ್ನು ಬಾಬ್ರಿ ಮಸೀದಿ ಎಂದು ಕರೆಯಲ್ಪಡುವ ಕಟ್ಟಡ ಎಂದು ಹೇಳಿದರೆ ಆ ಕಟ್ಟಡ ನಿಜವಾಗಿಯೂ ಏನಾಗಿತ್ತು ಎಂಬ ಅನುಮಾನಕ್ಕೆ ಕಾರಣವಾಗುತ್ತದೆ. ಆದ್ದರಿಂದ ದಯವಿಟ್ಟು ಆ ರೀತಿ ಕರೆಯಬೇಡಿ

    ಉತ್ತರ
  5. ಗಿರೀಶ್
    ನವೆಂ 1 2013

    ಸ್ವಾಮಿ ಕೃಷ್ಣಪ್ಪನವರೆ, ಕೇವಲ ೩೦% ಜನ ಭಾಗವಹಿಸುವ ಚುನಾವಣೆಗಳು ಇಡೀ ಭಾರತದ ಮನಸ್ಸನ್ನು, ಸಾಮುದಾಯಿಕ ಪ್ರಜ್ಞೆಯನ್ನು ಪ್ರತಿನಿಧಿಸುವುದಿಲ್ಲ ಎಂಬ ಸಾಮಾನ್ಯಜ್ಞಾನ ತಮ್ಗೆ ತಿಳಿಯಲಿ.
    ನಿಮ್ಮ ಮಾತುಗಳನ್ನು ಕೇಳಲು ಭಾರತಕ್ಕೆ ತಲೆಕೆಟ್ಟಿಲ್ಲ.

    ಉತ್ತರ
    • Nagshetty Shetkar
      ನವೆಂ 1 2013

      People will listen to what they want. That’s why they voted BJP out in recent Karnataka elections. People through out India are realizing the dangers of voting communal forces to power. They don’t want more Godhra like pogroms. They are being guided in the right direction by progressive thinkers like Darga Sir. When someone of his stature says those who want to vote NaMo unfriend him, it sends right signal. It makes people think if they really want to vote NaMo when rational people like Darga Sir and URA are opposed to NaMo.

      ಉತ್ತರ
      • ಗಿರೀಶ್
        ನವೆಂ 2 2013

        ಇಡೀ ಭಾರತದ ಜನತೆ ನಿಮ್ಮ ದರ್ಗಾರವರ ಮಾತಿನಂತೆ ನಡೆಯುತ್ತದಯೆ? 😀 ಅವರ ದರ್ಗಾದಲ್ಲಿರುವವರೂ ನಡೆಯಲಾರರು. ಇಡೀ ಮತದಾರ ದರ್ಗಾ ಅವರ ಮಾತು ಕೇಳುವಂತಿದ್ದರೆ ಅವರೇ ಕಾಂಗೈನ ಪ್ರಧಾನಿ ಅಭ್ಯರ್ಥಿಯಾಗಿರುತ್ತಿದ್ದರು

        ಉತ್ತರ
      • ನವೆಂ 2 2013

        > That’s why they voted BJP out in recent Karnataka elections.
        > People through out India are realizing the dangers of voting communal forces to power.
        > They don’t want more Godhra like pogroms.
        Godhra happened in 2002 and NaMo is elected 3rd time since then,
        So, whom people are electing is very clear.
        And everyone knows why the Karnataka BJP government was voted out of power.
        That is in no way related to Godhra or Gujarat or NaMo or anything outside of Karnataka!

        And regarding who the whole country is preferring is becoming clear day by day.
        Madhya Pradesh, Rajastan, Chattisgarh and New Delhi state elections will be an eye-opener.
        The states of Gujarat, M.P. Goa, Chattisgarh have been judged as the best state government since last 2 years.
        Congress governments (including the UPA-I and UPA-II) have fared very badly and the corruption is skyhigh during Congress regimes.
        It is using CBI as crutches to continue in power.

        ಉತ್ತರ
      • ನವೆಂ 2 2013

        ಶೆಟ್ಕರ್ ರವರೇ, ನಿಜ, ನಮಗೆ ಯಾವುದೇ ಹತ್ಯಾಕಾಂಡ ಮಾಡಿದವರು ಬೇಡ. 2191 ಜನರನ್ನು ( ಸತ್ತವರೆಲ್ಲರೂ ಅಮಾಯಕ ಮುಸ್ಲಿಮರು) ಕೇವಲ 6 ಗಂಟೆಗಳಲ್ಲಿ ಹತ್ಯೆ ಮಾಡಿದ ನೆಲ್ಲಿ ಹತ್ಯಾಕಾಂಡದಂತಹ ಹತ್ಯಾಕಾಂಡ ಮಾಡಿದವರು ಮತ್ತು ಹತ್ಯಾಕಾಂಡದ ಆರೋಪಿಗಳಲ್ಲಿ ಒಬ್ಬನೇ ಒಬ್ಬನಿಗೂ ಶಿಕ್ಷೆಯಾಗದಂತೆ ತಪ್ಪಿಸಿದವರೂ ಬೇಡ.

        ಉತ್ತರ
      • ನವೆಂ 2 2013

        2191 ಅಮಾಯಕ ಮುಸ್ಲಿಮರನ್ನು ಕೇವಲ 6 ಗಂಟೆಗಳಲ್ಲಿ ಹತ್ಯೆ ಮಾಡಿದ ನೆಲ್ಲಿ ಹತ್ಯಾಕಾಂಡದ ಬಗ್ಗೆ ಯಾವೊಬ್ಬ ಬುದ್ಧಿಜೀವಿ, ಸಾಕ್ಷಿಪ್ರಜ್ಞೆ ಇದ್ದವರೂ ಮತ್ತೂ ಮಹಾ ಮಾನವಾತಾವಾದಿಗಳೆಂದು ಕರೆಸಿಕೊಳ್ಳುವವರು ಮತ್ತು ಪ್ರಗತಿಪರರು ಚಕಾರವೆತ್ತಿದ್ದು ನೋಡಿಲ್ಲ. ನೆಲ್ಲಿ ಹತ್ಯಾಕಾಂಡದ ಆರೋಪಿಗಳಲ್ಲಿ ಒಬ್ಬನೇ ಒಬ್ಬನಿಗೂ ಶಿಕ್ಷೆಯಾಗದಂತೆ ಸರಕಾರವೇ ಎಲ್ಲಾ ಕೇಸ್ ಗಳನ್ನು ಹಿಂದೆ ತೆಗೆದುಕೊಂಡಿದ್ದು ಸರಿಯೇ ?

        ಉತ್ತರ
      • ವಿಜಯ್ ಪೈ
        ನವೆಂ 2 2013

        [That’s why they voted BJP out in recent Karnataka elections]
        ಜನ ಬಿಜೆಪಿ ವಿರುದ್ಧ ಮತ ಹಾಕಿದ್ದು..ಕಾಂಗ್ರೆಸ್ ಪರ ಅಲ್ಲ. ಮತ್ತೊಂದೇನೆಂದರೆ ಜನ ಬಿಜೆಪಿ ವಿರುದ್ಧ ಮತ ಹಾಕಿದ್ದು ನಿಮ್ಮ ಈ ‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ಗಳ ಎಂದಿನ ‘ಬಿಜೆಪಿ ಕೋಮುವಾದಿ’ ಎಂಬ ತಮಟೆ, ಪುಂಗಿನಾದಕ್ಕೆ ಮನಸೋತು ಅಲ್ಲ..ಭೃಷ್ಟಾಚಾರದಿಂದ ರೋಸಿ.
        [They are being guided in the right direction by progressive thinkers like Darga Sir. When someone of his stature says those who want to vote NaMo unfriend him, it sends right signal]
        ಒಹೊ..ಮೋದಿಯಂತವರ ಮೇಲಿನ ಪ್ರೀತಿಗಾಗಿ, ದರ್ಗಾರಂತಹ ಮಹಾನುಭಾವರ, ಉನ್ನತರ ಸ್ನೇಹ ಕಳೆದುಕೊಳ್ಳುವುದು ಮಹಾನ ದೌರ್ಭಾಗ್ಯವೆ!. ಪಾಪ..ನಮ್ಮ ಲತಾಮಂಗೇಶ್ಕರರಿಗೆ ಇದು ಗೊತ್ತಿರಲಿಲ್ಲ..ನಿನ್ನೆಯಿಂದ ಬಹುಶಃ ದರ್ಗಾರವರು ಲತಾ ಮಂಗೇಶ್ಕರ್ ಹಾಡುಗಳನ್ನು ಕೇಳುವುದನ್ನು ನಿಲ್ಲಿಸಿರಬಹುದು.
        [It makes people think if they really want to vote NaMo when rational people like Darga Sir and URA are opposed to NaMo.]
        ಹಾ…ದೇಶದ ಸಾಕ್ಷಿಪ್ರಜ್ಞೆಗಳು!!. ಜನರು ತಮ್ಮ ಆತ್ಮ ಮುಟ್ಟಿ ನೋಡಿಕೊಳ್ಳುವಂತೆ ಮಾಡುವ ಉನ್ನತ ಮಟ್ಟದ ಮಹಾನುಭಾವರು.

        ಉತ್ತರ
        • Nagshetty Shetkar
          ನವೆಂ 2 2013

          Mr. Vijay, this is your opinion. Do you have any scientific evidence for the claims you have made?

          Darga Sir will not accept friend request from Lataji on Facebook, I’m sure.

          ಉತ್ತರ
          • ವಿಜಯ್ ಪೈ
            ನವೆಂ 2 2013

            [Mr. Vijay, this is your opinion. Do you have any scientific evidence for the claims you have made? ]
            ವೈಜ್ಞಾನಿಕ ಆಧಾರ?? ಅಂದರೆ ‘‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ಗಳು ನುಡಿಸಿದ ‘ಬಿಜೆಪಿ ಕೋಮುವಾದಿ’ ಎಂಬ ಪುಂಗಿನಾದವು ಇಂತಿಷ್ಟೆ ತರಂಗಾಂತರದಲ್ಲಿ ನುಡಿಸಲ್ಪಟ್ಟು, ಮತದಾರರ ಪ್ರಚೋದನೆಗೊಂಡಿದ್ದ ರಸದೂತಗಳನ್ನು ತಣಿಸಿ, ಅಶಕ್ತಗೊಂಡಿದ್ದ ನ್ಯೂರಾನ್ ಗಳನ್ನು ಉದ್ದಿಪನಗೊಳಿಸಿ, ಇತಿಹಾಸದ ಅರಿವನ್ನು ಮನಃಪಟಲದ ಮುಂದೆ ಮೂಡಿಸಿ..ಬಿಜೆಪಿಯ ವಿರುದ್ದ ಮತ ಹಾಕುವಂತೆ ಮಾಡಿತು’ ಎಂಬಂತಹ ವೈಜ್ಞಾನಿಕ ದಾಖಲೆಯೆ ಗುರುಗಳೆ? ಅಂತದ್ದಿಲ್ಲ ನನ್ನ ಹತ್ತಿರ..ಆದರೆ ಮತದಾನದ ಪ್ರಮಾಣದ ಅಂಕಿ-ಅಂಶವಿದೆ ಪುಂಗಿನಾದದ ಅಸಫಲತೆ ಗೊತ್ತು ಮಾಡುವಂತದ್ದು..ಇಲ್ಲಿದೆ ನೋಡಿ.
            ಕರಾವಳಿ ಭಾಗದಲ್ಲಿ ಬಿಜೆಪಿ ಹೋದ ಚುನಾವಣೆಗಿಂತ (೨೦೦೮) ಶೆ.೭ ರಷ್ಟು ಕಡಿಮೆ ಮತ ತೆಗೆದುಕೊಂಡಿದೆ..ಕಾಂಗ್ರೆಸ ಮತಗಳಿಕೆಯ ಪ್ರಮಾಣ ಕೇವಲ ಶೆ.೧.೨ ರಷ್ಟು ಹೆಚ್ಚಾಗಿದೆ. ಹಳೆ ಮೈಸೂರು ಪ್ರದೇಶದಲ್ಲಿ ಬಿಜೆಪಿ ಶೆ.೧೪ ರಷ್ಟು ಕಡಿಮೆ ಮತ ತೆಗೆದುಕೊಂಡರೆ, ಕಾಂಗ್ರೆಸ್ ಗಳಿಕೆ ಶೆ.೨ ರಷ್ಟು. . ಹೈದರಾಬಾದ್-ಕರ್ನಾಟಕದಲ್ಲಿ, ಮುಂಬಯಿ-ಕರ್ನಾಟಕದಲ್ಲಿ ಬಿಜೆಪಿ+ಕೆಜೆಪಿ+ಬಿಎಸ್ಆರ ಪಕ್ಷಗಳ ಒಟ್ಟು ಮತಗಳಿಕೆ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚೆ ಇದೆ. ಕರ್ನಾಟಕ ರಾಜ್ಯಾದಂತ ತೆಗೆದುಕೊಂಡರೆ ಕಾಂಗ್ರೆಸ್ ಮತ ಗಳಿಕೆಯ ಹೆಚ್ಚಳ ಶೆ ೨.೨ ರಷ್ಟು ಮಾತ್ರ.

            [Darga Sir will not accept friend request from Lataji on Facebook, ]
            ಎಂತಹ ದೌರ್ಭಾಗ್ಯ ಲತಾ ಮಂಗೇಶ್ಕರ ಅವರದ್ದು .. ಭಾರತ ರತ್ನ ಪಡೆದರೇನು ಬಂತು? ನರೇಂದ್ರ ಮೋದಿಯಂತಹ ಒಬ್ಬ ಯಕಃಶ್ಚಿತ್ ವ್ಯಕ್ತಿಯ ಜೊತೆ ಗುರುತಿಸಿಕೊಂಡಿದ್ದರಿಂದ..ಮುಂದೆಂದೊ ಒಬ್ಬ ಮಹಾನ ಅನುಭಾವಿಯ ಸ್ನೇಹಕ್ಕೆ ಪಾತ್ರರಾಗುವ ಅವಕಾಶದಿಂದ ವಂಚಿತವಾಗಬೇಕಾಯಿತು! 😦

            ಉತ್ತರ
          • ನವೀನ
            ನವೆಂ 2 2013

            “Darga Sir will not accept friend request from Lataji on Facebook, I’m sure.” 😀 😀

            ಲತಾಜಿಗೆ ಮಾಡಲಿಕ್ಕೆ ಬೇರೇನು ಕೆಲಸವಿಲ್ಲ ಅಂತ ಅವ್ರಿಗೆ ಸ್ನೇಹಕೋರಿಕೆ ಕಳಿಸುತ್ತಾರೆಯೇ ಶೆಟ್ಕರ್ ಸರ್?
            ಇಷ್ಟು ಅಸಹನೆ ಇದೆಯೇ ನಿಮ್ಮ ಗುರುಗಳಲ್ಲಿ.ಅದಕ್ಕೆ ನಾನು ಹೇಳಿದ್ದು ನೀವಿಬ್ಬರು ಜೊತೆಯಾಗಿ ಹಿಮಾಲಯಕ್ಕೆ ಹೋಗಿ ಬನ್ನಿ ಅಂತ.

            ಉತ್ತರ
            • Nagshetty Shetkar
              ನವೆಂ 3 2013

              Mr. Naveen, Darga Sir has great respect for Lataji as an artist. But her political views need not be accepted based on her musical achievements. She has said Modi should become PM. That’s a great error in judgment. She needs to be educated about Godhra pogrom and the horrors of NaMo style development. If Lataji is willing to listen, I’m sure Darga Sir will be magnanimous to educate her on politics. On the other hand if she’s using her popularity to canvas for NaMo, then Darga sir will oppose her.

              ಉತ್ತರ
              • ನವೆಂ 3 2013

                ನಾಗಶೆಟ್ಟಿ ಶೆಟ್ಕರ್ ರವರೇ, 2191 ಅಮಾಯಕ ಮುಸ್ಸಿಮರನ್ನು ಹತ್ಯೆ ಮಾಡಿದ ನೆಲ್ಲಿ ಹತ್ಯಾಕಾಂಡ ಮತ್ತು ಆ ಹತ್ಯಾಕಾಂಡದಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗದಂತೆ ಎಲ್ಲಾ ಕೇಸ್ ಗಳನ್ನು ವಾಪಸ್ ತೆಗೆದುಕೊಂಡವರ ಬಗ್ಗೆ ದರ್ಗಾ ಸರ್ ಅವರ ಅಭಿಪ್ರಾಯವೇನು ?

                ಉತ್ತರ
                • Nagshetty Shetkar
                  ನವೆಂ 3 2013

                  Mr. Mahesh, Nellie deaths were a consequence of tribal conflict during a period of great political turmoil in Assam. The situation in Gujarat at the time of Godgra pogrom is no way comparable to that of Nellie.

                  ಉತ್ತರ
                  • ನವೆಂ 3 2013

                    ಶೆಟ್ಕರ್ ರವರೇ, ಹಾಗಾದರೆ ಮಹಾಮಾನವತಾವಾದಿಗಳು , ಪ್ರಗತಿಪರರು, ಸಾಕ್ಷಿಪ್ರಜ್ಞೆ ಉಳ್ಲವರ ಪ್ರಕಾರ ನೆಲ್ಲಿ ಹತ್ಯಾಕಾಂಡದಲ್ಲಿ 2191 ಮುಸ್ಲಿಮರನ್ನು ಕೊಂದವರ ಮೇಲಿನ ಎಲ್ಲಾ ಕೇಸ್ ಗಳನ್ನು ಸರಕಾರವೇ ವಾಪಸ್ ತೆಗೆದುಕೊಂಡಿದ್ದು ಸರಿ ಅಲ್ಲವೇ? ಮಾನವತಾವಾದಿಗಳ ಪ್ರಕಾರ ಒಬ್ಬನೇ ಒಬ್ಬನಿಗೂ ಶಿಕ್ಷೆಯಾಗದಂತೆ ಸರ್ಕಾರವೇ ತಡೆದರೂ ಅದು ಸರಿಯಾಗುತ್ತದೆ ಅಲ್ಲವೇ? ಟ್ರೈಬಲ್ ಕಾನ್ ಫ್ಲಿಕ್ಟ್ ಆದರೆ ಇವುಗಳೆಲ್ಲವೂ ಸರಿಯಾಗುತ್ತದೆ ಅಲ್ಲವೇ ?

                    ಉತ್ತರ
                    • ನವೆಂ 3 2013

                      ಟ್ರೈಬಲ್ ಕಾನ್ ಪ್ಲಿಕ್ಟ್ ಪರಿಣಾಮವಾಗಿ ಎಷ್ಟೇ ದೊಡ್ಡ ಹತ್ಯಾಕಾಂಡ ನಡೆದರೂ ಹತ್ಯೆ ಮಾಡಿದವರ ಮೇಲಿನ ಎಲ್ಲಾ ಕೇಸ್ ಗಳನ್ನು ಸರಕಾರ ವಾಪಸ್ ತೆಗೆದುಕೊಳ್ಳಬಹುದು ಅಲ್ಲವೇ

                    • Nagshetty Shetkar
                      ನವೆಂ 3 2013

                      Mr. Mahesh, all of you in Nilume are of the same type. I’m tired of trying to make sense to you. You people are trolls and keep asking irrelevant questions. Regarding Nellie, you can’t blame anyone till Tripathi report becomes public. Why don’t you file a RTI petition to get hold of that report?

                      I’ve been given another assignment and I’ll be responding intermittently to your followup questions. The country is facing fascist threat from several corners and I’ve a lot of work to do to negate growing fascism. My energy should not be wasted on trolls you see. BTW I’ve sent petition to CM on Nilume.

                    • BTW I’ve sent petition to CM on Nilume

                      ಶೆಟ್ಕರ್ ಅವರೇ, ಅಂತು ನಿಮ್ಮೊಳಗಿನ ಫ್ಯಾಸಿಸ್ಟ್ ಹೊರಬಂದ ಅನ್ನಿ…! ಶುಭವಾಗಲಿ 🙂

                    • ನವೆಂ 3 2013

                      ಶೆಟ್ಕರ್ ರವರೇ, ಅಂತೂ ನಿಲುಮೆಯನ್ನು ಮುಚ್ಚಿಸಿಯಾದರೂ 2191 ಅಮಾಯಕ ಮುಸ್ಲಿಮರ ಹತ್ಯೆ ಮಾಡಿದ ನೆಲ್ಲಿ ಹತ್ಯಾಕಾಂಡದ ಬಗ್ಗೆ ಮಾತನಾಡುವದನ್ನು ತಡೆಯಲು ಪ್ರಯತ್ನಿಸುತ್ತಿದ್ದೀರಿ. ನಿಮ್ಮಂತಹ ಮಹಾಮಾನವಾತಾವಾದಿಗಳು, ಸಾಕ್ಷಿಪ್ರಜ್ಞೆ ಉಳ್ಳವರು ನೆಲ್ಲಿ ಹತ್ಯಾಕಾಂಡದ ಬಗೆಗೆ ಆರ್ ಟಿ ಐ ಹಾಕಲು ಸಾಧ್ಯವೇ ಇಲ್ಲ ಎಂದಾದರೆ ನಾವಾದರೂ ಹಾಕುತ್ತೇವೆ. ನೆಲ್ಲಿ ಹತ್ಯಾಕಾಂಡದಲ್ಲಿ ಸತ್ತ ಅಮಾಯಕ ಸಾವಿರಾರು ಮುಸ್ಲಿಮರಿಗೆ ನ್ಯಾಯ ಕೊಡಲು ಪ್ರಯತ್ನಿಸುತ್ತೇವೆ. ತ್ರಿಪಾಠಿ ರಿಪೋರ್ಟನ್ನು ಪಬ್ಲಿಕ್ ಮಾಡಲು ನೀವೂ, ದರ್ಗಾರಂತಹ ಪ್ರಗತಿಪರರು ಯಾವುದೇ ಹೋರಾಟ ಮಾಡದಿದ್ದರೆ ನಾವಾದರೂ ಹೋರಾಟ ಮಾಡಲೇಬೇಕು. ಆಯಿತು ನೀವು ನೆಲ್ಲಿ ಹತ್ಯಾಕಾಂಡದ ಬಗ್ಗೆ ಮಾತನಾಡುವುದು ಬೇಡ, ಅದರಿಂದ ನಿಮ್ಮ ಅಮೂಲ್ಯವಾದ ಎನರ್ಜಿ ವ್ಯರ್ಥವಾಗಿ ಹೋದೀತು.

                    • Nagshetty Shetkar
                      ನವೆಂ 4 2013

                      Mr. Mahesh, any massacre is a crime against entire humanity and justice should be given to all who suffered. That’s why all of us condemned Sikh massacre of 1984. Sonia Gandhi and Manmohan Singh both apologized because of our pressure. NaMo didn’t apologize for Godhra and that’s scary.

                      Nellie incident happened many years ago and is not in public memory these days. I don’t know much about Nellie incident. Darga Sir might be able to say something on it. We should all join hands to prevent Godhra Ike incidents in the future.

                    • ನವೆಂ 4 2013

                      ಶೆಟ್ಕರ್ ರವರೇ, ಒಬ್ಬರ ಕಾಲದಲ್ಲಿ ಒಂದು ಹತ್ಯಾಕಾಂಡ ನಡೆಯಿತು, ಅದಾಗಿ ಎಷ್ಟೋ ವರ್ಷಗಳ ನಂತರ ಇನ್ಯಾರೋ ಅದಕ್ಕೆ ಕ್ಷಮೆ ಕೇಳುತ್ತಾರೆ. ಅಪರಾಧಿಗಳು ಹಾಗೇ ಅಡ್ಡಾಡಿಕೊಂಡು ಇರುತ್ತಾರೆ. ಇದು ನಿಮ್ಮ ಪ್ರಕಾರ ನೀವು ಹತ್ಯಾಕಾಂಡದಲ್ಲಿ ಸತ್ತವರಿಗೆ ಕೊಡಿಸುವ ನ್ಯಾಯವೇ?, ಸಿಖ್ ಹತ್ಯಾಕಾಂಡಕ್ಕಿಂತ ಕೇವಲ ಒಂದು ವರ್ಷ ಮೊದಲು ನಡೆದದ್ದು ನೆಲ್ಲಿ ಹತ್ಯಾಕಾಂಡ. 2191 ಅಮಾಯಕ ಮುಸ್ಲಿಮರು ಹತ್ಯೆಗೈಯಲ್ಪಟ್ಟರು. ಆದರೆ ಈ ಹತ್ಯಾಕಾಂಡ ಜನಮಾನಸದಿಂದಲೇ ಮರೆಯಾಯಿತು. ಯಾಕೆ? ಪ್ರಶ್ನೆಗಳನ್ನು ಎತ್ತಬೇಕಾದವರು ನಿಷ್ಕ್ರಿಯರಾಗಿ ಬಾಯಿ ಮುಚ್ಚಿಕೊಂಡು ಕುಳಿತಿದ್ದರಿಂದಲೇ ಅಲ್ಲವೇ?

                    • ನವೆಂ 4 2013

                      Mr. Mahesh, why don’t you ask NaMo and his cyber army to fight for the cause of Nellie victims? What have they done to give justice to the victims?

                    • ನವೆಂ 4 2013

                      ಶೆಟ್ಕರ್ ರವರೇ, ಅಂದರೆ ನೀವು ಮತ್ತು ನಿಮ್ಮ ತಂಡ ನೆಲ್ಲಿ ಹತ್ಯಾಕಾಂಡದ ಬಲಿಪಶುಗಳಿಗೆ ನ್ಯಾಯ ಕೊಡಿಸಲು ಬರುವದಿಲ್ಲ. ಅದನ್ನು ಇನ್ಯಾರೋ ಮಾಡಬೇಕು. ನಿಮ್ಮಂತಹ ಪ್ರಗತಿಪರರನ್ನು ಈ ಬಗ್ಗೆ ಕೇಳಿದ್ದೇ ನನ್ನ ತಪ್ಪು. ನಿಮ್ಮ ಕಾಳಜಿ ಏನಿದ್ದರೂ ಗುಜರಾತ್ ನಲ್ಲಿ ಸತ್ತವರ ಬಗ್ಗೆ ಮಾತ್ರ. ಆಸ್ಸಾಂ ನೆಲ್ಲಿಯಲ್ಲಿ ಸತ್ತ 2191 ಮುಸ್ಲಿಮರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಒಂದು ಕಣ್ಣಿಗೆ ಸುಣ್ಣ , ಇನ್ನೊಂದು ಕಣ್ಣಿಗೆ ಬಣ್ಣ. ನೀವು ಮುಂದೆ ಸಾವಿರಾರು ಅಲ್ಪಸಂಖ್ಯಾತರನ್ನು ಕೊಂದು ಅದಕ್ಕೆ ಟ್ರೈಬಲ್ ಕಾನ್ ಫ್ಲಿಕ್ಟ್ ಎಂದು ಹೆಸರು ಕೊಟ್ಟು ಎಲ್ಲಾ ಅಪರಾಧಿಗಳನ್ನು ಬಿಡಿಸುವದಿಲ್ಲ ಎಂದು ಯಾವ ಗ್ಯಾರಂಟಿ? ಸಾವಿರಾರು ಅಮಾಯಕ ಮುಸ್ಲಿಮರು ಸತ್ತ ನೆಲ್ಲಿ ಹತ್ಯಾಕಾಂಡದ ಬಗ್ಗೆ ಮಾತನಾಡಲು ಪ್ರಗತಿಪರರಿಗೆ ನೂರೆಂಟು ನೆಪ.

                    • Nagshetty Shetkar
                      ನವೆಂ 5 2013

                      No Mr. Rakesh, sending petitions is democratic. Government has the right to ban web-sites if they are actively promoting fascism.

                    • ನಿಮ್ಮ ಪೆಟಿಷನ್ನಿಗೆ ಶುಭವಾಗಲಿ 😀

              • ವಿಜಯ್ ಪೈ
                ನವೆಂ 3 2013

                ನವೀನ..ಕೇಳಿದ್ರಾ? ಹಿರಿಗುರುಗಳ ಪರವಾಗಿ ವಕ್ತಾರರು ಹೇಳಿಕೆ ಕೊಟ್ಟಿದ್ದಾರೆ.

                [She needs to be educated about Godhra pogrom and the horrors of NaMo style development. If Lataji is willing to listen, I’m sure Darga Sir will be magnanimous to educate her on politics.]
                ಯಾವುದಕ್ಕೂ ಲತಾಜಿಯವರು ಬೇಗ ನಿರ್ಧಾರ ತೆಗೆದು ಕೊಳ್ಳಬೇಕು..ಇಲ್ಲವಾದರೆ ಆಮೇಲೆ ಪಶ್ಚಾತಾಪ ಪಡಬೇಕಾಗಿ ಬರುತ್ತೆ. ಇದೇ ಮಾತು ಕೆ.ಪಿ.ಎಸ್ ಗಿಲ್ ಗೂ ಅನ್ವಯಿಸುತ್ತೆ. ಹಿರಿಗುರುಗಳ ಜೊತೆಗೆ ವೈಯುಕ್ತಿಕ ಭೇಟಿ ಮತ್ತು ಪಾಠ ಹೇಳಿಸಿಕೊಳ್ಳಲು ಇದು ಕೊನೆಯ ಅವಕಾಶ. ಸ್ವಲ್ಪ ಸಮಯದ ನಂತರ, ನಮ್ಮ ಹಿರಿ ಗುರುಗಳಿಗೆ ವೈಯುಕ್ತಿಕವಾಗಿ ತಿದ್ದಲು ಟೈಮ್ ಕೂಡ ಸಿಗೊಲ್ಲ.. ಕ್ಲಾಸ್ ಗಳನ್ನು, ಆಮೇಲೆ ಬಹಿರಂಗ ಪ್ರವಚನ ಸಭೆಗಳನ್ನು ನಡೆಸಬೇಕಾಗುತ್ತದೆ. ಆದ್ದರಿಂದ ಲತಾ ಮಂಗೇಶ್ಕರ್ ಅವರು ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಮತ್ತೊಮ್ಮೆ ನನ್ನ ಬಿನ್ನಹ.

                ಉತ್ತರ
        • Nagshetty Shetkar
          ನವೆಂ 2 2013

          Mr. Vijay, what is your problem? Why do you have so much hatred for progressive thinkers? What wrong have they done? Have they orchestrated Godhra like pogroms? Have they vilified Muslims? Have they taken sides with either the mining lobby or the real estate thugs? Have they watched porn videos in public? Have they sold their souls to Mutths? Have they practiced untouchability? Have they sold dreams of development? What makes you hate them so much?

          ಉತ್ತರ
          • ವಿಜಯ್ ಪೈ
            ನವೆಂ 3 2013

            [Mr. Vijay, what is your problem? Why do you have so much hatred for progressive thinkers? What wrong have they done?]
            ಹ್ಮ..ಏಕೆ ಅಂತಿರ? ನನಗೆ ಅಸಹ್ಯವಿರುವುದು, ಈಗಿನ ಕೆಲವು ಅಯೋಗ್ಯ ವ್ಯಕ್ತಿಗಳು progressive thinker, rationalist ಪದವನ್ನು ತಮಗೆ ತಾವೇ ಅಪಾದಿಸಿಕೊಂಡಿರುವುದಕ್ಕೆ, ಆ ಶಬ್ದದ ಮಾನ ಕಳೆಯುತ್ತಿರುವುದಕ್ಕೆ!. ಹೊಟ್ಟೆಪಾಡಿಗಾಗಿ, ತಮ್ಮ ವೈಯುಕ್ತಿಕ ಅಜೆಂಡ ಹೇರಲು ಈ progressive thinker, rationalist ಪದಗಳನ್ನು ಮುಫತ್ತಾಗಿ ಬಳಸಿಕೊಳ್ಳುತ್ತಿರುವ ಈ ಜನ ನಿಜವಾದ progressive thinker, rationalist ಗಳು, ಕಾಯಕಯೋಗಿಗಳು ಆಗಿದ್ದಂತಹ ಕಾರಂತ, ಏಚ್ಚೆನ್ ಮುಂತಾದವರ ಪಕ್ಕದಲ್ಲಿ ನಿಲ್ಲುವ ಕಿಂಚಿತ್ ಯೋಗ್ಯತೆಯೂ ಇಲ್ಲದವರು.

            [Have they orchestrated Godhra like pogroms? Have they vilified Muslims? ]
            ಅದನ್ನೇ ಮೇವಾಗಿ ಮಾಡಿಕೊಂಡಿದ್ದಾರೆ..ಕಾಣಿಸೊಲ್ಲವೆ?

            [Have they taken sides with either the mining lobby or the real estate thugs? ]
            ಸ್ವಾಮಿ..ಈಗ ಯಾವ ಟೆಂಟ್ ಲ್ಲಿ ಇದಾರೆ ಅವರು? ಕೇಂದ್ರದ ಹಗರಣಗಳನ್ನು ನೋಡಿದ ಮೇಲೆ ‘ಬೃಷ್ಟಾಚಾರ ಕ್ಕಿಂತ ಮುಖ್ಯ ವಿಷಯ ಕೋಮುವಾದ’ ಎನ್ನುವ ಅವರ ಅಣಿಮುತ್ತುಗಳು ಕೇಳಿಸಲಿಲ್ಲವೆ ನಿಮಗೆ? ಅಥವಾ ಸೀಸ ಸುರಿದಿದ್ದಾರೆ?
            ನಿಮಗೆ ಹೆಚ್ಚಾಗಿ ಗುಲ್ಬರ್ಗಾನೆ ರಾಜ್ಯ, ಕರ್ನಾಟಕವೇ ದೇಶ ಅನಿಸಿರಬೇಕು!

            [Have they watched porn videos in public?]
            ಇದು ಕೂಡ progressive thinker, rationalist ಸರ್ಟಿಫಿಕೇಟ್ ಕೊಡುವಲ್ಲಿ ಬೇಕಾಗಿರುವ ಅರ್ಹತೆ ಎಂದಾಯಿತು!..ಪಬ್ಲಿಕ್ ಲ್ಲಿ ಪೊರ್ನ್ ವಿಡಿಯೊ ನೋಡಲ್ಲ ಅಂದರೆ ನೀವು progressive thinker, rationalist !..ಸುಲಭವಾಗಿದೆ ದಾರಿ.

            [Have they sold their souls to Mutths?
            ಹಾ..ಪ್ರೊಗ್ರೆಸ್ಸಿವ್ ಥಿಂಕರ್ಸ್ ಅಂದರೆ ‘ನಿಮ್ಮ’ ಗುಂಪಿನ ಜೊತೆ ಇರುವವರು ಎಂದಾಯಿತು!..

            [Have they practiced untouchability?]
            ಇದು ಕೂಡ ಇನ್ನೊಂದು ಅರ್ಹತೆ ಪ್ರೊಗ್ರೆಸ್ಸಿವ್ ಥಿಂಕರ್ ಆಗಲು..ಈಗಿನ ದಿನಗಳಲ್ಲಿ ಉಳಿದವರೆಲ್ಲ ಜನರನ್ನು ಕೋಲಿನಿಂದ ಮುಟ್ಟುತ್ತಿದ್ದಾರೆ!

            [Have they sold dreams of development?]
            ಅಭಿವೃಧ್ಧಿಯ ಕನಸಿದ್ದರೆ ತಾನೆ ಮಾರೊ ವಿಚಾರ ಬರುವುದು? ಮತ್ತೊಂದೇನೆಂದರೆ ಜನ, ದೇಶ ಅಭಿವೃದ್ಧಿಯಾದರೆ ಇವರ ಕೆಲಸವೇನು?

            ಕೊನೆಯದಾಗಿ ಗುರುಗಳೆ..ತಾವು ಪ್ರಶ್ನೆ ಕೇಳುತ್ತೀರಿ..ಇದಕ್ಕೆ ಉತ್ತರ ಕೊಡಿ ಮೊದಲು ಅಂತೀರಿ..ಉತ್ತರ ಕೊಟ್ಟ ಮೇಲೆ, ಅದನ್ನು ಬಿಟ್ಟು..ಇನ್ನೊಂದು ಕಡೆ ಹೋಗಿ ಇನ್ನೊಂದು ನಾಲ್ಕು ಅಸಂಬದ್ಧ ಪ್ರಶ್ನೆ ಕೇಳುತ್ತಿರಿ..ನೀವೇನಾದ್ರೂ ಕಪ್ಪೆಯಿಂದ ಸ್ಪೂರ್ತಿ ಪಡೆದವರೆ?

            ಉತ್ತರ
            • Nagshetty Shetkar
              ನವೆಂ 3 2013

              Mr. Vijay, you have asked me “ನೀವೇನಾದ್ರೂ ಕಪ್ಪೆಯಿಂದ ಸ್ಪೂರ್ತಿ ಪಡೆದವರೆ?”. The answer is no. I’m inspired by Darga Sir, do you have any doubts? I’m a humble Sharana walking in the path of Vachanakaras behind Darga Sir.

              ಉತ್ತರ
            • Nagshetty Shetkar
              ನವೆಂ 3 2013

              Mr. Vijay, neither Darga Sir nor other progressive thinkers like Chenni Sir have done any wrong in public life. Darga Sir, Chenni Sir, Vishwaradhya Sir and others earn their bread by hard work and not by unethical means. If you have any proof to prove your claim that progressive thinkers are earning their bread in unethical ways, please make it public. Who has stopped you from doing so?? Use Nilume to expose the ethical errors of those whom you criticize. You are simply jealous of Darga Sir’s stature and hate him because he punctured CSLC balloon on Avadhi.

              ಉತ್ತರ
              • ವಿಜಯ್ ಪೈ
                ನವೆಂ 3 2013

                ಗುರುಗಳೆ..ನೀವು ಮೇಲೆ ಹೇಳಿದ ಮೂರು ಜನ ಕರ್ನಾಟಕದಲ್ಲಿ ಎಷ್ಟು ಜನರಿಗೆ ಗೊತ್ತು ಎಂದು ಸಣ್ಣದೊಂದು ಸಮೀಕ್ಷೆ ಮಾಡಿ..ಆಮೇಲೆ ಅವರ ‘ಉನ್ನತಿ’ ಯನ್ನು ನೋಡಿ ಜನ ಕರುಬುತ್ತಿದ್ದಾರೆಯೇ ಎಂದು ಅನುಮಾನ ಪಡಬಹುದು!.

                [You are simply jealous of Darga Sir’s stature and hate him because he punctured CSLC balloon on Avadhi.]
                ಆ ಪ್ರತಿಕ್ರಿಯೆಗಳು ಇನ್ನೂ ಅಲ್ಲೇ ಇವೆ..ಯಾರು ಪಂಕ್ಚರ್ ಆಗಿದ್ದಾರೆ ಎಂಬುದನ್ನು ತೋರಿಸಲು..:)..ಬಟ್ಟಂಗಿ ಚಸ್ಮಾ ತೊಟ್ಟವರಿಗೆ ಏನು ಹೇಳುವುದು ಗುರುಗಳೆ..

                ಉತ್ತರ
                • Nagshetty Shetkar
                  ನವೆಂ 3 2013

                  Mr. Vijay, everyone knows Darga Sir. He is a Basavashree award winner. He is well-known for his groundbreaking journalistic work in Lankesh Patrike. He gets a dozen invitations from foreign countries every day to visit those countries and give lectures. URA is a household name for bringing reputation to Kannada in national and international circles. Chenni Sir is Kannada’s finest mind and known by all in the literature circle for his contributions to literary criticism and activism. Of course none of them are Amitabh Bachchan or Sachin Tendulkar. But they are known by a large section of our society. If you have doubts, you can yourself conduct a survey and convince yourself. Why should I do a survey???

                  ಉತ್ತರ
                  • ವಿಜಯ್ ಪೈ
                    ನವೆಂ 4 2013

                    [ If you have doubts, you can yourself conduct a survey and convince yourself. Why should I do a survey???]
                    ನಿಮ್ಮ ಬಳಗದ ಜಾಗತಿಕ ಪ್ರಸಿದ್ದಿಯ ಬಗ್ಗೆ ಹೇಳಿಕೊಳ್ಳುತ್ತಿರುವವರು ನೀವು..ಇಲ್ಲಿ ಎಷ್ಟೊ ಜನರಿಗೆ ಅವರುಗಳ ಬಗ್ಗೆ ಮಾಹಿತಿಯಿಲ್ಲ. ಅಂದಾಗ ಗುರುಗಳೆ…ಪ್ರಸಿದ್ಧಿಯನ್ನು ಪರಾಮರ್ಶಿಸಿಕೊಳ್ಳಲು ಸರ್ವೆ ಮಾಡಬೇಕಾದವರು ನೀವೊ ಅಥವಾ ನಾನೊ?.

                    [Mr. Vijay, how long can you laugh at progressive thinkers? You know what happened to CSLC? One by one fascists will be wiped out. Keep laughing till then.]
                    ಗುರುಗಳೆ..ಇದು how long can you laugh at pseudo-progressive thinkers? ಅಂತ ಆಗಬೇಕು. ಮತ್ತೊಂದೇನೆಂದರೆ..ತುಂಬಾ ಹಗಲುಗನಸು ಕಾಣುವುದು ಡೆಂಜರ್ ಅಂತ ಕೇಳಿದ್ದೀನಿ ಗುರುಗಳೆ..

                    ಉತ್ತರ
              • ವಿಜಯ್ ಪೈ
                ನವೆಂ 3 2013

                ಗುರುಗಳೆ…
                ಧನ್ಯವಾದಗಳು..ಕಾಲ-ಕಾಲಕ್ಕೆ ಇಂತಹ ಹಾಸ್ಯ ಲೇಖನಗಳ ಲಿಂಕುಗಳನ್ನು ಇಲ್ಲಿ ತಂದು ಹಾಕುತ್ತೀರಿ..ಸ್ವಘೋಶಿತ ‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ ಗಳ ಹಾಸ್ಯ ಓದುವಂತಿರುತ್ತದೆ :). ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಲತಾ ಮಂಗೇಶ್ಕರರಿಗೂ..ಕುಮಾರಸ್ವಾಮಿಯಿಂದ ‘ಯಾರ್ರಿ ಈ ಅನಂತಮೂರ್ತಿ’ ಎಂದು ಕರೆಸಿಕೊಂಡ ಮಹಾನುಭಾವರಿಗೆ ಹೋಲಿಸಿದ್ದು ಸಕತ್ತಾಗಿದೆ. ಜನರಿಗೆ ತಮ್ಮದೇ ಆದ ಸ್ವಲ್ಪ ಸ್ವಂತ ವಿಚಾರವಿದ್ದರೆ ಗೊತ್ತಾಗುತ್ತದೆ..ಲತಾ ಮಂಗೇಶ್ಕರ್ ಅಭಿಪ್ರಾಯಕ್ಕೆ ವಿರುದ್ಧ ಹೇಳಿಕೆ ಯಾಕೆ ಕೊಡಲಿಲ್ಲ ಎಂದು..ಅದನ್ನೇ ಮ್ಯಾಚುರಿಟಿ ಎಂಬಂತೆ ಬಿಂಬಿಸಲು ಹೊರಟ ಭಟ್ಟಂಗಿಗಳಿಗೆ ಎಂದಿಗೂ ಮ್ಯಾಚುರಿಟಿ ಬರುವುದಿಲ್ಲ! 🙂

                ಉತ್ತರ
                • Nagshetty Shetkar
                  ನವೆಂ 3 2013

                  Mr. Vijay, how long can you laugh at progressive thinkers? You know what happened to CSLC? One by one fascists will be wiped out. Keep laughing till then.

                  ಉತ್ತರ
                • ರವಿ
                  ನವೆಂ 3 2013

                  @ವಿಜಯ್, ಮೂರ್ತಿ ಸಾಹೇಬರು ಒಂದು ಕಡೆ ಮೋದಿ ಕಡೆಯವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಂಟಕ ಎನ್ನುತ್ತಲೇ ನಮ್ಮ ಮುಖ್ಯಮಂತ್ರಿಗಳೂ ಅಂಥದ್ದೇ ಒಂದು ಸೈನ್ಯ ಕಟ್ಟಬೇಕು ಅನ್ನುತ್ತಾರೆ. ತಾವು ಟೀಕಿಸಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತೊಬ್ಬರು ತಮ್ಮನ್ನು ಟೀಕಿಸಿದರೆ ಅವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಂಟಕ ಎನ್ನುತ್ತಾರೆ. ಇದು ಮೆಚುರಿಟಿಯ ಪರಮಾವಧಿಯಷ್ಟೇ..
                  @ಶೆಟ್ಕರ್, ವಿಜಯ್ ಅವರು ಪ್ರಗತಿಪರ ಚಿಂತಕ ಮೇಲೆ ನಗಲಿಲ್ಲ. “ಸ್ವಯಂ ಘೋಷಿತ ಪ್ರಗತಿಪರ ಚಿಂತಕ”ರ ಬಗ್ಗೆ ಸಹಾನುಭೂತಿ ತೋರಿದರು..

                  ಉತ್ತರ
                  • ವಿಜಯ್ ಪೈ
                    ನವೆಂ 4 2013

                    ಹೂಂ ರವಿ..ಇನ್ನೂ ಕೆಲವು ಇಂತದೇ ದ್ವಂದ್ವಗಳು ಇವೆ..ಉದಾಹರಣೆಗೆ..

