ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 18, 2012

5

ಶರಣಾಗತ..!!

‍parupattedara ಮೂಲಕ
ಪವನ್ ಪಾರುಪತ್ತೇದಾರ   
ಪ್ರದೀಪ್ ಬಹಳ ದಿನಗಳಾದ ಮೇಲೆ ಪ್ರೀತಂ ನ ಭೇಟಿ ಆಗಿದ್ದ. ಆದರು ಭೇಟಿಯಾಗಿದ್ದ ಜಾಗವಾದರೂ ಯಾವುದು, ಚಾರ್ಮಡಿ ಘಾಟ್. ಘಟ್ಟ ಪ್ರದೇಶದ ತುತ್ತ ತುದಿಯಲ್ಲಿ ಚಾರಣ ಮಾಡುತಿದ್ದ ಪ್ರೀತಂ ಗೆ ಪ್ರದೀಪ್ ಇದ್ದಕಿದ್ದಂತೆ ಕಾಣಿಸಿಕೊಂಡಿದ್ದ. ನೋಡಿದೊಡನೆ ಪ್ರದೀಪ್ ಮತ್ತು ಪ್ರೀತಂ ಇಬ್ಬರು ಸ್ವಲ್ಪ ಗಾಬರಿಯದರು, ಪ್ರದೀಪ್ ಮಗಾ ಪ್ರೀತಂ ಅಂತ ಒಮ್ಮೆಲೇ ಅಪ್ಪಿ ಕೆನ್ನೆಗೊಂದು ಮುತ್ತು ಕೊಟ್ಟಿದ್ದ. ಇಬ್ಬರ ಆನಂದಕ್ಕು ಪಾರವೇ ಇರಲಿಲ್ಲ. ಪ್ರೀತಂ ಇನ್ನೇನು, ಏನು ಮಗಾ ಇಲ್ಲಿ ಅಂತ ಕೇಳಬೇಕು, ಅಷ್ಟರಲ್ಲಿ ಅದೇ ಪ್ರಶ್ನೆಯನ್ನ ಪ್ರದೀಪ್ ಪ್ರೀತಂ ಗೆ ಕೇಳ್ದ. ಚಾರಣ ಮಾಡ್ಕೊಂಡು ತಂಡದ ಜೊತೆ ಬಂದಿದ್ದೆ ದಾರಿ ತಪ್ಪಿ ಬಿಟ್ಟೆ ಮಗಾ ಅಂದ ಪ್ರದೀಪನ ಮಾತು ಕೇಳಿ ನಂದೂ ಅದೇ ಕಥೆ ದಾರಿ ತಪ್ಪಿದ್ದಿನಿ. ಬಾ ಒಟ್ಟಿಗೆ ದಾರಿ ಹುಡುಕೋಣ ಎಂದು ಹೇಳುತ್ತಾ, ಹಳೆಯ ಕಾಲೇಜು ದಿನಗಳನ್ನು ಮೆಲುಕು ಹಾಕುತ್ತ ಕಾಡಿನಲ್ಲಿ ನಡೆದರು.

