ವಿಷಯದ ವಿವರಗಳಿಗೆ ದಾಟಿರಿ

Archive for

5
ಫೆಬ್ರ

ಚಿಂತನಗಂಗಾ ಚರ್ಚೆಯ ಪ್ರತಿಕ್ರಿಯೆಗಳ ಸುತ್ತ…

(ಗೋಲ್ವಾಲ್ಕರ್ ಅವರ ಚಿಂತನಗಂಗಾ ಪುಸ್ತಕದ ಸುತ್ತ ಬನವಾಸಿ ಬಳಗದ ಮಿತ್ರರು ಶುರು ಮಾಡಿದ ಚರ್ಚೆಗೆ ನಿಲುಮೆಯಲ್ಲಿ ಅಶ್ವಿನ್ ಅಮೀನ್ ಅವರು ಪ್ರತಿಕ್ರಿಯೆ ನೀಡಿದ್ದರು.ಅಶ್ವಿನ್ ಅವರ ಪ್ರತಿಕ್ರಿಯೆಗೆ ಪ್ರಿಯಾಂಕ್ ,ಚೇತನ್ ಮತ್ತು ಮಂಜುನಾಥ್ ಅವ್ರು ಎತ್ತಿದ ಪ್ರಶ್ನೆಗಳು ಕೇವಲ ಪ್ರತಿಕ್ರಿಯೆಗಳಾಗಿ ಕಳೆದುಹೋಗದಿರಲಿ ಅನ್ನುವ ಉದ್ದೇಶದಿಂದ ಓದುಗರಿಗಾಗಿ ಪ್ರಕಟಿಸುತಿದ್ದೇವೆ – ನಿಲುಮೆ)

– ಪ್ರಿಯಾಂಕ್

ಇಲ್ಲಿ ಹೇಳಲಾಗಿರುವ ಕೆಲ ವಿಷಯಗಳ ಬಗ್ಗೆ ನನ್ನ ಅನಿಸಿಕೆಗಳು.

– ಗೋಲ್ವಾಲ್ಕರ್ ಅವರ ಚಿಂತನಗಂಗಾ ಹೊತ್ತಗೆಯೇ ಆರ್.ಎಸ್.ಎಸ್ಸಿನ ನಿಲುವುಗಳಲ್ಲ ಅಂತಲೂ ಕೆಲವರು ಹೇಳಿದ್ದರು. ನೀವು ಬರೆದಿರೋದು ನೋಡಿ, ಆರ್.ಎಸ್.ಎಸ್ಸಿನ ನಿಲುವುಗಳೆಲ್ಲವೂ ಗೋಲ್ವಾಲ್ಕರ್ ಅವರ ಮಾತುಗಳನ್ನು ಒಪ್ಪುತ್ತದೆ ಎನ್ನುವಂತಿದೆ.

– ಹಿಂದಿಯನ್ನು ರಾಷ್ಟ್ರಬಾಷೆ ಮಾಡಬೇಕಾಗಿ ಗಾಂಧಿ ಅವರೂ ಸೇರಿದಂತೆ, ಗೋಳ್ವಾಲ್ಕರ್ ಅವರೂ ಹೇಳಿದ್ದರು. ಅದಕ್ಕೆ ಕಾರಣಗಳೂ ಇದ್ದವು ಎಂದಿದೀರಿ. ಗಾಂಧಿ ಅವರು ಹೇಳಿದ್ದೂ ನಿಜವೇ. ಅದೆಲ್ಲವನ್ನೂ ಪ್ರಶ್ನಿಸಬೇಕಾಗಿದೆ. ಗೋಳ್ವಾಲ್ಕರ್ ಅವರ ಚಿಂತನೆಗಳೇ ಸಂಘದ ನಿಲುವಾಗಿದ್ದರೆ, ಇವತ್ತಿಗೂ ಸಂಘವು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದರ್ಥವಲ್ಲವೇ? ಎಲ್ಲಾರ ಮೇಲೆ ಹಿಂದಿ ಹೇರಿಕೆ ಮಾಡುವುದರ ಪರವಾಗಿ ಸಂಘವಿದೆ ಎಂಬರ್ಥವಲ್ಲವೇ? ಹಾಗೆ ಮಾಡುತ್ತಿದಾರೋ, ಇಲ್ಲವೋ ಎಂಬುದು ಪ್ರಶ್ನೆಯಾಗಿದೆ.

ಮತ್ತಷ್ಟು ಓದು »

5
ಫೆಬ್ರ

ಪ್ರಾರ್ಥನೆ…

-ಬದರಿನಾಥ ಪಲವಳ್ಳಿ

ನನ್ನ ಹೆಣ ಭಾರಕ್ಕೆ
ಹೊತ್ತವರು ಬಳಲ ಬಾರದು
ಪ್ರಭುವೇ!
ದೇಹ ಉಬ್ಬಿಸಬೇಡ ಇನ್ನೂ…

ನಿತ್ಯತೃಪ್ತನು ನೀನು
ನಿತ್ಯಯಾತ್ರಿಕನಿವನು
ಬೇಡುವುದೇ ಸುಲಭ ವಿದ್ಯೆ!
ನಿನ್ನ ತಂತಿಯೋ ನೇರ
ತೂರಾಡದಂತೆ ಕಾಪಾಡು

ಮತ್ತಷ್ಟು ಓದು »