                    – ಇಲ್ಲಿಯ ಸಂಸ್ಕೃತಿಗೆ ಶತ-ಶತಮಾನಗಳಿಂದ ತುಕ್ಕು ಹಿಡಿದಿದೆ ಎಂಬಂತೆ ಬರೆಯುವುದು, ಸಿಕ್ಕಲ್ಲಿ ಕೊರೆಯುವುದು..ಆಮೇಲೆ ಮುಂದೇ ಯಾವುದೋ ವಿಷಯದಲ್ಲಿ ಇವರ ಮೇಲೆ ಟೀಕೆ ಬಂದು, ಸಹಿಸಲಾಗದಾಗ ‘ನಮ್ಮ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ಇದ್ದ ಹಿರಿಯರಿಗೆ ಗೌರವ ಕೊಡುವ ಪದ್ದತಿ ಈಗ ಮಾಯವಾಗಿದೆ’ ಎಂದು ವಿಷಾದ ವ್ಯಕ್ತಪಡಿಸುವುದು! (ಮರ ಬೇಡ..ಮಾವಿನಹಣ್ಣು ಬೇಕು).

                    – ಬೃಹತ ಯೋಜನಗಳನ್ನೇ ಅಭಿವೃದ್ಧಿ ಎಂದು ಹೇಳುತ್ತಿರುವ ಮೋದಿಯದು ಅಭಿವೃದ್ಧಿ ಅಲ್ಲವೆಂದು, ಸಮಷ್ಠಿ ಕಲ್ಯಾಣವಲ್ಲವೆಂದೂ ತೆಗಳುತ್ತ…ಅದೇ ಧ್ವನಿಯಲ್ಲಿ ನೆಹರೂವನ್ನು ನೆನೆಸುವುದು!..ಬಹುಶಃ ಆಗ ಇವರಿಗೆ ನೆಹರೂ ಗಾಂಧಿಜಿಯ ಗ್ರಾಮಸ್ವರಾಜ್ಯ, ಗುಡಿಕೈಗಾರಿಕೆ ಮಾದರಿ ತಿರಸ್ಕರಿಸಿ ಬೃಹತ ಕಾರ್ಖಾನೆ, ಆಣೆಕಟ್ಟು ಗಳ ನಿರ್ಮಾಣಕ್ಕೆ ಮುಂದಾಗಿದ್ದು ಮರೆತುಹೋಗಿರುತ್ತದೆ.

                    ಇಂತಹ ಜಾಣ ದ್ವಂದ್ವಗಳಿರುವವರು ಉಳಿದವರು ತಮ್ಮ ಮಾತು ಕೇಳಬೇಕೆಂದು ಬಯಸಿದರೆ ಏನನ್ನಬೇಕು?

                    ಉತ್ತರ
    • krishnappa
      ನವೆಂ 2 2013

      30% ಜನ ಮಾತ್ರ ಭಾಗವಹಿಸುವ ಚುನಾವಣೆಗಳಲ್ಲಿ ಎಂಬ ನಿಮ್ಮ ಮಾತು ಸಮಂಜಸವಲ್ಲ. ಭಾರತದಲ್ಲಿ ಸರಾಸರಿ ಮತದಾನ ಪ್ರಮಾಣ 60% ಆಸುಪಾಸು ಇರುತ್ತದೆ. ಇದರಲ್ಲಿ ಭಾಜಪಕ್ಕೆ ಓಟು ನೀಡಿದವರ ಪ್ರಮಾಣ ಇಡೀ ದೇಶವನ್ನು ತೆಗೆದುಕೊಂಡರೆ 15% ಕ್ಕಿಂಥ ಹೆಚ್ಚು ಇರಲಿಕ್ಕಿಲ್ಲ. ನಿಜವಾಗಿ ರಾಮ ಮಂದಿರ ಜನರ ಅವಶ್ಯಕತೆ ಆಗಿದ್ದರೆ ಈ 60% ಜನರಲ್ಲಿ 40% ಜನರಾದರೂ ಭಾಜಪಕ್ಕೆ ಓಟು ಮಾಡಬೇಕಾಗಿತ್ತು. ಹಾಗೆ ಮಾಡಿಲ್ಲ. ಇದರಿಂದಲೇ ಇದು ಜನರ ಅವಶ್ಯಕತೆ ಅಲ್ಲ ಎಂದು ಗೊತ್ತಾಗುತ್ತದೆ. ಇದು ನಿಜವಾಗಿಯೂ ಜನರ ಅವಶ್ಯಕತೆ ಎಂದಾದರೆ ಜನ ತಾವಾಗಿಯೇ ಸ್ವಪ್ರೇರಣೆಯಿಂದ ಬಂದು 80% ಮತದಾನ ಮಾಡಬೇಕಾಗಿತ್ತು ಮತ್ತು ಅದರಲ್ಲಿ 60% ಜನ ಭಾಜಪಕ್ಕೆ ಮತದಾನ ಮಾಡಬೇಕಾಗಿತ್ತು.

      ಉತ್ತರ
  6. Nagshetty Shetkar
    ನವೆಂ 3 2013

    Madhu Dandavate exposes ideological roots of NaMo:

    http://ladaiprakashanabasu.blogspot.in/2013/11/blog-post_9945.html

    ಉತ್ತರ
    • ವಿಜಯ್ ಪೈ
      ನವೆಂ 4 2013

      ನಿಮಗಳಿಗೆ ಈಗ ವಲ್ಲಭ್ ಬಾಯ್ ಪಟೇಲರ ಬಗ್ಗೆ ಪ್ರೀತಿ ಉಕ್ಕುವುದು, ನೆನಪಿನ ಕಸದಬುಟ್ಟಿ ಸೇರಿದ್ದ ಮಧು ದಂಡವತೆ ನೆನಪಾಗುವುದು ತುಂಬಾ ಸಹಜ!.. ಅಂದಹಾಗೆ ಈ ಅನುವಾದಕ ಜಾವೇದ ಆನಂದ ಎಂಬ ಮಹಾನುಭಾವನ ಬಗ್ಗೆ ಗೊತ್ತೆ ಗುರುಗಳೆ? ಈತ ತೀಸ್ತಾ ಸೇತಲ್ವಾಡ ಪತಿ. ಗೋದ್ರಾ ಸಂತ್ರಸ್ಥರ ಹೆಸರಿನಲ್ಲಿ ಟ್ರಸ್ಟ ಕಟ್ಟಿ ತಮ್ಮ ಕುಟುಂಬದ ಐದು ಜನರನ್ನು ಅದರ ಸಂಬಳ ತೆಗೆದುಕೊಳ್ಳುವ ಉದ್ಯೊಗಸ್ಥರಾಗಿಸಿದ ‘ಕಾಯಕ’ಯೋಗಿಗಳು!. ಇವರ ‘ಕಾಯಕ’ಯೋಗವನ್ನು ಗುಲ್ಬರ್ಗ ಸೊಸೈಟಿ (ಗುಜರಾತನದ್ದು!) ಸಂತೃಸ್ತರ ಬಾಯಿಯಿಂದಲೇ ಕೇಳಿ..ಯೂಟ್ಯೂಬನಲ್ಲಿವೆ.

      ಉತ್ತರ
      • ನವೆಂ 4 2013

        Teesta is a indefatigable crusader against communalism. If she has taken assistance of her family in her fight against fascists, it shows her commitment.

        ಉತ್ತರ
        • ವಿಜಯ್ ಪೈ
          ನವೆಂ 4 2013

          ಹೂಂ ಗುರುಗಳೆ..ನಿಮ್ಮ crusader ಗಳ ಕಲ್ಪನೆ, ನಿಮ್ಮ ಎರವಲು ವಿಚಾರಗಳ ಮೂಲ ಗೊತ್ತಿಲ್ಲದ್ದೇನು ಅಲ್ಲ ಬಿಡಿ. ಬಾಬರ್ ನೆ ಸಿವಿಲೈಜ್ ಡ್ ಆಗಿ ಕಂಡವರಿಗೆ ತೀಸ್ತಾ crusader ಆಗಿ ಕಾಣದಿರುತ್ತಾರೆಯೆ? ಅಂದ ಹಾಗೆ ತಮ್ಮ ಕುಟುಂಬ ಸಮೇತ ಮಾಡುತ್ತಿರುವ ಸೇವೆಗೆ, ‘ಕಾಯಕ’ಯೋಗಕ್ಕೆ ಕೇವಲ ಐದು ಲಕ್ಷವನ್ನಷ್ಟೇ ಪಡೆಯುತ್ತಾರಂತೆ..ಕಡಿಮೆ ಅಲ್ಲವೆ ಗುರುಗಳೆ..ಅಂತಹ ಬೆಲೆಗಟ್ಟಲಾಗದ ಸೇವೆಗೆ..

          ಉತ್ತರ
          • Nagshetty Shetkar
            ನವೆಂ 4 2013

            Mr. Vijay, keep the issue of family members aside for a moment. Isn’t Teesta’s activism admirable? Hasn’t she worked hard to get justice to the victims?

            Babar was one of the finest minds of his time. Read Babarnama.

            ಉತ್ತರ
            • ವಿಜಯ್ ಪೈ
              ನವೆಂ 4 2013

              ಗುರುಗಳೆ..ಈ ರೀತಿಯ ‘ಕಾಯಕ’ಯೋಗವನ್ನು ಯಾರು ಬೇಕಾದರೂ ಮಾಡುತ್ತಾರೆ..ಅದಕ್ಕೆ ಹೊಟ್ಟೆಪಾಡು ಅಂತಾರೆ! ಮತ್ತು ಇಂತಕ ‘ಕಾಯಕ’ಯೋಗವನ್ನು ಮಾಡುವವರು ನಮ್ಮ ಸುತ್ತಲೂ ಸಾಕಷ್ಟು ಜನರಿದ್ದಾರೆ.

              ಎರಡನೆಯದಾಗಿ ನಿಮ್ಮ one of the finest minds ಬಾಬರ ಬಗ್ಗೆ , ಅವನ ಸಮಕಾಲೀನರಾದ ಸೀಖ ಗುರು ಗುರುನಾನಕರು ಬರೆದ ಬಾಬರವಾಣಿ ಓದಿ..ಅರ್ಥವಾಗುತ್ತದೆ.

              ಉತ್ತರ
              • Nagshetty Shetkar
                ನವೆಂ 4 2013

                “The Sikh tradition strongly subscribes to a meeting in 1520 between Guru Nanak and Babar during the latter’s invasion of Saidpur, now called Eminabad, in Gujranwala district of Pakistan. The town was taken by assault, the garrison put to the sword and the inhabitants carried into captivity. According to the Puratan Janam Sakhi, Guru Nanak and Mardana, also among the captives, were ordered to be taken to prison as slaves. The Guru was given a load to carry and Mardana a horse to lead. But Mir Khan, says the Janam Sakhi, saw that the Guru’s bundle was carried without any support and Mardana’s horse followed him without the reins. He reported this to Sultan Babar who remarked, “If there was such a holy man here, the town should not have been destroyed.”

                The Janam Sakhis continue, “Babar kissed his (Guru Nanak’s) feet. He said, ‘On the face of this fair one, one sees God himself.’ Then all the people, Hindus and Musalmans, began to make their salutations. The king spoke again, ‘O dervish, accept something’. The Guru answered, ‘I take nothing, but you must release all the prisoners of Saidpur and restore their property to them’. King Babar ordered, ‘Those who are in detention be released and their property be returned to them’. All the prisoners of Saidpur were set at liberty”.

                ಉತ್ತರ
                • ವಿಜಯ್ ಪೈ
                  ನವೆಂ 4 2013

                  ಗುರುಗಳೆ..

                  ಅಲ್ಲೆಲ್ಲೊ ಕೆಳಗೆ selective blindness ಅಂತ ಆರೋಪ ಮಾಡುತ್ತ ಇದ್ದರಲ್ಲವೆ..ನಿಮ್ಮ ಈ ಮೇಲಿನ ಕಟ್&ಪೇಸ್ಟ್ ವೇ ಅದಕ್ಕೊಂದು ಉದಾಹರಣೆ. ಪಾಪ ನಿಮಗೆ ಬೇಕಾಗಿದ್ದು ಮಾತ್ರ ಇಲ್ಲಿ ತಂದು ಹಾಕಿದಿರಿ..ಅಲ್ಲಿಯೇ ಅದರ ಮೇಲೆ/ಕೆಳಗೆ ಇದ್ದದ್ದನ್ನು ಓದಿದ್ದಿರಲ್ಲವೇ ಗುರುಗಳೆ? ನಿಮ್ಮ one of the finest man, civilized king ಬಗ್ಗೆ ಅದೇ ಲೇಖನದಲ್ಲಿದಿದ್ದು ಮತ್ತು ಬಾಬರವಾಣಿಯಲ್ಲಿದ್ದದ್ದು..

                  – Babar’s army of 12,000 men was mostly undisciplined group of men who wanted to loot the riches of India. These 12,000 men, a tiny army with which to attempt the conquest of Ibrahim Lodhi’s realm, first devasted Punjab. Guru Nanak in his famous epic named “Babarvani” describes the atrocities of Babar and his men in Punjab.
                  – Babarvani (Babar’s command or sway) is how the four hymns by Guru Nanak alluding to the invasions by Babar (1483-1530), are collectively known in Sikh literature.
                  – Babarwani hymns, indicates that he may have been present in Lahore when the city was given up to plunder. In six pithy words this line conveys, “For a pahar and a quarter, i.e. for nearly four hours, the city of Lahore remained subject to death and fury” (GG,1412).
                  – An open tragedy like the one that struck Saidpur moved him profoundly and he described the sorrows of Indians-Hindus and Muslims alike-in words of intense power and suffering. Babar’s army, in the words of Guru Nanak, was “the bridal procession of sin.”

                  ಉತ್ತರ
                • Nagshetty Shetkar
                  ನವೆಂ 4 2013

                  Mr. Vijay, no doubt Babar was an invader and operated as per the norms of invasion of his times. But he was not just an invader like Changhese Khan or Kublai Khan. He had the humility to respect greatness of saints like Guru Nanak who belonged to different religion than his own. The incident narrated by Sikh religious literature is a testimony to Babar’s greatness both as a warrior and as a man of refined sensibility.

                  ಉತ್ತರ
                  • ವಿಜಯ್ ಪೈ
                    ನವೆಂ 4 2013

                    ಗುರುಗಳೆ..

                    ಸರಿ ಬಿಡಿ..ನೀವು ಬಾಬರ one of the finest man, civilized king ಎಂತಂತೆದೊ ಹೇಳಿದ್ದಕ್ಕೆ ಸಾಕ್ಷ ಕೊಟ್ಟು..ನಿಜವನ್ನು ತೋರಿಸಬೇಕಾಯಿತು.

                    [ He had the humility to respect greatness of saints like Guru Nanak who belonged to different religion than his own]
                    ಕಳ್ಳರಿಗೂ ದೇವರ, ಪವಾಡ ಪುರುಷರ ಭಯ ಇರುತ್ತದೆ. ಗುರುನಾನಕರ ಬಗ್ಗೆ ಭಯ-ಭಕ್ತಿ ಬರಲು ಕಾರಣವಾದ ಘಟನೆ ಅಲ್ಲೆ ಇದೆ. ಇದು ಬಾಬರನ ಹೆಚ್ಚುಗಾರಿಕೆ ಅಲ್ಲ..ಗುರುನಾನಕರಿಗೆ ಇದ್ದಂತಹ ಅಧ್ಯಾತ್ಮಿಕ ಬಲ.

                    ಉತ್ತರ
                    • Nagshetty Shetkar
                      ನವೆಂ 4 2013

                      That’s your view, so be it.

            • ನವೆಂ 7 2013

              [quote]Guru Nanak was an eye-witness to the havoc created during these invasions. (During Babar’s invasion)
              http://www.sikh-history.com/sikhhist/events/babar.html [/quote]
              One of the finest minds… yes or no?

              ಉತ್ತರ
              • Nagshetty Shetkar
                ನವೆಂ 7 2013

                Mr. Bolumbu, plese read Babarnama before forming your opinion on Babar.

                ಉತ್ತರ
                • ನವೆಂ 7 2013

                  What I have read so far from Baburnama has justified my opinion. Why don’t you read Manusmriti for yourself before forming your judgements about it?

                  ಉತ್ತರ
                  • Nagshetty Shetkar
                    ನವೆಂ 7 2013

                    You quoted from a Sikh book and not Babarnama. Why don’t you fully read Babarnama before criticizing it? You lack guts to read it?

                    ಉತ್ತರ
                    • ನವೆಂ 7 2013

                      > You quoted from a Sikh book and not Babarnama
                      How did you conclude that Babarnama is full of facts and Sikh book is not giving facts?

                    • ನವೆಂ 7 2013

                      Need a clarification. Does a text become unauthentic just for it being SIkh? I have been reading Babur nama translated by Annette Susannah Beveridge. Babur nama is a text written originally in turki language and nobody would expect him to write about his own misdeeds from a neutral perspective. Guru Nanak has described in his famous epic named “Babarvani” the atrocities of Babar and his men in Punjab.

                    • ನವೆಂ 7 2013

                      You are not a Sharana. You are insulting Basavanna and his true followers by claiming to be one. You can’t even understand a vachana properly.

                    • Mukhesha
                      ನವೆಂ 7 2013

                      ಬಾಬರ್ ಮಾಡಿದ ಅನಾಚಾರಗಳನ್ನು ಬಾಬರ್ ತಾನೇ ಹೇಳಿಕೊಳ್ಳುವನೇ ಇಲ್ಲ ಅವನಿಂದ ಹಿಂಸೆಗೊಳಗಾದ ಮತ್ತು ಇತರ ಸಮಕಾಲೀನರು ಹೇಳುವರೇ? ಕನಿಷ್ಟ ಈ ಪ್ರಾಥಮಿಕ ಜ್ಞಾನವೂ ಇಲ್ಲವಲ್ಲ ಈ ಬುರುಡೆ ಶೆಟ್ಕರ್ ಗೆ…

                      ಅದರಲ್ಲು ಸಿಖ್ ಗುರು ನಾನಕರಂತಹ ಸಾತ್ವಿಕರ ಹೇಳಿಕೆಗಳೂ ಸಹ ಇವರಿಗೆ ಪಥ್ಯವಾಗಲಿಲ್ಲವೆಂದಾದ ಮೇಲೆ ತನ್ನನ್ನು ‘ಶರಣ’ ನೆಂದು ಕರೆದು ಕೊಳ್ಳುವ ಯೂಗ್ಯತೆ ಇದೆಯೇ? ಇದು ನಿಜಶರಣರಿಗೆ ಅಪಮಾನವಲ್ಲವೇ?

                • Mukhesha
                  ನವೆಂ 7 2013

                  Mr. Grandson of finest mind, Shetkar ಅವರೆ ನೀವು ಕೊಚ್ಚಿಕೊಳ್ಳುತ್ತಿರುವಂತೆ ಏನಿದೆ ಈ ಬಾಬರ್ ನಾಮದಲ್ಲಿ?: :http://www.archive.org/stream/baburnama017152mbp/baburnama017152mbp_djvu.txt

                  ನೆಟ್ಟಗೆ ತರ್ಕಬದ್ದವಾಗಿ ವಾದ ಮಾಡಕ್ಕೆ ಬರದಿದ್ರೂ ಬುರುಡೆ ಬಿಡಕ್ಕೇನೂ ಕಮ್ಮಿ ಇಲ್ಲ ನೀವು ಮತ್ತು ನಿಮ್ಮ ಗುರು. ಇಲ್ಲಿ ಸಹನಾ, ಭೊಳುಂಬು, ಕುಮಾರ್ ಮುಂತಾದವರು ಎಲ್ರೂ ಕೇಳಿದ್ದಾರೆ ತಾಕತ್ತಿದ್ದರೆ ಅದಕ್ಕೆ ಸಾಕ್ಷಿಕೊಡಿ. ಚರಿತ್ರೆಯಲ್ಲಾಗಲೀ ಪುರಾಣಗಳ ಕಥೆಗಳಲ್ಲಾಗಲೀ ವೇದಗಳನ್ನು ಕೇಳಿದರೆ ಕಾದ ಸೀಸವನ್ನು ಶೂದ್ರರ ಕಿವಿಗೆ ಹುಯ್ದ ಗಟನೆಯ ಉಲ್ಲೇಖವೆಲ್ಲಾದರೂ ಇದೆಯೇ????? ನಿಮ್ ಗುರು ಕೃಷ್ಣಪ್ಪ ಆಲಿಯಾಸ್ ಕೂಡ ಇದಕ್ಕೆ ಮೊದಲು ಸಾಕ್ಷಿಕೊಟ್ಟು ನಂತರ ನಿಮ್ಮ ಇತರ ಬುರುಡೆಗಳನ್ನು ಬಿಡಿ.

                  ಲಗೋರಿ: ಅಂದಹಾಗೆ ”ತಲೆಹಿಡಕರು ಸಾಮಾನ್ಯವಾಗಿ (we) are doing selfless social service (to our masters) ಅಂದ್ಕೊಂಡಿರ್ತಾರೆ!!!!!.

                  ಉತ್ತರ
                  • ಮುಕೇಶ ಅವರೇ,

                    ನಿಮ್ಮ ಕಮೆಂಟಿನಲ್ಲಿದ್ದ “ಬಾಬರ್ ನ ಮೊಮ್ಮಗ” ಅನ್ನುವಂತ ಪದಗಳನ್ನು ತೆಗೆಯಲಾಗಿದೆ. ಸಾರ್ವಜನಿಕ ತಾಣಗಳಲ್ಲಿ ಇಂತ ಭಾಷೆಯ ಬಳಕೆ ಸರಿಯಲ್ಲ.ವಿಷಯದ ಮೇಲೆ ಚರ್ಚೆ ನಡೆಯಬೇಕೆ ಹೊರತು ವ್ಯಕ್ತಿಯ ಮೇಲೆ ಬೇಡ.

                    ‘ನಿಲುಮೆ’ ಕಮೆಂಟುಗಳನ್ನು ಮಾಡರೇಟ್ ಮಾಡುವುದರಲ್ಲಿ ನಂಬಿಕೆಯಿರಿಸಿಲ್ಲ.ಸಹಕರಿಸಿ.

                    ಉತ್ತರ
                    • Mukhesha
                      ನವೆಂ 7 2013

                      (y)

  7. ವಿಜಯ್ ಪೈ
    ನವೆಂ 4 2013

    [BTW I’ve sent petition to CM on Nilume.]
    ಹ್ಮ..ಏನಂತ ಪೆಟಿಶನ್ ಹಾಕಿದ್ದಿರಿ ಗುರುಗಳೆ? ನಿಮ್ಮ, ನಿಮ್ಮ ಹಿರಿ ಗುರುಗಳ ”ಉನ್ನತ’ ಉಪದೇಶಗಳನ್ನು ಇಲ್ಲಿ ಯಾರು ಕೇಳುತ್ತಿಲ್ಲ , ಕೇಳಿ ಪ್ರಜ್ಞಾವಂತ, ಸಾಕ್ಷಿಪ್ರಜ್ಞೆಗಳಾಗುತ್ತಿಲ್ಲ ಎಂದೆ? ಉತ್ರರಿಸಲಾಗದ ಪ್ರಶ್ನೆ ಕೇಳುತ್ತಿದ್ದಾರೆ ಎಂದೆ? ಪುಣ್ಯ..ನಮ್ಮೆಲ್ಲರ ಮತಗಳನ್ನು ಬ್ಯಾನ್ ಮಾಡಬೇಕೆಂದು ಪೆಟಿಶನ್ ಹಾಕಲಿಲ್ಲ!!. ಅವಕಾಶವಿದ್ದಿದ್ದರೆ ಅದನ್ನೂ ಮಾಡುತ್ತಿದ್ದಿರೇನೊ..

    [Why don’t you file a RTI petition to get hold of that report?]
    ಇದೇ ಜ್ಞಾನ..ಇಲ್ಲಿ ಹತ್ತು ಸಲ ನೀವು ಸಿ.ಎಸ್.ಎಲ್.ಸಿ ಫಂಡ ಬಗ್ಗೆ ಹೇಳಿ, ಸಿ.ಎಸ್.ಎಲ್.ಸಿ ಫಂಡ್ ಬಗ್ಗೆ ಹೇಳಿ ಎಂದು ಇಲ್ಲಿ ಕೊರೆಯುವಾಗ ಇರಲಿಲ್ಲವೆ?

    [I’ve been given another assignment and I’ll be responding intermittently to your followup questions.]
    ದಯವಿಟ್ಟು ವಾಪಸ ಬಂದು ಉತ್ತರ ಕೊಡುವ ಕಷ್ಟ ತೆಗೆದುಕೊಳ್ಳಬೇಡಿ ಗುರುಗಳೆ.. ಪಕ್ಕದಲ್ಲಿಯೇ ಕೆಲವು ನಿಮ್ಮ ಜೊತೆ ಸಹಮತವಿರುವ ತಮಟೆ, ಪುಂಗಿ, ಇತರ ವಾದ್ಯಗಾರರ ಗುಂಪು ಇವೆ..ಅಲ್ಲಿಗೆ ಹೋಗಿ ನಿಮ್ಮ ಪ್ರಚಾರ, ವಿಚಾರಧಾರೆ ಹರಿಯಬಿಡಿ.

    [ The country is facing fascist threat from several corners and I’ve a lot of work to do to negate growing fascism. My energy should not be wasted on trolls you see.]
    ಅದಕ್ಕೆ ಹೇಳಿದ್ದು ಗುರುಗಳೆ.. ನಿಮ್ಮ ಅತ್ಯಮೂಲ್ಯವಾದ ಎನರ್ಜಿಯನ್ನು ಇಲ್ಲಿ ಹಾಳು ಮಾಡಬೇಡಿ..ಇಲ್ಲಿ ನೀವು ಉಲ್ಟಾ ನಿಂತು ತಪಸ್ಸು ಮಾಡಿದರೂ, ನಿಮ್ಮ ‘ಉನ್ನತ’ ವಿಚಾರಗಳನ್ನು ಹರಡಲು ಆಗುವುದಿಲ್ಲ. ದೇಶಾದ್ಯಂತ ಪುಂಗಿ ಊದುವುದಕ್ಕೆ ಸಾಕಷ್ಟು ಸ್ಟ್ಯಾಮಿನಾ ಬೇಕಾಗುತ್ತದೆ..ದಯವಿಟ್ಟು ಕಾಯ್ದಿಟ್ಟುಕೊಳ್ಳಿ.

    [That’s why all of us condemned Sikh massacre of 1984. Sonia Gandhi and Manmohan Singh both apologized because of our pressure. ]
    ಗುರುಗಳೆ..ಇಲ್ಲಿ ‘our pressure’ ನಲ್ಲಿಯ our ನ್ನು ಕ್ಯಾಪಿಟಲ್ ನಲ್ಲಿ, ಬೋಲ್ಡಾಗಿ ಬರೆಯಬೇಕಿತ್ತು!..ನಮಗಿದು ಗೊತ್ತೆ ಇರಲಿಲ್ಲ..ನಿಮ್ಮಗಳ ಮಹಿಮೆ ಬಗ್ಗೆ..ನಿಮ್ಮಿಂದಲೇ ಅವರು ಕ್ಷಮಾಪಣೆ ಕೇಳುವಂತಾಯಿತು ಎಂಬ ಬಗ್ಗೆ!. ದೇಶದ ಜನತೆಯ ಪರವಾಗಿ ಧನ್ಯವಾದಗಳು ನಿಮಗೆ ಮತ್ತು ನಿಮ್ಮ ಪ್ರಭಾವಶಾಲಿ ಗುಂಪಿಗೆ!

    [NaMo didn’t apologize for Godhra and that’s scary.]
    ಬಿಡಿ ಗುರುಗಳೆ..ನೀವು ಬಿಡುತ್ತಿರಾ ಮೋದಿಯವರನ್ನ ಹಾಗೆ? ನಿಮ್ಮಗಳ ಪ್ರಭಾವ ಏನು ಕಡಿಮೆಯೆ? ಈಗಾಗಲೇ ಅಮೇರಿಕ ದೇಶದ ಮೇಲೆ ಪ್ರಭಾವ ಬೀರಿ ಮೋದಿಗೆ ಅಮೇರಿಕದ ವಿಸಾ ಸಿಗದ ಹಾಗೆ ಮಾಡಿದ್ದೀರಿ..ನಿಮ್ಮಗಳದ್ದು ಕಮ್ಯುನಿಷ್ಟ್ ತತ್ವವಾದರೂ ಅಮೇರಿಕದಂತಹ ಬಂಡವಾಳಶಾಹಿ ರಾಷ್ಟ್ರದ ಮೇಲೆಯೇ ಪ್ರಭಾವ ಬೀರಿದ್ದಿರಿ..ಅಂದಾಗ ಮೋದಿ ಹತ್ತಿರ ಕ್ಷಮೆ ಕೇಳಿಸುವುದು ಏನು ಮಹಾ ಅಲ್ಲ ನಿಮಗೆ. ಅಷ್ಟಕ್ಕೂ ಕೇಳಲಿಲ್ಲ ಅಂದರೆ, ವಿಶ್ವಸಂಸ್ಥೆ ಹತ್ತಿರ ಮಾತನಾಡಿ, ಪೆಟಿಶನ್ ಹಾಕಿ.ಜಗತ್ತಿನಿಂದಲೇ ಬ್ಯಾನ್ ಮಾಡಿಸಿವುದೂ ದೊಡ್ಡದಲ್ಲ ನಿಮಗೆ.

    [Nellie incident happened many years ago and is not in public memory these days.]
    ಹ್ಮ,,ಹೌದು ಗುರುಗಳೆ..ನೆಲ್ಲಿಯಂತೆ ಗೋದ್ರಾ ಕೂಡ ಪಬ್ಲಿಕ್ ಮೆಮೊರಿಯಿಂದ ದೂರ ಹೋಗಬಾರದು..ಅದಕ್ಕಾಗಿ ಅದನ್ನು ಜೀವಂತವಾಗಿಡಲು ನೀವುಗಳು ಪಡುತ್ತಿರುವ ಕಷ್ಟ ಸ್ತುತ್ಯಾರ್ಹವಾಗಿದೆ.

    ಉತ್ತರ
    • ನವೆಂ 4 2013

      Fascists and their supporters must be excluded from electoral process. If congress party gets 2/3 majority, a legislation to ban fascists might become a reality. Another reason to vote for congress mr. Vijay.

      ಉತ್ತರ
      • ನವೆಂ 4 2013

        2191 ಅಮಾಯಕ ಮುಸ್ಲಿಮರನ್ನು ಹತ್ಯೆ ಮಾಡಿದ ನೆಲ್ಲಿ ಹತ್ಯಾಕಾಂಡ ಮಾಡಿದವರಲ್ಲಿ ಯಾರೊಬ್ಬನಿಗೂ ಶಿಕ್ಷೆಯಾಗದಂತೆ ಎಲ್ಲಾ ಕೇಸ್ ಗಳನ್ನೂ ವಾಪಸ್ ತೆಗೆದುಕೊಂಡಿದ್ದು ಯಾವ ಸರಕಾರ ಶೆಟ್ಕರ್ ರವರೇ, ಮತ್ತೂ ಆಗ ಆ ಪಕ್ಷಕ್ಕೆ ಎಷ್ಟು ಬಹುಮತ ಇತ್ತು ?

        ಉತ್ತರ
        • Nagshetty Shetkar
          ನವೆಂ 4 2013

          Mr. Mahesh, I have already said that all massacres are crime against humanity and justice should be given to the victims. If you are so concerned about Nellie victims, why don’t you raise voice for justice to the Sharanas who were massacred by Brahmin-led Sanatanis after Kalyana revolution?

          ಉತ್ತರ
          • ನವೆಂ 4 2013

            ಶೆಟ್ಕರ್ ರವರೇ, ಆ ಸಮಯದಲ್ಲಿ ಯಾವ ಸರಕಾರ ಇತ್ತು ಮತ್ತು 2191 ಅಮಯಾಕ ಮುಸ್ಲಿಮರನ್ನು ಹತ್ಯೆ ಮಾಡಿದವರ ಮೇಲಿನ ಎಲ್ಲಾ ಕೇಸ್ ಗಳನ್ನು ಯಾವ ಸರಕಾರ ವಾಪಸ್ ತೆಗೆದುಕೊಂಡಿತು ಎಂಬ ವಿಷಯವನ್ನು ನೀವು ಹೇಳಬಹುದಲ್ಲ.

            ಉತ್ತರ
            • Nagshetty Shetkar
              ನವೆಂ 4 2013

              There is no evidence that state government was involved in Nellie killings. Can you say the same thing about Godhra?

              ಉತ್ತರ
              • ನವೆಂ 4 2013

                ಶೆಟ್ಕರ್ ರವರೇ, ನಾನು ಕೇಳಿದ್ದು ಯಾವ ಸರಕಾರ 2191 ಅಮಾಯಕ ಮುಸ್ಲಿಮರು ಹತ್ಯೆಯಾದ ನೆಲ್ಲಿ ಹತ್ಯಾಕಾಂಡದ ಕೇಸ್ ಗಳನ್ನು ವಾಪಸ್ ತೆಗೆದುಕೊಂಡು ಯಾರೊಬ್ಬರಿಗೂ ಶಿಕ್ಷೆಯಾಗದಂತೆ ನೋಡಿಕೊಂಡಿತು ಎಂದು. ಯಾವ ಸರಕಾರ ಎಂದು ಹೇಳಬಹುದಲ್ಲ? ಹತ್ಯಾಕಾಂಡದಲ್ಲಿ ಸರ್ಕಾರದ ಪಾತ್ರವಿಲ್ಲದಿದ್ದರೆ ಸರ್ಕಾರವೇ ಯಾಕೆ ಹತ್ಯಾಕಾಂಡದ ಎಲ್ಲಾ ಅಪರಾಧಿಗಳ ಮೇಲಿನ ಕೇಸ್ ಗಳನ್ನು ವಾಪಸ್ ತೆಗೆದುಕೊಂಡಿತು ಎಂಬ ಅನುಮಾನ ಬಾರದೇ ?

                ಉತ್ತರ
                • Nagshetty Shetkar
                  ನವೆಂ 4 2013

                  Mr. Mahesh, how come NaMo army is voicing concern about Nellie 30 years after the incident? What was NaMo army doing all these years? If you are raising Nellie now, does it not raise doubts about your intentions? It is cheap to use Nellie as a shield for Godhra.

                  ಉತ್ತರ
                  • ನವೆಂ 4 2013

                    ಶೆಟ್ಕರ್ ರವರೇ, ಬಹುಶಃ 2191 ಅಮಾಯಕ ಮುಸ್ಲಿಮರನ್ನು ಹತ್ಯೆ ಮಾಡಿದ ನೆಲ್ಲಿ ಹತ್ಯಾಕಾಂಡ ಮಾಡಿದ ಆರೋಪಿಗಳ ಮೇಲಿನ ಕೇಸ್ ಗಳನ್ನು ಯಾವ ಸರಕಾರ ವಾಪಸ್ ತೆಗೆದುಕೊಂಡಿತು ಎಂಬುದನ್ನು ನೀವು ಹೇಳಲು ತಯಾರಿಲ್ಲ ಅಲ್ಲವೇ.? ನೆಲ್ಲಿ ಹತ್ಯಾಕಾಂಡಕ್ಕೆ ನ್ಯಾಯ ಕೊಡಿಸಿ ಎನ್ನುವವರಲ್ಲೇ ತಪ್ಪು ಹುಡುಕುವ ಕೆಲಸವನ್ನು ಮಾತ್ರ ನೀವು ಮಾಡುತ್ತಿದ್ದೀರಿ.

                    ಉತ್ತರ
                    • Nagshetty Shetkar
                      ನವೆಂ 4 2013

                      Mr. Mahesh, I asked you to provide evidence against Assam government that proves its involvement in Nellie riots. I asked you to take up the case and send a petition to PM. I said any massacre is a crime against entire humanity. I said justice should be given to victims of Nellie riots. I don’t have anything more to say.

                    • ನವೆಂ 4 2013

                      ಗೊತ್ತಾಯ್ತು ಬಿಡಿ, .2191 ಅಮಾಯಕ ಮುಸ್ಲಿಮರನ್ನು ಹತ್ಯೆ ಮಾಡಿದ ನೆಲ್ಲಿ ಹತ್ಯಾಕಾಂಡದ ಕುರಿತು ನೀವು ಏನೂ ಹೇಳುವುದಿಲ್ಲ. ಯಾವ ಸರಕಾರ ಅಪರಾಧಿಗಳ ಮೇಲಿನ ಎಲ್ಲಾ ಕೇಸ್ ಗಳನ್ನು ವಾಪಸ್ ತೆಗೆದುಕೊಂಡು ಒಬ್ಬನೇ ಒಬ್ನನಿಗೂ ಶಿಕ್ಷೆಯಾಗದಂತೆ ತಪ್ಪಿಸಿತೋ ಆ ಸರಕಾರದ ಬಗ್ಗಂತೂ ಏನೂ ಹೇಳುವುದಿಲ್ಲ. ಏನಾಗುತ್ತದೆಯೋ ಆಗಲಿ,

  8. ನವೆಂ 4 2013

    2191 ಅಮಾಯಕ ಮುಸ್ಲಿಮರು ಹತ್ಯೆಯಾದ ನೆಲ್ಲಿ ಹತ್ಯಾಕಾಂಡವನ್ನು ಜನಮಾನಸದಿಂದ ಮರೆಮಾಚಿದ್ದು ಮತ್ತು ಇವತ್ತಿಗೂ ಪ್ರಗತಿಪರರು ಆ ವಿಷಯ ತಮಗೆ ಸಂಬಂಧವೇಪಡದೇ ಇರುವವರ ಹಾಗೆ ದೂರ ಸರಿಯುತ್ತಿರುವುದು ನಮ್ಮ ದೇಶದ ವಿಪರ್ಯಾಸ.

    ಉತ್ತರ
    • ನವೆಂ 4 2013

      You are using Nellie as a shield against Godhra like pogroms. How can you justify Godhra by comparing it with Nellie? What kind of perverted logic is this?

      ಉತ್ತರ
  9. ನವೆಂ 4 2013

    ಶೆಟ್ಕರ್ ರವರೇ, ನೆಲ್ಲಿ ಹತ್ಯಾಕಾಂಡದ ಅಮಾಯಕ ಮುಸ್ಲಿಮರಿಗೆ ನ್ಯಾಯ ಕೊಡಿಸಿ ಎಂದರೆ , ಹಾಗೆ ನ್ಯಾಯ ಕೊಡಿಸಿ ಎಂದವನಲ್ಲೇ ತಪ್ಪು ಕಂಡುಹಿಡಿಯುವುದು, ಹೊರತೂ ನೆಲ್ಲಿ ಹತ್ಯಾಕಾಂಡದ ಬಗ್ಗಾಗಲೀ, ಅವರಿಗೆ ನ್ಯಾಯ ಕೊಡಿಸುವ ಬಗೆಗಾಗಲೀ ಮಾತೇ ಇಲ್ಲ. ಇದು ನಿಮ್ಮ ಪ್ರಗತಿಪರತೆ ಮತ್ತು ಅಲ್ಪಸಂಖ್ಯಾತರ ಬಗ್ಗೆ ಕಾಳಜಿ. ನಾನು ನೆಲ್ಲಿ ಹತ್ಯಾಕಾಂಡದ ಬಗ್ಗೆ ಮಾತ್ರ ಮಾತನಾಡಿದರೂ ಗೋಧ್ರಾ ಹತ್ಯಾಕಾಂಡವನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಿರುವವರು ನೀವಲ್ಲವೇ ? ಶೀಲ್ಡ್ ಆಗಿ ಬಳಸಲು ಪ್ರಯತ್ನಿಸುತ್ತಿರುವುದು ನೀವಲ್ಲವೇ. ?

    ಉತ್ತರ
    • Nagshetty Shetkar
      ನವೆಂ 4 2013

      Go away troll.

      ಉತ್ತರ
      • ನವೆಂ 4 2013

        ಶೆಟ್ಕರ್ ರವರೇ, ನೆಲ್ಲಿ ಹತ್ಯಾಕಾಂಡದಲ್ಲಿ ಹತ್ಯೆಯಾದ 2191 ಅಮಾಯಕ ಮುಸ್ಲಿಮರಿಗೆ ನ್ಯಾಯ ಕೊಡಿಸಿ ಎಂದು ಕೇಳಿದರೆ ನೀವು ಯಾಕೆ ಅಷ್ಟೊಂದು ಸಿಟ್ಟು ಮಾಡಿಕೊಳ್ಳುವುದು ಮತ್ತು ನನ್ನನ್ನು ಕೆಟ್ಟ ಕೆಟ್ಟ ಶಬ್ದಗಳಲ್ಲಿ ಬೈಯ್ಯುವುದು ?

        ಉತ್ತರ
        • Nagshetty Shetkar
          ನವೆಂ 4 2013

          Mr. Mahesh, sorry. I get upset when I see young people being swayed by fascism. You too should stay way from NaMo cyber army.

          I have said already that I am all for giving justice to Nellie victims. Why don’t you send a petition to the PM demanding justice. I will sign your petition.

          ಉತ್ತರ
          • ನವೆಂ 4 2013

            ಶೆಟ್ಕರ್ ರವರೇ, ನನಗೂ ಸಹ ನೆಲ್ಲಿಯಲ್ಲಿ ಮಡಿದ 2191 ಅಮಾಯಕ ಮುಸ್ಲಿಮರ ಪರವಾಗಿ ಯಾರೊಬ್ಬರೂ (ಪ್ರಗತಿಪರರು, ಸಾಕ್ಷಿಪ್ರಜ್ಞೆ ಉಳ್ಳವರು ಮತ್ತು ಮಹಾಮಾನವಾತಾವಾದಿಗಳು ಎಂದು ಕರೆಯಿಸಿಕೊಳ್ಳುವವರೂ) ಸಹ ದನಿಯೆತ್ತದಿರುವುದನ್ನು ನೋಡಿ ದುಃಖವಾಗುತ್ತದೆ. ನಿಮ್ಮ ಕಡೆಯಿಂದಂತೂ ಈ ಬಗ್ಗೆ ಇನಿಷಿಯೇಟ್ ತೆಗೆದುಕೊಳ್ಳುವದಿಲ್ಲ ಎಂದು ಗೊತ್ತಾಯಿತಲ್ಲ. ಯಾರಂತೂ ಸಹಿ ಹಾಕಲಿ ಬಿಡಲಿ , ನಾವಂತೂ ಈ ಬಗ್ಗೆ ಏನು ಮಾಡಬೇಕೋ ಮಾಡುತ್ತೇವೆ. ನೀವು , ದರ್ಗಾ ಸರ್ ಮತ್ತು ಇತರ ಪ್ರಗತಿಪರರೆಲ್ಲಾ ಸೇರಿ ಈ ಬಗ್ಗೆ ಒಂದು ಪತ್ರಿಕಾ ಹೇಳಿಕೆಯನ್ನು ಸಾಧ್ಯವಾದರೆ ಕೊಡಿ

            ಉತ್ತರ
            • Nagshetty Shetkar
              ನವೆಂ 4 2013

              ” ನಾವಂತೂ ಈ ಬಗ್ಗೆ ಏನು ಮಾಡಬೇಕೋ ಮಾಡುತ್ತೇವೆ.” this is good attitude Mr. Mahesh. Send a copy of your petition to Darga Sir as well.

              ಉತ್ತರ
  10. ವಿಜಯ್ ಪೈ
    ನವೆಂ 4 2013

    [Fascists and their supporters must be excluded from electoral process. If congress party gets 2/3 majority, a legislation to ban fascists might become a reality. Another reason to vote for congress mr. Vijay.]
    ಗುರುಗಳೆ..ತಿರುಕನ ಕನಸಿಗೆ ಮಿತಿ ಇದೆಯೆ?..ಆದರೂ ನಿಮಗೆ ಸಂತೋಷ ಕೊಡುತ್ತದೆಯೆಂದರೆ ಕಾಣಲು ಅಡ್ಡಿಯಿಲ್ಲ!

    [If you are so concerned about Nellie victims, why don’t you raise voice for justice to the Sharanas who were massacred by Brahmin-led Sanatanis after Kalyana revolution?]
    [ how come NaMo army is voicing concern about Nellie 30 years after the incident? What was NaMo army doing all these years? If you are raising Nellie now, does it not raise doubts about your intentions? It is cheap to use Nellie as a shield for Godhra.]
    ಹಾ..ಪಾಪ..ಮೂವತ್ತು ವರ್ಷ ಹಿಂದಿನ ನೆಲ್ಲಿ ಘಟನೆಯನ್ನು ಮರೆತುಹೋದ, ಜನಸ್ಮೃತಿಯಲ್ಲಿಲ್ಲದ ಘಟನೆ ಎನ್ನುವವರಿಗೆ ಹನ್ನೆರಡನೆಯ ಕಲ್ಯಾಣ ಕ್ರಾಂತಿ ವರ್ತಮಾನದ ಘಟನೆ!!..ಇವರ ಕಿವಿಯಲ್ಲಿ ಸೀಸ ಸುರಿದಿದ್ದು ಒಂದು ತಿಂಗಳ ಹಿಂದೆ ನಡೆದ ಘಟನೆ!. ಮೊದಲು ಹಾಸ್ಯಾಸ್ಪದವಾಗಿ ಮಾತಾನಾಡೋದು..ಆಮೇಲೆ ಅಗೌರವ ಅಂತ ಗೋಳಾಡೋದು!

    [I asked you to take up the case and send a petition to PM. I said any massacre is a crime against entire humanity. I said justice should be given to victims of Nellie riots. I don’t have anything more to say.]
    ನಿಮ್ಮ ಕಲ್ಯಾಣ ಸಮಸ್ಯೆಯ ಬಗ್ಗೆಯೂ ಪ್ರಧಾನಮಂತ್ರಿಗೆ ಒಂದು ಪೆಟಿಶನ್ ಕಳುಹಿಸಿರಿ..ಬಂದು ನಮ್ಮನ್ನು ಕಾಡಿ..ನಮ್ಮ ಹತ್ತಿರ ಅದು-ಇದು ಅನ್ನಿಸ್ಕೊಬೇಡಿ!

