ಮಾಧ್ಯಮದವರು ನಡೆದುಕೊಂಡ ರೀತಿ ಸರಿಯೇ…?
-ಸತೀಶ್ ಡಿ. ಆರ್. ರಾಮನಗರ
ಟೀವಿ ವಾಹಿನಿಯವರು ನಡೆದುಕೊಂಡ ರೀತಿಯ ಬಗ್ಗೆ ಇಷ್ಟೊಂದು ಬಹು ಪರಾಕ್ ಹೇಳುತಿದ್ದೀರಲ್ಲ. ನಿನ್ನೆ ನಡೆದ ಘಟನೆಗಳ ಬಗ್ಗೆ ಅದರ ಹಿನ್ನೆಲೆಯನ್ನು ಸ್ವಲ್ಪವಾದರೂ ಮನುಷ್ಯತ್ವದಿಂದ ಯೋಚಿಸಿದ್ದೀರ. ವಸ್ತು ನಿಷ್ಠೆ ಮೆರೆವ ಮಾಧ್ಯಮದವರು ನಿನ್ನೆ ಮಾಡಿದ್ದು ಏನು. ಪೋಲೀಸಿನವರು ಕೋರ್ಟ್ ಹಾಲ್ ಗಳಿಗೆ ನುಗ್ಗಿ ವಕೀಲರನ್ನು ಮನ ಬಂದಂತೆ ತಳಿಸುತಿದ್ದರೆ ಮಾಧ್ಯಮದವರು ಅದನ್ನು ಏಕೆ ಪ್ರಸಾರ ಮಾಡಲಿಲ್ಲ. ವಕೀಲ ಸಿಂಬಲ್ ಇರುವ ಕಾರು ಬೈಕ್ಗಳನ್ನು ಎಲ್ಲರ ಮುಂದೆಯೇ ಸುಡುತಿದ್ದ ಪೋಲೀಸಿನವರ ಕೃತ್ಯವನ್ನು ಏಕೆ ಮಾಧ್ಯಮದವರು ಪ್ರಸಾರ ಮಾಡಲಿಲ್ಲ. ಮಾರಣಾಂತಿಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರುವ ವಕೀಲರನ್ನು ಯಾವೊಬ್ಬ ಮಾಧ್ಯಮದವರು ಏಕೆ ತೋರಿಸಲಿಲ್ಲ. ಮೊದಲು ಮಾಧ್ಯಮದವರೇ ಪೋಲೀಸೀವರಿಗೆ ಧಿಕ್ಕಾರ ಕೂಗುತಿದ್ದವರು, ರೆಡ್ಡಿ ಬೆಂಬಲಿಗರೆಂದು ಬಂದಿದ್ದ ಕರಿ ಕೋಟು ದರಿಸಿದ್ದ ಕೆಲವು ವಕೀಲರು ತೆಗೆದ ಜಗಳಕ್ಕೆ ಇಡೀ ವಕೀಲ ಸಮುದಾಯವನ್ನು ಭಯೋತ್ಪಾದಕರ ರೀತಿ ಚಿತ್ರಿಸುತಿದ್ದೀರಲ್ಲ ಏಕೆ. ಬಾರ್ ಅಸೋಸಿಯೇಶನ್, ಕ್ಯಾಂಟೀನ್, ನ್ಯಾಯಾಲಯದ ಒಳ ಹೊಕ್ಕು, ಕುಳಿತಿದ್ದ ವಕೀಲರನ್ನು ನಾಯಿಗೆ ಬದಿದಂತೆ ಬಡಿದು ರಕ್ತ ಹರಿಸಿದ್ದಾರಲ್ಲ ಪೋಲೀಸಿನವರು ಅವರ ಬಗ್ಗೆ ಏಕೆ ಮೌನವಾಗಿದ್ದೀರಿ.
ಉತ್ತರ ಪ್ರದೇಶದಲ್ಲಿ ಆನೆಗೆ ಬಲ ಬರಲಿದೆಯೇ ಅಥವಾ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆಯೇ ?
-ನಾಗಣ್ಣ ಜಿಕೆ
ಮಾಚ್೯ ನ 6ರಂದು 5 ರಾಜ್ಯಗಳ ಚುನಾವಣಿ ಫಲಿತಾಂಶ ಘೋಷಣೆಯಾಗಲ್ಲಿದ್ದು ಇಡಿ ದೇಶ ಐದು ರಾಜ್ಯಗಳ ಕಡೆ ಗಮನ ಹರಿಸಿದೆ. ಮುಖ್ಯವಾಗಿ ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಜನತೆಯಲ್ಲಿ ಕುತೂಹಲ ಕೆರಳಿಸಿದೆ ಕಾರಣ ಉತ್ತರಪ್ರದೇಶದ ರಾಜಕಾರಣ ರಾಷ್ಟ್ರರಾಜಕರಣಕ್ಕೆ ದಿಕ್ಸೂಚಿ ಮತ್ತು ನಿಣ೯ಯಕ ಶಕ್ತಿ.
ಉತ್ತರಪ್ರದೇಶದಲ್ಲಿ ಚುನಾವಣಿಗೆ ಸ್ಪಧ೯ಸಿದ್ದ ಪ್ರಮುಖ ರಾಜಕೀಯ ಪಕ್ಷಗಳೆಲ್ಲವೂ ತಮ್ಮ ಪ್ರತಿಷ್ಟೆಯನ್ನು ಪಣಕಿಟ್ಟು ಚುನಾವಣಿ ಆಕಾಡಕ್ಕೆ ದುಮುಕಿದ್ದವು ಇಲ್ಲಿ ಪಕ್ಷಕದ ಸೋಲು ಗೆಲವುಗಿಂತ ವ್ಯಕ್ತಿಗತ ಸೋಲು ಗೆಲವು ಬಹಳ ಮುಖ್ಯವಾದ್ದದ್ದು ಭವಿಷ್ಯದ ಪ್ರಧಾನಿಯೆಂದು ಬಿಂಬಿಸಿಕೊಳ್ಳುತ್ತಿರುವ ರಾಹುಲ್ಗಾಂಧಿ ಮತ್ತೊಂದು ಕಡೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಾಯಾವತಿ ಮತ್ತು ಉತ್ತರಪ್ರದೇಶದಲ್ಲಿ ಅಸ್ತಿತ್ವ ಸ್ಥಾಪಿಸಲು ಹೊರಟಿರುವ ಆಖಿಲೇಶ್ ಯಾದವ್ ಇವರ ಸೋಲು ಗೆಲುವೆ ಮುಖ್ಯವಾಗಿದೆ. 2008ರ ವಿಧಾನಸಭಾ ಚುನಾವಣಿಯಲ್ಲಿ ಬಿ.ಎಸ್.ಪಿಗಿದ್ದ ವಚ್ಚ್ರಸ್ಸು ಈ ಚುನಾವಣಿಯಲ್ಲಿ ಇದ್ದಂತೆ ಕಾಣುತ್ತಿಲ್ಲ ಇದಕ್ಕೆ ಹಲವಾರು ಕಾರಣಗಳಿವೆ, ಬಿ.ಎಸ್.ಬಿ ನಾಯಕಿಯಾದ ಮಾಯಾವತಿ ಕಳೆದ ಚುನಾವಣಿಯಲ್ಲಿ ಬ್ರಾಹ್ಮಣರು ಸೇರಿದ್ದಂತೆ ಮೇಲ್ವಗ್ರದವರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಅದರೆ ಚುನಾವಣಿಯ ನಂತರ ಅವರು ಬ್ರಾಹ್ಮಣರಿಗೆ ಕೊಟ್ಟ ಭರವಸೆಯನ್ನ ಹಿಡೇರಿಸಿಲ್ಲ ಸಹಜವಾಗಿ ಈ ವಗ್ರದ ಜನ ಬೇರೆ ಪಕ್ಷಕ್ಕೆ ಒಲವು ತೋರಿಸಿದ್ದಾರೆ.