ಮಂಕುತಿಮ್ಮನ ಕಗ್ಗ – ರಸಧಾರೆ (೧೩)
– ರವಿ ತಿರುಮಲೈ
ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು ?I
ಧರಣಿಗನುದಿನದ ರಕ್ತಾಭಿಷೇಚನೆಯೇ? II
ಕರವಾಲವನು ಪುಷ್ಪಸರವೆಂದು ಸೆಳೆದಾಡೆ I
ಪರಿಮಳವ ಸೂಸುವುದೆ ? – ಮಂಕುತಿಮಾ II
ಪುರುಷ=ಶಕ್ತಿ , ಪರಮ =ಸರ್ವೋಚ್ಚ, ಸಿದ್ಧಿ= ಪ್ರಯೋಜನ, ಧರಣಿ= ಭೂಮಿ, ಅನುದಿನ=ಪ್ರತಿನಿತ್ಯ ,
ಅಭಿಷೇಚನೆ = ಅಭಿಷೇಕ , ಕರವಾಲ=ಕತ್ತಿ, ಸೆಳೆದಾಡೆ = ಎಳೆದಾಡಿದರೆ, ಪರಿಮಳ = ಸುಗಂಧ.
ಪುರುಷ ಸ್ವತಂತ್ರತೆಯು ಪರಮ ಸಿದ್ಧಿಯದೇನು ಧರಣಿಗೆ ಅನುದಿನವೂ ರಕ್ತಾಭಿಷೇಚನೆಯೇ
ಕರವಾಲವನು ಪುಷ್ಪಸರವೆಂದು ಸೆಳೆದಾಡೆ ಪರಿಮಳವ ಸೂಸುವುದೆ-ಮಂಕುತಿಮ್ಮ.
ಆಗ ನಡೆಯುತ್ತಿದ್ದ ಯುದ್ದ, ಯುದ್ದದಿಂದ ಆಗುತ್ತಿದ್ದ ದುಷ್ಪರಿಣಾಮಗಳು, ಇವುಗಳ ಬಗ್ಗೆ ಮನಕರಗಿ ಭಾವುಕರಾದ ಮಾನ್ಯ ಗುಂಡಪ್ಪನವರು ಶಕ್ತಿಯ ಸ್ವಾತಂತ್ರದ ಸರ್ವೋಚ್ಚ ಗುರಿ, ಈ ಭೂಮಿಗೆ ಪ್ರತಿದಿನವೂ ರಕ್ತದ ಅಭಿಷೇಕವೇ, ಒರೆಯಿಂದ ಕತ್ತಿಯನ್ನು ಹೂವಿನ ಮಾಲೆ ಎಂದು ಎಳೆದರೆ ಅದರಿಂದ ಸುಗಂಧ ಬರಬಹುದೇ ಎನ್ನುತ್ತಾರೆ.
ನಿದಿಧ್ಯಾಸನ ಮಾಡಿ ಜಯಶೀಲರಾಗಿ !
