ವಿಷಯದ ವಿವರಗಳಿಗೆ ದಾಟಿರಿ

Archive for

21
ಮೇ

ಬಹುಸಂಖ್ಯಾತರಿಗೆ ರಿಲಿಜನ್ ಇಲ್ಲವಾದರೆ ಅಲ್ಪಸಂಖ್ಯಾತರು ಯಾರು?

– ರಾಕೇಶ್ ಶೆಟ್ಟಿ

ರಿಲಿಜನ್ಅದು ರಾಮಕೃಷ್ಣ ಮಿಷನ್ ವರ್ಸಸ್ ಪಶ್ಚಿಮ ಬಂಗಾಳ ಸರ್ಕಾರದ ನಡುವೆ ನಡೆದ ಕುತೂಹಲಕಾರಿ ಕಾನೂನು ಕದನ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ರಾಮಕೃಷ್ಣ ಮಿಷನ್ ಸಂಸ್ಥೆಗೆ ಸೇರಿದ ಶಿಕ್ಷಣ ಸಂಸ್ಥೆಯೊಂದರಲ್ಲಿ ಶುರುವಾಗಿದ್ದ ಕಾಲೇಜಿನ ನಿರ್ವಹಣೆಗೆ ಸಂಬಂಧಿಸಿದಂತೆ,ಸರ್ಕಾರದ ಹಸ್ತಕ್ಷೇಪವನ್ನು ಪ್ರಶ್ನಿಸಿ ರಾಮಕೃಷ್ಣ ಮಿಷನ್ ನ್ಯಾಯಾಲಯದ ಮೆಟ್ಟಿಲೇರಿತ್ತು.ತಮ್ಮ ಸಂಘಟನೆಯೂ ರಾಮಕೃಷ್ಣರ ಬೋಧನೆಗಳ ಮೇಲೆ ಆಧಾರಿತವಾಗಿರುವುದರಿಂದ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಸಂವಿಧಾನದ Article 30(1) ಮತ್ತು Article 26(a) ಕಾಯ್ದೆಯಡಿಯಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಇರಬೇಕಾದ ರಕ್ಷಣೆಯಿದೆ ಎಂದು ವಾದಿಸಿತ್ತು.ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ರಾಮಕೃಷ್ಣಯಿಸಂ ಎಂಬ ಪ್ರತ್ಯೇಕವಾದ ರಿಲಿಜನ್ ಇಲ್ಲ ಮತ್ತದು ಹಿಂದೂ ಸಂಪ್ರದಾಯಗಳ ವ್ಯಾಪ್ತಿಯಲ್ಲೇ ಇದೆ ಎಂದಿತ್ತು ಹಾಗೂ ಹಿಂದೂ ಎಂಬುದು ರಿಲಿಜನ್ ಅಲ್ಲ ಅದೊಂದು ಜೀವನ ಪದ್ಧತಿ ಎಂದು ತೀರ್ಪು ನೀಡಿತ್ತು.ಈ ದೇಶದ ಸರ್ವೋಚ್ಚ ನ್ಯಾಯಾಲಯವೇ ಹಿಂದೂ ಎಂಬುದು ರಿಲಿಜನ್ ಅಲ್ಲ ಎಂದ ಮೇಲೆ ನಮ್ಮ ಸರ್ಕಾರಗಳು ಅದನ್ನು ಪರಿಗಣಿಸಬೇಕಿತ್ತಲ್ಲವೇ?

ಒಂದು ವೇಳೆ ಪರಿಗಣಿಸಿದ್ದರೆ ಈಗಲೂ ಸರ್ಕಾರಿ,ಖಾಸಗಿ ಕಚೇರಿ,ಶಿಕ್ಷಣ ಸಂಸ್ಥೆ ಇತ್ಯಾದಿಗಳ ಅರ್ಜಿಗಳಲ್ಲಿ “ಹಿಂದೂ” ಎಂಬುದನ್ನು “ರಿಲಿಜನ್” ಕಾಲಂನಲ್ಲಿ ಭರ್ತಿ ಮಾಡಿಕೊಳ್ಳುತ್ತಿರಲಿಲ್ಲ. ಉದಾಹರಣೆಗೆ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಸರ್ಕಾರ ಮಾಡಿದ ಜಾತಿಗಣತಿಯ ವೇಳೆ ನನಗಾದ ಅನುಭವದ ಬಗ್ಗೆ ಹೇಳಬೇಕು.

ಮತ್ತಷ್ಟು ಓದು »

21
ಮೇ

ವಸಾಹತುಶಾಹಿಯ ರಮ್ಯ ಕಥಾನಕ – ಭಾಗ ೨

– ಡಾ.ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ಡಾ.ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ವಸಾಹತುಶಾಹಿವಸಾಹತುಶಾಹಿಯ ರಮ್ಯ ಕಥಾನಕ – ಭಾಗ ೧