ಪ್ರೀತಂ ಮತ್ತು ಪ್ರದೀಪ್ ಒಂದೇ ಕಾಲೇಜ್ ಒಂದೇ ಕ್ಲಾಸ್ ಒಂದೇ ಬೆಂಚ್, ಹಾಸ್ಟೆಲ್ನಲ್ಲಿ ಸಹ ಒಂದೇ ರೂಂ. ಒಬ್ಬರ ಮಧ್ಯೆ ಒಬ್ಬರಿಗೆ ಗಾಢವಾದ ಸ್ನೇಹವಿತ್ತು, ಪ್ರೀತಂ ನ ತಂದೆ ಒಬ್ಬ ಸರ್ಕಾರೀ ಅಧಿಕಾರಿ. ಮಗನಿಗೆ ದೂರದ ಕಾಲೇಜಿಗೆ ಸೀಟ್ ಸಿಕ್ಕಾಗ ಮಗನ್ನ ಹಾಸ್ಟೆಲ್ ಅಲ್ಲಿ ಇದ್ದು ಓದಲಿ ಅಂತ ಆಸೆಯಿಂದ ಸೇರಿಸಿದ್ದರು. ಹಾಸ್ಟೆಲ್ ಅಲ್ಲಿದ್ದರೆ ಎಲ್ಲ ಜನರ ಮಧ್ಯೆಯೂ ಬೆರೆಯಬಹುದು ಎಲ್ಲರ ಕಷ್ಟ ಸುಖಗಳನ್ನು ತಿಳಿಯಬಹುದು ಎಂಬುದೇ ಅವರ ಅಭಿಪ್ರಾಯ. ಓದಿನಲ್ಲೂ ಪ್ರೀತಂ ಮತ್ತು ಪ್ರದೀಪ್ ಯಾವಾಗಲು ಮುಂದೆ ಇರುತಿದ್ದರು. ಪ್ರೀತಂ ತಂದೆಗೆ ಒಂದು ಆಸೆ, ಮಗ ತನ್ನ ಹೆಸರನ್ನು ಎಲ್ಲು ಬಳಸಿಕೊಳ್ಳಬಾರದೆಂದು. ಅದಕ್ಕೆ ಪ್ರೀತಂ ಬಳಿ ಮಾತು ಸಹ ತೆಗೆದುಕೊಂಡಿದ್ದರು, ಎಂದಿಗೂ ನನ್ನ ಹೆಸರನ್ನು ಕಾಲೇಜ್ ನಲ್ಲಿ ಯಾರಿಗೂ ಹೇಳಬೇಡ ಎಂದು. ಪ್ರೀತಂ ಸಹ ಹಾಗೆ ಇದ್ದ. ಪ್ರೀತಂ ಮತ್ತು ಪ್ರದೀಪ್ ಓದಿನಲ್ಲಿ ಆಟದಲ್ಲಿ ಎಲ್ಲ ಕಡೆಯೂ ಮುಂದುವರೆಯುತ್ತಾ 4ನೆ ಸೆಮಿಸ್ಟರ್ ಮುಗಿಸಿದರು. ಅಷ್ಟರಲ್ಲಿ ಪ್ರದೀಪ್ ನ ತಂದೆ ವಿಧಿಯಾಟಕ್ಕೆ ಸಿಕ್ಕಿ ಅಪಘಾತದಲ್ಲಿ ಮೃತ ಪಟ್ಟಿದ್ದರು.

ಅಪಘಾತ ಮಾಡಿದ ವ್ಯಕ್ತಿ ಪ್ರಭಾವಿ ಆದ್ದರಿಂದ ಆತನಿಗೆ ಶಿಕ್ಷೆ ತಪ್ಪಿ ಹೋಯಿತು. ಮೊದಲೇ ತಾಯಿ ಇಲ್ದ ಪ್ರದೀಪ ತಂದೆಯೂ ಇಲ್ಲದೆ ಅನಾಥನಾಗಿಬಿಟ್ಟ. ತನ್ನ ತಂದೆಯ ಸಾವಿಗೆ ಕಾರಣನಾದ ಪ್ರಭಾವಿ ವ್ಯಕ್ತಿಯ ವಿರುದ್ಧ ಹೋರಾಡಿ ಸೋತು ಸುಣ್ಣವಾಗಿದ್ದ. ಸಮಾಜದಲ್ಲಿ ಬಡವರು ಬದುಕುವುದೇ ತಪ್ಪ ಎಂದು ದೇವರಲ್ಲಿ ಬಹಳ ಬಾರಿ ಪ್ರಶ್ನಿಸಿದ್ದ. ಮತ್ತು ಹಣವಂತರ ಮೇಲೆ ವಿರೋಧಾಭಾಸ ಮನದಲ್ಲಿ ಮೂಡಿಸಿಕೊಂಡಿದ್ದ.  ಮನೆಗೆ ಆಧಾರವಾಗಿದ್ದ ತಂದೆ ಇಲ್ಲದೆ ಪ್ರದೀಪ್ ಓದು ಶೂಲಕ್ಕೆ ಸಿಕ್ಕೋ ಸಾಧ್ಯತೆ ಇತ್ತು. ಆಗ ಗೆಳೆಯ ಪ್ರೀತಂ ಕೈ ಬಿಡಲಿಲ್ಲ, ತನ್ನಪ್ಪನಿಗೆ ವಿಷಯ ತಿಳಿಸಿ ಪ್ರದೀಪ್ ನ ವಿದ್ಯಾಭ್ಯಾಸದ ವೆಚ್ಚ ಭರಿಸಿದ್ದ,.ಕಡೆಯ ಸೆಮಿಸ್ಟರ್ ಅಲ್ಲಂತೂ ಪ್ರೀತಂ ನ ತಾಯಿ ಸಹ ಇವರು ಓದುತಿದ್ದ ಜಾಗಕ್ಕೆ ಬಂದು ಇವರನ್ನು ಹಾಸ್ಟೆಲ್ ಬಿಡಿಸಿ ಮನೆಯಲ್ಲೇ ಇರಿಸಿಕೊಂಡು ಪ್ರದೀಪ್ ನ ಸಹ ತನ್ನ ಮಗನಂತೆ ನೋಡಿಕೊಂಡರು.ಇಬ್ಬರು ಒಟ್ಟಿಗೆ ಇಂಜಿನಿಯರಿಂಗ್ ಮುಗಿಸಿದರು ಮೊಬೈಲ್ ಕಾಲ ಇಲ್ಲವಾದ್ದರಿಂದ ಮತ್ತೆ ಸಿಗೋಣ ಎಂದುಕೊಂಡು ಹೊರಟರು. ಹೊರಡುವಾಗ ಪ್ರದೀಪ್ ಪ್ರೀತಂ ನ ತಂದೆಯ ಬಗ್ಗೆ ಕೇಳಿದ್ದ ಆದರೆ ಪ್ರೀತಂ ಹೇಳಿರಲಿಲ್ಲ. ಅದೇ ಕುತೂಹಲದೊಂದಿಗೆ ಹೊರ ನಡೆದ ಪ್ರದೀಪ್ ಗೆ ತನ್ನಪ್ಪನನ್ನು ಕಿತ್ತುಕೊಂಡ ಸಮಾಜದ ಬಗ್ಗೆ  ಅಸಮಾಧಾನವಿತ್ತು. ಮತ್ತು ಸೇಡಿನ ತವಕವೂ ಇತ್ತು.