    [There is no evidence that state government was involved in Nellie killings. Can you say the same thing about Godhra?]
    ಸುಪ್ರಿಂ ಕೋರ್ಟನ ತೀರ್ಪು ಸಾಕಾಗಲ್ವೆ ನಿಮಗೆ? ಅಥವಾ ತೀಸ್ತಾ ಸೆಟಲ್ವಾಡ್ ಬಂದು ನಿಮಗೆ ಹೇಳಬೇಕೆ?

    ಉತ್ತರ
    • Nagshetty Shetkar
      ನವೆಂ 4 2013

      Mr. Vijay, you are not taking logically. I’ve always said justice should be given to Nellie victims. I’ve always demanded making public the Tripathi commission report. I’ve offered to sign any petition you want to send to PM demanding justice to Nellie victims. I’ve said Nellie incident must not be used for political gain. What more do you want from me??

      Your selective blindness worries me. You make so much noise about Nellie and yet don’t raise your voice against Godhra pogrom and Kalyana massacre! Why this duplicity? Don’t Godhra victims have a right for justice? Are the sufferings of Sharanas lesser than the victims of Nellie?

      ಉತ್ತರ
      • ವಿಜಯ್ ಪೈ
        ನವೆಂ 4 2013

        ಗುರುಗಳೆ..

        [ Nellie deaths were a consequence of tribal conflict during a period of great political turmoil in Assam. The situation in Gujarat at the time of Godgra pogrom is no way comparable to that of Nellie.]
        [Regarding Nellie, you can’t blame anyone till Tripathi report becomes public]
        [Nellie incident happened many years ago and is not in public memory these days. I don’t know much about Nellie incident.]

        ಇವು ನಿಮ್ಮವೇ ಮಾತುಗಳು..ಬೇರೆಲ್ಲೂ ಅಲ್ಲ..ಇಲ್ಲೇ ಈ ಚರ್ಚೆಯಲ್ಲಿಯೇ ಇವೆ!. ಮೊದಲು ನೆಲ್ಲಿ ಘಟನೆಯನ್ನು ಸಾರಿಸಿ, ತಿಪ್ಪೆ ಸೇರಿಸಲು ಹೊರಟ ನಿಮ್ಮ ವರಸೆ ಬದಲಾದದ್ದು ಕುತ್ತಿಗೆಗೆ ಬರುತ್ತದೆ ಅಂದ ಮೇಲೆ..ಆಮೇಲೆ ಈ ಅಣಿಮುತ್ತುಗಳು ಉದುರಿದ್ದು

        [I’ve always said justice should be given to Nellie victims. I’ve always demanded making public the Tripathi commission report. I’ve offered to sign any petition you want to send to PM demanding justice to Nellie victims.].

        ಈಗ ಗೊತ್ತಾಯಿತೆ? selective blindness,selective amnesia ಯಾರನ್ನು ಕಾಡುತ್ತಿದೆ ಎಂದು?

        [You make so much noise about Nellie and yet don’t raise your voice against Godhra pogrom and Kalyana massacre! Why this duplicity?] ಅಂತ ಕೇಳುತ್ತಿರಲ್ಲ..ಅದಕ್ಕೆ ನೀವು ನೆಲ್ಲಿ ಬಗ್ಗೆ ಕೊಟ್ಟ ಈ ಉತ್ತರದ ಲಾಜಿಕ್ ಅನ್ನೆ ಅಪ್ಲೈ ಮಾಡಿ..[Regarding Nellie, you can’t blame anyone till Tripathi report becomes public]…ಸರಿನಾ?

        ಉತ್ತರ
        • Nagshetty Shetkar
          ನವೆಂ 4 2013

          Mr. Vijay, I don’t know what point you are trying to prove. You people employed perverse tactics in the debate with Darga Sir on Avadhi. You are doing the same here on Nilume with me! URA warned us about the threat to freedom of expression under NaMo. You are doing exactly the same by using intimidatory and crooked tactics. You are telling all people who oppose NaMo on moral grounds that they must queiten their dissent or else will be pestered by the cyber army! But Indian voters will teach NaMo a grand lesson in humility. Have no doubt about it.

          ಉತ್ತರ
          • ವಿಜಯ್ ಪೈ
            ನವೆಂ 4 2013

            [Mr. Vijay, I don’t know what point you are trying to prove. You people employed perverse tactics in the debate with Darga Sir on Avadhi. You are doing the same here on Nilume with me! ]
            ಹ್ಮ..ಏನು ಪ್ರೂವ್ ಮಾಡಲಿಕ್ಕೆ ಬಯಸುತ್ತೇನೆಂದರೆ..ಇಲ್ಲಿ ನೀವು ಉಳಿದ ಕಡೆ ಬಿಟ್ಟ ಹಾಗೆ ಹಳಿಯಿಲ್ಲದ ರೈಲು ಬಿಟ್ಟು ದಕ್ಕಿಸಿಕೊಳ್ಳಲು ಬರುವುದಿಲ್ಲ ಎಂದು.

            [URA warned us about the threat to freedom of expression under NaMo. You are doing exactly the same by using intimidatory and crooked tactics.]
            URA ಹೇಳಿದ್ದರಲ್ಲಿ [BTW I’ve sent petition to CM on Nilume.] ಮತ್ತು [If congress party gets 2/3 majority, a legislation to ban fascists might become a reality. Another reason to vote for congress mr. Vijay.] ಸೇರುತ್ತಾ?

            [You are telling all people who oppose NaMo on moral grounds that they must queiten their dissent or else will be pestered by the cyber army! ]
            ಅದಕ್ಕೆ moral grounds ಅಂತ ಹೇಳಿ..ಆ ಪದದ ಮಾನವನ್ನೂ ಕಳೆಯಬೇಡಿ ಗುರುಗಳೆ!..

            [But Indian voters will teach NaMo a grand lesson in humility. Have no doubt about it.]
            ನೀವು ಹೀಗೆ ಡಬ್ಬ ಬಡಿದಷ್ಟೂ ಮೋದಿಗೆ ನಾಲ್ಕು ಮತ ಜಾಸ್ತಿಯಾಗುತ್ತದೆ :)..

            ಉತ್ತರ
          • ನವೆಂ 5 2013

            > You people employed perverse tactics in the debate with Darga Sir on Avadhi.
            Who or what is this “Darga”!?

            I have heard about “Darga” in Islamic context – a burial place of Muslim saints, covered with clothes and religious flags. This is a sacred place for Muslims.
            Here is a link: http://en.wikipedia.org/wiki/Dargah

            When I searched for “Darga” in google, I got this link: http://en.wikipedia.org/wiki/Darga

            Are you referring to one of these or is this “Darga” completely different!?

            ಉತ್ತರ
          • ನವೆಂ 5 2013

            > You people employed perverse tactics in the debate with Darga Sir on Avadhi.

            Who or what is this “Darga”!?

            I have heard about “Darga” in Islamic context – a burial place of Muslim saints, covered with clothes and religious flags. This is a sacred place for Muslims.
            Here is a link: http://en.wikipedia.org/wiki/Dargah

            When I searched for “Darga” in google, I got this link: http://en.wikipedia.org/wiki/Darga

            Are you referring to one of these or your “Darga” completely different!?

            ಉತ್ತರ
            • Nagshetty Shetkar
              ನವೆಂ 6 2013

              He is a mystic. Modern interpreter of Basadvaita. Highly decorated scholar on Vachanas. Poet of unusual sensibility and ultra sensitivity. Acclaimed journalist. Inspiring speaker. Indomitable crusader for human values. This is DargaSir in summary. Don’t cheapen yourself again by asking repeatedly who is Darga.

              ಉತ್ತರ
              • ನವೆಂ 6 2013

                > Don’t cheapen yourself again by asking repeatedly who is Darga.
                I am not a Sarvagnya. So, if I don’t know something I will ask, read, seek…..
                If you call somebody cheap for their ignorance, then that shows your attitude towards learning and also about your intolerance.

                ಉತ್ತರ
                • Nagshetty Shetkar
                  ನವೆಂ 6 2013

                  I called you cheap because you faked ignorance about Darga Sir. If you had searched for ‘darga Vachana’ on google, u would have known who Darga Sir is.

                  ಉತ್ತರ
                  • ನವೀನ
                    ನವೆಂ 6 2013

                    ಕುಮಾರ್ ಅವ್ರೇ,
                    ನಮ್ಮ ಶೆಟ್ಕರ್ ಸರ್, ಅವರ ಗುರುಗಳು “ಆಧುನಿಕ ಚನ್ನಬಸವಣ್ಣ”.ತಿಳಿಯಿತೇ?

                    ಉತ್ತರ
                  • ನವೆಂ 7 2013

                    > you faked ignorance about Darga Sir
                    Why should I “fake” ignorance. I didn’t know and asked.
                    How does it matter, whether I search in Google or ask somebody who knows about it?
                    Look at the “level of intolerance” in your comments.
                    You call people as “troll”, then tell they are “cheap” and say “fake”……!
                    Do you think, this is the right attitude for doing meaningful discussion.
                    You are calling people with all these “adjectives”, just because they are not agreeing to your views!
                    This is called “Fascist” mentality. Showing “intolerance” to opposing views is the dictatorial mindset. And you want to “sugar coat” it and call “Progressive Thinking”.
                    After looking at the way you are putting forth comments, I have come to this conclusion:
                    “Progressive Thinkers = Fascists = Dictators”

                    If I have come to this conclusion, you are responsible for it. Your “intolerance” has made me to arrive at this conclusion.

                    ಉತ್ತರ
    • ನವೆಂ 6 2013

      ವಿಜಯ್ ಪೈ
      ಹೌದು, ಯಾರ ಕಿವಿಗೆ ಯಾರು ಸೀಸ ಸುರಿದರು ಮತ್ತು ಹಾಗೆ ಸುರಿಯಲು ಸೀಸವೇ ಯಾಕಾಗಬೇಕು. ‘ಸುರಿದದ್ದು’ ಎನ್ನುವಾಗ ಅಂಥದೊಂದು ಘಟನೆ ನಡೆದಿತ್ತು ಎಂಬ ಅನುಮಾನ ಬರುತ್ತದೆ.

      ಉತ್ತರ
      • Nagshetty Shetkar
        ನವೆಂ 6 2013

        Mr. Bolumbu, even the very thought of putting molten lead into the ears of Shoodras is horrifying. If you believe that molten lead (or your favourite Aluminium) was not put into the ears of Shoodras who overheard Vedic chants, how did this come to circulation?

        ಉತ್ತರ
        • ನವೆಂ 6 2013

          ಯಾವಾಗ ನಡೆದಿತ್ತು – ಇದನ್ನು ಸ್ಪಷ್ಟವಾಗಿ ಹೇಳಿ.

          ಉತ್ತರ
          • Nagshetty Shetkar
            ನವೆಂ 6 2013

            ಬೆಪ್ಪುತಕ್ಕಡಿ ಬೊಳಂಬು ಅವರೇ, ನಡೆದಿರಲಿ ನಡೆಯದೆ ಇರಲಿ, ಆ ಪರಿಕಲ್ಪನೆಯೇ ಭೀಕರವಾಗಿದೆ ಅಂತಲ್ಲವೇ ನಾನು ಹೇಳಿದ್ದು? ಇಂತಹ ಜೀವವಿರೋಧಿ ಪರಿಕಲ್ಪನೆ ಬ್ರಾಹ್ಮಣ ಸಮಾಜದಲ್ಲಿ ಚಾಲ್ತಿಯಲ್ಲಿದ್ದದ್ದು ಯಾವ ಕಾರಣಕ್ಕೆ ಅಂತ ಹೇಳ್ತೀರಾ?

            ಉತ್ತರ
            • ನವೆಂ 6 2013

              > ಬೆಪ್ಪುತಕ್ಕಡಿ ಬೊಳಂಬು ಅವರೇ, ನಡೆದಿರಲಿ ನಡೆಯದೆ ಇರಲಿ, ಆ ಪರಿಕಲ್ಪನೆಯೇ ಭೀಕರವಾಗಿದೆ
              > ಅಂತಲ್ಲವೇ ನಾನು ಹೇಳಿದ್ದು? ಇಂತಹ ಜೀವವಿರೋಧಿ ಪರಿಕಲ್ಪನೆ ಬ್ರಾಹ್ಮಣ ಸಮಾಜದಲ್ಲಿ ಚಾಲ್ತಿಯಲ್ಲಿದ್ದದ್ದು
              > ಯಾವ ಕಾರಣಕ್ಕೆ ಅಂತ ಹೇಳ್ತೀರಾ?

              ಒಂದು ಕಡೆಯಲ್ಲಿ, “ನಡೆದಿರಲಿ ನಡೆಯದೆ ಇರಲಿ” ಎನ್ನಿತ್ತಿರುವಿರಿ. ನಡೆದಿದೆ ಎನ್ನಲು ನಿಮ್ಮ ಬಳಿ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲದ ಕಾರಣ, ಹೀಗೆ ಹೇಳುತ್ತಿರುವಿರಿ.
              ಮುಂದಿನ ವಾಕ್ಯದಲ್ಲೇ “ಇಂತಹ ಜೀವವಿರೋಧಿ ಪರಿಕಲ್ಪನೆ ಬ್ರಾಹ್ಮಣ ಸಮಾಜದಲ್ಲಿ ಚಾಲ್ತಿಯಲ್ಲಿದ್ದದ್ದು ಯಾವ ಕಾರಣಕ್ಕೆ” ಎನ್ನುವಿರಿ.
              ಈ ಪರಿಕಲ್ಪನೆ ಚಾಲ್ತಿಯಲ್ಲಿ ಇರಲೇ ಇಲ್ಲ ಎಂದ ಮೇಲೆ ಕಾರಣವೇನು ಹೇಳುವುದು?
              ಇತಿಹಾಸದ ಯಾವುದೇ ಘಟ್ಟದಲ್ಲೂ “ವೇದವನ್ನು ಕೇಳಿದ್ದಕ್ಕಾಗಿ ಕಿವಿಗೆ ಸೀಸ ಸುರಿದ ಘಟನೆ”ಯ ದಾಖಲೆಯೇ ಇಲ್ಲ!

              ಇನ್ನು “ವೇದವು ಬ್ರಾಹ್ಮಣರ ಸ್ವತ್ತು” ಎಂಬ ನಿಮ್ಮ ಕಲ್ಪನೆಯೇ ಅವಾಸ್ತವ. ವೇದವನ್ನು ವಿಂಗಡಿಸಿದ ವೇದವ್ಯಾಸರು ಬ್ರಾಹ್ಮಣರಾಗಿರಲಿಲ್ಲ. ಹಿಂದುಗಳಿಗೆ ಪೂಜ್ಯವಾದ (ಪ್ರಸ್ತಾನತ್ರಯಗಳಲ್ಲಿ ಒಂದೆಂದು ಪರಿಗಣಿತವಾದ) ಭಗವದ್ಗೀತೆ ನೀಡಿದ ಕೃಷ್ಣನೂ ಬ್ರಾಹ್ಮಣನಲ್ಲ. ರಾಮಾಯಣ ರಚಿಸಿದ ವಾಲ್ಮೀಕಿ ಬ್ರಾಹ್ಮಣನಲ್ಲ. ಸಮಸ್ತ ಹಿಂದುಗಳಂದಲೂ ಪೂಜಿತನಾಗಿರುವ ರಾಮನೂ ಬ್ರಾಹ್ಮಣನಲ್ಲ.
              ಎಲ್ಲ ಹಿಂದುಗಳೂ ಧ್ವೇಷಿಸುವ ರಾವಣನು ಬ್ರಾಹ್ಮಣ. ಕೌರವರ ಕಡೆ ಸೇರಿಕೊಂಡ ದ್ರೋಣಾಚಾರ್ಯ ಬ್ರಾಹ್ಮಣ. ಕೃಪಾಚಾರ್ಯರೂ ಬ್ರಾಹ್ಮಣರೇ!
              ಬ್ರಾಹ್ಮಣರೆಂದ ಕಾರಣಕ್ಕೆ ಇವರಾರನ್ನೂ ಹಿಂದುಗಳು (ಬ್ರಾಹ್ಮಣರೂ ಸಹ) ಕೊಂಡಾಡುವುದಿಲ್ಲ.
              ಅದೇ ರೀತಿ, ಅಬ್ರಾಹ್ಮಣರಿಂದ ರಚಿತವಾದರೂ ಆ ಮಹಾ ಕೃತಿಗಳನ್ನು ಪೂಜ್ಯವಾಗಿ ಕಾಣಲಾಗುತ್ತಿದೆ.

              ಇತ್ತೀಚೆಗಿನ ಕಾಲದಲ್ಲಿ ನೋಡಿದರೆ,
              ಶಂಕರಾಚಾರ್ಯರು ಚಾಂಡಾಲನಿಗೆ ನಮಸ್ಕರಿಸಿದರು. ರಾಮಾನುಜಾಚಾರ್ಯರ ಒಬ್ಬರು ಗುರುಗಳು ಹಿಂದುಳಿದ ಸಮಾಜಕ್ಕೆ ಸೇರಿದವರಾಗಿದ್ದರು. ಶೂದ್ರ ಜಾತಿಗೆ ಸೇರಿದ ಶಿವಾಜಿಯ ಗುರುಗಳು ಬ್ರಾಹ್ಮಣರು ಮತ್ತು ಶೂದ್ರ ಜಾತಿಗೆ ಸೇರಿದ್ದರೂ ಶಿವಾಜಿಯನ್ನು ಹಿಂದುಗಳೆಲ್ಲರೂ (ಬ್ರಾಹ್ಮಣರೂ ಸಹ) ಕೊಂಡಾಡುತ್ತಾರೆ. ವಿಜಯನಗರ ಸ್ಥಾಪಿಸಿದ, ಕುರುಬರ ಜಾತಿಗೆ ಸೇರಿದ ಹರಿಹರ-ಬುಕ್ಕರ ಗುರುಗಳು ವಿದ್ಯಾರಣ್ಯರು (ಶಂಕರಾಚಾರ್ಯರಾಗಿದ್ದರವರು).
              ಅಂಬೇಡ್ಕರರನ್ನು ತುಂಬ ಪ್ರೀತಿಸಿ ಅವರ ಏಳ್ಗೆಗೆ ಕಾರಣರಾದವರೂ ಬ್ರಾಹ್ಮಣ ಗುರುಗಳೊಬ್ಬರು!

              ಇತಿಹಾಸದುದ್ದಕ್ಕೂ ಇಂತಹ ಅದೆಷ್ಟೋ ಪ್ರಸಂಗಗಳು ಕಾಣಸಿಗುತ್ತವೆ.
              ಬ್ರಾಹ್ಮಣರು ಎಂದೂ ಯಾರ ಬಾಯಿಗೂ ಸೀಸ ಸುರಿದಿಲ್ಲ. ಈ ರೀತಿಯ ಅಪಕಲ್ಪನೆಗಳನ್ನು ಅದು ಯಾರು ಸೃಷ್ಟಿಸಿದರೋ ಗೊತ್ತಿಲ್ಲ. ಆದರೆ ಸೃಷ್ಟಿಸಿದವರ ಉದ್ದೇಶ ಸ್ಪಷ್ಟ – ಹಿಂದುಗಳಲ್ಲಿ ಜಾತಿಯ ಹೆಸರಲ್ಲಿ ಒಡಕುಂಟು ಮಾಡಿ, ದೇಶದಲ್ಲಿ ಅನೈಕ್ಯತೆ ಉಂಟುಮಾಡುವುದು.
              ಆದರೆ, ಆ ಕಟ್ಟುಕತೆಗಳಿಗೇ ನೀವು ಜೋತುಬಿದ್ದಿರುವುದು ಏತಕ್ಕಾಗಿ ಎಂಬುದು ಅರ್ಥವಾಗುತ್ತಿಲ್ಲ!
              ಇತಿಹಾಸದಲ್ಲಿ ಪುರಾವೆಗಳಿಲ್ಲ ಎಂದ ಮೇಲೆ, ಅದು ಅಸತ್ಯವಾಯಿತು. ನಿಮ್ಮ ವಾದಗಳು ಸತ್ಯದ ಆಧಾರದ ಮೇಲೇ ಇರಬೇಕಲ್ಲವೇ?

              ಉತ್ತರ
              • Nagshetty Shetkar
                ನವೆಂ 6 2013

                “ಬ್ರಾಹ್ಮಣರು ಎಂದೂ ಯಾರ ಬಾಯಿಗೂ ಸೀಸ ಸುರಿದಿಲ್ಲ.”

                Do you have evidence?

                ಈ ರೀತಿಯ ಅಪಕಲ್ಪನೆಗಳನ್ನು ಅದು ಯಾರು ಸೃಷ್ಟಿಸಿದರೋ ಗೊತ್ತಿಲ್ಲ. ”
                It is among Brahmins and Mr. Vijay can give you a reference to Brahmin text.

                ಉತ್ತರ
                • ನವೆಂ 6 2013

                  >> “ಬ್ರಾಹ್ಮಣರು ಎಂದೂ ಯಾರ ಬಾಯಿಗೂ ಸೀಸ ಸುರಿದಿಲ್ಲ.”
                  > Do you have evidence?

                  What is this logic?
                  When I say “Something is there”, then I need to show evidence to prove that.
                  When I say “something is not there”, then not having evidence itself is a proof to show that it is not there.
                  So, when you claim that “putting molten lead into the ears of Shoodras”, you have to show the evidence to prove it. If you cannot show evidence, then your claim will fall off and “ಬ್ರಾಹ್ಮಣರು ಎಂದೂ ಯಾರ ಬಾಯಿಗೂ ಸೀಸ ಸುರಿದಿಲ್ಲ” will become true!

                  So, since you spoke about “putting molten lead into the ears of Shoodras”, you have to prove it,
                  or else,
                  you have to accept it as false.

                  If you can’t prove it and also if you don’t accept it as false, then you will be considered as “dishonest” & “hypocrite”!

                  I am expecting that, “Progressive Thinkers” like you will be atleast honest. 😉

                  ಉತ್ತರ
                  • ನವೆಂ 6 2013

                    Kumar
                    These people do not believe in logic. So it won’t make a difference in this case.

                    ಉತ್ತರ
                  • ವಿಜಯ್ ಪೈ
                    ನವೆಂ 6 2013

                    ಈ ಶೆಟ್ಜರ್ ಸಾಹೇಬರ ಮುಂದೆ ಸುಸಂಬದ್ಧ ತರ್ಕ ಮಾಡೋದು ಒಂದೆ… ——— ಮುಂದೆ ಕಿನ್ನರಿ ಬಾರಿಸುವುದು ಒಂದೆ! 🙂

                    ಉತ್ತರ
                  • Nagshetty Shetkar
                    ನವೆಂ 6 2013

                    Read Manu Smriti.

                    ಉತ್ತರ
            • ವಿಜಯ್ ಪೈ
              ನವೆಂ 6 2013

              ಗುರುಗಳೆ..
              ಚನ್ನ ಬಸವಣ್ಣನವರ ೫೦ ಆಚಾರಗಳಲ್ಲಿ..ಇವು ಯಾಕೆ ಬಂದವು ಅಂತ ಗೊತ್ತೆ ನಿಮಗೆ?

              ೪೫. ಲಿಂಗದ್ರೋಹಿಯ ಪ್ರಾಣವ ಭೇದಿಸುವುದು. ೪೬. ಜಂಗಮದ್ರೋಹಿಯ ಶಿರವನೀಡಾಡುವುದು.

              ಇವೂ ಕೂಡ ಜೀವವಿರೋದಿಯೆ? ಅಥವಾ?.. ಅಜ್ಞಾನಿಗಳಾದ ನಮಗೆ ಜ್ಞಾನವಂತರಾದ ತಾವು ತಿಳಿಸಿಕೊಡಬೇಕೆಂದು ನಮೃ ವಿನಂತಿ.

              ಉತ್ತರ
              • Nagshetty Shetkar
                ನವೆಂ 6 2013

                Mr. Vijay, you speak like an expert on Channabasvanna! Do you know who is a ಲಿಂಗದ್ರೋಹಿ and who is a ಜಂಗಮದ್ರೋಹಿ and what are the differences between ಲಿಂಗದ್ರೋಹಿ and ಜಂಗಮದ್ರೋಹಿ? Can you please explain to us?

                ಉತ್ತರ
                • ನವೀನ
                  ನವೆಂ 6 2013

                  ಸೀಸ ಉಯ್ಯುವುದು,ಪ್ರಾಣಭೇದಿಸುವುದು,ಶಿರವನೀಡಾಡುವುದು ಎಲ್ಲಾ ಜೀವ ವಿರೋಧಿ ನೀತಿಗಳೆ. ನಮ್ಮ ಶೆಟ್ಕರ್ ಸರ್ ಇಂತ ಎಲ್ಲ ಜೀವ ವಿರೋಧಿ ನಿಲುವನ್ನು ವಿರೋಧಿಸುತ್ತಾರೆ.ಇಲ್ಲವಾದರೆ ನೀವುಗಳು (ವಿಜಯ್ ಮತ್ತು ಬೊಳಂಬು) ಅವರನ್ನು Troll ಎಂದು ಕರೆಯಬಹುದು

                  ಉತ್ತರ
                • Nagshetty Shetkar
                  ನವೆಂ 6 2013

                  Please answer to the point. Explain to us the meaning of the terms you have picked to portray Channabasavanna as Jeevavirodhi.

                  ಉತ್ತರ
                • ವಿಜಯ್ ಪೈ
                  ನವೆಂ 6 2013

                  ಗುರುಗಳೆ..
                  ನನಗೆ ಗೊತ್ತಿಲ್ಲ ಅಂದಿದ್ದಕ್ಕೆ ಜ್ಞಾನಿಗಳಾದ ನಿಮ್ಮನ್ನು ಕೇಳಿದ್ದು..”ಇವು ಯಾಕೆ ಬಂದವು ಅಂತ ಗೊತ್ತೆ ನಿಮಗೆ?” ಅಂತ!,,.ನನಗೆ ಈ ‘ಜಂಗಮದ್ರೋಹಿ, ಲಿಂಗದ್ರೋಹಿ’ ಗಳ ಬಗ್ಗೆ ಎಲ್ಲ ವಿವರಣೆ ಬೇಡ..ನನಗೆ ಬೇಕಾಗಿದ್ದು ‘ಪ್ರಾಣವ ಭೇದಿಸುವುದು’, ಶಿರವನೀಡಾಡುವುದು’ ಜೀವವಿರೋಧಿ ಹೌದೊ ಅಥವಾ ಅಲ್ಲವೊ ಎಂಬುದು..

                  ಅಂದಹಾಗೆ ಗುರುಗಳೆ..ನೀವು ಮನುಶಾಸ್ತ್ರ ದ ಎಕ್ಞಪರ್ಟಾ?

                  ಉತ್ತರ
                  • Nagshetty Shetkar
                    ನವೆಂ 6 2013

                    Capital punishment for deserving criminals for proven crime is not jeevavirodhi. One meaning of jangama is society (there are 14 meanings for jangama) and jangamadrohee means one who has committed droha to the society (E.g. Perpetuator of Godhra massacre).

                    ಉತ್ತರ
                    • ವಿಜಯ್ ಪೈ
                      ನವೆಂ 7 2013

                      ಜಂಗಮದ್ರೋಹಿಗೆ ಯಾವುದೇ ಶಿಕ್ಷೆ ಕೊಡುವುದು ಮಾನ್ಯ ಎಂದಾಯ್ತು..ಸರಳ ಉದಾಹರಣೆಯಾಗಿ ನರೇಂದ್ರ ಮೋದಿ ಕೊಟ್ಟಿದ್ದಿರಿ. ಧನ್ಯವಾದ.

                      ಗುರುಗಳೆ..
                      ೧) ಜಂಗಮಕ್ಕೆ ಹದಿನಾಲ್ಲು ಅರ್ಥ ಇದೆ ಎಂದಿದ್ದೀರಿ..ಅದರಂತೆ ಜಂಗಮದ್ರೋಹ ಕೂಡ ಹದಿನಾಲ್ಕು ಬಗೆಯದು ಆಗಿರುತ್ತದೆ ಎಂದಾಯಿತು. ಉಳಿದ ಹದಿಮೂರನ್ನು ತಿಳಿಸಿ ದಯವಿಟ್ಟು. ನಮಗೆ ಶರಣರ ಜೀವವಿರೋಧಿಯಲ್ಲದ ಫನಿಶಮೆಂಟ್ ಗಳು ಯಾವವು ಎಂದು ತಿಳಿಯುತ್ತದೆ.

                      ೨)ಲಿಂಗದ್ರೋಹ ಎಂದರೇನು ಗುರುಗಳೆ? ಅದಕ್ಕೆ ಎಷ್ಟು ಅರ್ಥಗಳಿವೆ? ಅದನ್ನೂ ಸ್ವಲ್ಪ ತಿಳಿಸಿಕೊಡಿ.

                    • ನವೆಂ 7 2013

                      2191 ಜನ ಅಮಾಯಕ ಮುಸ್ಲಿಮರನ್ನು ಹತ್ಯೆ ಮಾಡಿದ ನೆಲ್ಲಿ ಹತ್ಯಾಕಾಂಡದ ಎಲ್ಲಾ ಆರೋಪಿಗಳ ಮೇಲಿನ ಕೇಸ್ ಗಳನ್ನು ವಾಪಸ್ ತೆಗೆದುಕೊಂಡು ಯಾರೊಬ್ಬರಿಗೂ ಶಿಕ್ಷೆಯಾಗದಂತೆ ಬಚಾವ್ ಮಾಡಿದವರನ್ನೂ ಜಂಗಮ ದ್ರೋಹಿ ಎನ್ನಬಹುದು.

            • krishnappa
              ನವೆಂ 6 2013

              ಶೂದ್ರನು ವೇದಗಳನ್ನು ಕೇಳಿಸಿಕೊಂಡರೆ ಅವನ ಬಾಯಿಗೆ ಕಾದ ಸೀಸವನ್ನು ಸುರಿಯಬೇಕು, ಶೂದ್ರನು ವೇದಗಳನ್ನು ಬಾಯಿಯಿಂದ ಹೇಳಿದರೆ ಆತನ ನಾಲಗೆಯನ್ನು ತುಂಡರಿಸಬೇಕು ಎಂದು ಮನುಸ್ಮೃತಿ ಹೇಳುತ್ತದೆ. ಹೀಗಾಗಿ ಪ್ರಾಚೀನ ಕಾಲದಲ್ಲಿ ಶೂದ್ರರು ವೇದಗಳನ್ನು ಕಲಿಯುವ ಧೈರ್ಯ ತೋರಿಸಲು ಸಾಧ್ಯವಿರಲಿಲ್ಲ.

              ಉತ್ತರ
              • ನವೆಂ 6 2013

                ಬಾಯಿಗೋ ಕಿವಿಗೋ?

                ಉತ್ತರ
                • ನವೆಂ 6 2013

                  ಕಾದ ಸೀಸ – ಬಾಯಿಗೆ ಸುರಿಯಬೇಕೋ ಕಿವಿಗೋ?

                  ಉತ್ತರ
                  • krishnappa
                    ನವೆಂ 7 2013

                    ಕಾದ ಸೀಸವನ್ನು ಶೂದ್ರರು ವೇದವನ್ನು ಕೇಳಿಸಿಕೊಂಡರೆ ಕಿವಿಗೆ ಸುರಿಯಬೇಕು ಎಂದು ಮನುಸ್ಮೃತಿ ಹೇಳುತ್ತದೆ. ಕಣ್ತಪ್ಪಿನಿಂದಾಗಿ ಬಾಯಿಗೆ ಸುರಿಯಬೇಕು ಎಂದು ಮನುಸ್ಮೃತಿ ಹೇಳಿದೆ ಎಂದು ಬರೆದಿದ್ದೇನೆ. ಅದಕ್ಕಾಗಿ ವಿಷಾದಿಸುತ್ತೇನೆ.

                    ಉತ್ತರ
                    • ನವೆಂ 7 2013

                      “ಶೂದ್ರ” ಎಂದರೆ ಯಾರು ಎಂಬುದಾಗಿಯೂ ಮನಿಸ್ಮೃತಿ ಹೇಳಿರಬೇಕಲ್ಲವೇ?
                      ದಯವಿಟ್ಟು ಅದನ್ನೂ ತಿಳಿಸುವಿರಾ?
                      ಮತ್ತು ಯಾವ ಅಧ್ಯಾಯದ ಯಾವ ಶ್ಲೋಕದಲ್ಲಿ ಮನುಸ್ಮೃತಿ “ಶೂದ್ರರ ಕಿವಿಯಲ್ಲಿ ಸುರಿಯಬೇಕು” ಎಂದು ಹೇಳುತ್ತದೆ? ಅದರ ಹಿಂದಿನ ಮತ್ತು ಮುಂದಿನ ಶ್ಲೋಕಗಳೇನು?
                      ವಾಕ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಂದರ್ಭವನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಅಲ್ಲವೇ?

                      ಉದಾಹರಣೆಗೆ, ನಾನು ಓದುತ್ತಿರುವ ಒಂದು ಗ್ರಂಥದಲ್ಲಿ “Kill Him and then throw his body to dogs” ಎಂಬ ವಾಕ್ಯವಿದೆ. ಆ ವಾಕ್ಯವನ್ನೇ ಹಿಡಿದುಕೊಂಡು, “ಈ ಗ್ರಂಥವು ಮನುಷ್ಯನನ್ನು ಕೊಲ್ಲಲು ತಿಳಿಸುತ್ತದೆ. ಇದು ಅಮಾನವೀಯ” ಎಂಬ ನಿರ್ಣಯಕ್ಕೆ ಬಂದರೆ ಹೇಗಿರುತ್ತದೆ? ಆ ವಾಕ್ಯದ ಸಂದರ್ಭದೊಡನೆ ಓದಿಕೊಂಡಾಗ ತಿಳಿಯುತ್ತದೆ: “ಒಬ್ಬ ನೀಚನು ಮಾಡಿದ ಅಪರಾಧಕ್ಕಾಗಿ ರಾಜನೊಬ್ಬನು ನೀಡುತ್ತಿರುವ ಶಿಕ್ಷೆ ಅದು”.

                      ಹೀಗಾಗಿ, “ಶೂದ್ರನ ಕಿವಿಯಲ್ಲಿ ಕಾದ ಸೀಸವನ್ನು ಹುಯ್ಯುವುದು” ಯಾವ ಸಂದರ್ಭದಲ್ಲಿ ಬಂದಿದೆ ಎಂದು ತಿಳಿದಾಗ, ಅದನ್ನು ಬರೆದವರ ಉದ್ದೇಶ ಸ್ಪಷ್ಟವಾಗುತ್ತದೆ.
                      ತಾವು ಮನುಸ್ಮೃತಿಯನ್ನು ಬಹಳವಾಗಿ ಅಧ್ಯಯನ ಮಾಡಿರುವುದರಿಂದ, ಈ ಕುರಿತಾಗಿ ನಮ್ಮ ಸಂದೇಹ ನಿವಾರಣೆ ಮಾಡಬೇಕಾಗಿ ವಿನಂತಿ.

              • ನವೆಂ 6 2013

                ಪ್ರಾಚೀನ ಕಾಲದಲ್ಲಿ ವರ್ಣ ನಿರ್ಣಯವಾಗುತ್ತಿದ್ದುದು ಹುಟ್ಟಿನಿಂದ ಅಲ್ಲ. ಹಾಗಾಗಿ ಪ್ರಾಚೀನ ಕಾಲದಲ್ಲಿ ಶೂದ್ರರು ವೇದಗಳನ್ನು ಕಲಿಯುವ ಧೈರ್ಯ ತೋರಿಸಲಿಲ್ಲ ಎಂಬುದು ಕಲ್ಪನೆ. ಆದರೆ ಮಧ್ಯಮ ಕಾಲದಲ್ಲಿ ಅದು ನಿಜವೂ ಆಗಿರಬಹುದು. ಮಧ್ಯಮ ಕಾಲದಲ್ಲೂ ವಿಜಯನಗರದ ಗೊಲ್ಲ ಸಮುದಾಯದ ಹಕ್ಕ ಬುಕ್ಕರನ್ನು ವಿದ್ಯಾರಣ್ಯರು ರಾಜರನ್ನಾಗಿಸಿದ ನಿದರ್ಶನವಿದೆ. ಮೂರನೆಯ ವಂಶವಾದ ಕೃಷ್ಣದೇವರಾಯನದ್ದೂ ಶೂದ್ರ ಎನಿಸಿಕೊಂಡ ಬಂಟ ಸಮುದಾಯವಲ್ಲದೆ ಬೇರೆಯಲ್ಲ.

                ಉತ್ತರ
                • Nagshetty Shetkar
                  ನವೆಂ 6 2013

                  Go read Kosambi.

                  ಉತ್ತರ
                  • ನವೆಂ 7 2013

                    ಮಾರ್ಕ್ಸಿಸಮಿನ ಪಾಠಗಳನ್ನು ಯಥಾವತ್ತಾಗಿ ಭಾರತದ ಸಂದರ್ಭಕ್ಕೆ ಇಳಿಸಲು ಕೊಸಾಂಬಿಯವರದ್ದು ಮಹತ್ತರ ಕೊಡುಗೆ. ಹೀಗೆ ತಿರುಚಿ ಬರೆದುದನ್ನೇ ಮತ್ತೆ ಮತ್ತೆ ಓದುವುದರಿಂದ ಆಗುವ ಲಾಭವಾದರೂ ಏನು?

                    ಉತ್ತರ
                    • Nagshetty Shetkar
                      ನವೆಂ 7 2013

                      Talk sensibly and without prejudice. Kosambi is a great historian and used scientific method in his approach to history.

      • ವಿಜಯ್ ಪೈ
        ನವೆಂ 6 2013

        ಹೌದು ಬೊಳಂಬು ಅವರೆ..
        ಇವರು ಆಗಾಗ ಅವರಿವರ ಕಿವಿಯಲ್ಲಿ ಕಾದ ಸೀಸ ಸುರಿಸುತ್ತಾನೇ ಇರುತ್ತಾರೆ…ಆದರೆ ಸುರಿಸಿಕೊಂಡವರ ಆಡ್ರೆಸ್ ಇಲ್ಲ. ಇದನ್ನು ಕೇಳಿ..ಕೇಳಿ..ಕೇಳಿ ಆಮೇಲೆ ನನಗೆ ಅನುಮಾನ ಬಂತು..ಬಹುಶಃ ಇವರ ಕಿವಿಯಲ್ಲೇ ಯಾರಾದರೂ ಕಾದ ಸೀಸ ಸುರಿದಿರಬೇಕು ಅಂತ!

        ಉತ್ತರ
  11. ಕಿರಣ್
    ನವೆಂ 4 2013

    ಗೋಧ್ರಾ ಬಗ್ಗೆ ಬೊಬ್ಬೆ ಹೊಡ್ಕೊಂಡು ನೀವು ಸುತ್ತುತ್ತಿದ್ದರಲ್ಲ. ಅದಕ್ಕೆ ನೆಲ್ಲಿ ಬಗ್ಗೆ ಅವರು ಮಾತಾಡ್ತಾ ಇದ್ದಾರೆ

    ಉತ್ತರ
    • Nagshetty Shetkar
      ನವೆಂ 4 2013

      Then you are no different from the progressive thinkers whom you have been vehemently criticizing. At least we have principles. Yours is stubborn childish opposition.

      ಉತ್ತರ
  12. krishnappa
    ನವೆಂ 5 2013

    @ vijay – ನಾವು ಜನರು ಆರಿಸಿದ ಮೋದಿಯ ಮೇಲೆ ದಾಳಿ ಮಾಡಿ ಅಧಿಕಾರದಿಂದ ಕೆಳಗಿಳಿಸಲು ಕಾನೂನನ್ನು ಕೈಗೆತ್ತಿಕೊಳ್ಳಬೇಕೆಂದು ಜನರನ್ನು ಪ್ರಚೋದಿಸುತ್ತಿಲ್ಲ. ನಾವು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನೀಡಿದ ವಾಕ್ ಸ್ವಾತಂತ್ರ್ಯಕ್ಕನುಗುಣವಾಗಿ ಮೋದಿಯನ್ನು ರಾಜಕೀಯವಾಗಿ ವಿರೋಧಿಸುತ್ತಿದ್ದೇವೆಯೇ ಹೊರತು ಅವರ ಮೇಲೆ ದೈಹಿಕ ಹಲ್ಲೆ ಮಾಡಲು ಯಾರನ್ನೂ ಪ್ರಚೋದಿಸಿಲ್ಲ. ನಾವು ವಿರೋಧಿಸುತ್ತಿರುವುದು ಮೋದಿಯ ಸಿದ್ಧಾಂತಗಳನ್ನು ಹಾಗೂ ಅವರನ್ನು ಎದುರಿಗೆ ಇಟ್ಟುಕೊಂಡು ಪ್ರತಿಗಾಮಿಗಳು ನಡೆಸುತ್ತಿರುವ ರಾಜಕೀಯ ಅಧಿಕಾರ ಗ್ರಹಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ತರಬಹುದಾದ ಅಪಾಯವನ್ನು.

    ಉತ್ತರ
    • ಗಿರೀಶ್
      ನವೆಂ 5 2013

      ನೀವು ಹೀಗೆ ಡಬ್ಬ ಬಡಿದುಕೊಂಡು ಬೊಬ್ಬೆ ಹೊಡೆದಷ್ಟೂ ಮೋದಿಗೆ ನಾಲ್ಕು ಮತ ಜಾಸ್ತಿಯಾಗುತ್ತದೆ 😀

      ಉತ್ತರ
      • krishnappa
        ನವೆಂ 5 2013

        ಜನರನ್ನು ಎಚ್ಚರಿಸುವ ಕೆಲಸವನ್ನು ನಾವು ಮಾಡುತ್ತೇವೆ. ಅದರಿಂದಲೇ ಮೋದಿಗೆ ಹೆಚ್ಚು ಮತಗಳು ಬಿದ್ದರೆ ಬೀಳಲಿ. ನಾವಂತೂ ಮೋದಿಯ ತತ್ವ ಸಿದ್ಧಾಂತಗಳನ್ನು ಒಪ್ಪುವವರಲ್ಲ. ದುಡಿದು ತಿನ್ನುವ ನಮಗೆ ಮೋದಿ ಬಂದರೂ ಅಷ್ಟೇ, ಇನ್ಯಾರೂ ಬಂದರೂ ಅಷ್ಟೇ ದೊಡ್ಡ ವ್ಯತ್ಯಾಸವೇನೂ ಆಗಲಾರದು. ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ತರುವ ಕನಸುಗಳಿಲ್ಲದ ಮೋದಿಯಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.

        ಉತ್ತರ
    • ಗಿರೀಶ್
      ನವೆಂ 5 2013

      ಬಿಹಾರದ ಪಾಟ್ನಾದಲ್ಲಿ ನಡೆದದ್ದೇನು? ಒಬ್ಬ ಆ ರಾಜ್ಯದ ಆಡಳಿತ ಪಕ್ಷದ ಸದಸ್ಯ. ಇರಲಿ ಬಿಡಿ. ಅದೂ ಕೂಡ ಮತ ಹೆಚ್ಚಿಸುತ್ತದೆ.

      ಉತ್ತರ
  13. Nagshetty Shetkar
    ನವೆಂ 5 2013

    Popularity and electoral victory doesn’t absolve one from guilt. Even Hitler was popular and had come to power by winning elections. Whole world knows what happened subsequently. Do we want history to repeat in India? Do we want systematic persecution of minorities and crushing of dissent? Mr. Vijay in your youthful exuberance and hatred for progressive politics you are welcoming fascism. You will repent soon.

    ಉತ್ತರ
    • ವಿಜಯ್ ಪೈ
      ನವೆಂ 5 2013

      [Popularity and electoral victory doesn’t absolve one from guilt. Even Hitler was popular and had come to power by winning elections. Whole world knows what happened subsequently. Do we want history to repeat in India? Do we want systematic persecution of minorities and crushing of dissent? ]
      ಗುರುಗಳೆ..ಅದೇ ರಾಗ..ಅದೇ ಹಾಡು ನಿಮ್ಮಿಂದ, ನಿಮ್ಮ ಗ್ಯಾಂಗ್ ನಿಂದ ಕೇಳಿ ಬೋರ್ ಬಂದು ಬಿಟ್ಟಿದೆ. ಇಲ್ಲಿ ಇವಕ್ಕೆ ಗಿರಾಕಿಗಳಿಲ್ಲ..ಇಂಥಹ ಎರವಲು ಕತೆಗಳನ್ನು ಬಿಟ್ಟು ಬೇರೆ ಏನಾದ್ದರೂ ಹೇಳಿ..ಸುಮ್ನೆ ಎನರ್ಜಿ ಹಾಳು ಮಾಡಿಕೊಳ್ಳಬೇಡಿ!. ಇನ್ನು ನಮಗೆ ಗೊತ್ತಿರುವುದೇ ಇಷ್ಟು..ನಾವು ಇದನ್ನೇ ಹೇಳುವುದು ಎಂದಿದ್ದರೆ..ಯಾರಾದರೂ ಕಿವಿ ಮೇಲೆ ಹೂವಿಟ್ಟುಕೊಂಡವರು ಸಿಗುತ್ತಾರೊ ನೋಡಿ!.