ತಾಪತ್ರಯ-ವಿನಿರ್ಮುಕ್ತೋ ದೇಹತ್ರಯ-ವಿಲಕ್ಷಣಃ|
ಅವಸ್ಥಾತ್ರಯ-ಸಾಕ್ಷ್ಯಸ್ಮಿ ಅಹಮೇವಾಹಮವ್ಯಯಃ ||
ಈ ವಿದ್ಯೆಯನ್ನು ಅನೌಪಚಾರಿಕವಾಗಿ ಹೇಳಿಕೊಟ್ಟ ಗುರುವೃಂದಕ್ಕೆ ಮೊದಲು ಶಿರಬಾಗಿ ಕರಮುಗಿದು ಪ್ರಾರ್ಥಿಸಿ ನಿಮ್ಮಲ್ಲಿ ಈ ವಿಷಯ ಪ್ರಸ್ತಾವಿಸುತ್ತಿದ್ದೇನೆ. ಹೊಸದೊಂದು ವಿಷಯ ನನ್ನ ಗಮನ ಸೆಳೆದಿತ್ತು. ನಿದಿಧ್ಯಾಸನ ಕ್ರಿಯೆ ! ಹಾಗೆಂದರೇನು ? ಎಲ್ಲಿ ಹೇಗೆ ಅದನ್ನು ಆಚರಿಸುವುದು ? ಯಾರು ಮತ್ತು ಯಾವಾಗ ಮಾಡಬಹುದು ? ಅದರ ಪರಿಣಾಮಗಳೇನು ? ಈ ರೀತಿ ಒಂದರಮೇಲೊಂದು ಪ್ರಶ್ನೆಗಳು ಬರುತ್ತಲೇ ಇದ್ದವು; ಉತ್ತರ ಅಷ್ಟು ಸಲೀಸಾಗಿ ಸಿಗಲಿಲ್ಲ. ಹುಡುಕಿದೆ ಹುಡುಕಿದೆ ಹಲವು ಯೋಗಿಗಳಲ್ಲಿ ಹೋದರೂ ಅದೊಂದು ಸ್ವಾನುಭವ ಕ್ರಿಯೆಯಾಗಿರುವುದರಿಂದ ಅದನ್ನು ವಿವರಿಸುವುದು ಸ್ವಲ್ಪ ಕಷ್ಟ.
ಭಾರತೀಯ ಮೂಲದ ಯಾವುದೇ ತತ್ವಗಳನ್ನು ತೆಗೆದುಕೊಳ್ಳಿ ಅವು ಆದರ್ಶಪ್ರಾಯ. ಅವು ಮತಗಳ ಬಗ್ಗೆ ಹೇಳುವುದಿಲ್ಲ; ಆದರೆ ಧರ್ಮದ ಬಗ್ಗೆ ತಿಳಿಸುತ್ತವೆ, ಮಾನವ ಧರ್ಮದ ಬಗ್ಗೆ ವಿವರಿಸುತ್ತವೆ. ಅಲ್ಲಿಲ್ಲಿ ಆರ್ಟ್ ಆಫ್ ಲಿವಿಂಗ್ ಅಥವಾ ಇನ್ನೂ ಹಲವಾರು ಯೋಗ ಕೇಂದ್ರಗಳಿಂದ ಕೆಲವರು ಇದನ್ನು ತಿಳಿದುಕೊಂಡಿರಬಹುದು. ಅಷ್ಟಾಂಗ ಯೋಗದ ಬಗ್ಗೆಯೂ ಅಲ್ಪಸ್ವಲ್ಪ ಗೊತ್ತಾಗಿರಬಹುದು. ಆದರೆ ಅಷ್ಟಾಂಗಯೋಗದ ಉಪಯೋಗವನ್ನು ಅರಿತವರು ಭಾಗಶಃ ಯೋಗವನ್ನಾದರೂ ಕಲಿಯುತ್ತಾರೆ. ಯೋಗವೆಂಬುದು ಕೇವಲ ಯೋಗಾಸನವಲ್ಲ, ಅದು ಕೇವಲ ಭೌತಿಕ ಅಥವಾ ಶಾರೀರಿಕ ವ್ಯಾಯಾಮ ಕ್ರಿಯೆಯಲ್ಲ. ಅದು ದೇಹ ಮತ್ತು ಮನಸ್ಸುಗಳನ್ನು ಬಳಸಿ ಆತ್ಮಾನುಸಂಧಾನ ಮಾಡುವ ಕ್ರಿಯೆ! ಈ ಬ್ಲಾಗಿನ ಆರಂಭದಲ್ಲಿ ನಾನು ಬರೆದ ಹಾಡೊಂದು ನೆನಪಾಗುತ್ತಿದೆ. ಅದನ್ನು ಕೆಲವರು ಓದಿದರು; ಕೆಲವರು ತುಂಬಾ ಚೆನ್ನಾಗಿದೆಯೆಂದರು, ಇನ್ನೂ ಕೆಲವರು ತೀರಾ ವಿರಕ್ತ ಗೀತೆ ಎಂದರು. ಅದರ ಆಳವಾದ ಗಹನವಾದ ಅರ್ಥವನ್ನು ಯಾರೂ ಅರಿಯದಾದರು.