ಇಷ್ಟು ವಿಷಯಗಳನ್ನು ಮೆಲುಕು ಹಾಕಿಕೊಂಡ ನಂತರ ಪ್ರೀತಂ ಪ್ರದೀಪ್ ನ ಕೇಳಿದ. ಏನ್ ಮಗಾ ಪ್ರದೀಪ ಈಗೇನು ಮಾಡ್ತಾ ಇದ್ದೀಯ ಅಂತ. ಆಗ ಪ್ರದೀಪ್, ನಿನ್ನ ಹತ್ರ ಮುಚ್ಚು ಮರೆ ಯಾಕೆ ಗೆಳೆಯ ನನಗೆ ಸಮಾಜದಿಂದ ಆದ ಅನ್ಯಾಯ ನಿಂಗೆ ಗೊತ್ತೇ ಇದೆ, ಅದಕ್ಕೆ ಸೇಡು ತೀರಿಸಿಕೊಳ್ಳುವ ನೆವದಿಂದ ತಿವ್ರಗಾಮಿ ಆಗಿದ್ದೇನೆ. ಹಣವಿರುವರನ್ನು ಕಂಡರೆ ಲೂಟಿ ಮಾಡುತ್ತೇನೆ. ಬಡವರಿಗೆ ಹಂಚುತ್ತೇನೆ. ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸುತಿದ್ದೇನೆ ಎಂದ. ಪ್ರೀತಂ ಅದಕ್ಕೆ ಹಿಂಸೆಯ ಮಾರ್ಗ ಎಷ್ಟು ಸರಿ ಪ್ರದೀಪ್ ಎಂದ. ಅದಕ್ಕೆ ಪ್ರದೀಪ್ ಶಾಂತಿಯಿಂದ ಏನು ಸಾಧಿಸಲಾಗೋದಿಲ್ಲ. ಇಂತಹ ಹಣವಂತರಿಗೆ ಬುದ್ಧಿ ಕಲಿಸಲು ಈ ಮಾರ್ಗವೇ ಸರಿ, ಕೊಂದು ಹಾಕಬೇಕು ಹಣವಂತರನ್ನೆಲ್ಲ ಎಂದ. ಅಷ್ಟರಲ್ಲೇ ಏನೋ ತೋಚಿದಂತಾಗಿ ಅಮ್ಮ ಅಪ್ಪ ಹೇಗಿದ್ದಾರೆ ಎಂದ, ಪ್ರೀತಂ ಸ್ವಲ್ಪ ಬೇಸರದಿಂದ ಅಪ್ಪನ್ನ ಯಾರೋ ಕೊಂದು ಬಿಟ್ರು, ಅಮ್ಮ ಅದೇ ಚಿಂತೆಯಲ್ಲೇ ಹಾಸಿಗೆ ಸೇರಿದ್ದಾಳೆ, ಮನೆಯಲ್ಲಿ ನೆಮ್ಮದಿನೇ ಇಲ್ಲ ಪ್ರದೀಪ್ ಎಂದ. ಪ್ರದೀಪ್ ಪ್ರೀತಂ ಗೆ ಸಾಂತ್ವನ ಹೇಳುತ್ತಾ ಅಪ್ಪನ ಹೆಸರು ಅವರು ಬದುಕಿರೋವರೆಗೂ ಹೇಳಿಲ್ಲ, ಅವರ ಫೋಟೋ ತೋರ್ಸಿಲ್ಲ. ಈಗಾದ್ರು ಹೇಳು ಅವ್ರ ಹೆಸರು ಹೇಳ್ಕೊಂಡು ಮುಂದಿನ ಜೀವನ ನಡೆಸ್ತೀನಿ ಅಂದ. ಪ್ರೀತಂ ಹೌದು ಪ್ರದೀಪ್, ನಿಂಗೆ ಹೇಳ್ಬೇಕು ಹೇಳದೆ ಎಷ್ಟು ದಿನ ಅಂತ ಇರ್ಲಿ ಅವರ ಹೆಸರು ಚಂದ್ರಶೇಖರ್, ತೀವ್ರಗಾಮಿ ನಿಗ್ರಹ ದಳದ ಮುಖ್ಯಸ್ಥರಾಗಿದ್ದರು ಎಂದ. ಆ ಕ್ಷಣ ಪ್ರದೀಪ್ ಗೆ ಆಕಾಶ ತಲೆಯ ಮೇಲೆ ಬಿದ್ದ ಹಾಗಾಯ್ತು ಒಂದು ಕ್ಷಣ ಕುಸಿದು ಬಿದ್ದ.

