ವಿಷಯದ ವಿವರಗಳಿಗೆ ದಾಟಿರಿ

Archive for

13
ಮಾರ್ಚ್

ನಿನ್ನೆಗೆ ನನ್ನ ಮಾತು – ಭಾಗ ೪

– ಮು ಅ ಶ್ರೀರಂಗ ಬೆಂಗಳೂರು

ನೆನಪುಗಳುನಿನ್ನೆಗೆ ನನ್ನ ಮಾತು – ಭಾಗ ೧
ನಿನ್ನೆಗೆ ನನ್ನ ಮಾತು – ಭಾಗ ೨
ನಿನ್ನೆಗೆ ನನ್ನ ಮಾತು – ಭಾಗ ೩

ಮೂವತ್ತು ಮೂರು ವರ್ಷಗಳ  ನನ್ನ ವೃತ್ತಿ ಜೀವನದಲ್ಲಿ ನಾನು ಮುಂದೆ ಮುಂದೆ ಸಾಗಿ ಸಾಧಿಸಿದ್ದೇನೂ ಇಲ್ಲ. ಅಂಚೆ ಗುಮಾಸ್ತನಾಗಿ ಕೆಲಸಕ್ಕೆ ಸೇರಿದೆ. ಇಪ್ಪತ್ತು ವರ್ಷಗಳು ಗುಮಾಸ್ತನಾಗಿದ್ದ  ಮೇಲೆ ಅಂಚೆ ಇಲಾಖೆಯು ತನ್ನ ನೌಕರರಿಗೆ  ತಾನಾಗಿಯೇ ಒಂದು promotion ಕೊಡುತ್ತದೆ. ಹೀಗಾಗಿ ನಾನು ಅಂಚೆ ಮಾಸ್ತರನಾದೆ. ಇಲಾಖೆಯ ಪರೀಕ್ಷೆಗಳನ್ನು ಪಾಸು  ಮಾಡಿ ನಿವೃತ್ತಿಯ  ವೇಳೆಗೆ assistant  director ಆಗಿರಬಹುದಿತ್ತು. ನನ್ನ ಸಹೋದ್ಯೋಗಿಗಳಲ್ಲಿ ಕೆಲವರು  ಆ ಹಂತ ಮುಟ್ಟಿದ್ದಾರೆ. ಇನ್ನು ಕೆಲವರು ಅಂಚೆ ಇಲಾಖೆಯ ಕಡಿಮೆ ಸಂಬಳ ಸವಲತ್ತು ನೋಡಿ ಒಂದೆರೆಡು ವರ್ಷಗಳ ನಂತರ  ರಾಜೀನಾಮೆ ನೀಡಿ ಬ್ಯಾಂಕ್ ಗಳಿಗೆ ಸೇರಿದರು.  ಪ್ರೌಢಶಾಲೆಯಲ್ಲಿ ನನ್ನ  ಕಿರಿಯ ಸ್ನೇಹಿತನಾಗಿದ್ದ  ಒಬ್ಬ ಮೊದಲಿಗೆ ಅಂಚೆ ಇಲಾಖೆಯ ಕೆಲಸದಲ್ಲಿದ್ದು ನಂತರದಲ್ಲಿ ಬಿಟ್ಟು ಈಗ corporation Bank ನಲ್ಲಿ chief Manager ಆಗಿದ್ದಾನೆ. ಇವರೆಲ್ಲರನ್ನೂ ನೋಡಿ ನಾನೂ ಏಕೆ ಪ್ರಯತ್ನ ಪಡಲಿಲ್ಲ ಎಂದು ಒಮ್ಮೊಮ್ಮೆ ಅನಿಸುವುದುಂಟು. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕೆಂಬ ಉದರ ವೈರಾಗ್ಯವನ್ನು ನಾವು ಮೇಲ್ನೋಟಕ್ಕೆ ಎಷ್ಟೇ  ತೋರ್ಪಡಿಸಿಕೊಂಡರೂ ಹಣದ ಮುಗ್ಗಟ್ಟು ನಮ್ಮನ್ನು  ಕೆಲವೊಮ್ಮೆ ಪೇಚಾಟಕ್ಕೆ ಸಿಲುಕಿಸಬಹುದು. ಸಂಸಾರಸ್ಥರಾದ ಮೇಲಂತೂ ಇದು ಇನ್ನೂ ಜಟಿಲವಾಗುತ್ತದೆ. ಇವೆಲ್ಲ ಗೊತ್ತಿದ್ದೂ ನಾನು ಇದ್ದಲ್ಲೇ ಇದ್ದುದಕ್ಕೆ.ಆಗ  ಮುಂದಿನ  ದಿನಗಳ ಬಗ್ಗೆ ಯೋಚಿಸದೆ ಕಾಲ ಕಳೆದದ್ದೇ  ಕಾರಣ.  ಒಂದೆರೆಡು ಸಂದರ್ಭಗಳಲ್ಲಿ ಹಣದ ಮುಗ್ಗಟ್ಟು ಆದಾಗ  ನನ್ನ ಬಂಧು ಬಾಂಧವರಿಂದ ಸಾಲ ಪಡೆದು ಆ ಸನ್ನಿವೇಶವನ್ನು ನಿಭಾಯಿಸಿದ್ದಾಯ್ತು. ಕೆಲಸಕ್ಕೆ ಸೇರಿದಾಗ ಒಂದು ಸಾವಿರದಷ್ಟು ಇದ್ದ ಸಂಬಳ(೧೯೭೯ರಲ್ಲಿ) ನಿವೃತ್ತನಾಗುವ ವೇಳೆಗೆ ಮೂವತ್ತು ಸಾವಿರದಷ್ಟಾಗಿತ್ತು(೨೦೧೧ರಲ್ಲಿ). ಆ ಮೂವತ್ತುಮೂರು ವರ್ಷಗಳಲ್ಲಿ ಎರಡು ಮೂರು pay commissionಗಳ ಶಿಫಾರಸ್ಸುಗಳು  ಅಷ್ಟಿಷ್ಟು ಜಾರಿಯಾಯ್ತು. ಅದರಿಂದ ಹೊಸಬರಿಗೆ ಅನುಕೂಲವಾದಷ್ಟು ಹಳಬರಿಗೆ ಆಗುವುದಿಲ್ಲ. (ನಾನು ನಿವೃತ್ತನಾದಾಗ ಮೂರು ವರ್ಷ ಕೆಲಸ ಮಾಡಿದ ಗುಮಾಸ್ತನಿಗೆ ಹದಿನೈದು ಸಾವಿರದಷ್ಟು ಸಂಬಳ ಬರುತ್ತಿತ್ತು. ಮೂವತ್ತುಮೂರು  ವರ್ಷ ಕೆಲಸ ಮಾಡಿದ ನನಗೆ ಮೂವತ್ತು ಸಾವಿರ!) ಆದರೆ ಹೊಸಬರಿಗೆ pension ಇಲ್ಲ. ಹಳಬರಿಗೆ ಇದೆ.

ಮತ್ತಷ್ಟು ಓದು »