ಹಲವು ಸರ್ತಿ ನಾನು ಹೇಳಿದ್ದಿದೆ, ಶರೀರದ ಸ್ವಚ್ಛತೆಗಾಗಿ ಹೇಗೆ ಸ್ನಾನ ಮಾಡುತ್ತೇವೆಯೋ ಹಾಗೆಯೇ ಮನಸ್ಸಿನ ಸ್ವಚ್ಛತೆಗಾಗಿ ಧ್ಯಾನ ಮಾಡಿ ಎಂದು. ಮನಸ್ಸು-ಆತ್ಮ ಬೇರೇ ಬೇರೇ. ಆತ್ಮ ಶುದ್ಧವಾಗಿರುತ್ತದೆ; ಕಲ್ಮಶರಹಿತವಾಗುತ್ತದೆ. ಯಾವಾಗ ಆತ್ಮ ಶರೀರದೊಳಗೆ ಸೇರಿ ಮನಸ್ಸಿನ ಹತೋಟಿಯಲ್ಲಿ ಸಿಕ್ಕಿಬೀಳುತ್ತದೋ ಆಗ ಅದು ಗೌಣವಾಗಿ ಸುಪ್ತವಾಗಿ ಶರೀರದೊಳಗೆ ಹುದುಗಿರುತ್ತದೆಯೇ ವಿನಃ ತನ್ನಶಕ್ತಿಯನ್ನು ಅದು ಮರೆತಿರುತ್ತದೆ ! ಈ ಶರೀರದೊಳಗೆ ಆತ್ಮ ಎಂಬುದು ಮೊಬೈಲ್ ಹ್ಯಾಂಡ್ ಸೆಟ್ ನಲ್ಲಿ ಸಿಮ್ಮು ಇರುವಂತೇ. ನಮ್ಮಲ್ಲಿಯೂ ಡ್ಯೂಯಲ್ ಸಿಮ್ಮು! ಒಂದು ಒಳಗಿನ ನಾನು ಒನ್ನೊಂದು ಹೊರಗಿನ ನಾನು. ಆದರೆ ಇಲ್ಲಿ at a time both are functioning! ಆಗಾಗ ನನ್ನಜೊತೆಗಿರುವ ನಾನು ಒಳಗಿನ ನನ್ನನ್ನು ಬಿಟ್ಟು ಪರಸ್ಪರ ಕೆಲಸಮಾಡುತ್ತೇನೋ ಆ ಕೆಲಸ ಯಶಸ್ವಿಯಾಗುವುದಿಲ್ಲ ಅಥವಾ ಕೇಡಿನ ಕೆಲಸವಾಗಿರುತ್ತದೆ!
ಕುಲಾಂತರಿ ಚರ್ಚೆ: ಇನ್ನೊಂದು ಮುಖ
– ಪ್ರಸನ್ನ ಆಡುವಳ್ಳಿ,ಧಾರವಾಡ
ಕುಲಾಂತರಿಗಳ ಬಗ್ಗೆ “ಕನ್ನಡಪ್ರಭ” ಪತ್ರಿಕೆಯಲ್ಲಿ ಶಾಂತು ಶಾಂತಾರಾಮ್ ಹಾಗೂ ಎಮ್ ಮಹದೇವಪ್ಪ ಅವರು ಬರೆದ ಬರಹ ಓದುಗರನ್ನು ದಾರಿತಪ್ಪಿಸುವಂತಿದೆಯೇ ವಿನಹಾ ಅವುಗಳ ಕುರಿತು ಸರಿಯಾದ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದೆ. ಕುಲಾಂತರಿಗಳನ್ನು ಅಭಿವೃದ್ದಿಯ ಹೆಸರಲ್ಲಿ, ಅಧಿಕ ಅಹಾರ ಉತ್ಪಾದನೆಯ ನೆಪದಲ್ಲಿ ರೈತರ ಹಾಗೂ ಗ್ರಾಹಕರ ಮೇಲೆ ಹೇರುವ ಪ್ರಯತ್ನದ ಒಂದು ಭಾಗವಾಗಿ ಈ ಬರಹಗಳು ಮೂಡಿಬಂದಿವೆಯಷ್ಟೇ.
ವಿಜ್ನಾನವು ಸತ್ಯ ಶೋಧನೆಯಿಂದ ರೂಪಗೊಳ್ಳುವುದೇ ವಿನಹ ಸಂಖ್ಯಾ ಬಲದಿಂದಲ್ಲ ಎಂಬ ಮಹದೇವಪ್ಪನವರ ಮಾತುಗಳು ಒಪ್ಪತಕ್ಕದ್ದೇ . ಆದರೆ ಬಿ.ಟಿ. ಬದನೆ ಕುರಿತ ಚರ್ಚೆ ಯಲ್ಲಿ ವಿಜ್ನಾನಿಗಳಿಗೆ ಸೂಕ್ತ ಕಾಲಾವಕಾಶ ಸಿಗಲಿಲ್ಲ ಎಂಬ ಮಾತು ಸತ್ಯಕ್ಕೆ ದೂರ. ತಾತ್ಕಾಲಿಕ ನಿಷೇಧ ಹೇರುವ ಮುನ್ನ ದೇಶದ ಹಲವೆಡೆಗಳಲ್ಲಿ ಪರ-ವಿರೋಧಗಳ ಬಗ್ಗೆ ಪರಿಸರ ಸಚಿವಾಲಯ ವಿಸ್ತೃತ ಚರ್ಚೆ ನಡೆಸಿತ್ತು. ಇಷ್ಟಲ್ಲದೇ ದೇಶದ ಪ್ರತಿಷ್ಟಿತ ಆರು ವಿಜ್ನಾನ ಅಕಾಡೆಮಿಗಳಿಂದ ಅಭಿಪ್ರಾಯ ಕೇಳಿತ್ತು. ಆದರೆ ಅಲ್ಲಿನ ವಿಜ್ನಾನಿಗಳು ಕೊಟ್ಟ ಬೇಜಾವಾಬ್ದಾರಿಯುತ ವರದಿ ಎಲ್ಲರಿಂದ ಟೀಕೆಗೆ ಒಳಗಾಗಿದ್ದು ನೆನಪಿರಬಹುದು. ಎಲ್ಲದಕ್ಕೂ ವೈಜ್ನಾನಿಕ ಆಧಾರ ಕೇಳುವವರು ತಮ್ಮ ವರದಿಯ ಬಗ್ಗೆ ಏಕೆ ಚಕಾರ ಎತ್ತುವುದಿಲ್ಲ? ಅಲ್ಲೇಕೆ ಯಾವುದೇ ವೈಜ್ನಾನಿಕ ಆಧಾರ ನೀಡದೇ ತೀರ ಕಳಪೆ ಗುಣಮಟ್ಟದ ವರದಿ ಕೊಟ್ಟರು?
ಬಿ.ಟಿ. ಹತ್ತಿ ಬಂದ ಮೇಲೆ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಹತ್ತಿ ರಫ್ತು ಮಾಡುವ ದೇಶವಾಯ್ತೆಂದು ಹೆಮ್ಮೆಯಿಂದ ಹೇಳುವವರು ಇತ್ತೀಚೆಗೆ ಹತ್ತಿಯ ಒಟ್ಟಾರೆ ಉತ್ಪಾದನೆ ಕಡಿಮೆಯಾಗಿದೆಯೆಂದು ಕೇಂದ್ರ ರಫ್ತು ನಿಷೇಧ ಮಾಡಲು ಹೊರಟಿದ್ದನ್ನೇಕೆ ಪ್ರಜ್ನಾಪೂರ್ವಕವಾಗಿ ಮರೆಮಾಚುತ್ತಾರೆ? ದೇಶದ ಶೇಕಡಾ 93ರಷ್ಟು ಭಾಗದಲ್ಲಿ ಬಿ.ಟಿ.ಹತ್ತಿಯನ್ನೇ ಬೆಳೆಯುತ್ತಿದ್ದರೂ ಹೀಗಾಗಿದ್ದೇಕೆ?!