      [Mr. Vijay in your youthful exuberance and hatred for progressive politics you are welcoming fascism. You will repent soon.]
      ನಿಮ್ಮ ಹಾಗೆ ಭಟ್ಟಂಗಿ ಸಂಸ್ಕೃತಿಯಲ್ಲ ನಮ್ಮದು..ಸ್ವಂತ ವಿಚಾರ ಅನ್ನುವುದು ಇದೆ ನಮಗೆ. ಎಲ್ಲರೂ ನಿಮ್ಮ ಹಾಗೆ ಅನ್ನುವ ಕಲ್ಪನೆಗೆ ಇಳಿಯಬೇಡಿ ದಯವಿಟ್ಟು!…ಮೋದಿ ಆಗಲಿ..ಇನ್ಯಾರೆ ಆಗಲಿ.ಎಷ್ಟರ ಮಟ್ಟಿಗೆ ತಲೆ ಮೇಲೆ ಹೊತ್ತುಕೊಳ್ಳಬೇಕು ಎಂಬ ಸ್ಫಷ್ಟ ಜ್ಞಾನವಿದೆ ನಮಗೆ.

      ಉತ್ತರ
  14. Nagshetty Shetkar
    ನವೆಂ 5 2013

    “ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ತರುವ ಕನಸುಗಳಿಲ್ಲದ ಮೋದಿಯಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.” What is his action plan to address the evil caste system? What is social development policy? What is his commitment to Dalit upliftment? I’m afraid he will go on war with our neighbors. What is his commitment to peace?

    ಉತ್ತರ
    • ರವಿ
      ನವೆಂ 5 2013

      +1
      ರೂಪಾಯಿ ಮೌಲ್ಯ ಕುಸಿತಕ್ಕೆ, ಚೀನಾ ಪಾಕಿಸ್ತಾನದಿಂದ ನಿರಂತರ ಗಡಿ ಅತಿಕ್ರಮಣಕ್ಕೆ, ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರಗಳಿಗೆ, ಕಪ್ಪು ಹಣಕ್ಕೆ, ಗಣಿ ಹಗರಣಗಳಿಗೆ.. ಎಲ್ಲದಕ್ಕೂ ನಮ್ಮ ಜಾತಿ ವ್ಯವಸ್ಥೆಯೇ ಕಾರಣ.. ಮೊದಲು ಅದು ತೊಲಗಬೇಕು.. ಮೋದಿಯೇನು, ಕಾಂಗ್ರೆಸ್ಸ್ ಕೂಡ ಈ ವಿಷಯದಲ್ಲಿ ಬದ್ಧತೆ ತೊರಿಸಲಿಕ್ಕಿಲ್ಲ. ನಿಮ್ಮ ಗುಂಪಿನ ಒಬ್ಬರನ್ನು – ಬಹುಶಃ ಅವಾಂತರ ಮೂರ್ತಿಗಳನ್ನೂ – ಪ್ರಧಾನಿ ಅಭ್ಯರ್ಥಿಯನ್ನಾಗಿಸಿ. ಭಾರತ ಬೇಗ ಪ್ರಕಾಶಿಸಲಿ..

      ಉತ್ತರ
    • ವಿಜಯ್ ಪೈ
      ನವೆಂ 5 2013

      [ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ತರುವ ಕನಸುಗಳಿಲ್ಲದ ಮೋದಿಯಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.]
      ಶೆಟ್ಕರ್ ಮಹಾರಾಜ್..
      ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ತರುವ ಕನಸುಗಳಿದ್ದವರನ್ನು ಆರಿಸಿಕೊಂಡು, ಬಹಿರಂಗವಾಗಿ ಬೆಂಬಲಿಸಿ!..ನೀವು ಎಲ್ಲಿ, ಯಾರ ಪರವಾಗಿ ಇದ್ದೀರಿ ಎಂಬ ಸತ್ಯಾಂಶ ಜನರಿಗೆ ತಿಳಿಯಲಿ. ಅದನ್ನು ಬಿಟ್ಟು ನಾಟಕಗಳಲ್ಲಿನ ಪ್ರಾಂಪ್ಟ್ ಇರುವಂತೆ, ಬ್ಯಾಕ್ ಸೀಟ್ ಡ್ರೈವರಗಳಂತೆ ವರ್ತಿಸಬೇಡಿ. ಇದೇ ಲೇಕನದಲ್ಲಿಯ ಚರ್ಚೆಯನ್ನೇ ನೋಡಿ..ಒಂದು ಪ್ರತಿಕ್ರಿಯೆಯಲ್ಲಿ ಆಮ್ ಆದ್ಮಿ, ಲೋಕಸತ್ತಾ ಅನ್ನುತ್ತೀರಿ..ಅಲ್ಲೇ ಹತ್ತು ಪ್ರತಿಕ್ರಿಯೆ ಬಿಟ್ಟು [If congress party gets 2/3 majority, a legislation to ban fascists might become a reality. Another reason to vote for congress] ಎನ್ನುತ್ತೀರಿ!. ಇಷ್ಟೆಲ್ಲ ಕಪ್ಪೆ ಜಾತಿಯ, ಗೊಂದಲಮಯ, ಹಾಸ್ಯಾಸ್ಪದ ವರ್ತನೆ ತೋರಿಸಿಯೂ [At least we have principles. Yours is stubborn childish opposition.] ಎನ್ನುತ್ತೀರಿ!.

      [What is his action plan to address the evil caste system? What is social development policy? What is his commitment to Dalit upliftment?]
      ಅವರಿಗೆ ಇದರ ಬಗ್ಗೆ ಒಂದು ಪೈಸೆಯ ಜ್ಞಾನವೂ ಇಲ್ಲವಂತೆ..ಅದಕ್ಕೆ ನಿಮ್ಮ ಹತ್ತಿರ ಮಾತನಾಡಿ, ಮಾರ್ಗದರ್ಶನ ತೆಗೆದುಕೊಂಡು ಹೋಗುತ್ತಾರಂತೆ.

      [ I’m afraid he will go on war with our neighbors. What is his commitment to peace?]
      ಇಲ್ಲ..ಇದಕ್ಕೆ ನಿಮ್ಮ ಕೃಷ್ಣಪ್ಪನವರು ಹೇಳಿದ ಸಹೋದರ ಭಾವದ ಸಿದ್ಧಾಂತವನ್ನು ಲಾಗೂ ಮಾಡಿಕೊಳ್ಳೋಣ. ಪಕ್ಕದ ದೇಶದವರು ಒಳಗೆ ಹೊಕ್ಕ ಹಾಗೆ…ನಾವು ಕೆಳಗೆ ಸರಿಯುತ್ತ ಹೋಗೋಣ..ಆಮೇಲೆ ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರ ಸೇರೋಣ!. ಏನಂತೀರಿ ?.

      ಉತ್ತರ
      • krishnappa
        ನವೆಂ 5 2013

        ನೋಡಿ ನಾನು ಸಹೋದರ ಭಾವ ಎಂದು ಹೇಳಿದ್ದು ದೇಶದ ಒಳಗಿನ ವಿವಿಧ ಧರ್ಮಗಳ ಜನರ ನಡುವೆ ಇರಬೇಕು ಎಂದು. ಬೇರೆ ದೇಶಗಳು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ ದಕ್ಕಿಸಿಕೊಳ್ಳುವ ವಾತಾವರಣ ಇಂದು ಇದೆ ಎಂದು ನನಗನಿಸುವುದಿಲ್ಲ. ದೇಶದ ರಕ್ಷಣೆ ಈಗ ಸಮರ್ಪಕವಾಗಿಯೇ ಇದೆ. ಮೋದಿ ಬಂದು ರಕ್ಷಣೆಗಾಗಿ ಮಾಡುವುದು ವಿಶೇಷವೇನೂ ಇಲ್ಲ. ಮೋದಿ ಬಂದರೂ ಪಾಕಿಸ್ತಾನದ ಕಿರಿಕಿರಿ ನಿರಂತರವಾಗಿ ಮುಂದುವರಿಯಲಿದೆ . ಇದು ಪಾಕಿಸ್ಥಾನದಲ್ಲಿ ಧಾರ್ಮಿಕ ಮೂಲಭೂತವಾದಿಗಳು ಸರಕಾರ ಹಾಗೂ ಸೈನ್ಯದಲ್ಲಿ ಮೇಲುಗೈ ಹೊಂದಿರುವವರೆಗೆ ನಿರಂತರವಾಗಿ ಮುಂದುವರಿಯುವುದು ನಿಸ್ಸಂಶಯ. ಮೋದಿ ಇದನ್ನು ತಡೆಯಲು ಸಾಧ್ಯವಿಲ್ಲ. ಇದು ಯುದ್ಧದಿಂದ ಬಗೆಹರಿಯುವ ಸಮಸ್ಯೆ ಅಲ್ಲ.

        ಉತ್ತರ
        • Nagshetty Shetkar
          ನವೆಂ 5 2013

          ಕೃಷ್ಣಪ್ಪ ಸರ್, ನಿಮ್ಮ ಸಂಯಮವನ್ನು ಮೆಚ್ಚಿದೆ. ನಿಲುಮೆಯ ತಲೆಹಿಡುಕ ನಮೋ ಸೈನಿಕರು ಮಾಡುವ ಎಲ್ಲಾ ಅವಹೇಳನವನ್ನು ಲೆಕ್ಕಿಸದೆ ಅವರ ಎಲ್ಲಾ ಪ್ರಶ್ನೆಗಳಿಗೂ ವಿಚಾರಪೂರ್ಣವಾದ ಉತ್ತರವನ್ನು ಕೊಡುತ್ತಲೇ ಬಂದಿದ್ದೀರಿ. ನಿಮ್ಮಂತಹ ಪ್ರಗತಿಪರರ ಸಂಖ್ಯೆ ಬೆಳೆಯಲಿ.

          ಉತ್ತರ
          • ವಿಜಯ್ ಪೈ
            ನವೆಂ 5 2013

            ಭಟ್ಟಂಗಿಶ್ರೀ ಪ್ರಶಸ್ತಿ..ಅವಿರೋಧ, ಒಮ್ಮತದ ಆಯ್ಕೆ !

            ಉತ್ತರ
            • Nagshetty Shetkar
              ನವೆಂ 5 2013

              Why do you have so much hatred towards Mr. Krishnappa? What wrong has he done to deserve your derogatory comments?

              ಉತ್ತರ
              • ವಿಜಯ್ ಪೈ
                ನವೆಂ 5 2013

                ನಿಮ್ಮಿಂದ ‘ತಲೆಹಿಡುಕ ನಮೋ ಸೈನಿಕರು’ ಅಂತ ಕರೆಸಿಕೊಳ್ಳುವ ದರ್ದು ನಮಗಿಲ್ಲ…ಉಳಿದವರ ಬಗ್ಗೆ ಅವಹೇಳನಕಾರಿ ಶಬ್ದ ಬಳಸುವಾಗ ಕೂಡ ವಿಚಾರಮಾಡಿ..ಗೊತ್ತಾಯಿತೆ?. ನಿಮಗೆ ಉಳಿದವರು ಮಾತಾನಾಡಿದ್ರೆ ಹೊಟ್ಟೆಯಲ್ಲಿ ಖಾರ ತಿರುವಿದ ಹಾಗೆ ಆಗುತ್ತೆ..ಉಳಿದವರ ಬಗ್ಗೆ ಮಾತನಾಡುವಾಗ ಜ್ಞಾನ ಇರುವುದಿಲ್ಲವೆ??

                ಉತ್ತರ
                • Nagshetty Shetkar
                  ನವೆಂ 5 2013

                  You guys have no moral rights to preach me decency. Where was it when you attacked Darga Sir in Avadhi debate? You denigrated Darga Sir and now you have guts to preach me!!

                  ಉತ್ತರ
                  • ನವೆಂ 6 2013

                    ಅವಧಿಯಲ್ಲಿ ಏನು ಚರ್ಚೆ ನಡೆದಿತ್ತು ಶೆಟ್ಕರ್ ರವರೇ? ದಯವಿಟ್ಟು ಅದರ ಲಿಂಕ್ ಹಾಕಿ ನೋಡೋಣ

                    ಉತ್ತರ
                • krishnappa
                  ನವೆಂ 6 2013

                  ಶೆಟ್ಕರ್ ಅವರೇ ದಯವಿಟ್ಟು ಅವಹೇಳನಕಾರಿ ಪದಗಳನ್ನು ಬಳಸಬೇಡಿ. ಬೇರೆಯವರು ನಮ್ಮನ್ನು ಅವಹೇಳನ ಮಾಡಿದರೂ ನಾವು ತಾಳ್ಮೆಯಿಂದ ಹೋಗೋಣ. ಶರಣರು ಕೆಟ್ಟ ಭಾಷೆಗಳನ್ನು ಬಳಸುತ್ತಿರಲಿಲ್ಲ. ನಾವು ನಮ್ಮ ಎದುರಾಳಿಗಳು ಇಳಿಯುವಂತೆ ಕೆಳಮಟ್ಟಕ್ಕೆ ಇಳಿಯುವುದು ಬೇಡ.

                  ಉತ್ತರ
                  • ನವೆಂ 6 2013

                    Sir, I’ve not used foul language anywhere. Like Sharanas I’ve not hesitated to call a spade a spade. But you are right, we shall never steep low like our opponents.

                    ಉತ್ತರ
                    • ನವೀನ
                      ನವೆಂ 6 2013

                      Looks like Mr.Shetkar is ignoring Krishnappa’s words… very sad 😦

                    • ವಿಜಯ್ ಪೈ
                      ನವೆಂ 6 2013

                      ಸಕತ್ತಾಗಿದೆ ಜುಗಲ್ ಬಂದಿ..ಹಾಸ್ಯಭರಿತ, ಅದೇ ಸಮಯಕ್ಕೆ ಹಾಸ್ಯಾಸ್ಪದ ಕೂಡ.. ಚಿಂದೋಡಿ ಲೀಲಾ ನಾಟಕ ಕಂಪನಿ!!
                      ಉತ್ತರಿಸಲು ಬಂಡವಾಳವಿಲ್ಲದಾಗ, ‘ಅವಹೇಳನ’ ಎಂಬ ಪಲಾಯನರಾಗ! 🙂

          • ಶೆಟ್ಕರ್ ಅವರೇ,
            ನಿಮ್ಮಂತ ಉನ್ನತ ವಿದ್ಯಾಭ್ಯಾಸ ಮಾಡಿಕೊಂಡವರು,ಶರಣರು “ತಲೆಹಿಡುಕ” ಅನ್ನುವಂತ ಪದವನ್ನೆಲ್ಲ ಬಳಸುವುದು ನೋಡಿದರೆ ಆಘಾತವಾಗುತ್ತದೆ. ನಿಮ್ಮನ್ನು ನೀವೆ ಪ್ರಶ್ನಿಸಿಕೊಳ್ಳಿ.ಇದು ಸರಿಯೇ?

            ಉತ್ತರ
            • ನವೆಂ 6 2013

              Mr. Shetty, I call a spade a spade.

              ಉತ್ತರ
              • ವಿಜಯ್ ಪೈ
                ನವೆಂ 6 2013

                and I even call Babar as one of the finest minds of his time!

                ಉತ್ತರ
                • Nagshetty Shetkar
                  ನವೆಂ 6 2013

                  You talk a lot. Go read Babarnama and what Amitava Ghosh has commented on it.

                  ಉತ್ತರ
                  • ವಿಜಯ್ ಪೈ
                    ನವೆಂ 6 2013

                    Yes..I do..but won’t blabber on and on like you..:).

                    I will read Babarnama..You also read Madhu Kishwar’s Modinama .. Atleast it is a critical appraisal.unlike your Babarnama!

                    ಉತ್ತರ
                    • Nagshetty Shetkar
                      ನವೆಂ 6 2013

                      Mr. Vijay, you are criticising Babarnama even before reading it! Shows what a hypocrite and prejudiced person you are.

                    • ನವೀನ
                      ನವೆಂ 6 2013

                      ಶೆಟ್ಕರ್ ಸರ್,
                      ಇದೇನಿದು ಮೋದಿನಾಮ ನೀವು ಓದಿದ್ದೀರೇ? ಓದಿದ್ದರೆ, ಈ ಮನುವಾದಿಗಳು ನಮ್ಮ ತಲೆ ಸವರು ಮೊದಲಿಗೆ ನೀವೆ ನಮಗೂ ಸಲ್ಪ ಹೇಳಿ ಅದೇನು ಎಂದು

        • ವಿಜಯ್ ಪೈ
          ನವೆಂ 5 2013

          ನಿಮಗೇನೊ ಈ ವಿಚಾರ ಇದೆ ಕೃಷ್ಣಪ್ಪನವರೆ..ಆದರೆ ಶೆಟ್ಕರ್ ಮಹಾರಾಜರಿಗೆ ಮೋದಿ ನೆರೆದೇಶಗಳೊಂದಿಗೆ ಯುದ್ಧ ಪ್ರಾರಂಭ ಮಾಡಲು ಹೋಗಿಯೇ ಬಿಡುತ್ತಾರೆ ಎಂಬ ಫೋಭಿಯಾ ಕಾಡುತ್ತಿದೆ..ತುಂಬಾ ಹೆದರಿ ಬಿಟ್ಟಿದ್ದಾರೆ. ಆದ್ದರಿಂದ ಹತ್ತಿರದಲ್ಲಿರುವ ಅವರಿಗೆ ಸಮಾಧಾನ ಹೇಳಿ..ಧೈರ್ಯ ತುಂಬಿ ದಯವಿಟ್ಟು…

          ಹಾಗೆಯೇ..ನೆರೆರಾಷ್ಟ್ರಗಳಲ್ಲಿ ಪಾಕಿಸ್ತಾನವೊಂದೆ ಅಲ್ಲ..ಚೀನಾವೂ ಬರುತ್ತದೆ ಮತ್ತು ನಾನು ಹೇಳಿದ್ದು ನಿಮ್ಮ ‘ಸಹೋದರ ಭಾವದ ಸಿದ್ಧಾಂತ’ ದ ಬಗ್ಗೆ..

          ಉತ್ತರ
        • ನವೆಂ 6 2013

          ಕೃಷ್ಣಪ್ಪನವರೇ, ಎಂತಹ ಆಘಾತಕಾರಿ ಪರಿಸ್ಥಿತಿ. ಪಾಕಿಸ್ತಾನ ಮುಸ್ಲಿಂ ಮೂಲಭೂತವಾದಿಗಳ ಹಿಡಿತದಲ್ಲಿರವವರೆಗೆ ಭಾರತವನ್ನು ಯಾರೇ ಆಳಿದರೂ ಪಾಕಿಸ್ತಾನದ ಕಿರಿಕಿರಿಯನ್ನು ತಪ್ಪಿಸಲು ಸಾಧ್ಯವೇ ಇಲ್ಲವೇ?

          ಉತ್ತರ
          • krishnappa
            ನವೆಂ 6 2013

            ಹೌದು ಪಾಕಿಸ್ತಾನದಲ್ಲಿ ಮೂಲಭೂತವಾದಿಗಳ ಹಿಡಿತ ಇರುವಲ್ಲಿವರೆಗೆ ಭಾರತದಲ್ಲಿ ಯಾರೇ ಅಧಿಕಾರದಲ್ಲಿ ಇದ್ದರೂ ಅವರಿಂದ ನಮ್ಮ ದೇಶದ ಮೇಲೆ ನಡೆಯುವ ಭಯೋತ್ಪಾದನೆಯನ್ನು ತಪ್ಪಿಸುವುದು ಸಾಧ್ಯವಿಲ್ಲ. ಬಿಜೆಪಿ ಕೇಂದ್ರದಲ್ಲಿ ಆಡಳಿತದಲ್ಲಿ ಇರುವಾಗಲೂ ಪಾಕ್ ಪ್ರೇರಿತ ಭಯೋತ್ಪಾದನೆ ಇದ್ದೇ ಇತ್ತು, ನರೇಂದ್ರ ಮೋದಿ ಬಂದರೂ ಅದು ಇರುತ್ತದೆ. ಇದು ಒಂದು ವಾಸ್ತವ.

            ಉತ್ತರ
            • ನವೆಂ 6 2013

              ಕೃಷ್ಣಪ್ಪನವರೇ, ಪಾಕಿಸ್ತಾನ ಮುಸ್ಲಿಂ ಮೂಲಭೂತವಾದಿಗಳ ಹಿಡಿತದಲ್ಲಿ ಇರುವವರೆಗೂ ಅವರಿಂದ ಭಯೋತ್ಪಾದನೆಯ ಪ್ರಯತ್ನಗಳು ನಡೆಯುತ್ತಲೇ ಇರಬಹುದಾದರೂ ಅದಕ್ಕೆ ಭಾರತದಲ್ಲಿ ಆಳುವ ವ್ಯಕ್ತಿಗಳು ನೀಡುವ ಪ್ರತಿಕ್ರಿಯೆಗಳು ಭಿನ್ನ ಭಿನ್ನವಾಗಿರಬಹುದಲ್ಲವೇ. ಆ ಪ್ರತಿಕ್ರಿಯೆಗಳ ಆಧಾರದ ಮೇಲೆ ಪಾಕಿಸ್ತಾನದ ಮೂಲಭೂತವಾದಿಗಳ ನಿಲುವಿನಲ್ಲಿ ಬದಲಾವಣೆ ಬರಬಹುದಲ್ಲವೇ ?

              ಉತ್ತರ
              • krishnappa
                ನವೆಂ 6 2013

                ಪಾಕಿಸ್ತಾನದಲ್ಲಿ ಇರುವ ಮೂಲಭೂತವಾದಿಗಳು ಸೇನೆಯ ಮೇಲೆ ಹಿಡಿತ ಹೊಂದಿದ್ದಾರೆ. ಹೀಗಾಗಿ ಭಾರತದಲ್ಲಿ ಯಾರೇ ಅಧಿಕಾರದಲ್ಲಿ ಇದ್ದರೂ ಭಯೋತ್ಪಾದನೆಯನ್ನು ನಿಲ್ಲಿಸುವುದು ಸಾಧ್ಯವಿಲ್ಲ ಎಲ್ಲಿಯವರೆಗೆ ಎಂದರೆ ಪಾಕಿಸ್ತಾನ ಮೂಲಭೂತವಾದಿಗಳ ಹಿಡಿತದಿಂದ ಹೊರಗೆ ಬರುವಲ್ಲಿವರೆಗೆ. ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಅದನ್ನು ಗೆಲ್ಲುವ ಸ್ಥಿತಿಯಲ್ಲಿ ಭಾರತ ಇಂದು ಇಲ್ಲ ಏಕೆಂದರೆ ಅಂತರರಾಷ್ಟ್ರೀಯ ಪರಿಸ್ಥಿತಿಗಳು ಅದಕ್ಕೆ ಪೂರಕವಾಗಿ ಇಲ್ಲ. ಪಾಕಿಸ್ತಾನದ ಬಳಿ ಅಣ್ವಸ್ತ್ರಗಳು ಇದ್ದು ಅದು ಯುದ್ಧದಲ್ಲಿ ನಿರ್ನಾಮವಾಗುವ ಪರಿಸ್ಥಿತಿ ಬಂದಲ್ಲಿ ಪಾಕಿಸ್ಥಾನದ ಸೇನೆ ಅದನ್ನು ಬಳಸಲು ಹಿಂಜರಿಯಲಾರದು. ಒಂದು ವೇಳೆ ಅಣ್ವಸ್ತ್ರ ಬಳಸಿದ್ದೇ ಆದಲ್ಲಿ ಭೀಕರ ಸಾವುನೋವು ಹಾಗೂ ನಷ್ಟ ಭಾರತ ಹಾಗೂ ಪಾಕಿಸ್ತಾನ ಎರಡು ದೇಶಗಳಿಗೂ ಆಗುತ್ತದೆ. ಹೀಗಾಗಿ ಪಾಕಿಸ್ತಾನವನ್ನು ಮಣಿಸುವುದು ಇಂದು ಸಾಧ್ಯವಿಲ್ಲದ ಮಾತು. ಅದಲ್ಲದೆ ಪಾಕಿಸ್ತಾನಕ್ಕೆ ಬೆಂಬಲವಾಗಿ ಚೀನಾ ನಿಲ್ಲುತ್ತದೆ. ಇಂಥ ಪರಿಸ್ಥಿತಿಯಲ್ಲಿ ನಮ್ಮ ವೀರಾವೇಶ ಕೆಲಸಕ್ಕೆ ಬರುವುದಿಲ್ಲ. ಭಾರತದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗುವ ಅನಿವಾರ್ಯತೆಗೆ ಸಿಲುಕುವುದು ಸ್ಪಷ್ಟ.

                ಉತ್ತರ
                • ನವೆಂ 6 2013

                  ಕೃಷ್ಣಪ್ಪನವರೇ, ಯಾರೇ ಬಂದರೂ ಪಾಕಿಸ್ತಾನದ ಮುಸ್ಲಿಂ ಭಯೋತ್ಪಾದಕರ ಭಯೋತ್ಪಾದನೆಯಿಂದ ಒಂದಷ್ಟು ಭಾರತೀಯರು ಪ್ರತೀವರ್ಷ ಸಾಯವುದನ್ನು ತಪ್ಪಿಸಲಸಾಧ್ಯ ಅಂತೀರಾ ?

                  ಉತ್ತರ
                  • krishnappa
                    ನವೆಂ 6 2013

                    ಪಾಕಿಸ್ತಾನವು ನೇ ರವಾದ ಯುದ್ಧಗಳಲ್ಲಿ ಭಾರತವನ್ನು ಸೋಲಿಸಲಾಗುವುದಿಲ್ಲ ಎಂದು ಹಿಂದಿನ ಅನುಭವಗಳಿಂದ ಕಂಡುಕೊಂಡಿದೆ. ಹೀಗಾಗಿ ಅದಕ್ಕೆ ಉಳಿದಿರುವುದು ಭಯೋತ್ಪಾದನೆಯ ಹಾದಿ ಮಾತ್ರ. ಅದನ್ನೇ ಅದು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಭಾರತವು ಎಷ್ಟೇ ಎಚ್ಚರಿಕೆ ವಹಿಸಿದರೂ ಭಯೋತ್ಪಾದನೆಯನ್ನು ನಿಲ್ಲಿಸುವುದು ಸಾಧ್ಯವಾಗಲಿಕ್ಕಿಲ್ಲ ಏಕೆಂದರೆ ಪಾಕಿಸ್ತಾನವು ನೆರೆಯ ದೇಶ, ಹಾಗಾಗಿ ಒಂದಲ್ಲ ಒಂದು ವಿಧದಲ್ಲಿ ಅದು ಭಯೋತ್ಪಾದಕರನ್ನು ಒಳನುಸುಳಿಸುವುದನ್ನು ತಡೆಯುವುದು ಅಸಾಧ್ಯ. ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ವಿಶಾಲವಾದ ಗಡಿ ಪ್ರದೇಶವನ್ನು ಯಾವಾಗಲೂ ಕಾಯುತ್ತಾ ಕೂರುವುದು ಅಸಾಧ್ಯ.

                    ಉತ್ತರ
                • ನವೆಂ 6 2013

                  > ಪಾಕಿಸ್ತಾನದಲ್ಲಿ ಇರುವ ಮೂಲಭೂತವಾದಿಗಳು ಸೇನೆಯ ಮೇಲೆ ಹಿಡಿತ ಹೊಂದಿದ್ದಾರೆ.
                  > ಹೀಗಾಗಿ ಭಾರತದಲ್ಲಿ ಯಾರೇ ಅಧಿಕಾರದಲ್ಲಿ ಇದ್ದರೂ ಭಯೋತ್ಪಾದನೆಯನ್ನು ನಿಲ್ಲಿಸುವುದು ಸಾಧ್ಯವಿಲ್ಲ
                  ಅಮೆರಿಕದ ಮೇಲೂ ಭಯೋತ್ಪಾದಕ ಧಾಳಿಯಾಯಿತು. ಜಗತ್ತಿನಾದ್ಯಂತ ಜಿಹಾದಿ ಭಯೋತ್ಪಾದಕರಿಗೆ ಅಮೆರಿಕಾ ಮೇಲೆ ಕೆಂಗಣ್ಣು ಇದೆ. ಆದರೂ, ಮತ್ತೊಮ್ಮೆ ಅಮೆರಿಕಾದ ಮೇಲೆ ಧಾಳಿ ಮಾಡಲಿ ಸಾಧ್ಯವಾಗಿಲ್ಲ!

                  ಇಸ್ರೇಲ್ ಸುತ್ತಲೂ ಅನೇಕ ಮುಸಲ್ಮಾನ ರಾಷ್ಟ್ರಗಳಿವೆ. ಅವೆಲ್ಲವೂ ಇಸ್ರೇಲಿಗೆ ಶತೃ ರಾಷ್ಟ್ರಗಳೇ! ಇಸ್ರೇಲನ್ನು ನುಂಗಿ ನೀರು ಕುಡಿಯಲು ತುದಿಗಾಲ ಮೇಲೆ ನಿಂತಿವೆ. ಅವೆಲ್ಲವೂ ಇಸ್ರೇಲಿಗಿಂತಲೂ ದೊಡ್ಡ ರಾಷ್ಟ್ರಗಳೇ. ಆದರೂ, ಇಸ್ರೇಲಿನ ಒಂದು ಕೂದಲನ್ನೂ ಅವಕ್ಕೆ ಕೊಂಕಿಸಲು ಸಾಧ್ಯವಾಗುವುದಿಲ್ಲ.

                  ಭಾರತವನ್ನು “ಹೇಡಿ” ಸರಕಾರಗಳು ಆಳುತ್ತಿದ್ದರೆ, ಪಾಕಿಸ್ತಾನ ಮಾತ್ರವಲ್ಲ, ನಾಳೆ ನೇಪಾಳ, ಶ್ರೀಲಂಕಾ, ಭೂತಾನ್ ದೇಶಗಳೂ ನಮ್ಮ ಮೇಲೆ ಸವಾಗಿ ಮಾಡಬಹುದು!
                  ಮುಂಬೈ ಧಾಳಿಯಂತಹ, ಪಾರ್ಲಿಮೆಂಟ್ ಧಾಳಿಯಂತಹ ಧಾಳಿಗಳಾದರೂ, ಭಾರತ ಶಾಂತಿಮಂತ್ರ ಜಪಿಸುತ್ತಿದೆ; ಅಮೆರಿಕ ಬಂದು ಸಹಾಯ ಮಾಡಲಿ ಎಂದು ಕಾದು ಕುಳಿತಿದೆ. ಅಫ್ಜಲ್ ಗುರು ಅಂತಹ ಭಯೋತ್ಪಾದಕನನ್ನು ಬಲಿ ಹಾಕಲು ನಮ್ಮ ಸರಕಾರಗಳು ಮೀನಮೇಶ ಎಣಿಸುತ್ತವೆ!
                  ಈ ರೀತಿಯ ಪರಿಸ್ಥಿತಿ ಇರುವಾಗ ಭಯೋತ್ಪಾದನೆ ಹೆಚ್ಚದೆ ಬೇರೇನಾದೀತು?

                  “ಪಾಕ್ ಆಕ್ರಮಿತ ಕಾಶ್ಮೀರ”ವನ್ನು ಒಪ್ಪಿಕೊಂಡಿರುವುದೇ ಹೇಡಿತನ. ಭಯೋತ್ಪಾದಕ ನಿರ್ಮಾಣ ಕೇಂದ್ರಗಳಿರುವ “ಪಾಕ್ ಆಕ್ರಮಿತ ಕಾಶ್ಮೀರ”ದ ಮೇಲೆ ಧಾಳಿ ಮಾಡಿ, ಭಯೋತ್ಪಾದಕ ಕೇಂದ್ರಗಳನ್ನು ನಾಶಗೊಳಿಸಿ, ಭಾರತಕ್ಕೆ ನ್ಯಾಯವಾಗಿಯೇ ಸೇರಬೇಕಾದ ಆ ಪ್ರದೇಶವನ್ನು ಭಾರತಕ್ಕೆ ಸೇರಿಸಿಕೊಂಡಿದ್ದರೆ ಯಾವ ಭಯೋತ್ಪಾದನೆಯೂ ಉಸಿರಾಡಕು ಸಾಧ್ಯವಿರಲಿಲ್ಲ.

                  > ಒಂದು ವೇಳೆ ಅಣ್ವಸ್ತ್ರ ಬಳಸಿದ್ದೇ ಆದಲ್ಲಿ ಭೀಕರ ಸಾವುನೋವು ಹಾಗೂ ನಷ್ಟ ಭಾರತ ಹಾಗೂ
                  > ಪಾಕಿಸ್ತಾನ ಎರಡು ದೇಶಗಳಿಗೂ ಆಗುತ್ತದೆ.
                  ಈಗ ಆಗಿರುವ ಸಾವು-ನೋವು ಕಡಿಮೆಯೇನು? ನಾವಿಂದು ಕಾಶ್ಮೀರವನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ. ಇದೇ ರೀತಿ ಮುಂದುವರೆದರೆ, ಮುಂದೆ ಜಮ್ಮುವೂ ಕೈತಪ್ಪಿ ಹೋಗುತ್ತದೆ. ಪೂರ್ವದಲ್ಲಿ ಅಸ್ಸಾಂ ಕಳಚಿಕೊಳ್ಳುತ್ತದೆ! ಈ ಎಲ್ಲಾ ಪ್ರದೇಶಗಳಲ್ಲಿಯೂ ಸಹಸ್ರಾರು ಜನ ಭಯೋತ್ಪಾದನೆಗೆ ಬಲಿಯಾಗುತ್ತಲೇ ಇದ್ದಾರೆ. ಪ್ರತ್ಯಕ್ಷ ಯುದ್ಧದಲ್ಲಿ ಆಗುವುದಕ್ಕಿಂತ ಹೆಚ್ಚು ಹಾನಿ ಈಗಾಗಲೇ ಆಗಿದೆ ಮತ್ತು ಮುಂದೆಯೂ ಆಗುತ್ತದೆ.

                  > ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಅದನ್ನು ಗೆಲ್ಲುವ ಸ್ಥಿತಿಯಲ್ಲಿ ಭಾರತ ಇಂದು ಇಲ್ಲ
                  ಈ ರೀತಿಯ ಹೇಡಿತನದಿಂದ ಯಾವುದೇ ಪ್ರಯೋಜನವಿಲ್ಲ. ಭಾರತದ ಸೈನ್ಯ ಸಶಕ್ತವಾಗಿದೆ. ಸರಿಯಾದ ರಾಜಕೀಯ ನಾಯಕತ್ವ ದೊರೆತರೆ ಮಾತ್ರ, ಭಾರತದಲ್ಲಿ ಶಾಂತಿ ಸ್ಥಾಪನೆ ಸಾಧ್ಯ. ಪೂರ್ವ ಪಾಕಿಸ್ತಾನದಿಂದ ಗಂಡಾಂತರ ಉಂಟಾದಾಗ, ಇಂದಿರಾಗಾಂಧಿಯವರು ಭಾರತದ ನಿಜವಾದ ಶಕ್ತಿಯ ಪರಿಚಯ ಮಾಡಿಕೊಟ್ಟರು. ೧೯೬೫ರಲ್ಲಿ ಮತ್ತು ೧೯೯ರಲ್ಲಿ ಭಾರತದ ಸೈನ್ಯಶಕ್ತಿಯ ಪರಿಚಯ ಪಾಕಿಸ್ತಾನಕ್ಕಾಗಿದೆ.
                  ಭಾರತವು ಸಶಕ್ತ ರಾಷ್ಟ್ರವೆನ್ನುವುದರಲ್ಲಿ ಅನುಮಾನವಿಲ್ಲ. ಭಯೋತ್ಪಾದನೆಯನ್ನು ಮಟ್ಟಹಾಕಲು ಅದನ್ನು ಉಪಯೋಗಿಸದಿದ್ದರೆ, ನಮ್ಮ ಶಕ್ತಿಗೆ ಯಾವುದೇ ಉಪಯೋಗವಿಲ್ಲ.

                  “ನರಳುವವನಿಗೆ, ಗೋಳಾಡುವವನಿಗೆ ಸದಾ ಸೋಲೇ ಕಾದಿರುತ್ತದೆ. ಎದ್ದು ಹೋರಾಡುವವನಿಗೆ ಗೆಲುವಿನ ಬಾಗಿಲು ತೆರೆಯುತ್ತದೆ”.
                  “ಯುದ್ಧ ಬೇಡವೆಂದ ಮಾತ್ರಕ್ಕೆ ಶಾಂತಿ ಸ್ಥಾಪನೆಯಾಗುವುದಿಲ್ಲ. ಭಯೋತ್ಪಾದನೆಯನ್ನು ಮೆಟ್ಟಿ ಹಾಕುವುದರಿಂದ ಮಾತ್ರ ಶಾಂತಿ ಸ್ಥಾಪನೆ ಸಾಧ್ಯ”

                  ಉತ್ತರ
                  • krishnappa
                    ನವೆಂ 6 2013

                    ಅಣ್ವಸ್ತ್ರಗಳನ್ನು ಬಳಸುವುದರಿಂದ ಎಷ್ಟು ಹಾನಿ ಆಗುತ್ತದೆ ಮತ್ತು ಅದರಿಂದ ಮುಂದಿನ ಪೀಳಿಗೆ ಕೂಡಾ ಹೇಗೆ ನರಳಬೇಕಾಗುತ್ತದೆ ಎಂದು ಜಪಾನಿನ ಹಿರೋಷಿಮಾ ಹಾಗೂ ನಾಗಸಾಕಿಯಲ್ಲಿ ಉಂಟಾದ ಹಾನಿಯನ್ನು ಅಧ್ಯಯನ ಮಾಡಿದರೆ ತಿಳಿದೀತು. ಅವಿವೇಕದಿಂದ ದುಡುಕಿದರೆ ಅದರ ಪರಿಣಾಮವನ್ನು ನಾವೇ ಅನುಭವಿಸಬೇಕಾಗುತ್ತದೆ. ಇಸ್ರೇಲ್ ಸುತ್ತ ಮುತ್ತ ಮುಸ್ಲಿಂ ದೇಶಗಳೇ ಇದ್ದರೂ ಅವುಗಳ ಬಳಿ ಅಣ್ವಸ್ತ್ರ ಇಲ್ಲ. ಹಾಗಾಗಿ ಇಸ್ರೇಲ್ ಸುರಕ್ಷಿತವಾಗಿದೆ. ಭಾರತದ ಪರಿಸ್ಥಿತಿ ಆ ರೀತಿ ಇಲ್ಲ. ಇಸ್ರೇಲ್ ಒಂದು ಸಣ್ಣ ಭೂಪ್ರದೇಶ, ಹಾಗಾಗಿ ನಿರಂತರ ಕಣ್ಗಾವಲು ಸಾಧ್ಯವಾಗಿದೆ. ಭಾರತದ ಗಡಿ ವಿಶಾಲವಾಗಿರುವ ಕಾರಣ ನಿರಂತರ ಕಣ್ಗಾವಲು ಪ್ರಾಯೋಗಿಕವಾಗಿ ಅಸಾಧ್ಯ. 70ರ ಬಾಂಗ್ಲಾ ಯುದ್ಧದ ಸಮಯದಲ್ಲಿ ಪಾಕಿನ ಬಳಿಯಾಗಲಿ ಭಾರತದ ಬಳಿಯಾಗಲೀ ಅಣ್ವಸ್ತ್ರ ಇರಲಿಲ್ಲ. ಭಾರತ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸುವುದರಿಂದ ಪ್ರಯೋಜನವಿಲ್ಲ. ಅದನ್ನು ಈಗಾಗಲೇ ಮಾಡಿಯಾಗಿದೆ ಆದರೂ ಭಯೋತ್ಪಾದನೆ ನಿಂತಿಲ್ಲ. ಭಯೋತ್ಪಾದಕರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾತ್ರ ಇರುವುದಲ್ಲ. ತಾಲಿಬಾನ್ ಉಗ್ರರು ಪಾಕಿಸ್ತಾನದ ಹಲವು ಕಡೆ ಇದ್ದಾರೆ. ಎಂಥ ಮಹಾ ವೀರನೂ ಬಂದರೂ ಇವುಗಳನ್ನೆಲ್ಲ ತಡೆಗಟ್ಟುವುದು ಅಸಾಧ್ಯ, ಬಾಯಿಮಾತಿನಲ್ಲಿ ಹೇಳಬಹುದು ಅಷ್ಟೇ. ವಾಸ್ತವ ವಿಭಿನ್ನವಾಗಿದೆ.

                    ಉತ್ತರ
                    • ನವೆಂ 6 2013

                      > ಭಾರತದ ಪರಿಸ್ಥಿತಿ ಆ ರೀತಿ ಇಲ್ಲ. ಇಸ್ರೇಲ್ ಒಂದು ಸಣ್ಣ ಭೂಪ್ರದೇಶ, ಹಾಗಾಗಿ ನಿರಂತರ ಕಣ್ಗಾವಲು ಸಾಧ್ಯವಾಗಿದೆ.
                      > ಭಾರತದ ಗಡಿ ವಿಶಾಲವಾಗಿರುವ ಕಾರಣ ನಿರಂತರ ಕಣ್ಗಾವಲು ಪ್ರಾಯೋಗಿಕವಾಗಿ ಅಸಾಧ್ಯ.
                      ಒಂದು ಕೆಲಸ ಮಾಡಿ; ಬೆಚ್ಚಗೆ ಹೊದ್ದುಕೊಂಡು ಮಲಗಿಬಿಡಿ.
                      ಏನೂ ಸಾಧ್ಯವಿಲ್ಲವೆಂದ ಮೇಲೆ, ಅನುಭವಿಸುವುದೊಂದೇ ಉಳಿದಿರುವ ಮಾರ್ಗ.
                      ಹೇಡಿಯಾದವನನ್ನು ದೇವರೂ ರಕ್ಷಿಸುವುದಿಲ್ಲ.

                      ಅಹಿಂಸೆಯ ಅಪರಾವತಾರವಾದ ಮಹಾತ್ಮಾ ಗಾಂಧೀಜಿಯವರು ಹೇಳಿದ್ದನ್ನು ಓದಿಕೊಳ್ಳಿ:
                      ….I do not believe India to be helpless……
                      http://www.mkgandhi.org/nonviolence/phil8.htm

                    • ನವೆಂ 6 2013

                      > ಇಸ್ರೇಲ್ ಒಂದು ಸಣ್ಣ ಭೂಪ್ರದೇಶ, ಹಾಗಾಗಿ ನಿರಂತರ ಕಣ್ಗಾವಲು ಸಾಧ್ಯವಾಗಿದೆ.

                      ಇಸ್ರೇಲ್ ಅನ್ನು ಸುತ್ತುಗಟ್ಟಿರುವುದು ೨೨ ಅರಬ್ ರಾಷ್ಟ್ರಗಳು. ಗಿಡುಗದ ಮುಂದೆ ಗುಬ್ಬಚ್ಚಿ ಉಳಿಯಲು ಸಾಧ್ಯವೇ?
                      ಇಸ್ರೇಲಿನಲ್ಲಿ ಭಾರತದಲ್ಲಿರುವಂತಹ ನಾಯಕತ್ವವಿದ್ದಿದ್ದರೆ, ಅದು ಎಂದೋ ಪ್ರಪಂಚದ ಭೂಪಟದಿಂದ ಅಳಸಿ ಹೋಗುತ್ತಿತ್ತು!
                      ಇಸ್ರೇಲ್ ಪರಿಸ್ಥಿತಿಯನ್ನು ಈ ಚಿತ್ರದಲ್ಲಿ ಗಮನಿಸಿ:
                      http://israelsmessiah.com/palestinian_refugees/israel_vs_arabs.htm

                      > ಇಸ್ರೇಲ್ ಸುತ್ತ ಮುತ್ತ ಮುಸ್ಲಿಂ ದೇಶಗಳೇ ಇದ್ದರೂ ಅವುಗಳ ಬಳಿ ಅಣ್ವಸ್ತ್ರ ಇಲ್ಲ.
                      > ಹಾಗಾಗಿ ಇಸ್ರೇಲ್ ಸುರಕ್ಷಿತವಾಗಿದೆ. ಭಾರತದ ಪರಿಸ್ಥಿತಿ ಆ ರೀತಿ ಇಲ್ಲ.
                      ಇರಾನ್ ಈಗಾಗಲೇ ಅಣುಬಾಂಬ್ ಹೊಂದಿದೆ. ಯು.ಎಸ್.ಎಸ್.ಆರ್ ನಿಂದ ಪ್ರತ್ಯೇಕಗೊಂಡ ಎಲ್ಲಾ ಇಸ್ಲಾಮೀ ರಾಷ್ಟ್ರಗಳೂ ಅಣ್ವಸ್ತ್ರ ಹೊಂದಿವೆ. ಅವೆಲ್ಲವೂ ಅರಬ್ ದೇಶಗಳಿಗೆ “ಪಾನ್ ಇಸ್ಲಾಂ” ವಿಷಯದಲ್ಲಿ, ಇಸ್ರೇಲ್ ವಿಷಯದಲ್ಲಿ, ಸಹಕಾರ ನೀಡುತ್ತವೆ.
                      ಇಸ್ರೇಲಿಗಿರುವ ಅಣ್ವಸ್ತ್ರ ರಾಷ್ಟ್ರಗಳ ಸವಾಲಿನ ಕುರಿತಾಗಿ ಇಲ್ಲಿ ಓದಿ:
                      http://link.springer.com/article/10.1007%2FBF02700293#page-1
                      http://www.mythsandfacts.org/article_view.asp?articleID=167
                      http://www.hraicjk.org/the_islamic_bomb.html

                    • ನವೆಂ 6 2013

                      “The nation of Israel is surrounded by twenty-two hostile Arab/Islamic dictatorships that are 640 times her size and 60 times her population.”

