ವಿಷಯದ ವಿವರಗಳಿಗೆ ದಾಟಿರಿ

Archive for

16
ಫೆಬ್ರ

ರುದ್ರಾಕ್ಷಿ

-ಸುಗುಣ ಮಹೇಶ್

“ರುದ್ರಾಕ್ಷಿ” ಶಿವನ ಸಂಕೇತವೆಂದೇ ನಾವುಗಳು ನಂಬುತ್ತೇವೆ. “ರುದ್ರ್ಚ ಮತ್ತು ಅಕ್ಷ” ಎಂಬ ಎರಡು ಶಬ್ಧಗಳಿಂದಾದ  ರೂಪವೇ ರುದ್ರಾಕ್ಷಿ. “ರುದ್ರ” ಎಂದರೆ ಶಿವನ ಮತ್ತೊಂದು ಹೆಸರು. “ಅಕ್ಷ” ಎಂದರೆ ಶಿವನ ಕಣ್ಣೀರು. ಇಂತಹ ರುದ್ರಾಕ್ಷಿಯನ್ನು ಶಿವನೇ ಮೊಟ್ಟ ಮೊದಲು ಧರಿಸಿದನೆಂಬ ನಂಬಿಕೆ ಇದೆ ಆನಂತರ ಶಿವನ ಭಕ್ತರು, ಮುನಿಗಳು ರುದ್ರಾಕ್ಷಿಯನ್ನು ಧರಿಸಲು ಪ್ರಾರಂಭಿಸಿದರು. ಇದು ಆ ಶಿವನಿಂದಲೇ ಪ್ರಸಾದವಾಗಿ ಬಂದಿಹುದು ಇದನ್ನು ಧರಿಸುವುದರಿಂದ ನಮ್ಮಲ್ಲಿನ ಕಷ್ಟಗಳೆಲ್ಲವನ್ನು ನಿವಾರಣೆ ಮಾಡುವಂತಹ ಶಕ್ತಿ ಹೊಂದಿದೆ ಎಂದು ನಂಬಿಕೆಯನ್ನಿಟ್ಟಿದ್ದಾರೆ.
ರುದ್ರ್ಚ ಅಕ್ಷ ಎಂಬುದಕ್ಕೆ ಬಹಳ ಅರ್ಥಗಳೇ ಇವೆ… “ರುದ್ರ ಎಂದರೆ! ‘ದಂ ಸಂಸಾರ ದುಃಖಮ್ ದ್ರಾವ ಯತ್ ಇತಿ ರುದ್ರಃ’ ಅಂದರೆ ಯಾರು ಜಗತ್ತಿನ ದುಃಖಗಳೆಲ್ಲವನ್ನೂ ನಿವಾರಿಸುತ್ತಾನೋ ಆತ ರುದ್ರ’ ಎಂಬ ಅರ್ಥ”  ಶಿವ ತನ್ನ ಮೂರನೇ ಕಣ್ಣಿನಿಂದ ಎಲ್ಲವನ್ನೂ ನೋಡಬಲ್ಲ ಆ ಕಣ್ಣು ಅಕ್ಷರೇಖೆಯ ಸುತ್ತ ಸುತ್ತುತ್ತಲಿರುತ್ತದೆ ಆದ್ದರಿಂದಲೇ “ಅಕ್ಷ” ಎಂದು ಕರೆಯುತ್ತಾರೆ. ಮತ್ತೊಂದು ಅರ್ಥವನ್ನು ಎಲ್ಲೋ ಓದಿದ ನೆನಪು ಅ- ಎಂದರೆ ತೆಗೆದುಕೊಳ್ಳುವುದು ಮತ್ತು ಕ್ಷ- ಎಂದರೆ ಕೊಡುವುದು ಎಂದರ್ಥ, “ಅಕ್ಷ” ಎಂದರೆ ತೆಗೆದುಕೊಳ್ಳುವುದು ಅಥವಾ ಕೊಡುವ ಕ್ಷಮತೆ. ರುದ್ರಾಕ್ಷವೆಂದರೆ ನಮ್ಮ ದುಃಖವನ್ನು ತೆಗೆದುಕೊಂಡು ಸುಖವನ್ನು ಕೊಡುವ ಕ್ಷಮತೆ ಇರುವುದೆಂದು ಸಹ ಹೇಳುತ್ತಾರೆ.
ತಾರಕಾಕ್ಷ ಮತ್ತು ಕಮಲಾಕ್ಷರೆಂಬ ತಾರಕಪುತ್ರರು ಅಧರ್ಮಗಳ ಆಚರಣೆಯಲ್ಲಿ ತೊಡಗಿಸಿಕೊಂಡಿರುವಾಗ ಅತಿ ವಿಷಾದದಿಂದ ಅಶ್ರುಗಳಿಂದ ತುಂಬಿದ್ದ ಶಿವನ ನೇತ್ರದಿಂದ ಕೆಲವು ಕಂಬನಿಗಳು ಭುವಿಯ ಮೇಲೆ ಬಿದ್ದ ಪರಿಣಾಮದಿಂದಲೇ “ರುದ್ರಾಕ್ಷಿ ವೃಕ್ಷ” ಹುಟ್ಟಿತೆಂದು ಹೇಳಲಾಗುತ್ತದೆ.
15
ಫೆಬ್ರ

15
ಫೆಬ್ರ

ಪ್ರಾದೇಶಿಕ ಪಕ್ಷಗಳಿಗೆ ಇಲ್ಲಿ ನೆಲೆಯಿಲ್ಲ

-ರಾಕೇಶ್ ಎನ್ ಎಸ್

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಿ ರಾಜಕೀಯವಾಗಿ ವಿಶೇಷ ಆದ್ಯತೆಯಿದೆ. ಆ ರಾಜ್ಯಗಳಲ್ಲಿನ ರಾಜಕೀಯ ಸಂರಚನೆ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಅಥವಾ ಸಂಚಲನ ಸೃಷ್ಟಿಸುವ ಆವುಗಳ ಸಾಮರ್ಥ್ಯದಿಂದಾಗಿಯೇ ಆ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಏನನ್ನೂ ಬೇಕಾದರೂ ನಾವು ಕಿತ್ತುಕೊಳ್ಳುತ್ತೇವೆ ಎಂಬ ದಾರ್ಷ್ಟ್ಯ ಅನಾಮತ್ತಾಗಿಯೇ ಸಿಕ್ಕಿದೆ. ಹಾಗೆಯೇ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗಳು ಕೂಡ ತಮ್ಮ ’ಗೌರವ’ ಮೂರಾಬಟ್ಟೆಯಾದರೂ ಪರವಾಗಿಲ್ಲ ಆ ರಾಜ್ಯಗಳ ತಂಟೆಗೆ ಮಾತ್ರ ಹೋಗದೆ ಅಲ್ಲಿನ ನಾಯಕರನ್ನು ಓಲೈಸಿಕೊಂಡೇ ರಾಜಕಾರಣ ಮಾಡುತ್ತವೆ.ಇದಕ್ಕೆಲ್ಲ ಕಾರಣವೇನು? ಕರ್ನಾಟಕದಲ್ಲಿರದ್ದು ಆ ರಾಜ್ಯಗಳಲ್ಲಿ ಏನಿದೆ? ನಮ್ಮ ರಾಜ್ಯದೊಳಗೆ ಘರ್ಜಿಸುವ ಸಿಂಹಗಳಿಗೆ ರಾಜ್ಯದ ಗಡಿ ದಾಟಿದೊಡನೆ ಕವಡೆ ಕಿಮ್ಮತ್ತು ಸಿಗದಿರಲು ಕಾರಣವೇನು? ದೆಹಲಿಯಲ್ಲಿ ರಾಜ್ಯದ ನೋವಿಗೆ ದನಿ ಸಿಗುತ್ತಿಲ್ಲವೇಕೆ ಅಥವಾ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅವಿರತವಾಗಿ ಅನ್ಯಾಯ ಏಕೆ ಆಗುತ್ತಿದೆ? ಇದಕ್ಕಿರುವ ಏಕೈಕ ಉತ್ತರ ನಮ್ಮಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಇಲ್ಲದಿರುವುದು.ತನ್ನ ರಾಜ್ಯದ ಹಿತ ಕಾಯುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ರಾಜ್ಯ ಎಂಬ ಹೆಗ್ಗಳಿಕೆ ತಮಿಳುನಾಡಿಗೆ ಸುಮ್ಮ ಸುಮ್ಮನೆ ಸಿಕ್ಕಿಲ್ಲ. ಅಲ್ಲಿನ ಎರಡು ಪ್ರಬಲ ರಾಜಕೀಯ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಎದುರು ಹಾಕಿಕೊಳ್ಳುವ ಧೈರ್ಯ ರಾಷ್ಟ್ರೀಯ ಪಕ್ಷಗಳಿಗಿಲ್ಲ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹುಟ್ಟಿಕೊಂಡದ್ದು ಮತ್ತು ಪ್ರಾದೇಶಿಕ ಅನನ್ಯತೆಯನ್ನು ಉಳಿಸುವುದಕ್ಕಾಗಿನ ಹೋರಾಟ ಮತ್ತು ಲಾಬಿ ರಾಜಕಾರಣ ಹುಟ್ಟಿಕೊಂಡದ್ದೆ ತಮಿಳುನಾಡಿನಿಂದ.  ಮತ್ತಷ್ಟು ಓದು »
14
ಫೆಬ್ರ

ಪ್ರೀತಿ, ಸಿನಿಮಾ ಮತ್ತು ಫೇಸ್ ಬುಕ್

-ರಶ್ಮಿ ಕಾಸರಗೋಡು

ಶೀರ್ಷಿಕೆ ನೋಡಿದ ಕೂಡಲೇ ವಿಷಯ ಏನೂಂತಾ ನಿಮಗೆ ಗೊತ್ತಾಗಿರಬೇಕು ಅಲ್ವಾ? ಹೌದು ಇವತ್ತು ವ್ಯಾಲೆಂಟೈನ್ಸ್ ಡೇ(ಪ್ರೇಮಿಗಳ ದಿನ). ಪಾಶ್ಚಾತ್ಯರಿಂದ ಬಳುವಳಿಯಾಗಿ ಸಿಕ್ಕ ಈ ಆಚರಣೆ ಭಾರತದಲ್ಲಿ ಇಂದು ಗಣರಾಜ್ಯೋತ್ಸವ, ಶಿವರಾತ್ರಿಯಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರೆ ತಪ್ಪಾಗಲಾರದು. ಪ್ರೇಮಿಗಳ ದಿನ ಎಂದ ಕೂಡಲೇ ಪ್ರೀತಿಸಲು ಪ್ರತ್ಯೇಕ ದಿನ ಬೇಕಾ? ಅದೊಂದಿನ ಪ್ರೀತಿ ಮಾಡಿದರೆ ಸಾಕಾ? ಕೆಂಪು ಗುಲಾಬಿ ಕೊಟ್ಟು ಐ ಲವ್ ಯೂ ಅಂತಾ ಹೇಳಿ ಇಲ್ಲವೇ ದುಬಾರಿ ಗಿಫ್ಟ್, ಕಾರ್ಡ್ ಕೊಟ್ಟು ಪಾರ್ಕ್ ಸಿನಿಮಾ ಸುತ್ತಾಡಿ ವ್ಯಾಲೆಂಟೈನ್ಸ್ ಡೇ ಆಚರಿಸುವ ಪಾಶ್ಚಾತ್ಯರ ಪ್ರೇಮದ ಹುಚ್ಚು ಭಾರತೀಯರಾದ ನಮಗ್ಯಾಕೆ ಬೇಕು? ಎಂಬ ಪ್ರಶ್ನೆ ಪ್ರತೀ ವ್ಯಾಲೆಂಟೈನ್ಸ್ ಡೇ ದಿನದಂದು ಕೇಳಿ ಬರುತ್ತದೆ. ಈ ಬಗ್ಗೆ ಮಾಧ್ಯಮಗಳು ಸಾಕಷ್ಟು ಚರ್ಚೆಗಳನ್ನು ನಡೆಸಿದರೆ, ಕೆಲವೊಂದು ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ವಿರೋಧಿಸಿ ಎಂಬ ಘೋಷಣೆಗಳನ್ನು ಕೂಗುತ್ತವೆ. ಆದರೂ ಭಾರತದಲ್ಲಿ ವ್ಯಾಲೆಂಟೈನ್ಸ್ ಆಚರಣೆ ಮುಂದುವರಿಯುತ್ತಲೇ ಇದೆ. ಯಾಕೆಂದರೆ ಇಂತಹ ಚರ್ಚೆ, ಪ್ರತಿಭಟನೆಗಳಿಂದಲೇ ವ್ಯಾಲೆಂಟೈನ್ಸ್ ಡೇ ಇನ್ನಷ್ಟು ಪ್ರಚಾರ ಗಿಟ್ಟಿಸಿಕೊಂಡಿವೆ ಎಂದರೆ ತಪ್ಪಾಗಲಾರದು.

ಪ್ರತೀವರ್ಷ ಫೆ.14 ಬಂತೆಂದರೆ ಸಾಕು…ಪಾರ್ಕ್, ಸಿನಿಮಾ ಹಾಲ್ ಎಲ್ಲೆಡೆಯೂ ಪ್ರೇಮಿಗಳ ಕಲರವ. ಪ್ರೀತಿಯ ಮೆಸೇಜ್್ಗಳಿಂದ ತುಂಬಿ ತುಳುಕುವ ಐನ್್ಬಾಕ್ಸ್, ಈ ಮೇಲ್, ಗಿಫ್ಟ್… ಬೆಳಗ್ಗಿನಿಂದ ರಾತ್ರಿ ವರೆಗಿನ ಸಮಯ ಪ್ರೇಮಮಯ!
ಮತ್ತಷ್ಟು ಓದು »

14
ಫೆಬ್ರ

ಪ್ರೇಮಿಗಳ ದಿನಕ್ಕೆ ಎರಡು ಪತ್ರಗಳು

-ಮೋಹನ್ ಕೊಳ್ಳೇಗಾಲ

ಪ್ರೀತಿಯ ಮಗಳೇ…

ಯಾಕೋ ಮನಸ್ಸಿಗೆ ಕಿಂಚಿತ್ತೂ ಸಮಧಾನವಿಲ್ಲ. ನಿನ್ನೆಯಿಂದಲೂ ತುಂಬಾ ಜ್ವರ ಇದೆ. ದೇಹ ಒಂದೇ ಸಮನೆ ಕಂಪಿಸುತ್ತಿದೆ. ನಿನ್ನದೇ ನೆನಪು. ಈ ಮನೆಯ ಪ್ರತಿ ಆಟಿಕೆ ಸಾಮಾನುಗಳು ನಿನ್ನ ಮುಖ ತೋರುತ್ತಿವೆ. ಪ್ರತೀ ವಸ್ತುವಿನಲ್ಲೂ ನಿನ್ನ ಆಸೆ, ಕಾತುರ, ಜಿಪುಣತನವೆದ್ದು ಕಾಣುತ್ತಿದೆ. ‘ನಿನ್ನ ಭಾವಚಿತ್ರ ನೋಡಿದಾಗ ದುಖ ಉಮ್ಮಳಿಸಿ ಉಮ್ಮಳಿಸಿ ಬಂದು ಸಾಂತ್ವನದ ಶಕ್ತಿ ಇಲ್ಲದೇ, ಕಣ್ಣೀರ ಕಟ್ಟೆ ಒಡೆದು ಸುಮ್ಮನೇ ಅಳುತ್ತೇನೆ. ನಿನ್ನೆ ಅಪ್ಪ ನಿನ್ನ ಬಾಲ್ಯದ ತುಂಟು ಹಾವಭಾವಗಳ ಫೋಟೋಗಳನ್ನು ನೋಡಿಕೊಂಡು ಅಳುತ್ತಿದ್ದರು. ನೀನು ಕಿಸಕ್ಕೆಂದು ನಕ್ಕಿದ್ದ ಒಂದು ಫೋಟೋ ನೋಡಿಕೊಂಡು ನಕ್ಕು ನಕ್ಕು ಕಣ್ಣೀರು ಸುರಿಸುತ್ತಿದ್ದರು. ನನ್ನ ಮಗಳಷ್ಟು ಚಂದ ಯಾರೂ ಇಲ್ಲ, ಅವಳ ನಗುವಿಗೆ ಸಾಟಿಯೇ ಇಲ್ಲ, ಅವಳ ಮಧುರ ಒಡನಾಡದಲ್ಲಿಯೇ ನಾನು ಇಷ್ಟು ದಿನ ಬದುಕಿದ್ದೆ ಎಂದು ಪೇಚುತ್ತಿದ್ದರು. ಇತ್ತೀಚೆಗಂತೂ ಕುಡಿತ, ಸಿಗರೇಟ್ ಸೇವನೆ ಜಾಸ್ತಿಯಾಗಿದೆ. ಪ್ರಶ್ನೆ ಮಾಡಲು ನೀನೇನು ನನ್ನ ಮಗಳೇ ಎಂದು ನನ್ನ ಮೇಲೆಯೇ ರೇಗುತ್ತಾರೆ. ಒಮ್ಮೊಮ್ಮೆ ನನ್ನ ತೊಡೆಯ ಮೇಲೆ ಮಲಗಿಕೊಂಡು, ನಿನ್ನನ್ನು ಓದಿಸಲು ಅವರು ಪಟ್ಟ ಶ್ರಮ, ಬ್ಯಾಂಕ್ ಲೋನ್, ನಿನ್ನನ್ನು ದೂರದ ಕಾಲೇಜಿಗೆ ಸೇರಿಸುವಾಗ ಅನುಭವಿಸಿದ ಒಳನೋವು, ಜೊತೆಗೆ ಆ ಕಾಲೇಜಿನಲ್ಲಿ ನಿನಗಾಗಿದ್ದ ತೊಂದರೆಗೆ ಪ್ರಾಚಾರ್ಯರೊಡನೆ ರೇಗಿದ್ದು, ಕಾರ್ ಮಾಡಿಕೊಂಡು ಬಂಧುಬಳಗವನ್ನೆಲ್ಲ ಕೂಡಿಸಿಕೊಂಡು ನಿನ್ನನ್ನು ನೋಡಲು ಪರಿಸೆ ಕಟ್ಟಿಕೊಂಡು ಬಂದಿದ್ದು, ಎಲ್ಲವನ್ನೂ ಸಾವಧಾನವಾಗಿ ಹೇಳಿ ನಿರಾಳರಾಗಿ, ಒಮ್ಮೆ ಬದುಕಿನ ಬೇಜವಾಬ್ದಾರಿಯೆಡೆಗೆ ನಗುತ್ತಾರೆ.

ಮತ್ತಷ್ಟು ಓದು »

14
ಫೆಬ್ರ

ಪ್ರೇಮಿಗಳ ದಿನ ಪೆಸೆಲ್

-ಕೋಮಲ್ ಕುಮಾರ್

ನಮ್ಮ ಸುಬ್ಬ, ಗೌಡಪ್ಪನ ಮಗಳು ರಂಗಮ್ಮಂಗೆ ಕಾಳು ಹಾಕ್ತಾ ಇದ್ದ. ಅದೂ ಒಂದು ಸ್ವಲ್ಪ ದಿನ ಆದ ಮೇಲೆ ತಿಂದಿತ್ತು. ಬಡ್ಡೆಐದ ಇದರ ಬಗ್ಗೆ ನಮಗೆ ಹೇಳೇ ಇರಲಿಲ್ಲ. ಬೆಳಗ್ಗೆನೇ ದೊಗಲೆ ಚೆಡ್ಡಿ, ಬನೀನು ಹಾಕ್ಕಂಡು ಗೌಡಪ್ಪನ ಮನೆಗೆ ಹೋಗೋನು. ಯಾಕ್ಲಾ ಅಂದ್ರೆ, ಪೇಪರ್ ಓದಿ, ಬುದ್ದಿ ಹೆಚ್ಚಿಸಿಕೊಳ್ಳೋಕೆ ಹೋಯ್ತೀನಿ ಅನ್ನೋನು. ಬಡ್ಡೆಐದ ಸಿಸುವಿಹಾರಕ್ಕೆ ಸಾಲೆಗೆ ಹೋಗೋದು ಬಿಟ್ಟಿದ್ದ. ಆಮ್ಯಾಕೆ ಗೊತ್ತಾತು ರಂಗಿ ಸಗಣಿ ಸಾರಿಸಿ ರಂಗೋಲಿ ಹಾಕೋ ಟೇಮಿಗೆ ಹೋಯ್ತಾನೆ ಅಂತ. ಏನು ಇವತ್ತು ಸಗಣಿ ಫ್ರೆಸ್ಸಾ ಅನ್ನೋನು. ಅದಕ್ಕೆ ಅದು, ಇಲ್ಲಾ ಓಲ್ಡ್ ಸ್ಟಾಕ್, ಯಾಕೆ ಪ್ರೆಷ್ ವಾಸನೆ ಬಂತಾ ಅನ್ನೋದು. ಏಥೂ. ಯಾಕೆ ಸಗಣಿ ನೀರಾಗೈತೆ, ಇಲ್ಲಾ ನಮ್ಮ ಹಸಾಕ್ಕೆ ಮೂರು ದಿನದಿಂದ ಬೇಧಿ ಅನ್ನೋದು ರಂಗಿ. ರಂಗೋಲಿ ಸಾನೇ ಸಂದಾಗಿ ಬಿಡ್ತಿಯಾ, ನಿಂಗೆ ಇಸ್ಣು ಚಕ್ರ ಬರೆಯಕ್ಕೆ ಬತ್ತದಾ, ಹೂಂ ಭೂ ಚಕ್ರ ಇಟ್ಟು ಅದರ ಮ್ಯಾಕೆ ರಂಗೋಲಿ ಹಾಕಿ ಬೆಂಕಿ ಇಟ್ಟರೆ ಇಸ್ಣು ಚಕ್ರ ಆಯ್ತದೆ ಅನ್ನೋದು. ಇದು ಇವುಗಳ ಸಂಭಾಷಣೆ. ಬಡ್ಡೆಐದ ಗೌಡಪ್ಪ, ಬತ್ತಿದಾಗೆನೇ ಪೇಪರ್ ಓದೋ ತರಾ ನಾಟಕ ಮಾಡೋನು. ಏನ್ಲಾ ಇವತ್ತಿನ ಇಸ್ಯಾ ಸುಬ್ಬ ಅಂದ್ರೆ, ಯಡೂರಪ್ಪ ರಾಜೀನಾಮೆ ಕೊಟ್ಟವ್ರೆ ಅನ್ನೋನು. ಲೇ ಆ ವಯ್ಯನ ಕಿತಾ ಎಷ್ಟು ಸಲ ರಾಜೀನಾಮೆ ತಗೊಂತಾರೆ, ಒಂದು ಕಿತಾ ಕೊಟ್ಟರೆ ಸಾಲಕ್ಕಿಲ್ವಾ, ಇಲ್ಲಾ ಒಂದು ನೂರು ಜೆರಾಕ್ಸ್ ಮಾಡಿ ಕೊಡಕ್ಕೆ ಹೇಳಬೇಕು ಕಲಾ ಅಂತಿದ್ದ ಗೌಡಪ್ಪ. ನನ್ನ ರಾಸಿ ಫಲ ಏನು ಐತೆ ಅಂತಾ ಗೌಡಪ್ಪ ಅಂದ್ರೆ, ನಿಮಗೆ ಹೊರಿಕ್ಕೆ ಹೋದ್ರೆ ಧರ್ಮದೇಟು ಗ್ಯಾರಂಟಿಯಾ ಅಂತಿದ್ದಾಗೆನೇ, ಗೌಡಪ್ಪ ಪಂಚೆ ಎತ್ಕಂಡು ಒಳಿಕ್ಕೆ ಓಡೋನು.

ಮತ್ತಷ್ಟು ಓದು »

14
ಫೆಬ್ರ

ಪ್ರೀತ್ಸೋರ ದಿನ ಪ್ರೀತಿಗಾಗೆ ಇರ್ಲಿ……!!

-ಪವನ್ ಪಾರುಪತ್ತೇದಾರ

ಪ್ರವೀಣ್, ನಾ ಒಂದು ವಿಷ್ಯ ಹೇಳಲಾ ನಿಂಗೆ, ಬೇಜಾರ್ ಮಾಡ್ಕೊಬಾರದು, ನಿಂಗೆ ಬೆಜಾರಾಗೋಹಾಗಿದ್ರೆ  ನಾ  ಹೇಳಲ್ಲ ಅಂತ  ಕಾವ್ಯ  ಹೇಳಿದಾಗ  ಪ್ರವೀಣನಿಗೆ ಕಾವ್ಯಾಳ ಮನಸಿನಲ್ಲಿ ನನ್ನ ಬಗ್ಗೆ ನನಗೆ ಬೇಜಾರಾಗುವಂತಹವಿಷಯ  ಏನಿರಬಹುದು  ಎಂಬ  ಕುತೂಹಲ ತುತ್ತ ತುದಿ ಮುಟ್ಟಿತ್ತು. ಅದಕ್ಕೆ  ಕಾವ್ಯಳನ್ನ, ಹೇಳು ಕಾವ್ಯ ನೀನು  ಏನೇ  ಹೇಳಿದರು ನಾನು ಬೇಜಾರು  ಮಾಡಿಕೊಳ್ಳಲ್ಲ ಅಂದ, ಅದಕ್ಕೆ ಕಾವ್ಯ, ಪ್ರವೀಣ್ ನೀನು ಅಷ್ಟೇನೂ  ಚೆನ್ನಾಗಿಲ್ಲ ಕಣೋ, ಕುಳ್ಳ,  ಕಲರ್ ಕಮ್ಮಿ, ಸಣಕಲ ಕೂಡ, ಪೆರ್ಸೋನಾಲಿಟಿನೆ ಇಲ್ಲ ನೀನು, ಒಳ್ಳೆ  ಬಟ್ಟೆ  ಹಾಕ್ಕೊಳಲ್ಲ, ನೀನು ಐರನ್ ಮಾಡಿರೋ ಬಟ್ಟೆ ಹಾಕ್ಕೊಂಡು ಕಾಲೇಜಿಗೆ ಬಂದಿದ್ದಂತೂ  ನಾ ನೋಡೇ ಇಲ್ಲ, ಯಾವಾಗಲು ಗಲೀಜು ಬಟ್ಟೆ ಹಾಕಿರ್ತ್ಯ. ನಮಕ್ಕ ಮೊನ್ನೆ ನಿನ್ ವಿಷ್ಯ ಮನೇಲಿ ಮಾತಾಡೋವಾಗ ಇದೆಲ್ಲ  ಹೇಳಿದಳು, ನಂಗು ಹೌದು ನಿಜ ಅನ್ನಿಸಿತು. ಒಳ್ಳೆ ಮೊಬೈಲ್ ಫೋನ್ ಇಲ್ಲ ಆ  ಡಬ್ಬ  1100  ಎಷ್ಟ್  ಹಳೇದಾಗಿದೆ ನೋಡು. ಕೀ ಪ್ಯಾಡ್ ಎಲ್ಲಾ ಸಮದೋಗಿದೆ. ಪ್ರದೀಪ್ ಹತ್ರ ಟಚ್ ಸ್ಕ್ರೀನ್ ಮೊಬೈಲ್  ಇಸ್ಕೊಂಡು  ಅವನ girlfriend ಮೇಘ ವೀಡಿಯೊ ನೋಡ್ತಾ ಹಾಡು ಕೇಳ್ತಾ ಕೂತಿರ್ತಾಳೆ. ಬೇಕು ಬೇಕು ಅಂತಾನೆ ನಂಗೆ ಈ ಹಾಡು ಕೇಳೆಮ್ಮ, ಈ ವೀಡಿಯೊ ನೋಡೆಮ್ಮ ಅಂತ ತೋರ್ಸಿ ಹೊಟ್ಟೆ ಉರಿಸ್ತಾಳೆ. ಹೋಗ್ಲಿ  ಒಳ್ಳೆ ಬೈಕ್  ಆದರು  ಇಟ್ಕೊಂಡಿದ್ಯ, ಅದೂ ಇಲ್ಲ 2nd ಹ್ಯಾಂಡಲ್, ಸ್ಟಾರ್ಟ್ ಮಾಡಿದ್ರೆ ಇಡೀ ಕಾಲೇಜ್ ಗೆ  ಕೇಳುತ್ತೆ, ಪ್ಲೀಸ್  ಒಂದು  ಹೊಸ ಬೈಕ್ ಮತ್ತೆ ಮೊಬೈಲ್ ತೊಗೊಳೋ, ಇನ್ಮೇಲೆ ಒಳ್ಳೆ ಬಟ್ಟೆ ಹಾಕ್ಕೋ, iron ಮಾಡ್ಕೊಂಡು ಬಟ್ಟೆ ಹಾಕ್ಕೊಂಡು ಬಾ, ಜಿಮ್ ಗೆ ಹೋಗು ಸ್ವಲ್ಪ ದಪ್ಪ ಆಗು, fair  ಅಂಡ್ ಲವ್ಲೀ ಹಾಕ್ಕೋ ಆಯ್ತಾ??.  ನನಗೋಸ್ಕರ  ಇಷ್ಟ  ಮಾಡ್ತ್ಯ  ತಾನೇ  ಅಂದಾಗ  ಪ್ರವೀಣನಿಗೆ ಆ ಕ್ಷಣದಲ್ಲಿ ಏನು ಉತ್ತರ  ಕೊಡಬೇಕು ಗೊತ್ತಾಗಿಲ್ಲ. ಸರಿ ಕಾವ್ಯ ನೀನು ಹೇಳಿದ  ಹಾಗೇ  ಮಾಡ್ತೀನಿ  ಅಂತ ಫೋನ್ ಕಟ್ ಮಾಡಿದ.
14
ಫೆಬ್ರ

ಗೆಳತಿಗೊಂದು ಪತ್ರ, ಪ್ರೇಮದ ಗುಂಗಲ್ಲಿ

– ಪ್ರಸಾದ್.ಡಿ.ವಿ.

ನಿನ್ನ ನೆನಪುಗಳು ಒತ್ತರಿಸಿ ಬರುವಾಗ ನಿನಗೇನಾದರು ಉಡುಗೊರೆ ಕೊಡಬೇಕೆಂದು ಯೋಚಿಸುತ್ತಿದ್ದೆ. ಆಗ ನೆನಪಿಗೆ ಬಂತು, ಅಯ್ಯೋ ನಾನೆಂತ ಪ್ರೇಮಿ? ಪ್ರೀತಿಸಿ ನಾಲ್ಕು ವರ್ಷಗಳಾಗಿವೆ ನಾನು ನಿನಗಾಗಿ ಒಂದೂ ಪ್ರೇಮಪತ್ರವನ್ನು ಬರೆಯಲಿಲ್ಲವಲ್ಲ. ಇಂದು ಫೆಬ್ರವರಿ ೧೪, ಅದೇನೊ ’ಪ್ರೇಮಿಗಳ ದಿನ’ವಂತೆ. ಕೆಲವರು ’ಫೆಬ್ರವರಿ ೧೪ ರಂದು ಪ್ರೇಮಿಗಳ ದಿನವೆಂದು ಆಚರಿಸಕೂಡದು ಅದು ಪಾಶ್ಚಾತ್ಯ ಅನುಕರಣೆ. ನಿಜವಾದ ಪ್ರೇಮಿಗಳಿಗೆ ದಿನವೂ ಪ್ರೇಮೋತ್ಸವವೆ’ ಎಂದು ಬೊಂಬಡ ಬಜಾಯಿಸುತ್ತಾರೆ. ಇನ್ನೂ ಕೆಲವರು ’ನಮ್ಮ ಯಾಂತ್ರಿಕ ಬದುಕಿನಲ್ಲಿ ಭಾವನೆಗಳಿಗೆ ಮತ್ತು ಮಾನವೀಯ ಮೌಲ್ಯಗಳಿಗೆ ಸ್ಥಾನವೇ ಇರುವುದಿಲ್ಲ, ಕೊಡಲು ನಮಗೆ ಸಮಯವೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರೇಮವನ್ನು ಮಾತ್ರ ಆಚರಿಸಲು, ಎಲ್ಲೆಂದರಲ್ಲಿ ಕೆಂಪು ಗುಲಾಬಿಗಳು ಮತ್ತು ಬಲೂನ್ ಗಳಿಂದ ಇಡೀ ಪ್ರಪಂಚ ತನ್ನನ್ನೇ ತಾನು ಸಿಂಗರಿಸಿಕೊಂಡು ಹಬ್ಬದಂತೆ ಕಣ್ಣಿಗಾನಂದ ನೀಡುವ ’ಪ್ರೇಮಿಗಳ ದಿನ’ ದ ಆಚರಣೆ ಬೇಡವೇಕೆ?’ ಎಂದು ಜಾಗಟೆ ಬಾರಿಸುತ್ತಾರೆ. ಬೊಂಬಡವಾದರೂ ಸರಿಯಾಗಲಿ, ಜಾಗಟೆಯಾದರೂ ಸರಿಯಾಗಲಿ ನಮಗೇಕೆ ಅವುಗಳ ಗೌಜು ಗದ್ದಲ ಅಲ್ಲವೆ? ನಾನಂತು ತೀರ್ಮಾನಿಸಿದೆ ನಿನಗೊಂದು ಪ್ರೇಮಪತ್ರ ಬರೆದು ಮತ್ತೊಮ್ಮೆ ಪ್ರೇಮಿಯಾಗುತ್ತೇನೆ.

ಮತ್ತಷ್ಟು ಓದು »

13
ಫೆಬ್ರ

ಯಶಸ್ಸಿನ ಹೋರಾಟದ ನಡುವೆ ಇನ್ನೊಂದು ಟಿವಿ

-ಕಾಲಂ ೯

HR ರಂಗನಾಥ್‍ರವರ ಬಹು ನಿರೀಕ್ಷಿತ ಪಬ್ಲಿಕ್ ಟಿವಿಯ ಆರಂಭದೊಂದಿಗೆ ಕನ್ನಡ ಮಾಧ್ಯಮ ಜಗತ್ತು ಒಂದು ಸುತ್ತಿ ಪೂರ್ಣಗೊಳಿಸಿದಂತಾಗಿದೆ. ‘ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ’ ಇದು ಕೇವಲ ಘೋಷಣೆಯ ಮಾತಲ್ಲ, ರಂಗನಾಥ್ ತಮ್ಮ ಚಾನೆಲ್ಗಾಗಿ ಹಣ ಹೂಡಿದವರ ವಿವರವನ್ನೂ ಕೊಡುವುದಾಗಿ ಹೇಳಿಕೊಂಡಿದ್ದಾರೆ.

ರಂಗನಾಥ್ ಪುನರಾಗಮನದೊಂದಿಗೆ ಪಕ್ಕಕ್ಕೆ ಸರಿದವರೆಲ್ಲ ಮಾಧ್ಯಮದ ಮುಖ್ಯ ಭೂಮಿಕೆಗೆ ಬಂದಂತಾಗಿದೆ. ರಂಗನಾಥ್, ದೈತೋಟ, ವಿಶ್ವೇಶ್ವರ ಭಟ್, ಶಿವಸುಬ್ರಹ್ಮಣ್ಯ, ಜೋಗಿ, ರವಿ ಹೆಗಡೆ, ಜಿ ಎನ್ ಮೋಹನ್, ತಿಮ್ಮಪ್ಪ ಭಟ್, ಪೂರ್ಣಿಮಾ ಹೀಗೆ ಕಳೆದ ವರ್ಷ ಪಕ್ಕಕ್ಕೆ ಸರಿದವರ ಉದ್ದದ ಪಟ್ಟಿಯೇ ಇತ್ತು. ಈಗ ಈಶ್ವರ ದೈತೋಟ ಬಿಟ್ಟರೆ ಮತ್ತೆಲ್ಲರೂ ಮಾಧ್ಯಮದ ಮುಖ್ಯ ಜವಾಬ್ದಾರಿಗಳಿಗೆ ಬಂದಂತಾಗಿದೆ. ವರ್ಷವಿಡೀ ಅನೇಕ ಪಲ್ಲಟಗಳಿಗೆ ಸಾಕ್ಷಿಯಾಗಿದ್ದ ಕನ್ನಡ ಮಾಧ್ಯಮ ಜಗತ್ತು ಇದೀಗ ಸ್ಥಿರಗೊಂಡಿದೆ ಎನ್ನಬಹುದು. ನಿಜವಾದ ಪೈಪೋಟಿಯ ದಿನಗಳನ್ನು ಮುಂದೆ ನಿರೀಕ್ಷಿಸಬಹುದು.

ಕಳೆದ ಐದು ವರ್ಷಗಳ ಮಾಧ್ಯಮ ಬೆಳವಣಿಗೆಯನ್ನು ಗಮನಿಸಿದರೆ ಅನೇಕ ಹೊಸ ಸುದ್ದಿವಾಹಿನಿಗಳು ಬಂದಿವೆ. ದಿನಪತ್ರಿಕೆಗಳ ಹೊಸ ಎಡಿಷನ್‍ಗಳು ಆರಂಭಗೊಂಡಿವೆ. ಪೂರ್ಣ ಪ್ರಮಾಣದ ಯಶಸ್ಸಿನ ಕಥೆಯಾಗಿ ಎಲ್ಲರೆದುರು ನಿಂತಿರುವುದು ವಿಜಯ ಕರ್ನಾಟಕ, ಟಿವಿ9 ಮಾತ್ರ. ಸುವರ್ಣ ಸ್ಯೂಸ್ ಸಕಷ್ಟು impact ಮಾದಿದರೂ ‘ಯಶಸ್ಸಿನ ಕಥೆ’ ಎಂದು ಹೇಳುವಂತಿಲ್ಲ. ಮತ್ತಷ್ಟು ಓದು »

13
ಫೆಬ್ರ

ಕಾಂಗ್ರೆಸಿಗರು ತಮ್ಮ ’ಕೈ’ಯಲ್ಲಿ ತೊಳದದ್ದೇನನ್ನು ಹಾಗು ಬಳಿದದ್ದೇನನ್ನು ?

-ಅರುಣ್ ಕಶ್ಯಪ್

ಬಿಜೆಪಿ ಸಚಿವತ್ರಯರ ವಿರುದ್ದ ಮಂಗಳೂರಿನಲ್ಲಿ ಪ್ರತಿಭಟಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು ಬೆಂಗಳೂರಿನ ವಿಧಾನಸೌಧದ ಚಿತ್ರದ ಬದಲಾಗಿ, ಅದೇ ರೀತಿ ಕಾಣುವ ಮೈಸೂರಿನ ಲಲಿತ ಮಹಲ್ ಅರಮನೆಯ (ಹೋಟೆಲ್) ಚಿತ್ರವನ್ನು ಶುಚಿಗೊಳಿಸಿ ಪ್ರತಿಭಟನೆ ನಡೆಸಿದರು. !!!  ಪ್ರತಿಭಟನೆ ನಡೆಸಿದವರನ್ನು ಕೇಳಿದರೆ ಈ ಚಿತ್ರವನ್ನು ಮಂಗಳೂರಿನ ಲ್ಯಾಬ್ ಒಂದರಿಂದ ಕಾರ್ಯಕರ್ತರೊಬ್ಬರು ತೆಗೆದುಕೊಂಡು ಬಂದಿದ್ದರು. ಗೂಗಲ್ ನಲ್ಲಿ ವಿಧಾನಸೌಧಕ್ಕೆ ಸಂಬಂಧಿಸಿದ 14 ಬೇರೆ ಬೇರೆ ಮಾದರಿಯ ಚಿತ್ರಗಳಿದ್ದು ಅದರಿಂದ ಒಂದನ್ನು ಆಯ್ದು ಮುದ್ರಿಸಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ವರ್ಷ ಸದನದಲ್ಲೇ ಇವರ ನಾಯಕರು ಮಾಂಸದೂಟ ಮಾಡಿ ಅಗೌರವ ತೋರಿದ ಮೇಲೆ ಇನ್ನು ಇವರ ಬೆಂಬಲಿಗರಿಗೆ ವಿಧಾನಸೌಧ ಪಂಚತಾರ ಹೋಟೇಲ್ ನಂತೆ ಕಾಣುತ್ತಿರುವುದು ತಪ್ಪೇನಿಲ್ಲ ಬಿಡಿ.

ಹಾಗು….
ಮತ್ತಷ್ಟು ಓದು »