ವಿಷಯದ ವಿವರಗಳಿಗೆ ದಾಟಿರಿ

Archive for

29
ಮಾರ್ಚ್

ಪೋಲಿಸ್ ಸಿಬ್ಬಂದಿ ಮತ್ತು ಚುನಾವಣೆಗಳ ನಡುವೆ

– ಬೆಳ್ಳಿ

ಪೋಲಿಸ್ ಸಮಸ್ಯೆಗಳುಈಗ ಎಲ್ಲೆಲ್ಲೂ ಚುನಾವಣೆಯ ಅಬ್ಬರ.ಹಳ್ಳಿ ಹಳ್ಳಿ ಗಲ್ಲಿ ಗಲ್ಲಿಗಳಲ್ಲಿ ಚುನಾವಣೆಯ ಕಾವು ರಂಗೇರುತ್ತಿದೆ.ಎಲ್ಲರೂ ತಮ್ಮ ಪಾಡಿಗೆ ತಾವು ಹಾಯಾಗಿ ಜೀವನ ಸಾಗಿಸುತ್ತಿದ್ದರೆ,ಕಾನೂನು ಮತ್ತು ಸುವ್ಯವಸ್ಧೆಯ ಅಡಿಯಲ್ಲಿ ಬರುವ ಪೋಲಿಸ್ ವ್ಯವಸ್ಧೆ ಯಾವ ರೀತಿಯಾಗಿ ಅವರಿಗೆ ಒತ್ತಡಗಳಿದ್ರೂ ಕೆಲಸ ಮಾಡುತ್ತದೆಂದು ಯಾರಿಗೂ ಗೊತ್ತಿಲ್ಲ.ಅವರು ನಾಮಪತ್ರ ಸಲ್ಲಿಸುವುದರಿಂದ ಹಿಡಿದು ಚುನಾವಣೆಯ ಫಲಿತಾಂಶ ಬರುವವರೆಗೂ ಸತತವಾಗಿ ಎರಡು ತಿಂಗಳುಗಳ ಕಾಲ ಹಗಲಿರುಳೆನ್ನದೆ ದುಡಿಯುತ್ತಾರೆ.ಚುನಾವಣೆ ಸಮೀಪ ಬಂತೆಂದರೆ ಸಾಕು ಯಾರು ಒಂದು ತಿಂಗಳು ಕಾಲ ರಜೆ ಕೇಳಬಾರದೆಂಬ ಆದೇಶ ಹೊರಡಿಸಿಬಿಟ್ಟಿರುತ್ತಾರೆ.ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಮಾತ್ರ ರಜೆ ಕೇಳಬೇಕು.ಅದೂ ಸಹ ಎಸ್.ಪಿ.ಸರ್ ಅಪ್ಪಣೆ ನೀಡಬೇಕು.

ಇದು ಹಿಂಗಾದರೆ,ಚುನಾವಣೆಯ ಕಾಲಕ್ಕೆ ಯಾವುದೋ ಹಳ್ಳಿಗೆ ಕರ್ತವ್ಯ ಬಂದಿರುತ್ತೆ.ನಮಗೆ ಮೈಯಲ್ಲಿ ಆರಾಮ ಇಲ್ಲದಿದ್ರೂ,ಅಥವಾ ಮನೆಯಲ್ಲಿ ಗಂಡ,ಅತ್ತೆ,ಮಾವ,ಮಕ್ಕಳಗೆ,ಹೆಂಡತಿಗೆ ಮೈಯಲ್ಲಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿ ಸೇರಿದ್ರೂ ಎಲ್ಲ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು.ಮನೆಯ ಕಡೆ ವಿಷಯ ತಿಳಿದುಕೊಳ್ಳೋಣವೆಂದರೆ ಅಲ್ಲಿ ಮೊಬೈಲ್ ನೆಟ್ ವರ್ಕ್ ಬರೋಲ್ಲ.ಅದೇ ಒತ್ತಡಗಳ ಜೊತೆಗೆ ಹಳ್ಳಿಗೆ ಹೋಗಿ ಕೊಟ್ಟಿರುವ ಬೂತ್ ಎನ್ನುವ ಭೂತ ಬಂಗಲೆಗೆ ಕಾಲಿಟ್ಟಾಗ ಮೊದಲು ಅದು ಆ ಗ್ರಾಮದ ಸಾರ್ವಜನಿಕರೆಲ್ಲರ ಶೌಚಾಲಯದ ತಾಣ.ಚುನಾವಣೆಯ ವೇಳೆಯಲ್ಲಿ ಗಿಡ ಕಂಟಿ ಕಡಿದು ಅಲ್ಲಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ,ಒಂದೇ ಒಂದು ಕೋಣೆ ರೆಡಿ ಮಾಡಿ,ಅದರಲ್ಲಿ 60 ವೋಲ್ಟೆಜಿನ ಬಲ್ಬ್ ಹಾಕುತ್ತಾರೆ.ನಲವತ್ಮೂರರಿಂದ ನಲವತ್ತೈದು ಡಿಗ್ರಿ ಬಿಸಿಲ ಧಗೆಯಲ್ಲಿ ಹ್ಯಾಗೆ ಕರ್ತವ್ಯ ಮಾಡಬೇಕು.

ಮತ್ತಷ್ಟು ಓದು »