ವಿಷಯದ ವಿವರಗಳಿಗೆ ದಾಟಿರಿ

Archive for

26
ಜನ

ನಿಲುಮೆ ನೆಟ್ಟಾಗಿದೆ!

 – ಆತ್ರಾಡಿ ಸುರೇಶ್ ಹೆಗ್ಡೆ

ಹೌದು ನಿಲುಮೆ ನೆಟ್ಟಾಗಿದೆ

ಹಾಗಾಗಿ ನಮ್ಮೆಲ್ಲರ ನಿಲುಮೆಗಳೂ ನೆಟ್ಟಗಾಗಿವೆ

ತತ್ವಗಳಿಗೆ ಬದ್ಧರಾದವರೇ

ಆದರೂ ನಾವು ಎಲ್ಲಾ ತತ್ವಗಳ ಎಲ್ಲೆ ಮೀರಿದವರೇ

ಎಡ-ಬಲ-ನಡುವೆಂಬುದಿಲ್ಲ ಇಲ್ಲಿ

ನಮ್ಮ ನಿಲುಮೆಗೆ ಸೀಮಾರೇಖೆಯೆಂಬುದೇ ಇಲ್ಲ ಇಲ್ಲಿ

ತಮ್ಮ ತಮ್ಮ ಅಂಗಳದಲ್ಲಿದ್ದವರು

ಮೈದಾನ ಸಿಕ್ಕಾಗಲೂ ಮೈಮರೆಯದೇ  ಉಳಿದವರು

ಇಲ್ಲಿ ಪ್ರಕಟವಾಗದ ವಿಷಯಗಳಿಲ್ಲ

ಇಲ್ಲಿ ಬರೆಯದ ಬ್ಲಾಗಿಗರೂ ಬಹುಷಃ ಹೆಚ್ಚು ಉಳಿದಿಲ್ಲ

ಬಾಡಿಗೆ ಮನೆಯ ತೊರೆದಂತೆ

ಸ್ವಂತ ಮನೆಯಲ್ಲೀಗ ಕೈಕಾಲು ನೀಡಿ ವಿರಮಿಸುವಂತೆ

ಈ ಆರಾಮ ಅಲ್ಪವೇ ಆಗಿರಲಂತೆ

ಇಲ್ಲಿನ ಬರಹಗಳ ಸಂತೆಗೆ ಎಂದೂ ರಜೆ ಇಲ್ಲದಿರಲಂತೆ

ನಿಲುಮೆ ಇರಲಿ ಎಲ್ಲ ತತ್ವಗಳ ಮೀರುತ್ತಾ

ಸದಾ ಇರಲಿ ತನ್ನದೇ ಆದ ತತ್ವವನು ಜಗಕೆ ತೋರುತ್ತಾ!

26
ಜನ

ಪ್ರಜಾಪ್ರಭುತ್ವದ ಶಿಕ್ಷಣ

-ರಾವ್ ಎವಿಜಿ

ಪ್ರಜಾಪ್ರಭುತ್ವ ಒಂದು ಸುಂದರ ಪರಿಕಲ್ಪನೆ ಎಂಬುದರ ಕುರಿತಾಗಲಿ, ನಮಗೆ ತಿಳಿದಿರುವ ಪ್ರಭುತ್ವದ ನಮೂನೆಗಳ ಪೈಕಿ ಅತ್ಯಂತ ಶ್ರೇಷ್ಠವಾದದ್ದು ಎಂಬುದರ ಕುರಿತಾಗಲಿ ಯಾವ ಸಂಶಯವೂ ನನಗಿಲ್ಲವಾದರೂ ನಮಗೆ, ಅರ್ಥಾತ್ ಈ ಕರ್ಮಭೂಮಿಯ ಪ್ರಜೆಗಳಿಗೆ ಪ್ರಜಾಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಅರ್ಹತೆ ಇದೆಯೇ ಎಂಬುದರ ಕುರಿತು ಸಂಶಯ ಇದೆ. ನನಗೆ ತಿಳಿದ ಮಟ್ಟಿಗೆ ಪ್ರಜಾಪ್ರಭುತ್ವದ ಯಶಸ್ಸು ಪ್ರಜೆಗಳ, ಅರ್ಥಾತ್  ಮತದಾರನ ವಿವೇಕವನ್ನು ಆಧರಿಸಿರುತ್ತದೆ.

  • ಹಣ, ಹೆಂಡ. ಸೀರೆ ಮೊದಲಾದವನ್ನು ಧಾರಾಳವಾಗಿ ಕೊಡುವವರನ್ನೇ ಆಗಲಿ ಚುನಾವಾಣೆಯಲ್ಲಿ ಗೆದ್ದು ಬಂದರೆ ಉಚಿತವಾಗಿ ‘ಕಲರ್’ಟಿವಿ,’ಮಿಕ್ಸಿ’ ನಗಣ್ಯ ಅನ್ನಬಹುದಾದಷ್ಟು ಕಡಿಮೆ ಬಡ್ಡಿಯ ಸಾಲ ಮುಂತಾದವನ್ನು ಕೊಡುವುದಾಗಿ ಭರವಸೆ ನೀಡುವ ಮಂದಿಯನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ನಮ್ಮ ಮತದವ, ನಮ್ಮ ಜಾತಿಯವ, ನಮ್ಮ ಊರಿನವ ಎಂಬ ಕಾರಣಕ್ಕಾಗಿ ನಾಯಕನನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ ? ಮತ್ತಷ್ಟು ಓದು »