ವಿಷಯದ ವಿವರಗಳಿಗೆ ದಾಟಿರಿ

Archive for

17
ಮಾರ್ಚ್

ರಿಲಿಜನ್ನಿನ ಅಫೀಮು “ಶಂಕರಾಚಾರ್ಯ ಹಿಲ್” ಅನ್ನು “ತಖ್ತ್-ಈ-ಸುಲೇಮಾನ್” ಆಗಿಸುತ್ತದೆ

ರಾಕೇಶ್ ಶೆಟ್ಟಿ

ಶಂಕರಾಚಾರ್ಯ ಹಿಲ್ಬೆಳಗ್ಗೆ ಎದ್ದು ನಮ್ಮಲ್ಲಿ ಕೆಲವರು ಹೇಳುತಿದ್ದ “ನಮಸ್ತೆ ಶಾರದ ದೇವಿ ಕಾಶ್ಮಿರಪುರವಾಸಿನಿ||” ಅನ್ನುವ ಉದ್ಘೋಷವನ್ನು ಇನ್ಮುಂದೆ ಬದಲಾಯಿಸಬೇಕಾದ ಅನಿವಾರ್ಯತೆ ಬರಬಹುದು ಅನ್ನಿಸುತ್ತಿದೆ.ಯಾಕೆಂದರೆ, ನಮ್ಮ ’ಭಾರತೀಯ ಪುರಾತತ್ವ ಇಲಾಖೆ’ ಮಾಡುತ್ತಿರುವ ಕೆಲಸವೇ ಅಂತದ್ದು.

ಟ್ರಿಬ್ಯೂನ್ ಪೇಪರಿನಲ್ಲಿ ಬಂದ ವರದಿಯ ಪ್ರಕಾರ,ಜಮ್ಮು-ಕಾಶ್ಮೀರದ “ಶಂಕರಾಚಾರ್ಯ ಹಿಲ್” ಅನ್ನು ಭಾರತೀಯ ಪುರಾತತ್ವ ಇಲಾಖೆ “ತಖ್ತ್-ಈ-ಸುಲೇಮಾನ್” ಅಂತ ಬದಲಾಯಿಸಿದೆ.ಕಾಶ್ಮೀರವನ್ನು ಈ ಹಿಂದೆ ಶಾರದ ದೇಶ,ಶಾರದ ಪೀಠ ಅಂತೆಲ್ಲ ಕರೆಯುತಿದ್ದರು.ಮೇಲೆ ಹೇಳಿದ್ದ “ನಮಸ್ತೆ ಶಾರದ ದೇವಿ ಕಾಶ್ಮಿರಪುರವಾಸಿನಿ||” ಅದನ್ನೇ ಸಾರುತ್ತಿದೆ.ಇನ್ನು ಶಂಕರಾಚಾರ್ಯರು ದೇಶದ ನಾಲ್ಕು ಮೂಲೆಗಳಿಗೂ ಸಾಗಿ ಶಾರದ ಪೀಠಗಳನ್ನು ಸ್ಥಾಪಿಸಿದ್ದು ಎಲ್ಲರಿಗೂ ತಿಳಿದಿರುವುದೇ,ಹಾಗಿದ್ದ ಮೇಲೆ,ಇವನೆಲ್ಲಿಂದ ಬಂದ ಸುಲೇಮಾನ್?

ದಾಲ್ ನದಿಯ ಕಡೆಗೆ ಮುಖಮಾಡಿ ನಿಂತಿರುವ ಈ ಪರ್ವತವಿರುವುದು ಶ್ರೀನಗರದಲ್ಲಿ.ಇದೇ ಜಾಗದಲ್ಲಿ ಆದಿ ಶಂಕರಾಚಾರ್ಯರು 788-820 ADರಲ್ಲಿ ನೆಲೆಸಿದ್ದರು ಅನ್ನುತ್ತದೆ ಇತಿಹಾಸ.ಪಂಡಿತ್ ಆನಂದ್ ಕೌಲ್ ಅವರ ಪ್ರಕಾರ ಈ ದೇವಸ್ಥಾನದ ನಿರ್ಮಾಣ ಮಾಡಿದ್ದು ಸಂಡಿಮನ್ ಎಂಬುವವ 2629 -2564 BC ಯಲ್ಲಿ.ಆ ನಂತರ ರಾಜ ಗೋಪಾದಿತ್ಯ 426–365 BCರಲ್ಲಿ ಮತ್ತು ರಾಜ ಲಲಿತಾಧಿತ್ಯ 697–734BC ರಲ್ಲಿ ಇದರ ಪುನುರುಜ್ಜೀವನ ಮಾಡಿಸಿದ್ದರು.ಝೈನ್-ಉಲ್-ಅಬಿದ್ದೀನ್ ಅವರು ದೇವಸ್ಥಾನದ ಮೇಲ್ಛಾವಣಿಯನ್ನು ದುರಸ್ತಿ ಮಾಡಿಸಿದ್ದರು.1841–1846ರಲ್ಲಿ ಸಿಖ್ ಗವರ್ನರ್ ಶೇಕ್ ಗುಲಾಂ ಮೊಹಿದುದ್ದೀನ್ ಕೂಡ ದುರಸ್ತಿ ಮಾಡಿಸಿದ್ದರು.ಇದನ್ನು ಜ್ಯೋತೇಶ್ವರ ದೇವಸ್ಥಾನವೆಂದು ಕರೆಯಲಾಗುತಿತ್ತು.ಬೌದ್ಧರಿಗೂ ಪೂಜ್ಯನೀಯವಾದ ಸ್ಥಳವಿದು.ಅವರಿದನ್ನು ಪಾರಸ್- ಪಹಾರ್ ಅನ್ನುತ್ತಾರೆ.ಶಂಕರರು ಇಲ್ಲಿ ಶಿವಲಿಂಗ ಪ್ರತಿಷ್ಟಾಪಿಸಿದ್ದರು.ಶಂಕರರು ಇಲ್ಲಿ ಬಂದನಂತರ,ಈ ಪರ್ವತ ಮತ್ತು ದೇವಸ್ಥಾನವನ್ನು ಶಂಕರಾಚರ್ಯರ ಹೆಸರಿನಿಂದಲೇ ಗುರಿತಿಸಲಾಗುತ್ತಿದೆ.

ಮತ್ತಷ್ಟು ಓದು »