ಒಮ್ಮೆಲೇ ಪ್ರೀತಂ ನ ಕಾಲು ಹಿಡಿದು, ಕ್ಷಮಿಸು ಗೆಳೆಯ ನಿನ್ನಪ್ಪನ ಕೊಂದಿದ್ದು ನಾನೇ ಎಂದು ಅಂಗಲಾಚಿದ. ಕೈ ತುತ್ತು ಹಾಕಿದ ಅಮ್ಮನ ಹಾಸಿಗೆ ಹಿಡಿಯುವ ಪರಿಸ್ಥಿತಿ ತರಿಸಿದ್ದು ನಾನೇ. ಓದು ನಿಂತು ಹೋಗೋ ಸಮಯದಲ್ಲಿ ಸಹಾಯ ಮಾಡಿದ ದೇವರ ಕೊಂದಿದ್ದು ನಾನೇ, ಎಂದು ಚೀರಲು ಆರಂಭಿಸಿದ. ಪ್ರೀತಂ ಹೇಳು, ಇದಕ್ಕೆ ನಾ ಏನು ಶಿಕ್ಷೆ ಬೇಕಾದರು ಅನುಭವಿಸುತ್ತೇನೆ ಹೇಳು ಏನು ಮಾಡ್ಲಿ ಅಂದ. ಪ್ರೀತಂ ಪ್ರದೀಪ್ ನ ಭುಜವನ್ನು ಹಿಡಿದು, ನಿನ್ನ ಗುಂಪಿನೊಂದಿಗೆ ಎಲ್ಲ ಆಯುಧಗಳೊಂದಿಗೆ ಶರಣಾಗು ಅದೇ ನಿನ್ನ ತಪ್ಪಿಗೆ ಸರಿಯಾದ ಶಿಕ್ಷೆ ಎಂದ. ಸ್ವಲ್ಪ ಹೊತ್ತು ಮೌನವಾದ ಪ್ರದೀಪ್ ಆಯಿತು ಅಂತ ಒಪ್ಪಿ ತನ್ನ ಗುಂಪಿನವರನ್ನೆಲ್ಲ ಸೇರಿಸಿ ಶರಣಾಗುವುದಕ್ಕೆ ಒಪ್ಪಿಸಿದ. ಪ್ರೀತಂ ಅವರ ಶರಣಾಗತಿಗೆ ವೇದಿಕೆ ಸೃಷ್ಠಿ ಮಾಡಿ ಪ್ರದೀಪ್ ನ ಕರೆಸಿದ, ಪ್ರದೀಪ್ ಶರಣಾಗುವ ಮೊದಲು ಕೇಳಿದ, ಗೆಳೆಯ ನೀನೇನು ಕೆಲಸ ಮಾಡುತಿದ್ದೀಯ ಎಂದು. ಅದಕ್ಕೆ ಪ್ರೀತಂ, ನಾನು ತೀವ್ರಗಾಮಿ ನಿಗ್ರಹ ದಳದ ನಾಯಕ, ನೀನು ಕೊಂದ ನಮ್ಮಪ್ಪನ ಕೆಲಸ ನನಗೆ ಬಂದಿದೆ ಎಂದಾಗ ಪ್ರದೀಪನಿಗೆ ಮತ್ತೊಂದು ಶಾಕ್ ಬಿದ್ದಿತ್ತು

* * * * * * * * *

ಚಿತ್ರ ಕೃಪೆ : stavangerphotobytanty.blogspot.com

5 ಟಿಪ್ಪಣಿಗಳು Post a comment
  1. umesh.k.n's avatar
    umesh.k.n
    ಫೆಬ್ರ 19 2012

    super sir. tumba chennagide

    ಉತ್ತರ
  2. parupattedara's avatar
    ಫೆಬ್ರ 20 2012

    Thank you very much umesh 🙂 nilume heege odi protsaha needuttiri, shubhadina

    ಉತ್ತರ
  3. sweetdevil's avatar
    sweetdevil
    ಫೆಬ್ರ 29 2012

    ರೀ ಸ್ವಾಮಿ ನಿಮಗೆ ಮಾಡ್ಲಿಕ್ಕೆ ಕೆಲಸ ಇಲ್ಲ್ವೇನ್ರಿ…ಇಂತ ಡಬ್ಬ ನಿರೂಪಣೆ ಜೀವನದಲ್ಲಿ ಮೊದಲ್ನೆಬಾರಿ ಓದಿದ್ದು…. ಹೃದಯ ಕಿತ್ಕೊಂಡ್ ಬಂತು

    ಉತ್ತರ
  4. parupattedara's avatar
    ಮಾರ್ಚ್ 1 2012

    ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದ ಸಿಹಿಯಾದ ದೆವ್ವವೆ 🙂 ನಿಮ್ಮ ಹೃದಯ ಕೀಳುವಷ್ಟು ಪರಿಣಾಮಕಾರಿಯಾಗಿ ನನ್ನ ನಿರೂಪಣೆ ಇದೆ ಎಂದು ತಿಳಿದು ಬಹಳ ಸಂತೋಷವಾಯಿತು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ…ನೇರ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ. ತಪ್ಪುಗಳು ಎಲ್ಲಿದೆ ಎಂದು ತಿಳಿಸಿ, ತಿದ್ದಿಕೊಂಡು ಮುಂದೆ ಒಳ್ಳೆ ರೀತಿಯಲ್ಲಿ ನಿರೂಪಿಸಲು ಪ್ರಯತ್ನಿಸುತ್ತೇನೆ.

    ಉತ್ತರ
  5. niranjan's avatar
    niranjan
    ಮಾರ್ಚ್ 2 2012

    Go ahead pavan .. super story.
    NIranjan

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments