ಸಕಲೇಶಪುರ ಹುಸೈನಾಕರೆ ಪ್ರಾಮಾಣಿಕತೆ
– ಅಶ್ರಫ್ ಮಂಜ್ರಾಬಾದ್. ಸಕಲೇಶಪುರ.
ರಥೋತ್ಸವತ್ತ್ಲ್ ಬೂಂತು ಕಿಟ್ಟಿಯೇ ಬಂಗಾರ್ ರೆ ಮಾಲೆ ವಾಪಾಸ್ ಕೊಡುತು ಪ್ರಾಮಾಣಿಕತೆ ಕಾಟಿಯೋ ಸಕಲೇಶಪುರತ್ತೆ ಹುಸೈನಾಕ:
ಸಕಲೇಶಪುರ : ವರ್ಷ ಪ್ರತೀ ನಡಕ್ಕ್ ರೆ ಪೋಲೆ ಫೆಬ್ರವರಿ 8 ತಾರೀಖ್ ರೆಂಡ್ ಸಕಲೇಶಪುರತ್ತೆ ಸಕಲೇಶ್ವರ ಸ್ವಾಮೀ ದೇವಸ್ಥಾನತ್ತೆ ವಾರ್ಷಿಕ ರಥೋತ್ಸವ ಆಯೋಜನೆ ಆಯಿಂತ್ತ್. ಊಡ್ರೆ ವಲಳಹಳ್ಳಿ ಚೊಲ್ಲುರೆ ರಾಯತ್ತೆ ರಮೇಶ್ ಚೊಲ್ಲುರೆ ಆಲ್ ಅಯಾಲ್ರೆ ಉಮ್ಮರೆ ಒಟ್ಟಿಗೆ ರಥೋತ್ಸವತ್ತೆ ಅಂಡ್ ಪೂಜೆ ಆಕೊನುಗು ಬಂತಿಂತ್ತ್. ಲಬಾಬಿನ್ ಪಳ್ಳಿರೆ ಮುಟ್ಟ ಕಾರ್ ಪಾರ್ಕ್ ಆಕಿತ್ತ್ ಪೂಜೆ ಆಕೊನುಗು ಪೊಂಬೋ ಅಯಾಲ್ರೋ ಕಲ್ತ್ ಲ್ ಇನ್ನೆ ೩೬ ಗ್ರಾಮುರೆ ಬಂಗಾರ್ ರೆ ಮಾಲೆ ಕೀಲ್ ಬೂಂತು ಪೋಯಿತ್ತ್ .
ಆ ಮಾಲೆ ಆನೆಮಹಲ್ ಚೊಲ್ಲುರೆ ರಾಯತ್ತೆ ಕೂಲಿ ಕಾರ್ಮಿಕ ಹುಸೈನಾಕ ಚೊಲ್ಲುರೆ ಆಲ್ಗ್ ಕಿಟ್ಟಿತ್ತ್ . ಮಾಲೆ ಎಡ್ತೋ ಅಯಾಲ್ ಆದ್ರೆ ವಾರೀಸುದಾರರೆ ತೇಡಿತ್ತ್ ಆದ್ರೆ ಹಕ್ಕ್ ದಾರ ಆಯೋ ರಮೇಶ್ ಚೊಲ್ಲುರೆ ಆಲ್ಗ್ ವಾಪಾಸ್ ಕೊಡುತುತ್ತು. ತೆರುಳು ಕಿಟ್ಟಿಯೋ ಸುಮಾರು ಒರು ಲಾಕ್ ಉರುಪೆ ಮೌಲ್ಯ ತ್ತೋ ಬಂಗಾರ್ ವಾಪಾಸ್ ಆಕಿಯೋ ಹುಸೈನಾಕರೆ ಪ್ರಾಮಾಣಿಕತೆರೋ ರಾಯತ್ತೋ ಆಲ್ಮಾ ರ್ ತಾರೀಫ್ ಆಕಿಯಾರ್ .
ಟಿ.ಆರ್.ಪಿಗಾಗಿ ನೀಲಿ ಚಿತ್ರದ ಬೆಂಬತ್ತಿದ ಮಾಧ್ಯಮ
–ವಿಜಯ್ ಹೆರಗು

ಅಪ್ಪು …
-ಹರೀಶ್ ಎಸ್ ಎಚ್
ಕಳೆದವು ಎಷ್ಟೋ ನಿದಿರೆ
ಬಾರದ ರಾತ್ರಿಗಳು ,
ಹುಡುಕುತಿವೆ ಕಣ್ಣುಗಳು
ಬರಲಿಲ್ಲ ನನ್ನವಳು ,
ಮನವ ಕಾಡುತಿವೆ
ನೆನ್ನೆಯ ನೆನಪುಗಳು ,
ಹೃದಯದಲಿ ಉಳಿದಿವೆ
ನನಸಾಗದ ಕನಸುಗಳು …
ಕೇಸರಿಕರಣ ಅಂದರೆ ಕೇಸರಿ ಬಣ್ಣದ ಪುಸ್ತಕವೇ?
– ಅಶ್ವಿನ್ ಅಮೀನ್
ದ್ವಾರಕನಾಥ್ ಅವರೇ, ನೀವು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ ‘ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್’ ಎಂಬ ಲೇಖನದ ಬಗ್ಗೆ ಹಲವು ಸಂದೇಹಗಳಿರುವುದರಿಂದ ಈ ಪ್ರತಿಕ್ರಿಯೆಯನ್ನು ನೀಡಲಿಚ್ಚಿಸುತ್ತೇನೆ.