ನೋಬಿಲಿಯ ಉಲ್ಲೇಖಗಳು ಅಸ್ಪಷ್ಟವಾಗಿದ್ದರೂ ಆತನ ವಾದದ ಕೇಂದ್ರಬಿಂದು ನೇರವಾಗಿತ್ತು. ಇವನನ್ನು ದಾರಿತಪ್ಪಿಸುವವರಂತಲ್ಲದೇ ಈತ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮಾತ್ರವಲ್ಲದೇ ಧಾರ್ಮಿಕ ನಂಬಿಕೆಗಳ ಹಾಗೂ ಅದರ ಸಾಂಸ್ಕೃತಿಕ ಸಂಗತಿಗಳ ವೈಶಿಷ್ಟ್ಯವನ್ನು ತಿಳಿದುಕೊಳ್ಳಲು ಸಾಕಷ್ಟು ಪರಿಶ್ರಮಪಟ್ಟಿದ್ದ. ಬ್ರಾಹ್ಮಣ ಸಂಪ್ರದಾಯದ ಅನೇಕ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಳವಡಿಸಿಕೊಂಡಿದ್ದ. ಶಿಖೆ, ತಿಲಕಧಾರಣೆ ಇತ್ಯಾದಿಗಳನ್ನು ಅನುಸರಿಸುತ್ತಿದ್ದ. ಬ್ರಾಹ್ಮಣ ತಜ್ಞರನ್ನು ಭೇಟಿ ಮಾಡಿ ಅವರಿಂದ ಆಚರಣೆಗಳ ಮೂಲದ ಅರ್ಥವನ್ನು ತಿಳಿದುಕೊಂಡ. ಬಹಳಷ್ಟು ಯೂರೋಪಿಯನ್ನರು ಹಿಂದೂಗಳ ಬಹುಪಾಲು ಆಚರಣೆಗಳನ್ನು ಅರ್ಥಮಾಡಿಕೊಳ್ಳದೇ ಅಪರಿಚಿತವಾದ ಅವು ಮೂರ್ತಿಪೂಜೆಯೊಂದಿಗೆ ಸೇರಿಕೊಂಡ ಮೂಢನಂಬಿಕೆಗಳೆಂದು ಹೇಳುತ್ತಿದ್ದರೆ, ನೋಬಿಲಿ ಇವುಗಳಲ್ಲಿ ಬಹುಪಾಲು ಆಚರಣೆಗಳು ನಾಗರಿಕ ಜೀವನ ಶೈಲಿಯನ್ನು ರೂಪಿಸುವಂಥವು ಎಂದು ದೃಢಪಡಿಸಿದ. ಕೆಲವು ಆಚರಣೆಗಳಿಗೆ ಧಾರ್ಮಿಕವಾಗಿ ಯಾವುದೇ ಸಂಬಂಧವಿಲ್ಲ ಎಂಬುದನ್ನು ತೋರಿಸಿದ. ಸಾಂಪ್ರದಾಯಿಕ ಧಾರ್ಮಿಕ ಹಿಂದೂ ಆಚರಣೆಗಳನ್ನು ಮೀರಿ ನಾಗರಿಕ ವರ್ತನೆಗಳನ್ನು ಮಾತ್ರ ಉಳಿಸಿಕೊಳ್ಳುವಂತೆ ಮತಾಂತರಿಗಳಿಗೆ ಸೂಚಿಸಿರುವುದಾಗಿ ಹೆಳಿರುವುದಾಗಿ ಸ್ವತಃ ಬ್ರಾಹ್ಮಣ ಆಚರಣೆ ಮಾಡುತ್ತಿದ್ದ ನೋಬಿಲಿ ವಾದಿಸಿದ.

ನಂತರ ಆತ ಯೂರೋಪಿಯನ್ನರ ಹೆಸರು ಇಟ್ಟುಕೊಳ್ಳುವಂತೆ, ವೇಷಭೂಷಣ ತೊಡುವಂತೆ, ಭಾರತೀಯ ಸಮಾಜದಲ್ಲಿನ ಯಾವುದೇ ಕುರುಹು ಉಳಿಯದಂತೆ ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಿದ್ದ ತನ್ನ ಮಾರ್ಗಕ್ಕೆ ಅಡ್ಡಿಯಾಗಿರುವವರನ್ನು ತರಾಟೆಗೆ ತೆಗೆದುಕೊಂಡ. ಮತಾಂತರಗೊಂಡವರು ಅನಗತ್ಯವಾಗಿ ತಮ್ಮ ಮೂಲಸಮಾಜದ ಆಚರಣೆಯನ್ನು ಕೈಬಿಡುವಂತೆ ಹೇಳುವ ಇಂಥವರನ್ನು ನೋಬಿಲಿ ಖಂಡಿಸಿದ. ಕ್ರಿಶ್ಚಿಯನ್ನೇತರ ಭಾರತೀಯ ಸಮಾಜದವರು ಮತಾಂತರಿಗಳನ್ನು “ತಮ್ಮ ಮೂಲವನ್ನು ಕಳೆದುಕೊಂಡವರು, ಅವನತಿ ಉಂಟುಮಾಡುವವರು’’ ಎಂಬಂತೆ ಕಾಣುತ್ತಿದ್ದರು. ಕ್ರಿಶ್ಚಿಯನ್ ಆಚರಣೆಯನ್ನು ನಾವೇಕೆ ಇಷ್ಟು ಕಡ್ಡಾಯ ಮಾಡಿದ್ದೇವೆ ಎಂಬುದನ್ನು ಕ್ರಿಶ್ಚಿಯನ್ನೇತರರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಓದು »