ವಿಷಯದ ವಿವರಗಳಿಗೆ ದಾಟಿರಿ

Archive for

6
ಮೇ

ಕೊಟ್ಟಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು

unnamedರಾಘವೇಂದ್ರ ಸುಬ್ರಹ್ಮಣ್ಯ
ಜಗತ್ತಿನಲ್ಲಿ ಎಷ್ಟು ರಾಜಕಾರಣಿಗಳನ್ನು ನೀವು ನೋಡಿಲ್ಲ!? ಬೆಳಗೆದ್ದರೆ ಮನೆಯೆದುರು ಕಟ್ಟಿಹೋದ ಚರಂಡಿಯನ್ನು ಸರಿಪಡಿಸುತ್ತೇನೆಂದು ಆಶ್ವಾಸನೆ ಕೊಡುವ ಕಾರ್ಪೋರೇಟರನಿಂದ ಹಿಡಿದು, ವಿದೇಶದಿಂದ ಕಪ್ಪುಹಣ ಹಿಂದೆತರೆತ್ತೇನೆಂಬ ಭರವಸೆ ನೋಡುವ ಪ್ರಧಾನಿಯವರೆಗೆ, ಎಲ್ಲರನ್ನೂ ನೀವು ನೋಡಿದ್ದೀರ. ಎಲ್ಲರನ್ನೂ ಕೆಲಕಾಲದವರೆಗೆ ನಂಬಿದ್ದೀರ. ಎಲ್ಲರಿಂದಲೂ ಒಂದಲ್ಲ ಒಂದು ಬಾರಿ ಮೋಸ ಹೋಗಿದ್ದೀರ. ಅವರ ಆಶ್ವಾಸನೆಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದೀರ. ‘ಯಾರೂ ಆಶ್ವಾಸನೆಗಳನ್ನು ಪೂರ್ತಿ ಮಾಡಲ್ಲ. ಮತ್ಯಾವ ಸುಖಕ್ಕೆ ಅವನ್ನು ಕೊಡ್ತಾರೋ ಏನೋ’ ಅಂತಾ ಬೈದುಕೊಂಡೂ ಇದ್ದೀರಿ. ‘ಜಗತ್ತಿನಲ್ಲಿ ಯಾವ ರಾಜಕಾರಣಿಯೂ ತಾನು ಕೊಟ್ಟ ಆಶ್ವಾಸನೆಗಳನ್ನು ನೂರಕ್ಕೆ ನೂರು ಈಡೇರಿಸಿಲ್ಲ, ಇವನದ್ದೇನು ಬಿಡಿ, ಕೊಟ್ಟ ಇಪ್ಪತ್ತು ಆಶ್ವಾಸನೆಗಳಲ್ಲಿ ಎರಡನ್ನಾದರೂ ಈಡೇರಿಸಿದ್ದಾನೆ’ ಅಂತಾ ಕೆಲವೊಮ್ಮೆ ಸಮಾಧಾನವವೂ ಮಾಡಿಕೊಂಡಿದ್ದೀರಿ.
ಆದರೆ ಜಗತ್ತಿನಲ್ಲಿ ಕನಿಷ್ಟ ಒಬ್ಬ ರಾಜಕಾರಣಿ, ತಾನು ಕೊಟ್ಟ ಆಶ್ವಾಸನೆಗಳನೆಲ್ಲಾ ನೂರಕ್ಕೆ ನೂರು ಈಡೇರಿಸಿದ್ದಾನೆಂದರೆ ನಂಬುತ್ತೀರಾ? ಹೌದು ನೀವು ಓದಿದ್ದು ಸರಿಯಾಗಿದೆ. ರಾಜಕಾರಣಿಯೊಬ್ಬ ತಾನು ಚುನಾವಣೆಗೆ ಮೊದಲು ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು, ಆಡಳಿತಕ್ಕೆ ಬಂದಮೇಲೆ ಈಡೇರಿಸಿದ್ದಾನೆ!! ಅದೂ ಕೂಡ ಒಂದೇ ಒಂದು ಆಡಳಿತ ಕಾಲಾವಧಿಯಲ್ಲಿ!! ಒಬ್ಬ ರಾಜಕಾರಣಿ ಇದನ್ನು ಸಾಧಿಸಬೇಕಾದರೆ ಅವನಿಗೆ ಅದೆಂತಾ ದೂರದೃಷ್ಟಿಯಿರಬೇಕು ಮತ್ತು ತನ್ನಮೇಲೆ ಹಾಗೂ ತನ್ನ ತಂಡದ ಮೇಲೆ ಅದೆಷ್ಟು ವಿಶ್ವಾಸವಿರಬೇಕು, ಒಮ್ಮೆ ಯೋಚಿಸಿ.
ಅಂದಹಾಗೆ ಆ ರಾಜಕಾರಣಿ ಇವತ್ತು ನಿನ್ನೆಯವನಲ್ಲ. ಆತನ ಆಡಳಿತ ನಡೆದದ್ದು 1845 ಮತ್ತು 1849ರ ಮಧ್ಯೆ. ಅಮೇರಿಕಾ ಸಂಯುಕ್ತ ಸಂಸ್ಥಾನದ 11ನೇ ಅದ್ಜ್ಯಕ್ಷನಾಗಿ ಚುನಾಯಿತನಾದ ಜೇಮ್ಸ್.ಕೆ.ಪೋಲ್ಕ್ ಎಂಬ ರಾಜಕಾರಣಿಯ ಬಗ್ಗೆ ನಾವು ಮಾತನಾಡುತ್ತಿರುವುದು. 1795ರಲ್ಲಿ ಜನಿಸಿದ ಜೇಮ್ಸ್, ಹತ್ತುಮಕ್ಕಳಿದ್ದ ದೊಡ್ಡ ಕುಟುಂಬದ ಹಿರಿಮಗನಾಗಿ, ರೈತನಾಗಿ ಬೆಳೆದವ. ಕಷ್ಟಗಳನ್ನು ಅರಿತವ. ಇವನ ಬಗೆಗಿನ ಒಂದು ಕಥೆಯ ಪ್ರಕಾರ (ದಂತಕಥೆಯಲ್ಲ, ನಿಜವಾದ ಕಥೆ) 1812ರಲ್ಲಿ ಈತನಿಗೆ ಮೂತ್ರಕೋಶದ ಕಲ್ಲುಗಳಿಗಾಗಿ ಶಸ್ತ್ರಚಿಕಿತ್ಸೆ ಮಾಡುವಾಗ, ಈ ಪುಣ್ಯಾತ್ಮ ಇಡೀ ಶಸ್ತ್ರಚಿಕಿತ್ಸೆಯುದ್ದಕ್ಕೂ ಎಚ್ಚರವೇ ಇದ್ದನಂತೆ!! ಅಂದು ಆಸ್ಪತ್ರೆಯಲ್ಲಿ ಅರವಳಿಕಾಗಿ ಲಭ್ಯವಿದ್ದದ್ದು ಬ್ರಾಂಡಿ ಮಾತ್ರ. ಅಂತಾ ಗಟ್ಟಿಪಿಂಡ ಇವನು.

ಮತ್ತಷ್ಟು ಓದು »

5
ಮೇ

ನಾಡು-ನುಡಿ : ಮರುಚಿಂತನೆ – ಜಾತಿಗಣತಿ ಪ್ರತಿನಿಧಿಸುವುದೇನನ್ನು?

ಇಂಗ್ಲೀಷ್ ಮೂಲ:-ವಿವೇಕ್ ಧಾರೇಶ್ವರ್, ಸ್ಕಾಲರ್ ಇನ್ ರೆಸಿಡೆನ್ಸ್, ಸೃಸ್ಟಿ ಸ್ಕೂಲ್ ಆಫ್ ಡಿಸೈನ್, ಬೆಂಗಳೂರು
ಕನ್ನಡ ಅನುವಾದ: ಅಶ್ವಿನಿ. ಬಿ. ದೇಸಾಯಿ, ಆರೋಹಿ ಸಂಶೋಧನಾ ಸಂಸ್ಥೆ, ಬೆಂಗಳೂರು

ಜಾತಿಗಣತಿನಮ್ಮ ರಾಜ್ಯದಲ್ಲಿ ಜಾತಿಗಳನ್ನು ಲೆಕ್ಕ ಮಾಡುವ, ಕರ್ನಾಟಕ ಸರಕಾರದ ಉದ್ದೇಶದ ಸ್ವರೂಪವೇನು ಎಂಬುದು ನಮಗೆ ಅರ್ಥವಾಗದ ಸಂಗತಿ. ಈ ಗಣತಿಯು,  ಗಂಭೀರವಾದ ಬೌದ್ದಿಕ ಪ್ರಕ್ರಿಯೆಯೋ, ಸರಕಾರದ ನೀತಿಗಳನ್ನು ಸುಲಭಮಾಡುವ ಮಾಹಿತಿ ಸಂಗ್ರಹಣೆಯೋ ಅಥವಾ ರಾಜಕೀಯ ಪ್ರೇರಿತವಾದದ್ದೋ ಎಂಬುದು ಇನ್ನೂ ಸರಿಯಾಗಿ ಅರ್ಥವಾಗುತ್ತಿಲ್ಲ, ಉದಾಹರಣೆ, ಜಾತಿಗಣತಿಯವರು ಬಂದು ನಮ್ಮ ಮನೆ ಬಾಗಿಲು ಬಡಿದರೆ, ಈ ಪ್ರಕ್ರಿಯೆ ಬಗ್ಗೆ, ಹಾಗೂ ಜಾತಿವ್ಯವಸ್ಥೆ ಬಗ್ಗೆ, ಅನುಮಾನವಿರುವ ನಮ್ಮಂಥವರು ಏನು ಹೇಳಬೇಕೆಂಬುದು ಒಂದು ದೊಡ್ದ ಪ್ರಶ್ನೆಯಾಗಿದೆ.

ಜಾತಿ ಗಣತಿಯವರು ನನ್ನ ಜಾತಿ ಯಾವುದೆಂದು ಕೇಳಿದಾಗ ನಾನು “ಕಂಪ್ಯೂಟರ್ ವಿಜ್ಞಾನಿ” ಅಥವಾ ‘ಲಿಬರಲ್’ ಅಥವಾ ಮಾರ್ಕಿಸ್ಟ್ ಎಂದು ಹೇಳಿದರೆ ಏನಾಗಬಹುದು? ‘ಬಡಗಿ’, ‘ಮಾಧ್ವ’ ಮತ್ತು ‘ಅಯ್ಯಂಗಾರ್’ ಸರಿಯಾದ ಉತ್ತರಗಳಾದರೆ, ನನ್ನ ಉತ್ತರಗಳೇಕೆ ಸರಿಯಲ್ಲ? ಮೇಲೆ ಹೇಳಿದ ಇಂಗ್ಲಿಷ್ ಪದಗಳನ್ನು, ಕನ್ನಡೀಕರಿಸಿದರೆ ‘ಗಣಕಿ’, ‘ಉದಾರಿ’, ‘ಎಡಪಂಥಿ’ ಎಂದಾಗುತ್ತವೆ. ಇವನ್ನು ನಾವೇಕೆ ಜಾತಿಗಣತಿಯ ಪಟ್ಟಿಗೆ ಸೇರಿಸಬಾರದು? ಮೇಲ್ಕಂಡ ಪ್ರಶ್ನೆಗಳು ನಮಗೆ ಈ ವಿಷಯದ ಬಗ್ಗೆ ಇರುವ ಅಸ್ಪಷ್ಟತೆ ಗೆ ಸ್ಪಷ್ಟ ಉದಾಹರಣೆ.

ನಮ್ಮಲ್ಲಿ ಅನೇಕರಿಗೆ ನಿಮ್ಮ ರಿಲಿಜನ್ ಯಾವುದು ಎಂದಾಗ, ಹಿಂದೂ ಎಂದು ಹೇಳುವುದು ಅಸಹಜವೆನಿಸುತ್ತದೆ. ಇಂತಹ ಪ್ರತಿಕ್ರಿಯೆ ಜಾತಿ ಎಂಬ ಪ್ರಭೇದಕ್ಕೂ ಅನ್ವಯಿಸುತ್ತದೆ. ನಮ್ಮ ದೈನಂದಿನ ಬದುಕಿನಲ್ಲಿ ಚರ್ಚೆ ಮಾಡುವಾಗ ತಾವು ಯಾವ ಮತದವರು? ಅಥವಾ ಯಾವ ಸಂಪ್ರದಾಯದವರು? ಎಂಬ ಪ್ರಶ್ನೆ ಎದುರಾಗುವುದುಸರ್ವೇಸಾಮಾನ್ಯ. ಇಂತಹ ಪ್ರಶ್ನೆಗಳಿಗೆ ಪಶ್ಚಿಮದಲ್ಲಿರುವುದು “ಎತ್ನಿಕ್” ಎಂಬ ಉತ್ತರಮಾತ್ರ. ಅದನ್ನು ವಿವರಿಸಲು ನಮ್ಮ ಬಳಿ ಶಬ್ದಗಳಿಲ್ಲ. ಜಾತಿ ಮತ್ತು ಮತ (ರಿಲಿಜನ್) ಈ ಅರ್ಥಕೊಡುವ ಶಬ್ದಗಳಾಗಿ ಮಾರ್ಪಟ್ಟಿವೆ. ಕಾರಣ, ಎತ್ನಿಕ್‍ಗೆ ಹೊಂದುವ ಶಬ್ದಗಳು ಇಲ್ಲಿಲ್ಲ.

ಮತ್ತಷ್ಟು ಓದು »

4
ಮೇ

ನಾಡು-ನುಡಿ : ಮರುಚಿಂತನೆ – ಭಕ್ತಿ ಮಾರ್ಗವನ್ನೇ ನಿರಾಕರಿಸುವವರಿಗೆ ಭಕ್ತರು ಹೇಗೆ ಅರ್ಥವಾದಾರು?

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಪುರಂದರದಾಸ,ಕನಕದಾಸಇತ್ತೀಚೆಗೆ ಕನಕದಾಸರ ಜಯಂತಿಯ ಆಚರಣೆ ನಡೆಯಿತು.ಹಾಗೂ ಪತ್ರಿಕೆಗಳಲ್ಲಿ ಅವರ ಕುರಿತು ಲೇಖನಗಳು ಪ್ರಕಟವಾದವು. ಜೊತೆಗೇ ರಾಜಕಾರಣಿಗಳು ತಮ್ಮ ಭಾಷಣಗಳಲ್ಲಿ ನೀಡಿದ ಹೇಳಿಕೆಗಳೂ ವರದಿಯಾದವು. ಅವುಗಳಲ್ಲಿ ತೀರಾ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪ್ರಗತಿಪರ ಧೋರಣೆಯೊಂದರ ಕುರಿತು ಇಲ್ಲಿ ಚರ್ಚಿಸುತ್ತೇನೆ.ನಮ್ಮ ವಚನಕಾರರು, ದಾಸರು ಇವರೆಲ್ಲರೂ ಶಿವ ಭಕ್ತರು, ವಿಷ್ಣು ಭಕ್ತರು ಎಂಬುದಾಗಿ ತಿಳಿದಿದ್ದೇವೆ. ಆದರೆ ಆಶ್ಚರ್ಯದ ವಿಷಯವೆಂದರೆ  ಈ ಶರಣರ, ದಾಸರ ಭಕ್ತಿಯ ಪರಿಕಲ್ಪನೆಯ ಕುರಿತಾಗಲೀ, ಅವರು ಭಗವಂತನ ಕುರಿತು ಏನು ಹೇಳುತ್ತಾರೆ ಎಂಬುದರ ಕುರಿತಾಗಲೀ ಕುತೂಹಲವೇ ನಮ್ಮ ಬಹುತೇಕ ಸಾಮಾಜಿಕ ಚಿಂತಕರಿಗೆ ಅಪ್ರಸ್ತುತವಾದಂತಿದೆ. ಹಾಗೂ ಅಂಥ ಚಿತ್ರಣದ ಅಗತ್ಯವೇ ಇಲ್ಲ ಎಂಬ ಧೋರಣೆಯನ್ನು ಇಂಥ ಚಿಂತಕರು ಹಾಗೂ ಅವರಿಂದ ಪ್ರಭಾವಿತರಾದ ರಾಜಕಾರಣಿಗಳು ತಳೆದಂತಿದೆ. ಆ ಶರಣರು ಹಾಗೂ ದಾಸರೆಲ್ಲ ಲಿಂಗ, ಜಾತಿ, ವರ್ಗ ಸಮಾನತೆಗಾಗಿ ಹೋರಾಡಿದರು ಎಂಬುದೊಂದೇ ವಿಷಯ ಅಲ್ಲಿ ಮುಖ್ಯವಾಗುತ್ತದೆ. ಅದರಲ್ಲೂ ಅವರು ಜಾತಿಯ ತುಳಿತಕ್ಕೊಳಗಾಗಿದ್ದರು, ಹಾಗೂ ಅದರ ವಿರುದ್ಧ ಹೋರಾಡುವ ಏಕಮೇವ ಉದ್ದೇಶಕ್ಕಾಗಿಯೇ ಅವರು ಸಂತರಾದರು ಎಂದು ಬಿಂಬಿಸಲಾಗುತ್ತದೆ. ಇಂಥವರು ನಮ್ಮ ಭಕ್ತಿಯುಗದ ಸಂತರನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆ?

ಮತ್ತಷ್ಟು ಓದು »