ವಿಷಯದ ವಿವರಗಳಿಗೆ ದಾಟಿರಿ

Archive for

20
ಮೇ

ವಸಾಹತುಶಾಹಿಯ ರಮ್ಯ ಕಥಾನಕ – ಭಾಗ ೧

– ಡಾ.ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ಡಾ.ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ವಸಾಹತುಶಾಹಿಆಫ್ರಿಕ ಜಾನಪದ ಕುರಿತ ವಿಶ್ವಕೋಶವನ್ನು ಸಿದ್ಧಪಡಿಸುವ ಕೆಲಸದಲ್ಲಿರುವಾಗ ಅಲ್ಲಿನ ಮೂಲನಿವಾಸಿಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಕಲೆಹಾಕಬೇಕಾಗಿ ಬಂತು.ಮಾಕೊಂಡೆ, ಲುಂಗ, ಲುಂಡ, ಲುವಾಲೆ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಮೂಲನಿವಾಸಿಗಳನ್ನು ಕುರಿತ ಇತಿಹಾಸ, ಮಾಹಿತಿ ಕಲೆಹಾಕಿದಾಗ ಅಚ್ಚರಿ ಎನಿಸುವ ಸಂಗತಿಗಳು ಒಂದೊಂದಾಗಿ ಹೊರಬೀಳತೊಡಗಿದವು. ಆ ಹಿನ್ನೆಲೆಯಲ್ಲಿ ಈ ಲೇಖನ.

ಕ್ರಿಶ್ಚಿಯಾನಿಟಿಯ ಬಿಬ್ಲಿಕಲ್ ಥಿಯಾಲಜಿ ಹಿನ್ನೆಲೆಯ ಯೂರೋಪಿನ ಎಂಪಿರಿಕಲ್ ಇತಿಹಾಸವೇ ಇಡೀ ವಿಶ್ವದ ಮನುಕುಲದ ಇತಿಹಾಸ ಹೇಗಾಗಿದೆ ಎಂಬುದನ್ನು ಪ್ರೊ.ಬಾಲಗಂಗಾಧರ (ಬಾಲು) ಅವರು ಎಳ್ಳಷ್ಟೂ ಶಂಕೆ ಇಲ್ಲದಂತೆ ಸಾಧಾರವಾಗಿ ತಮ್ಮ ಕೃತಿಗಳಲ್ಲಿ ಅದರಲ್ಲೂ “ದಿ ಹೀದನ್ ಇನ್ ಹಿಸ್ ಬ್ಲೈಂಡ್‍ನೆಸ್ (1994)” ಹಾಗೂ “ಡು ಆಲ್ ರೋಡ್ ಲೀಡ್ ಟು ಜೆರುಸಲೇಂ? ದಿ ಮೇಕಿಂಗ್ ಆಫ್ ಇಂಡಿಯನ್ ರಿಲಿಜನ್ಸ್ (2014)” ಸಂಶೋಧನ ಗ್ರಂಥಗಳಲ್ಲಿ ದಾಖಲಿಸಿದ್ದಾರೆ.ಸ್ಥಾಪಿತ ವಾದಗಳಲ್ಲೇ ಸ್ವಂತಿಕೆ ಕಂಡುಕೊಂಡ ಶೈಕ್ಷಣಿಕ ಹಾಗೂ ವಿದ್ವತ್ ವಲಯದ ಜನರಿಗೆ ಬಾಲು ಅವರ ಚಿಂತನೆಯಿಂದ ಕಿರಿಕಿರಿ ಆಗಬಹುದು, ಆಗುತ್ತಿದೆ. ಇದರ ಫಲವಾಗಿಯೇ ಅವರೆಲ್ಲ ಬಾಲು ಅವರ ಕೃತಿಯನ್ನು ಓದದೇ ಅವರೊಬ್ಬ ಪುರೋಗಾಮಿ, ಪ್ರತಿಗಾಮಿ ಇತ್ಯಾದಿ ಇತ್ಯಾದಿ ಹಣೆಪಟ್ಟಿ ಹಚ್ಚುವ ಕೆಲಸ ನಡೆಸಿದ್ದಾರೆ. ಜಾನಪದದ ವಿದ್ಯಾರ್ಥಿಯಾಗಿ, ಕ್ಷೇತ್ರಕಾರ್ಯಕರ್ತನಾಗಿ ಕೆಲಸಮಾಡುತ್ತಿರುವ ನನಗೆ ನಮ್ಮ ಸುತ್ತಲಿನ ಕನಿಷ್ಠ ಮೂವತ್ತು ವಿಭಿನ್ನ ಸಮುದಾಯಗಳ ವಿವಿಧ ಆಚಾರ-ವಿಚಾರಗಳ ಪ್ರತ್ಯಕ್ಷ ಅನುಭವವಿದೆ. ಬಾಲು ಅವರ ಚಿಂತನೆ ಓದುವವರೆಗೆ ಈ ಆಚಾರ-ವಿಚಾರಗಳಲ್ಲಿ ಇರುವ ಸಾಮ್ಯ, ವೈವಿಧ್ಯಗಳು ಅಸಂಖ್ಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದವೇ ವಿನಾ ಎಡ-ಬಲಗಳ ಹೊಯ್ದಾಟದ ಯಾವ ಪ್ರಚಲಿತ ಸಿದ್ಧಾಂತಗಳೂ ತೃಪ್ತಿಕರ ಉತ್ತರ ನೀಡಿರಲಿಲ್ಲ. “ನಮ್ಮ ದೇಶದಲ್ಲಿ ರಿಲಿಜನ್ ಇಲ್ಲ; ಇಲ್ಲಿರುವುದು ಆಚರಣೆ ಮತ್ತು ಸಂಪ್ರದಾಯಗಳು. ಯಾರು ಯಾವ ಆಚರಣೆ ಮತ್ತು ಸಂಪ್ರದಾಯವನ್ನು ಬೇಕಾದರೂ ಅನುಸರಿಸಬಹುದು. ಇದಕ್ಕೆ ಜಾತಿ ಕಟ್ಟು ಎಂಬುದಿಲ್ಲ. ಯಾವುದೂ ಹೆಚ್ಚಲ್ಲ, ಯಾವುದೂ ಕೀಳಲ್ಲ. ನಮ್ಮಲ್ಲಿ ಧರ್ಮ ಇದೆ, ರಿಲಿಜನ್ ಇಲ್ಲ. ಯಾವುದೂ ನಮ್ಮಲ್ಲಿ ಒಂದು ಎನ್ನುವುದಿಲ್ಲ. ದೇವರಾಗಲೀ, ಸ್ಕ್ರಿಪ್ಚರ್ (ರಿಲಿಜಿಯಸ್ ಸೂತ್ರ ನಿರ್ದೇಶಿಸುವ ಗ್ರಂಥಗಳು) ಆಗಲೀ ಯಾವುದೂ ಒಂದಿಲ್ಲ. ಇವೆಲ್ಲ ಒಂದೇ ಎಂಬುದು ಇರುವುದು ಕ್ರಿಶ್ಚಿಯನ್, ಇಸ್ಲಾಂನಂಥ ರಿಲಿಜನ್ನುಗಳಲ್ಲಿ” ಎನ್ನುವ ಬಾಲು ಅವರು ವಸಾಹತುಗಳ ಮೂಲಕ ಭಾರತಕ್ಕೆ ರಿಲಿಜನ್ ಪರಿಕಲ್ಪನೆ ತಪ್ಪಾಗಿ ಹೇಗೆ ಬಂದಿದೆ ಹಾಗೂ ಅದು ಏನೆಲ್ಲ ಅನಾಹುತ ಉಂಟುಮಾಡಿದೆ ಎಂಬುದನ್ನು ಎಳೆಎಳೆಯಾಗಿ ವಿವರಿಸುತ್ತಾರೆ.

ಮತ್ತಷ್ಟು ಓದು »