ಮೊದಲನೆಯದಾಗಿ ನೀವು ಅರ್ಥೈಸಿಕೊಂಡಂತೆ ‘ಕೇಸರೀಕರಣ’ ಎಂದರೇನು ಎಂದು ತಿಳಿಯಬಯಸುತ್ತೇನೆ. ಭಾರತದ ಮೂಲ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು, ಪ್ರಾಚೀನ ಭಾರತದ ಜನರ ಜೀವನ ವಿಧಾನಗಳನ್ನು, ಅವರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳನ್ನು ಯಥಾವತ್ತಾಗಿ ತಿಳಿಸಿಕೊಡುವುದು ಕೇಸರೀಕರಣವಾಗುತ್ತದೆಯೇ?.. ಇಷ್ಟಕ್ಕೂ ನಿಮಗೆ ಈ ‘ಕೇಸರಿ’ ಎಂಬ ಕಲರ್ ಕೋಡ್ ಕೊಟ್ಟವರು ಯಾರು?… ಹಾಗಿದ್ದಲ್ಲಿ ಹಿಂದಿನ ಪಠ್ಯಪುಸ್ತಕಗಳಲ್ಲಿ ಇದ್ದಂತೆ ಭಾರತದ ಮೇಲೆ ಹಲವು ಬಾರಿ ಧಾಳಿ ಮಾಡಿ ಇಲ್ಲಿನ ಹಲವು ವೈಭವೋಪೇತ ದೇಗುಲಗಳನ್ನು ನಾಶ ಮಾಡಿ, ಸಂಪತ್ತನ್ನು ಲೂಟಿಗೈದ ಮಹಮ್ಮದ್ ಗಜಿನಿ, ಮಹಮ್ಮದ್ ಘೋರಿ ಮುಂತಾದ ಲೂಟಿಕೋರರ ವರ್ಣನೆ.. ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನನ್ನು ಸೋಲಿಸಿ ಓಡಿಸಿದ ‘ಭಾರತೀಯ’ ದೊರೆ ‘ಪೌರವ’ನನ್ನು ವರ್ಣಿಸದೇ ಅಲೆಕ್ಸಾಂಡರನನ್ನು ವರ್ಣಿಸಿರುವುದು.. ಸ್ವಾತಂತ್ರ ಹೋರಾಟದ ಪಾಠಗಳಲ್ಲಿ ಆಜಾದ್, ಸಾವರ್ಕರ್, ನೇತಾಜಿ, ಭಗತ್ ಸಿಂಗ್, ಲಾಲ ಲಜಪತ್ ರಾಯ್ ಯಂತವರನ್ನು ನಾಲ್ಕೈದು ಸಾಲುಗಳಿಗೆ ಸೀಮಿತಗೊಳಿಸಿ ಗಾಂಧೀ-ನೆಹರೂ ಮುಂತಾದ ಕಾಂಗ್ರೆಸ್ಸ್ ನಾಯಕರುಗಳ ಬಗ್ಗೆ ಪುಟಗಟ್ಟಲೆ ಬರೆಯುವುದು.. ಮೌಲಾನ ಅಬ್ದುಲ್ ಕಲಾಮ್ ಅಜಾದರಂತಹ ಗಾಂಧಿಯ ಹಿಂಬಾಲಕರ ಬಗ್ಗೆ ಪಾಠಗಳನ್ನು ಸೃಷ್ಟಿಸಿ, ಅಶ್ಫಾಕುಲ್ಲ ಖಾನ್ ನಂತಹ ಕ್ರಾಂತಿಕಾರಿ ದೇಶಪ್ರೇಮಿಯನ್ನು ಕಡೆಗಣಿಸಿರುವುದು.. ಶಿವಾಜಿ ರಾಜ್ಯ ಕಟ್ಟಿದ ರೀತಿ, ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಅವನು ಪಟ್ಟ ಶ್ರಮದ ಬಗ್ಗೆ ಪಾಠಗಳನ್ನು ರಚಿಸದೇ ಔರಂಗಜೇಬನನ್ನು ಪಠ್ಯದಲ್ಲಿ ವರ್ಣಿಸಿ ಸೇರಿಸಿರುವುದು .. ಇವೆಲ್ಲ ನಿಮಗೆ ಸರಿ ಕಂಡು ಬರುವುದೇ.. ಒಂದರ್ಥದಲ್ಲಿ ಇವೆಲ್ಲ ‘ಹಸಿರೀಕರಣ’ವಾಗದೆ?!!!! ಅದಕ್ಕೇಕೆ ನೀವು ‘ಹಸಿರು’ ಎಂಬ ಕಲರ್ ಕೋಡ್ ಕೊಡುವುದಿಲ್ಲ.? ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಬರೆದರೆ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಅದೇ ಭಾರತದ ನಿಜವಾದ ಇತಿಹಾಸವನ್ನು ಮಕ್ಕಳಿಗೆ ತೆರೆದಿಟ್ಟರೆ ಅದು ಹೇಗೆ ಕೇಸರೀಕರಣವಾಗುತ್ತದೆ?