ವಿಷಯದ ವಿವರಗಳಿಗೆ ದಾಟಿರಿ

Archive for

20
ಮಾರ್ಚ್

ಮಂಕು ತಿಮ್ಮನ ಕಗ್ಗ – ರಸಧಾರೆ (೪)

– ರವಿ ತಿರುಮಲೈ

ಏನು ಜೀವನದರ್ಥ? ಏನು ಪ್ರಪಂಚಾರ್ಥ ?
ಏನು ಜೀವಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು?
ಜ್ಞಾನಪ್ರಮಾಣವೇಮ್? ಮಂಕುತಿಮ್ಮ

ಕಾಣದಿಲ್ಲಿರ್ಪುದೇನಾನುಮುಂಟೆ = ಕಾಣದೆ + ಇಲ್ಲಿ+ ಇರ್ಪುದು(ಇರುವುದು)+ಏನಾನುಂ( ಏನಾದರೂ)+ ಉಂಟೆ

ಮತ್ತಷ್ಟು ಓದು »

20
ಮಾರ್ಚ್

ಹಲವು ರಂಗಗಳ ‘ವೇಷ’

-ರಾಘವೇಂದ್ರ ರಾವ್

ಪ್ರಾದೇಶಿಕ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಕೃತಿಗಳನ್ನು ರಚಿಸುವ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಪ್ರಭಾಕರ ನೀರ್‌ಮಾರ್ಗ ಅವರ ಹದಿನೇಳನೆಯ ಕೃತಿ ‘ವೇಷ’. ದಕ್ಷಿಣ ಕನ್ನಡದ ಸಾಂಸ್ಕೃತಿಕ, ಸಾಮಾಜಿಕ ಜನಜೀವನವನ್ನ ಬಹಳ ಮಾರ್ಮಿಕವಾಗಿ ಚಿತ್ರಿಸುವ ಇವರ ಕೃತಿಗಳಲ್ಲಿ ದಾಯಿತ್ವ, ತಿಲ್ಲಾನ, ಧೀಂಗಿಣ, ಮಂಗಳೂರು ಕ್ರಾಂತಿ, ಶಿಶಿರ, ಪ್ರತಿಶೋಧ, ಜಾತ್ರೆ ಮತ್ತು ತಂಬಿಲಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಾದೇಶಿಕ ಹಿನ್ನಲೆಯಲ್ಲಿಯೇ ಮೂಡಿಬಂದವುಗಳು. ಆದರೆ ‘ವೇಷ’ ಕಾದಂಬರಿ ಇವುಗಳ ನಡುವೆ ತುಸು ವಿಭಿನ್ನವಾಗಿ ರಚಿಸಿದ ಕಾದಂಬರಿಯಂತೆ ಕಂಡರೂ, ಇಲ್ಲಿಯ ಪಾತ್ರಗಳಿಗೆ ಯಾವುದೇ ಪ್ರಾಮುಖ್ಯತೆಯಿಲ್ಲದೆ ಕೇವಲ ಬಣ್ಣದ ‘ವೇಷ’ ಮತ್ತು ಬದುಕಿನ ವೇಷದ ಸುತ್ತಾ ಕಥೆ ಹೆಣೆದುಕೊಂಡಿದೆಯೇನೋ ಅನಿಸುತ್ತದೆ.

ಕಥೆಯ ಆರಂಭದಲ್ಲಿ ನವರಾತ್ರಿಯ ಸಮಯದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುವ ವೇಷದ ಬಗ್ಗೆ ‘ಎಪಿಲೋಗ್’ನ ಹಾಗೆ ಪ್ರಸ್ತಾಪಿಸುತ್ತಾ ದಕ್ಷಿಣ ಕನ್ನಡದಲ್ಲಿ ನವರಾತ್ರಿಯಲ್ಲಿ ಕಾಣಿಸುವ ವೇಷಗಳ ಬಗ್ಗೆ ವಿವರಗಳನ್ನು ನೀಡುತ್ತಾ ಕೃತಿಕಾರರು ಕಥೆಯೊಳಗೆ ಇಳಿಯುತ್ತಾರೆ. ಇಲ್ಲಿ ಆ ಬಣ್ಣದ ವೇಷಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುವ ಓದುಗನ ನಿರೀಕ್ಷೆಯನ್ನು ಹುಸಿಯಾಗಿಸುತ್ತಾ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಉಳಿದ ಬಣ್ಣದ ಲೋಕಗಳಾದ ಯಕ್ಷಗಾನ, ನಾಟಕರಂಗಗಳಿಗೂ ಪಾತ್ರಗಳ ಮೂಲಕ ಇಳಿಯುತ್ತಾ ಹೊಸದೇನೋ ಹೇಳುತ್ತಾ ಕಥೆ ಸಾಗುತ್ತದೆ. ಇಲ್ಲಿ ಮಾರ್ನಮಿಯ ಹುಲಿವೇಷದ ವಿವರಣೆಗಳನ್ನು ಬಿಟ್ಟರೆ ಮತ್ತೆಲ್ಲವೂ ನಾಟಕ ಮತ್ತು ಯಕ್ಷಗಾನದ ಬಗೆಯೇ ಹೆಚ್ಚು ಒತ್ತುಕೊಟ್ಟು ಬರೆದಂತೆ ಕಾಣಿಸುತ್ತದೆ. ‘ಧೀಂಗಿಣ’ ಯಕ್ಷಗಾನದ ಒಳಹೊರಗನ್ನು ತಿಳಿಸುವ ಸಮಾಜಮುಖಿಯಾದ ಕಾದಂಬರಿಯಾದರೂ ಅಲ್ಲಿ ನೀರ್‌ಮಾರ್ಗ ಅವರ ‘ಪೇಪರ್ ವರ್ಕ್’ ಎದ್ದು ಕಾಣಿಸುತ್ತದೆ. ‘ತಿಲ್ಲಾನ’ ಕಾದಂಬರಿಯಲ್ಲಿ ಭೂತದಕೋಲದ ವಿವರಗಳಿರುವಂತೆ ‘ವೇಷ’ದಲ್ಲಿಯೂ ಅಂತಹುದೊಂದನ್ನು ಹುಡುಕಿದರೆ ಸಿಗಲಾರದೆನ್ನುವುದು ನನ್ನ ಅನಿಸಿಕೆ. ಹಾಗಂತ ಕಾದಂಬರಿ ಏನನ್ನೂ ಹೇಳದೆ ಸುಮ್ಮನಿರುವುದಿಲ್ಲ.

ಮತ್ತಷ್ಟು ಓದು »