ವಿಷಯದ ವಿವರಗಳಿಗೆ ದಾಟಿರಿ

Archive for

9
ಜನ

ಸಂಸ್ಕೃತಿ ಸಂಕಥನ – 17 ಜಾತಿ, ರಿಲಿಜನ್ ಹಾಗೂ ಸೆಕ್ಯುಲರಿಸಂ ಭಗವದ್ಗೀತೆ ವಿವಾದ

-ರಮಾನಂದ ಐನಕೈ

ಕೇವಲ ಭಗವದ್ಗೀತೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರ ದಾಯಗಳಿಗೆ ಸಂಬಂಧಪಟ್ಟಂತೆ ಅನೇಕ ಸಂಗತಿ ಗಳು ವಿವಾದಕ್ಕೆ ಕಾರಣವಾಗುತ್ತಿವೆ. ಹಾಗೂ ಇವೆಲ್ಲ ರಾಜಕೀಯ ಸ್ವರೂಪ ಪಡೆದು ಸೆಕ್ಯುಲರ್ ಪ್ರಭುತ್ವ ಸಂದಿಗ್ಧದಲ್ಲಿ ಸಿಲುಕುವಂತಾಗುತ್ತಿದೆ. ಹಾಗಾದರೆ ಈ ದೇಶದಲ್ಲಿ ಏನು ನಡೆಯುತ್ತಿದೆ?

ಭಗವದ್ಗೀತೆ ವಿವಾದಕ್ಕೆ ಸಂಬಂಧಪಟ್ಟಂತೆ ಪತ್ರಿಕೆಗಳಲ್ಲಿ ದಿನನಿತ್ಯ ಹೇಳಿಕೆಗಳು ಬರುತ್ತಲಿವೆ. ಈ ಕುರಿತು ಒಂದು ಅಭಿಪ್ರಾಯ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಅಂದರೆ ಭಾರತೀಯ ಸಂಸ್ಕೃತಿಯ ಕುರಿತಾದ ಪರಸ್ಪರ ತಪ್ಪು ತಿಳುವಳಿಕೆ ಗಾಗಿ ಭಗವದ್ಗೀತೆಯನ್ನು ಬಹಿರಂಗವಾಗಿ ಹರಾಜಿಗೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಗೀತೆಯಿಂದ ಶೂದ್ರರಿಗೆ ಹಾಗೂ ದಲಿತರಿಗೆ ಭಾರೀ ಅಪಾಯವಿದೆ ಎಂದು ಭಯ ಹುಟ್ಟಿಸಲು ಪ್ರಯತ್ನಿ ಸುತ್ತಿದ್ದಾರೆ. ಇಲ್ಲಿ ಒಂದನ್ನು ಗಮನಿಸಬೇಕು. ಇವೆಲ್ಲ ಸಾಮಾನ್ಯ ಜನರ ಅಥವಾ ಸಮೂಹದ ಅಭಿಪ್ರಾಯಗಳಲ್ಲ. ಆಯಾ ಸಮುದಾಯದ ವಕ್ತಾರರು ಅಥವಾ ಚಿಂತಕರೆನಿಸಿಕೊಂಡವರು ಮಾಧ್ಯಮಗಳ ಮೂಲಕ ಈ ರೀತಿ ಧರ್ಮಯುದ್ಧ ಮಾಡುತ್ತಿದ್ದಾರೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ ಪರಿಸ್ಥಿತಿ. ಈ ಪರಿ ಅರೆಬರೆ ಚಿಂತಕರನ್ನು ನೋಡಿದರೆ ಒಂದು ದಿನ ದೇವರ ವಿಗ್ರಹಗಳನ್ನು ಕಿತ್ತು ಕೈಯಲ್ಲಿ ಆಯುಧ ವಾಗಿ ಹಿಡಿದು ಹೊಡೆದುಕೊಂಡರೆ ಅಚ್ಚರಿಯೇ ನಿಲ್ಲ.

ಈ ಪರಿಸ್ಥಿತಿಗೆ ಮುಖ್ಯ ಕಾರಣವೆಂದರೆ ಭಾರತೀಯ ಸಂಸ್ಕೃತಿಯನ್ನು ರಿಲಿಜನ್ ಎಂದು ವ್ಯಾಖ್ಯಾನಿಸಿಕೊಳ್ಳುತ್ತಿರುವುದು. ಯುರೋಪಿ ಯನ್ನರು ಇಡೀ ಭಾರತೀಯ ಸಂಸ್ಕೃತಿಯನ್ನು ಸೇರಿಸಿ ಹಿಂದೂಯಿಸಂ ಎಂದು ಕರೆದು ಅದಕ್ಕೆ ರಿಲಿ ಜನ್ನಿನ ಲಕ್ಷಣ ಸೇರಿಸಲು ಪ್ರಯತ್ನಿಸಿದರು. ಆದ್ದರಿಂದಲೇ ನಾವಿಂದು ಹಿಂದೂಯಿಸಂ ಅಂದರೆ ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿ ಇದ್ದಹಾಗೆ ಒಂದು ಅಖಂಡವಾದ ರಿಲಿಜನ್ ಎಂದು ತಿಳಿದುಕೊಂಡಿ ದ್ದೇವೆ. ಹಾಗಾಗಿ ಹಿಂದೂ ಸಂಪ್ರದಾಯಗಳನ್ನೆಲ್ಲ ರಿಲೀಜಿಯಸ್ ಚಟುವಟಿಕೆಯೆಂಬಂತೆ ಅತ್ಯಂತ ಗುಮಾನಿಯಿಂದ ನೋಡಲಾಗುತ್ತದೆ. ರಿಲಿಜೀ ಯಸ್ ಚಟುವಟಿಕೆಗಳ ಸಾರ್ವಜನೀಕರಣವನ್ನು ಸೆಕ್ಯುಲರ್ ನೀತಿ ಒಪ್ಪುವುದಿಲ್ಲ. ಅದಕ್ಕಾಗಿ ಎಡ ಪಂಥೀಯ ಚಿಂತಕರಿಗೆ ಇಂಥ ಸಾಂಪ್ರದಾಯಿಕ ಆಚರಣೆಗಳೆಲ್ಲ ನಿಷಿದ್ಧ ಹಾಗೂ ಮೌಢ್ಯ.

ಮತ್ತಷ್ಟು ಓದು »