ವಿಷಯದ ವಿವರಗಳಿಗೆ ದಾಟಿರಿ

Archive for

17
ಮಾರ್ಚ್

ಮಂಕು ತಿಮ್ಮನ ಕಗ್ಗ – ರಸಧಾರೆ (೧)

(ಡಿ.ವಿ ಗುಂಡಪ್ಪನವರ ಕಗ್ಗದ ರಸಧಾರೆಯನ್ನ ಶ್ರೀ ರವಿ ತಿರುಮಲೈ ಅವರು ನಿರಂತರವಾಗಿ ಹರಿಸಲಿದ್ದಾರೆ ನಿಲುಮೆಯಲ್ಲಿ)

– ರವಿ ತಿರುಮಲೈ

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನೆಂದು ಜನಂ //
ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ
ಆ ವಿಚಿತ್ರಕೆ ನಮಿಸೊ – ಮಂಕು ತಿಮ್ಮ //

ವಿಶ್ವಕ್ಕೆ ಮೂಲವಾದ ಶ್ರೀ ವಿಷ್ಣು, ಮಾಯಾಲೋಲ, ದೇವರು, ಪರಬ್ರಹ್ಮ, ಸರ್ವಕ್ಕೂ ಒಡೆಯನಾದ ಪರಮ ಪುರುಷ ಹೀಗೆ ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ  ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು.

ನಾವಿರುವ ಭೂಮಿಯಂತಹ 9 .80 ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಡಲವೂ  ಸೇರಿದಂತೆ  ಲಕ್ಷಾಂತರ ಸೌರಮಂಡಲಗಳಿರುವ  ನಮ್ಮ ಕ್ಷೀರಪಥ, ನಮ್ಮ ಕ್ಷೀರಪಥವೂ ಸೇರಿದಂತೆ ಲಕ್ಷಾಂತರ ಕ್ಷೀರಪಥಗಳಿರುವ ಆಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆಗಳಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಕಗ್ಗದ ಆಂತರ್ಯ ಮತ್ತು ವಿಶ್ವದ ಒಂದು ಅನುವಷ್ಟೂ ಅಲ್ಲದ ನಾವು ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ ಪ್ರೀತಿಯಿಂದ ನಮಿಸಬೇಕು ಎಂದು ಒಂದು ಆದೇಶ.

ಮತ್ತಷ್ಟು ಓದು »

17
ಮಾರ್ಚ್

ಕನ್ನಡ ವಿಕಿಪೀಡಿಯ: ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ

– ಓಂ ಶಿವಪ್ರಕಾಶ್

ಆತ್ಮೀಯ ಕನ್ನಡ ವಿಕಿಪೀಡಿಯ ಗೆಳೆಯರೆ,

ಈ ಸಂದೇಶ ಕನ್ನಡ ವಿಕಿಪೀಡಿಯದಲ್ಲಿನ ಲೇಖನಗಳ ಗುಣಮಟ್ಟವನ್ನು ಉತ್ತಮ ಪಡಿಸುವ ಸಲುವಾಗಿ ಪ್ರಾರಂಭಿಸಲಾಗುತ್ತಿರುವ ಒಂದು ಮುಖ್ಯ ಯೋಜನೆಯ ಬಗ್ಗೆ. 

ಸುಮಾರು ೨೦೧೦ – ೨೦೧೧ ರಲ್ಲಿ, ಗೂಗಲ್ ತನ್ನ ಗೂಗಲ್ ಟ್ರಾನ್ಸ್ಲೇಷನ್ ಟೂಲ್ ಕಿಟ್‌ನ ಟ್ರಾನ್ಸ್ಲೇಷನ್ ಮೆಮೋರಿಯನ್ನು ಹೆಚ್ಚಿಸುವ ಸಲುವಾಗಿ  ಭಾರತೀಯ ಭಾಷಾ ವಿಕಿಪೀಡಿಯಾಗಳಲ್ಲಿ (ಮುಖ್ಯವಾಗಿ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು) ಹಮ್ಮಿಕೊಂಡ ಯೋಜನೆ ಅಡಿಯಲ್ಲಿ, ಅನೇಕ ಲೇಖನಗಳನ್ನು ಇಂಗ್ಲೀಷ್ ವಿಕಿಪೀಡಿಯಾದಿಂದ ಆಯಾ ಭಾಷೆಯ ವಿಕಿಪೀಡಿಯಾಗಳಿಗೆ ಭಾಷಾಂತರ ಮಾಡಿತು. ಕೆಲವು ಬಳಕೆದಾರರು ಈ ಯೋಜನೆಯ ಬಗ್ಗೆ ತಮ್ಮ ಕಳವಳವನ್ನೂ ವ್ಯಕ್ತಪಡಿಸಿದರು. ವಿಕಿಪೀಡಿಯ ಸಮುದಾಯವನ್ನೇ ಬೆಳೆಸದೆ ಮಾಹಿತಿಯನ್ನು ಮಾತ್ರ ಹುಟ್ಟುಹಾಕುವುದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಜೊತೆಗೆ, ಬಹಳಷ್ಟು ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಹಾಕಲಾದರೂ, ಅದರ ಅನುವಾದ ಮತ್ತು ಶೈಲಿಯಲ್ಲೂ ಕೂಡ ತೊಂದರೆಗಳು ಕಂಡುಬಂದವು. ಆದಾಗ್ಯೂ, ನಮಗಿಲ್ಲಿ ಒಂದು ಉತ್ತಮ ಅವಕಾಶವಿದೆ, ಏಕೆಂದರೆ ಈ ಯೋಜನೆಯ ಮೂಲಕ ಸೃಷ್ಟಿಸಲಾದ ಲೇಖನಗಳಲ್ಲಿ ಉತ್ತಮ ಮಾಹಿತಿ ಲಭ್ಯವಿದೆ.