                      Your argument that the nation of Israel is small and safeguarding its border is easy, does not hold good here. Since it is small and enemy is much larger, guarding its border is much more difficult. And just guarding the border is not enough. They may use small missiles to attack any part of Israel!
                      In case of India, our enemy Pakistan is not capable of throwing bombs on all parts of India. And Pakistan is much smaller than India. So, guarding India should be much easier compared to Israel. And given our big size, huge population, strong military, richness in resources, India must have been a dominant nation; Pakistan should not even dream about attacking India. But, our coward leadership has made the impossible as possible!!

      • Nagshetty Shetkar
        ನವೆಂ 5 2013

        ವಿಜಯ್ ಅವರೇ, ತಮಗೆ ವಸ್ತುನಿಷ್ಠವಾಗಿ ಶಿಸ್ತುಬದ್ಧವಾಗಿ ಸಭ್ಯತೆಯಿಂದ ಚರ್ಚೆ ಮಾಡಲು ಬರುವುದಿಲ್ಲ ಅಂತ ಸ್ಪಷ್ಟವಾಗಿದೆ. ಆಧುನಿಕ ಶಿಕ್ಷಣವೊಂದೇ ಸಾಂಸ್ಕೃತಿಕ ಬೆಳವಣಿಗೆಗೆ ಕಾರಣವಾಗುವುದಿಲ್ಲ ಅಂತ ತಮ್ಮನ್ನು ನೋಡಿದರೆ ತಿಳಿಯುತ್ತದೆ. ಪ್ರಗತಿಪರರನ್ನು ಟೀಕಿಸುವುದೊಂದೇ ತಮ್ಮ ಗುರಿ. ಅದರ ಸಾಧನೆಗೆ ನಿಲುಮೆ ಅಂತಹ ಬೇಕಾರ್ ತಾಣವನ್ನು ಕಟ್ಟಿಕೊಂಡಿದ್ದೀರಿ. ನಮಸ್ಕಾರ!

        ಉತ್ತರ
        • ವಿಜಯ್ ಪೈ
          ನವೆಂ 5 2013

          [ವಿಜಯ್ ಅವರೇ, ತಮಗೆ ವಸ್ತುನಿಷ್ಠವಾಗಿ ಶಿಸ್ತುಬದ್ಧವಾಗಿ ಸಭ್ಯತೆಯಿಂದ ಚರ್ಚೆ ಮಾಡಲು ಬರುವುದಿಲ್ಲ ಅಂತ ಸ್ಪಷ್ಟವಾಗಿದೆ. ಆಧುನಿಕ ಶಿಕ್ಷಣವೊಂದೇ ಸಾಂಸ್ಕೃತಿಕ ಬೆಳವಣಿಗೆಗೆ ಕಾರಣವಾಗುವುದಿಲ್ಲ ಅಂತ ತಮ್ಮನ್ನು ನೋಡಿದರೆ ತಿಳಿಯುತ್ತದೆ]
          ಗುರುಗಳೆ..ನಿಮ್ಮ “ಶಿಸ್ತುಬದ್ಧ, ತಾರ್ಕಿಕ ಗುಣಮಟ್ಟದ, ವಸ್ತುನಿಷ್ಟ, ಸಭ್ಯ, ಸಾಮಾಜಿಕ ಕಾಳಜಿ ತುಂಬಿರುವ, ಪ್ರಗತಿಪರ ವಿಚಾರಗಳನ್ನು ಓದುಗರಿಗೆ ಉಣಿಸುತ್ತಿರುವ” ಪ್ರತಿಕ್ರಿಯೆಗಳು ಇನ್ನೂ ಈ ತಾಣದಲ್ಲಿಯೇ ಇವೆ ಮತ್ತು ಇರುತ್ತವೆ. ಓದಿದವರು ಅವುಗಳ ಗುಣಮಟ್ಟವನ್ನು ನಿರ್ಧರಿಸಲಿ..ಆದ್ದರಿಂದ ತಾವು ದಯವಿಟ್ಟು ಮೈ ಪರಚಿಕೊಳ್ಳದಿರಿ. ನೀವೂ ಕೂಡ one of the finest minds ನಲ್ಲಿ ಬರುತ್ತೀರಿ.

          [ಪ್ರಗತಿಪರರನ್ನು ಟೀಕಿಸುವುದೊಂದೇ ತಮ್ಮ ಗುರಿ. ಅದರ ಸಾಧನೆಗೆ ನಿಲುಮೆ ಅಂತಹ ಬೇಕಾರ್ ತಾಣವನ್ನು ಕಟ್ಟಿಕೊಂಡಿದ್ದೀರಿ. ನಮಸ್ಕಾರ!]
          ಹೌದಾ ಗುರುಗಳೆ..ತುಂಬಾ ತಡವಾಗಿ ಆದ ಜ್ಞಾನೋದಯ!. ಹೌದು..ಇಲ್ಲಿ ನಿಮ್ಮಗಳ ಹಾಡುಗಾರಿಕೆಗೆ ಪಕ್ಕವಾದ್ಯದವರು, ಚಪ್ಪಾಳೆ ಹೊಡೆಯುವವರು ಸಿಗುವುದಿಲ್ಲ. ಆದ ನಿರಾಶೆಗೆ ಕ್ಷಮೆ ಇರಲಿ..

          ಉತ್ತರ
          • Nagshetty Shetkar
            ನವೆಂ 5 2013

            Mr. Vijay, you have lost your mind. I am too small a person, I don’t care your derogatory comments. Your abusive language towards Sharanas like Darga Sir shows you are a descendant of the Manuvadi Brahminshahi of Bijjala’s court. I am worried about the future of the country when educated young men like you are being swayed by fascism.

            ಉತ್ತರ
            • ವಿಜಯ್ ಪೈ
              ನವೆಂ 5 2013

              [Mr. Vijay, you have lost your mind. I am too small a person, I don’t care your derogatory comments. Your abusive language towards Sharanas like Darga Sir shows you are a descendant of the Manuvadi Brahminshahi of Bijjala’s court.]
              ಮತ್ತೆ ಹನ್ನೆರಡನೆಯ ಶತಮಾನಕ್ಕೆ ಪ್ರಯಾಣ!..ನೀವು ನಿಜವಾಗಲೂ too small a person ನ್ನೆ !..ಮೇಲಿನ ಕಮೆಂಟ್ ನಲ್ಲಿ ಎಲ್ಲಿ ನಿಮ್ಮ ದರ್ಗಾ ಸರ್ ಬಗ್ಗೆ ಅವಹೇಳನಕಾರಿ ಮಾತು ಕಂಡುಬಂತೊ ಗೊತ್ತಾಗಲಿಲ್ಲ…ನಾನು ಯಾರ ಜೊತೆ ಮಾತನಾಡುತ್ತಾ ಇದೇನೆ ಎಂಬ ಬಗ್ಗೆ ಗೊಂದಲ ಆಗ್ತಾ ಇದೆ?

              [I am worried about the future of the country when educated young men like you are being swayed by fascism.]
              ಅದನ್ನು ಕಾಲ ಉತ್ತರಿಸುತ್ತೆ…ನನಗೂ ನಿಮ್ಮಂತ ವಿಘ್ನ ಸಂತೋಷಿಗಳ, ಸುಳ್ಳಿನ ಪುಂಗಿಯೂದುವವರ ಬಗ್ಗೆ ಚಿಂತೆ ಇದೆ..ನಿಮ್ಮಂತವರಿರುವಾಗ ಈ ದೇಶದ ಉದ್ದಾರ ಸಾಧ್ಯವೆ ಎಂದು!

              ಉತ್ತರ
              • Nagshetty Shetkar
                ನವೆಂ 5 2013

                Manu is deeply ingrained in every atom of yours Mr. Vijay. You are probably beyond cure.

                ಉತ್ತರ
                • ನವೀನ
                  ನವೆಂ 6 2013

                  ಶೆಟ್ಕರ್ ಸರ್,
                  ನಿಮ್ಮ ಗುರುಗಳ ಬಳಿ ಈ ವಿಜಯ್ ಅವರನ್ನು ಮೆಟ್ಟಿಕೊಂಡಿರುವ ಮನುವನ್ನು ಬಿಡಿಸಲು ಮದ್ದಿಲ್ಲವೇ? ಇದ್ದರೆ ದಯವಿಟ್ಟು ಅದನ್ನು ಪ್ರಯೋಗಿಸಿ ಇವರ ಮೇಲೆ

                  ಉತ್ತರ
                  • Nagshetty Shetkar
                    ನವೆಂ 6 2013

                    Darga Sir is trying.

                    ಉತ್ತರ
                  • ವಿಜಯ್ ಪೈ
                    ನವೆಂ 6 2013

                    ರಿ ನವೀನ್..ನಮ್ಮ ಗುರುಗಳು ಈಗಾಗಲೇ ಬಿಡುವಿಲ್ಲದ ಕಾಯಕಯೋಗದಲ್ಲಿದ್ದಾರೆ..ಅದರ ಹೊರತಾಗಿ ‘ಫ್ಯಾಸಿಸ್ಟ್’ ಸರಕಾರ ಬರದ ಹಾಗೆ ತಡೆಯುವ ಎಕ್ಟ್ರಾ ಪ್ರೊಜೆಕ್ಟ್ ಬೇರೆ ಸಿಕ್ಕಿದೆ…ದೇಶಾದ್ಯಂತ ಜನರನ್ನು ತಿದ್ದಬೇಕು. ಅಂತದರಲ್ಲಿ ಕಣ-ಕಣದಲ್ಲಿಯೂ ಮನು ತುಂಬಿಕೊಂಡಿರುವ ನನ್ನನ್ನು ತಿದ್ದಿ ಅಂತ ಕೇಳಿಕೊಳ್ಳುತ್ತಿದ್ದಿರಲ್ಲ!..ಅದಕ್ಕೆ ಅವರು ಹತ್ತಿರ-ಹತ್ತಿರ ಹತ್ತು ವರುಷಗಳಾನ್ನದರೂ ಮುಡಿಪಿಡಬೇಕಾಗುತ್ತದೆ ಮತ್ತು ರಿಸಲ್ಟ್ ಕೂಡ ಗ್ಯಾರಂಟಿಯಿಲ್ಲ. ಆದ್ದರಿಂದ ಪಾಪ..ಅವರ ಪ್ರಾಜೆಕ್ಟಗೆ ತೊಂದರೆ ಕೊಡಬೇಡಿ..ಚುನಾವಣೆ ಹತ್ತಿರ ಬಂದಿದೆ.

                    ಉತ್ತರ
                    • ನವೀನ
                      ನವೆಂ 6 2013

                      ಶೆಟ್ಕರ್ ಸರ್ ಅವರು ಒಂದಲ್ಲ ಒಂದು ದಿನ ನಿಮ್ಮ ಮೌಢ್ಯದ ಮನುಪೊರೆಯ ಕಳಚುತ್ತಾರೆ ಅನ್ನುವ ವಿಶ್ವಾಸ ನಮಗಿದೆ

  15. ನವೆಂ 5 2013

    “ಮೋದಿ ಭೀತಿ”ಯಲ್ಲಿ ಛಳಿ ಕಾಯಿಸಿಕೊಳ್ಳಲು ಯತ್ನಿಸುತ್ತಿರುವವರಿಗೆ ಕೆ.ಪಿ.ಎಸ್.ಗಿಲ್ ಅವರ ಹೇಳಿಕೆ “ವಿಷಮಶೀತ ಜ್ವರ” ವನ್ನೇ ತರಬಹುದು!
    http://indiatoday.intoday.in/story/kps-gill-says-modi-cant-be-blamed-for-godhra-riots/1/321207.html

    ಉತ್ತರ
  16. ನವೆಂ 5 2013

    Gill says in the book, “The so called dharm-nirapeksh (secular) parties were taking advantage of the fact that Mr Modi follows the principles of Hindutva. They were portraying Hindutva as something anti non-Hindu religions. My understanding was that Mr Modi’s practising of principles of Hindutva in no way meant that he would allow killing people of other religions… Today Gujarat is one of the best administered states not only for Hindus but for all religions and all castes. The credit for this goes to only and only Mr Modi.”

    ಉತ್ತರ
  17. ನವೆಂ 5 2013

    > You people employed perverse tactics in the debate with Darga Sir on Avadhi.
    Who or what is this “Darga”!?

    I have heard about “Darga” in Islamic context – a burial place of Muslim saints, covered with clothes and religious flags. This is a sacred place for Muslims.
    Here is a link: http://en.wikipedia.org/wiki/Dargah

    When I searched for “Darga” in google, I got this link: http://en.wikipedia.org/wiki/Darga
    Are you referring to one of these or your “Darga” completely different!?

    ಉತ್ತರ
  18. ನವೆಂ 5 2013

    ಹಗರಣಗಳ ಪರ್ವತವನ್ನು ನಿರ್ಮಿಸಿರುವ, ಭಾರತದ ಆರ್ಥಿಕತೆಯನ್ನು ಹಳ್ಳ ಹಿಡಿಸಿರುವ, ಭಾರತದ ಸಂರಕ್ಷಣೆಯನ್ನು ಗಾಳಿಗೆ ತೂರಿರುವ, ದೇಶಕ್ಕೆ ಎಲ್ಲ ರೀತಿಯಲ್ಲೂ ಗಂಡಾಂತರಕಾರಿಯಾಗಿರುವ ಯುಪಿಎ ಸರಕಾರ ಬೇಕೋ?
    ಅಥವಾ
    “ಸರ್ವರಿಗೆ ಸಮಪಾಲು – ಸರ್ವರಿಗೆ ಸಮಬಾಳು” ನೀತಿಗನುಗುಣವಾಗಿ ಆಡಳಿತ ನೀಡಿರುವ, ಅಭಿವೃದ್ಧಿ ಪಥದತ್ತ ತನ್ನ ರಾಜ್ಯವನ್ನು ಮುನ್ನಡೆಸಿರುವ, ಭಯೋತ್ಪಾದನೆಗೆ ಸಮರ್ಥ ಉತ್ತರ ನೀಡಿ ಕಳೆದ ೧೦ ವರ್ಷಗಳಿಂದ ಯಾವುದೇ ಕೋಮುಗಲಭೆಗಳಾಗದಂತೆ ನೋಡಿಕೊಂಡಿರುವ ಮೋದಿಯವರ ನೇತೃತ್ವದ ಸರಕಾರ ಬೇಕೋ?

    Read “First hand experience of a senior citizen in Modi’s Gujarat”: http://manushi.in/articles.php?articleId=1724&ptype=campaigns

    Some phrases from the above writeup:

    I’m a 72 year old South Indian Brahmin lady – not belonging to Narendra Modi’s caste,……

    Once we were returning from Junagarh after attending a function in a school. It was around midnight by the time we reached Gandhinagar. To my utter disbelief (I was so used to Delhi), I saw girls/women walking along the road in singles or in groups, perhaps after a mid-night shift in the nearby factories. I asked our driver about safety of girls and women in Gujarat. The driver announced proudly that they were safe and that they could move about in the night in any part of Gujarat.

    Modi also ensured poor people’s access to justice, by streamlining the administration in the Secretariat……
    I have heard instances of Modi putting down some of his relatives who tried to exploit their relationship with Modi. Till this day, no allegation of corruption sticks on him.

    Since 2002, there has been peace and progress in the State. This is probably due to Modi’s policy of “justice for all and appeasement of none.” Pampering one community at the cost of another only leads to public resentment, perpetuation of communal divide………

    ಉತ್ತರ
    • ನವೆಂ 6 2013

      Mr. Rakesh, please stop people from using Nilume as a platform to canvas for NaMo. It is one thing to discuss NaMo’s performance and policies, it is yet another thing to do propaganda. You say your site has no ideological binding, but this site is unabashedly right wing.

      ಉತ್ತರ
      • ನವೆಂ 6 2013

        > please stop people from using Nilume as a platform to canvas for NaMo.
        Who started referring to Namo here?

        Look at these statements:
        1. Nagshetty Shetkar> NaMo doesn’t even regret the destruction of Babri Masjid and he will not regret the misfortune that his development program will bring for the poor and under privileged sections of our society.
        2. krishnappa> ಗುಜರಾತಿನಲ್ಲಿ ಬಹುಸಂಖ್ಯಾತರ ರಾಜಕೀಯ ಧ್ರುವೀಕರಣ ಮಾಡಿಯೇ ಮೋದಿ ಗೆದ್ದದ್ದು
        3. Nagshetty Shetkar> When someone of his stature says those who want to vote NaMo unfriend him, it sends right signal. It makes people think if they really want to vote NaMo when rational people like Darga Sir and URA are opposed to NaMo.
        4. Nagshetty Shetkar> She has said Modi should become PM. That’s a great error in judgment.

        And you can use Nilume as a platform to canvas for your candidate, right?
        Look at your statements:
        1. krishnappa> ಲೋಕಸತ್ತಾ, ಆಮ್ ಆದ್ಮಿ ಪಕ್ಷಗಳನ್ನು ಹೆಸರಿಸಬಹುದು. ಇವೆರಡೂ ಪಕ್ಷಗಳು ಧಾರ್ಮಿಕ, ಜಾತಿವಾದಿ, ತುಷ್ಟೀಕರಣ ರಾಜಕೀಯ ಮಾಡದೆ ಜನರ ಸಮಸ್ಯೆಗಳನ್ನು ಎತ್ತಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಶ್ರಮಿಸುತ್ತಿವೆ.
        2. krishnappa> ಆಮ್ ಆದ್ಮಿ ಪಕ್ಷವು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆಗಳು ಹೇಳುತ್ತಿವೆ. ಯುವಜನಾಂಗ ದೆಹಲಿ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷದ ಪರವಾಗಿ ಉತ್ಸಾಹದಿಂದ ದುಡಿಯುತ್ತಿದ್ದಾರೆ. ಇವರು ಗೆದ್ದರೆ ಅದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೌಲ್ಯಾಧಾರಿತ ರಾಜಕೀಯವನ್ನು ತರಲು ಸಹಾಯವಾಗಲಿದೆ. ಒಂದು ವೇಳೆ ಇವರು ಕಡಿಮೆ ಸೀಟುಗಳನ್ನು ಗೆದ್ದರೂ ಅದು ನೈತಿಕ ಜಯವೇ
        3. Nagshetty Shetkar> ಅಣ್ಣಾ ಹಜಾರೆಯಂಥಲ್ಲದೆ ಕೇಜ್ರಿವಾಲರಿಗೆ ಭಾರತವು ಸಾಗಬೇಕಾದ ದಾರಿಯ ಬಗ್ಗೆ ಸ್ಪಷ್ಟ ತಿಳುವಳಿಕೆ ಇದೆ,

        You can go on doing anti-propaganda and there is no problem. And you don’t need to give any facts or statistics to substantiate your claims.
        When somebody gives some “First-hand experience in Gujarat” you get irritated and you want to stop that.
        Do you call this democracy? Is this what “Progressive Thinking” means?
        If this is the way of progressive thinkers, then I can very easily conclude that, “Progressive Thinkers are autocratic and dictatorial”!

        And look at the language you have used throughout this discussion:
        1. Nagshetty Shetkar> ಕೃಷ್ಣಪ್ಪ ಅವರು ಬಹಳ ಸಂಯಮದಿಂದಲೇ ನಿಲುಮೆಯ ತಲೆಹಿಡುಕ (troll) ಗಳಿಗೆ ಉತ್ತರ ಕೊಡುತ್ತಾ ಬಂದಿದ್ದಾರೆ.
        2. Nagshetty Shetkar> You people are trolls and keep asking irrelevant questions.
        3. Nagshetty Shetkar> ಪ್ರಗತಿಪರರು ನಿಲುಮೆಯ ತಲೆಹಿಡುಕರನ್ನು ಮೆಚ್ಚಿಸಲು ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಮತಿಹೀನರಲ್ಲ.

        And all through this discussion you have used two different names:
        1. Nagshetty Shetkar
        2. krishnappa
        Why do you want to use two different names? Is it just to show that there are two people supporting your arguments? Are you thinking that, a lie can become a true if more people support it?

        And all throughout you are opposing NaMo, BJP, Sangh Parivar and using the name of “Darga Sir”, “Nelli”, “URA” to justify your opposition. Don’t you have your own opinion? Is this not “Blind Belief”? When your arguments don’t have support of the “Truth”, you will need support from “so-called progressive thinkers” views!!

        And when all your arguments are defeated, you start scolding Nilume, you call people “trolls”, etc!! What a great “Progressive Thinker” you are!!!!

        ಉತ್ತರ
        • ನವೆಂ 6 2013

          ಕುಮಾರ್ ರವರೇ, ನಾಗಶೆಟ್ಟಿ ಶೆಟ್ಕರ್ ಮತ್ತು ಕೃಷ್ಣಪ್ಪನವರು ಬಳಸುವ ಭಾಷೆಯನ್ನು ನೋಡಿದರೆ ಅವರಿಬ್ಬರು ಬೇರೆ ಬೇರೆ ಎಂದು ಅನಿಸುವದಿಲ್ಲವೇ? ಇಬ್ಬರಲ್ಲಿ ಒಬ್ಬರು ಬಳಸುವ ಭಾಷೆ ತುಂಬಾ ಸಂಯಮದಿಂದ ಕೂಡಿರುವುದು ಕಾಣಿಸುವದಿಲ್ಲವೇ?

          ಉತ್ತರ
        • Nagshetty Shetkar
          ನವೆಂ 6 2013

          Mr. Kumar, I am not Krishnappa Sir!! Please don’t cheapen yourself by making silly allegations against me.

          Why are you after me?!! Have you seen the foul language and poor quality of arguments used by Mr. Vijay, Mr. Bala Bhat, Ms. Sahana, and others? Have you objected to them??

          I or Krishnappa Sir haven’t used Nilume for propaganda. The name of Kejriwal came up as a response to a question asked by Mr. Vijay.

          Our opposition to NaMo and fascists is based on principles. We are guided by the great vision of Basavanna and other Vachanakaras.

          I quote elderly progressive thinkers as I have great respect for their knowledge and ethical integrity. But you seem to be interested in my opinions!! Tell me on what topic do you want to know my opinion?

          ಉತ್ತರ
          • ನವೆಂ 6 2013

            > I am not Krishnappa Sir!!
            I wrote what I felt. If you are not Krishnappa, then fine.

            > quality of arguments used by Mr. Vijay, Mr. Bala Bhat, Ms. Sahana, and others?
            > Have you objected to them??
            Who is Bala Bhat, Sahana?
            I don’t see any messages posted by those people?
            So, how can you expect me to object to some “ghost” messages?
            And if you look at the whole thread, it is obvious who has used the foul language.
            Don’t you think, “ತಲೆಹಿಡುಕ (troll)” is foul language?
            Look at the thread history and see who used it and when?

            > I or Krishnappa Sir haven’t used Nilume for propaganda.
            > The name of Kejriwal came up as a response to a question asked by Mr. Vijay.
            Look at the thread history to see, who brought the name of NaMo to this debate?
            So, I posted some positive points about NaMo in response to your “anti-propaganda”.

            > Our opposition to NaMo and fascists is based on principles
            Our opposition to “so-called progressive thinkers” and “so-called secular brigard” is also based on principles.

            > I quote elderly progressive thinkers as I have great respect for their knowledge
            > and ethical integrity.
            I quote NaMo as I have great respect for his knowledge, ethical integrity and capability.

            Just because you don’t like a person or a ideology, scolding it as “fascist” is not “progressive”; It is “retardation”, “Stalinist mentality”, “Mao thinking”!!

            If you keep using the word “fascist” and don’t know how to show respect to people of different views, then you will also not receive respect.

            ಉತ್ತರ
            • Nagshetty Shetkar
              ನವೆಂ 6 2013

              Mr. Kumar, you too are a troll. I have no business with you. Go away.

              ಉತ್ತರ
              • ನವೆಂ 6 2013

                So, you are not interested in meaningful discussion.
                When all your arguments are defeated, you resort to personal scolds!
                Your “Intolerance” to democratic methods are completely exposed.

                Be truthful to yourself first. Don’t follow somebody blindly. Make your own opinions. But, opinions should be based on hard facts and not because of mere respect somebody has commanded.

                ಉತ್ತರ
                • ನವೀನ
                  ನವೆಂ 7 2013

                  “Troll” ಅನ್ನುವುದು ಶೆಟ್ಕರ್ ಅವರ ಗುರುಗಳು ಕಲಿಸಿಕೊಟ್ಟಿರುವ ಕಡೆಯ ಅಸ್ತ್ರವಿರಬೇಕು.ವಾದಕ್ಕೆ ಏನು ಉಳಿಯದಾಗ ಇದ್ದನು ಎಸೆದು ಓಡು ಎಂದು 😛

                  ಉತ್ತರ
                  • Nagshetty Shetkar
                    ನವೆಂ 7 2013

                    Mr. Naveen, on Avadhi Darga Sir had challenged you people to shoot all tough questions at him. He had no fear and he addressed all of your tough questions. I am trying to do the same here. But you people are beyond correction and you try to provoke me.

                    ಉತ್ತರ
                    • ನವೆಂ 7 2013

                      ಶೆಟ್ಕರ್ ರವರೇ, ಅವಧಿಯಲ್ಲಿ ಯಾವ ಚರ್ಚೆಯಾಗಿತ್ತು. ಅದರ ಲಿಂಕ್ ಕೊಡಿ ಪ್ಲೀಸ್

                    • ವಿಜಯ್ ಪೈ
                      ನವೆಂ 7 2013

                      ಅವಧಿ ಚರ್ಚೆ ನೋಡಿದವರಿಗೆ ನಿಮ್ಮ ‘ವೀರಾವೇಶ’ದ ಬಗ್ಗೆ ಗೊತ್ತೆ ಇರುತ್ತದೆ..ಸಣ್ಣ ಮಕ್ಕಳ ಹಾಗೆ ಹೇಳಿದ್ದೇ ಹೇಳಬೇಡಿ ದಯವಿಟ್ಟು..ಈ ಚರ್ಚೆಯ ಕೊನೆಯಲ್ಲಿ ಕೆಲವು ಪ್ರಶ್ನೆಗಳಿವೆ ನಿಮಗೆ (ನಿನ್ನೆ ಹಾಕಿದ್ದು)

                      ೧) ಜಂಗಮದ್ರೋಹ, ಲಿಂಗದ್ರೋಹದ ಬಗ್ಗೆ ಬೆಳಕು ಹರಡಲು
                      ೨)ಮಹಾತ್ಮಾ ಗಾಂಧಿಯ ರಣಹೇಡಿಯೇ ಅಂತ ನಿಮ್ಮ ಗುರುಗಳು ಕೇಳಿದ ಬಗ್ಗೆ
                      ೩)ಮನುಸ್ಮೃತಿಯ ಬಗ್ಗೆ

                      ದಯವಿಟ್ಟು ಉತ್ತರಿಸಿ..ಆಮೇಲೆ ಬೆನ್ನು ಚಪ್ಪರಿಸಿಕೊಳ್ಳಬಹುದು!

                    • Nagshetty Shetkar
                      ನವೆಂ 7 2013

                      Mr. Vijay, I am not a hired tutor for answering your questions. Don’t talk to me as if you have paid me fee for teaching you.

  19. ನವೆಂ 6 2013

    ಇಷ್ಟು ದಿನ troll ಎಂದರೆ ‘ತಲೆಹಿಡುಕ’ ಅಂದುಕೊಂಡಿದ್ದ -ಯ ಗಮನಕ್ಕೆ, troll ಎಂದರೆ ಏನೆಂದು ಇಲ್ಲಿದೆ.
    http://en.wikipedia.org/wiki/Troll_%28Internet%29

    ಉತ್ತರ
  20. ನವೆಂ 6 2013

    > ಭಾರತದಲ್ಲಿ ಯಾರೇ ಅಧಿಕಾರದಲ್ಲಿ ಇದ್ದರೂ ಭಯೋತ್ಪಾದನೆಯನ್ನು ನಿಲ್ಲಿಸುವುದು ಸಾಧ್ಯವಿಲ್ಲ
    > ಎಲ್ಲಿಯವರೆಗೆ ಎಂದರೆ ಪಾಕಿಸ್ತಾನ ಮೂಲಭೂತವಾದಿಗಳ ಹಿಡಿತದಿಂದ ಹೊರಗೆ ಬರುವಲ್ಲಿವರೆಗೆ.
    > ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಅದನ್ನು ಗೆಲ್ಲುವ ಸ್ಥಿತಿಯಲ್ಲಿ ಭಾರತ ಇಂದು ಇಲ್ಲ
    Do you want to know what has Mahatma Gandhiji has told about this mentality?
    M.K.Gandhi: “I do believe that, where there is only a choice between cowardice and violence, I would advise violence… I would rather have India resort to arms in order to defend her honour than that she should, in a cowardly manner, become or remain a helpless witness to her own dishonor.”
    You can read Mahatma Gandhiji’s complete views here: http://www.mkgandhi.org/nonviolence/phil8.htm

    ಉತ್ತರ
  21. ನವೆಂ 6 2013

    ಸಂಘವನ್ನು ‘ಕೋಮುವಾದಿ’, ‘fascist’ ಎಂದು ಕರೆಯುವುದು ಸುಲಭ. ತಮ್ಮನ್ನು ತಾವೇ “progressive thinkers” ಎಂಬ ಹಣೆಪಟ್ಟಿ ಹಚ್ಚಿಕೊಳ್ಳುವುದೂ ಸುಲಭ.
    ಕಾಗೆಯೂ ಕಪ್ಪು ಕೋಗಿಲೆಯೂ ಕಪ್ಪು; ಹೀಗಾಗಿ ಅವುಗಳ ನಡುವಣ ವ್ಯತ್ಯಾಸ ಗುರುತಿಸುವುದು ಕಷ್ಟವಿರಬಹುದು.
    ಆದರೆ, ವಸಂತ ಕಾಲ ಬಂದಾಗ, ಯಾವುದು ಕಾಗೆ ಯಾವುದು ಕೋಗಿಲೆ ಎಂದು ಸುಲಭವಾಗಿ ತಿಳಿಯುತ್ತದೆ.

    ಕೇದಾರನಾಥದಲ್ಲಿ ಆದ ದೊಡ್ಡ ಗಂಡಾಂತರ ಎಲ್ಲರಿಗೂ ತಿಳಿದಿದ್ದೇ. ಅಲ್ಲಿಗೆ, ನೀವು ಹೊಗಳುತ್ತಿರುವ ಯಾವ “Progressive Thinkers” ಅಥವಾ “Secular Brigade” ಹೋಗಿತ್ತು? ನಿಮ್ಮ ಅಪಾರ ಗೌರವಕ್ಕೆ ಪಾತ್ರರಾಗಿರುವ ಯು.ಆರ್.ಅನಂತ ಮೂರ್ತಿ, ಚೆನ್ನಿ, ತೀಸ್ತಾ ಸೆಟಲ್^ವಾಡ್, ದರ್ಗಾ – ಯಾರು ಅಲ್ಲಿಗೆ ಹೋಗಿದ್ದರು? ಯಾವ ಯಾವ ಸೇವಾ ಕಾರ್ಯಗಳನ್ನು ಕೈಗೊಂಡರು? ಎಷ್ಟು ಜನ ನೊಂದವರ, ದಲಿತರ, ಅಲ್ಪಸಂಖ್ಯಾತರ, ದುಃಖಿಗಳ, ಕಣ್ಣೀರು ಒರೆಸಿದರು, ಊಟ-ಬಟ್ಟೆ ನೀಡಿದರು, ಮನೆ ಕಟ್ಟಿ ಕೊಟ್ಟರು, ತೊಂದರೆ ನಿವಾರಿಸಿದರು?

    ಅಲ್ಲಿಗೆ ನಾವು ಹೋದಾಗ, ದೊಡ್ಡ ದೊಡ್ಡ ಭಾಷಣ ನೀಡುವ ಯಾವ “Progressive Thinkers” ಆಗಲೀ, “Secular Brigade” ಆಗಲಿ ಕಾಣಿಸಲೇ ಇಲ್ಲ. ಬದಲಾಗಿ “Fascist”ಗಳು, “ಕೋಮುವಾದಿ”ಗಳೇ ಎಲ್ಲೆಡೆ ಕಾಣಿಸುತ್ತಿದ್ದರು. ಅಲ್ಲಿ ಕೆಲಸದಲ್ಲಿ ತೊಡಗಿದ್ದ ಭಾರತೀಯ ಸೈನಿಕರಿಗೆ ಭುಜಕ್ಕೆ ಭುಜ ನೀಡಿ ಕೆಲಸ ಮಾಡಿದ್ದು, ನೀವೆಲ್ಲಾ ಧ್ವೇಷಿಸುವ ಆರೆಸ್ಸೆಸ್ಸಿನವರೇ!
    ಅಂದು ಕೆಲಸ ಪ್ರಾರಂಭಿಸಿದ ಆರೆಸ್ಸೆಸ್ಸಿನವರು, ಇನ್ನೂ “ಗ್ರಾಮಗಳ ಪುನರ್ನಿರ್ಮಾಣ” ಕಾರ್ಯದಲ್ಲಿ ತೊಡಗಿದ್ದಾರೆ. ಎಷ್ಟು “ಕೋಮುವಾದಿ”ಗಳು ನೋಡಿ ಅವರು! ಎಂತಹ “Fascist”ಗಳು ಅವರು! ಎಂತಹ “ದೇಶದ್ರೋಹ”!!

    ಅವರು ಮಾಡುತ್ತಿರುವ ಕೆಲಸದ ಕೆಲವು ವಿವರ ಇಲ್ಲಿ ನೋಡಿ:
    http://samvada.org/2013/news/50-photos-indian-army-rss-rescue-operation-at-kedarnath-rescue-operation-uttarakhand/

    http://articles.timesofindia.indiatimes.com/2013-10-17/india/43143562_1_dehradun-hostel-mates-kedarnath
    http://www.niticentral.com/2013/06/24/rss-swings-into-action-in-flood-ravaged-uttarakhand-94456.html
    http://www.rss.org/Encyc/2013/6/19/Uttarakhand-Calamity–RSS,-VHP-active-in-rescue-operations.aspx
    http://samvada.org/2013/news/rss-unveils-2-phased-peconstruction-programme-in-flood-hit-zones-of-uttarakhand/
    http://samvada.org/2013/news-digest/rss-july-pr/
    http://samvada.org/2013/news-digest/uttarakhand-update-on-relief-activities-as-on-31st-aug-2013/
    http://samvada.org/2013/news-digest/rss-releif-works-updates-from-ground-zero-uttarakhand/

    ಇದಲ್ಲವೇ ನಿಜವಾದ ದೇಶಭಕ್ತಿ? “ಪ್ರಗತಿಪರರು” ಏನು ಸೇವೆ ಮಾಡಿದರು ದಯವಿಟ್ಟು ತಿಳಿಸಿರಿ?

    ಉತ್ತರ
  22. krishnappa
    ನವೆಂ 6 2013

    @ ಕುಮಾರ್ – ಗಾಂಧೀಜಿಯವರು ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರನ್ನು ಕೊಲ್ಲುತ್ತಿದ್ದಾಗ ಸಶಸ್ತ್ರ ಹೋರಾಟಕ್ಕೆ ಹಾಗಾದರೆ ಯಾಕೆ ಕರೆ ನೀಡಿಲ್ಲ? ಯಾಕೆ ಗಾಂಧೀಜಿಯವರು ಸುಭಾಷಚಂದ್ರ ಬೋಸರು ಸಶಸ್ತ್ರ ಹೋರಾಟಕ್ಕೆ ಹೊರಟಾಗ ಬೆಂಬಲ ನೀಡಲಿಲ್ಲ? ನೀವು ಗಾಂಧೀಜಿಯವರ ನಿಲುವುಗಳನ್ನು ಅರ್ಥೈಸಿಕೊಂಡಿಲ್ಲ. ಮನುಷ್ಯನಿಗೆ ವಿವೇಕ ಅತೀ ಅಗತ್ಯ, ನಾಯಕನಿಗೆ ಅಂತೂ ಅದು ತೀರಾ ಮುಖ್ಯ. ಅವಿವೇಕದಿಂದ ಪರಿಸ್ಥಿತಿ ಮತ್ತಷ್ಟು ಕೆಡುತ್ತದೆ. ಬರಿಯ ವೀರಾವೇಶದಿಂದ ಏನೂ ಪ್ರಯೋಜನ ಇಲ್ಲ.

    ಉತ್ತರ
    • ನವೆಂ 6 2013

      > ನೀವು ಗಾಂಧೀಜಿಯವರ ನಿಲುವುಗಳನ್ನು ಅರ್ಥೈಸಿಕೊಂಡಿಲ್ಲ.

      ಮಹಾತ್ಮಾ ಗಾಂಧೀಜಿಯವರು ಏನು ಹೇಳಿದರು ಎನ್ನುವುದನ್ನು ಆ ಕೊಂಡಿಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
      ಅವರು ಎಷ್ಟು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ ನೋಡಿ:
      “I would rather have India resort to arms in order to defend her honour than that she should, in a cowardly manner, become or remain a helpless witness to her own dishonor”

      ಹೇಡಿತನಕ್ಕಿಂತ ಯುದ್ಧವೇ ಮೇಲು ಎಂದಲ್ಲವೇ ಈ ಮೇಲಿನ ಸಾಲುಗಳ ಅರ್ಥ?
      ಅಥವಾ ನೀವದನ್ನು “ಯುದ್ಧಕ್ಕಿಂತ ಹೇಡಿತನವೇ ಮೇಲು” ಎಂದು ಅರ್ಥೈಸುತ್ತೀರೇನು?

      ಮತ್ತು ಆ ಅಂತರ್ಜಾಲ ತಾಣವನ್ನು ನಿರ್ಮಿಸಿರುವುದು “Bombay Sarvodaya Mandal / Gandhi Book Centre and Gandhi Research Foundation”. ಇದು ಅವರ ಅಧಿಕೃತ ತಾಣ. ಗಾಂಧೀಜಿಯವರ ಹೇಳಿಕೆಗಳನ್ನು “ಕೋಮುವಾದಿಗಳು” ತಿದ್ದಿಬಿಟ್ಟಿದ್ದಾರೆ ಎನ್ನುವುದಕ್ಕೆ ಇಲ್ಲಿ ಆಸ್ಪದವೇ ಇಲ್ಲ!

      ಉತ್ತರ
      • krishnappa
        ನವೆಂ 6 2013

        ಇದು ಗಾಂಧೀಜಿಯವರ ಅಭಿಪ್ರಾಯವಾದರೆ ಅವರೇ ನುಡಿದಂತೆ ನಡೆದಿಲ್ಲ. ಬ್ರಿಟಿಷರು ಭಾರತದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾಗ ಶಸ್ತ್ರಾಸ್ತ್ರ ಎತ್ತಿಕೊಂಡು ಗಾಂಧೀಜಿ ಯಾಕೆ ಯುದ್ಧಕ್ಕೆ ನಾಯಕತ್ವ ನೀಡಲಿಲ್ಲ? ಗಾಂಧೀಜಿ ಹಾಗಾದರೆ ಹೇಡಿ ಎಂದಾಯಿತು. ಸ್ವತಃ ಗಾಂಧೀಜಿ ತಾವು ಸಶಸ್ತ್ರ ಹೋರಾಟಕ್ಕೆ ಇಳಿಯಲಿಲ್ಲ ಮತ್ತು ಸಶಸ್ತ್ರ ಹೋರಾಟಕ್ಕೆ ಇಳಿಯುವ ಸುಭಾಸ್ ಬೋಸರ ಅಭಿಪ್ರಾಯವನ್ನೂ ಬೆಂಬಲಿಸಲಿಲ್ಲ. ಗಾಂಧೀಜಿಯು ಹಾಗಾದರೆ ರಣಹೇಡಿ ಎಂದು ದೇಶದ ಜನ ತಿಳಿದುಕೊಳ್ಳಬೇಕೆ?

        ಉತ್ತರ
        • Nagshetty Shetkar
          ನವೆಂ 6 2013
        • ನವೆಂ 6 2013

          > ಬ್ರಿಟಿಷರು ಭಾರತದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾಗ ಶಸ್ತ್ರಾಸ್ತ್ರ ಎತ್ತಿಕೊಂಡು ಗಾಂಧೀಜಿ
          > ಯಾಕೆ ಯುದ್ಧಕ್ಕೆ ನಾಯಕತ್ವ ನೀಡಲಿಲ್ಲ?

          ಗಾಂಧೀಜಿಯವರನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಅಂದಿನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು.
          ೧೮೫೭ರ ಸಶಸ್ತ್ರ ಸಂಗ್ರಾಮದ ವಿಫಲ ಪ್ರಯೋಗ ಅವರ ಮುಂದಿತ್ತು.
          ಬಹುಸಂಖ್ಯಾತವಾಗಿದ್ದರೂ ಹೇಡಿಯಂತೆ ಏಟು ತಿನ್ನುತ್ತಾ ಕುಳಿತಿದ್ದ ಹಿಂದು ಸಮಾಜವನ್ನು ಕಟ್ಟಿಕೊಂಡು ಸ್ವಾತಂತ್ರ್ಯ ಗಳಿಸುವುದು ಅಸಾಧ್ಯ ಎನ್ನುವುದು ಗಾಂಧೀಜಿಯವರಿಗೆ ಮನವರಿಕೆಯಾಗಿತ್ತು. ಹೀಗಾಗಿ, ಸಮಾಜವನ್ನು ಸಂಘಟಿಸದೆ ಬ್ರಿಟಿಷರನ್ನು ಓಡಿಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಅವರು ಬಂದರು. ಮತ್ತು ಕೆಲವೇ ಮಂದಿ ಕೈಗೆ ಬಂದೂಕು ತೆಗೆದುಕೊಳ್ಳುವುದರಿಂದ ಏನೂ ಸಾಧನೆಯಾಗುವುದಿಲ್ಲ ಎನ್ನುವುದನ್ನೂ ಅವರು ಮನಗಂಡಿದ್ದರು.
          ಇನ್ನು ಇಂತಹ ಹೇಡಿ ಸಮಾಜವನ್ನೇ ನೆಚ್ಚಿಕೊಂಡಿದ್ದರೆ ಹೇಗೆ? ಅದಕ್ಕಾಗಿ “ಗೂಂಡಾದಂತಿದ್ದ ಮುಸ್ಲಿಂ ಸಮಾಜ”ವನ್ನು ಹತ್ತಿರಕ್ಕೆ ಕರೆದುಕೊಳ್ಳಲು ಅವರಿಗೆ ಆಮಿಷಗಳನ್ನು ತೋರಿಸಲಾರಂಭಿಸಿದರು. ಈ ಕಾರಣಕ್ಕಾಗಿಯೇ, ಭಾರತಕ್ಕೆ ಏನೇನೂ ಸಂಬಂಧಿಸಿರದ “ಖಿಲಾಫತ್ ಆಂದೋಲನ”ಕ್ಕೆ ಬೆಂಬಲವಾಗಿ ೧೯೨೧ರಲ್ಲಿ “ಅಸಹಕಾರ ಆಂದೋಲನ” ಆರಂಭಿಸಿದರು. ಇದೇ “ಮುಸ್ಲಿಂ ತುಷ್ಟೀಕರಣ”ದ ನಾಂದಿ.

          “ಮುಸಲ್ಮಾನರು ನೊಂದರೆ ಸ್ವಾತಂತ್ರ್ಯ ಹೋರಾಟದಿಂದ ದೂರ ಸರಿಯುತ್ತಾರೆ. ಅವರ ಸಹಾಯವಿಲ್ಲದೆ ಸ್ವಾತಂತ್ರ್ಯ ಮರೀಚಿಕೆಯಾದೀತು! ಇದಕ್ಕಾಗಿ ಅವರನ್ನು ನೋಯಿಸಬಾರದು. ಅವರು ತಪ್ಪು ಮಾಡಿದರೂ ಸಹಿಸಿಕೊಳ್ಳಬೇಕು” ಎಂಬುದು ಅವರ ಅಲಿಖಿತ ನಿಯಮವೇ ಆಯಿತು.

          ಇದಕ್ಕಾಗಿಯೇ, ರಷೀದ್ ಎಂಬ ಮುಸಲ್ಮಾನ ಯುವಕ ಸ್ವಾಮಿ ಶ್ರದ್ಧಾನಂದರನ್ನು ಕೊಂದಾಗ ಗಾಂಧೀಜಿ ಅದನ್ನು ಹಿಂಸೆ ಎನ್ನಲಿಲ್ಲ; ಬದಲಾಗಿ ಆತನಿಗೆ “ಗಾಝಿ” ಪಟ್ಟ ನೀಡಿದರು. (http://www.islam-watch.org/authors/73-brahmachari/470-gandhis-mindless-appeasement-of-muslims-partition-of-india.html)
          ಅದೇ ರೀತಿ, ಮುಸಲ್ಮಾನರು ವಂದೇ ಮಾತರಂಗೆ ವಿರೋಧ ತೋರಿದಾಗಲೂ, ವಂದೇ ಮಾತರಂ ತುಂಡರಿಸಲೂ ಹಿಂಜರಿಯಲಿಲ್ಲ.

          ಹಿಂದುಗಳ ಹೇಡಿತನ ಮತ್ತು ಮುಸಲ್ಮಾನರ ಗೂಂಡಾತನದ ಕುರಿತಾಗಿ ಗಾಂಧೀಜಿಯವರ ಅಭಿಪ್ರಾಯವನ್ನು ಇಲ್ಲಿ ಓದಿಕೊಳ್ಳಿ:
          http://www.mkgandhi.org/g_communal/chap17.htm

          “My own experience but confirms the opinion that the Musalman as a rule is a bully, and the Hindu as rule is a coward. Quarrels must break out so long as the Hindus continue to be seized with fear. Bullies are always to be found where there are cowards. The remedy against cowardice is not physical culture but the braving of dangers.”

          “It is common cause between the correspondent and myself that the average Hindu is a coward. ‘The world has no place for the weak’.”

          ಉತ್ತರ
          • ವಿಜಯ್ ಪೈ
            ನವೆಂ 7 2013

            ಕುಮಾರ್..
            ಗಾಂಧೀಜಿ ಬಗ್ಗೆ ಕೊಟ್ಟ ಲಿಂಕಿಗೆ ಧನ್ಯವಾದ..ಹಾಗಾದರೆ ಗಾಂಧೀಜಿ ರಣಹೇಡಿಯಾ ಎಂದು ಕೇಳುತ್ತಿದ್ದ ಜನ ಈಗ ಏಕೆ ಸುಮ್ಮನಾದರೋ..ಬಹುಶಃ ನಿಮ್ಮ ಪ್ರಶ್ನೆ ಕಾಣುತ್ತಿಲ್ಲವೇನೊ!

            ಉತ್ತರ
            • ನವೀನ
              ನವೆಂ 7 2013

              ಅವರು ಲಿಂಕುಗಳನ್ನು ತಡವುತ್ತಿರಬೇಕು.ಉತ್ತರಿಸದೇ ಓಡಿಹೋಗಲು ನಮ್ಮ ಶೆಟ್ಕರ್ ಸರ್ ಅವರೇನು ರಣಹೇಡಿಗಳಲ್ಲ. ತಿಳಿಯಿತೇ.ಬರುತ್ತಾರೆ ನೋಡ್ತಾ ಇರಿ

              ಉತ್ತರ
        • ನವೀನ
          ನವೆಂ 6 2013

          ಮೊದಲನೇ ಮತ್ತು ಎರಡನೇ ಮಹಾಯುದ್ದದ ಸಮಯದಲ್ಲಿ ಯುವಕರಿಗೆ ಸೈನ್ಯ ಸೇರಲು ಗಾಂಧೀಜಿಯವರು ಕರೆಕೊಟ್ಟಿದ್ದನ್ನು ಕುಮಾರ್ ಅವರ ಪ್ರತಿಕ್ರಿಯೆಗೆ ಪೂರಕವಾಗಿ ಉಲ್ಲೇಖಿಸಬಹುದಾಗಿದೆ.

          ಉತ್ತರ
  23. ನವೆಂ 6 2013

    ಇಷ್ಟು ದಿನ troll ಎಂದರೆ ‘ತಲೆಹಿಡುಕ’ ಅಂದುಕೊಂಡಿದ್ದ ಬೆಪ್ಪುತಕ್ಕಡಿಯ ಗಮನಕ್ಕೆ, troll ಎಂದರೆ ಏನೆಂದು ಇಲ್ಲಿದೆ.
    http://en.wikipedia.org/wiki/Troll_%28Internet%29

    ಉತ್ತರ
    • Nagshetty Shetkar
      ನವೆಂ 6 2013

      ಬೊಳಂಬು ಅವರೇ, ನೀವೂ ನಿಮ್ಮ ನಿಲುಮೆಯ ಸೈಬರ್ ಆರ್ಮಿಯ ಸಿಪ್ಯಾಯಿಗಳು troll ಅಷ್ಟೇ ಅಲ್ಲ ತಲೆಹಿಡುಕರೂ ಹೌದು ಅಂತ ಎಲ್ಲರಿಗೂ ಈಗಾಗಲೇ ಗೊತ್ತಿದೆ.

      ಉತ್ತರ
      • ನವೀನ
        ನವೆಂ 6 2013

        ಈ ತಲೆಹಿಡುಕರು ಅನ್ನುವುದು ನಿಮಗೂ ನಿಮ್ಮ ಗುರುಗಳಿಗೂ ಅನ್ವಯವಾಗುತ್ತದೆಯೇ ಶೆಟ್ಕರ್ ಸರ್?

        ಉತ್ತರ
        • Nagshetty Shetkar
          ನವೆಂ 7 2013

          Mr. Naveen, no it applies to only you and other cyber army sepoys. We are Sharanas and are doing selfless social service in the great tradition of Vachanakaras.

          ಉತ್ತರ
          • ನವೆಂ 7 2013

            Nagshetty Shetkar> Mr. Vijay, you have lost your mind.
            Nagshetty Shetkar> You are probably beyond cure.
            Nagshetty Shetkar> ನಿಮ್ಮ ನಿಲುಮೆಯ ಸೈಬರ್ ಆರ್ಮಿಯ ಸಿಪ್ಯಾಯಿಗಳು troll ಅಷ್ಟೇ ಅಲ್ಲ ತಲೆಹಿಡುಕರೂ ಹೌದು
            Nagshetty Shetkar> ಅದರ ಸಾಧನೆಗೆ ನಿಲುಮೆ ಅಂತಹ ಬೇಕಾರ್ ತಾಣವನ್ನು ಕಟ್ಟಿಕೊಂಡಿದ್ದೀರಿ.
            Nagshetty Shetkar> ನಿಲುಮೆಯ ತಲೆಹಿಡುಕ ನಮೋ ಸೈನಿಕರು
            Nagshetty Shetkar> We are Sharanas and are doing selfless social service
            Nagshetty Shetkar> in the great tradition of Vachanakaras

            ಪಾಪ, ನೀವು ಶರಣರು…..ವಚನಕಾರರ ದಾರಿಯಲ್ಲಿ ನಡೆಯುತ್ತಿರುವವರು!
            ಒಂದು ಸಣ್ಣ ಸಂದೇಹ…..
            “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎಂಬ ಬಸವಣ್ಣನವರ ವಚನವನ್ನು ಪಾಲಿಸದವರೂ ಶರಣರೇ ಆಗುತ್ತಾರೇನು?

            ಉತ್ತರ
            • ನವೀನ
              ನವೆಂ 7 2013

              ಶರಣರ ಬಾಯಿಯಲ್ಲೂ ‘ತಲೆಹಿಡುಕ’ ಅನ್ನುವ ಮಾತುಬರುವುದು ಜೀವವಿರೋಧಿ ಅಲ್ಲವೇ ಶೆಟ್ಕರ್? ನಿಮ್ಮ ಗುರುಗಳು ಇದೇ ಏನು ನಿಮಗೆ ಕಲಿಸಿದ್ದು.ನಿಮ್ಮ ಇಂತ ಮಾತುಗಳಿಂದ ನಿಮ್ಮ ಗುರುಗಳಿಗೆ ಅವಮಾನ ಮಾಡುವುದು ತರವೇನು.

              ನಿಲುಮೆಯ ಓದುಗರು ನಿಮ್ಮ ಕಮೆಂಟುಗಳನ್ನು ನೋಡಿಕೊಂಡು ನಿಮ್ಮ ಚರ್ಚೆ ಮತ್ತು ಜ್ನಾನದ ಮಟ್ಟ ತಿಳಿಯುತ್ತಾರೆ ಬಿಡಿ

              ಉತ್ತರ
      • ವಿಜಯ್ ಪೈ
        ನವೆಂ 6 2013

        ಈ ಶೆಟ್ಕರ್ ಸಾಹೇಬರು ಹಾಕಿರುವ ಮೇಲಿನಂತಹ ಯಾವುದೇ ಕಮೆಂಟನ್ನು ತೆಗೆಯಬಾರದೆಂದು ನಿಲುಮೆಯ ನಿರ್ವಾಹರಲ್ಲಿ ವಿನಂತಿ. ಇವರು ಪಾಲಿಸುತ್ತಿರುವ ‘ಶರಣ’ಸಂಸ್ಕೃತಿಗೆ ಉದಾಹರಣೆಯಾಗಿ ಇವಿಲ್ಲೇ ಇರಬೇಕು..ಉಳಿದ ಓದುಗರಿಗೂ ಇವರ ಮಹಿಮೆ ಗೊತ್ತಾಗಬೇಕು.

        ಉತ್ತರ
  24. krishnappa
    ನವೆಂ 7 2013

    @ ಕುಮಾರ್ – ಮನುಸ್ಮೃತಿಯ ಪ್ರಕಾರ ಬ್ರಹ್ಮನ ಪಾದದಿಂದ ಹುಟ್ಟಿದವರು ಶೂದ್ರರು. ಶೂದ್ರರು ವೇದಗಳನ್ನು ಕೇಳಿಸಿಕೊಂಡರೆ ಅವರ ಕಿವಿಯಲ್ಲಿ ಕಾದ ಸೀಸವನ್ನು ಸುರಿಯಬೇಕು, ಅವರು ವೇದಗಳನ್ನು ಹೇಳಿದರೆ ಅವರ ನಾಲಗೆಯನ್ನು ಕತ್ತರಿಸಬೇಕೆಂದು ಮನುಸ್ಮೃತಿ ವಿಧಿಸಿದೆ. ಬೇರಾವುದೇ ಅಪರಾಧ ಮಾಡಿದ್ದಕ್ಕೆ ಈ ಶಿಕ್ಷೆ ಕೊಡಬೇಕೆಂದು ಅದು ಹೇಳಿದ್ದು ಅಲ್ಲ. ಉಚ್ಛ ಕುಲದವರ ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವರ ಸೇವೆ ಮಾಡುವುದೇ ಶೂದ್ರರ ಕರ್ತವ್ಯ. ಶೂದ್ರರು ವೇದಗಳನ್ನು ಕೇಳಿಸಿಕೊಳ್ಳುವುದಾಗಲೀ, ಕಲಿಯುವುದಾಗಲೀ, ಹೇಳುವುದಾಗಲೀ ಶಿಕ್ಷಾರ್ಹ ಅಪರಾಧ, ಹಾಗೆ ಮಾಡಿದರೆ ಕಿವಿಗೆ ಸೀಸ ಸುರಿಯಬೇಕು, ನಾಲಗೆ ಕತ್ತರಿಸಬೇಕು ಎಂಬುದು ಮನುಸ್ಮೃತಿಯ ಶಾಸನ. ಭಯಂಕರ ಅಮಾನವೀಯ ಹಾಗೂ ಕ್ರೂರ ಶಾಸನವಿದು.

    ಉತ್ತರ
    • Nagshetty Shetkar
      ನವೆಂ 7 2013

      Mr. Kumar, Manusmriti is the unwritten constitution of India. Manuvadis have been enforcing this constitution on the rest of the people. Basavanna although born in a Manuvadi caste fought against the Manuvadis. But Manuvadis crushed his rebellion using force, intimidation, violence, persecution, cunningness, and power. However, Vachana tradition has preserved Basavanna’s spirit of rebellion even today. Darga Sir is interpreting Vachanas for the modern times and his research has connected Vachanas with Democracy, Secularism, Marxism and Universal Human Rights.

      ಉತ್ತರ
      • ನವೆಂ 7 2013

        > ಮನುಸ್ಮೃತಿಯ ಪ್ರಕಾರ ಬ್ರಹ್ಮನ ಪಾದದಿಂದ ಹುಟ್ಟಿದವರು ಶೂದ್ರರು.
        ಯಾರನ್ನು ಶೂದ್ರರೆಂದು ಮನುಸ್ಮೃತಿ ಹೇಳುತ್ತದೆ?
        ಪಾದದಿಂದ (ಅದರಲ್ಲೂ ಬ್ರಹ್ಮನ ಪಾದ) ಹುಟ್ಟಿದವರು ಕನಿಷ್ಟರೆಂಬ ನಿರ್ಣಯಕ್ಕೆ ಹೇಗೆ ಬಂದಿರಿ?
        ನಾವು ಹಿರಿಯರ ಕಾಲನ್ನು ಮುಟ್ಟಿ ನಮಸ್ಕರಿಸುತ್ತೇವೆ. ಯಾರನ್ನೂ ತಲೆಯನ್ನು ಮುಟ್ಟಿ ನಮಸ್ಕರಿಸುವುದು ನನಗೆ ತಿಳಿದಿಲ್ಲ.
        ಕಾಲು ಕನಿಷ್ಟವಾದಲ್ಲಿ, ಕಾಲುಮುಟ್ಟಿ ನಮಸ್ಕರಿಸುವುದು ಕೀಳೆಂದು ಪರಿಗಣಿತವಾಗಬೇಕಿತ್ತಲ್ಲವೇ?

        > ಶೂದ್ರರು ವೇದಗಳನ್ನು ಕೇಳಿಸಿಕೊಳ್ಳುವುದಾಗಲೀ, ಕಲಿಯುವುದಾಗಲೀ, ಹೇಳುವುದಾಗಲೀ ಶಿಕ್ಷಾರ್ಹ ಅಪರಾಧ
        ಶೂದ್ರನು ಬ್ರಾಹ್ಮಣನಾದ ನಂತರ ವೇದಗಳನ್ನು ಕೇಳಿಸಿಕೊಳ್ಳಬಹುದೇ?

        ವೇದವ್ಯಾಸರು ಶೂದ್ರ ಜಾತಿಗೆ ಸೇರಿದ್ದವರು. ಅವರು ವೇದವನ್ನು ಅಧ್ಯಯನ ಮಾಡಿದ್ದಕ್ಕಾಗಿ, ಅಥವಾ ವೇದಘೋಷ ಮಾಡಿದ್ದಕ್ಕಾಗಿ, ಅವರ ಕಿವಿಗೆ ಕಾದ ಸೀಸ ಹಾಕಿದ್ದು ಎಲ್ಲೂ ದಾಖಲಾಗಿಲ್ಲವಲ್ಲ?

        ರಾಮಾಯಣದಲ್ಲಿ ಬರುವ ಆಂಜನೇಯನೂ ದಲಿತ ಜಾತಿಗೆ ಸೇರಿದ್ದವನೇ (ಇವತ್ತಿನ ಭಾಷೆಯಲ್ಲಿ Tribal ಎನ್ನಬಹುದು).
        ಆತನಿಗೆ ನಾಲ್ಕು ವೇದಗಳೂ ಕರತಲಾಮಕಲವಾಗಿತ್ತೆಂದು ವಾಲ್ಮೀಕಿ ಹೇಳುತ್ತಾರೆ.
        ಆದರೆ, ಆಂಜನೇಯನ ಕಿವಿಗೆ ಕಾದ ಸೀಸ ಸುರಿದರೆಂದು ವಾಲ್ಮೀಕಿ ಎಲ್ಲೂ ತಿಳಿಸಿಲ್ಲ.

        ಸ್ವತಃ ವಾಲ್ಮೀಕಿಗಳೂ ಶೂದ್ರ ಜಾತಿಗೆ ಸೇರಿದವರೇ. ಅವರೂ ವೇದಾಧ್ಯಯನ ಮಾಡಿ, ಯಜ್ಞ-ಯಾಗಾದಿಗಳನ್ನು ಮಾಡುತ್ತಿದ್ದರು.
        ಅವರ ಕಿವಿಗೂ ಕಾದ ಸೀಸ ಹಾಕಿದ ಬಗ್ಗೆ ರಾಮಾಯಣದಲ್ಲಿ ಎಲ್ಲೂ ಉಲ್ಲೇಖಿತವಾಗಿಲ್ಲ.

        ಕಳೆದ ಒಂದು ಸಾವಿರ ವರ್ಷದ ಇತಿಹಾಸದ ಕಾಲದಲ್ಲೂ, ಯಾರ ಕಿವಿಗೂ ಕಾದ ಸೀಸ ಸುರಿದದ್ದು ದಾಖಲಾಗಿಲ್ಲ.

        ಹಾಗಿದ್ದ ಮೇಲೆ, ಮನುಸ್ಮೃತಿಯಲ್ಲಿ ನೀವು ಹೇಳಿದ ಉಲ್ಲೇಖ ಇಲ್ಲ ಎಂದೇ ಭಾವಿಸುತ್ತೇನೆ. ನೀವು ಸಹ, ಮನುಸ್ಮೃತಿಯ ಶ್ಲೋಕಗಳನ್ನೇನೂ ಉಲ್ಲೇಖಿಸುತ್ತಿಲ್ಲ. “ಅದರಲ್ಲಿ ಹಾಗಿದೆಯಂತೆ” ಎಂದೇ ಹೇಳುತ್ತಿರುವಿರಿ ಅಲ್ಲವೇ?
        ಯಾರೋ ಮನುಸ್ಮೃತಿಯ ಕುರಿತಾಗಿ ಅಪಕಲ್ಪನೆ ಹುಟ್ಟಿಸಲು ಇವನ್ನೆಲ್ಲ ಸೃಷ್ಟಿಸಿದ್ದಾರೆ ಎಂದು ನಾನು ಹೇಳುತ್ತೇನೆ.
        ನೀವು ನಿಜಕ್ಕೂ ಮನುಸ್ಮೃತಿಯನ್ನು ಓದಿ ತಿಳಿದಿದ್ದರೆ, ದಯವಿಟ್ಟು ಯಾವ ಅಧ್ಯಾಯದಲ್ಲಿ ಎಷ್ಟನೇ ಶ್ಲೋಕ ಎನ್ನುವುದನ್ನೂ, ಮತ್ತು ಅದರ ಹಿಂದಿನ-ಮುಂದಿನ ಶ್ಲೋಕಗಳನ್ನೂ (ಸಂದರ್ಭ ತಿಳಿಯಲು) ದಯವಿಟ್ಟು ತಿಳಿಸಿರಿ.
        ಹಾಗೆ ತಿಳಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ, ಮನುಸ್ಮೃತಿಯಲ್ಲಿ ಈ ರೀತಿ ಉಲ್ಲೇಖವಾಗಿಲ್ಲ ಎಂದೇ ನಿರ್ಣಯಕ್ಕೆ ಬರಬೇಕಾಗುತ್ತದೆ.

        ಉತ್ತರ
        • Nagshetty Shetkar
          ನವೆಂ 7 2013

          Mr. Kumar, even untouchability and associated exploitation of Dalits are not mentioned in your Ramayana. Does that mean Dalits were not exploited in the history of India?

          ಉತ್ತರ
          • Mukhesha
            ನವೆಂ 7 2013

            ಮಿ. ಶೆಟ್ಕರ್ ರವರೇ ನಿಮ್ಮ ಪ್ರಶ್ನೆಯಲ್ಲಿನ ಮೂರ್ಖತನ ನಿಮಗೆ ಅರ್ಥವಾಗಬೇಕೆಂದರೆ ಆ ಪ್ರಶ್ನೆಯನ್ನು ಹೀಗೆ ಕೇಳಿಕೊಳ್ಳಿ: even untouchability and associated exploitation of Dalits are not mentioned in our Vachanas. Does that mean Dalits were not exploited in the history of India?

            ಉತ್ತರ
          • ನವೆಂ 7 2013

            > even untouchability and associated exploitation of Dalits
            > are not mentioned in your Ramayana
            So, you cannot say that “Manusmriti is responsible for Untouchability. If Manusmriti (or Manuvadis) is removed from this world, untouchability will go”!
            Hindu dharma doesn’t teach Untouchability or any such ills.
            So, instead of blaming the scriptures or the dharma, you should put effort in doing some work to remove those ills. Blaming others for all the ills will not solve any problems.

            RSS has really done lot of work to remove untouchability. But, it doesn’t go out to do the propaganda of its own achievements. So, if you are unaware of that, it will not be a surprise.
            Mahatma Gandhi had once visited RSS camp. You can read that incident here:
            http://tinyurl.com/os72fz6

            Dr.Ambedkar was denied entry into Kalaram temple in Nashik. Today everybody is allowed in that temple – it was the efforts of RSS which has borne fruits!

            So, instead of blaming the society, its scriptures, its history, etc, do some concrete work to eradicate the ills.

            ಉತ್ತರ
            • ನವೆಂ 7 2013

              In one of my comments I had mentioned about the selfless service done by RSS volunteers in Kedarnath.
              Also, I asked you about the participation of “Progressive Thinkers” in such a calamity.
              You are silent on that. So, can I assume that, “Progressive Thinkers” only talk and don’t do any concrete work!?

              ಉತ್ತರ
              • Nagshetty Shetkar
                ನವೆಂ 7 2013

                The list is too big to give here.

                ಉತ್ತರ
                • ನವೆಂ 7 2013

                  > The list is too big to give here
                  OK. Give me 10 of your famous “Progressive Thinkers” who did service work in Kedarnath?

                  ಉತ್ತರ
      • ನವೆಂ 7 2013

        > Manusmriti is the unwritten constitution of India. Manuvadis have been
        > enforcing this constitution on the rest of the people.
        Mr.Nagashetty Shetkar, can you please tell me, where is this implemented?
        Who are those Manuvadis? Can you please give few names of Manuvadi’s and how they have implemented it on the rest of the people?
        If you can elaborate with few examples, it will help us to understand.
        You had mentioned about pouring molten lead in the ears of Shudras. So, can you please give some incidents, where this was actually implemented?

        ಉತ್ತರ
    • Mukhesha
      ನವೆಂ 7 2013

      “ಹಾಗೆ ಮಾಡಿದರೆ ಕಿವಿಗೆ ಸೀಸ ಸುರಿಯಬೇಕು, ನಾಲಗೆ ಕತ್ತರಿಸಬೇಕು ಎಂಬುದು ಮನುಸ್ಮೃತಿಯ ಶಾಸನ. ಭಯಂಕರ ಅಮಾನವೀಯ ಹಾಗೂ ಕ್ರೂರ ಶಾಸನವಿದು”.

      ಮಿ. ಕೃಷ್ಣಪ್ಪನವರೇ, ಮನುಸ್ಮೃತಿ “ಶಾಸನ” ವಾಗಿದ್ದ ಪಕ್ಷದಲ್ಲಿ

      1. ವೇದಗಳನ್ನು ಕೇಳಿದ್ದಕ್ಕೆ ಹೇಳಿದ್ದಕ್ಕೆ ಶೂದ್ರರ ಕಿವಿಗೆ ಕಾದ ಸೀಸ ಹಾಕಿದ ಇಲ್ಲವೇ ನಾಲಿಗೆ ಸೀಳಿದ ಘಟನೆಗಳು ಚರಿತ್ರೆಯಲ್ಲಿ ಇರಲಿ ಯಾವುದಾದರೂ ಪುರಾಣ ಅಥವಾ ಇತರ ಕಥೆಗಳಲ್ಲಾದರೂ ಸಿಗುತ್ತದೆಯೇ?

      2. ಈ ಶಾಸನದ ಭಯಂಕರ ದ ಭಯದಿಂದ ಈ ಘಟನೆಗಳೇ ನಡೆಯಲಿಲ್ಲ ಎಂದು ನೀವು ಸಾಭೀತು ಮಾಡಲು ಬ್ರಾಹ್ಮಣರ ಹೊರತು ಇದುವರೆಗೂ (ಕೊನೆ ಪಕ್ಷೆ ಭ್ರಿಟೀಷರ ಆಳ್ವಿಕೆ ಬರುವವರೆಗೂ) ಯಾವ ಶೂದ್ರನೂ ವೇದಗಳನ್ನು ಕಲಿಯಲೇ ಇಲ್ಲ. ಇಲ್ಲ ಕಲಿಯುವ ಪ್ರಯತ್ನವೇ ಮಾಡಲಿಲ್ಲ, ಹಾಗಾಗಿ ಈ ರೀತಿಯ ಘಟನೆಗಳ ಉಲ್ಲೇಖಕ್ಕೆ ಆಸ್ಪದವೇ ಸಿಗಲಿಲ್ಲ ಎನ್ನುವುದನ್ನಾದರೂ ತೋರಿಸಲು ನಿಮ್ಮಿಂದ ಸಾಧ್ಯವೇ?

      ಇವೆರಡರಲ್ಲಿ ಒಂದನ್ನು ತಾರ್ಕಿಕವಾಗಿ ನಿಮಗೆ ನಿರೂಪಿಸಲು ಸಾಧ್ಯವಾಗದಿದ್ದರೂ ನಿಮ್ಮ ವಾದ (ಮನುಧರ್ಮಶಾಸ್ತ್ರ ಶಾಸನವಾಗಿತ್ತು ಎನ್ನುವ ವಾದ) ಅಜ್ಞಾನದಿಂದ ಹುಟ್ಟಿದ್ದು ಎನ್ನುವುದು ಸಾಭೀತಾಗುತ್ತದೆ…

      ಉತ್ತರ
      • ನವೆಂ 7 2013

        ವೇದವ್ಯಾಸ, ವಾಲ್ಮೀಕಿ, ಹನುಮಂತ – ಇವರೆಲ್ಲರೂ ಶೂದ್ರ ಜಾತಿಗೆ ಸೇರಿದವರು.
        ಯಾದವರು, ಗೊಲ್ಲರು ಶೂದ್ರ ಗುಂಪಿಗೆ ಸೇರುತ್ತಾರೇನು? ಹಾಗಿದ್ದರೆ, ಕೃಷ್ಣನೂ ಶೂದ್ರನೇ.
        ಇವರೆಲ್ಲಾ ವೇದವನ್ನು ಬಲ್ಲವರಾಗಿದ್ದರು ಮತ್ತು ಇವರೆಲ್ಲರನ್ನು ಸಮಸ್ತ ಹಿಂದುಗಳೂ (ಬ್ರಾಹ್ಮಣರನ್ನೂ ಒಳಗೊಂಡು) ಪೂಜಿಸುತ್ತಾರೆ.
        ವೇದವನ್ನು ಕಲಿತಿದ್ದಕ್ಕೆ ಇವರ ಬಾಯಲ್ಲಾಗಲೀ, ಕೇಳಿದ್ದಕ್ಕೆ ಕಿವಿಯಲ್ಲಾಗಲೀ ಕಾದ ಸೀಸವನ್ನು ಹುಯ್ಯಲಿಲ್ಲ ಅಲ್ಲವೇ!?

        ಇದಿಷ್ಟು ಸಾಕಲ್ಲವೇ, “ಕಿವಿಯಲ್ಲಿ ಕಾದ ಸೀಸ ಹುಯ್ಯುವುದು” ಕಪೋಲಕಲ್ಪಿತ ಕಥೆ ಎನ್ನಲು?

        ಉತ್ತರ
  25. ವಿಜಯ್ ಪೈ
    ನವೆಂ 7 2013

    ಮೇಲೆ ಒಂದು ಪ್ರಶ್ನೆ ಕೇಳಿದ್ದೆ..ಬಹುಶಃ ರಿಪ್ಲೈ ಹಾಕಲು ಅಲ್ಲಿ ಅವಕಾಶವಿಲ್ಲದ್ದರಿಂದ ಹಾಕಿರಲಿಕ್ಕಿಲ್ಲ..ಅದಕ್ಕೆ ಪ್ರಶ್ನೆಯನ್ನು ಇಲ್ಲಿ ತಂದಿದ್ದೇನೆ.
    ——
    ಜಂಗಮದ್ರೋಹಿಗೆ ಯಾವುದೇ ಶಿಕ್ಷೆ ಕೊಡುವುದು ಮಾನ್ಯ ಎಂದಾಯ್ತು..ಸರಳ ಉದಾಹರಣೆಯಾಗಿ ನರೇಂದ್ರ ಮೋದಿ ಕೊಟ್ಟಿದ್ದಿರಿ. ಧನ್ಯವಾದ.

    ಗುರುಗಳೆ..
    ೧) ಜಂಗಮಕ್ಕೆ ಹದಿನಾಲ್ಲು ಅರ್ಥ ಇದೆ ಎಂದಿದ್ದೀರಿ..ಅದರಂತೆ ಜಂಗಮದ್ರೋಹ ಕೂಡ ಹದಿನಾಲ್ಕು ಬಗೆಯದು ಆಗಿರುತ್ತದೆ ಎಂದಾಯಿತು. ಉಳಿದ ಹದಿಮೂರನ್ನು ತಿಳಿಸಿ ದಯವಿಟ್ಟು. ನಮಗೆ ಶರಣರ ಜೀವವಿರೋಧಿಯಲ್ಲದ ಫನಿಶಮೆಂಟ್ ಗಳು ಯಾವವು ಎಂದು ತಿಳಿಯುತ್ತದೆ.

    ೨)ಲಿಂಗದ್ರೋಹ ಎಂದರೇನು ಗುರುಗಳೆ? ಅದಕ್ಕೆ ಎಷ್ಟು ಅರ್ಥಗಳಿವೆ? ಅದನ್ನೂ ಸ್ವಲ್ಪ ತಿಳಿಸಿಕೊಡಿ.

    ಉತ್ತರ
  26. ನವೆಂ 7 2013

    Nagshetty Shetkar> Mr. Vijay, you have lost your mind.
    Nagshetty Shetkar> You are probably beyond cure.
    Nagshetty Shetkar> ನಿಮ್ಮ ನಿಲುಮೆಯ ಸೈಬರ್ ಆರ್ಮಿಯ ಸಿಪ್ಯಾಯಿಗಳು troll ಅಷ್ಟೇ ಅಲ್ಲ ತಲೆಹಿಡುಕರೂ ಹೌದು
    Nagshetty Shetkar> ಅದರ ಸಾಧನೆಗೆ ನಿಲುಮೆ ಅಂತಹ ಬೇಕಾರ್ ತಾಣವನ್ನು ಕಟ್ಟಿಕೊಂಡಿದ್ದೀರಿ.
    Nagshetty Shetkar> ನಿಲುಮೆಯ ತಲೆಹಿಡುಕ ನಮೋ ಸೈನಿಕರು
    Nagshetty Shetkar> We are Sharanas and are doing selfless social service
    Nagshetty Shetkar> in the great tradition of Vachanakaras
    ಪಾಪ, ನೀವು ಶರಣರು…..ವಚನಕಾರರ ದಾರಿಯಲ್ಲಿ ನಡೆಯುತ್ತಿರುವವರು!
    ಒಂದು ಸಣ್ಣ ಸಂದೇಹ…..
    “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎಂಬ ಬಸವಣ್ಣನವರ ವಚನವನ್ನು ಪಾಲಿಸದವರೂ ಶರಣರೇ ಆಗುತ್ತಾರೇನು?

    ಉತ್ತರ
    • Nagshetty Shetkar
      ನವೆಂ 7 2013

      Hasn’t Basavanna and other Vachanakaras scolded Brahmins in their Vachanas? Does that mean they are not Sharanas? I scold you because you deserve it. I scold you because I have good intentions and want to correct your behavior and thinking. You guys are stupid. You don’t know Vachanas and you dare to quote them. You are fit only for counting words in Vachanas just like your great CSLC researchers.

      ಉತ್ತರ
  27. Nagshetty Shetkar
    ನವೆಂ 7 2013

    http://ladaiprakashanabasu.blogspot.in/2013/11/1984.html

    1984ರ ಸಿಖ್ ನರಮೇಧದಲ್ಲಿ ಆರೆಸ್ಸೆಸ್ ಕೈಗಳೂ ರಕ್ತಸಿಕ್ತವೇ!

    ಉತ್ತರ
    • ನವೆಂ 7 2013

      ಸಿಕ್ಖ್ ಮಾರಣಹೋಮಕ್ಕೆ ಕಾರಣಕರ್ತರು ಯಾರೆಂಬುದರ ಕುರಿತು ಈಗ ಮರುಸಂಶೋಧನೆಯ ಆವಶ್ಯಕತೆಯಿಲ್ಲ. ತಥಾಕಥಿತರೆನಿಸೊಂಡವರು ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಸುಳ್ಳುಗಳ ಮಾಲೆಗಳನ್ನೇ ಪೋಣಿಸಬಲ್ಲರು.

      ಉತ್ತರ
      • Nagshetty Shetkar
        ನವೆಂ 7 2013

        “ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಸುಳ್ಳುಗಳ ಮಾಲೆಗಳನ್ನೇ ಪೋಣಿಸಬಲ್ಲರು.” You are right. This is exactly what CSLC did in the case of vachanas and caste system. They counted occurrences of jati/kula and concluded what they had set out for. Darga Sir exposed their fatal flaws and evil designs on Avadhi. The book is now selling like hot cake. Nilume should purchase a hundred copies and distribute them to NaMo cybery army sepoys.

        ಉತ್ತರ
        • ನವೆಂ 7 2013

          CSLC ಪ್ರಗತಿಪರ ಗುಂಪಿಗೆ ತನ್ನನ್ನು ತಾನು ಸೇರಿಸಿಕೊಳ್ಳುವುದಿಲ್ಲ. ಇದು ಸಿಎಸೆಲ್ಸಿಯ ಕುರಿತು ಹೇಳಿದ ಮಾತಲ್ಲ. How do you connect Modi, CSLC and Nilume. You lack common sense.Why don’t you buy a few copies of this hot-cake-like book and distribute it among the readers of Nilume and educate them?

          ಉತ್ತರ
          • Nagshetty Shetkar
            ನವೆಂ 7 2013

            Mr. Bolumbu, common sense is a private property of Madhwa Brahmins.

            ಉತ್ತರ
            • ನವೆಂ 7 2013

              So be it. Yours is a straw man argument, an intentional misrepresentation of facts in order to attack the opponent.

              ಉತ್ತರ
            • ನವೆಂ 7 2013

              > common sense is a private property of Madhwa Brahmins.
              So, you started attacking castes!
              Is this not casteism!? Shall we call you a casteist?
              Is it the private property of “Progressive Thinkers”??

              With your latest statement, shall I come to the conclusion that,
              “You have to be a casteist to become a Progressive Thinker”!!

              ಉತ್ತರ
          • ವಿಜಯ್ ಪೈ
            ನವೆಂ 7 2013

            ಬೊಳಂಬು ಅವರೆ..
            ನಮ್ಮ ಗುರುಗಳ ಜಗತ್ತು ಸ್ವಲ್ಪ ಚಿಕ್ಕದು. ಅವರ ದೇಶ ಗುಲ್ಬರ್ಗ್ ನಗರ…ಜಗತ್ತು.ಗುಲ್ಬರ್ಗ ಜಿಲ್ಲೆ . ಈಗ ನಿಮಗೆ ಗೊತ್ತಾಗಿರಬಹು ಇವರ ಮಾತಿನಲ್ಲಿ ‘ಜಾಗತಿಕ ಪ್ರಸಿದ್ಧಿ’ ಅಂದರೆ ಏನು ಅಂದು. ಸಧ್ಯಕ್ಕೆ ಇವರಿಗೆ ಹತ್ತಿರದ ವಿರೋಧಿ ಎಂದರೆ ಸಿ.ಎಸ್.ಎಲ್.ಸಿ..ಅನ್ಯಗೃಹದ ವಿರೋಧಿ ಎಂದರೆ ಮೋದಿ. ಅದಕ್ಕೆ ಅವರಿಗೆ ತಮ್ಮ ಜೊತೆ ಸಹಮತ ಇಲ್ಲದವರು ಈ ಎರಡರಲ್ಲಿ ಒಂದು ಗುಂಪಿಗೆ ಸೇರಿರಬೇಕೆಂಬ ಬಲವಾದ ನಂಬಿಕೆ. ಇನ್ನೊಂದು ವಿಷಯ ಇವರ ವಿಶ್ವಕೋಶ ಲಡಾಯಿ ಬ್ಲಾಗ್!.. ಸಿಮೀತ ಮತ್ತು ಸಿಂಪಲ್ ಬದುಕು ನಮ್ಮ ಗುರುಗಳದ್ದು..ತಪ್ಪು ತಿಳಿಯಬೇಡಿ.

            ಉತ್ತರ
            • ನವೆಂ 7 2013

              > You are fit only for counting words in Vachanas just like your great CSLC researchers.
              ಏನಿದು CSLC?
              ಇಲ್ಲಿ ನಡೆಯುತ್ತಿರುವ ಚರ್ಚೆಗೂ CSLC ಗೂ ಸಂಬಂಧವೇನು?
              ಅಥವಾ ಇದೂ ಸಹ “ಮನುವಾದಿ” ಎನ್ನುವ ರೀತಿಯ ಮತ್ತೊಂದು ಬಿರುದಾವಳಿಯೇ!?

              ಉತ್ತರ
    • ರವಿ
      ನವೆಂ 7 2013

      ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ..

      ಉತ್ತರ
    • ನವೆಂ 7 2013

      > http://ladaiprakashanabasu.blogspot.in/2013/11/1984.html
      > 1984ರ ಸಿಖ್ ನರಮೇಧದಲ್ಲಿ ಆರೆಸ್ಸೆಸ್ ಕೈಗಳೂ ರಕ್ತಸಿಕ್ತವೇ!
      I can also write one such blogspot article about your Burka sir, progressive thinkers, etc.
      If whatever written in that article is true, why RSS is not chargesheeted?
      Can you show me one court case on RSS with regard to 1984 issue?

      ಉತ್ತರ
      • Nagshetty Shetkar
        ನವೆಂ 7 2013

        Vittanda vaada.

        ಉತ್ತರ
        • ರವಿ
          ನವೆಂ 7 2013

          What is Vitanda Vaada here? You post some stupid link and if someone questions it, you call it Vitanda Vaada? Why should we believe the contents in that idiot’s article? First answer to Kumar – Show any cases filed against RSS? You are completely exposed here.. not able to answer Vijay, Kumar, Bolumbu.. and then you utter words like Vitanda Vaada, beyond cure, beyong correction etc. You be tolerent to others and thier thoughts.. Amanzing that you call others fascists.. Thought out your comments you always talk based on others’ (Durga, URA) opinion and you have no support of facts for the questions asked to you..

          ಉತ್ತರ
        • ನವೆಂ 7 2013

          > Vittanda vaada
          Look at the height of your hippocracy!
          I asked you for court cases against RSS.
          You want people to just read a blogpost article and agree to it without questioning!!
          Look at your face in a mirror and ask “Who is doing Vittanda Vaada”?

          ಉತ್ತರ
        • ವಿಜಯ್ ಪೈ
          ನವೆಂ 7 2013

          “It was the Congress(I) leaders who instigated mobs in 1984 and got more than 3000 people killed. I must give due credit to RSS and the BJP for showing courage and protecting helpless Sikhs during those difficult days” – Khushwant Singh. (K. Singh: Publik Asia, 16-11-1989).

          http://www.sikhsiyasat.net/2013/06/05/wikileaks-congress-party-leaders-competed-to-see-who-could-shed-more-sikh-blood-during-1984/

          ಉತ್ತರ
          • ನವೆಂ 7 2013

            > “It was the Congress(I) leaders who instigated mobs in 1984 and got more than
            > 3000 people killed. I must give due credit to RSS and the BJP for showing courage
            > and protecting helpless Sikhs during those difficult days” – Khushwant Singh
            >. (K. Singh: Publik Asia, 16-11-1989).

            Now Kushawant Singh will be called as a “Manuvadi”!!

            ಉತ್ತರ
  28. Nagshetty Shetkar
    ನವೆಂ 7 2013

    More and more fake ids. All roads lead to CSLC.

    ಉತ್ತರ
    • Mukhesha
      ನವೆಂ 7 2013

      ಈ ರೀತಿಯ ಪ್ರತಿಕ್ರಿಯೆಗಳು ಪ್ರಶ್ನೆಗಳಿಗೆ ಉತ್ತರಿಸಿಲಾಗದ ಹೇಡಿತನಕ್ಕೆ ಹತಾಶೆಯ ಪ್ರತಿಕ್ರಿಯೆಯಾಗಿಬಿಡುತ್ತದೆ ಶೆಟ್ಕರ್ ರವರೇ, ಶರಣರ ಮಾನವನ್ನು ಕಾಪಾಡಿ ಇಲ್ಲವೇ ನೀವು ಶರಣರಲ್ಲ, ಶರಣರ ಮುಖವಾಡ ತೊಟ್ಟಿರುವ ಸ್ವಾಹಿತಿ ಎನ್ನುವುದನ್ನಾದರೂ ಒಪ್ಪಿಕೊಳ್ಳಿ….

      ಉತ್ತರ
    • ನವೆಂ 7 2013

      ಕಾಮಾಲೆ ಕಣ್ಣಿಗೆ ಲೋಕವೆಲ್ಲ CSLC.

      ಉತ್ತರ
    • ರವಿ
      ನವೆಂ 7 2013

      ರಣಹೇಡಿಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ 🙂
      ಇಲ್ಲಿ ನಿಮ್ಮನ್ನು ಪ್ರಶ್ನಿಸುತ್ತಿರುವವರು ಹಾಗೂ ಉತ್ತರಿಸದ ನೀವೂ ಸೇರಿ ಎಲ್ಲರೂ ಫೇಸ್ ಬುಕ್ ನಲ್ಲಿ ರಾಕೇಶ್ ಶೆಟ್ರ ಬಳಗದಲ್ಲಿ ಇದ್ದಾರೆ. ಫೇಕ್ ಐಡಿಗಳು ಯಾವುದೂ ಇಲ್ಲ

      ಉತ್ತರ
    • ನವೀನ
      ನವೆಂ 7 2013

      ‘ಮನುವಾದಿ’ಗಳ ಎಲ್ಲಾ ಪ್ರಶ್ನೆಗಳನ್ನು ಶರಣರಾದ ನೀವು ನಿಮ್ಮ ವಾಗ್ಜರಿಯ ಶರಧಿಯಿಂದ ಛೇದಿಸುವ ಮೂಲಕ ಉತ್ತರ ಕೊಟ್ಟು ಬುದ್ದಿ ಕಲಿಸಿ ಶೆಟ್ಕರ್ ಸರ್. ಇಲ್ಲದಿದ್ದರೆ ನಿಮ್ಮನ್ನು ಇವರು ‘ಪಲಾಯನವಾದಿ’ ಅನ್ನುವುದು ಕೇಳಲಾಗದು

      ಉತ್ತರ
  29. ವಿಜಯ್ ಪೈ
    ನವೆಂ 7 2013

    [Mr. Vijay, I am not a hired tutor for answering your questions. Don’t talk to me as if you have paid me fee for teaching you.]

    ಇದು ನಿಮ್ಮ ಜಗತ್ತು ತಿದ್ದುವ ಕಾಯಕಯೋಗದ ಭಾಗವಲ್ಲವೆ ಗುರುಗಳೆ?
    ಹಾಗಾದರೆ ನಿಮ್ಮ ಈ ಪ್ರತಿಕ್ರಿಯೆಯ ಅರ್ಥವೇನು ?

    [Darga Sir had challenged you people to shoot all tough questions at him. He had no fear and he addressed all of your tough questions. I am trying to do the same here. ]

    ನಿಮ್ಮ ತರ್ಕದಲ್ಲಿ ಸುಸಂಬದ್ಧತೆ ಯಾವಾಗಲಾದರೂ ನಿರೀಕ್ಷೆ ಮಾಡಬಹುದೆ??

    ಉತ್ತರ
    • ನವೀನ
      ನವೆಂ 7 2013

      ರೀ ವಿಜಯ್,
      ನೀವು ಯಾವಾಗಲು ಬಲಗೈಯಲ್ಲಿ ಸೀಸ ಹಿಡಿದು ನಮ್ಮ ಶೆಟ್ಕರ್ ಅವರನ್ನೇ ಕಾಯುತ್ತೀರಿ ಅನ್ನುವುದು ಗೊತ್ತಿದೆ ನಮಗೆ.
      ನಿಮ್ಮ ಪ್ರಶ್ನೆಗೆ ಅವರು ಉತ್ತರಿಸಿಯೇ ಉತ್ತರಿಸುತ್ತಾರೆ. ಎಂತೆಂತವರನ್ನೇ ಬಿಟ್ಟಿಲ್ಲ ಅವರು,ಇನ್ನು ನಿಮ್ಮ ಪ್ರಶ್ನೆಗಳೆಲ್ಲ ಯಾವ ಲೆಕ್ಕ.ಉತ್ತರಿಸಿದೇ ಓಡಿಹೋಗಲು ಅವರು ರಣಹೇಡಿಯಲ್ಲ.
      ಸ್ವಲ್ಪ ತಾಳ್ಮೆಯಿರಲಿ.

      ಉತ್ತರ
      • Nagshetty Shetkar
        ನವೆಂ 7 2013

        Mr. Naveen, you are right. I’m not afraid of NaMo army. If you have questions on vachanakaras or Vachanas, write an open letter in nilume addressing Darga Sir. You will get authoritative answers to all your questions. All doubt will be cleared.
        Got guts? Shoot your letter.

        ಉತ್ತರ
        • ಸಹನಾ
          ನವೆಂ 7 2013

          Same old childish tactics from escapist Shetkar. Ha ha ha!!!! It’s like a comedian threatenings in films…

          ಉತ್ತರ
          • Nagshetty Shetkar
            ನವೆಂ 7 2013

            Ms. Sahana, I had asked you earlier to write an open letter to Darga Sir in Nilume and ask all your tough questions. But you didn’t have guts to do that. So you hid yourself behind fake ids (Kumar? Ravi?). Now you are questioning my tactics. Shame on you. Stop the guerrilla attack on Darga Sir and progressive thinkers. If you got guts, come and wage a direct war. Don’t hide behind fake ids and do sniper attacks. Write an open letter. You will get fitting response.

            ಉತ್ತರ
            • ನವೆಂ 7 2013

              > So you hid yourself behind fake ids (Kumar? Ravi?).
              I don’t know who is Sahana and Ravi.
              Instead of answering the questions, you are trying to find an escape route!
              ಕಳ್ಳನಿಗೊಂದು ಪಿಳ್ಳೆ ನೆವ!

              > write an open letter to Darga Sir in Nilume and ask all your tough questions
              So, you are finding the questions tough to answer!
              Now it is very obvious that, instead of telling that you don’t know the answer, you are calling me fake!

              ಉತ್ತರ
              • ನವೆಂ 7 2013

                ಪ್ರಶ್ನೆಗಳಿಗೆ ಉತ್ತರ ನೀಡುವುದು ಕಷ್ಟವಾದಾಗ, ಪ್ರಶ್ನೆ ಕೇಳಿದವನನ್ನೇ ಧೂಷಿಸುವುದು “ಪ್ರಗತಿಶೀಲರ” ರೀತಿ ಎನ್ನುವುದು ಅರ್ಥವಾಗುತ್ತಿದೆ.
                ನಿಮಗೆ ಪ್ರಶ್ನೆ ಕೇಳಿದವರು ಯಾರು ಎಂಬುದರ ಕುರಿತಾಗಿ ಇಷ್ಟೊಂದು ಚಿಂತೆಯೇಕೆ?
                ಈ ಚರ್ಚೆಯಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೆ ಅನೇಕ ಮೌಲಿಕ ಹಾಗೂ ಮೂಲಭೂತ ಪ್ರಶ್ನೆಗಳನ್ನು ಕೇಳಲಾಗಿದೆ.
                ಇವುಗಳಲ್ಲಿ ಒಂದಕ್ಕಾದರೂ ನೀವು ಸರಿಯಾಗಿ ಉತ್ತರ ಕೊಟ್ಟದ್ದೇ ಇಲ್ಲ.
                ಕಲ್ಲು ಹೊಡೆದು ಓಡುವವರ ರೀತಿ, ನೀವು ಓಡುತ್ತಿರುವಿರಿ.
                ನಾನು ಕೇಳಿದ ಮೊದಲ ಪ್ರಶ್ನೆಗೇ ನೀವು ಇಲ್ಲಿಯವರೆಗೆ ಉತ್ತರಿಸಿಲ್ಲ.
                ನಿಮಗೆ ಉತ್ತರ ತಿಳಿದಿಲ್ಲದಿದ್ದರೆ ತೊಂದರೆಯಿಲ್ಲ. ಅದೇನೂ ಅಪಮಾನವಲ್ಲ. ಎಲ್ಲರಿಗೂ ಪ್ರತಿಯೊಂದೂ ತಿಳಿದಿರಬೇಕಿಲ್ಲ.
                ಆದರೆ, ತಿಳಿದಿಲ್ಲ ಎಂದು ತಿಳಿಸುವ “ಪ್ರಾಮಾಣಿಕತೆ” ಬೇಕಷ್ಟೆ.
                “ನನಗೆ ತಿಳಿದಿಲ್ಲ ಎಂದು ಒಪ್ಪಿಕೊಳ್ಳಲು ಸಿದ್ಧನಾದರೆ ಮಾತ್ರ ತಿಳಿಯದಿರುವುದನ್ನು, ಹೊಸತನ್ನು ಕಲಿಯಲು ಸಾಧ್ಯ.
                ಆದರೆ, ನಿಮ್ಮ ಮಾನಸಿಕತೆ ‘ನನಗೇ ಎಲ್ಲಾ ತಿಳಿದಿದೆ; ನಿಮಗೆ ಏನೂ ತಿಳಿದಿಲ್ಲ’! ಇದು ಅಹಂಕಾರವಲ್ಲದೆ ಮತ್ತೇನೂ ಅಲ್ಲ.
                ಈ ಕಾರಣದಿಂದಾಗಿಯೇ, ನಿಮಗೆ ಉತ್ತರ ನೀಡಲಾಗದಿದ್ದಾಗ ಕೋಪಗೊಳ್ಳುವುದು, ಪ್ರಶ್ನೆ ಕೇಳಿದವರ ಮೇಲೇ ಎಗರಾಡುವುದು,
                ಪ್ರಶ್ನೆ ಕೇಳಿದವರನ್ನೇ ‘fake’ ಎಂದು ಬಿಡುವುದು”

                ಉತ್ತರ
            • ಸಹನಾ
              ನವೆಂ 7 2013

              When you couldn’t answer the questions you just accept your defeat. Don’t foolishly show fingers towards somebody else like a crying child saying “you hit me, common if you have guts you hit my father, he will tear apart your body” ha ha ha Ayyoo paapa ..

              I have long ago decided that you are not worth to discuss with. You just like ignorant blind shishya for guru and make lot of jokes like comments. So don’t dream again that I am attacking on you and your guru, you both have no intellectual worth for it.

              Continue your jokes, they give lot of fun for me….go ahead… Ha ha.. Ha..

              ಉತ್ತರ
    • Nagshetty Shetkar
      ನವೆಂ 7 2013

      Mr. Vijay, who is running away from the debate??? Maybe you but definitely not me. Instead of conducting debate in right ways, you have left loose mad dogs at me!! If you have questions on vachanakaras or Vachanas, write an open letter in nilume addressing Darga Sir. You will get authoritative answers to all your questions. All doubt will be cleared.
      Got guts? Shoot your letter.

      ಉತ್ತರ
      • ನವೆಂ 7 2013

        > If you have questions on vachanakaras or Vachanas,
        > write an open letter in nilume addressing Darga Sir

        So, do you mean, you are not needed here?

        ಉತ್ತರ
      • ಶೆಟ್ಕರ್,
        “Mad Dogs,ತಲೆ ಹಿಡುಕರು” ನಿಮ್ಮ ಭಾಷೆ ಯಾಕೋ ಬರುಬರುತ್ತಾ ಅಸಹ್ಯವಾಗುತ್ತಿದೆ.ನಾನು ಈ ಪೋಸ್ಟಿನಲ್ಲಿರೋ ಎಲ್ಲಾ ಕಮೆಂಟುಗಳನ್ನು ನೋಡಿದ್ದೇನೆ.ಬೇರೆ ಇನ್ಯಾರಿಗೂ ಬಾರದ ಇಂತ ಅಸಭ್ಯಮಾತುಗಳು ನಿಮಗೊಬ್ಬರಿಗೆ ಯಾಕೆ ಬರುತ್ತಿದೆ? ಉಳಿದವರು ನಿಮ್ಮನ್ನು ಹೀಗೆ ಬಯ್ಯಬಹುದಲ್ಲವೇ?
        ನೀವು ಶರಣರೇ ಇರಬಹುದು.ಉಳಿದವರಿಗೂ ಗೌರವ,ಆತ್ಮಾಭಿಮಾನಗಳಿರುತ್ತವೆ ಅನ್ನುವುದನ್ನು ಅರಿತುಕೊಳ್ಳಿ.

        ಮೇಲೆ ’ಬಾಬರ್ ನ ಮೊಮ್ಮಗ’ ಅಂತ ಬರೆದ ಪ್ರಕ್ರಿಯೆಯನ್ನು ನಿರ್ವಾಹಕ ತಂಡದ ಪರವಾಗಿ ತಿದ್ದಿದ್ದೇನೆ ಅನ್ನುವುದು ನಿಮಗೇ ತಿಳಿದಿರಲಿ.
        ಇದು ನಿಮಗೆ ಕಡೆಯ ಎಚ್ಚರಿಕೆ.ನೀವು ಇದೇ ರೀತಿ ಮುಂದುವರೆಸಿದರೆ ನಿಮ್ಮ ಕಮೆಂಟುಗಳು ಪ್ರಕಟವಾಗುವುದಿಲ್ಲ.ನಿಲುಮೆ ಕಮೆಂಟುಗಳನ್ನು ಮಾಡರೇಟ್ ಮಾಡುವುದರಲ್ಲಿ ನಂಬಿಕೆಯಿಟ್ಟಿಲ್ಲ. ಸಹಕರಿಸಿ.

        ಉತ್ತರ
      • ವಿಜಯ್ ಪೈ
        ನವೆಂ 7 2013

        [Mr. Vijay, who is running away from the debate??? Maybe you but definitely not me]
        ಒಹ್ ಹೌದಾ..ವಿಚಿತ್ತವಾದರೂ ಸತ್ಯ!..ಬಸ್ಸಿನಲ್ಲಿ ಕುಳಿತು ಹೋಗುವವನಿಗೆ ಪಕ್ಕದ ಮರಗಳು ಓಡುತ್ತಿವೆ ಅನಿಸಿದ ಹಾಗೆ!

        [Instead of conducting debate in right ways, you have left loose mad dogs at me!!]
        ನಾನೇನು ರಿಂಗ್ ಮಾಸ್ಟರಾ ಇಲ್ಲಿ?? ಅಥವಾ ನಿಮ್ಮ ಗ್ಯಾಂಗ್ ನ ಹಾಗೆ ಎಲ್ಲ ಕಡೆಯೂ ಸ್ವಂತ ಬುದ್ಧಿಯಿಲ್ಲದ ಜಿ ಹೂಜುರ್, ಜೈ ಜೈ ಗಳು ತುಂಬಿಕೊಂಡಿದ್ದಾರೆ ಎಂಬ ಕಲ್ಪನೆ ನಿಮ್ಮದೊ? ಮತ್ತೊಂದು ಮಾತು ಗುರುಗಳೆ…ನಾವೇನು ಬಿತ್ತುತ್ತಿವೊ ಅದೇ ಬೆಳೆ ಸಿಗುತ್ತೆ ಅಂತಾರೆ..ಅದಕ್ಕೆ ನಿಮ್ಮನ್ನು ನಿಮ್ಮ ಮಾತುಗಳಲ್ಲೇ ಮಾತನಾಡಿಸಲು ನಮಗೂ ಬರುತ್ತೆ.

        [If you have questions on vachanakaras or Vachanas, write an open letter in nilume addressing Darga Sir. ]
        ನನಗೆ ಉಳಿದ ರಾಮಾಯಣ, ಮಹಾಭಾರತ ಏನೂ ಬೇಡ..ನನ್ನದು ಸರಳ ಪ್ರಶ್ನೆ
        ಚನ್ನಬಸವಣ್ಣನವರ ಆಚಾರಗಳ್ಲಿ ಇರುವ ೪೫. ಲಿಂಗದ್ರೋಹಿಯ ಪ್ರಾಣವ ಭೇದಿಸುವುದು. ೪೬. ಜಂಗಮದ್ರೋಹಿಯ ಶಿರವನೀಡಾಡುವುದು.ಇವು ಜೀವ ವಿರೋಧಿಯೆ? ಅಲ್ಲವಾದರೆ ಏಕೆ ಅಲ್ಲ?

        [You will get authoritative answers to all your questions. All doubt will be cleared.]
        authoritative answers ಅಂದರೆ ಇಲ್ಲಿ ಶಿಷ್ಯಂದಿರಾದ ನೀವಾಡುವ ಎಲ್ಲ ಮಾತುಗಳು ಅನಧಿಕೃತ..ಅವಕ್ಕೆ ಕಿಮ್ಮತ್ತು ಇಲ್ಲ ಅಂತಾಯಿತು!. ಮೊದಲೇ ಈ ಮಾತನ್ನು ಏಕೆ ಹೇಳಲಿಲ್ಲ ನೀವು?

        [ Got guts? Shoot your letter.]
        ಇಲ್ಲೆ ಪ್ರಶ್ನೆಗೆ ಉತ್ತರಿಸದೆ ಪಲಾಯನರಾಗ ಹಾಡುತ್ತಿದ್ದಿರಿ..ಮತ್ತೆ Got guts? ಅನ್ನುವ ಚಾಲೆಂಜ್ ಬೇರೆ! ನೀವು ಇಲ್ಲಿ ಉತ್ತರ ಕೊಡಲಿಲ್ಲ ಅಂದರೆ ಇಲ್ಲಿರುವ ಪ್ರಶ್ನೆಗಳನ್ನೆಲ್ಲ ಕ್ರೋಡೀಕರಿಸಿ ಖಂಡಿತ ಒಂದು ಲೇಖನವನ್ನೇ ಬರೆಯುತ್ತೇನೆ..ನಿಮ್ಮನ್ನು ಹಾಗೆ ಸರಳವಾಗಿ ಓಡಿ ಹೋಗಲು ಬಿಡುವುದಿಲ್ಲ.

        ಉತ್ತರ
  30. Nagshetty Shetkar
    ನವೆಂ 7 2013

    Mr. Shetty, you are a hypocrite. Everyone of your gang has abused me in this forum and yet you accuse me of using foul language! Should I list all the abuses hurled at me by you all? It will be a long list beware. Even Krishnappa Sir wasnt spared by you. He swallowed abuses with great dignity. Any way you people lack guts and hide behind fake ids to take turn at guerilla war. I challenge you too to write open letter to Darga Sir and conduct debate in civilized manner. Other wise you can hang your heads in shame.

    ಉತ್ತರ
    • ಹಿಪೋಕ್ರೈಟ್ ಗಳು ಯಾರು ಅನ್ನುವುದನ್ನು ಸಿ.ಎಸ್.ಎಲ್.ಸಿ ಕುರಿತ ಲೇಖನದಲ್ಲಿ ನಾನು ಬರೆದಿದ್ದೇನೆ.ಬೇಕಿದ್ದರೆ ಅಲ್ಲಿಯೇ ಚರ್ಚೆ ಮಾಡೋಣ.
      ಇನ್ನು ಇಲ್ಲಿ ಯಾರು ನಿಮ್ಮ ಮೇಲೆ ಅಸಭ್ಯ ಭಾಷೆ ಬಳಸಿಲ್ಲ.ಬಳಸಿದ್ದರೆ ತೋರಿಸಿ. ಅಡ್ಮಿನ್ ಆಗಿ ಏನು ಮಾಡಬೇಕು ಅದನ್ನೇ ಮಾಡುವೆ.

      ನಿಮ್ಮ ’open letter challenge’ ಅನ್ನು ಮೇಲೆ ವಿಜಯ್ ಸ್ವೀಕರಿಸಿದ್ದಾರೆ. ಆರೋಗ್ಯಕರ ಚರ್ಚೆಯಾಗಲಿ

      ಉತ್ತರ
      • Mukhesha
        ನವೆಂ 8 2013

        ರೀ ಸಹನಾ ಕನ್ನಡದಲ್ಲಿ ಬರೆದ್ರೆನೆ ಸಾಹೇಬ್ರಿಗೆ ಗೊತ್ತಾಗಲ್ಲ, ಅಂತಾದ್ರಲ್ಲೆ ಕಂಗ್ಲಿಷ್ ನಲ್ಲಿ ಬರೆದ್ರೆ ಎಡವಟ್ಟರ್ಥ ಮಾಡ್ಕೊಳ್ಳಲ್ವೇನ್ರೀ!!!! ‘ಹೊಡೀರಿ ಹಲಗಿ’ ಯನ್ನು ‘ಬಡೀರಿ ಹೊಡೀರಿ ಹಾಳಾಗಿ’ ಅಂತ ತಿಳ್ಕಕೊಂಡ್ ಬಿಟ್ಟಿದ್ದಾರೆ, ಗುರುಗಳು..
        ಅಂದಹಾಗೆ, ಚರ್ಚೆಯಲ್ಲಿ ಬಂದು ಮಾತಾಡ್ತಿರೋವ್ರತ್ರ ಬಿಟ್ಟು ತಮಗೆ ಕೇಳಿದ ಪ್ರಶ್ನೆಗಳನ್ನು ಇಲ್ಲಿ ಚರ್ಚೆಯಲ್ಲಿ ಭಾಗವಹಿಸದಿರುವ ಇನ್ಯಾರಿಗೋ ಪತ್ರ ಬರೆಯಿರಿ ಅಂತ ಹೇಳೋದು ತಲೆಕೆಟ್ಟೋರು ಮಾತ್ರ ಮಾಡಲು ಸಾಧ್ಯ!!!

        ಇವತ್ತು ದರ್ಗಾಗೆ ನಾಳೆ ಅರುಂಧತಿ ರಾಯ್ ಗೆ ಇಲ್ಲಾ ಅಂದ್ರೆ ಸಲ್ಮಾನ್ ರಷ್ದಿಗೆ ತಾಕತ್ತಿದ್ರೆ shoot your questions through open letter ಅಂತ ಹೇಳಕ್ಕೆ ಆರಂಭಿಸಬಹುದು. ಇದು ಕೈಲಾಗದವರು, ಉತ್ತರಕುಮಾರನ ತರದ ಕಾಮಿಡಿ ಪೀಸುಗಳು ಮಾಡುವ ವೀರಾವೇಶದ ಪೌರುಷ, ನನಗಂತೂ ಸಿಕ್ಕಾಪಟ್ಟೆ ನಗುಬಂತು.

        ರೀ ಶೆಟ್ಕರ್ ನಿಮಗೆ ತಾಕತ್ತಿದ್ರೆ ಉತ್ರಕೊಡಿ. ಇಲ್ಲ ಅಂದ್ರೆ ಗೊತ್ತಿಲ್ಲ ಸುಮ್ನಿರಿ. ಅದನ್ನು ಬಿಟ್ಟು ಸೀನ್ ನಲ್ಲೇ ಇಲ್ಲದಿರುವ ದರ್ಗಾರನ್ನು ಏಕೆ ಭಾವಿಗೆ ನೂಕುತ್ತಿದ್ದೀರಿ. ಅವಧಿಯಲ್ಲೇ (ಅಷ್ಟೆಲ್ಲಾ ಮಾಡರೇಟರ್ ಕೃಪೆ ಇದ್ರೂ) ಅವರ ಫಜೀತಿ ಪಟ್ಟಿರೋದು ಕಾಣುತ್ತದೆ. ದರ್ಗಾರನ್ನು ಮೂರುಕಾಸಿಗೆ ಹರಾಜಾಕದೆ ಬಿಡೋದಿಲ್ಲ ಅಂತ ಪ್ರತಿಜ್ಞೆ ಏನಾದರೂ ನೀವು ಮಾಡಿರಬೇಕು ಅನಿಸುತ್ತದೆ!!!! 🙂 . ಆಗಲಿ ಬಿಡಿ, ಗ್ರಹಚಾರ ವಕ್ಕರಿಸಿಕೊಂಡಾಗ ಏನ್ ಮಾಡೋಕ್ಕಾಗತ್ತೆ, ಎಲ್ಲಾ ಆ ಶಿವನ ಲೇಲೆ!!!

        ಉತ್ತರ
        • ನವೆಂ 8 2013

          > 1. “ಕುಣಿಲಾರದ ……. ನೆಲ ಡೊಂಕು ಅಂದಳಂತೆ”
          You accused “Nilume” platform itself! Instead of putting forth your arguments, you are finding these kind of excuses. ನಿಮ್ಮ ಈ ಪರಿಗೆ ಇದಕ್ಕಿಂತ ಉತ್ತಮ ಗಾದೆ ಮಾತು ಹೊಳೆಯಲಿಲ್ಲ. ನಿಮಗೆ ತಿಳಿದಿದ್ದರೆ ದಯವಿಟ್ಟು ಹಂಚಿಕೊಳ್ಳಿ. 😉

          > 2. “ನೀವು ಚರ್ಚೆ ಮಾಡಲು ಯೋಗ್ಯರಲ್ಲ ”
          You have jumped into this debate. You were rattled with questions.
          Instead of answering them, you are asking the questioners to write direct letter to Darga.
          So, you are directly telling that you are not fit. Isn’t it?

          > 3. “ಉತ್ತರನ ಪೌರುಷ ಒಲೆ ಮುಂದೆ” (this is even ant-feministic).
          Tell me what do you mean by “ant-feministic”? And how this ಗಾದೆ fits into that definition!?

          ಉತ್ತರ
          • Nagshetty Shetkar
            ನವೆಂ 8 2013

            Mr. Kumar, if I am Uttara then you are admitting that Darga Sir is Arjuna. I hope you know that Arjuna decimated Uttara’s enemies. So you can imagine what will happen to you and your gang when you fight with Darga Sir directly. I am happy to be called Uttara as long as it helps progressive thinkers like Darga Sir to decimate fascism.

            ಉತ್ತರ
            • ನವೀನ
              ನವೆಂ 8 2013

              ಉತ್ತರ,ಅರ್ಜುನ ಯಾರು ಅಂತ ಆಯಿತು. ಕೃಷ್ಣ ಯಾರು ಸರ್?

              ಉತ್ತರ
              • Mukhesha
                ನವೆಂ 8 2013

                ಉತ್ತರ ಕುಮಾರನ ಎಪಿಸೋಡಿನಲ್ಲಿ ‘ಕೃಷ್ಟ’ನಿಗೆ ಕೆಲಸ ಇರೋಲ್ಲ ನವೀನ್, ಹೆಂಗಳೆಯರ ಮುಂದೆ ಉತ್ತರನ ಪೌರಷ ಮಾತ್ರ ವಿಜೃಂಭಿಸುತ್ತಿರುತ್ತದೆ. ಅರ್ಜುನ ಕೂಡ ಈ ಎಪಿಸೋಡಿನಲ್ಲಿ ‘ಬೃಹನ್ನಳೆ’ ಯಾಗಿರುತ್ತಾನೆ/ಳೆ ಅನ್ನುವುದ ವಿಶೇಷ. ಈ ಸನ್ನಿವೇಶದಲ್ಲಿ ‘ದರ್ಗಾ’ರನ್ನು ‘ಅರ್ಜುನ’ ನೆಂದು ಶೆಟ್ಕರರು ಕಲ್ಪಿಸಿದ್ದಾರೆ. ಊಹಿಸಿಕೊಳ್ಳಿ ಸನ್ನಿವೇಶವ ಹೇಗಿರುತ್ತೆ ಅಂತ… !!!! 🙂

                ಉತ್ತರ
                • Nagshetty Shetkar
                  ನವೆಂ 8 2013

                  I am a humble Sharana and I don’t get provoked by your lewd comments. If you have guts, write an open letter to Darga Sir and other progressive thinkers. No more debating in comment threads.

                  ಉತ್ತರ
                  • Mukhesh
                    ನವೆಂ 8 2013

                    ಸುಮ್ನೆ ಯಾಕ್ರಿ ಅದೇ ಕಾಮಿಡಿ ಡೈಲಾಗ್ ಹೊಡಿತಿದ್ದೀರಿ. ನಿಮ್ಮ ಮಾತು ಕೇಳ್ಕೊಂಡು ಒಪನ್ ಲೆಟರ್ ಬರೆದ ಮೇಲೆ ನಿಮ್ ದರ್ಗಾರವರು ನಾನೇನು ಹೇಳಿದ್ನೆ ನಿಮಗೆ ಲೆಟರ್ ಬರೀರಿ ಅಂತ… ಎಂದು ಉಲ್ಟಾ ಹೊಡೆದರೆ….. (ಅವಧಿಯಲ್ಲಿ ಅವರ ಈ ಕಲೆಯ ಪ್ರದರ್ಶನ ಚೆನ್ನಾಗಿ ಮಾಡಿದ್ದಾರೆ).

                    ಓಕೆ ನಮಗೆ ಯಾರಿಗೂ ಇಲ್ಲಿ ಗಟ್ಸ್ ಇಲ್ಲಾ ಅಂತ ಇಟ್ಕೊಳಿ. ನಿಮ್ಮ ದರ್ಗಾ ಅವರಿಗೆ ಗಟ್ಸ್ ಸಿಕ್ಕಾ ಪಟ್ಟೆ ಇದೆಯಿರಬಹುದು. ಇಲ್ಲಿ ನಿಮ್ಮ ಕೈಯಲ್ಲಿ ಉತ್ತರಿಸಲಾಗದೆ ಸುಸ್ತು ಹೊಡೆಸಿಕೊಂಡ ಪ್ರಶ್ನೆಗಳನ್ನೆಲ್ಲಾ ಅವರಿಗೆ ತಲುಪಿಸಿ ಅವರೆ ಆ ಪ್ರಶ್ನೆಗಳಿಗೆಲ್ಲ ಉತ್ತರಿಸಿ ನಿಲುಮೆಗೆ ಲೇಖನ ಬರೆದು ತಮ್ ಗಟ್ಸ್ ಅನ್ನು ಪ್ರದರ್ಶಿಸಲಿ ನೋಡುವಾ!!! ಸುಮ್ನೆ ಯಾಕೆ ನಾಟಕ… ನಿಮಗೆ ಉತ್ತರ ಗೊತ್ತಿಲ್ಲ ಅಂತ ಸುಮ್ಮನಾಗಿ, ಎಲ್ಲೋ ಇರೋ ದರ್ಗಾರಿಗೆ ನಿಮ್ಮ ಮಾತು ಕೇಳ್ಕೊಂಡು ಓಪನ್ ಲೆಟರ್ ಬರೆಯೋಕೆ ನನ್ನ ತಲೇಲಿ ನಿಮ್ಮ ಷ್ಟು (ಬು)ದ್ದಿ ತುಂಬಿದೆಯೇ???/

                    ಉತ್ತರ
                    • Nagshetty Shetkar
                      ನವೆಂ 8 2013

                      Mr. Mukhesh, ok let’s admit that you don’t have guts and move on. No worries.

                    • Mukhesha
                      ನವೆಂ 8 2013

                      Phrrrrrr….. Mr. Shetkar… It’s very pity to see you in this condition. If have stuff Answer the questions otherwise you do what you are preaching to me and others here!!!!! Soooo sad better luck next time….. Ha ha ha 😉

                    • Nagshetty Shetkar
                      ನವೆಂ 8 2013

                      I answered all questions asked by Vijay. Why are you repeating your tape again and again?

                  • ರವಿ
                    ನವೆಂ 8 2013

                    Nagshetty – Whats the thing about guts here? Your Darga or any other psuedo-progressive thinkers never participated in this discussion. You participated, you posted your thoughts (mostly others`). When someone had questions on what you posted, you need to answer – not your Darga or other psuedo-progressive thinkers. If you want them to answer – ask them, come back and answer here. If you dont have answer accept the defeat and move on. Don’t utter the same ‘open letter’ thing again and again..

                    ಉತ್ತರ
                    • Nagshetty Shetkar
                      ನವೆಂ 8 2013

                      Mr. Ravi, Ok, if you lack guts to write the open letter, so be it. Why make a big issue out of your incompetence? Let’s move on.

        • Nagshetty Shetkar
          ನವೆಂ 8 2013

          Mr. Shetty, you haven’t responded or taken action even after me complaining to you. What kind of an editor you are? I haven’t seen a more biased and partial editor of a web-site than you. Yet you guys complained that Mohan Sir didn’t publish your comments on Avadhi. Hypocricy.

          Mr. Rakesh Shetty, please note the derogatory language in the above comment by Mr. Mukesha.
          1. “ದರ್ಗಾರನ್ನು ಮೂರುಕಾಸಿಗೆ ಹರಾಜಾಕದೆ ಬಿಡೋದಿಲ್ಲ ”
          2. “ನಿಮಗೆ ತಾಕತ್ತಿದ್ರೆ ಉತ್ರಕೊಡಿ”
          3. “ಉತ್ತರಕುಮಾರನ ತರದ ಕಾಮಿಡಿ ಪೀಸುಗಳು ಮಾಡುವ ವೀರಾವೇಶದ ಪೌರುಷ”
          4. “ಕನ್ನಡದಲ್ಲಿ ಬರೆದ್ರೆನೆ ಸಾಹೇಬ್ರಿಗೆ ಗೊತ್ತಾಗಲ್ಲ”
          5. “ತಲೆಕೆಟ್ಟೋರು ”

          Similar language in Kumar’s comment below:
          1. “ಕುಣಿಲಾರದ ……. ನೆಲ ಡೊಂಕು ಅಂದಳಂತೆ”
          2. “ನೀವು ಚರ್ಚೆ ಮಾಡಲು ಯೋಗ್ಯರಲ್ಲ ”
          3. “ಉತ್ತರನ ಪೌರುಷ ಒಲೆ ಮುಂದೆ” (this is even ant-feministic).

          ಉತ್ತರ
          • ನವೆಂ 8 2013

            > Similar language in Kumar’s comment below:
            Mr.Shetkar,
            I had answered to all the points you had listed under my name as derogatory comments.
            Also, I had asked you a question about the last point.
            You haven’t answered even this simple question! May be you are waiting for “Durga Sir” to help you to answer this question or you may ask me to write an open letter to Durga Sir to show my guts!! 😉
            So, what kind of a discussion is this?

            I still don’t understand, why did you jump into this discussion – you are not able to answer questions, you get irritated by questions, you start scolding the questioners and even Nilume platform itself and finally you ask the questioner to prove guts by writing an open letter to Durga Sir!
            And after all this, you call yourself “Progressive Thinker”, “Sharana”, etc!
            If all the people in the group of “Progressive Thinkers” are like you only, then we will have to write an open letter to Websters to change the meaning of “Progress” and “Thinker”!! 😉

            ಉತ್ತರ
          • ಶೆಟ್ಕರ್ ಅವರೇ,

            ಆ ಕಮೆಂಟುಗಳನ್ನು ನೀವು ಅಡ್ಮಿನ್ ತಂಡದ ಗಮನಕ್ಕೆ ತಂದ ಮೇಲೆ ಅವೆಲ್ಲವನ್ನೂ ತೆಗೆದು ಹಾಕಲಾಗಿತ್ತು.ಮತ್ತೆ ಅದೇ ಕಮೆಂಟುಗಳನ್ನು ಹೊಸತಾಗಿ ಹಾಕಲಾಗಿರುವುದನ್ನು ಗಮನಿಸಿರಲಿಲ್ಲ, ಹೊರತು ನಾನು ಕೇವಲ ನಿಮ್ಮ ಕಮೆಂಟುಗಳನ್ನು ಮಾತ್ರ ಅಳಿಸಿದ್ದೇನೆ ಅಂತ ನೀವಂದುಕೊಂಡರೆ ನಾನೇನು ಮಾಡಲಾರೆ.ನಿಲುಮೆಯನ್ನು ಮೊದಲಿನಿಂದ ನೋಡಿಕೊಂಡು ಬಂದ ಓದುಗರಿಗೆ ತಿಳಿದಿದೆ ಪಕ್ಷಪಾತವನ್ನು ನಾವೆಂದಿಗೂ ಮಾಡಿಲ್ಲವೆಂಬುದು.

            ನಾನು ಅಷ್ಟೆಲ್ಲಾ ಹೇಳಿದ ಮೇಲೂ ನೀವು ಮತ್ತೆ ಮತ್ತೆ ’ತಲೆಹಿಡುಕರ ಸಹವಾಸ’ ಅಂತೆಲ್ಲ ಬರೆದು ಮತ್ತೆ ಅಲವತ್ತುಕೊಳ್ಳುವುದೇಕೆ?ನಾವು ಜನರೊಂದಿಗೆ ಹೇಗೆ ಮಾತನಾಡುತ್ತೇವೆಯೋ ಜನರು ನಮ್ಮೊಂದಿಗೆ ಹಾಗೆ ಮಾತನಾಡುತ್ತಾರಂತೆ. ನಾನು ಮತ್ತೊಮ್ಮೆ ಈ ಕಮೆಂಟುಗಳನ್ನು ತೆಗೆಯಲು ಹೋಗುವುದಿಲ್ಲ.ಇವುಗಳು ಇಲ್ಲೇ ಇರಲಿ.ಮತ್ತು ಜನರಿಗೆ ಎಂತೆಂತವರೆಲ್ಲ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ ಅನ್ನುವುದು ತಿಳಿಯಲಿ.

            ಮತ್ತೊಂದು ವಿಷಯ, ನೀವು ಪದೇ ಪದೇ ಈ ಚರ್ಚೆಯಲ್ಲಿಯೇ ಇಲ್ಲದ ’ದರ್ಗಾ’ ಅವರ ಹೆಸರು ಉಲ್ಲೇಖಿಸುವ ಅಗತ್ಯ ಮತ್ತು ಔಚಿತ್ಯವೇನು? ಸುಮ್ಮನೇ ಅವರನ್ನೇಕೆ ನಿಮ್ಮ ಮಾತಿನ ಮಧ್ಯೆ ಎಳೆದು ತರುತ್ತೀರಿ? ಇದು ಒಳ್ಳೆಯ ನಡೆಯಲ್ಲ.

            ನಿಮ್ಮ ಸವಾಲಿನಂತೆ ವಿಜಯ್ ಅವರು ಪ್ರಶ್ನೆಗಳನ್ನೇ ಇಟ್ಟು ಲೇಖನವೊಂದನ್ನು ಬರೆಯುವುದಾಗಿ ಹೇಳಿದ್ದಾರೆ.ಹಾಗಾಗಿ ಇನ್ನು ಇಲ್ಲಿ ಚರ್ಚೆಯನ್ನು ನಿಲ್ಲಿಸುವುದು ಒಳಿತು.ನಿಮ್ಮ ಉತ್ತರಗಳನ್ನು ಸಾಧ್ಯವಾದರೆ ಅಲ್ಲಿಯೇ ಕೊಡಿ.

            ಉತ್ತರ
            • Nagshetty Shetkar
              ನವೆಂ 9 2013

              Mr. Shetty, please accept my apologies for calling the trolls of Nilume ‘talehiduka’. Mr. Bolumbu is right, trolls are not necessarily ‘talehiduka’. Thank you Mr. Bolumbu for enlightening me.

              Mr. Shetty, I won’t apologize for referring to Darga Sir. He is my role model and inspiration. His voice is mine and what I speak is influenced deeply by his thoughts. We Sharanas are like this only.

              Mr. Shetty, I welcome Mr. Vijay and others to write an open letter to progressive thinkers and invite them to debate on all your questions/concerns/confusions about progressive politics.

              Mr. Shetty, I have heard that your site has seen tremendous increase in hits after I started to actively question the prejudices of your writers and readers. Is that true? If it is true, you must thank me.

              ಉತ್ತರ
              • ವಿಜಯ್ ಪೈ
                ನವೆಂ 9 2013

                ಹೂಂ..ಅದಕ್ಕೆ ನಿಮ್ಮದೊಂದು ಫೋಟೊ ಕಳಿಸಿಕೊಡಿ ಗುರುಗಳೆ ಅಂದಿದ್ದು!..ಇಲ್ಲಿಯೇ ಸೈಟ್ ನ ಬಲಬದಿಯಲ್ಲಿ ಕಾಯಂ ಆಗಿ ತೂಗು ಹಾಕಲು ನಿರ್ವಾಹರಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ. ಈ ಸೈಟ್ ಗೆ ಯಾರ ಕಣ್ಣು ಬಿಳೊಲ್ಲ!. ಅಂದಹಾಗೆ ಇಲ್ಲಿಯ ಓದುಗರ/ಬರಹಗಾರರ ‘ಪೂರ್ವ’ಗ್ರಹವನ್ನು ಪ್ರಶ್ನೆಮಾಡಿ, ಮಾಡಿ ನಿಮ್ಮ ‘ಪಶ್ಚಿಮ”ಮಧ್ಯಪ್ರಾಚ್ಯ’ಗ್ರಹ ಗಳು ಬಿಟ್ಟು ಹೋದವೆ? 🙂

                ಉತ್ತರ
                • Nagshetty Shetkar
                  ನವೆಂ 9 2013

                  You can put Darga Sir’s photo if you want.

                  ಉತ್ತರ
                • Nagshetty Shetkar
                  ನವೆಂ 9 2013

                  Mr. Vijay, my question was addressed to Mr. Shetty. Why have you responded to it? There can be only two possibilities. 1) You are Mr. Shetty 2) You are a troll who pokes his nose in all conversations for perverse pleasure. If it is 1, then it proves that one of the two ids is fake which is shameful. If it is 2, then why are Mr. Shetty and Mr. Bolumbu silent about you the troll? Maybe they are your accomplices. So Mr. Vijay, tell me and other readers which of the above two holds true.

                  ಉತ್ತರ
                  • ವಿಜಯ್ ಪೈ
                    ನವೆಂ 9 2013

                    ಗುರುಗಳೆ..

                    ನಿಮಗೆ ವಿಷಯ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಡಿಮೆ ಆಗಿರುವ ಅಥವಾ ಇಲ್ಲದೇ ಇರುವ ಸಾಧ್ಯತೆ ಕಂಡು ಬರುತ್ತಿದೆ.
                    [Mr. Vijay, my question was addressed to Mr. Shetty. Why have you responded to it?] ಕೇಳಿದ್ದೀರಿ..ನಾನು ಉತ್ತರಿಸಿದ್ದು ನಿಮ್ಮ [I started to actively question the prejudices of your writers and readers. Is that true?] ವಾಕ್ಯಕ್ಕೆ..ಏಕೆಂದರೆ ನಾನು ಇಲ್ಲಿಯ ಒಬ್ಬ ಓದುಗ. ನಾನು ಮುಂದೆ [ನಿರ್ವಾಹಕರಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ] ಅಂತ ಬರೆದಿದ್ದು ನಿಮ್ಮ ತಲೆಗೆ ಹೋದಂತೆ ಕಾಣಿಸುತ್ತಿಲ್ಲ.

                    ನಿಮ್ಮದು ತಾನು ಕಳ್ಳ ..ಪರರ ನಂಬ ತತ್ವ..ತಿದ್ದುವುದು ಕಷ್ಟ .. ಕೃಷ್ಣಪ್ಪ, ಶಿವರಾಮರಿಗೆ ಎಲ್ಲ ಕಡೆ ಅವರೇ ಕಾಣಿಸುತ್ತಾರೆ! ..ಏನಂತೀರಿ ಗುರುಗಳೆ? 🙂

                    ಉತ್ತರ
                  • ವಿಜಯ್ ಮತ್ತು ನಾನು ಇಬ್ಬರೂ ಒಂದೇ ಎಂದೂ ಮತ್ತು ಮುಂದುವರೆದೂ ಬೊಳಂಬೂ ಅವರನ್ನೂ ಸೇರಿಸಿಕೊಂಡು ಅದೆಲ್ಲಾ ನಾನೇ ಅನ್ನುವ ನಿಮ್ಮ ಊಹೆಗೆ ನಗಬಲ್ಲೆನಷ್ಟೇ. ಮೊದಲಿಗೆ ನನಗಂತೂ ನನ್ನ ಐಡೆಂಟಿಟಿಯನ್ನು ಮುಚ್ಚಿಟ್ಟು ಬರೆದುಕೊಳ್ಳುವ ಯಾವ ಅಗತ್ಯವೂ ಇಲ್ಲ,ಹಾಗಿದ್ದ ಮೇಲೆ ನಾನೇಕೆ ಹಾಗೆ ಮಾಡಬೇಕು? ವಿಜಯ್ ಪೈ,ಕೃಷ್ಣಪ್ರಕಾಶ್ ಬೊಳಂಬು ಅವರು ಯಾರು ಅನ್ನುವುದು ನಿಮಗೆ ತಿಳಿದಿಲ್ಲದಿರಬಹುದು.ಆದರೆ ನಿಲುಮೆಯ ಓದುಗರಿಗೆ ತಿಳಿದಿದೆ.
                    ಸುಖಾಸುಮ್ಮನೇ ಈ ರೀತಿಯ ಮಾತುಗಳನ್ನೆಲ್ಲ ಬಿಟ್ಟು ನೀವು ವಿಷಯದ ಮೇಲೆ ಚರ್ಚಿಸುವುದು ಒಳಿತು. ನಮಸ್ಕಾರ

                    ಉತ್ತರ
                    • Nagshetty Shetkar
                      ನವೆಂ 9 2013

                      Mr. Shetty, you too seem to lack logical thinking capability. I said there can be only two possibilities. 1) Mr. Vijay is Mr. Shetty 2) Mr. Vijay are a troll who pokes his nose in all conversations for perverse pleasure. If it is 1, then it proves that one of the two ids is fake which is shameful. If it is 2, then why are Mr. Shetty and Mr. Bolumbu silent about Mr. Vijay the troll? Now, if you are not Mr. Vijay, then Mr. Vijay must be a troll. He replied to a question that was directed at you. It was none of his business. Yet he poked his nose, like a troll. And that’s acceptable to you because he is your accomplice.

                      You did not read correctly what I wrote and yet went to preach me. Stop bullshitting and practice what you preach. Otherwise people will not take you seriously.

                    • ೩ ಜನರನ್ನು ಸಮೀಕರಿಸುವ ನಿಮ್ಮ ಕಲ್ಪನೆಯೇ ಇಲ್ಲಾಜಿಕಲ್ ಆಗಿರುವಾಗ ನಾನೇಗೆ ಲಾಜಿಕಲ್ ಆಗಿ ಮಾತನಾಡಲಾದೀತು? ಪ್ರವಚನ ಕೊಡುವುದೆಲ್ಲ ನಿಮ್ಮ ಕೆಲಸ ಶೆಟ್ಕರ್ ಅವರೇ ನನ್ನದಲ್ಲ 🙂

                    • Nagshetty Shetkar
                      ನವೆಂ 9 2013

                      Mr. Shetty, you made mistakes and yet you haven’t admitted them. What kind of person are you? Have some shame and humility.

                    • ರವಿ
                      ನವೆಂ 9 2013

                      ರಾಕೇಶ್, ಮುಖ್ಯ ವಿಷಯದಿಂದ ಚರ್ಚೆ ಯಾವಾಗಲೋ ಆಚೆ ಹೋಗಿದೆ.. ಸೆಗಣಿಗೆ ಕಲ್ಲೆಸೆಯುವ ಕೆಲಸ ಯಾಕೆ ಮತ್ತೆ? ಸುಮ್ಮನಿರಿ

                • ಗಿರೀಶ್
                  ನವೆಂ 9 2013

                  ವಿಜಯ್ ಪೈ ಅವರೆ ನೀವೇನಾದ್ರೂ ನಿಮ್ಹಾನ್ಸಿಗೆ ರೋಗಿಗಳನ್ನು ಸರಬರಾಜು ಮಾಡುವ ಗುತ್ತಿಗೆ ಪಡೆದುಕೊಂಡಿದ್ದೀರಾ ಹೇಗೆ? 😀

                  ಉತ್ತರ
              • ನಮ್ಮ ಮಾತು ಮತ್ತು ನಡವಳಿಕೆಗಳು ನಾವು ನಮ್ಮ ಗುರು-ಹಿರಿಯರಿಂದ ಪಡೆದ ಸಂಸ್ಕಾರದ ಪ್ರತಿಬಿಂಬಗಳಂತೆ. ಇದಕ್ಕಿಂತ ಇನ್ನೇನು ಹೆಚ್ಚಿಗೆ ಬರೆಯಬೇಕು ಅನ್ನಿಸುತ್ತಿಲ್ಲ ನಿಮ್ಮ ಪ್ರತಿಕ್ರಿಯೆಗೆ.

                ಉತ್ತರ
          • Mukhesha
            ನವೆಂ 9 2013

            ಪದಗಳನ್ನು ಪಟ್ಟಿಮಾಡಿಬಿಟ್ಟರೆ ಅಪಾದನೆ ಸಾಭೀತಾಗುವುದಿಲ್ಲ, ಈ ಪಟ್ಟಿಯಲ್ಲಿ derogatory language ಏನಿದೆ ಅಂತ ವಿವರಿಸಬೇಕು ಶೆಟ್ಕರ್ ವರೇ!!!
            >1. “ದರ್ಗಾರನ್ನು ಮೂರುಕಾಸಿಗೆ ಹರಾಜಾಕದೆ ಬಿಡೋದಿಲ್ಲ ”
            ತಾವೇ ಉತ್ತರ ಗೊತ್ತಿಲ್ಲದೇ ಪರದಾಡುತ್ತಿರಬೇಕಾದರೆ ಪದೇ ಈ ಫೋರಂ ನಲ್ಲೇ ಇಲ್ಲದ ದರ್ಗಾರಿಗೆ ಪತ್ರ ಬರೆಯುವಂತೆ ಗೋಗರೆಯವು ಔಚಿತ್ಯವನ್ನು ಹೇಗೆ ಹೇಳಬೇಕು?

            2. “ನಿಮಗೆ ತಾಕತ್ತಿದ್ರೆ ಉತ್ರಕೊಡಿ”

            ಕೇಳಿದ ಪ್ರಶ್ನೆಗಳಿಗೆ ತಾವು ಉತ್ತರಿಸದೆ ಇನ್ನಾರಿಗೋ ಪತ್ರ ಬರೆಯುವಂತೆ ಎಲ್ಲರಿಗೂ ಬರೆಯಿರಿ ಬರೆಯಿರಿ ಎಂದು ಜೋಕ್ ಮಾಡಿದರೆ ಏನು ಹೇಳುವುದು. ತಮಗೆ (ಬುದ್ದಿ) ಶಕ್ರಿ/ತಾಕತ್ ಇದ್ದರೆ ಉತ್ತರಿಸಿ ಇಲ್ಲವೇ ಸುಮ್ಮನೆ ಇರಿ ಎನ್ನಬೇಕಲ್ಲವೇ (ನೀವು ಹಲವರಿಗೆ “ಗಟ್ಸ್ ಇದ್ದರೆ…..” ಅಂತ ಬರೆದಿರಲ್ಲ ಅದು derogatory language )

            3. “ಉತ್ತರಕುಮಾರನ ತರದ ಕಾಮಿಡಿ ಪೀಸುಗಳು ಮಾಡುವ ವೀರಾವೇಶದ ಪೌರುಷ
            ಇದು ಉಪಮೆಯಲ್ಲವೇ? ತನಗೆ ಉತ್ತರಿಸುವ ಶಕ್ತಿ ಇಲ್ಲದಿದ್ದರೂ ಇನ್ಯಾರನ್ನೋ ಪ್ರಶ್ನಿಸಿದರೆ ನಿಮ್ಮ ಮಾನಹೋಗುವುದು ಅನ್ನೋತರ ಕೊಚ್ಚಿಕೊಳ್ಳುವುದನ್ನು ಇನ್ಯಾವುದಕ್ಕೆ ಹೋಲಿಸಲು ಸಾಧ್ಯ??? ನೀವೇ ಇದಕ್ಕೆ ಬೇರೆ ಉಪಮೆ ಕೊಡಿ

            4. “ಕನ್ನಡದಲ್ಲಿ ಬರೆದ್ರೆನೆ ಸಾಹೇಬ್ರಿಗೆ ಗೊತ್ತಾಗಲ್ಲ”
            ಅಲ್ವ ಮತ್ತೆ??? ಅಚ್ಚ ಕನ್ನಡದಲ್ಲಿ ಕೇಳಲಾಗಿದೆ “ಶೂದ್ರರಿಗೆ ವೇದ ಕೇಳಿದ್ದಕ್ಕೆ ಕಾದ ಸೀಸ ಕಿವಿಯಲ್ಲಿ ಸುರಿದ ಘಟನೆಯ ಉಲ್ಲೇಖ ಎಲ್ಲಿದೆ” ಎಂದು. ಇದು ಅರ್ಥವೇ ಆಗದ ತರ ನಾಟಕ ಮಾಡಿಕೊಂಡು ಆಗಿದ್ದರೆ ಶೂದ್ರಿಗೆ ಅಸ್ಪೃಶ್ಯರಿಗೆ ಶೋಷಣೇನೇ ಮಾಡಲಿಲ್ವೇ ಅಂತ ಜಾರಿಕೊಳ್ಳೋ ಪ್ರಯತ್ನ ಮಾಡ್ತೀರಿ. ಆದರೆ ಒಮ್ಮೇಯೂ ಒಂದು ಘಟನೆಯ ಉಲ್ಲೇಖವನ್ನು ಕೊಡಲ್ಲ ಮತ್ತು ಅದು ಗೊತ್ತಿಲ್ಲ ಅಂತನೂ ಒಪ್ಕೊಂಡಿಲ್ಲ. ಅದರ್ಥ ಅಚ್ಚಕನ್ನಡದಲ್ಲಿ ಬರೆದ್ರೆನೇ ಗೊತ್ತಾಗಲ್ಲ, ಇಲ್ಲವೇ ಅರ್ಥವಾಗದವರ ತರ ನಾಟಕ ಮಾಡ್ತೀರಿ ಹೌದೋ ಅಲ್ವೋ?

            5. “ತಲೆಕೆಟ್ಟೋರು ”
            ಇದನ್ನು ನಿಮಗೆ ಹೇಳಿದ್ದೇ??? ಫೋರಂನ ಚರ್ಚೆಗೇ ಬರದಿದ್ದವರಿಗೆಲ್ಲಾ ಪತ್ರ ಬರೆಯಿರಿ ಅಂದ್ರೆ, ನನಗೇನು ತಲೆ ಕೆಟ್ಟಿದಿಯೇ ನೀವು ಹೇಳಿದಿರೀಂತ ಬರೆಯೋಕೆ!! ಅಲ್ಲೇ ಹೇಳಿದೀನಿ, ನೀವು ಯಾರ್ಯಾರ ಹೆಸರನ್ನೋ ಹೇಳಿ ಅವರಿಗೆ ಪತ್ರ ಬರೆಯಿರಿ; ಇವರಿಗೆ ಪತ್ರ ಬರೆಯಿರಿ ಅಂದರೆ ಬರೆದುಕೊಂಡು ಕೂರೋಕ್ಕಾಗತ್ತಾ!!! ಹೇಳಬೇಕೆಂದುರೆ ಹಾಗಂತ ಹೇಳ್ತಾ ಇರೋರು ತಲೆಕೆಟ್ಟಿರಬೇಕು, ಅಷ್ಟೇ .ಆದರೂ ನಾನು ನಿಮಗೆ ತಲೆಕೆಟ್ಟಿರಬೇಕು ಅದಕ್ಕೆ ಹೀಗೆ ಹೇಳ್ತಿದ್ದೀರಿ ಅಂತ ಹೇಳ್ಳಿಲ್ಲವಲ್ಲಾ? ಈ ತರ ಪತ್ರಬರೆಯೋರಿಗೆ ಹೇಳಿಕೊಂಡನ್ನಪಾ!!! ತಪ್ಪೇನು??

            ಇವುಗಳಲ್ಲಿ derogatory language ಏನಿದೆ???

            ಉತ್ತರ
            • Mukhesha
              ನವೆಂ 9 2013

              ಅಡ್ಮಿನ್ ರಾಕೇಶ್ ಶೆಟ್ರಲ್ಲಿ ವಿನಂತಿ,
              ನಮ್ಮ ಕಮೆಂಟುಗಳಲ್ಲಿನ ಕೆಲವು ಪದಗಳನ್ನು ಪಟ್ಟಿಮಾಡಿ “ಇವು derogatory language” ಎಂದು ಒಬ್ಬರು ಹೇಳಿದ ತಕ್ಷಣ ಪರಾಮರ್ಶಿಸದೆ ತೆಗೆಯಬಾರದೆಂದು ವಿನಂತಿ. ಯಾರ ಕಮೆಂಟನ್ನು ಉದ್ದೇಶಿಸಿ ಪ್ರತಿಕ್ರಿಯಿಸಲಾಗಿದೆಯೋ ಆ ಪದಗಳು (ಹೇಳಬೇಕೆಂದರೆ ವಾಕ್ಯ) ಆ ಕಮೆಂಟಿನ ವಿಚಾರ ಮತ್ತು ವಾದಗಳಿಗೆ ಉತ್ತರಿಸಲು ಸೂಕ್ತವಾಗಿದೆಯೋ ಇಲ್ಲವೇ ಎಂದು ಪರಾಮರ್ಶಿಸಿ ನಂತರ ತಮ್ಮ ಕತ್ತರಿ ಪ್ರಯೋಗಿಸಿದರೆ ಒಳಿತೆಂದು ನನ್ನ ಭಾವನೆ.

              ಆದರೂ ತಮ್ಮ ವಿವೇಚನಾಧಿಕಾರವನ್ನು ನಾನು ಗೌರವಿಸುವೆ 🙂

              ಉತ್ತರ
  31. ವಿಜಯ್ ಪೈ
    ನವೆಂ 8 2013

    ಶೆಟ್ಕರ್ ಗುರುಗಳೆ..
    ಅಂದಹಾಗೆ ಮೊದಲು ನನಗೆ ಕೃಷ್ಣಪ್ಪನವರು ವಚನಗಳ ಮೇಲೆ ಬರೆದ ಎರಡು ಪುಸ್ತಕಗಳು ಯಾವವು ಎಂದು ಬೇಕಾಗಿದೆ. ನಾನು ಬರೆಯುವ ಮೊದಲು ಅವನ್ನು ಓದಬೇಕು..ಅವು ನನ್ನ ಸಂದೇಹ ತೊಡೆಯುತ್ತವೆಯೊ, ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತವೆಯೊ ನೋಡಬೇಕು. ಆದ್ದರಿಂದ ದಯವಿಟ್ಟು ಅವೆರಡು ಪುಸ್ತಕಗಳ ಮಾಹಿತಿ ಕೊಡಿ.

    ಉತ್ತರ
    • Nagshetty Shetkar
      ನವೆಂ 8 2013

      Mr. Vijay, sorry for the confusion. The books on Vachanas I was referring to are by Darga Sir.

      ಉತ್ತರ
      • Mukhesha
        ನವೆಂ 8 2013

        No Confusion, __ __ __ ಒಬ್ಬ ನಾಮ ಹಲವು!!!!!!!!!! ಸತ್ಯ ಮುಚ್ಚಿಡಕ್ಕಾಗತ್ತಾ!!!

        ಉತ್ತರ
      • ವಿಜಯ್ ಪೈ
        ನವೆಂ 8 2013

        ದಯವಿಟ್ಟು ಈಗ ಅದನ್ನೆಲ್ಲ ಕನಫ್ಯೂಜನ್ ಅನ್ನಬೇಡಿ ಗುರುಗಳೆ…ನೀವೇ ಬರೆದಿದ್ದು ಇಲ್ಲಿದೆ..ನನಗೆ ಅವೆರಡು ಪುಸ್ತಕಗಳನ್ನು ಖರೀದಿಸಿ ಓದಬೇಕಾಗಿದೆ.

        [ ಕಡಿ, ಬಡಿ, ಕೊಚ್ಚು, ಕೊಲ್ಲು ಎಂಬುದು ನಾಗರಿಕರ ಹೋರಾಟದ ವಿಧಾನ ಅಲ್ಲ, ಅದು ಅನಾಗರಿಕ ಕಾಡುಮನುಷ್ಯರ ಹಾದಿ.” ಸರ್, ಈ ವೈದಿಕ ವಟುಗಳಿಗೆ ನಾಗರಿಕತೆ ಎಂಬುದು ಗೊತ್ತಿದ್ದರೆ ತಾನೇ! ಪುಳಿಚಾರು ಅನ್ನ ತಿಂದೇ ಸಮಾಜದ ಶೋಷಣೆ ನಡೆಸುತ್ತಿದ್ದ ಇವರುಗಳು ಈಗ ವೇದಘೋಷಗಳಿಗೆ ಹೊಸ ಕಾಲದ ಜನ ಬಗ್ಗುವುದಿಲ್ಲ ಎಂದು ತಿಳಿದು ಕಡಿ, ಬಡಿ, ಕೊಚ್ಚು, ಕೊಲ್ಲು ತಂತ್ರಗಳನ್ನು ಬಳಸತೊಡಗಿದ್ದಾರೆ. ಇವರ ಮೆಂಟಲಿಟಿ ವೇದಕಾಲದಲ್ಲಿ ಎಷ್ಟು ಅನಾಗರಿಕವಾಗಿತ್ತೋ ಇಂದಿಗೂ ಅಷ್ಟೇ ಅಥವಾ ಇನ್ನೂ ಹೆಚ್ಚು ಅನಾಗರಿಕವಾಗಿದೆ. ಆದರೆ ಶೂದ್ರರು ದಲಿತರು ಈ ವೈದಿಕ ಗಿಂಡಿಮಾಣಿಗಳ ತಂತ್ರಗಾರಿಕೆಯನ್ನು ಟುಸ್ ಮಾಡುವತ್ತ ಸಂಘಟಿತರಾಗುತ್ತಿದ್ದಾರೆ. ವಚನಗಳ ಬಗ್ಗೆ ನೀವು ಬರೆದ ಪುಸ್ತಕ ಎರಡು ಮುದ್ರಣಗಳನ್ನು ಕಂಡು ಜನರನ್ನು ವೈದಿಕ ಪಿತೂರಿಯ ವಿರುದ್ಧ ಎಚ್ಚರಿಸುವಲ್ಲಿ ಸಫಲವಾಗಿದೆ.]

        https://nilume.net/2013/10/25/ಮೋದಿ-ಅಭಿಮಾನ-ಮತ್ತು-ಅಭಿಮಾನ/ ಲೇಖನದಲ್ಲಿ ಬರೆದಿದ್ದು.

        ಉತ್ತರ
        • ವಿಜಯ್ ಪೈ
          ನವೆಂ 8 2013

          ಗುರುಗಳೆ..
          ಅಕಸ್ಮಾತ ನಿಮಗೆ ಕೊಡಲು ಆಗದಿದ್ದರೆ..ಇವೆರಡಲ್ಲಿ ಒಂದನ್ನು ನೀವು ಒಪ್ಪಿಕೊಳ್ಳಬೇಕು..

          – ನನಗೆ ಬರೆಯುವಾಗ ಎಚ್ಚರವಿರುವುದಿಲ್ಲ. ನನ್ನ ತಲೆಗೆ ಬಂದಿದ್ದನ್ನು ನಾನು ಬರೆಯುತ್ತೇನೆ. ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ.
          ಅಥವಾ
          – ನಾನು ಪ್ರಾಮಾಣಿಕವಾಗಿಯೇ ಬರೆಯುತ್ತೇನೆ..ವಿಷಯ ಗೊತ್ತಿದ್ದೆ ಬರೆಯುತ್ತೇನೆ. ಈ ಕೃಷ್ಣಪ್ಪ ಅನ್ನುವವರು ಯಾರೂ ಇಲ್ಲ.

          ಸತ್ಯಸಂಧರು ಇಂತಹ ವಿಷಯಗಳಲ್ಲಿ ಕನ್ ಫ್ಯೂಜನ್ ಗೆ ಒಳಗಾಗುವುದಿಲ್ಲ..ಏಕೆಂದರೆ ಅವರು ಯಾವತ್ತೂ ಸತ್ಯವನ್ನೇ ಹೇಳುತ್ತಿರುತ್ತಾರೆ.

          ಉತ್ತರ
          • Nagshetty Shetkar
            ನವೆಂ 8 2013

            Mr. Vijay, why don’t you ask Krishnappa Sir who he is? How do I know who he is? Whoever he is, he seems to be a man of wisdom and his responses are a testimony. He is like Darga Sir to me.

            ಉತ್ತರ
            • ನವೆಂ 8 2013

              Mr.Shetkar,

              When somebody replies to Krishnappa’s comments, why do you try to defend him?
              And you have praised Krishnappa at so many places.
              Also, you get confused and start calling him “Darga”!!
              Now, you are telling you don’t know who is Krishnappa!!!!

              Ask your Darga Sir to come and read this discussion thread.
              He will get stomach ache by laughing at this joke 😉

              ಉತ್ತರ
              • Nagshetty Shetkar
                ನವೆಂ 8 2013

                Mr. Kumar, “Ask your Darga Sir to come and read this discussion thread.” How do you know he hasn’t seen this discussion already? Do you have divyachakshu??

                ಉತ್ತರ
                • ನವೆಂ 8 2013

                  > How do you know he hasn’t seen this discussion already?
                  > Do you have divyachakshu??
                  I will believe what I see and what I get convinced with.
                  I haven’t seen any comment from Darga Sir in this discussion.
                  I didn’t even know the name of Darga! You kept on repeating (like a ಜಪ) his name and also used to get confused with Krishnappa and Darga.

                  Looks like you know Darga sir very well and also you have lot of respect for him.
                  So, you can ask him to read the discussion thread and share his thoughts also (by adding his comments).

                  ಉತ್ತರ
            • ವಿಜಯ್ ಪೈ
              ನವೆಂ 8 2013

              ಅಂದರೆ ನಾಳೆ ಯಾರನ್ನು ಬೇಕಾದ್ರೂ ನಿಮ್ಮ ದರ್ಗಾ ಸರ್ ಇರಬೇಕು ಅಂತ ಮಾತನಾಡಲು ಸುರು ಮಾಡುತ್ತೀರಿ ಅಂತಾಯಿತು!..ಅಥವಾ ನಿಮ್ಮ ಜಗತ್ತಿನ ಉದ್ದ-ಆಳ-ಅಗಲ ಇಷ್ಟೇನಾ? ದಯವಿಟ್ಟು ಈ ಕತೆಗಳೆಲ್ಲ ಬೇಡ ಗುರುಗಳೆ..ಇಲ್ಲಿ ಉಳಿದವರೆಲ್ಲ ಫೇಕ್ ಐಡಿಗಳು ನೀವು ಮಾತ್ರ ಸತ್ಯಸಂಧರು ಅನ್ನುವ ನಿಮ್ಮಗಳ ಐಡೆಂಟಿಟಿ ನನಗೆ ಬೇಕು. ನನಗೆ ಮೊದಲು ಕೃಷ್ಣಪ್ಪ, ಅವರ ಪುಸ್ತಕಗಳ ಮಾಹಿತಿ ಬೇಕು..ಏಕೆಂದರೆ ನಾನು ಲೇಖನ ಬರೆಯುವುದು ಅವರನ್ನು ಉದ್ದೇಶಿಸಿ..ಈ ಚರ್ಚೆಯಲ್ಲಿ ಇದ್ದವರನ್ನು ಉದ್ದೇಶಿಸಿಯೇ ನಾನು ನನ್ನ ಪ್ರಶ್ನೆಗಳ ಲೇಖನ ಬರೆಯುವುದು.

              ಉತ್ತರ
              • Nagshetty Shetkar
                ನವೆಂ 8 2013

                Mr. Vijay, I know you lack guts to ask questions to Darga Sir in open letter format. That’s why are making an issue of Krishnappa Sir’s identity. If you don’t write to Darga Sir, it is your loss and not Krishnappa Sir’s loss.

                ಉತ್ತರ
                • ವಿಜಯ್ ಪೈ
                  ನವೆಂ 8 2013

                  [Mr. Vijay, I know you lack guts to ask questions to Darga Sir in open letter format.]
                  ಗುರುಗಳೆ..ನಿಮ್ಮ ಈ ಮಾತು ಹಾಸ್ಯಾಸ್ಪದ ಅನಿಸೊಲ್ಲವೆ ನಿಮಗೆ? ಈ ಚರ್ಚೆಯಲ್ಲಿ ಕೃಷ್ಣಪ್ಪ ಪ್ರಸ್ತುತವೊ ಅಥವಾ ಇಲ್ಲಿ ಈ ಚರ್ಚೆಯಲ್ಲಿ ಇರದ ನಿಮ್ಮ ದರ್ಗಾ ಸರೊ?.ನನಗೆ ನಿಮ್ಮ ದರ್ಗಾ ಸರ್ ಗಿಂತ ಕೃಷ್ಣಪ್ಪನವರೆ ತಿಳಿದವರು,ತಿಳುವಳಿಕೆಯುಳ್ಳವರು ಅನಿಸುತ್ತಾರೆ..ಆದ್ದರಿಂದ ನಾನು ಅವರ ಜೊತೆ ಸಂವಾದ ಮಾಡಬೇಕು..ಅವರ ಪುಸ್ತಕ ಓದಬೇಕು.

                  [That’s why are making an issue of Krishnappa Sir’s identity.]
                  ಅಂದಮೇಲೆ ನೀವ್ಯಾಕೆ ಪೇಕ್ ಐಡಿ, ಅದು-ಇದು ಅಂತ ಕುಣಿದಾಡುತ್ತಿದ್ದಿರಿ ಎಂದು ಕೇಳಬಹುದೆ? ಮೊದಲು ನೀವು ಸ್ವಚ್ಛವಾಗಿ ಆಮೇಲೆ ಇನ್ನೊಬ್ಬರನ್ನು ಸ್ವಚ್ಛ ಮಾಡಲು ಹೊರಡಿ. ನಿಮಗೊಂದು ರೂಲ್ಸು..ನಮಗೊಂದು ರೂಲ್ಸಾ?

                  [If you don’t write to Darga Sir, it is your loss and not Krishnappa Sir’s loss.]
                  ಸ್ವಾಮಿ..ನಮಗೆ loss ಆಗೋದು ಬಿಡಿ. ಮೊದಲು ಅವರು ನಿಮ್ಮನ್ನು ತಿದ್ದಿದರೆ ಸಾಕು!..loss ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ.

                  ಈಗಲಾದರೂ ಇವೆರಡರಲ್ಲಿ ಒಂದನ್ನು ಒಪ್ಪಿಕೊಂಡು ನೀವು ಸತ್ಯಸಂಧ ಶರಣರೆನ್ನುವುದನ್ನು ಪ್ರೂವ್ ಮಾಡಿ..

                  – ನನಗೆ ಬರೆಯುವಾಗ ಎಚ್ಚರವಿರುವುದಿಲ್ಲ. ನನ್ನ ತಲೆಗೆ ಬಂದಿದ್ದನ್ನು ನಾನು ಬರೆಯುತ್ತೇನೆ. ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ.

                  ಅಥವಾ

                  – ನಾನು ಪ್ರಾಮಾಣಿಕವಾಗಿಯೇ ಬರೆಯುತ್ತೇನೆ..ವಿಷಯ ಗೊತ್ತಿದ್ದೆ ಬರೆಯುತ್ತೇನೆ. ಈ ಕೃಷ್ಣಪ್ಪ ಅನ್ನುವವರು ಯಾರೂ ಇಲ್ಲ.

                  ಉತ್ತರ
                  • Nagshetty Shetkar
                    ನವೆಂ 8 2013

                    Mr. Vijay, I am a humble Sharana following the path of Vachanakaras. I will not get provoked by your derogatory comments. If you have guts, write an open letter to Darga Sir and progressive thinkers on the Vachana debate and related topics. No more debating in comment threads.

                    ಉತ್ತರ
                    • ವಿಜಯ್ ಪೈ
                      ನವೆಂ 8 2013

                      [Mr. Vijay, I am a humble Sharana following the path of Vachanakaras. I will not get provoked by your derogatory comments.] ಅನ್ನುವವರು..ಮೇಲೊಂದು ಕಡೆ ಹೀಗೆ ಹೇಳಿದ್ದೀರಿ
                      [I scold you because you deserve it. I scold you because I have good intentions and want to correct your behavior and thinking. You guys are stupid. ]
                      ನಿಮ್ಮ ಮಾತುಗಳನ್ನು ನಂಬಬೇಕೆ? ಅಥವಾ ಇದು ಕೂಡ ಕೃಷ್ಣಪ್ಪ-ದರ್ಗಾ-ಪುಸ್ತಕ ಬರೆದಿದ್ದು ತರಹದ ಕನ್ ಫ್ಯೂಜನ್ನಾ?. humble Sharana ರು ಸತ್ಯ ಹೇಳಬಾರದೆ ಗುರುಗಳೆ?

                      ಇದ್ದಿದ್ದನ್ನು ಇದ್ದ ಹಾಗೆ ಹೇಳಿ..ಪ್ರಶ್ನೆ ಕೇಳಿದ್ರೂ derogatory comments ಅಂತೀರಿ..provoke ಮಾಡಲಿಕ್ಕೆ ನೋಡುತ್ತಿದ್ದೇನೆ ಅಂತೀರಿ!…ಕೇಳಿದ್ದಕ್ಕೆ ಉತ್ತರಿಸೊಲ್ಲ..ತಿರುಗಿ If you have guts ಅಂತ ಅಸಂಬಧ್ಧವಾಗಿ ಕೇಳೋದನ್ನ ನಿಲ್ಲಿಸೊಲ್ಲ!…ನಿಮ್ಮ ಪ್ರಕಾರ ಹೇಗೆ ಮಾತನಾಡಬೇಕು ಹೇಳಿ?

                      [write an open letter to Darga Sir and progressive thinkers on the Vachana debate and related topics.]
                      ಇಲ್ಲೇನು ವಚನದ ಡಿಬೇಟ್ ಮಾಡುತ್ತಾ ಇದ್ದೇವೆಯೆ ನಾವು? ಅದರ ಬಗ್ಗೆ ಒಪನ್ ಲೆಟರ್ ಬರೆಯಲಿಕ್ಕೆ? ನಮಗೆ ಉತ್ತರ ಬೇಕಾಗಿದ್ದು ನೀವು ಇಲ್ಲಿ ಉತ್ತರಿಸಲಾಗದೆ ಓಡಿಹೋದ ಪ್ರಶ್ನೆಗಳ ಬಗ್ಗೆ!. ಅದಕ್ಕಾಗಿ ಕರ್ನಾಟಕದ ‘progressive thinkers’ ಎಂದು ಕರೆಸಿಕೊಳ್ಳುವವರಿಗೆ ಪತ್ರ ಬರೆಯಬೇಕೆ?.

                      ಉಳಿದವರ ಐಡೆಂಟಿಟಿ ಬಗ್ಗೆ ಸತ್ಯಸಂಧರಂತೆ ಮಾತಾನಾಡುತ್ತಿದ್ದ ನಿಮಗೆ, ನಿಮ್ಮ ಬುಡಕ್ಕೆ ಬಂದಾಗ ಜ್ಞಾನೋದಯವಾಯಿತೆ? ಈಗ ಕೃಷ್ಣಪ್ಪ ಯಾರು ಅಂತ ನನಗೆ ಗೊತ್ತಿಲ್ಲ..ಅವರು ಬುಕ್ ಬರೆದಿದ್ದಲ್ಲ ನನಗೆ ಗೊಂದಲ ಆಯ್ತು ಅನ್ನುವ ನಾಟಕ ಮತ್ತು ನಾವು ಮಾತನಾಡಿದ್ದೆಲ್ಲ ಅವಹೇಳನ!.
                      ಗುರುಗಳೆ..ನಿಮ್ಮ ಹಳಿಯಿಲ್ಲದ ರೈಲು ಇಲ್ಲಿ ಓಡೋಲ್ಲ.ಅಷ್ಟು ನೆನಪಿದ್ದರೆ ಸಾಕು.

                      ಇವತ್ತಿನ ನ್ಯೂಸ್ ಕೇಳಿದ್ರಾ? ಈ ಸ್ವಘೋಶಿತ progressive thinkers’ ಬಗ್ಗೆ ಇವತ್ತು ಕುಮಾರಸ್ವಾಮಿ ಸಕತ್ತಾಗಿಯೇ ಹೇಳಿದ್ದಾರೆ..

                      ‘ಯಾರೋ ನಾಲ್ಕು ಬುದ್ಧಿಜೀವಿಗಳನ್ನು ಕಟ್ಟಿಕೊಂಡು ಸರ್ಕಾರ ಜನರ ನಂಬಿಕೆಗಳನ್ನು ಹಾಳು ಮಾಡಲು ಹೊರಟಿದೆ. ಸಮಾಜದ ಸ್ವಾಸ್ಥ್ಯ ಕೆಡಿಸಲು ಮುಂದಾಗಿದ್ದಾರೆ. ಬುದ್ಧಿಜೀವಿಗಳು ಅಥವಾ ವಿಚಾರವಾದಿಗಳನ್ನು ಕಟ್ಟಿಕೊಂಡು ಸರ್ಕಾರ ನಡೆಸುವುದಕ್ಕೆ ಸಾಧ್ಯವಿಲ್ಲ. ಈ ಬುದ್ಧಿಜೀವಿಗಳು ಎನಿಸಿಕೊಂಡವರ ಕತೆ ಏನೆಂದು ಎಲ್ಲರಿಗೂ ಗೊತ್ತಿದೆ. ಇವರೆಲ್ಲ ಯಾರು ಯಾರ ಅಧಿಕಾರಾವಧಿಯಲ್ಲಿ ಯಾರಿಗೆಲ್ಲಾ ಬಕೆಟ್ ಹಿಡಿದಿದ್ದಾರೆ, ಯಾರನ್ನೆಲ್ಲಾ ಹೊಗಳುತ್ತಾರೆ ಎಂಬುದು ಗೊತ್ತು. ಇಂಥವರನ್ನು ಕಟ್ಟಿಕೊಂಡು ಜನರ ನಂಬಿಕೆ ಹಾಳು ಮಾಡುವ ಬದಲು ಬಡವರ ಕಲ್ಯಾಣ ಕಾರ್ಯಕ್ರಮಗಳ ಕಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನ ನೀಡಲಿ. – ಎಚ್. ಡಿ ಕುಮಾರಸ್ವಾಮಿ

          • ವಿಜಯ್ ಪೈ
            ನವೆಂ 8 2013

            ಇದೆಲ್ಲ ನಾನು ಓದಿದ ಕತೆಯೇ..ಈಗ ವಿಷಯಾಂತರ ಬೇಡ..ನಾನು ನಿಮಗೀಗ ಪ್ರಶ್ನೆ ಮಾಡುತ್ತಿರುವುದು ವೈದಿಕಶಾಹಿಯ ಬಗ್ಗೆ ಅಲ್ಲ..ಆ ಪ್ರತಿಕ್ರಿಯೆಯನ್ನು ಇಡಿಯಾಗಿ ತಂದಿಟ್ಟಿದ್ದು..ನೀವು ಯಾವ ಪ್ರತಿಕ್ರಿಯೆಯಲ್ಲಿ ಕೃಷ್ಣಪ್ಪನವರ ಪುಸ್ತಕಗಳ ಬಗ್ಗೆ ಮಾತನಾಡಿದ್ದು ಎಂಬುದನ್ನು ತೋರಿಸುವುದಕ್ಕೆ.

            ಉತ್ತರ
  32. ನವೆಂ 8 2013

    > I know you lack guts to ask questions to Darga Sir in open letter format.
    > I had asked you earlier to write an open letter to Darga Sir in Nilume
    > and ask all your tough questions. But you didn’t have guts to do that.

    I am getting one doubt!
    Why do we need “guts” to talk to Darga Sir?
    I know that, to talk to Dawood Ibrahim we need guts. To talk to naxalites we need to have gots.

    So, are you suggesting that, Darga sir is some goonda or a naxalite or a terrorist!?
    I am getting doubts, after reading your comments about “guts to talk to Darga sir”!!

    ಉತ್ತರ
    • Nagshetty Shetkar
      ನವೆಂ 8 2013

      Sorry, no more debating in comment threads. Write an open letter to Darga Sir and progressive thinkers if you have guts.

      ಉತ್ತರ
  33. Nagshetty Shetkar
    ನವೆಂ 8 2013

    olle talehidukara kaata aaytalla! Sir maatanna keli avatte silent aagidre ee kashta nanage bartittaa?

    ಉತ್ತರ
    • ವಿಜಯ್ ಪೈ
      ನವೆಂ 8 2013

      [olle talehidukara kaata aaytalla!]
      ಪಾಪ..ಸ್ವಂತಬುದ್ಧಿಯಿಲ್ಲದ ಈ ಭಟ್ಟಂಗಿ ಮಹಾರಾಜರಿಗೆ ಉಳಿದವರು ತಮ್ಮಂತೆ ಬಕೆಟ್ ಹಿಡಿಯುವ ಕೆಲಸ ಮಾಡುತ್ತಾರೆಂಬ ಭ್ರಮೆ! ಇವರು ಶೀಘ್ರ ಗುಣಮುಖರಾಗಿ ಸ್ವಂತ ಕಾಲುಗಳ ಮೇಲೆ ನಡೆಯುವಂತಾಗಲಿ ಎಂಬ ಹಾರೈಕೆ!

      [Sir maatanna keli avatte silent aagidre ee kashta nanage bartittaa?]
      ಉತ್ತರಿಸಲಾಗದ ಗುರು ತನ್ನನ್ನು ಹೀಗೆ ನಡು ನೀರಲ್ಲಿ ಬಿಟ್ಟು ಹೋಗಬಹುದು ಎನ್ನುವ ಕಲ್ಪನೆ ಇರಲಿಲ್ಲವೇನೊ ಶಿಷ್ಯಮಹೋದಯಂಗೆ!..ಇನ್ನೆಲ್ಲಾದ್ರೂ ಚರ್ಚೆಯಲ್ಲಿ ನಿಮ್ಮ ಗುರುಗಳು ‘ಓಡಿ’ ಅಂದಾಗ ಹಿಂದೆ ಮುಂದೆ ನೋಡದೇ ಓಡಿಹೋಗಿ…ಇಲ್ಲವಾದರೆ ಹೀಗೇಯೇ ಸಿಕ್ಕಿಬಿದ್ದು ಗೋಳಾಡಬೇಕಾಗುತ್ತದೆ..

      (ಮತ್ತೆ ಅವಹೇಳನ ಅಂತ ಅಳಬೇಡಿ..ನೀವು ಬಿತ್ತಿದ್ದೆ ನಿಮಗೆ ಬೆಳೆಯಾಗಿ ಸಿಗ್ತಾ ಇದೆ.)

      ಉತ್ತರ
      • Nagshetty Shetkar
        ನವೆಂ 8 2013

        Mr. Vijay, your questions are silly. Who said there are 14 different meanings to Jangamadrohi? Yes, I said there are 14 different meanings to Jangama. But Jangamadrohi means anti-social element. Lingadrohi is one who denies equality and self-dignity to others. I have answers for all your questions. But do you have humility to listen to them? All you want to do is to ridicule me. Do I need to demonstrate to you that my IQ is over 150 by taking a test administered by you?

        ಉತ್ತರ
        • ವಿಜಯ್ ಪೈ
          ನವೆಂ 9 2013

          [Mr. Vijay, your questions are silly.]
          ಹಾಗಿದ್ರೂ ಉತ್ತರ ಕೊಡಲು ಏಕೆ ಇಷ್ಟು ಸಮಯ ತೆಗೆದುಕೊಂಡಿರೊ..

          [Who said there are 14 different meanings to Jangamadrohi? Yes, I said there are 14 different meanings to Jangama. But Jangamadrohi means anti-social element.]
          ಜಂಗಮ ಅನ್ನುವುದಕ್ಕೆ ಹದಿನಾಲ್ಕು ಅರ್ಥಗಳು ಇದ್ದರೆ..ಆ ಹದಿನಾಲ್ಕು ತರಹದ ಯಾವುದಕ್ಕೂ ದ್ರೋಹ ಬಗೆದರೂ ಅದು ಜಂಗಮದ್ರೋಹವೇ ಆಗುತ್ತದೆ ಎಂಬುದು ನನ್ನ ತಿಳುವಳಿಕೆ. ನಿಮಗೆ ಬೇಕಾಗಿದ್ದಷ್ಟನ್ನೆ ಆರಿಸಿಕೊಂಡು ಉಳಿದದ್ದನ್ನು ಬಿಡಲು ಆಗುವುದಿಲ್ಲ. ಆದ್ದರಿಂದ ಉಳಿದ ಹದಿಮೂರು ಅರ್ಥಗಳು ಯಾವವು? ಹಾಗೇಯೇ ನೀವು ಕೊಟ್ಟ ಅರ್ಥಗಳ ಪ್ರಕಾರ ಹೋದರೆ..ಈ ಎರಡು ಆಚಾರಗಳ ೪೩. ಲಿಂಗದ್ರೋಹ ಕೇಳಿ ಪ್ರಾಣಬಿಡುವುದು. ೪೪. ಜಂಗಮದ್ರೋಹ ಕೇಳಿ ಐಕ್ಯನಾಗುವುದು. ಗಳ ಅರ್ಥ ಏನಾಗುತ್ತದೆ ಎಂದೂ ಕೂಡ ವಿಚಾರ ಮಾಡಿ.

          [Lingadrohi is one who denies equality and self-dignity to others.]
          ಹೌದೆ ಗುರುಗಳೆ? ಲಿಂಗ ಅನ್ನುವುದು ಲಿಂಗಾಯತ ಧರ್ಮದಲ್ಲಿ ಯಾವ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿದೆ ಎಂಬುದನ್ನು ನೀವು ಲಿಂಗಾಯತಧರ್ಮದ ಬಗ್ಗೆ ಹೆಚ್ಚಿನ ತಿಳುವಳಿಕೆ ಕೊಡಲು, ನಿಮ್ಮವರೇ ಮಾಡಿದ ಈ ಸೈಟ್ ನಲ್ಲಿ ನೋಡಬಹುದು.
          http://www.lingayatreligion.com/LingayatTerms/Linga.htm
          ಆಮೇಲೆ..ನೀವು ಹೇಳಿದ ‘ಲಿಂಗದ್ರೋಹಿ’ ಯ ಉತ್ತರ ಅದಕ್ಕೆ ತಾಳೆಯಾಗುತ್ತದೆಯೊ ನೋಡಿ.

          ಈ ಕೆಳಗಿನದ್ದು ನಿಮ್ಮ ಗುರುಗಳಾದ ರಂಜಾನ ದರ್ಗಾರವರು ಬರೆದದ್ದು..
          [ಈ ಆಚಾರಗಳಲ್ಲಿ ಬರುವ ಸೀಳುವುದು, ಪ್ರಾಣಬಿಡುವುದು, ಪ್ರಾಣವ ಭೇದಿಸುವುದು, ಐಕ್ಯನಾಗುವುದು, ಶಿರವನೀಡಾಡುವುದು ಮುಂತಾದ ಆಚಾರಗಳನ್ನು ಶಾಬ್ದಿಕವಾಗಿ ಅರ್ಥೈಸದೆ ಅವುಗಳ ಲಕ್ಷಣಾರ್ಥವನ್ನು ಗ್ರಹಿಸಬೇಕು. ಹೊಸಧರ್ಮ ಅಥವಾ ಜೀವನವಿಧಾನವೊಂದು ರೂಪುಗೊಳ್ಳುವ ಸಂದರ್ಭದಲ್ಲಿ ಅದರ ಅನುಯಾಯಿಗಳು ಅಲ್ಪಸಂಖ್ಯಾತರಾಗಿರುತ್ತಾರೆ. ಬಹುಸಂಖ್ಯಾತರ ದಬ್ಬಾಳಿಕೆಯನ್ನು ಎದುರಿಸುವ ಮಾನಸಿಕ ಸ್ಥಿತಿಯನ್ನು ಹೊಂದುವ ಸಂದರ್ಭದಲ್ಲಿ ಸ್ವರಕ್ಷಣೆಗಾಗಿ ಇಂಥ ಶಬ್ದಗಳ ಬಳಕೆಯಾಗುತ್ತವೆ.]

          ಮತ್ತು ನೀವು ಬರೆದ..ಜಂಗಮದ್ರೋಹಿಯ ವಿವರಣೆ ಇಲ್ಲಿದೆ

          [Capital punishment for deserving criminals for proven crime is not jeevavirodhi. One meaning of jangama is society (there are 14 meanings for jangama) and jangamadrohee means one who has committed droha to the society (E.g. Perpetuator of Godhra massacre).]

          ಒಂದಕ್ಕೊಂದು ತಾಳೆ ಇದೆಯೆ ಗುರುಗಳೆ?

          [ I have answers for all your questions. But do you have humility to listen to them? All you want to do is to ridicule me.]
          ಗುರುಗಳೆ..ನೀವು ಉಲ್ಟಾ-ಪಲ್ಟಾ , ಅಸಂಬದ್ಧ ಮಾತನಾಡಿದಾಗ ಮಾತ್ರ ನಾನು ವ್ಯಂಗ್ಯ ಮಾಡಿದ್ದೇನೆ. ನೀವು ಸರಿಯಾದದದ್ದನ್ನು ಬರೆಯಿರಿ (without any agenda..without bias)..ಆಗ ನಿಮ್ಮನ್ನು ನಾನು ಗೌರವಿಸುತ್ತೇನೆ..ಸಿಂಪಲ್.

          [Do I need to demonstrate to you that my IQ is over 150 by taking a test administered by you?]
          ಜಗತ್ತಿನಲ್ಲಿ ಬದುಕಲು, ನಮ್ಮದೇ ಛಾಪನ್ನು ಬಿಟ್ಟು ಹೋಗಲು ಹೆಚ್ಚಿನ IQ ಬೇಕಾಗಿಲ್ಲ .. ಕಾಮನ್ ಸೆನ್ಸ್ ಬೇಕು..ನಮ್ಮತನ ಬೇಕು ಎನ್ನುವುದು ನನ್ನ ಅಭಿಪ್ರಾಯ. ನಾನು ನಿಮ್ಮನ್ನು ಅಳೆಯುತ್ತಿರುವುದು ಇಲ್ಲಿಯ ನಿಮ್ಮ ಚರ್ಚೆ, ವಿಷಯ ಮಂಡನೆಯ ಧಾಟಿ ನೋಡಿ. ನಿಮ್ಮ ಪ್ರತಿಕ್ರಿಯೆ ಓದಿದ ಯಾರಿಗೇ ಆದರೂ ಹೀಗೇಯೇ ಅನಿಸಿರುತ್ತದೆ.

          ಉತ್ತರ
          • Nagshetty Shetkar
            ನವೆಂ 9 2013

            Mr. Vijay, this is not an exam on lingayata practices. If you really want to understand them, Nilume is not the forum for learning. Why don’t you write to Darga sir?

            You still haven’t answered my original questions. If there was no practice of punishing shoodras, how did the idea of putting molten lead into their ears come to circulation among Brahmins? Do you deny that the very idea is jeevavirodhi?

            Some of you have tried to argue that Vedas were not denied to shoodras and dalits citing the examples of some rushis. If that is the case then why did Ramanuja went against the norm to shout the mantras from the top so that they could be heard by shoodras and dalits?

            ಉತ್ತರ
            • ವಿಜಯ್ ಪೈ
              ನವೆಂ 9 2013

              [Mr. Vijay, this is not an exam on lingayata practices. If you really want to understand them, Nilume is not the forum for learning. Why don’t you write to Darga sir?]
              ಇಷ್ಟು ವರ್ಷ ಅವರ ಹತ್ತಿರ ಇದ್ದ, ಶಿಷ್ಯ ಎಂದು ಕರೆಸಿಕೊಳ್ಳುತ್ತಿರುವ ನಿಮಗೆ ಅರ್ಥವಾಗಿಲ್ಲ ಎಂದ ಮೇಲೆ, ತದ್ವಿರುದ್ಧ ವಿವರಣೆ ಕೊಡುವಂತೆ ಮಾಡಿದೆ ಎಂದ ಮೇಲೆ.. ನನಗೆ ಅರ್ಥವಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದೆ ಗುರುಗಳೆ?. ( BTW ನಾನೀಗಾಗಲೇ ಅವಧಿಯಲ್ಲಿ ಈ ಪ್ರಶ್ನೆ ಕೇಳಿದ್ದೇನೆ..ನಿರೀಕ್ಷಿತ ಟಿಪಿಕಲ್ ಉತ್ತರ ಸಿಕ್ಕಿದೆ!)

              [this is not an exam on lingayata practices.]
              ಹಾಗೇಯೇ ಅಸತ್ಯಗಳ ಬುರುಡೆ ಬಿಡುವ ತಾಣ ಕೂಡ ಇದಲ್ಲ ಅಂದಕೊಳ್ಳುತ್ಥೇನೆ.

              [You still haven’t answered my original questions. If there was no practice of punishing shoodras, how did the idea of putting molten lead into their ears come to circulation among Brahmins? Do you deny that the very idea is jeevavirodhi?]
              ಇದೇ ಪ್ರಶ್ನೆ ನಿಮಗೂ ಅನ್ವಯಿಸುತ್ತೆ..ಪ್ರಾಣವ ಭೇದಿಸುವುದು, ಶಿರವನೀಡಾಡುವುದು ಆಚರಣೆಯಲ್ಲಿ ಇರಲಿಲ್ಲ ಎಂದರೆ ಅವು ಐವತ್ತು ಆಚಾರಗಳಲ್ಲಿ ಏಕೆ ಬಂದವು ಎಂದು?. ಅವು ಜೀವವಿರೋಧಿಯಲ್ಲವೆ? ಪ್ರಶ್ನಿಸಿಕೊಳ್ಳಿ..ಅದಕ್ಕೆ ಸಿಕ್ಕ ಉತ್ತರವೇ ಕಾದಸೀಸ ಸುರಿಯುವುದಕ್ಕೂ ಲಾಗೂ ಆಗುತ್ತದೆ. ಒಂದು ವೇಳೆ ಅದು ಸತ್ಯವೇ ಆಗಿದ್ದಿದ್ದಲ್ಲಿ ನೀವು ಉದಾಹರಣೆ ಗಳನ್ನು ಕೊಡಬೇಕು.

              [Some of you have tried to argue that Vedas were not denied to shoodras and dalits citing the examples of some rushis.]
              ನೀವೇ ಹೇಳಿ..ಈ ಋಷಿಗಳೇನು ಕದ್ದು ಕಲಿತರೆ? ಕದ್ದು ಕಲಿತ ಮೇಲೂ ಲೋಕಕ್ಕೆ ತಿಳಿಯದ ಹಾಗೆ ಮುಚ್ಚಿಟ್ಟುಕೊಂಡರೆ? ಇವರ ಕಿವಿಯಲ್ಲಿ ಸೀಸ ಏಕೆ ಸುರಿಯಲಿಲ್ಲ? ಇವರನ್ಯಾಕೆ ಸಮಕಾಲೀನ ಸಮಾಜ ಗೌರವಿಸಿತು? ಪೂಜನೀಯವಾಗಿಸಿತು?

              [If that is the case then why did Ramanuja went against the norm to shout the mantras from the top so that they could be heard by shoodras and dalits?]
              ಹಿಂಧೂ ಧರ್ಮ ಸಾವಿರಾರು ಋಷಿಗಳನ್ನು, ಸಂತರನ್ನು, ಸಿದ್ದಾಂತ ಹುಟ್ಟುಹಾಕಿದವರನ್ನು ಕಂಡಿದೆ.ರಾಮಾನುಜಾಚಾರ್ಯರು ಅವರಲ್ಲಿ ಒಬ್ಬರು ಅಷ್ಟೆ. ರಾಮಾನುಜರ ಕಾಲದ ಸಾಮಾಜಿಕ ಪರಿಸ್ಥಿತಿ ಏನಿತ್ತು, ಯಾವ ಅರ್ಥದಲ್ಲಿ, ಸಂದರ್ಭದಲ್ಲಿ ಹೇಳಿರಬೇಕು ಎಂಬುದು ನಮಗೆ ಗೊತ್ತೆ? ನಿಮಗೆ ಗೊತ್ತಿದ್ದರೆ ಫೂರ್ಣ ಉದಾಹರಣೆ, ಉಲ್ಲೇಖ ಕೊಟ್ಟು ಅಪಾದಿಸಿದರೆ ಅದಕ್ಕೊಂದು ಅರ್ಥ ಇರುತ್ತದೆ ಗುರುಗಳೆ..

              ಉತ್ತರ
              • Nagshetty Shetkar
                ನವೆಂ 9 2013

                Same old raga. No one will throw a paise at you if you keep singing this raga Mr. Vijay.

                ಉತ್ತರ
                • ವಿಜಯ್ ಪೈ
                  ನವೆಂ 9 2013

                  ಉತ್ತರ ಇದ್ರೆ ಕುಣಿದಾಡುತ್ತಿದ್ದಿರಿ..ತಮ್ಮ ವಾದ ಜೊಳ್ಳು ಅಂತ ಗೊತ್ತಾಗಿದೆ..ಕೊಡಲು ಉತ್ತರ ಇಲ್ಲ..ಅದಕ್ಕೆ ಬಾಲ ಒಳಗೆ!..ಇರಲಿ ಗುರುಗಳೆ..ತಮ್ಮ ಕಷ್ಟ ನನಗೆ ಅರ್ಥ ಆಗುತ್ತದೆ.

                  ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments